ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸ್ವಾಭಿಮಾನ

ಇನ್ನಾದರೂ ಸೋಲು..
ಇಷ್ಟೆಲ್ಲಾ ಆದ ಮೇಲೂ..

ಬಂದ ಭಾವನೆಗಳಿಗೆ ಬೇಲಿ ಹಾಕಿ
ಬಂಧಿಸಿದಾದ ಮೇಲೂ ..

ಆಸರೆಗಾಗಿ ತಡಕಾಡುತಿದ್ದ ಕರಗಳಾ..
ಕಟ್ಟಿ ಹಾಕಿದ ಮೇಲೂ...

ಸಜ್ಜನರಿಗಾದರೂ ಬಾಗಬೆಕಿದ್ದ ಶಿರವ..
ಧಿಕ್ಕರಿಸಿ ಮೆರೆವಂತೆ ಮಾಡಿದ ಮೇಲೂ..

ಒತ್ತರಿಸಿ ಬಂದ ಕಂಬನಿಯಾ..
ಕಣ್ಣೆವೆಗಳ ತೇವಕ್ಕೆ ಮಾತ್ರ, ಮೀಸಲಾಗಿಸಿದ ಮೇಲೂ..

ಇನ್ನಾದರೂ ಬಿಡುವೆಯ ನನ್ನ..

ಈ ವಚನ ನನಗೆ ಸ್ವಲ್ಪವೂ ಅರ್ಥ ಆಗ್ಲಿಲ್ಲ. ದಯವಿಟ್ಟು ವಿವರಿಸುತ್ತೀರಾ?

ಸಕಳೇಶ ಮಾದರಸನ ಈ ವಚನ ನನಗೆ ಸ್ವಲ್ಪವೂ ಅರ್ಥ ಆಗ್ಲಿಲ್ಲ. ದಯವಿಟ್ಟು ವಿವರಿಸುತ್ತೀರಾ?

ದೇವರೆದಾರಾವು ಏಳುವೆವಯ್ಯಾ, ದೇವ ಬಿದ್ದರಾವು ಬೀಳುವೆವಯ್ಯಾ,
ದೇವ ಸತ್ತಾರಾವು ಸಾವೆವಯ್ಯಾ, ದೇವ ಬದುಕಿದರಾವು ಬದುಕುವೆವಾಯ್ಯಾ,
ನಾ ಸತ್ತು , ದೇವ ಹಿನ್ದುಳಿದಡೆ ,
ಎನ್ನಿಂದ ಬಿಟ್ಟು ವ್ರತಗೇಡಿಗಳಾರು ಹೇಳಾ, ಸಕಲೇಶ್ವರದೇವಾ.

ನೀರಿಗೂ ಅಂಟು..ಚ್ಯೂಯಿಂಗಮ್‍ನ ಹೊಸ ನಂಟು

ವಿಜಯಕರ್ನಾಟಕ

ಚಿಕಲ್ ಎನ್ನುವ ವಸ್ತುವಿನಿಂದ ತಯಾರಿಸಿದ ಚ್ಯೂಯಿಂಗ್ ಗಮ್ ನಿವಾರಿಸುವುದು ಕಠಿನ. ಈಗ ನೀರಿನಿಂದಲೂ ತೆಗೆದು ಹಾಕಬಲ್ಲ ಚ್ಯೂಯಿಂಗ್ ಗಮ್‍ಗಳು ಬಂದಿವೆ.
ಓದಿ ಸುಧೀಂದ್ರರ ಲೇಖನ...

ಮೈಕ್ರೋಸಾಫ್ಟೀಕರಣ ವಿರುದ್ದದ ಹೊರಾಟದ ಬಗ್ಗೆ The Hindu ಪತ್ರಿಕೆಯ ದನಿ

ಮೈಕ್ರೋಸಾಫ್ಟೀಕರಣ ವಿರುದ್ದದ ಹೊರಾಟದ ಬಗ್ಗೆ The Hindu ಪತ್ರಿಕೆಯ ದನಿಯನ್ನ ಓದಲು ಕೆಳಕಂಡ ಕೊಂಡಿಯನ್ನ ಸಂಪರ್ಕಿಸಿ :

http://ismail.in/the-hindu-october-12-2007.pdf

 

 

 

 

