ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಚಿತ್ರದುರ್ಗಕ್ಕೆ ನೀರಿನ ಪೂರೈಕೆ- ಶಾಂತಸಾಗರದಿಂದ !

ಭಗೀರಥ ಪ್ರಯತ್ನದಿಂದಾಗಿ, ಕೊನೆಗೂ, ಎಲೆಕ್ಷನ್ ಮೊದಲೇ ಚಿತ್ರದುರ್ಗ ಹಾಗೂ ಸುತ್ತಮುತ್ತಲ ಸ್ಥಳಗಳು ಕುಡಿಯುವ ನೀರನ್ನು ಪ್ರಥಮಬಾರಿಗೆ ಕಂಡಿವೆ. ಇದರ ರೋಚಕ ಸುದ್ದಿಯನ್ನು "ಸಂಜೆವಾಣಿ " ಪತ್ರಿಕೆಯಲ್ಲಿ ಓದಿ ಆನಂದಿಸಿರಿ. "ದಾವಣಗೆರೆ ಸುದ್ದಿ," ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಇದು ಪ್ರಕಟವಾಗಿದೆ.

ನಿನ್ನ ನನ್ನ ನಡುವೆ..

ಒಲವೇ...
ನಿನ್ನ ಸರಳತೆಗೆ..
ನನ್ನ ಸವಿಕನಸಿಗೆ...
ನಿನ್ನ ಸಿಹಿಮಾತಿಗೆ...
ನನ್ನ ಕವಿಮನಸಿಗೆ...
ನಿನ್ನ ಮುಗುಳ್ನಗುವಿಗೆ..
ನನ್ನ ಮನೋಲ್ಲಾಸಕೆ.. ..
ನಿನ್ನ ಮಂದಹಾಸಕೆ...
ನನ್ನ ಚೀತನಕೆ...
ನಿನ್ನ ಸ್ಪೂರ್ತಿಗೆ..

ಹಣದುಬ್ಬರ

ತಗ್ಗಿಸುತ್ತಿದೆ ಕೇಂದ್ರ ಸರಕಾರದ
ಅಬ್ಬರ
ಮಾಡುತ್ತಿದೆ ಜನ ಸಾಮಾನ್ಯನ
ಬದುಕು ದುರ್ಭರ
ದಿನೇ ದಿನೇ ಏರುತ್ತಿರುವ
ಹಣದುಬ್ಬರ

ಚುನಾವಣೆ

ಬಂದಿದೆ ಇನ್ನೊಂದು
ಚುನಾವಣೆ
ಅದಾಗೋವರೆಗೆ ಇವರು
ಹಾಕ್ತಾರೆ ಎಲ್ಲರಿಗೂ
ಮಣೆ
ಆದ್ಮೇಲೆ ಹಾಕೋದು
ಬರೀ ಚೂನಾ (चूना)

ನಾವೆಲ್ಲಾ ಆಫ್ರಿಕಾದಿಂದ ಬಂದವರು

ಸುಧಾ , ಮೇ ೧ರ ಸಂಚಿಕೆಯಲ್ಲಿ "ಮಾನವ ಇತಿಹಾಸದ ’ಸಾಂಗ್ ಲೈನ್ಸ್’" ಎಂಬ ಮುಖಪುಟ ಲೇಖನ ಪ್ರಕಟವಾಗಿದೆ.
ಇದರಲ್ಲಿ ಲೇಖಕರು ( ಲಕ್ಷ್ಮೀಪತಿ ಕೋಲಾರ) ಆಫ್ರಿಕಾದ ಬುಡಕಟ್ಟುಗಳಿಗೂ ದಕ್ಚಿಣ ಭಾರತಕ್ಕೂ , ಆಸ್ಟ್ರೇಲಿಯಾದ ಆದಿವಾಸಿಗಳಿಗೂ ಇರಬಹುದಾದ ಪುರಾತನ ನಂಟಿನ ಬಗ್ಯೆ ಬರೆದಿದ್ದಾರೆ.

ಪಂಕ್ಚರ್

ನಾನು ಯಾವತ್ತೂ ತಡವಾಗಿ
ಬಂದ್ರೆ ಅವಳಿಗೆ ಬೇಜಾರ್

ಅದಕ್ಕೆ ಹೊರಟೆ ಮನೆಗೆ
ಆಗಲು ಬೇಗ ಹಾಜರ್

ಅದಕ್ಕೂ ಬಿತ್ತು ನೋಡಿ
ಯಾರದ್ದೋ ನಝರ್

ಆವತ್ತೇ ಆಗ ಬೇಕಾ
ನನ್ನ ಬೈಕ್ ಪಂಕ್ಚರ್ !

ನೆಲದ ಮೇಲೆ ಹೂ ಹರಡಿದವರಾರು?

ಬೆಳಗ್ಗೆ ಆಫೀಸ್ ಕಡೆ ಮುಖ ಮಾಡಿದಾಗ ದಾರಿಯಲ್ಲಿ ಹೂವಿನ ರಾಶಿ. ಹಳದಿ, ಕೆಂಪು, ನೀಲಿ ಹೂಗಳು. ಮರಗಳನ್ನೆಲ್ಲ ಅಲ್ಲಾಡಿಸಿ ಇಷ್ಟೋಂದು ಹೂಗಳನ್ನ ಯಾರನ್ನೂ ಕೇಳದೆ ಧರೆಗಿಳಿಸಿದವರಾರು ಅನ್ನಿಸ್ತು.

