ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಾತೋಪಂಥ್ ಸರೋವರ

ಸಾತೋಪಂಥ್ ಸರೋವರ ಹಿಮಾಲಯದ ಮಡಿಲಲ್ಲಿ ಅನೇಕ ಪರ್ವತ ಶಿಖರಗಳ ಮಧ್ಯೆ ಸ್ಥಿತವಾಗಿರುವ ಒಂದು ಸಣ್ಣ ಸರೋವರ. ಇದು ಚೌಕಂಭಾ, ನೀಲಕಂಠ್ , ಪಾರ್ವತಿ, ಸ್ವರ್ಗರೋಹಿಣಿ ಮುಂತಾದ ಅನೇಕ ಪರ್ವತಗಳ ನಡುವಿನ ಕಣಿವೆಯಲ್ಲಿರುವ ಈ ಸರೋವರ ಬಹಳ ಪವಿತ್ರ ಸ್ಥಳ. ತ್ರಿಕೋನಾಕಾರದಲ್ಲಿರುವ ಈ ಸರೋವರದ ಮೂರು ತುದಿಗಳಲ್ಲಿ ತ್ರಿಮೂರ್ತಿಗಳು ಸ್ಥಿತವಾಗಿರುವರೆಂದು ನಂಬಿಕೆ.
ಸಾತೋಪಂಥ್ ಯಾತ್ರೆ ಬದರಿನಾಥದಿಂದ ಪ್ರಾರಂಭವಾಗುತ್ತದೆ. ಅಲ್ಲಿಂದ ೩ಕಿ.ಮೀ. ದೂರದಲ್ಲಿ ಮಾನಾ ಎಂಬ ಹಳ್ಳಿ ಸಿಗುತ್ತದೆ. ಇಲ್ಲಿಂದ ಮುಂದೆ ಜನ ಸಂಚಾರ ಇರುವುದಿಲ್ಲ. ರಾತ್ರಿ ತಂಗಲು ಟೆಂಟ್ ಗಳನ್ನೂ, ತಿನ್ನಲು ಆಹಾರವನ್ನೂ ಕೊಂಡೊಯ್ಯಬೇಕಾಗುತ್ತದೆ. ೨೫ಕಿ.ಮೀ. ದೂರದಲ್ಲಿರುವ ಈ ಸರೋವರಕ್ಕೆ ಹೋಗಿಬರಲು ನಮಗೆ ಬೇಕಾಗಿದ್ದು ೫ ದಿನಗಳು.
ದಾರಿ ಬಹಳ ದುರ್ಗಮವಾಗಿದ್ದು ಕೊರೆಯುವ ಚೆಳಿಯಲ್ಲಿ ಹಿಮನದಿಗಳ ಮೇಲೆ ಜಾರುತ್ತಾ, ಬೀಳುತ್ತ, ಉರುಳುವ ಬಂಡೆಗಳ ನಡುವೆ ಸಾಗಬೇಕಾಗುತ್ತದೆ. ದಾರಿಯಲ್ಲಿ ದೂರದ ಬೆಟ್ಟಗಳಲ್ಲಿ ಆಗುತ್ತಿರುವ ಅವಲಾಂಚೆಗಳ ಸದ್ದು ಗುಡುಗಿನಂತೆ ಕೇಳಿಸುತ್ತಿರುತ್ತದೆ.
ಇನ್ನೊಂದು ವಿಶೇಷವೇನೆಂದರೆ ಪಾಂಡವರು ಸ್ವರ್ಗಕ್ಕೆ ಹೊರಟದ್ದು ಈ ದಾರಿಯಲ್ಲೇ ಅಂತೆ. ಸಾತೋಪಂಥ್ ಸರೋವರದವರೆಗೂ ತಲುಪಿದ್ದು ಬರೀ ಧರ್ಮರಾಯ ಮಾತ್ರ. ಸ್ವರ್ಗರೋಹಿಣಿ ಹಿಮನದಿಯ ಮೇಲೆ ನಡೆದು ಹೋದಾಗ ಅವನಿಗೆ ಸ್ವರ್ಗದ ಮೆಟ್ಟಿಲುಗಳು ಕಂಡವಂತೆ. ನಮಗಂತೂ ಸಾತೋಪಂಥದ ದಾರಿಯೇ ಭೂಮಿಯ ಮೇಲಿನ ಸ್ವರ್ಗ ಎನಿಸಿತು.