ನವರಾತ್ರಿಯ ಮೊದಲ ದಿನ

ಇಂದು ನವರಾತ್ರಿಯ ಮೊದಲ ದಿನ. ದುಷ್ಟರ ಮುಂದೆ, ಒಳ್ಳೆಯ ಶಕ್ತಿ ವಿಜೃಂಭಿಸಿದ ದಿನವನ್ನು ನೆನೆಯಲು ನಾವು ಆಚರಿಸುವ ಹಬ್ಬ ನವರಾತ್ರಿ. ಹಳೆಯ ಮೈಸೂರಿನ ಕಡೆಯವರಿಗಂತೂ, ಅರಸರ ಕಾಲದಿಂದ ಬಂದಿರುವ ನಾಡಹಬ್ಬದ ಸಂಭ್ರಮ. ಮನೆಮನೆಯಲ್ಲೂ ಗೊಂಬೆಗಳ ಅಲಂಕಾರ. ಅಲ್ಲಲ್ಲಿ ಸಂಗೀತೋತ್ಸವಗಳು - ಹೀಗಾಗಿ ಧಾರ್ಮಿಕ ಕಾರಣಗಳಿಗಿಂತ, ಸಾಂಸ್ಕೃತಿಕ ಕಾರಣಗಳಿಗೆ ನವರಾತ್ರಿ ನನಗೆ ಮೆಚ್ಚುಗೆಯಾಗುವ ಹಬ್ಬ.

ಮೈಸೂರಿನಂತೆಯೇ, ವೈಭವದ ನವರಾತ್ರಿ ನಡೆಯುವ ಊರು ತಿರುವನಂತಪುರ. ಅಲ್ಲಿಯ ಪದ್ಮನಾಭದೇವಸ್ಥಾನದ ಪಕ್ಕದ ನವರಾತ್ರಿ ಮಂಡಪಂ ನಲ್ಲಿ, ಇನ್ನೂರಕ್ಕೂ ಹೆಚ್ಚು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಗೀತೋತ್ಸವದ ಆಚರಣೆ ಇದೆ. ಮಹಾರಾಜ ಸ್ವಾತಿ ತಿರುನಾಳ್ ( ಕ್ರಿ.ಶ. ರಿಂದ ಕ್ರಿ.ಶ. ) ಕರ್ನಾಟಕ ಸಂಗೀತದ ಪ್ರಮುಖ ವಾಗ್ಗೇಯಕಾರರಲ್ಲೊಬ್ಬರು. ಅವರು ನವರಾತ್ರಿಯ ಸಂದರ್ಭದಲ್ಲೇ ಹಾಡಬೇಕೆಂದು ರಚಿಸಿರುವ ಒಂಬತ್ತು ದೇವೀ ಪರವಾದ ಕೃತಿಗಳನ್ನು, ಈ ಸಂಗೀತೋತ್ಸವದಲ್ಲಿ ಪ್ರತಿ ದಿನ ತಲಾ ಒಂದು ಕೃತಿಯನ್ನು ವಿಸ್ತರಿಸಿ ಹಾಡಲಾಗುತ್ತೆ. ಈ ರಚನೆಗಳಿಗೆ ನವರಾತ್ರಿ ಕೃತಿಗಳೆಂದೇ ಕರೆಯಲಾಗುತ್ತೆ. ದಸರೆಯ ಮೊದಲ ದಿವಸ ಸಂಜೆ ಹಾಡುವ ಕೃತಿ ಶಂಕರಾಭರಣ ರಾಗದ ದೇವಿ ಜಗಜ್ಜನನಿ ಎಂಬುದು.

ಈ ಸಂದರ್ಭದಲ್ಲೇ, ನನಗೆ ಇಷ್ಟವಾದ ಕೆಲವು ರಚನೆಗಳನ್ನೂ ಸಂಗೀತಾಸಕ್ತರೊಂದಿಗೆ ಹಂಚಿಕೊಳ್ಳೋಣವೆನಿಸಿತು. ಪ್ರತಿ ದಿನ ಒಂದು ಕೃತಿಯ ಬಗ್ಗೆ ಸ್ಬಲ್ಪ ಮಾಹಿತಿಯನ್ನೂ, ಸಾಧ್ಯವಾದರೆ ಕೇಳಲು ಕೊಂಡಿಗಳನ್ನೂ ಕೊಡುವ ಇರಾದೆ ನನ್ನದು. ನವರಾತ್ರಿ ಆದ್ದರಿಂದ, ದೇವಿಯ ವಿವಿಧ ರೂಪಗಳ ( ಪಾರ್ವತಿ, ಸರಸ್ವತಿ, ದುರ್ಗೆ, ಇತ್ಯಾದಿ) ಬಗ್ಗೆ ಇರುವ ಕೃತಿಗಳಿವು ಅನ್ನುವುದನ್ನು ಬಿಟ್ಟರೆ, ಯಾವುದೇ ಕ್ರಮವನ್ನು ನಾನು ಅನುಸರಿಸುತ್ತಿಲ್ಲ.

“ಮಂಥನ” ದ ಬಗ್ಗೆ ಸ್ವಲ್ಪ ಚಿಂತನ!

