ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ವಿಮಾನಯಾನದಲಿ ಮೋಡಗಳು (ಏಕ-ಅನೇಕ)

ಬಣ್ಣವಾಗಿ ರೇಖೆಯಾಗಿ,
ಹಾಳೆ ನೂರು ಚಿತ್ರವಾಗಿ,
ಕಲ್ಲು-ಮಂದಿರ-ಶಿಲ್ಪವಾಗಿ,
ಹೊಮ್ಮಿದೆಲ್ಲೆಡೆ ಲಲಿತವಾಗಿ

ಜ್ವಾಲೆಯಾಗಿ ಶಿಖರವಾಗಿ,
ಅಲೆ-ಸಾಗರ-ತೀರವಾಗಿ,
ದಾರಿ-ದ್ವೀಪ-ಖಂಡವಾಗಿ,
ಕಂಡಕಂಡೆಡೆ ಲೋಕವಾಗಿ

ಹುಟ್ಟುತಿದೆ ಕಟ್ಟುತಿದೆ
ಕರಗಿ ಮತ್ತದೆ ಮರಳುತಿದೆ,
ಮುಗಿಲು ಬದಲು ಭಾವ;
ಅಲ್ಲಿ ಲವ, ಇಲ್ಲಿ ವಿಭವ!

ನಿರ್ಜೀವ ದೇವರು ..!?ರಾಮ,ರಾಮಾ...

ಮಗು ಕಾಣಲಿಲ್ಲ ಎಂದರೆ ಮೊದಲು ಮನೆಯಲ್ಲಿ ಹುಡುಕಿ, ಬೀದಿಯಲ್ಲಿ ಹುಡುಕಿ,ನಂತರ ಪೋಲೀಸ್/ಪೇಪರ್/ಟಿ.ವಿ.ಗೆ ಕಳೆದು ಹೋದ ಬಗ್ಗೆ ದೂರು/ವರದಿ ಕೊಡುವರು. ಅದೇ ತರಹ ದೇವರಿಲ್ಲ ಎನ್ನುವ ಮೊದಲು ದೇವರನ್ನು ಹುಡುಕುವ ಪ್ರಯತ್ನ ಮಾಡಿರಬೇಕು.

ನಕಾಶೆ ನೋಡುವುದರಲ್ಲಿ ನಾರಿಯರು ಹಿಂದೆ?

"ನಮ್ಮ ನಿತ್ಯಬಳಕೆಯ ಮ್ಯಾಪ್‍ಗಳನ್ನೆಲ್ಲ ರಚಿಸಿದವರಾರು? ಹೆಚ್ಚಾಗಿ ಗಂಡಸರೇ. ಸಿವಿಲ್ ಇಂಜನಿಯರಿಂಗ್, ಸರ್ವೆಯಿಂಗ್, ಬ್ಲೂಪ್ರಿಂಟಿಂಗ್ ಇವೆಲ್ಲ ಹೆಚ್ಚಾಗಿ ಗಂಡುಕ್ಷೇತ್ರಗಳೇ ತಾನೆ?

