ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಒಂದು ಸಂದೇಹ.......

"ಮೋಹದ ಹೆಂಡತಿ ತೀರಿದ ಬಳಿಕ ಮಾವನ ಮನೆಯ ಹಂಗಿನ್ಯಾಕೋ...." ಈ ಸಾಲು ಯಾವ ಕವನದಲ್ಲಿದೆ ಮತ್ತು ಇದನ್ನು ಬರೆದವರಾರು ಎಂಬುದನ್ನು ತಿಳಿದವರು ದಯಮಾಡಿ ತಿಳಿಸುವಿರಾ?

ಯಾರು ಮೇಲು?

ಎನ್ನೊಳಗೆ ನೀ ಹೊಕ್ಕು
ನಿನ್ನೊಳಗೆ ನಾ ಹೊಕ್ಕು
ನೀನಿಲ್ಲದೆ ನಾನುಂಟೆ ?
ನಾನಿಲ್ಲದೆ ನೀನುಂಟೆ?
ನಾ ಮೇಲೋ, ನೀ ಮೇಲೋ
ಮೇಲ್ಯಾರು ಓ ದೇವರೆ? ನೀನೇ, ನಿನ್ನ ಒಕ್ಕಲಾದ ನಾನೆ ?
ತಿಳಿಯದಾಗಿದೆ ನೋಡಾ

ಈ ಜರ್ಮನಿಯರಿಗೆ, ಇಂಗ್ಲೀಷ ಬರೋದಿಲ್ಲ..

ಈ ಜರ್ಮನಿಯರಿಗೆ, ಇಂಗ್ಲೀಷ ಬರೋದಿಲ್ಲ..

ಇವರು ಎಲ್ಲವನ್ನು ತಮ್ಮ ನುಡಿಯಲ್ಲಿ ಸಾಧಿಸಿರೋದರಿಂದ ಇಂಗಲೀಸು ಅಂದರೆ ಅಸಡ್ಡೆ ಜಾಸ್ತಿ..

ಇವತ್ತು ನಡೆದ ವಿಷಯ ಹೇಳುತ್ತೀನಿ..
ಬೆಳಿಗ್ಗೆ arbeitsplatzಗೆ (ಕೆಲಸದಜಾಗ ಅಂತ ಜರ್ಮನಿಯಲ್ಲಿ ಆಫೀಸಿಗೆ ಕರೀತಾರೆ :)) ಬಂದ ಕೂಡಲೆ, ನನ್ನ ಜರ್ಮನ್ mitarbeiter (mit + arbeiter) ಅಂದರೆ ಜೊತೆಗೆಲಸಗಾರ :) ನನ್ನ ಬಳಿ ಬಂದು Guten Morgen ಅಂದು ಹಲ್ಲು ಕಿರಿದ..

"ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ"

ಗಾಂಧಿ ಎಂದರೆ ಸೋನಿಯಾಗಾಂಧಿ.
ಮಹಾತ್ಮಾಗಾಂಧಿ ಬಿಡಿ,ಕೆಲವರ್ಷಗಳ ಹಿಂದೆ ಇದ್ದ ಇಂದಿರಾ,ರಾಜೀವ್ ಗಾಂಧಿಯನ್ನು ಮರೆತು ಬಿಡುವ ಕಾಂಗೈಗಳು 'ರಾಮ ಇಲ್ಲ'ಎನ್ನುವುದರಲ್ಲಿ ವಿಶೇಷವೇನಿಲ್ಲ.