ಸೇಡು!

ದಡವ ಅಪ್ಪಿ ಹರಿವ ನದಿಯ ಎದೆಯಲ್ಲಿ
ಮೀನುಗಾರಾನ್ಯಾರೋ ಎಂದೋ
ಊರಿದ ಬೆಂಕಿ ಇಂದು ಸಣ್ಣ ಎರೆಹುಳುಗಳಾಗಿ
ಮೀನುಗಳನ್ನು ಗಾಳಕ್ಕೆ ಸಿಕ್ಕಿಸುತ್ತಿವೆ....

ಪ್ರಳಯ ೨೦೧೧

ಎಲ್ಲರ ಬಾಯಲ್ಲೂ ಅದೇ ಮಾತು.ಮನೆಲ್ಲೂ ಅದೇ, ಆಫೀಸಲ್ಲೂ ಅದೇ.೨೦೧೨ಕ್ಕೆ ಪ್ರಳಯವ೦ತೆ.ಪ್ರಳಯವೆ೦ದರೆ ಪ್ರವಾಹದ ಥರವಲ್ಲ.ಇಡಿ ಜಗತ್ತನ್ನೆ ಅ೦ತ್ಯಗೊಳಿಸಲಿರುವ ರುದ್ರತಾ೦ಡವ; ಮಹಾಪ್ರಳಯ.ಜಗತ್ತೆಲ್ಲಾ ನೀರಿನಲ್ಲಿ ಮುಳುಗಿಹೊಗುತ್ತ೦ತೆ ಎ೦ದು ಕೆಲವರೆ೦ದರೇ,ಸೂರ್ಯನೇ ಮುಗಿದುಹೋಗುತ್ತಾನ೦ತೆ, ಅ೦ಧಕಾರದಲ್ಲಿ ರೋಗರುಜಿನ, ಕ್ರೈಮ್ ಗಳು ಜಾಸ್ತಿಯಾಗಿ ಎಲ್ಲರೂ ಸಾಯುತ್ತಾರ೦ತ

ನನ್ನ ಲೇಖನಗಳನ್ನು ಸದ್ಯಕ್ಕೆ ಮುಗಿಸಿದ್ದೇನೆ

ಹೆಚ್ಚಿನ ಪ್ರಶ್ನೆಗಳಿಲ್ಲದಿರುವುದಱಿಂದ ಪ್ರತಿಕ್ರಿಯೆಗಳನ್ನು ಈ ಕೆೞಗಿನ ಲೇಖನಗಳಿಗೆ ಸದ್ಯಕ್ಕೆ ನಿಲ್ಲಿಸಿದ್ದೇನೆ.
೧) ಕನ್ನಡ ತಮಿೞಿಗಿಂತ ಹೞೆಯದೇ?
೨) ಱ ಮತ್ತು ೞ ವಿಚಾರ
೩) ಸುಭಾಷಿತಗಳು
೪) ’ನಾಱು’ ಪದದ ಅರ್ಥ
೫)ಮರಗಳ ಮಹತ್ವ
೬)ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
೭) ಬೇಱೆ ತೆನ್ನುಡಿಗಳಲ್ಲಿ ’ಱ’ ಮತ್ತು ’ೞ’
೮) ಅವನಿವನುವನ್

ಲಿನಕ್ಸಾಯಣ - ೧೨ - ಬರಹದಲ್ಲಿ ಎನ್ಕೋಡ್ ಮಾಡಿದ ಪುಟ ಓದೋದ್ ಹ್ಯಾಗೆ?