ಲಂಕೇಶ್ ಬ್ಲಾಗ್: ನೀಲು ಕಾವ್ಯ ಮತ್ತು ನೀಲುಗಳು

ಜಾಣ ಜಾಣೆಯರ "ಲಂಕೇಶ್ ಪತ್ರಿಕೆ"ಯಲ್ಲಿ ಲಂಕೇಶರು ನೀಲು ಅನ್ನೋ ಹೆಸರಿನಡಿ ಪದ್ಯಗಳನ್ನು ಬರೀತಿದ್ದರು. ನಾನಂತೂ ಅವುಗಳನ್ನಷ್ಟೇ ಓದಿ ಪತ್ರಿಕೆ ಮುಚ್ಚಿಡುತ್ತಿದ್ದ ದಿನಗಳಿದ್ದವು! ಇತ್ತೀಚೆಗೆ ನೀಲುಗಳು ಎಂಬ ಕೇಶವ ಕುಲ್ಕರ್ಣಿಯವರ ಬ್ಲಾಗಿನಲ್ಲಿ "ಹೈಕುಗಳ ಮಾದರಿಯಲ್ಲೇ ಕೆಲವೇ ಕೆಲವು ಸಾಲುಗಳಲ್ಲಿ ಕಾವ್ಯ ಬರೆದದ್ದು ಲಂಕೇಶ್, ನೀಲು ಹೆಸರಿನಲ್ಲಿ. ಕನ್ನಡದಲ್ಲಿ ಅಂಥ ಕಾವ್ಯ ಪ್ರಕಾರಕ್ಕೆ 'ನೀಲುಗಳು' ಎಂದು ನಾಮಕರಣ ಮಾಡಬಹುದೇ?" ಎಂದು ತಮ್ಮ ಒಂದೆರಡು ಕನ್ನಡದ ಹಾಯಿಕುಗಳನ್ನು "ನೀಲುಗಳು" ಎಂದು ಕರೆದಿದ್ದರು. ನೋಡಿ ತುಂಬಾ ಸಂತೋಷವಾಯಿತು. ಹೌದು, "ನೀಲುಗಳು" ಒಂದು ಕಾವ್ಯ ಪ್ರಕಾರವಾಗಬೇಕು ಅಂತ ಅನಿಸಿತು. ಅದಕ್ಕೆ ನೀಲು ಪದ್ಯಗಳ ಜಾಡಿನಲ್ಲೇ ಬರೆಯಬೇಕು ಅಂತ ಅನಿಸಿತು. ಇದು ನನ್ನ ಮೇಲಿನ ಲಂಕೇಶರ ಪ್ರಭಾವ ಅಂತಲೇ ಇಟ್ಕೊಳ್ಳಿ. ಹಾಗಾದರೆ ಲಂಕೇಶರ ಪದ್ಯಗಳು ಪ್ರಕಟವಾಗಿವೆಯೆ ಎಂದು ಹುಡುಕಿದಾಗ "ನೀಲು ಕಾವ್ಯ" ಅಂತ ಪ್ರಕಟವಾಗಿದೆ ಅಂತ ಪತ್ರಿಕೆಯಲ್ಲಿ ಓದಿದೆ. ತುಂಬಾ ಸಂಭ್ರಮದಿಂದ ತರಿಸಿಕೊಂಡು "ರೆಫೆರ್‍" ಮಾಡಲು ತೊಡಗಿದ್ದೇನೆ! ಈ ಸಂಪುಟದಲ್ಲಿ ಲಂಕೇಶರು 1981-1984 ರವರೆಗೆ ಬರೆದವುಗಳು ಮಾತ್ರ ಇವೆ. ಮುನ್ನುಡಿಯಲ್ಲಿ ಕಿ.ರಂ.ನಾಗರಾಜರು "ವಾರಕ್ಕೆ ಸರಾಸರಿ ಇಪ್ಪತ್ತು ಸಾಲುಗಳಂತೆ ಇಪ್ಪತ್ತು ವರ್ಷಗಳ ತುಂಬ ಹಬ್ಬಿಕೊಂಡಿದ್ದು"..."ಸುಮಾರು ಹದಿನೆಂಟು ಸಾವಿರ ಸಾಲುಗಳ" ಬರಹ ಇರಬಹುದೆಂದು ಅಂದಾಜು ಹಾಕುತ್ತಾರೆ ಮತ್ತು "ಈ ಕಾಲಮಾನದಲ್ಲಿ ನಮ್ಮ ಆಸುಪಾಸಿನಲ್ಲಿ ಇಷ್ಟು ವ್ಯಾಪಕವಾದ ಕಾವ್ಯ ರಚನೆಯಾದದ್ದು ಅಪರೂಪ" ಎಂದು ಅಭಿಪ್ರಾಯಪಡುತ್ತಾರೆ.ಮುಖಪುಟ

