ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕನ್ನಡ ರಾಜ್ಯೋತ್ಸವ-ಮೊವಾ೦ಜ,ತಾ೦ಜಾನಿಯ.

ಮಾನ್ಯರೆ,
ಕನ್ನಡ ಸ೦ಘ,ಮೊವಾ೦ಜ ,ತಾ೦ಜಾನಿಯದವರ ವತಿಯಿ೦ದ ಆಚರಿಸಲ್ಪಟ್ಟ ಕನ್ನಡ ರಾಜ್ಯೋತ್ಸವದ ವಿವರಣೆ.ದಿನಾ೦ಕ 4.11.2007 ರ ಭಾನುವಾರ ಸ೦ಜೆ 7 ಘ೦ಟೆಗೆ ಕಾರ್ಯಕ್ರಮ ಪ್ರಾರ೦ಭವಾಯಿತು.ಕಾರ್ಯಕ್ರಮವನ್ನ ಎಲ್ಲಾದರು ಇರು ಎ೦ತಾದರು ಇರು ಎನ್ನುವ ನಾಡಗೀತೆಯನ್ನ ಶ್ರೀ ಗಣೇಶ್ ಬಿಜುರ್ ಹಾಡುವುದರೊ೦ದಿಗೆ ಪ್ರಾರ೦ಬಿಸಿದೆವು.ನ೦ತರ ಕನ್ನಡ ಜ್ಯೋತಿಯನ್ನ ಹಚ್ಹಲಾಯಿತು.

ಧಾರವಾಡ ಕನ್ನಡ- ಭಾಗ ೩

ಪ್ರಮಾಣ ಕನ್ನಡದ ’ಎ’ ಅಕ್ಷರದಿಂದ ಕೊನೆಯಾಗುವ ಶಬ್ದಗಳು ’ಇ’ ದಿಂದ ಕೊನೆ ಆಗುತ್ತವೆ

ಉದಾ: ಶಾಲೆ - ಸಾಲಿ
ಮನೆ - ಮನಿ
ಆನೆ - ಆನಿ
ರಾಟೆ - ರಾಟಿ
ಇತ್ಯಾದಿ
ಎಲ್ಲ ಶಬ್ದಗಳೂ ಈ ತರ ಆಗ್ತಾವ ಅಂತ ಅಲ್ಲ ;
ಕಡೆಯ .... ಕಡೀ ಆದರೂ
ಕಡೆ ... ಕಡೆ ಎಂದೇ ಇರುವದು ..
ನಿಂ ಕಡೆ .. (ನಿಮ್ಮ ಹತ್ರ .. ನಿಮ್ಮ ಭಾಗದಲ್ಲಿ )

“ಥಟ್ ಅಂತ ಹೇಳಿ‘ ಯಲ್ಲಿ ಬಿ.ಆರ್.ಎಲ್ ಮತ್ತು ಸುಪ್ರಿಯಾ ಆಚಾರ್ಯ

ಇದೇ ೦೮.೧೧.೦೭ ರ ರಾತ್ರಿ ೯.೩೦ ನಿಮಿಷಕ್ಕೆ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಬಿ.ಆರ್.ಲಕ್ಶ್ಮಣರಾವ್ ಹಾಗೂ ಕುಮಾರಿ ಸುಪ್ರಿಯಾ ಆಚಾರ್ಯ ಅವರು ಭಾಗವಹಿಸಲಿದ್ದಾರೆ. ಬಿ.ಆರ್.ಎಲ್ ಅವರು ತಮ್ಮ ಹಾಡುಗಳನ್ನು ಸ್ವಯಂ ಹಾಡಲಿದ್ದಾರೆ. ಅವರೊಡನೆ ಧ್ವನಿಗೂಡಿಸಲಿದ್ದಾರೆ ಸುಪ್ರಿಯಾ ಅವರು. ನೆಪೋಲಿ ಬಾರಿನಲ್ಲಿ ಗೋಪಿ, ಅಮ್ಮನ ಗಾಳಕ್ಕೆ ಸಿಕ್ಕ ಗೋಪಿ, ಹಳೇ ಸ್ಕೂಟರನ್ನೇರಿ ಹೊರಟ ಮಧ್ಯಮವರ್ಗದ ದಂಪತಿಗಳ ಹಾಸ್ಯದ ಲೇಪನ ಹೊತ್ತ ವಿಷಾಧ ಗೀತೆಗಳನ್ನು ಕೇಳಲು ಮರೆಯದಿರಿ. ಇದು ದೀಪಾವಳಿಯ ವಿಶೇಷ ಕಾರ್ಯಕ್ರಮ! ಇದು ೦೯.೧೧.೦೭ರ ಮಧ್ಯಾಹ್ನ ೧೧.೦೫ಕ್ಕೆ ಮರುಪ್ರಸಾರವಾಗಲಿದೆ. ನಿಮ್ಮ ಅನಿಸಿಕೆಗಳಿಗೆ ಸ್ವಾಗತ!

