ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

'ಅವರೇ ಸ್ವಾಮಿಗಳು'

ಕೆಲವು ವಾರಗಳ ಹಿ೦ದೆ ಒ೦ದು ದಿನ ವಿಜಯ ಕರ್ನಾಟಕ ಪತ್ರಿಕೆಯನ್ನ ಓದುತ್ತಿದ್ದಾಗ ಒ೦ದು ಲೇಖನ ನನ್ನ ಗಮನ ಸೆಳೆಯಿತು. ಆ ಲೇಖನವನ್ನ ಡಾ. ಟಿ.ವಿ. ವೆ೦ಕಟಾಚಲ ಶಾಸ್ತ್ರಿಯವರ "ಉದಾರಚರಿತರು ಉದಾತ್ತಪ್ರಸ೦ಗಗಳು" ಎ೦ಬ ಪುಸ್ತಕದಿ೦ದ ಆಯ್ದು ಪ್ರಕಟಿಸಿದ್ದರು. ಮತ್ತೆ ಮು೦ದಿನವಾರ ಅದೇ ಪುಸ್ತಕದಿ೦ದ ಆಯ್ದ ಇನ್ನೊ೦ದು ಲೇಖನವನ್ನ ಪ್ರಕಟಿಸಿದ್ದರು.

ಶ್ರೀ ಶೃಂಗೇರಿ ಜಗದ್ಗುರುಗಳ ಪರಂಪರೆ :

ಶ್ರೀ ಶೃಂಗೇರಿ ಜಗದ್ಗುರುಗಳ ಪರಂಪರೆ :

ಶ್ರೀ ಶ್ರೀ ಆದಿಶಂಕರರ ಭಕ್ತರಲ್ಲಿ ಪ್ರಧಾನರಾದವರು, ಕೇವಲ ೪ ಜನ. ಅವರೆಲ್ಲಾ ತಮ್ಮ ತಮ್ಮ ಕ್ಷೇತ್ರದಲ್ಲಿ ಅಸಮಾನರು.

ದೃಢಭಕ್ತಿಯಲ್ಲಿ, ಶ್ರೀ ಪದ್ಮಪಾದಾಚಾರ್ಯರು, ಅನುಪಮಸೇವೆಯಲ್ಲಿ, ಶ್ರೀ ತೋಟಕಾಚಾರ್ಯರು, ಪರಮಾತ್ಮ ಸಾಕ್ಷಾತ್ಕಾರದಲ್ಲಿ ಶ್ರೀ ಹಸ್ತಾಮಲಕಾಚಾರ್ಯರು, ಕೊನೆಯದಾಗಿ ಅದ್ವಿತೀಯ ಪಾಂಡಿತ್ಯದಲ್ಲಿ ಶ್ರೀ ಸುರೇಶ್ವರಾಚಾರ್ಯರು.

ಶಂಕರರ ಪ್ರಥಮ ಶಿಷ್ಯನಾಗಿ ಶ್ರೀ ಪದ್ಮಪಾದಾಚಾರ್ಯರು ಪ್ರಥಮರು. ಇನ್ನೂ ಅನೇಕಸ್ಥಾನದಲ್ಲೂ ಇವರು ಪ್ರಥಮರು. ಶ್ರೀ ತೋಟಕಾಚಾರ್ಯರಿಗೆ, ಪದ್ಮಪಾದ ಸುರೇಶ್ವರಾಚಾರ್ಯರಷ್ಟು ವಿದ್ಯೆಯಾಗಲೀ, ಹಸ್ತಾಮಲಕರಷ್ಟು ಬ್ರಹ್ಮಸಾಕ್ಷಾತ್ಕಾರವಾಗಲೀ ಇರಲಿಲ್ಲ. ನಿಷ್ಟಾವಂತ ಸೇವಕನಂತೆ ಗುರುಗಳನ್ನು ವ್ಯಕ್ತಿಗತ ಶುಶ್ರೂಷೆಯಲ್ಲಿ ಆನಂದವನ್ನು ಕಾಣುತ್ತಿದ್ದರು.

