ಕನ್ನಡ ಅಳಿವು-ಉಳಿವು
ಎಲ್ರಿಗೂ ನಮಸ್ಕಾರ,
- Read more about ಕನ್ನಡ ಅಳಿವು-ಉಳಿವು
- Log in or register to post comments
ಎಲ್ರಿಗೂ ನಮಸ್ಕಾರ,
ಸುಮಾರು ಒಂದೂವರೆ ವರ್ಷದ ಹಿಂದೆ ಸರಿಯಾಗಿ 111 ಪುಟಗಳ ಆ ಪುಸ್ತಕವನ್ನು ಕೈಯಲ್ಲಿ ಹಿಡಿದವನು ಬಹುಶಃ ನಾಲ್ಕೈದು ಗಂಟೆಗಳಲ್ಲಿ ಓದಿ ಮುಗಿಸಿರಬೇಕು. ಆ ಪುಟ್ಟ ಕಾದಂಬರಿಯ ಹೆಸರು "ವಲಸೆ ಹಕ್ಕಿಯ ಹಾಡು." 1995 ರಲ್ಲಿ ಮುದ್ರಣಗೊಂಡದ್ದದು. "ಸ್ವಾತಂತ್ರ್ಯ ಹೋರಾಟಗಾರರಲ್ಲಿಯೆ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ್ದ, ಎಂದೂ ಉತ್ಪ್ರೇಕ್ಷೆ ಮಾಡದೆ ಚಳವಳಿಯನ್ನು ನಿರ್ಲಿಪ್ತವಾಗಿ ನಿರೂಪಿಸುವ, ಹುಟ್ಟು ಹೋರಾಟಗಾರನಲ್ಲದ, ಚಳವಳಿ ಕಾಲದಲ್ಲಿ ದೇಶದ ಉದ್ದಗಲಕ್ಕೆ ಓಡಾಡಿದ ಪ್ರಯಾಣಿಕ"ನನ್ನು ಕಥಾನಾಯಕನಾಗಿ ಹೊಂದಿರುವ ಕಥೆ ಅದು. ಸ್ವಾತಂತ್ರ್ಯೋತ್ತರ ಭಾರತದ ಗ್ರಾಮೀಣ ರಾಜಕೀಯವನ್ನು, ಗ್ರಾಮೀಣ ಬದುಕನ್ನು, ಆ ಪುಟ್ಟ ಕಾದಂಬರಿಯಲ್ಲಿ ವಿಶ್ಲೇಷಿಸಿರುವ, ನಿರೂಪಿಸಿರುವ ರೀತಿ ಅದ್ಭುತವಾದದ್ದು. ಅದನ್ನು ಓದಿ ಮುಗಿಸಿದ ಮೇಲೆ ಆ ಲೇಖಕನೊಡನೆ ಆ ಕೂಡಲೆ ಮಾತನಾಡಬೇಕು ಎಂದು ಬಲವಾಗಿ ಅನ್ನಿಸಿಬಿಟ್ಟಿತು. ಅದಕ್ಕೆ ಮುಖ್ಯ ಕಾರಣ, "ಅರೆ, ನಾನು 'ನ್ಯಾಗಟಿ ಸಿಟಿ ಚಂದರ್' ಎಂದುಕೊಂಡಿದ್ದ ಈ ಲೇಖಕ ನಿಜವಾಗಲೂ ನಾಗತಿಹಳ್ಳಿಯಾತ," ಎನ್ನಿಸಿದ್ದು. ಹೌದು, ಆ "ವಲಸೆ ಹಕ್ಕಿಯ ಹಾಡು"ವಿನ ಕರ್ತೃ, ನಾಗತಿಹಳ್ಳಿ ಚಂದ್ರಶೇಖರ್.