ತಮ್ಮ ಪತ್ರಿಕೆಯಲ್ಲಿ ಲಂಕೇಶರು "ಟೀಕೆ-ಟಿಪ್ಪಣಿ" ಎಂದು ಬರೆಯುತ್ತಿದ್ದರು. ಅದು ಈಗಾಗಲೇ ಪುಸ್ತಕರೂಪದಲ್ಲಿ ಹೊರಬಂದಿದೆ. ಅದು ಕೂಡ ಒಂದು ಪ್ರಜ್ಞಾವಂತ ಮನಸ್ಸಿಗೆ ಹಿಡಿದ ಕನ್ನಡಿಯಾಗಿದೆ. ಅವುಗಳನ್ನು ಲಂಕೇಶರ ಬ್ಲಾಗ್ ಅನ್ನಬಹುದು. ಆದರೆ ಅದಕ್ಕಿಂತ, ತುಂಬಾ ಭಿನ್ನವಾಗಿ, ಕಲಾತ್ಮಕವಾಗಿ, ಕಾವ್ಯಮಯವಾಗಿ "ನೀಲು" ಮೂಲಕ ಲಂಕೇಶರು ಮಾತಾಡಿದ್ದಾರೆ. ಕೆಲವು ಸಲ ತಮ್ಮ ಸ್ವಂತ ಅನಿಸಿಕೆಯನ್ನೂ ನೀಲುವಿನ ಮಾತಿನ ಚೂಪಿಗೆ ಒಡ್ಡಿದ್ದಾರೆ, ಟೀಕಿಸಿಕೊಂಡಿದ್ದಾರೆ ಎನ್ನುವುದು ನನ್ನೊಬ್ಬನ ಅನಿಸಿಕೆ ಇರಲಾರದು . ಲಂಕೇಶರು ತಮ್ಮನ್ನು ತಾವು ಮೀರುತ್ತಿದ್ದ ರೀತಿಯದು ಎಂದು ಬಗೆಯುತ್ತೇನೆ. ಹಾಗಾಗಿಯೇ "ನೀಲು" ಎಂಬ ತಮ್ಮ ಮತ್ತೊಂದು ಬದಿಯನ್ನು ಮುಖ್ಯವಾಗಿ ತಮ್ಮನ್ನು ತಾವು ಮೀರುವ ತಂತ್ರವಾಗಿ ಲಂಕೇಶರು ಬಳಸಿದ್ದಾರೆ. ಅದಕ್ಕೇ ನನಗೆ "ನೀಲು" ಪದ್ಯಗಳೂ ಒಂದು ರೀತಿಯ ನಿಯತಕಾಲಿಕ ಬ್ಲಾಗ್‌ನಂತೆ ಕಾಣುತ್ತದೆ. ಇತ್ತೀಚೆಗೆ ನಾನು ನನ್ನ ಬ್ಲಾಗುಗಳಿಗೆ ಬೇರೆ ಬೇರೆ ರೂಪಕೊಡುವ ಪ್ರಯತ್ನಪಟ್ಟಿದ್ದೇನೆ. ಆ ಪ್ರಯತ್ನಕ್ಕೂ, ಕೇಶವ ಕುಲಕರ್ಣಿಯವರ "ನೀಲುಗಳು" ಎಂಬ ತಲೆಪಟ್ಟಿಗೂ, ಲಂಕೇಶರ "ನೀಲು ಕಾವ್ಯ"ದ ಪ್ರಕಟಣೆಗೂ ಒಂದು ರೀತಿಯ ಯೋಗಾಯೋಗ ಸಂಬಂಧವಿದೆಯೇ ಎಂದು ಅಚ್ಚರಿಪಡುತ್ತಿದ್ದೇನೆ.

ಲಂಕೇಶ್ ಬ್ಲಾಗ್: ನೀಲು ಕಾವ್ಯ ಮತ್ತು ನೀಲುಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಲಂಕೇಶ್

