ಪಲ್ಲವಿ ವಿಷಯವಾಗಿ...
ಬ್ಲಾಗ್ ಮಿತ್ರರೇ...
- Read more about ಪಲ್ಲವಿ ವಿಷಯವಾಗಿ...
- 1 comment
- Log in or register to post comments
ಬ್ಲಾಗ್ ಮಿತ್ರರೇ...
ಶಾಲೆಯ ಆರಂಭದ ದಿನ. ಒಂದನೇ ತರಗತಿಗೆ ಕಾಲಿಡುವ ಸಂತಸ. ನನ್ನ ಮನೆಯ ಹತ್ತಿರವೇ ಇರುವ ಶಾಲೆ. ಶಾಲೆಯ ಗಂಟೆಯ ಸದ್ದು ಯಾವಾಗಲೂ ನಮ್ಮ ಮನೆಗೆ ಕೇಳುತ್ತಿತ್ತು. ನನ್ನ ಅಣ್ಣ ಅಕ್ಕ ಎಲ್ಲರೂ ಅಲ್ಲಿ ಓದಿದವರೇ. ನಮ್ಮ ಹಳ್ಳಿಯಲ್ಲಿರುವ ಏಕೈಕ ಕನ್ನಡ ಶಾಲೆ ಅದು. ಕೇರಳವಾಗಿದ್ದರಿಂದ ಮಲಯಾಳ ಕಲಿಯಬೇಕೆಂದಿದ್ದವರಿಗೆ ಬಸ್ನಲ್ಲಿಯೇ ಶಾಲೆಗೆ ಹೋಗಬೇಕು. ಅಂತೂ ಬಸ್ನಲ್ಲಿ ಮಕ್ಕಳನ್ನು ಕಳುಹಿಸಲು ಇಷ್ಟವಿಲ್ಲದ ಮಲಯಾಳಿಗರಿಗೆ ಕನ್ನಡ ಶಾಲೆಯೇ ಆಶ್ರಯ. ಒಂದರಿಂದ ಏಳನೇ ತರಗತಿಯವರೆಗಿರುವ "ಮಜದೂರರ" ಶಾಲೆ. ಅಲ್ಲಿ ಕಲಿಯುವಂತಹ ಮಕ್ಕಳೆಲ್ಲರಿಗೂ ಬಡತನದ ಕಹಿ ಗೊತ್ತು. ಬೆರಳೆಣಿಕೆಯಷ್ಟೇ ಮಂದಿ ಸ್ವಲ್ಪ ಅನುಕೂಲ ಕುಟುಂಬದಿಂದ ಬಂದವರಾಗಿದ್ದರು. ಆದರೂ ಬಡತನದ ಬೇನೆಯಲ್ಲಿಯೂ ಉತ್ತಮವಾಗಿ ಕಲಿತು ಏಳನೇ ತರಗತಿಯವರೆಗೇರಿದರೂ ನಂತರ ಹೈಸ್ಕೂಲ್ ಮೆಟ್ಟಿಲು ಹತ್ತಲು ತಾಪತ್ರಯಗಳು ಅವರ ಬೆನ್ನು ಬಿಡುತ್ತಿರಲಿಲ್ಲ.