ಆದರೆ, ಅಂದು ನಾಗತಿಹಳ್ಳಿಯವರ ಜೊತೆ ಮಾತನಾಡಲಾಗಲಿಲ್ಲ. ಬಹುಶಃ ಅದಾದ ಒಂದೆರಡು ತಿಂಗಳಿಗೆ ಅವರ "ಅಮೃತಧಾರೆ" ಸಿನಿಮಾ ಬಿಡುಗಡೆಯಾಯಿತು. ಅದು ಸಿಲಿಕಾನ್ ಕಣಿವೆಯ ಸ್ಯಾನ್ ಹೋಸೆಯಲ್ಲಿ ಬಿಡುಗಡೆಯಾಗುವಷ್ಟರಲ್ಲಿ ಕನ್ನಡದ ದಿನಪತ್ರಿಕೆಗಳಲ್ಲಿ ಅದರ ವಿಮರ್ಶೆಗಳು ಬಂದುಬಿಟ್ಟಿದ್ದವು. ಬಹುತೇಕ ವಿಮರ್ಶೆಗಳು ಅದನ್ನು ಅತ್ಯದ್ಭುತ ಚಿತ್ರ, ಮಹೋನ್ನತ ಚಿತ್ರ ಎಂದೆಲ್ಲ ಬಣ್ಣಿಸಿದ್ದ ನೆನಪು. ಅಷ್ಟೊತ್ತಿಗೆ ನನಗೆ ಕನ್ನಡ ಚಿತ್ರವಿಮರ್ಶೆಗಳ "ತಲೆಹಿಡುಕತನ"ದ ಪರಿಚಯ ಆಗಿತ್ತು. ದಟ್ಟದರಿದ್ರ ಸಿನಿಮಾದ ಪುಟಗೋಸಿ ಡೈಲಾಗ್ಗಳಿಗೆಲ್ಲ ಆಧ್ಯಾತ್ಮ, ನೈತಿಕತೆ, ಆದರ್ಶ ಮುಂತಾದ ಸಾರ್ವಕಾಲಿಕ ಗುಣಗಳನ್ನು ಆರೋಪಿಸಿ, ರಂಗುರಂಗಾಗಿ ಬರೆದು "ಪೇಯ್ಡ್" ಜಾಹಿರಾತನ್ನು ಚಿತ್ರವಿಮರ್ಶೆಯ ಹೆಸರಿನಲ್ಲಿ ಪ್ರಕಟಿಸುವುದನ್ನು ನೋಡಿದ್ದ ನನಗೆ "ಅಮೃತಧಾರೆ"ಯ ಬಗೆಗೂ ಸ್ವಲ್ಪ ಸಂದೇಹವಿತ್ತು. ಆದರೆ, ಯಾವಾಗ ನಾಗತಿಹಳ್ಳಿಯವರು, "ಈ ಚಿತ್ರಕ್ಕಾಗಿ ನನ್ನ ಪ್ರತಿಭೆಯನ್ನೆಲ್ಲ ಬಸಿದಿದ್ದೇನೆ," ಎನ್ನುವಂತಹ ಮಾತನ್ನು ಆಡಿದರೊ, ಈ ಚಿತ್ರವನ್ನು ನೋಡಲು ನಿಜಕ್ಕೂ ಎದುರು ನೋಡುತ್ತಿದ್ದೆ.
ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟಿ ತಾರಾ ತನ್ನ ನೈಜ ಭಾವಾನಾತ್ಮಕ ನಟನಾಕೌಶಲ್ಯದಿಂದ ಹೆಸರುವಾಸಿ. ಹಸೀನಾ, ಸೈನೈಡ್, ಕಾನೂರು ಹೆಗ್ಗಡಿತಿ ಮುಂತಾದ ಸಿನಿಮಾಗಳಲ್ಲಿ ಅವರು ಎಂಥಹ ನಟಿಯೆಂದು ನಮಗೆ ತೋರಿಸಿಕೊಟ್ಟಿದ್ದಾರೆ. ಸೈನೈಡ್ ನ ಆ ಪಾತ್ರವನ್ನು ಅಷ್ಟು ಚೆನ್ನಾಗಿ ಯಾರೂ ಮಾಡಲಾರರು. ಇಷ್ಟೇಲ್ಲಾ ಇದ್ರೂ ತಾರಾ ಯಾಕೆ ಮತ್ತೆ ಕಿರುತೆರೆಗೆ ಪ್ರವೇಶಿಸಿದ್ದಾರೆ.