ಶ್ರೀ ಹಸ್ತಾಮಲಕಾಚಾರ್ಯರು, ಯಾವುದೊಂದು ಶಾಸ್ತ್ರವನ್ನೂ ಅಧ್ಯಯನ ಮಾಡದಿದ್ದರೂ ಶಂಕರರು ಅವರನ್ನು ಆತ್ಮಸಾಕ್ಷಾತ್ಕಾರ ಪಡೆದವರತರಹ ಉನ್ನತಮಟ್ಟದಲ್ಲಿ ಇರಿಸಿದ್ದರು.

ಶ್ರೀ ಸುರೇಶ್ವರಾಚಾರ್ಯರು ದಕ್ಷಿಣ ಭಾರತದ ಶೃಂಗೇರಿ ಪೀಠದ ಅಧಿಪತಿಗಳಾಗಲು ಕಾರಣ ; ಅವರ ಅದ್ವಿತೀಯ ಪ್ರತಿಭಾಶಕ್ತಿ. ಶಿಷ್ಯರಾಗಿದ್ದಾಗ್ಯೂ ಗುರುಶಿಷ್ಯರ ಮಧ್ಯೆ ವಯಸ್ಸಿನ ಅಂತರ ವಿಪರೀತವಾಗಿತ್ತು. ಪೂರ್ವಾಶ್ರಮದಲ್ಲಿ ಮಂಡನಮಿಶ್ರರೆಂದು ಹೆಸರುವಾಸಿಯಾಗಿದ್ದ ಅವರು, ಪ್ರಖರವಾದ ಶಾಸ್ತ್ರಾರ್ಥದಲ್ಲಿ ಪರಾಜಿತರಾದಮೇಲೆ ಶಂಕರಭಗವತ್ಪಾದರ ಪಟ್ಟಶಿಷ್ಯರಾದರು. ಸರಳ, ಮತ್ತು ವಿದ್ವತ್ಪೂರ್ಣ ವ್ಯಕ್ತಿತ್ವವಿದ್ದರೂ ಆವರ ವಿನಯತೆಗೆ ಶಂಕರರು ಮಾರುಹೋಗಿದ್ದರು.

ಸುರೇಶ್ವರಾಚಾರ್ಯರ ಉತ್ತರಾಧಿಕಾರಿಗಳಾಗಿ ಬಂದವರು, ನಿತ್ಯಬೋಧಘನರು, ತದನಂತರ, ಜ್ಞಾನಘನರು, ಜ್ಞಾನೋತ್ತಮರು, ಜ್ಞಾನಗಿರಿಗಳು, ಸಿಂಹಗಿರಿಗಳು, ಈಶ್ವರತೀರ್ಥರು, ನರಸಿಂಹತೀರ್ಥರು.

ಶ್ರೀ ಸಚ್ಚಿದಾನಂದ ಭಾರತಿಗಳು ೨೭ ನೇ ಆಚಾರ್ಯರು.

ಶ್ರೀ ಅಭಿನವ ಸಚ್ಚಿದಾನಂದ ಭಾರತಿಗಳು ೨೮ ನೆಯವರು.

ಶ್ರೀ ನೃಸಿಂಹಭಾರತಿಗಳು ೨೯ನೆಯವರು.

೩೦ ನೆಯವರಾಗಿ, ಸಚ್ಚಿದಾನಂದಭಾರತಿಗಳು.

ಶ್ರೀ ಅಭಿನವವ ಸಚ್ಚಿದಾನಂದ ಭಾರತೀ ಸ್ವಾಮಿಗಳು ೩೧ ನೆಯವರಾಗಿ ನೇಮಿಸಲ್ಪಟ್ಟರು.

೩೨ ನೆಯಾರಾಗಿ ಶ್ರೀ ನೃಸಿಂಹಭಾರತಿಗಳು ಸುಮಾರು ೧೯ ನೆಯ ಶತಮಾನದ ಬಹುಭಾಗ ಪೀಠಾಧಿಪತಿಗಳಾಗಿದ್ದರು.

ಶ್ರೀ ಸಚ್ಚಿದನಂದ ಶಿವಾಭಿನವ ನೃಸಿಂಹಭಾರತಿಗಳು ೩೩ ನೆಯ ಪೀಠಾಧಿಪತಿಗಳಾಗಿ ನೇಮಿಸಲ್ಪಟ್ಟರು.