ಜೂನ್ ಒಂದನೇ ತಾರೀಕಿಗೆ ಹೊಸ ಅಧ್ಯಯನ ವರ್ಷ ಪ್ರಾರಂಭ. ಅಂದು ಒಂದನೇ ಕ್ಲಾಸಿಗೆ ಕಾಲಿಟ್ಟಾಗ ಅತೀವ ಸಂತಸವಾಗಿತ್ತು. ಪ್ರಾರಂಭ ದಿನದಂದು ಒಂದನೇ ಕ್ಲಾಸಿನ ಮಕ್ಕಳನ್ನು ಸ್ವಾಗತಿಸಲು ಶಾಲೆ ಸಜ್ಜಾಗಿತ್ತು. ಹೊಚ್ಚ ಹೊಸತಾದ ನೀಲಿ ಬಣ್ಣದ ತುಂಡು ಲಂಗ, ಬಿಳಿ ರವಿಕೆ ಧರಿಸಿ, ಮೋಟುದ್ದದ ಜಡೆಗೆ ಚೆಂಡು ಹೂವನ್ನು ಮುಡಿದು ಶಾಲೆಗೆ ಹೋದ ಬಾಲ್ಯದ ನೆನಪು. ಹೊಸ ತರಗತಿ, ಅಪ್ಪ ತಂದು ಕೊಟ್ಟಂತಹ ಹೊಸ ಬ್ಯಾಗು, ಮರದ ಸ್ಲೇಟು, ಪೆನ್ಸಿಲು ಇರಿಸುವ ಪ್ಲಾಸ್ಟಿಕ್ ಪೆಟ್ಟಿಗೆ (ನಮ್ಮಲ್ಲಿ ಹೆಚ್ಚಾಗಿ ಇದನ್ನು ಕಂಪಾಸು ಪೆಟ್ಟಿಗೆ ಅಂತನೇ ಹೇಳ್ತಾರೆ ) ಅದೂ ಅಲ್ಲದೆ ರೈನ್ಕೋಟ್, ಚಪ್ಪಲಿ, ಕೈತುಂಬಾ ಬಳೆ, ಅದಾಗಲೇ ಅಣ್ಣ ಖರೀದಿಸಿ ಕೊಟ್ಟ ಉದ್ದದ ಬಳಪ ಎಲ್ಲವೂ ಹೊಸತು ಹೊಸತು. ಮೊದಲ ದಿನ ಗುರುಗಳು ತರಗತಿಗೆ ಬಂದು ಆರೆಂಜ್ ಮಿಠಾಯಿ ಕೈಗೆ ಕೊಟ್ಟಿದ್ದರು. ಇನ್ನು ಕೆಲವು ಮಕ್ಕಳಂತೂ ರಂಪಾಟ ಮಾಡಿ "ಅಮ್ಮಾ" ಎಂದು ಅಳುವಾಗ, ಅವರನ್ನು ನೋಡಿ ನಾನು ಅತ್ತಿದ್ದೆ. ಆ ಶಾಲೆಯಲ್ಲಿರುವ ಎಲ್ಲಾ ಟೀಚರ್ಗಳಿಗೂ ನಾನು ಮೊದಲೇ ಪರಿಚಿತಳಾಗಿದ್ದ ಕಾರಣ ಹೆಚ್ಚಿನ ಭಯವೇನು ಇಲ್ಲವಾಗಿತ್ತು. ಅದೂ ಅಲ್ಲದೆ ತರಗತಿಯ ಹೊರಗೆ ಬಂದರೆ ನಮ್ಮ ಮನೆಯ ಗೇಟು, ಮಾವಿನ ಮರ ಎಲ್ಲವೂ ಕಾಣಿಸುತ್ತಿತ್ತು. ಅದನ್ನು ಕಂಡಾಗ ಅದೇನೋ ಒಂಥರಾ ತೃಪ್ತಿ.
ಈ ವರ್ಷದ ನೊಬೆಲ್ ಪುರಸ್ಕಾರವನ್ನು ಶ್ರೀಮಾನ್ ಲ.ನಾ.ಭಟ್ ರವರಿಗೆ ನೀಡಲಾಗಿದೆ. ತೀರ ಪ್ರದೇಶದ ಜೀವಿಗಳು ಸಮುದ್ರ ಮಟ್ಟದ ಏರಿಕೆಯಿಂದಾಗಿ ಮೃತಪಟ್ಟಿದ್ದು ಅದು ಇನ್ನು 1000 ವರ್ಷಗಳ ನಂತರ ನಮಗೆ ಇಂಧನವಾಗಿ ದೊರಕಲಿದ್ದಾರೆ ಎನ್ನುವ ಮಹತ್ತರವಾದ ಸಂಶೋಧನೆಗೆ ಅವರಿಗೆ ಪುರಸ್ಕಾರ ದೊರಕಿದೆ.
ಮನೆಯ ಸುತ್ತ ಹಾವು ಚೇಳುಗಳ ಭರಾಟೆ ಹಾಗೂ ಭೇಟಿ ಹೆಚ್ಚಾಗುತ್ತಿರುವಂತೆ ಎಲ್ಲೆಡೆ ಲೈಟು ಹಾಕಿಕೊಂಡು ಓಡಾಡುವುದಷ್ಟೇ ಅಲ್ಲದೆ ಮನೆಯೆದುರಿಗಿರುವ ಪಾರ್ಕಿನ ಮೇಲೂ ಒಂದು ನಿಗಾ ಇಡೋದು ಮನೆಯಲ್ಲಿ ಎಲ್ಲರಿಗೂ ಯಾರೂ ಹೇಳದೆಯೇ ರೂಢಿಯಾದಂತಾಗಿಬಿಟ್ಟಿದೆ.