ಹೊಗೆನಕಲ್ ದಕ್ಷಿಣ ಭಾರತದ ನಯಾಗರ ಜಲಪಾತವೆಂದೇ ಪ್ರಸಿದ್ಧಿ. ಕಾವೇರಿ ನದಿಯ ಅಗಲ-ವಿಸ್ತಾರಗಳ ವೈವಿಧ್ಯತೆ ನೋಡಿ ಕಣ್ ತಣಿಸಿಕೊಳ್ಳಬೇಕೆಂದರೆ, ಮೈಸೂರಿಗೆ ಸಮೀಪವಿರುವ ಶಿವನ ಸಮುದ್ರ ಮತ್ತು ಹೊಗೆನಕಲ್ ಜಲಪಾತದ ರುದ್ರ ರಮಣೀಯ ದೃಶ್ಯಗಳನೋಟಗಳು. [http://youthtimes.blogspot.com/2007/08/blog-post_30.html| ಇನ್ನಷ್ಟು ಚಿತ್ರ ಮತ್ತು ಲೇಖನ]
ನನ್ನ ಹತ್ತು ಹಲವು ಆಸಕ್ತಿಗಳಲ್ಲಿ ಛಾಯಾಗ್ರಹಣವೂ ಒಂದು. ಮೊನ್ನೆ ನನ್ನ ಗೆಳೆಯನ ಮಗನ ಹುಟ್ಟುಹಬ್ಬಕ್ಕೆ ಛಾಯಾಗ್ರಾಹಕನಾಗಿ ಹೋಗುವ ಅವಕಾಶ ಬಂತು. ಇನ್ನೇನು ತಡ? ನನ್ನ ಕ್ಯಾಮರಾ ಜೋಳಿಗೆಯನ್ನು ಹೆಗಲಲ್ಲಿ ಹಾಕಿ ಹೊರಟೆ.
ಬದುಕಿರಲು ಹಿತವಾಗಬೇಕು
ಮೂರು ಜನಕೆ
ಮಡಿದರೆ ನೆನೆವರು
ನೂರು ಜನರು ನಿನ್ನ ಕಾಣಾ ಭರತೇಶ
---
ಹುಟ್ಟು .......ಸಾವು
ನಡುವೆ ಬಾಳಿನ ನೋವು
ಆಗಾಗ ನಲಿವು
ಇದುವೆ ನಮ್ಮ ಬದುಕು
----
ಬಾಳಿದು ಓಟ
ಆಡುವೆ ಆಟ
ಇರುವತನಕ ಘಟ
ಕೊನೆಗಾಗುವೆ ಮಟ(ಟ್ಟ)
---
ಅ೦ತು ಈ ಶನಿವಾರ ’ಮು೦ಗಾರು ಮಳೆ’ಯಲ್ಲಿ ನೆನೆದೆ.ಬಿಡುಗಡೆಯಾಗಿ ಸರಿಸುಮಾರು ಅರ್ಧ ವರ್ಷ ಕಳೆದರು ಚಿತ್ರವನ್ನು ನೊಡದಿರುವುದಕ್ಕೆ ನನ್ನದೆ ಆದ ಕೆಲ ವೈಯಕ್ತಿಕ ಕಾರಾಣಗಳಿವೆ.ಇರಲಿ,ಅದೆಲ್ಲದರ ಚರ್ಚೆ ಇಲ್ಲಿ ಬೆಡ.
ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಆಗೊಂದಿಷ್ಟು ಈಗೊಂದಿಷ್ಟು
ಈವತ್ತು ನಾನು ಇಂಜಕ್ಷನ್ ಕೊಡುವ ಸುರುವಿನ ದಿನ.ನಾನೆಷ್ಟು ಒಳ್ಳೆಯವಳು ಎಂದರೆ,ಬೆಳಗ್ಗೆ ಬೇಗನೆ ಎದ್ದು,ಸ್ನಾನ ಮಾಡಿ,ದೇವರಿಗೆ ಕೈಮುಗಿದು,`ಈ ಇಂಜಕ್ಷನ್ ಕೊಡುವುದು ಆದಷ್ಟೂ ತಪ್ಪಿ,ಮಾತ್ರೆಯಲ್ಲೇ ರೋಗ ಗುಣವಾಗುವಂತೆ ಮಾಡಪ್ಪಾ' ಎಂದು ಬೇಡಿದೆ.