ಕೆಲವು ವೆಬ್ ಸೈಟ್ ಗಳನ್ನ ಬರಹ ಉಪಯೋಗಿಸಿಕೊಂಡು ಸಿದ್ದ ಪಡಿಸಲಾಗಿದೆ. ಉದಾಹರಣೆಗೆ ಕರ್ನಾಟಕದ ಹೊಸ ಪಾಸ್ಪೋರ್ಟ್ ನ ವೆಬ್ಸೈಟ್. ಇದರ ಕನ್ನಡ ಪುಟ ಇಲ್ಲಿದೆ.  ಬರಹದಲ್ಲಿ ಎನ್ಕೋಡ್ ಮಾಡಿದ ಈ ಪುಟಗಳನ್ನ ಲಿನಕ್ಸ್ ನಲ್ಲಿ ಓದೋದ್ ಹ್ಯಾಗೆ?

ತಾಯಿಯ ನಾಕನೇ ಮುಖ

ಶಂಕರ ಮೊಕಾಶಿ ಪುಣೇಕರರ (ಗಂಗವ್ವ ಗಂಗಾಮಾಯಿ, ಅವಧೇಶ್ವರಿ) ಒಂದು ಪದ್ಯ ಇತ್ತೀಚೆಗೆ ಯಾಕೋ ಮತ್ತೆ ನೆನಪಾಯಿತು. ಹೆಸರು "ಮಾಯಿಯ ಮೂರು ಮುಖಗಳು" ಮತ್ತೊಂದೆರಡು ಬಾರಿ ಓದಿದೆ. ಪದ್ಯ ತಾಯ್ತನದ ಬಗ್ಗೆ. ವಿಶಾಲವಾದ ಅರ್ಥದಲ್ಲಿ ಅದರಲ್ಲಿ ಇಂಡಿಯಾ ಮತ್ತು ಸ್ವಾತಂತ್ಯ್ರದ ಬಗ್ಗೆಯೂ ಇದೆ. ಒಂದು ರೀತಿಯಲ್ಲಿ ಪೊಲಿಟಿಕಲ್ ಪದ್ಯ. ಆದರೆ ಅದರೊಳಗಿನ ಒಂದು ಅಂಶ ಮಾತ್ರ ನನ್ನ ನೆನಪಿನಲ್ಲಿ ಉಳಿದಿದ್ದೇ ಅದನ್ನು ಮತ್ತೆ ಓದಲು ಪ್ರೇರಣೆಯಾಯಿತು.

ಮಾಯಿ, ಮಹಾಮ್ಮಾಯಿ
ಮೂರು ವಿಧದಿಂದ ನೀನೆಮ್ಮ ತಾಯಿ.
(ಸಾಕು ತಾಯಿ; ದತ್ತ ತಾಯಿ; ಹೆತ್ತತಾಯಿ.)
...
ತಾಯಿಯನ್ನು ಭಾವನಾತ್ಮಕವಾಗಿ ನೋಡುವುದಷ್ಟೇ ಅಲ್ಲದೆ ಒಂದು ವಿಶ್ಲೇಷಣೆಯೂ ಅದರಲ್ಲಿದೆ. ಆ ಪದ್ಯದಲ್ಲಿ ಮೂರು "ತಾಯಿ"ಗಳನ್ನು ಪಟ್ಟಿ ಮಾಡುತ್ತಾರೆ. ೧. ಸಾಕು ತಾಯಿ ೨. ದತ್ತ ತಾಯಿ ಮತ್ತು ೩. ಹೆತ್ತ ತಾಯಿ. ಅದು ಕಾಲದ ಗೆರೆಯೆಳೆದು ಮಾಡಿದ ಸರದಿಯ ಪಟ್ಟಿಯಲ್ಲ ಎಂದು ತಕ್ಷಣ ಹೊಳೆಯುವಂತದೆ.

ಮೊಟ್ಟ ಮೊದಲಿಗೆ ಬರುವಿ ಸಾಕುತಾಯಾಗಿ
ಬಳೆಸುವೆಯೆ ಬಾಳ ಬೆಳೆಸುತ್ತ ಹಾಯಾಗಿ ...

ಯೂರೋಕಪ್ ಫುಟ್ಬಾಲ್ -೨೦೦೮ ರ ಗ್ರೂಪ್ ಮಟ್ಟದಲ್ಲಿನ (ನಾಕ್ ಔಟ್ ) ಪಂದ್ಯಗಳ ಫಲಿತಾಂಶಗಳು, ಹಾಗೂ ಮುಂದೆ ನಡೆಯಲಿರುವ ಸೆಮಿ-ಫೈನಲ್, ಮತ್ತು ಫೈನಲ್ !