ಅಂಕುರ

 

ಯಾಕೆ
ಪದ್ಯ ಹುಟ್ಟುವ ಮೊದಲೇ
ಪದಗಳ ಕುಲಾವಿಯ ಸಡಗರ?
ಹುಟ್ಟಿದ ಮೇಲೋ-
ತೊದಲು, ಜೊಲ್ಲು,
ಅಕಸ್ಮಾತ್
ನಿದ್ದೆಯಲ್ಲೇ ನಗುವ ಚಮತ್ಕಾರ!

ಭಾರತ ಎಂದರೆ ಏನು?

ಭಾರತ ಎಂದರೆ ಏನು?

ನಮ್ಮ ದೇಶದ ಅಧಿಕೃತ ಹೆಸರು ಇಂಡಿಯ. ಆದರೆ ನಮ್ಮಲ್ಲಿ ಕೆಲವು ಜನ ಇದನ್ನ ಹಿಂದೂಸ್ತಾನ, ಭಾರತ ಅಂತ ಕರೆಯುತ್ತೇವೆ.
ನನಗೆ ಇಂಡಿಯಾ ಅಂದ ತಕ್ಷಣ ನಮ್ಮ ಬೆಂಗಳೂರಿಂತ ಪಟ್ಟಣಗಳು, ಅಲ್ಲಿನ ಮೋಸ , ಧಗ, ವಂಚನೆಗಳೆಲ್ಲವೂ ಕಣ್ಮುಂದೆ ಬರುತ್ತವೇ. IT. BT, ವಿಜ್ಞಾನ-ತಂತ್ರಜ್ಞಾನ ಕ್ಶೇತ್ರದಲ್ಲಿ ಸಾಧನೆ ಮಾಡಿದನ್ತ ದೇಶ ಕಣ್ಣ ಮುಂದೆ ಬರುತ್ತೆ!

ಮಾಸದ ಭಾವನೆಗಳು

ಬಾರದೆ೦ದು ಬದಿಗೊತ್ತಿದ
ಆ ಹಲವು ಬಾಲ್ಯದ ಕ್ಷ್ಣಣಗಳು
’ಛಾ’ಗೆ೦ದು ಹೊರಗೆ ಹೋದಾಗ
ಕಾಕ ಅ೦ಗಡಿಯಲ್ಲಿ ಕ೦ಡ ಕ೦ದಮ್ಮನ
ಕಣ್ಣ೦ಚಿನಿ೦ದ ಉದುರುವುದನ್ನು ಕ೦ಡು
ಕಸಿವಿಸಿಗೊ೦ಡನು ನಮ್ಮ ಕವಿವರ್ಯನು

***********************************************

ನನ್ನ ಕಣ್ಣುಗಳಲ್ಲಿ ನಿರ೦ತರವಾಗಿ
ನಿ೦ತಿದ್ದ ಪ್ರಶ್ನೆಗಳೆಲ್ಲ
ಕಾಣದಾಗಿವೆಯೆ೦ದ ಮಾತ್ರಕ್ಕೆ
ಉತ್ತರಗಳೆಲ್ಲ ದೊರೆತವೆ೦ದಲ್ಲ
ಕೊ೦ಚ ಇಣುಕಿ ನೊಡಿದರೆ ತಿಳಿದೀತು
ಆ ಎಲ್ಲ ಪ್ರಶ್ನೆಗಳು
ಮುದಿಯಾಗಿ ಬಾಡಿ ಬತ್ತಿ ಮಲಗಿರುವಾಗ
ಅದರ ಮೇಲೆ ಹತಾಶೆಯು ’ಕಫನ್’ ಹೊದೆಸಿ ಕುಳಿತಿರುವುದನ್ನು