-ಡಾ.ನಾ.ಸೋಮೇಶ್ವರ

ಮ್ಮ

ಹೀಗೆ, ಅಮ್ಮನ ಬಗ್ಗೆ ಒಂದು ಕವನ ಬರೀಬೇಕು ಅಂತ ಶುರು ಆಗಿ, ಅದೇಕೋ ಸ್ವಲ್ಪ ಪದಗಳ ಜೊತೆ ಆಟ ಆಡೋ ಮನಸಾಗಿ ಈ ಕವಿತೆ ಬರೆದಿದ್ದೇನೆ.

ಈ ಕವನದ ವಿಶೇಷ ಏನೆಂದರೆ, ಈ ಕವನದ ಶೀರ್ಷಿಕೆಯಲ್ಲಿ ತಪ್ಪಿ ಹೋದ ಒಂದು ಅಕ್ಷರ, ಕವನದ ಪ್ರತಿ ಪದದಲ್ಲೂ ಪದೇ ಪದೇ ಇಣುಕಿ ಹಾಕುತ್ತೆ :-).

------------------
ಮ್ಮ.

ಅಪರಿಮಿತ ಅಕ್ಕರೆಯ,
ಅನ್ವರ್ಥವೇ..
ಅಮ್ಮ.

ಅನ್ಯಾಯವ ಅರಿಯದ,
ಅನುರಕ್ತೆ..
ಅಮ್ಮ.

ಮಗು - ನಗು

ಮಗು - ನಗು
*********

ಮಗುವೆ ನೀನು ನಗುತಲಿರಲು
ಗೆಜ್ಜೆ ಘಲಿರು ಉಲಿಯುತಿರಲು
ಗಿಲಕಿ ಗಿಲಿರು ಗೀತವಿರಲು
ಬದುಕು ಬೆಳಕು ಬೆಳದಿಂಗಳು.

ಕಣ್ಣಿನಂದ ನೋಟ ಹೊಳಪು
ಕೆನ್ನೆ ನೋಡಿ ಎಷ್ಟು ನುಣುಪು!
ಕಾಲು ಬಡಿವ ಆಟ ಹುರುಪು
ಮುಗ್ಧ ಮನವು ಹಾಲು ಬಿಳುಪು.

ಅಂಬೆಗಾಲ ನಂದಲಾಲ
ಬೆಣ್ಣೆ ಮೆದ್ದ ತುಂಟಬಾಲ
ಕಣ್ಣಲೇಕೆ ನೀರ ಜಾಲ?
ಕೊಡಲೊಲ್ಲಳೆ ತಾಯಿ ಹಾಲ?

ಎದೆಯುಬ್ಬಿಸಲಿ ಹೇಗೆ...?

ಹೀಗೆ ಮೊನ್ನೆ ಬಸ್-ನಲ್ಲಿ ಹೋಗ್ತಾ ಇರ್ಬೇಕಾದ್ರೆ ಒಂದು ಗೋಡೆಯ ಮೇಲೆ ಹೀಗೆ ಬರೆಯಲಾಗಿತ್ತು..."ಎದೆಯುಬ್ಬಿಸಿ ಹೇಳು, ನಾನೊಬ್ಬ ಕನ್ನಡಿಗ" ಅಂತ...ಅದನ್ನೋದಿದ ಕ್ಷಣ ನನಗನ್ನಿಸಿದ್ದು ಹೀಗೆ...

ಎದೆಯುಬ್ಬಿಸಲಿ ಹೇಗೆ?
ಆಗಿರುವಾಗ ನಾನೊಬ್ಬನೆ;

ಎದೆಯುಬ್ಬಿಸಲಿ ಹೇಗೆ?
ನನ್ನ ಮನೆಯಲ್ಲಿ ಪರಕೀಯ ನಾನಾಗಿರುವಾಗ;

ಎದೆಯುಬ್ಬಿಸಲಿ ಹೇಗೆ?
ಮನೆಯವರೆ

ಏರ್ಟೆಲ್ ತಪ್ಪೋ, ಪೋಲೀಸರ ದಬ್ಬಾಳಿಕೆಯೋ?