ತಾ. ಹಂತ ಮ್ಯಾಚ್ ಗಳು ಸ್ಥಳ ಫಲಿತಾಂಶ ಸ್ಲೋರ್ ವಿವರ

೧೯, ಜೂನ್ ೨೦೦೮ (ಗುರುವಾರ) ಕ್ವಾರ್ಟರ್ -ಪ್ಜೈನಲ್ (೧) ಜರ್ಮನಿ, ಪೋರ್ಚುಗಲ್ ನ್ನು ಬೇಸೆಲ್ ನಲ್ಲಿ ಸೋಲಿಸಿತು - ಸೇಂಟ್. ಜ್ಯಾಕೊಬ್ಪಾರ್ಕ್ ನಲ್ಲಿ - ೩-೨

ನಿರಂತರ

 (ಮಂಗಳೂರು ಆಕಾಶವಾಣಿಗಾಗಿ ಬರೆದು ಪ್ರಸಾರವಾದ ಕಥೆ)

ನನಗೆ ಚೆನ್ನಾಗಿಯೇ ಗೊತ್ತು. ಈ ಇಡೀ ಕತೆ ಕೇಳಿ ಮುಗಿದದ್ದೆ ನೀವು ಅರೆರೆ, ಇದೆಂಥ ಕತೆಯಪ್ಪ, ಒಂಚೂರೂ ಅರ್ಥವಾಗ್ಲಿಲ್ಲ, ಎಂಥ ಕಥೆಯೋ ಏನೋ ದೇವ್ರೇ ಬಲ್ಲ ಎನ್ನುತ್ತೀರಿ. ಅದಕ್ಕೇ ಈ ಕಥೆಯ ಅರ್ಥ ಏನು ಅಂತ ನಾನು ಮೊದಲೇ ನಿಮಗೆ ಹೇಳಿ ಬಿಡ್ತೇನೆ. ಆ ಮೇಲೆ ನೀವು ಆರಾಮಾಗಿ ಕತೆ ಕೇಳಬಹುದು.

ಈಗ ನಾನು ಹೇಳ್ತೇನೆ, ನೀವು ಯಾರನ್ನೋ ಹುಡುಕ್ತಾ ಇದ್ದೀರಿ, ಅವರು ನಿಮಗೆ ಇನ್ನೂ ಸಿಕ್ಕಿಯೇ ಇಲ್ಲ ಅಂತ. ಆದರೆ ನೀವೆಲ್ಲಿ ಒಪ್ತೀರಿ? ಇಲ್ಲಪ್ಪ, ಯಾರು ಹೇಳಿದ್ದು ನಿಮಗೆ, ನಾವು ಯಾರನ್ನೂ ಹುಡುಕ್ತಾ ಇಲ್ಲ, ಇಶಿಶಿ,ನಮಗೆ ಬೇರೆ ಕೆಲಸ ಇಲ್ಲಂತ ಎಣಿಸಿದ್ದೀರಾ ಹೇಗೆ, ಎಂದೆಲ್ಲ ಸುರು ಮಾಡುತ್ತೀರಿ. ಆದ್ರೆ ನಂಗೆ ಗೊತ್ತಿದೆ, ನಿಮಗೆ ಗೊತ್ತಿಲ್ಲ ಅಷ್ಟೆ ವ್ಯತ್ಯಾಸ. ಅಥವಾ, ನೀವು ಎಣಿಸಿರಬಹುದು, ನೀವು ಹುಡುಕ್ತಾ ಇದ್ದ ಜನ ಆಗಲೇ ಸಿಕ್ಕಿದೆ ಅಂತ. ತುಂಬ ಪಾಪದವ್ರು ನೀವು. ಸುಳ್ಳು ಹೇಳಿದ್ರೂ ಸತ್ಯ ಅಂತ ನಂಬಿ ಬಿಡ್ತೀರಿ. ಆದ್ರೆ ನಾನು ಮಾತ್ರ ಸುಳ್ಳು ಹೇಳ್ತ ಇಲ್ಲ. ನಿಮಗೆ ಸಿಕ್ಕಿದ ಜನ ನೀವು ಹುಡುಕ್ತಿದ್ದ ಜನ ಅಲ್ಲವೆ ಅಲ್ಲ. ನೋಡಿ ನೋಡಿ, ನಿಮಗೆ ಸಿಟ್ಟೇ ಬಂತಲ್ಲ! ಸ್ವಲ್ಪ ಸಮಾಧಾನದಿಂದ ಕೇಳಬಾರದ? ಪ್ಲೀಸ್!

