ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನೋಡು ಬಾ ಕರುನಾಡ

ತೋರಿಸೋ ಕರುನಾಡ ಹೆಮ್ಮೆಯಲಿ ಧೀರ
ಕೇಳಿಸೋ ಕನ್ನಡದ ಗೀತೆಗಳ ಕುವರ
ಕರ್ಣಾಟಕದ ಕಂಪು ಎಲ್ಲರೂ ಸವಿಯಲಿ
ಹರಡಲಿ ನಾಡಿನ ಇತಿಹಾಸ ವಿಶ್ವದಲಿ

ಕರೆಯೋಣ ಬಾರಾ ದೇಶ ವಿದೇಶಿಗರ
ಬರಮಾಡು ಅತಿಥಿಗಳ ಸ್ವಾಗತವ ಕೋರಿ
ಸತ್ಕರಿಸಿ ಕನ್ನಡದ ವಿಶಿಷ್ಟ ತಿನಿಸುಗಳ
ಪರಿಚಯಿಸು ನಾಡಿನ ವಿಶೇಷ ತಾಣಗಳ

ನರಸಿಂಹ ಜರ್ನ, ಗುರುದ್ವಾರ, ಬಸವಕಲ್ಯಾಣ

ಮಾತುಗಳ ನಡುವಿನ ಮೌನ...

ಸಾಯಲಾರೆ ನಾನು ನಿನ್ನ ನಾ ಪ್ರೀತಿಸುವವರೆಗು...

ಎನ್ನ ಹೃದಯದಿ ನಾಟಿರುವ ಚೂರಿಯು ಎನಗೆ ಮಲ್ಲಿಗೆಯ ಹಾಗೆ ಕೇಳೇ ಹೂವೆ...

ನಿನ್ನ ಮೋಸಕ್ಕೆ ಕ೦ಗಾಲಾಗಿ ನಾನು ಕಣ್ಣೀರಿಡುವುದಿಲ್ಲ...

ವೇದನೆಯ ದಳ್ಳುರಿಯು ಎನಗೆ ತ೦ಗಾಳಿಯಾಗಿ ತಟ್ಟಿದೆ ಕೇಳೇ ನೋವೆ...

ಸುಖ ಶಾ೦ತಿ ಎಲ್ಲಿಹುದು ಅದ ನಾನು ಕಾಣಲಿಲ್ಲ...

ಶಶಿ ಕಾ೦ತಿಯಲ್ಲಿ ನಿನ್ನ ಚೆಲುವ ನೋಡಿ ಅರಿತೆನು ಕೇಳೇ ಸಿರಿಯೇ...

ವ್ಯರ್ಥ

ಅಪ್ಪನ ಕಷ್ಟಕಾಲಕ್ಕೆ ಆಗದಿರುವಂತಹ ಮಗ,
ಹಸಿವಾಗಿದ್ದಾಗ ಸಿಗದೇ ಇರುವಂತ ಅನ್ನ,
ಬಾಯಾರಿಕೆಯಾದಾಗ ಸಿಗದಿರುವಂತ ನೀರು,
ವಿದ್ಯೆ ಕಲಿಯಬೇಕೆಂದಾಗ ಸಿಗದಂತ ಗುರುಗಳು,
ಪಾಪವನ್ನು ತೊಳೆಯಲೆಂದೇ ಇರುವ ನೀರು (ಗಂಗಾ) ಪಾಪವನ್ನು ತೊಳೆಯದಿದ್ದಾಗ....
ಬೇಕೆಂದಾಗ ಸಿಗದೇ ಇರುವ ಇವೆಲ್ಲವೂ ಭೂಮಿ ಮೇಲೆ ಇದ್ದು ವ್ಯರ್ಥವಾದಂತೆ

ನಡೆಸು ಪಯಣವನು

ವೇಗದಲಿ ಸಾಗುವರು ಇಲ್ಲಿ ಎಲ್ಲರು
ನಿನ್ನ ಒಲಿತನು ಯಾರು ಬಯಸರು
ರಭಸಕ್ಕೆ ನೀ ಸಿಲುಕಿ ನಲುಗದಿರು
ಕುರಿಮಂದೆ ಹಿಂದೆ ನೀ ಹೋಗದಿರು

ಇವರ ಹೊರನೋಟ ಬಲು ಆಕರ್ಷಕ
ಸಿಹಿ ನುಡಿಯ ಸುರಿಮಳೆ ಬರಿ ನಾಟಕ
ಸುಲಿಯದಿರು ಇವರ ಬಳಿ ಇರಲಿ ಎಚ್ಚರ
ಕೊಳೆತ ಮನಸಿನವರು ಹೋಗು ನೀ ದೂರ

ವಸ್ತುಗಳ ವ್ಯಾಮೋಹದಲಿ ಮುಳುಗಿರುವರು
ಈ ಸ್ಪರ್ಧೆಯ ವೇಗಕ್ಕೆ ಕೊಚ್ಚಿಹೋಗುವರು

ಹಿಮವದ್‌ಗೋಪಾಲಸ್ವಾಮಿ ಬೆಟ್ಟ, ತಲಕಾಡು, ಮುಡುಕುತೊರೆ ಇತ್ಯಾದಿ.(ಭಾಗ 3)

