ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ವಿಜ್ಞಾನ ಪ್ರಪಂಚದಲ್ಲಿ ಮಹಿಳೆಯರ ಸಾಧನೆಗಳು

ವೈಜ್ಞಾನಿಕ ಪ್ರಪಂಚದಲ್ಲಿ ಮಹಿಳೆಯರ ಸಾಧನೆಗಳು
“ಕಾರ್ಯೇಷು ದಾಸಿ, ಕರಣೇಷು ಮಂತ್ರಿ,
ರೂಪೇಷು ಲಕ್ಷ್ಮಿ, ಕ್ಷಮಯಾ ಧರಿತ್ರಿ
ಭೋಜ್ಯೇಷು ಮಾತಾ, ಶಯನೇಷು ರಂಭಾ,
ಷಡ್ಗುಣ ಭಾರ್ಯಾ ಕುಲಮುದ್ಧರಂತಿ.”
ಎಂದು ಒಂದು ಶ್ಲೋಕ ರಚಿಸಿ ಹೆಣ್ಣನ್ನು ಒಂದು ಚೌಕಟ್ಟಿನೊಳಗೆ ಬಂಧಿಸಿ ಅವಳನ್ನು ನಿರುಪಯುಕ್ತಳನ್ನಾಗಿ ಮಾಡುವ ಪ್ರಯತ್ನ ನಡೆಯುತ್ತಲೇ ಬಂದಿದೆ. ಕೆಟ್ಟ ಸಂಪ್ರದಾಯಗಳ ಒತ್ತಡದಿಂದಾಗಿ ಅನುಪಯುಕ್ತವಾದ ಕಟ್ಟುಪಾಡುಗಳಿಂದಾಗಿ ಎಲ್ಲಾ ಸೌಲಭ್ಯಗಳಿಂದಲೂ ಮಹಿಳೆ ವಂಚಿತಳಾಗಿದ್ದಾಳೆ. ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸದ ಅವಶ್ಯಕತೆ ಇಲ್ಲ, ಜಗತ್ತಿನ ಬೆಳಕು ಅವರಿಗೆ ಅನಾವಶ್ಯಕ. ಲೋಕಜ್ಞಾನ ಕಟ್ಟಿಕೊಂಡು ಅವರೇನು ಮಾಡಬೇಕು? ಮನೆ, ಗಂಡ, ಮಕ್ಕಳು ಇವರನ್ನು ಪೋಷಿಸಿಕೊಂಡು ಬದುಕುವುದೇ ಉತ್ತಮ ಮಾರ್ಗ ಎಂದು ಮನೆಯಲ್ಲೇ ಮಹಿಳೆಯನ್ನು ಕೊಳೆಯಬಿಟ್ಟು ಅವಳ ಅನೇಕ ರೀತಿಯ ಪ್ರತಿಭೆಗಳು ಬೆಳಕಿಗೆ ಬಾರದೇ ನಶಿಸಿ ಹೋಗಿ, ಅವಳಿಗೆ ಮಾತ್ರವಲ್ಲದೇ ದೇಶಕ್ಕೂ ಕೂಡ ಅನ್ಯಾಯವೆಸಗಿದ ಹಾಗಾಗಿದೆ. ದೈವ ನಿಯಾಮಕದಲ್ಲಿ ಸರಿಸಮಾನವಾದ ಮಾನಸಿಕ ಸಾಮರ್ಥ್ಯವನ್ನು ಹೊಂದಿರುವ ಮಹಿಳೆ, ಪುರುಷರಂತೆಯೇ ಪ್ರತಿಯೊಂದು ಕ್ಷೇತ್ರದಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುವ ಅಧಿಕಾರ ಮಹಿಳೆಗೂ ಇದೆ ಎಂಬುದು ಎಲ್ಲರಿಗೂ ಮನವರಿಕೆಯಾಗಬೇಕು. ಮಹಿಳೆಯ ಪರಿಸ್ಥಿತಿ ಈಗ 5 ದಶಕಗಳಿಂದ ಎಷ್ಟೋ ಸುಧಾರಿಸುತ್ತಾ ಬಂದಿದೆ ಎಂದಾದರೂ ಇನ್ನೂ ಸಾಕಷ್ಟು ಮಹಿಳೆಯರು ಅನೇಕ ಕಾರಣಗಳಿಂದ ತಮ್ಮ ಗೂಡಿನಿಂದ ಹೊರ ಬರಲಾರದೇ ತೊಳಲಾಡುತ್ತಿದ್ದಾರೆ. ಸಾಧಾರಣ ವಿಚಾರಗಳಲ್ಲೇ ಹೀಗಿರ ಬೇಕಾದರೆ ಇನ್ನು ಪ್ರಗತಿಪರ ವಿಜ್ಞಾನ ಪ್ರಪಂಚದಲ್ಲಿ ಸಾಧನೆಗಳನ್ನು ಸಾಧಿಸಲು ಅವರಿಗೆಲ್ಲಿ ಅವಕಾಶವಿತ್ತು? ಹೀಗಾಗಿ ಈ ಸಮಾಜದೊಂದಿಗೆ ಹೋರಾಡುತ್ತಲೇ ವಿಜ್ಞಾನ ಪ್ರಪಂಚದಲ್ಲಿ ಸಾಧನೆಗೈದ ಮಹಿಳೆಯರು ಎಂದರೆ ಬೆರಳೆಣಿಕೆಯಷ್ಟು ಮಾತ್ರ. ಅವರಲ್ಲೂ ಕೂಡ ಅ ಉನ್ನತ ಮಟ್ಟವನ್ನು ತಲುಪಲು ಹೆಣಗಾಡಿ ತೊಳಲುತ್ತಿರುವ ಭಾರತೀಯ ಮಹಿಳೆಯರ ಬಗ್ಗೆ ಓದಿದಾಗ (ನೇಮಿ ಚಂದ್ರರವರ ಮಹಿಳಾ ಅಧ್ಯಯನ) ಮನಸ್ಸಿಗೆ ಖೇದವೆನಿಸಿತು. ಬಹುಷಃ ಇನ್ನೊಂದು 50,60 ವರ್ಷಗಳಲ್ಲಾದರೂ ನಮ್ಮ ಈ ಕೊರಗು ನೀಗಬಹುದೇನೋ.