ನಂತರ ಸ್ಪಿರಿಟ್,ಸಿರಿಂಜ್,ಹತ್ತಿ,ಔಷಧಿ ಎಲ್ಲಾ ರೆಡಿಮಾಡಿಟ್ಟೆ.ತೊಡೆಯ ಬಟ್ಟೆ ಸರಿಸಿ,ಹತ್ತಿಯಿಂದ ಒರಸಿ,ಸೂಜಿಯನ್ನು ತೊಡೆಯ ಬಳಿ ತೆಗೆದುಕೊಂಡು ಹೋದೆನಷ್ಟೆ,ಕರೆಂಟ್ ಹೊಡೆದ ಹಾಗೆ ಕೈ ವಿಪರೀತ ನಡುಗಲು ಸುರುವಾಯಿತು.ಮೈಯೆಲ್ಲಾ ಬೆವರಿ ಹಣೆಯಿಂದ ಬೆವರು ತೊಟ್ಟಿಕ್ಕಲು ಸುರುವಾಯಿತು.Fan ಹಾಕುತ್ತೇನೆಂದು ನೋಡಿದರೆ ಅದು ತಿರುಗುತ್ತಲೇ ಇದೆ.ಸೆಕೆಯೇ ಇಲ್ಲದ ಸಮಯದಲ್ಲಿ fan ನ ಅಡಿಯಲ್ಲಿದ್ದೂ, ಬರೀ ಒಂದು ಸೂಜಿಗೆ ನಾನು ಇಷ್ಟು ಬೆವರಿ ನಡುಗುತ್ತಿರಬೇಕಾದರೆ,ಆ ಭೀಮ, ಅವನ ಗಧೆ,ಅವನ ಗರ್ಜನೆಗೆ ದುರ್ಯೋಧನ`ನೀರೊಳಗಿರ್ದುಂ ಬೆಮರ್ತಮ್'ಅನ್ನೋದರಲ್ಲಿ ಅತಿಶಯವೇನಿಲ್ಲ ..
ಸೂಜಿ ಚರ್ಮದ ಮೇಲಿಟ್ಟು ಎಷ್ಟು ಒತ್ತಿದರೂ ಒಳಗೇ ಹೋಗುತ್ತಿಲ್ಲಾ! INsulinನಲ್ಲಿ ಎರಡೆರಡು IN ಇದೆ.ಇಲ್ಲಿ ನೋಡಿದರೆ ಒಂದು ಸಲಕ್ಕೂ ಔಷಧಿ ಇನ್ನಾಗುತ್ತಿಲ್ಲಾ! ದುಃಖದಿಂದ ಮಂಜಾದ ಕಣ್ಣನ್ನು ಒರಸಿಕೊಂಡು ನೋಡಿದರೆ ಸುತ್ತಲೂ ಮನೆಮಂದಿಯೆಲ್ಲಾ ಮುಸುಮುಸು ನಗುತ್ತಾ ನಿಂತಿದ್ದಾರೆ.ಬೇಸರ,ಸಿಟ್ಟು,ದುಃಖ ಎಲ್ಲಾ ಒಟ್ಟೊಟ್ಟಿಗೆ ಬಂತು.ಕೆಳಗೆ ನೋಡಿದರೆ ಸೂಜಿ ಚರ್ಮದೊಳಗೆ ಹೋಗಿದೆ.ಅಳುತ್ತಾನಗುತ್ತಾ ಇಂಜಕ್ಷನ್ ಕೊಟ್ಟುಕೊಂಡೆ.ಓದಿಲ್ಲದಿದ್ದರೂ ಮಕ್ಕಳ ಬಾಯಲ್ಲಿ ಡಾಕ್ಟ್ರಾದೆ!