ಯಕ್ಷಲೋಕದ ಧ್ವನಿ

ಉತ್ತರ ಕನ್ನಡ ಜಿಲ್ಲೆಯ ಹಳದಿಪುರವೆಂಬ ಊರಿನಿಂದ ‘ಯಕ್ಷರಂಗ’ ಎಂಬ ಮಾಸಪತ್ರಿಕೆ ಕಳೆದೊಂದು ವರ್ಷದಿಂದಲೂ ಪ್ರಕಟವಾಗುತ್ತಿದೆ. ಯಾಕ್ಷಗಾನಕ್ಕೆ ಮೀಸಲಾದ ಪತ್ರಿಕೆಯೊಂದರ ಹೊಣೆಯನ್ನು ಒಬ್ಬನೇ ಹೊರುವುದೆಂದರೆ ತ್ರಿವಿಕ್ರಮನ ಹೆಜ್ಜೆಗೆ ತಲೆಯೊಡ್ಡಿದಂತೆ ಎಂದು ಗೊತ್ತಿದ್ದೂ ಅಂಥದ್ದೊಂದು ಸಾಹಸಕ್ಕೆ ಕೈ ಹಾಕಿದ್ದು ಗೋಪಾಲಕ್ರಷ್ಣ ಭಾಗವತ ಎಂಬ ಪ್ರತಿಭೆ.
ಅಪರೂಪಕ್ಕೆಂಬಂತೆ, ಸಾಂಸ್ಕ್ರತಿಕ ಕಾಳಜಿಯುಳ್ಳ, ಸೀಮಿತ ಮಾರುಕಟ್ಟೆಯುಳ್ಳ, ಯಕ್ಷಗಾನದ ಕುರಿತು ಬರೆಯುವುದಕ್ಕೆ ಎಷ್ಟು ಸರಕು ಇದೆ ಎಂದು ಮನವರಿಕೆ ಮಾಡಿಸಿಕೊಡುತ್ತಿರುವ ಈ ಪತ್ರಿಕೆ ದಿನ ಕಳೆದಂತೆ ಬಲಗೊಳ್ಳುತ್ತಿರುವುದು ಖುಶಿಯ ಸುದ್ದಿ. ಯಕ್ಷಗಾನವನ್ನು ಹಾಗೆ ಹೀಗೆ ಎಂದೆಲ್ಲ ಸವಕಲು ಪದಗಳಿಂದ ಬಣ್ಣಿಸುವ ಅಥವಾ ಅದರ ದುರ್ದೆಶೆಯ ಕುರಿತು ಗೋಳಿಡುವ ಪೂರ್ವಾಗ್ರಹ-ಪೀಡಿತ ಪ್ರವ್ರತ್ತಿಗಿಂತ ಭಿನ್ನವಾದ ನಿಲುವು ‘ಯಕ್ಷರಂಗ’ದ್ದು. ರಂಗಕಲೆಯೊಂದರ ಭೂತ-ವರ್ತಮಾನ-ಭವಿಷ್ಯತ್ತನ್ನು ಚಿಕಿತ್ಸಕ ದ್ರಷ್ಟಿಯಿಂದ ನೋಡುವ, ಸಾಕಷ್ಟು ಹಿನ್ನೆಲೆ ಜ್ಞಾನವುಳ್ಳ, ಯಕ್ಷಗಾನದ ಕುರಿತಾದ ನಿರ್ಲಕ್ಷ್ಯವನ್ನು ಎತ್ತರದ ಧ್ವನಿಯಲ್ಲಿ ಖಂಡಿಸುವ ಗೋಪಾಲರ ಈ ಸಂಚಿಕೆಯ ಸಂಪಾದಕೀಯವನ್ನು ನೋಡಿ.