ಜಾಣ ಜಾಣೆಯರ "ಲಂಕೇಶ್ ಪತ್ರಿಕೆ"ಯಲ್ಲಿ ಲಂಕೇಶರು ನೀಲು ಅನ್ನೋ ಹೆಸರಿನಡಿ ಪದ್ಯಗಳನ್ನು ಬರೀತಿದ್ದರು. ನಾನಂತೂ ಅವುಗಳನ್ನಷ್ಟೇ ಓದಿ ಪತ್ರಿಕೆ ಮುಚ್ಚಿಡುತ್ತಿದ್ದ ದಿನಗಳಿದ್ದವು! ಇತ್ತೀಚೆಗೆ ನೀಲುಗಳು ಎಂಬ ಕೇಶವ ಕುಲ್ಕರ್ಣಿಯವರ ಬ್ಲಾಗಿನಲ್ಲಿ "ಹೈಕುಗಳ ಮಾದರಿಯಲ್ಲೇ ಕೆಲವೇ ಕೆಲವು ಸಾಲುಗಳಲ್ಲಿ ಕಾವ್ಯ ಬರೆದದ್ದು ಲಂಕೇಶ್, ನೀಲು ಹೆಸರಿನಲ್ಲಿ. ಕನ್ನಡದಲ್ಲಿ ಅಂಥ ಕಾವ್ಯ ಪ್ರಕಾರಕ್ಕೆ 'ನೀಲುಗಳು' ಎಂದು ನಾಮಕರಣ ಮಾಡಬಹುದೇ?" ಎಂದು ತಮ್ಮ ಒಂದೆರಡು ಕನ್ನಡದ ಹಾಯಿಕುಗಳನ್ನು "ನೀಲುಗಳು" ಎಂದು ಕರೆದಿದ್ದರು. ನೋಡಿ ತುಂಬಾ ಸಂತೋಷವಾಯಿತು.

ಭೂತಾಪಕ- ಒ೦ದು ನೈಜ ಹವಾನಿಯ೦ತ್ರಣ

"ಭೂತಾಪಕ"(Geothermal)

 

ನಮಗೆಲ್ಲ ತಿಳಿದಿರುವ ಹಾಗೆ ಜಾಗತಿಕ ತಾಪಮಾನ ದಿನೆ ದಿನೇ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣಗಳು ಹಾಗೂ ಇದರ ದುಷ್ಪರಿಣಾಮಗಳು ಅನೇಕ. ಈ ಮೊದಲು ನಾನು ಜಾಗತಿಕ ತಾಪಮಾನದ ಪರಿಣಾಮಗಳು ಮತ್ತು ಈ ಸಮಸ್ಯೆ ನಿವಾರಣೆಗೆ ಸಾಮಾನ್ಯ ಜನರು ಹೇಗೆ ಸ್ಪ೦ದಿಸಬೇಕು ಎ೦ದು ಒ೦ದು ಲೇಖನ ಬರೆದಿದ್ದೇನೆ. ಇದರ [:http://sampada.net/blog/prapancha/05/06/2007/4357|ಕೊ೦ಡಿ ಇಲ್ಲಿದೆ].