ಬೆಂಗಳೂರಿನಿಂದ ಬಹಳ ವರ್ಷ ಹೊರಗಿದ್ದ ನನಗೆ ಕನ್ನಡ ಟಿ.ವಿ. ಸೀರಿಯಲ್‍ಗಳನ್ನು ನೋಡುವ ಅಭ್ಯಾಸವಿರಲಿಲ್ಲ. ಇತ್ತೀಚೆಗೆ ನಿವೃತ್ತ್ತ್ತನಾದ ಮೇಲೆ ಬಹಳ ಜನರ ಪ್ರಶಂಸೆ ಕೇಳಿ ಈ ಟೀವಿಯಲ್ಲಿ ಬರೋ “ಮಂಥನ” ದ ಕೆಲವು ಎಪಿಸೋಡ್‍ಗಳನ್ನು ನೋಡಿದೆ. ಹಿಂದಿನಿಂದಲೂ ನಾಟಕದ ಗೀಳು ಬೆಳೆಸಿಕೊಂಡಿದ್ದರಿಂದ ಸ್ವಾಭಾವಿಕವಾಗಿಯೆ ನನ್ನ ಮನಸ್ಸು ನಾಟಕದ ವಿಮರ್ಶೆ ಮಾಡತೊಡಗಿತು.

ಕೆಂಪಿಕಣ್ಣು

ದೀಪದ ಕುಡಿಗಳಂತ ಕಣ್ಣಂಚಲ್ಲಿ ಈಗಲೋ ಆಗಲೋ ಬೀಳುವಂತೆ ತುಂಬಿ ನಿಂತ ಹನಿ, ಮುದ್ದಾದ ಉದ್ದ ಮೂಗಿನ ತುದಿ ಕೆಂಪಗೆ ಕುಂಕುಮ ಸವರಿದಂತೆ, ಯಾವಾಗಲೂ ಕತೆ ಕಟ್ಟುವ ತುಂಟ ಬಾಯಿ, ತುಟಿ ಬಿಗಿದು ಸಿಡುಕಿಕೊಂಡು.. ಅಮ್ಮನಿಗೆ ನಗು ಬಂತು. ಆದರೆ ನಗುವಂತಿಲ್ಲ. ತುಟಿಗಳನ್ನ ಉಮ್ ಅಂತ ಬಿಗಿಹಿಡಿದು, ಕೆನ್ನೆಯನ್ನ ಕಷ್ಟಪಟ್ಟು ಒಳಗೆಳೆದುಕೊಂಡು ನಿಲ್ಲಿಸಿ, ಕಣ್ಣನ್ನ ಆದಷ್ಟೂ ಅಗಲ ಮಾಡಿಕೊಂಡು ಮಗಳನ್ನ ಸೀರಿಯಸ್ ಆಗಿ ನೋಡಿದಳು. ಮಗಳಿಗೋ ತುಂಬ ವಿಶ್ವಾಸ ಕಣ್ಣಂಚಿನಲ್ಲಿ ನಿಂತಿರುವ ಹನಿ ಕೆಳಗೆ ಉರುಳುತ್ತಿದ್ದಂತೆಯೇ ಅಮ್ಮನ ಮುಖ ಸಡಿಲವಾಗುತ್ತದೆ, ದನಿ ನವಿರಾಗುತ್ತದೆ, ಕೈ ತನ್ನನ್ನ ಬಳಸುತ್ತದೆ ಮತ್ತು ತಾನೂ ಇಷ್ಟೊತ್ತೂ ಹಟ ಮಾಡುತ್ತಿರುವ ಬಿಸ್ಕೇಟನ್ನ ಅಮ್ಮ ಅಲ್ಲಿ ನಾಗಂದಿಗೆಯ ಮೇಲಿಟ್ಟ ಸಿಲ್ವರ್ ಡಬ್ಬಿಯಿಂದ ತೆಗೆದು ಕೊಟ್ಟೆ ಕೊಡುತ್ತಾಳೆ.. ಹನಿ ಉದುರಿಸಲೋ ಬೇಡವೋ.. ಅಮ್ಮನ ಮುಖ ನೋಡಿದಳು.

ಉಂಹುಂ ಬಿಗಿದುಕೊಂಡೆ ಇದೆ.. ಓ ಇನ್ನೇನು ನಗುತ್ತಾಳೆ ಬಾಯಿ ತೆರೆಯಿತು..
ಅಮ್ಮನ ಬಾಯಿಂದ ಆ ಭಯಾನಕ ಶಬ್ಧ ಬಂದುಬಿಟ್ಟಿತು.. "ಕೆಂಪಿಕಣ್ಣು ಗೊತ್ತಲ್ದಾ.. ಹಟ ಮಾಡ ಮಕ್ಕಳಿಗೆ ಎಂತ ಮಾಡ್ತು ಅಂತ ಮರ್ತೋತಾ ಪುಟ್ಟೀ?...