ಯಕ್ಷಲೋಕದ ಧ್ವನಿ

ಉತ್ತರ ಕನ್ನಡ ಜಿಲ್ಲೆಯ ಹಳದಿಪುರವೆಂಬ ಊರಿನಿಂದ ‘ಯಕ್ಷರಂಗ’ ಎಂಬ ಮಾಸಪತ್ರಿಕೆ ಕಳೆದೊಂದು ವರ್ಷದಿಂದಲೂ ಪ್ರಕಟವಾಗುತ್ತಿದೆ. ಯಾಕ್ಷಗಾನಕ್ಕೆ ಮೀಸಲಾದ ಪತ್ರಿಕೆಯೊಂದರ ಹೊಣೆಯನ್ನು ಒಬ್ಬನೇ ಹೊರುವುದೆಂದರೆ ತ್ರಿವಿಕ್ರಮನ ಹೆಜ್ಜೆಗೆ ತಲೆಯೊಡ್ಡಿದಂತೆ ಎಂದು ಗೊತ್ತಿದ್ದೂ ಅಂಥದ್ದೊಂದು ಸಾಹಸಕ್ಕೆ ಕೈ ಹಾಕಿದ್ದು ಗೋಪಾಲಕ್ರಷ್ಣ ಭಾಗವತ ಎಂಬ ಪ್ರತಿಭೆ.

KSRTC ಬಸ್ ನಲ್ಲಿ ಕಂಡಿದ್ದು....

ನಮ್ಮ KSRTC ನವರು ಬಸ್ ಗಳಲ್ಲಿ ಸೂಕ್ತಿಗಳನ್ನೂ, ಸುಭಾಷಿತಗಳನ್ನೂ ತುಂಬಾ ದಿನಗಳಿಂದ ಬರೆಯುತ್ತಿದ್ದಾರೆ. ಇದು ಒಳ್ಳೆಯದೆ. ಆದರೆ ಇವರಿಗೆ ಪ್ರಾಸದ ಹುಚ್ಚು ಬಹಳ ಇದೆ. ಏನೇ ಬರೆಯಲಿ ಅದು ಪ್ರಾಸದಲ್ಲಿದ್ದರೆ ಜನರಿಗೆ ನಾಟುತ್ತದೆ ಅಂತ ಅನ್ಕೊಂಡಿದ್ದಾರೆ. ಕೆಲವು ಸಲ ಇದು ಅತಿರೇಕಕ್ಕೆ ಹೋಗುತ್ತದೆ.

ದೀಪವೊಂದಿರಬೇಕು ನಿನ್ನ ಕಾಣಲು

ದೀಪವೊಂದಿರಬೇಕು ನಿನ್ನ ಕಾಣಲು
ಸೂರೊಂದಿರಬೇಕು ನಿನ್ನ ಕಾಯಲು
ತಿನಿಸಿರಬೇಕು ನಿನ್ನ ಬೇಡಲು
ಮಿನುಗುತ್ತಿರಬೇಕು ನಿನ್ನ ಸಲಹಲು

ಬಯ್ತೆರೆದ ನೆಲ,
ತೂತಿನ ಸೂರು,
ತೊರೆಯದ ಹಸಿವು,
ನಮ್ಮ ಜೀವನದ ಕಾರಿರುಳು

ಕಾಣಲ್ಲೊಲ್ಲೆ ನೀ,
ಕಾಯಲೊಲ್ಲೆ ನೀ,
ಮಣಿಯಲೇಕೆ ನಾ
ನೀ ಬರೆದ ಕಥೆಗೆ...

'ಸರ್ವೈವಲ್ ಒಫ್ ದ ಫಿಟ್ಟೆಸ್ಟ್'

ಬೆಂಗಳೂರು ಕಾಂಕ್ರೀಟ್ ಕಾಡಾಗುತಿದ್ದರೂ ಕಾಗೆಗಳು ಮಾತ್ರ ಹೆಚ್ಚೇ ಆಗಿವೆ ಎಂಬುದು ನನ್ನ ಅನಿಸಿಕೆ.
ಎಲ್ಲೆಡೆ ಮರಗಳು ಉರುಳುತ್ತಿದ್ದರೂ ಕಾಗೆಗಳು ಹೇಗಪ್ಪ ಉಳಿದಿವೆ ಎಂಬುದು ತಲೆ ಕೆರೆದುಕೊಳ್ಳುವಂಥಹಾ ವಿಷಯವೇ!