************************************************

ತಂದೆ ತಾಯಿ ಮತ್ತು ಮಕ್ಕಳು

ನಾನೂ ಒಬ್ಬ ತಂದೆಯಾಗಿ ನಿನ್ನೆ ಕನ್ನಡ ಪ್ರಭದಲ್ಲಿ (15-09-2007 -ಸಖಿ)-ಮೆಚ್ಚಿಕೊಂಡ ಲೇಖನ [http://kannadaprabha.com/NewsItems.asp?ID=KP720070914025222&Title=Sakhi&lTitle=%D1%DAT&Topic=0&Dist=0| ಗುರಿ ಅವರದಾಗಿರಲಿ, ಗುರು ನೀವಾಗಿರಿ ಸಾಕು]ಮಕ್ಕಳು ಮತ್ತು ಹೆತ್ತವರ ಬಗ್ಗೆ ಖಲೀಲ್ ಗಿಬ್ರಾನ್ ಹೇಳಿದ್ದನ್ನೂ ಬಾಕ್ಸ್ ಮಾಡಿ ಲೇಖನಕ್ಕೆ ಹೈಲೈಟ್ ಮಾಡಿದ್ದಾರೆ-

ಶ್ರೀ ಶೃಂಗೇರಿ ಜಗದ್ಗುರುಗಳ ಪರಂಪರೆ :

ಶ್ರೀ ಶ್ರೀ ಆದಿಶಂಕರರ ಭಕ್ತರಲ್ಲಿ ಪ್ರಧಾನರಾದವರು, ಕೇವಲ ೪ ಜನ. ಅವರೆಲ್ಲಾ ತಮ್ಮ ತಮ್ಮ ಕ್ಷೇತ್ರದಲ್ಲಿ ಅಸಮಾನರು. ದೃಢಭಕ್ತಿಯಲ್ಲಿ, ಶ್ರೀ ಪದ್ಮಪಾದಾಚಾರ್ಯರು, ಅನುಪಮಸೇವೆಯಲ್ಲಿ, ಶ್ರೀ ತೋಟಕಾಚಾರ್ಯರು, ಪರಮಾತ್ಮ ಸಾಕ್ಷಾತ್ಕಾರದಲ್ಲಿ ಶ್ರೀ ಹಸ್ತಾಮಲಕಾಚಾರ್ಯರು, ಕೊನೆಯದಾಗಿ ಅದ್ವಿತೀಯ ಪಾಂಡಿತ್ಯದಲ್ಲಿ ಶ್ರೀ ಸುರೇಶ್ವರಾಚಾರ್ಯರು.

ಎಚ್ಚರದಪ್ಪುತ್ತಿರುವ ಮಠಾಧೀಶರೂ, ಅವರ ಜಾತಿ ರಾಜಕಾರಣವೂ...

ಎಚ್ಚರದಪ್ಪುತ್ತಿರುವ ಮಠಾಧೀಶರೂ, ಅವರ ಜಾತಿ ರಾಜಕಾರಣವೂ...

ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ!

ಕಬ್ಬಿಣ ನಮ್ಮ , ಮರಗಿಡಗಳ ಜೀವನಾಧಾರವಾದ ಧಾತು ( vital element) ಎಂದು ನಮಗೆಲ್ಲ ತಿಳಿದೇ ಇದೆ. ನಮ್ಮ ರಕ್ತದಲ್ಲಿನ Hemoglobinನ ಮುಖ್ಯ ಅಂಶ ಇದು. ಆಮ್ಲಜನಕ-ವಾಹಕ ವಾಗಿ ಕೆಲಸ ಮಾಡುತ್ತೆ. ನಾವು ಬಳಸುವ ಬಹುಪಾಲು ಸಲಕರಣೆಗಳಲ್ಲಿ ಕಬ್ಬಿಣ ಇದೆ. ಆದಿಮಾನವ ಕಾಲದಿಂದಲೂ ಕಬ್ಬಿಣ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ.

ಇಂತಹ ಕಬ್ಬಿಣ ನಕ್ಶತ್ರಗಳನ್ನ ಕೊಲ್ಲುತ್ತೆ ಅಂದ್ರೆ ನಂಬ್ತೀರಾ ......ಆದರೆ .........ಇದು ನಿಜ.

ಕಬ್ಬಿಣ "periodic table" ನ ಅತಿ ಮುಖ್ಯ ಧಾತು.
Atomic Number: 26
Symbol: Fe
Atomic Weight: 55.847

ಇದು neclear fusion ದೃಷ್ಟಿ ಇಂದ ಅತ್ಯಂತ ಸ್ಥಿರವಾದ ( stable element) ಧಾತು.

ಈಗ ಸ್ವಲ್ಪ ವಿವರವಾಗಿ ನೋಡೋಣ .