ಈ ಲೇಖನವನ್ನು ಮು೦ದುವರೆಸುತ್ತಾ, ಜಾಗತಿಕ ತಾಪಮಾನದ ಏರಿಕೆಗೆ ಮನುಷ್ಯರ ಜೀವನ ಶೈಲಿಯಲ್ಲಿನ ಬದಲಾವಣೆಯೇ ಒ೦ದು ಬಹಳ ಮುಖ್ಯವಾದ ಕಾರಣ. ಮನುಷ್ಯರಿಗೆ ಈಗ ಸಾಕಷ್ಟು ಸೌಕರ್ಯಗಳು ಮತ್ತು ಸುಖ ಸಾದನಗಳು ಬೇಕು. ಇದರಿ೦ದಾಗಿ ಶಕ್ತಿ (energy)ಯ ಬಳಕೆ ದಿನೇ ದಿನೇ ಹೆಚ್ಚುತ್ತಿದೆ. ಇದನ್ನ ಪೂರೈಸಲು ಸಾಕಷ್ಟು ನೈಸರ್ಗಿಕ ಸ೦ಪನ್ಮೂಲವನ್ನ ಉಪಯೋಗಿಸಿತ್ತಿರುವುದರಿ೦ದ ಪರಿಸರದ ಮೇಲೆ ಸಾಕಷ್ಟು ಹಾನಿ ಉ೦ಟುಮಾಡಿದೆ ಮತ್ತು ಶಕ್ತಿ ಉತ್ಪಾದಿಸುವ ಕ್ರಿಯೆಯಲ್ಲಿ ಇ೦ಗಾಲದ೦ತಹ ಹಾನಿಕಾರಕ ವಿಷಾನಿಲ ಶುದ್ದ ಗಾಳಿಯಲ್ಲಿ ಬೆರೆತು ಪರಿಸರ ನಾಶ ಮಾಡುತ್ತಿದೆ ಹಾಗೂ ಜಾಗತಿಕ ತಾಪಮಾನ ಏರುತ್ತಿದೆ. ಹಾಗಾಗಿ ನಾವು ಜನ ಸಾಮಾನ್ಯರು ಶಕ್ತಿಯ ಬಳಕೆಯನ್ನ ಕಡಿಮೆ ಮಾಡುವುದರ ಮುಖಾ೦ತರ ನಮ್ಮ ಪರಿಸರವನ್ನ ಮು೦ದಿನ ತಲೆಮಾರಿಗೆ ಉಳಿಸಬೇಕಾಗಿದೆ.
ನಮ್ಮ ನಿತ್ಯ ಜೀವನದಲ್ಲಿ ಶಕ್ತಿ ಉಪಯೋಗಿಸಿಕೊ೦ಡು ಬೇಕಾದಷ್ಟು ಸುಖ ಸಾದನಗಳನ್ನ ಬಳಸುತ್ತೇವೆ ಅವುಗಳಲ್ಲಿ ಪ್ರಮುಖವಾದುದು ಹವಾನಿಯ೦ತ್ರಣ. ಈಗ ಮಾರುಕಟ್ಟೆಯಲ್ಲಿ ದೊರೆಯುವ ಹವಾನಿಯ೦ತ್ರಣ ಒ೦ದು ಶಕ್ತಿ ಬಾಕ ಉಪಕರಣ. ಈ ಶಕ್ತಿ ಬಾಕ ಉಪಕರಣವನ್ನ ಉಪಯೋಗಿಸುವುದರಿ೦ದ ಸಾಕಷ್ಟು ಪರಿಸರ ಹಾನಿಯಾಗುತ್ತದೆ. ಹಾಗೆ೦ದು ಸ೦ಪೂರ್ಣವಾಗಿ ತ್ಯಜಿಸಲೂ ಸಾದ್ಯವಾಗುವುದಿಲ್ಲ. ಇದಕ್ಕೊ೦ದು ಪರ್ಯಾಯ ವ್ಯವಸ್ಥೆ ಕ೦ಡುಕೊ೦ಡರೆ ಹೇಗೆ? ಈ ನಿಟ್ಟಿನಲ್ಲಿ ಪಾಶ್ಚಿಮಾತ್ಯರು ಅನೇಕ ಸ೦ಶೋದನೆ ನಡೆಸಿದ್ದಾರೆ, ಅವುಗಳಲ್ಲಿ "ಭೂತಾಪಕ"(geothermal) ಪದ್ದತಿ ಕೂಡ ಒ೦ದು.

ಭೂತಾಪಕ ಎ೦ದರೇನು?
ಭೂತಾಪಕ ಪದ್ದತಿಯು ಒ೦ದು ನೈಜ ಹವಾನಿಯ೦ತ್ರಣ ಪದ್ದತಿ. ಈ ಪದ್ದತಿಯನ್ನ ಉಪಯೋಗಿಸಿಕೊ೦ಡು ಶಕ್ತಿ ಬಾಕ ಸಾ೦ಪ್ರದಾಯಿಕ ಹವಾನಿಯ೦ತ್ರಣ ಉಪಕರಣಗಳಿಗಿ೦ತ ಕಡಿಮೆ ಶಕ್ತಿಯನ್ನ ಬಳಸುವ ಪರ್ಯಾಯ ಹವಾನಿಯ೦ತ್ರಣ ಉಪಕರಣವನ್ನ ತಯಾರಿಮಾಡಬಹುದು. ಈ ಉಪಕರಣವನ್ನ ಉಪಯೋಗಿಸಿಕೊ೦ಡು ಕಟ್ಟಡಗಳ ಒಳ ಹವಾಮಾನವನ್ನ ಬೇಸಿಗೆಯಲ್ಲಿ ತಣ್ಣಗೆ ಮಾಡಬಹುದು ಹಾಗೂ ಛಳಿಯಿದ್ದಲ್ಲಿ ಬಿಸಿಯನ್ನೂ ಮಾಡಬಹುದು. ಈ ಉಪಕರಣವನ್ನ ಅಳವಡಿಸಿಕೊಳ್ಳಲು ಆಳವಾದ ತ೦ತ್ರಜ್ನಾನದ ಅವಶ್ಯಕತೆ ಇಲ್ಲ.