ಮೊದಲು ನಿಮಗೆ ಸಹ ಅದು ಇವರಲ್ಲವೇನೋ ಅಂತನೇ ಅನಿಸಿತ್ತು, ನೆನಪು ಮಾಡಿಕೊಳ್ಳಿ. ಅನುಮಾನ ಇತ್ತು ನಿಮಗೂ. ಇರಲಿಕ್ಕಿಲ್ಲ ಇರಲಿಕ್ಕಿಲ್ಲ ಅಂತ ನಿಮಗೆ ನೀವೇ ನೂರು ಸರ್ತಿಯಾದರೂ ಹೇಳಿಕೊಂಡಿದ್ರಿ. ಆಗಲೂ ನಿಮ್ಗೆ ಒಳಗೊಳಗೆ ಒಂದು ಆಸೆ, ಅದು ಇವರೇ ಆಗಿರ್ಲಿ ಅಂತ! ಮತ್ತೆ ದಿನಕಳೆದ ಹಾಗೆ ಅದು ಇದೇ ಜನ ಅಂತ ವಿಶ್ವಾಸ ಕುದುರಲಿಕ್ಕೆ ಸಹ ಸುರುವಾಯ್ತು. ನಂಗೆ ಗೊತ್ತಿತ್ತು, ಇದು ಹೀಗೇ ಆಗ್ತದೆ ಅಂತ. ಕೊನೆಗೆ ನೀವು ನಂಬಿ ಬಿಟ್ರಿ, ನಿಮಗೇ ಗೊತ್ತಾಗದ ಹಾಗೆ! ಸುಳ್ಳ ನಾನು ಹೇಳಿದ್ದು? ಇವರನ್ನೇ ಹುಡುಕ್ತಾ ಇದ್ದಿದ್ದು ಅಂತ ನೀವು ನಂಬಿದ್ದು.

ಮದುವೆ ಕರೆಯೋಲೆ ತಯಾರಿ !!

ಹರಿ : ಹಲೋ ಗಣೇಶ್, ಸ್ವಲ್ಪ ಬಿಡುವು ಮಾಡಿಕೊಂಡು ಟೌನ್‌ಹಾಲ್ ಎದುರು ಬರಲು ಸಾಧ್ಯವೇ ?


 ನಾನು : ಅದಕ್ಕೇನಂತೆ.. .. .. ಏನು ವಿಷಯ?


ಹರಿ : ಏನಿಲ್ಲಾ.. .. ಮಹೇಶನಿಗೆ ಕನ್ನಡದಲ್ಲೊಂದು ಮದುವೆ ಕರೆಯೋಲೆ ತಯಾರಿ ಮಾಡೋಣವೆಂದು ನಾವೆಲ್ಲಾ ಇಲ್ಲಿ ಸೇರಿದ್ದೇವೆ. ಹಂಸಾನಂದಿಯವರು ಗ್ರಹ ನಕ್ಷತ್ರಗಳ ಕಡೆ ಗಮನಿಸುತ್ತಿದ್ದಾರೆ. ಸುನಿಲ್,ಸವಿತೃ,ವೈಭವ್,ಕನ್ನಡಕಂದ.. ... ಎಲ್ಲಾ ಸೇರಿ ಕನ್ನಡದಲ್ಲಿ ಕರೆಯೋಲೆ ತಯಾರಿ ಮಾಡುತ್ತಿದ್ದಾರೆ..


ನಾನು : ಫೈನ್. ನಾನು ಸಹ ೨ ಕರಡು ಪ್ರತಿ ಬರೆದಿದ್ದೇನೆ.ಅದನ್ನೂ ತರುತ್ತೇನೆ.