ವಾತಾಪಿ ಗಣಪತಿಂ ಭಜೇಹಂ

ಈ ಶನಿವಾರ ಭಾದ್ರಪದ ಶುಕ್ಲ ಚೌತಿ. ಗಣೇಶನನ್ನು ತೊಡಕುಗಳನ್ನು ಕಳೆಯುವವನೆಂದು ನಾವೆಲ್ಲ ಪೂಜಿಸುತ್ತೇವೆ. ನಮ್ಮ ಹಿಂದಿನ ಹರಿದಾಸರು, ಮತ್ತೆ ಹಲವು ಕವಿಗಳನ್ನು ಬಗೆಬಗೆಯಾಗಿ ಹೊಗಳಿರುವವರೇ. ಕನಕದಾಸರ ಹಾಡೊಂದು, ಎಲ್ಲರ ಮನದಲ್ಲಿ ನೆಲೆಯಾಗಿ ನಿಲ್ಲುವಂತೆ ವಿದ್ಯಾಭೂಷಣರು ಹಾಡಿರುವುದು ನಮಗೆಲ್ಲ ತಿಳಿದಿರುವುದೇ - ನಮ್ಮಮ್ಮ ಶಾರದೆ ಉಮಾಮಹೇಶ್ವರಿ ನಿಮ್ಮೊಳಗಿಹನ್ಯಾರಮ್ಮ ಅನ್ನುವ ಈ ಹಾಡು ಹಂಸಧ್ವನಿ ರಾಗದಲ್ಲಿದೆ. ಅದೇ ಹಂಸದ್ವನಿ ರಾಗದಲ್ಲಿ ಮತ್ತೊಂದು ಪ್ರಖ್ಯಾತ ರಚನೆ ಇದೆ - ಅದು ಮುತ್ತುಸ್ವಾಮಿ ದೀಕ್ಷಿತರ ವಾತಾಪಿಗಣಪತಿಂ ಭಜೇಹಂ ಅನ್ನುವ ಕೃತಿ. ಸುಮಾರು ಒಂದು ನಾಲ್ಕಾರು ಸಂಗೀತ ಕಚೇರಿಗಳಿಗಾದರೂ ನೀವು ಹೋಗಿದ್ದರೆ, ನಿಮಗೆ ಈ ರಚನೆ ತಿಳಿದೇ ಇರಬೇಕು ಎನ್ನುವಷ್ಟು ಪ್ರಖ್ಯಾತವಾದ ರಚನೆ ಇದು.

ಮುತ್ತುಸ್ವಾಮಿ ದೀಕ್ಷಿತರು ಕರ್ನಾಟಕಸಂಗೀತದ ತ್ರಿಮೂರ್ತಿಗಳಲ್ಲೊಬ್ಬರು. ಇವರು ಸುಮಾರು ನಾನೂರು ರಚನೆಗಳನ್ನು ರಚಿಸಿದ್ದಾರೆ. ಅದರಲ್ಲಿ ೩-೪ ಮಾತ್ರ ತೆಲುಗು/ಮಣಿಪ್ರವಾಳದಲ್ಲಿದ್ದು ಉಳಿದದ್ದೆಲ್ಲ ಸಂಸ್ಕೃತದಲ್ಲಿವೆ. ಬಹಳ ಸರಳವಲ್ಲದಿದ್ದರೂ, ಇವರ ರಚನೆಗಳು ಸಂಗೀತರಸದಿಂದ ತುಂಬಿವೆ. ತಂಜಾವೂರಿನ ಬಳಿಯ ತಿರುವಾರೂರಿನಲ್ಲಿ ಜನಿಸಿದ ಇವರು ದೇಶದ ಹಲವೆಡೆಗಳಿಗೆ ಯಾತ್ರಿಕರಾಗಿ ಹೋಗಿ, ಅಲ್ಲಿನ ದೇವಾಲಯಗಳ ದೇವಾನುದೇವತೆಗಳ ಬಗ್ಗೆ ತಮ್ಮ ಕೃತಿಗಳನ್ನು ರಚಿಸಿದ್ದಾರೆ.

ಮುತ್ತುಸ್ವಾಮಿ ದೀಕ್ಷಿತರು (ಕ್ರಿ.ಶ.೧೭೭೬- ೧೮೩೫)