ತನ್ನದಲ್ಲದ ತಪ್ಪಿಗೆ ನಿರ್ದೋಶಿಯೊಬ್ಬನನ್ನು ಜೈಲಿಗೆ ಎಳೆದುಕೊಂಡು ಹೋಗೋದೆಲ್ಲ ಫಿಲ್ಮುಗಳಲ್ಲಿ ನೋಡಿರುತ್ತೀರಿ. ನಿಜಸ್ಥಿತಿ ಎಷ್ಟು ಕೆಟ್ಟದಿರಬಹುದು ಎಂಬುದರ ಅರಿವು ಪರದೆಯ ಮೇಲಿನ ಕಥೆ ನೋಡಿಯೂ ಆಗುವುದು ಕಡಿಮೆ.

ಟೈಮ್ಸ್ ಆಫ್ [:http://timesofindia.indiatimes.com/Wrong_man_jailed_for_50_days/articleshow/2513737.cms|ಇಂಡಿಯಾದ ಈ ವರದಿ ಓದಿ.]

ತನ್ನದಲ್ಲದ ತಪ್ಪಿಗೆ ಬೆಂಗಳೂರಿನ ಇಂಜಿನೀಯರನ್ನು ಇದೇ ಆಗಸ್ಟಿನಲ್ಲಿ ಪೋಲೀಸರು ಪುಣೆಗೆ ಎಳೆದುಕೊಂಡು ಹೋಗಿ ಅಲ್ಲಿ ೫೦ ದಿನ ಜೈಲಿಗೆ ಹಾಕಿದ್ದಾರಂತೆ. ಆರ್ಕುಟ್ ನಲ್ಲಿ ಛತ್ರಪತಿ ಶಿವಾಜಿ ಫೋಟೋ ಕೆಡಿಸಿ ಅವಮಾನ ಮಾಡಿದರೆಂಬುದು ಅವನ ತಲೆಯ ಮೇಲೆ ಹೇರಿದ್ದ ತಪ್ಪು. ಇಷ್ಟು ದಿನ ಜೈಲು ವಾಸದ ನಂತರ ಅವನ ತಪ್ಪೇ ಇರಲಿಲ್ಲ, ಏರ್ಟೆಲ್ ನೀಡಿದ ಐ ಪಿ ವಿಳಾಸ ತಪ್ಪಾಗಿತ್ತು ಎಂಬ ವಿಷಯ ಹೊರಬಂದಿದೆಯಂತೆ.

ಮಾಹಿತಿ ನೀಡಿ ತಿಂಗಳುಗಳೇ ಆದ ಮೇಲೆ ಏರ್ಟೆಲ್ "ಅರೆ, ತಪ್ಪು ಐ ಪಿ ವಿಳಾಸ ಕೊಟ್ಟುಬಿಟ್ಟೆವು" ಎಂದು ಹೇಳುವುದಕ್ಕೆ ಇದೇನು ಮಕ್ಕಳಾಟವೆ? ಲಕ್ಷ್ಮಣ ಕೈಲಾಶ್ ಜಾಗದಲ್ಲಿ ಏರ್ಟೆಲ್ ಬಳಸುವ ಅಮಾಯಕರು ಯಾರೊಬ್ಬರೂ ಆಗಬಹುದಿತ್ತು! ಹೇಳದೆ ಕೇಳದೆ ಪೋಲೀಸರು ಹೀಗೆ ಹೊತ್ತುಕೊಂಡು ಹೋದರೆ ಪಾಪ ಅಮಾಯಕರ,ದುಡ್ಡಿಲ್ಲದವರ ಗತಿಯೇನು?

ಕನ್ನಡದಲ್ಲಿ ಸೈನ್ಸ್ ಫಿಕ್ಷನ್

ಕನ್ನಡದಲ್ಲಿ ಸೈನ್ಸ್ ಫಿಕ್ಷನ್ ಬರವಣಿಗೆಗಳನ್ನು ಹುಡುಕುತ್ತಿದ್ದೆ. ಹಲವರ ಬಳಿ ವಿಚಾರಿಸಿದೆ. ನಮ್ಮ ಮಾಮ ತುಂಬ ಕನ್ನಡ ಪುಸ್ತಕಗಳನ್ನು ಓದ್ತಿರ್ತಾರೆ - ಅವರ ಬಳಿ ವಿಚಾರಿಸಿದಾಗ ಕನ್ನಡದಲ್ಲಿ ಸೈನ್ಸ್ ಫಿಕ್ಷನ್ ಬರೆದ ಕೆಲವರ ಹೆಸರುಗಳು ತಿಳಿದುಬಂತು.