ಕನ್ನಡ ತಮಿೞಿಗಿಂತ ಹೞೆಯದೇ?

ಕನ್ನಡ ತಮಿೞಿಗಿಂತ ಹೞೆಯದಿರಬಹುದೆನ್ನುವುದಕ್ಕೆ ಎರಡು ಉದಾಹರಣೆಗಳನ್ನು ಕೊಡುತ್ತೇನೆ.
೧) ದಿಕ್ಕು
೨) ತಾಲವ್ಯೀಕರಣ

೧) ದಿಕ್ಕು:

ಸಮಾಸ ವಿಚಾರ

ಹಣೆಗಣ್ಣ - ಹಣೆಯಲ್ಲಿ ಕಣ್ಣುಳ್ಳವನು ಹಣೆಗಣ್ಣ.
ನಾನು ಕಂಡಂತೆ ಇದು ಬಹುವ್ರೀಹಿ. ಹಣೆ ಮತ್ತು ಕಣ್ಣ  ಈ ಎರಡು ಪದಗಳ ಸಹಾಯದಿಂದ ಅರ್ಥ ಗೊತ್ತಾಗುವುದಿಲ್ಲ. 

ಗಮನಿಸಿ, ಇಲ್ಲಿ  ಮೇಲ್ನೋಟಕ್ಕೆ ಕಾಣಿಸದಿದ್ದರೂ 'ಉ' ಪ್ರತ್ಯಯವಿದೆ. 'ಉಳ್ಳವನು' ಎಂಬುದು ಸಮಾಸ ಪದದಲ್ಲಿ ಬರುವುದಿಲ್ಲ, ಹಾಗಾಗಿ ಇದು ಬಹುವ್ರೀಹಿ.

ಇದನ್ನು ತತ್ಪುರುಷ ಎನ್ನುವವರು ಯಾರು?

ಬರೆ code ಬರಿ (ಬರೀತಾ ಇರು)

ಅವನೊಬ್ಬ ಹೊಸ ಕ್ಲೈಂಟು
ಉತ್ತಮ code ಏನೆಂಬುದು ಅವನಿಗೆ ಗೊತ್ತಿಲ್ಲ, ಗೊತ್ತಾಗಬೇಕಿಲ್ಲ.
ಬರೆಯುವವನು ಉತ್ತಮ code ಬರೆಯುತ್ತಿದ್ದಾನೋ ಇಲ್ಲವೋ ಎಂಬುದೂ ಬೇಕಿಲ್ಲ,
ಅವನಿಗೆ ಕೆಲಸವಾಗಬೇಕಷ್ಟೆ.

ತನ್ನಲ್ಲಿರುವುದು ಕಸವಿರಬಹುದು
ಆದರೆ ಕೆಲಸಮಾಡುತ್ತಿದೆಯಲ್ಲ!
ನಂಬುವುದು ಹೇಗೆ ಇದು ಸರಿಯಿಲ್ಲವೆಂದು?

ಗಂಗೆ ಅಂತರ್ಧಾನಳಾದಾಳೇ... !?

ಪ್ರೊ. ಜಿ ಡಿ ಅಗರ್ವಾಲ್

(ಈ ಲೇಖನ ನಿನ್ನೆ [:http://kannada.indiawaterportal.org|ಕನ್ನಡ ವಾಟರ್ ಪೋರ್ಟಲ್ ನಲ್ಲಿ] ಪ್ರಕಟವಾಗಿತ್ತು.)