ಭೂತಾಪಕ ಪದ್ದತಿ ಹೇಗೆ ಕೆಲಸ ಮಾಡುತ್ತದೆ?
ಭೂತಾಪಕ ಹವಾನಿಯ೦ತ್ರಕವು ಒ೦ದು ಸುಲಬ ಸಿದ್ದಾ೦ತದ ಮೇಲೆ ಕೆಲಸ ಮಾಡುತ್ತದೆ. ಭೂಮಿಯ ಸುಮಾರು ೪ ಅಡಿ ಆಳಕ್ಕಿ೦ತ ಕೆಳಗಿನ ಪದರದಲ್ಲಿ ತಾಪಮಾನವು ಒ೦ದೇ ಸ್ಥಿರತೆಯಲ್ಲಿರುತ್ತದೆ. ಈ ಪದರದಲ್ಲಿ ಹೊರಗಿನ ಹವಾಮಾನಕ್ಕಿ೦ತ ವ್ಯತಿರಿಕ್ತ ಹವಾಮಾನವಿರುತ್ತದೆ. ಹಾಗಾಗಿ ಹೊರಗಿನ ಹವಾಮಾನ ಛಳಿಯಿದ್ದಾಗ ಈ ಪದರದಿ೦ದ ಶಾಖವನ್ನ ಪೈಪುಗಳ ಮುಖಾ೦ತರ ಸಾಗಿಸಿ ಕಟ್ಟಡ ಒಳಗಿನ ತಾಪಮಾನವನ್ನ ಏರಿಸಬಹುದು. ಹಾಗೆಯೇ ಹೊರಗಿನ ಹವಾಮಾನ ಬಿಸಿಯಿದ್ದಾಗ ಈ ಪದರದಿ೦ದ ತ೦ಪನ್ನ ಪೈಪುಗಳ ಮುಖಾ೦ತರ ಸಾಗಿಸಿ ಕಟ್ಟಡ ಒಳಗಿನ ತಾಪಮಾನವನ್ನ ಇಳಿಸಬಹುದು.

ತಾಯಿ.

"ಮಾತ್ರು ದೇವೋ ಭವ, ಪಿತ್ರು ದೇವೋಭವ, ಆಚಾರ್ಯ ದೇವೋ ಭವ" ಇದರಲ್ಲಿ ಮೊದಲು ಬರುವವಳು ತಾಯಿ.

ಕರುಣೆಯಲ್ಲೂ ಕಲಬೆರಕೆಯೇ?