ವ್ಯಕ್ತಿತ್ವ

ನಿಮ್ಮ ಸೌಂದರ್ಯ ನಿಮ್ಮನ್ನು ಕೆಲವರು ಆರಾಧಿಸುವಂತೆ ಮಾಡುತ್ತದೆ. ನಿಮ್ಮ ಜಾಣ್ಮೆ ಅನೇಕರು ನಿಮ್ಮನ್ನು ಮೆಚ್ಚುವಂತೆ ಮಾಡುತ್ತದೆ. ಆದರೆ , ನಿಮ್ಮ ವ್ಯಕ್ತಿತ್ವ ಈ ಸಮಾಜ ನಿಮ್ಮನ್ನು ಹಿಂಬಾಲಿಸುವಂತೆ ಮಾಡುತ್ತದೆ.

ಇರಲಿಲ್ಲ

ಅಲಿಂಗನ ಕ್ಕೆ ಕಾಮದ ಹಂಗೀರಲಿಲ್ಲ. ,
ಮುತ್ತಿಗೆ ಕೋರಿಕೆಯ ಕಾವಿರಲಿಲ್ಲ..,
ಸ್ಪರ್ಶಕೆ ಸಾಂಗತ್ಯದ ಕಡಲಲ್ಲಿ ಮುಳುಗೇಳುವ ತೆವಲಿರಲಿಲ್ಲ.
ಆದರೆ.. ನಿನಗೆ.....,
ಅಲಿಂಗನದ ಆತ್ಮವಿಶ್ವಾಸ....
ಮುತ್ತಿನ ಮಂದಹಾಸ..
ಸ್ಪರ್ಶದ ಸಾಂತ್ವನ ನೀಡುವ...
ಮನಸೇ ಇರಲಿಲ್ಲ

ಮಲೆನಾಡಿನ ಬ್ಯಾಸಿಗಿ ದಿನಚರಿ......!

ಮೊನ್ನೆ ಸಾಗರದಲ್ಲಿಅಣ್ಣನ ಪುಸ್ತಕದ ಬಿಡುಗಡೆ ಇತ್ತು ಅಂತಾ ನೆವ ಮಾಡಿಕೊಂಡು ಅಂತೂ ಎರಡು ದಿನದ ಮಟ್ಟಿಗೆ ಮನೆಗೆ ಹೋಗಿ ಬಂದೆ. ಬಸ್‌ಸ್ಯ್ಟಾಂಡ್ ಇಳಿದು ಮನೆ ಕಡೆ ಹೆಜ್ಜೆಹಾಕೋವಾಗ ಅದ್ಯಾಕೋ ದೀಡೀರನೇ ಮಲೆನಾಡಿನ ಬೇಸಿಗೆ ನೆನಪಾಯಿತು. ಅಂದಹಾಗೇ ಬೇಸಿಗೆಯಲ್ಲಿ ಮನೆಗೆ ಹೋಗದೇ,ನೇರಳೆ ಹಣ್ಣು, ಈಚಲು ಹಣ್ಣು, ಸಂಪಿಗೆ ಹಣ್ಣು , ಕಬ್ಬಿನಾಲೆ ಇವನೆಲ್ಲಾ ಕಾಣದೆ ಸುಮಾರು ಐದು ವರ್ಷಗಳೇ ಕಳೆದುಹೋಗಿತ್ತು. ನಾವು ಇಸ್ಕುಲಿಗೆ ಹೋಗುತ್ತಿದ್ದ ಕಾಲದಲ್ಲಿ ಬೇಸಿಗೆ ಅಂದ್ರೆ ನಮಗೆ ಬೊಂಬಾಟ್ ಕಾಲ. ಆವಾಗಿನ ನಮ್ಮ ದಿನಚರಿ ಅಂದ್ರೆ.....ಛೇ ಇವತ್ತು ಅದನ್ನು ನೆನಸಿಕೊಂಡ್ರೆ ತುಂಬಾ ಫೀಲ್ ಆಗತ್ತೆ.
ಬೆಳಿಗ್ಗೆ ಆರು ಗಂಟೆಗೆ ಶುರು ನಮ್ಮ ಕಿರಿಕೆಟ್ಟು ಮ್ಯಾಚು! ಸುಮಾರು ಒಂಬತ್ತು ಘಂಟೆಗೆವರೆಗೂ ಕಿರಿಕೆಟ್ಟಾಡಿ ಕೊನೆಗೆ ಲೈಟಾಗೊಂದು ನಾಸ್ಟಾ ಮಾಡಿ ಅಪ್ಪ ಮನೇಲಿ ಇದ್ದಿದ್ದೂ ಹೌದಾದ್ರೆ ಗಡದ್ದಾಗಿ ಸ್ನಾನ ಮಾಡಿ ಅಪ್ಪನ ಎದುರಿಗೆ ಸಂಧ್ಯಾವಂದನೆ ಮಾಡೋ ನಾಟಕವಾಡಿ, ಗಾಯಿತ್ರಿ ಮಂತ್ರ ಹೇಳೋ ಕಾಲದಲ್ಲಿ ಯಾರ್ಯಾರದ್ದೋ ಹೆಸರು ಹೇಳಿ ಅಮ್ಮನ ಹತ್ರಾ ಬೈಸಿಕೊಂಡು ಕೊನೆಗೆ ಗುಡ್ಡ ಹತ್ತಿದ್ವೀ ಅಂದ್ರೆ ಶುರು ನೋಡಿ ನಮ್ಮ ದಿನಚರಿ!