ಒಲೆ ಹತ್ತಿ ಉರಿದಡೆ ನಿಲಲುಬಹುದು, ಧರೆ ಹತ್ತಿ ಉರಿದೊಡೆ ನಿಲಬಹುದೇ,

ಏರಿ ನೀರುಂಬಡೆ, ಬೇಲಿ ಕೈಯ ಮೇವಡೆ, ನಾರಿ ತನ್ನ ಮನೆಯಲ್ಲಿ ಕಳುವಡೆ,

ತಾಯ ಮೊಲೆವಾಲು ನಂಜಾಗಿ ಕೊಲುವಡೆ ಇನ್ನಾರಿಗೆ ದೂರುವೆ ತಂದೆ ಕೂಡಲಸಂಗಮದೇವ?

--ಈ ವಿಪರ್ಯಾಸಗಳ ಸರಣಿಗೆ ಮತ್ತೊಂದು ಸೇರ್ಪಡೆ ಗಂಗೆ ಅಂತರ್ದಾನವಾದೊಡೆ...?!

--ಇದು ಯಾವುದೋ ಪುರಾಣದಲ್ಲಿನ ಪ್ರಸ್ತಾಪ ಅಲ್ಲ. ಗಂಗೆ ಪಾತ್ರ ಬಯಲಾದೀತು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಹೌದು, ಗಂಗೆಯ ಮಡಿಲಲ್ಲಿ ಕೈಗೆತ್ತಿಕೊಂಡಿರುವ ಜಲ ವಿದ್ಯುತ್ ಯೋಜನೆ ಹಾಗೂ ಆಣೆಕಟ್ಟುಗಳಿಂದಾಗಿ 50 ಕಿಮೀಗೂ ಹೆಚ್ಚು ದೂರ ಗಂಗೆ ಗುಪ್ತಗಾಮಿನಿಯಾಗಿ ಹೋಗುವ ಆತಂಕ ಪರಿಸರ ಪ್ರಿಯರಲ್ಲಿ ಮಡುಗಟ್ಟಿದೆ.

ಇಂಥದೊಂದು ಆತಂಕವನ್ನು ಹೊರ ಹಾಕಿರುವ ಪ್ರೊ|ಜಿ.ಡಿ. ಅಗರ್ ವಾಲ್ ಸಾಮಾನ್ಯ ವ್ಯಕ್ತಿಯಲ್ಲ. ಇವರು ಖ್ಯಾತ ಪರಿಸರ ವಿಜ್ಞಾನಿ, ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ, ಕಾನ್ಪುರದಲ್ಲಿ ಡೀನ್ ಆಗಿದ್ದವರು. ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಥಮ ಸದಸ್ಯ ಕಾರ್ಯದರ್ಶಿಯಾಗಿದ್ದವರು.

ನಿಲ್ಲದು ವಾಯಲಿನ್...

ವಾಯಲಿನ್ ನುಡಿಸುತ್ತಿದೆ ನಿನ್ನ ನೋವ ನನ್ನ ಹೃದಯದಲ್ಲಿ...
ಆದರೂ ಕಣ್ಣ ಹನಿ ನಿಲ್ಲದು...

ವಾಯಲಿನ್ ಅಳುತ್ತಿದೆ ನಿನ್ನ ನೆನೆ,ನೆನೆದು...ದು:ಖದಲ್ಲಿ.
ಆದರೂ ಬತ್ತದು ನಿನ್ನ ನೋವು.

ವಾಯಲಿನ್ ರೋಧಿಸುತ್ತಿದೆ ನಿನ್ನ ಪ್ರೀತಿಯಲ್ಲಿ.
ಆದರೂ ಮರೆಯಲಾಗದು ನಿನ್ನ ಮೋಸ...

ವಾಯಲಿನ್ ಕೊರೆಯುತ್ತಿದೆ ನನ್ನ ಹೃದಯ.
ಆದರೂ ಬಿಡದು ನಿನ್ನ ಒಲವು..

ಕೊಂಕಣ ಸುತ್ತಿ ಮೈಲಾರಕ್ಕೆ...

ಇವತ್ತೇಕೊ ಅದೃಷ್ಟವೇ ಸರಿಯಿಲ್ಲ. ಟೈಮೂ ಖರಾಬು
ಬೆಳಗ್ಗೆ ಅಮ್ಮನ ಮನೆಯಲ್ಲಿ ಮಗೂನ ಬಿಟ್ಟು ಕೋರಮಂಗಲಕ್ಕೆ ಹೋಗೋಣ ಅಂತ ಹೋಗಿದ್ದಾಯಿತು
ಅಮ್ಮನ ಮನೆ ಬಂಡೆ ಪಾಳ್ಯದಲ್ಲಿ ಇರೋದು
ಅಲ್ಲಿಂದ ಶಾರ್ಟ್ ಕಟ್ ನಲ್ಲಿ ಕೋರಮಂಗಲಕ್ಕೆ ಹೋಗಬಹುದು ಅಂತ ಅಮ್ಮ ಹೇಳಿದರು
ಸರಿ ಅಂತ ಹೊರಟೆ ಅದೇನೋ ದಾರಿಯೇ ತಿಳಿಯಲಿಲ್ಲ