ಮೊನ್ನೆ ಹೀಗೊಂದು ಸಾವಾಯಿತು ನೋಡಿ. ಒಬ್ಬ ಯುವಕನಿಗೆ ಕ್ಯಾನ್ಸರ್ ಬಂದು, ಅಪ್ಪ, ಅಮ್ಮ, ಹೆಂಡತಿ, ಇಬ್ಬರು ಮಕ್ಕಳು, ಹೀಗೆ ತುಂಬಿ ತುಳುಕುತ್ತಿದ್ದ ಸಂಪೂರ್ಣ ಪರಿವಾರವನ್ನು ತ್ಯಜಿಸಿ ಹೊರಟುಹೋದ. ಆ ಮುದ್ದಾದ ಪುಟ್ಟ ಮಕ್ಕಳನ್ನು ನೋಡಿ ಎಲ್ಲರ ಕಣ್ಣಲ್ಲೂ ನೀರು. ವಿಧವೆ ಹೆಂಡತಿಯ ಮೇಲೆ ಅಯ್ಯೋ-ಪಾಪಗಳ ಸುರಿಮಳೆ ನಡೆದೇ ಇತ್ತು. ಅಷ್ಟರಲ್ಲಿ ಯಾರೋ ಪಿಸುಗುಟ್ಟಿದರು, "ಅವನಿಗೆ ಸಿಕ್ಕಾಪಟ್ಟೆ ಗುಟ್ಕಾ ಚಟವಿತ್ತಂತೆ". ಸರಿ, ಎಲ್ಲರ ಮನಸ್ಸಿನಲ್ಲೂ ಪ್ರಶ್ನೆಗಳು ಏಳುವುದಕ್ಕೆ ಶುರುವಾಯಿತು. ಅವನು ಗುಟ್ಕಾ ಜಗಿಯುತಿದ್ದಾಗ ಬೇಡ ಅಂತನ್ನದವರು ಇವರೆಂತಹ ಜನ? ತನ್ನ ಸ್ವಾರ್ಥ ಚಟ ಇಂಗಿಸಲು ಹೋಗಿ, ಹೆಂಡತಿ ಮಕ್ಕಳನ್ನು ನಡುನೀರಿನಲ್ಲಿ ಕೈಬಿಟ್ಟು ಹೋದ ಅವನಾದರೂ ಎಂತಹ ಮನುಷ್ಯ? ಇದು ಸ್ವಯಂಕೃತ ಅಪರಾಧವೆಂದ ಮೇಲೆ ನಮ್ಮ ಅನುಕಂಪಕ್ಕೆ ಇವರೆಷ್ಟು ಅರ್ಹರು? ಹೀಗೆ ಆ ಮನೆಯವರ ದುಃಖ, ನೋವು, ಮೀರಿ ಅವರ ನೈತಿಕ ವಿವೇಚನೆಯ ಬಗ್ಗೆ ಚರ್ಚೆ ನಡೆಯತೊಡಗಿತು.

ಇದೇ ರೀತಿಯ ಅನುಭವ ಬಹಳಷ್ಟು ಸಾರಿ ನನಗಾಗಿದೆ. ಏಡ್ಸ್ ಬಂದು ನರಳುತ್ತಿರುವ ರೋಗಿಯ ಚಿತ್ರಣ ಟೀವಿಯಲ್ಲಿ ನೋಡನೋಡುತ್ತ, ಎದೆಯಲ್ಲಿ ಕರುಣೆಯ ಮಿಡಿತ ಶುರುವಾಗುತ್ತಿದ್ದಂತೆ, ತಲೆಯಲ್ಲಿ "ಇವನಿಗೆ ಈ ರೋಗ ಹೇಗೆ ಬಂತು? ಎಷ್ಟು ಜನರ ಜೊತೆ ಮಲಗಿದ್ದನೋ ಏನೋ? ಡ್ರಗ್ ಆಡಿಕ್ಟ್ ಇರಬಹುದೇನೋ?" ಎಂಬ ಸಂಶಯದ ಸುಳಿ ಏಳುತ್ತದೆ. ಅವನಿಗೆ ಯಾವುದೋ ರಕ್ತದ ಟ್ರಾನ್ಸ್ ಫ್ಯೂಶನ್ ಸಮಯದಲ್ಲಿ ಹೆಚ್.ಐ.ವಿ. ಸೊಂಕು ತಗಲಿದ್ದು ಎಂದು ಸ್ಪಷ್ಟವಾದರೆ ಛೆ! ಪಾಪ! ಎಂಬ ನಿಟ್ಟುಸಿರು. ಇಲ್ಲವಾದರೆ ಛೀ! ಏನು ಅಸಹ್ಯದ ಜನರಿರುತ್ತಾರೆ ಎಂಬ ತಿರಸ್ಕಾರ. ಹೀಗೇಕೆ ಮನಸ್ಸು?