ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹಾವೇರಿಯಲ್ಲಿ ನಡೆದಿದ್ದು ಏನು?

ಮುಂಗಾರು ಮಳೆ ಬರುವುದಕ್ಕೆ ಮುನ್ನವೇ ಹಾವೇರಿ ಹಾಗೂ ಅದಕ್ಕೂ ಮುನ್ನ ಧಾರವಾಡದಲ್ಲಿ ರಸಗೊಬ್ಬರದ ಹೆಸರಿನಲ್ಲಿ ದೊಂಬಿ ಮತ್ತು ಹಿಂಸಾಕೃತ್ಯಗಳು ನಡೆದವು. ಆದರೆ, ರಾಜ್ಯದ ಯಾವುದೇ ಭಾಗದಲ್ಲಿ, ಅದರಲ್ಲೂ ಕೃಷಿಯಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ತೊಡಗಿಕೊಂಡಿರುವ ಜಿಲ್ಲೆಗಳಲ್ಲಿ ಇಂತಹ ಘಟನೆಗಳು ನಡೆಯದಿರುವುದು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಇಲ್ಲಿ ಕೊಂಚ ವಿಶ್ಲೇಷಣೆ ಅಗತ್ಯ.

ಮೊದಲನೆಯದು ಬದಲಾದ ರಾಜ್ಯ ರಾಜಕಾರಣ. ರಾಷ್ಟ್ರಪತಿ ಆಡಳಿತ ಜಾರಿಯಾಗುವುದಕ್ಕೆ ಕಾರಣವಾದ ಘಟನೆಗಳೇ ಇವತ್ತಿನ ದೊಂಬಿ ಪರಿಸ್ಥಿತಿಯಲ್ಲೂ ಮುಂದುವರೆದಿವೆ. ಯಾರಿಗೂ ಬಿಜೆಪಿ ಸರಳ ಬಹುಮತಕ್ಕೆ ಹತ್ತಿರ ಬರುತ್ತದೆ ಎಂಬ ನಂಬಿಕೆ ಇರಲಿಲ್ಲ. ಹೆಚ್ಚೆಂದರೆ, ಅದು ಕಳೆದ ಚುನಾವಣೆಗಿಂತ ಒಂದ್ಹತ್ತು ಹೆಚ್ಚು ಸ್ಥಾನಗಳನ್ನು ಪಡೆಯಬಹುದು ಎಂದು ಮಾತ್ರ ಊಹಿಸಿದ್ದರು. ರಾಷ್ಟ್ರಪತಿ ಆಡಳಿತಕ್ಕೂ ಪೂರ್ವದಲ್ಲಿ, ವಿಶ್ವಾಸಮತ ಸಾಬೀತು ಮಾಡಲು ಕರೆಯಲಾಗಿದ್ದ ಅಧಿವೇಶನದಲ್ಲಿ ದಿಢೀರ್‌ ಮುಖಭಂಗ ಅನುಭವಿಸಿದ ಬಿ.ಎಸ್‌. ಯಡಿಯೂರಪ್ಪನವರು ಅಸಹಾಯಕ ಸ್ಥಿತಿಯಲ್ಲಿ ರಾಜೀನಾಮೆ ನೀಡಬೇಕಾಗಿ ಬಂದುದು ಜನರಲ್ಲಿ ಅನುಕಂಪ ಮೂಡಿಸಿತು. ಊಟಕ್ಕೆ ಮನೆಯವರೆಗೆ ಕರೆದು, ಎಲೆ ಮುಂದೆ ಕೂತವರನ್ನು ಎಬ್ಬಿಸಿ ಕಳಿಸಿದರೆ ನೋಡಿದವರಿಗೆ ಏನನ್ನಿಸುತ್ತದೋ, ಅಂಥದೇ ಭಾವನೆ ಮತದಾರರಲ್ಲಿ ಉಂಟಾಯಿತು.

ರೈತರ ಮೇಲೆ ಗೋಲಿಬಾರಿಗೆ ಅದೇಶಿಸಿದ್ದು ಸರಿಯೇ?

ಅನ್ನಕೊಡುವ ರೈತನಿಗೆ ಭದ್ರತೆ ಕೊಡದೆ ಅವನ ಅಸಹಾಯಕತೆಯನ್ನೆ ಮುಂದಿಟ್ಟುಕೊಂಡು, ನ್ಯಾಯ ಕೇಳಲು ಬಂದವರಿಗೆ ಗೋಲಿಬಾರಿಗೆ ಅದೇಶಿಸಿದ್ದು ಸರಿಯಾದ ಕ್ರಮವೇ? ರೈತ ತನ್ನ ಸ್ವಾರ್ಥಕೋಸ್ಕರ ಬೆಳೆ ಬೆಳೆಯುತ್ತಿಲ್ಲ, ದೇಶದ ಆಹಾರ ಭದ್ರತೆ ಅವನ ಜವಬ್ದಾರಿ. ಅವನ ಜವಬ್ದಾರಿಯನ್ನು ಪೂರೈಸಿಕೊಳ್ಳಲು ಬಿಡದೆ ಅವನ ಮೇಲೆಯೆ ಎರಗುವುದು ಸರಿಯೇ?