ರೋಮ ಸಾಮ್ರಾಜ್ಯದ ಸಾಮ್ರಾಟ ಅಲೆಗ್ಸಾಂಡರರು ದೇಶದ ಆಂತರಿಕ ಆಡಳಿತವನ್ನು ಅರಿಯಲು ಆಗಾಗ್ಗೆ
ವೇಷ ಬದಲಿಸಿ ಒಬ್ಬರೇ ನಡೆಯುತ್ತಲೇ ತಿರುಗುತ್ತಿದ್ದರು.ಒಮ್ಮೆ ತಿರುಗುತ್ತ ತಿರುಗುತ್ತ ದಾರಿ ತಿಳಿಯದ ಒಂದು
ಗಲ್ಲಿಗೆ ಬಂದರು.ಮುಂದಿನ ದಾರಿ ತಿಳಿಯಲು ಯಾರಾದರೂ ಕಂಡಾರೆಂದು ನೋಡುತ್ತ ನಿಂತಿದ್ದರು.ಆಗ
ಕೆಲಸದ ಮೇಲಿದ್ದ ಸಿಪಾಯಿ ಎದುರಾದನು.
ಇದ್ದಕಿದ್ದಂತೆ ಒಬ್ಬ ಮುದಿಯ ಆ ಹುಡುಗಿ ಹತ್ರಕ್ಕೆ ಹೋದ. ಎನೇನೊ ವಿಚಿತ್ರವಾಗಿ ಹಲ್ಲು ಕಿಸೀತಾ ಇದ್ದಿದ್ದು ನೋಡಿದ್ರೆ ನನ್ನ ಅನುಮಾನ ನಿಜ ಅಯ್ತು. ಇನ್ನೇನು ಅವಳ ಮೈಮೆಲೆ ಬಿದ್ದೆ ಬಿಟ್ಟ ಅನ್ನೋವಾಗ ಒಬ್ಬ ಧಡಿಯ ಬಂದು ಮುದುಕನ್ನ ಒಂದೇ ಕೈಯಲ್ಲಿ ಎತ್ತಿ ಹುಡುಗಿ ಇಂದ ಒಂದು ಮೀಟರ್ ದೂರ ನಿಲ್ಲಿಸಿಬಿಟ್ಟ. "ಲೇ ಮುದಿಯ ನೀ ಕೊಡೊ ಕಾಸಿಗೆ ಅವಳ ಕಾಲುಂಗರ ಕೂಡ ಮುಟ್ಟಕಾಗಲ್ಲ, ತೊಲಗಾಚೆ" ಅಂತ ಹಿಂದೀಲಿ ಬೈದು ಕಳಿಸಿಬಿಟ್ಟ. ನಾನು ಒಳಗೊಳಗೆ ಖುಶಿ ಪಡ್ತ ಇದ್ದೆ; ಎರಡು ಹೊತ್ತಿನ ಊಟಕ್ಕೆ ಒಂದು ದಾರಿ ಆಯ್ತು ಅಂತ.
ಒಂದು ಹೊಸ ರಸ್ತೆ ಹಾಕುವ ಕೆಲಸ ನಡೆದಿತ್ತು.ಎಲ್ಲ ಕೆಲಸಗಾರರು ನೆಲ ಅಗೆಯುವ,ಮಣ್ಣು ಒಗೆಯುವ
ಕೆಲಸದಲ್ಲಿ ತೊಡಗಿದ್ದರು.ಅದರಲ್ಲೊಬ್ಬ ದಷ್ಟ-ಪುಷ್ಟ ಕಾರ್ಮಿಕ ಅತ್ಯಂತ ಹುರುಪಿನಿಂದ ಮಣ್ಣು ಅಗೆಯುತ್ತಿದ್ದ.
ಅವನು ಅಂದಿನ ಹೊಸ ಕೂಲಿಕಾರ ಇರಬೇಕೆಂದು ನೋಡುತ್ತ ನಿಂತಿದ್ದ ಗುತ್ತಿಗೆದಾರನಿಗೆ ಅವನ ಕೆಲಸ