ಕಣ್ಣಂಚಿನ ಹನಿ ಅಲ್ಲೆ ನಿಂತುಬಿಟ್ಟಿತು. ಭಯದಿಂದ ಕಣ್ಣು ಅಗಲವಾದರೂ ಪುಟ್ಟಿಗೆ ಸುಮ್ಮನಿರಲಾಗಲಿಲ್ಲ.. ಆ ಬಾಯಿ ಕೇಳಿಯೂ ಕೇಳಿಸದ ಹಾಗೆ "ಎಂತಾ ಮಾಡ್ತು" ಕೇಳೇ ಬಿಟ್ಟಿತು.

ಈಗ ಅಮ್ಮನ ಮುಖ ಸಡಿಲಾಯಿತು. ಬಗ್ಗಿ ಪುಟ್ಟಿಯನ್ನ ಎತ್ತಿ ಸೊಂಟಕ್ಕೆ ಹಾಕಿಕೊಂಡು ಮೆತ್ತಿನ ಮೆಟ್ಟಿಲ ಕೆಳಗಿದ್ದ ದೊಡ್ಡ ಕಿಟಕಿಯ ತಳಿಯಲ್ಲಿ ಕೂತಳು ಅಮ್ಮ. ಹೊರಗೆ ಕಿಟಕಿಯಿಂದಾಚೆಗೆ ಬಯಲ ಕೊನೆಗೆ ದಕ್ಷಿಣ ರೈಲ್ವೆಯ ಕೊನೆಯ ಸ್ಟೇಷನ್ನಿನ ಮರದ ಬೇಲಿಗಳು, ಹಸಿರಗಿಡಗಳ ಜೊತೆಗೆ ಮಾತುಕತೆ ನಡೆಸಿದ್ದವು. ಬೇಲಿ ಪಕ್ಕದ ಹಾದಿಯಲ್ಲಿ ಪ್ಲೈವುಡ್ ಫ್ಯಾಕ್ಟರಿಯ ಮೊದಲ ಶಿಫ್ಟು ಮುಗಿಸಿ ಹೋಗುತ್ತಿರುವ ಹಳ್ಳಿಯವರು... ಎಂತಾಗ್ತು ಅಂದ್ರೇ...

ಒಂದೂರಲ್ಲಿ ಒಂದು ಪುಟ್ಟ ಮನೆ, ನಮ್ಮನೇ ತರದ್ದೇ, ಬೀದಿಗೇ ಹೊಂದಿಕೊಂಡು ಅಂಗಡಿ, ದಾಟಿದ ಕೂಡಲೆ, ಜಗಲಿ, ಆಮೇಲೆ ನಡೂಗಿನ ಕೋಣೆ,ಮೆತ್ತಿ ಮೆಟ್ಲು, ಆದ್ ಕೂಡ್ಲೆ ಅಡಿಗೆ ಮನೆ, ಅಲ್ಲೇ ದೇವರ ಗೂಡು, ಆಮೇಲೆ ಪುಟ್ಟ ಅಂಗಳ, ಅಂಗಳದ ಕೊನೆಗೆ ಬಚ್ಚಲು ಮನೆ, ಅದರಾಚೆಗೆ ಕೊಟ್ಟಿಗೆ.. ದಾಟಿಕೊಂಡು ಹೋದ್ರೆ ಬಾವಿಯ ಬಯಲು..

ಸ೦ಧಿ ವಿ೦ಗಡಿಸುವ ಚಿಹ್ನೆ

ಸ೦ಧಿ ವಿ೦ಗಡಿಸುವ ಚಿಹ್ನೆಗೆ ನೀವು ಏನ೦ತೀರಿ?
ನ೦ಗನ್ಸುತ್ತೆ 'ಕೂಡೆ' ಅನ್ಬಹುದು.ಮೈಸುರಿನ ಹತ್ತಿರ ಆಡುಮಾತಿನಲ್ಲೂ 'ಜೊತೆಗೆ' ಅನ್ನೋದಕ್ಕೆ 'ಕೂಡೆ' ಅನ್ನೋರಿದ್ದಾರೆ(ಎಲ್ರೂ ಹೇಳಲ್ಲ).
ಕೂಡೆ=ಕೂಡಲು, ಸೇರಲು (ಕೂಡಿದಾಗ, ಸೇರಿದಾಗ)
ವೀರಕನ್ನಡಿಗನೆ೦ಬ೦ತೆ: ಮನೆ+ಅಲ್ಲಿ=ಮನೆ ಪ್ಲಸ್ ಅಲ್ಲಿ ಅ೦ದರೆ ಮನೆಯಲ್ಲಿ, ಇದು ಯಕಾರಾಗಮ ಸ೦ಧಿ.