ಕೊಲೆಗಾರ ಯಾರು -೧ ?

ಇಡೀ ವಠಾರ ದಿಗ್ಬ್ರೂಡವಾಗಿತ್ತು . ತಮ್ಮ ಮುಂದೆ ಆಡಿ ಬೆಳೆದ ತಮ್ಮ ಸುಮತಿ ಸಾಯುತ್ತಾಳೆ, ಅದೂ ಇಂತಹಾ ದುರ್ಮರಣಕ್ಕೆ ಈಡಾಗುತ್ತಾಳೆಂದು ಯಾರೂ ತಿಳಿದಿರಲಿಲ್ಲ.
ಆಕೆ ಕೊಲೆಯಾಗಿದ್ದು ಮೇಲ್ನೋಟಕ್ಕೆ ಎದ್ದು ಕಾಣುವಂತಹದ್ದಾಗಿತ್ತು.
ಕುತ್ತಿಗೆಯ ಆಯ ಕಟ್ಟಿಗೆ ಚೂರಿ ಚುಚ್ಚಿ ಕೊಲೆ ಮಾಡಲಾಗಿತ್ತು

ಕೊಲೆಗಾರ(ರ್ತಿ) ಯಾರು ?

ಇಡೀ ವಠಾರ ದಿಗ್ಬ್ರೂಡವಾಗಿತ್ತು . ತಮ್ಮ ಮುಂದೆ ಆಡಿ ಬೆಳೆದ ತಮ್ಮ ಸುಮತಿ ಸಾಯುತ್ತಾಳೆ, ಅದೂ ಇಂತಹಾ ದುರ್ಮರಣಕ್ಕೆ ಈಡಾಗುತ್ತಾಳೆಂದು ಯಾರೂ ತಿಳಿದಿರಲಿಲ್ಲ.
ಆಕೆ ಕೊಲೆಯಾಗಿದ್ದು ಮೇಲ್ನೋಟಕ್ಕೆ ಎದ್ದು ಕಾಣುವಂತಹದ್ದಾಗಿತ್ತು.
ಕುತ್ತಿಗೆಯ ಆಯ ಕಟ್ಟಿಗೆ ಚೂರಿ ಚುಚ್ಚಿ ಕೊಲೆ ಮಾಡಲಾಗಿತ್ತು

ಆತ್ಮಕ್ಕೂ ಭೂತಕ್ಕೂ ಏನು ವ್ಯತ್ಯಾಸ?

ಮೊನ್ನೆ ಯಾವುದೋ ದೆವ್ವದ ಕನ್ನಡ ಫಿಲ್ಮ ಟಿ.ವಿ.ಲಿ ಬರ್ತಿತ್ತು
ಯಾವ ಸಿನಿಮಾ ಅಂತ ಗೊತ್ತಿಲ್ಲ ಯಾರು ಮಾಡಿದ್ರು ಹೇಗಿತ್ತು ಅನ್ನೊದನ್ನ ಹೇಳ್ದೆ ಇರೋದೆ ವಾಸಿ ಅಷ್ಟು ಕೆಟ್ಟದಿತ್ತು

ಆದ್ರೆ ನನ್ನ ಕುತೂಹಲ ಕೆರಳಿಸಿದ್ದು ಒಂದು ಅಂಶ
ಒಂದೆಡೆ ಬಿಳಿಸೀರೆ ಉಟ್ಟ ಹೆಣ್ಣು ನಾನು ಆತ್ಮ ಅಂತಾಳೆ
ಇನ್ನೊಂದೆಡೆ ಜೇನ್ಸ್ ತೊಟ್ಟ ಅದೇ ಹೆಣ್ಣು ನಾನು ಭೂತ

ಎಣ್ಮಯ ಎಂದರೆ ಯಾರು

ನೆನ್ನೆ ಚಂದನದಲ್ಲಿ ಥಟ್ಟಂತ ಹೇಳಿ ಕಾರ್ಯಕ್ರಮ ಬರುತ್ತಿತು
ಅಲ್ಲಿ ಒಂದು
ಎಣ್ಮಯ ಎಂಬ ಮಾತಿತ್ತು
ನಂತರ ನಿರೂಪಕರು
ಎಣ್ಮಯ ಎಂದರೆ
ಶಿವನ ಹೆಸರು
ಎಂಟು ಮೈಯ್ಯುಳ್ಳವನು ಎಂದು ವಿವರಿಸಿದರು
ಶಿವನಿಗೆ ಎಂಟು ಮೈ ಎಂಬ ಕಲ್ಪನೆಯೇ ನನ್ಗೆ ಹೊಸದು

ತಿಳಿದವರು ಹಿನ್ನೆಲೆ ವಿವರಿಸುವಿರಾ