ಗುಂಡ್ಲುಪೇಟೆ, ಚಾಮರಾಜನಗರ ಮಾರ್ಗವಾಗಿ ಕೊಳ್ಳೇಗಾಲಕ್ಕೆ ಹೊರಟ ನಾವು, ಕೊಳ್ಳೇಗಾಲ ತಲುಪಿದಾಗ ರಾತ್ರಿ 8 ಗಂಟೆ. ಹರ್ಷ ತನ್ನ ಮಾವನ ಮನೆಯಲ್ಲಿ ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿದ್ದ. ಪುಟ್ಟದೊಂದು ಕೋಣೆ. ಅಲ್ಲಿಯೇ ಎಲ್ಲರೂ ಮಲಗಿಕೊಳ್ಳಬೇಕಾದ ಅನಿವಾರ್ಯತೆ ಒದಗಿತ್ತು. ಒಂದು ರಾತ್ರಿ ತಾನೆ ಅನುಸರಿಸಿಕೊಂಡು ಹೋದರಾಯಿತು ಎಂದು ಸುಮ್ಮನಾದೆವು.

ಅಲೆಮಾರಿಯಾದಾಗಿನ ಅವಿಸ್ಮರಣೀಯ ಅನುಭವಗಳು - The End!

ಸ್ನೇಹಿತರೆ, ಮೊದಲ ನಾಲ್ಕು ಭಾಗಗಳಲ್ಲಿ, ಮೈಲಾಪುರ ಜಾತ್ರೆಯ ಅನುಭವಗಳನ್ನು
ಅಕ್ಷರಗಳಲ್ಲಿ ಹಿಡಿದಿಡಲು ಸಾಕಷ್ಟು ತಿಣುಕಾಡಿದ್ದೇನೆ. ಎಲ್ಲಾ ಘಟನೆಗಳನ್ನು
ಹಂಚಿಕೊಳ್ಳಲಾಗಲಿಲ್ಲ. ಮನಸ್ಸಿಗೆ ಪರಿಣಾಮ ಬೀರಿದ ಕೆಲವೇ ಕೆಲವು ದೃಶ್ಯಗಳನ್ನು ನಿಮ್ಮ
ಮುಂದಿಟ್ಟಿದ್ದೇನೆ. ಕೇವಲ ಒಂದು ದಿನ ಇಷ್ಟೊಂದು ಘಟನೆಗಳ ಮಹಾಪೂರವಾಗಬಹುದೆಂದು

ಅಲೆಮಾರಿಯಾದಾಗಿನ ಅವಿಸ್ಮರಣೀಯ ಅನುಭವಗಳು - ಭಾಗ ೪

ಅಂತೂ ಹೇಗೋ ಕಷ್ಟಪಟ್ಟು ಗರ್ಭಗುಡಿಯ ಜನದಟ್ಟಣೆಯಿಂದ, ಅದರಲ್ಲೂ ಅಲ್ಲಿದ್ದ
ದೇವದಾಸಿಯರು, ಗೊರವರು, ಭಿಕ್ಷುಕರಿಂದ ತಪ್ಪಿಸಿಕೊಂಡು ಬಾಗಿಲಿನ ಹತ್ತಿರ ನನಗಾಗಿ
ಅತ್ತಿತ್ತ ನೋಡುತ್ತಿದ್ದ ಕಾಕಾನ ಹತ್ತಿರ ಹೋದೆ. ಗುಡಿಯ ಒಳಗೆ ತುಂಬಾ ಹೊತ್ತು
ಕಳೆದದ್ದರಿಂದ ತಡ ಮಾಡದೆ ನಮಗಾಗಿ (ಮತ್ತು ನಮ್ಮ ಪಾದರಕ್ಷೆಗಳನ್ನು) ಕಾಯುತ್ತಿದ್ದ
ಲೋಕನಾಥ ಸರ್ ಹತ್ತಿರ ಹೋದೆವು. ಅವರು, "ಸರ್ ನಾನು ಒಂದು round ಹೋಗಿ ದೇವರ ದರ್ಶನ
ಮಾಡಿಕೊಂಡು ಬರಲೇ?" ಅಂತ ಕೇಳಿದರು. ಕಾಕಾನಿಗಿಂತ ಮುಂಚೆ ನಾನೆ, "ಆಗಲಿ ಸರ್, ಈಗ
ಪಾದರಕ್ಷೆಗಳನ್ನು ಕಾಯುವ ಸರದಿ ನಮ್ಮದು" ಎಂದೆ. ಜಾತ್ರೆಯೆಲ್ಲಾ ಸುತ್ತಾಡಿ
ಸುಸ್ತಾಗಿದ್ದ ನನ್ನ ಕಾಲುಗಳಿಗೆ ಕುಳಿತುಕೊಳ್ಳಲು ಜಾಗ ಸಿಕ್ಕರೆ ಸಾಕಾಗಿತ್ತು.
ಜನದಟ್ಟಣೆ ಸ್ವಲ್ಪ ಕಡಿಮೆಯಾಗಿದ್ದರಿಂದ ಬಾಗಿಲಿನ ಮುಂದಿದ್ದ ಮೆಟ್ಟಿಲಿನ ಮೇಲೆ ಸ್ವಲ್ಪ
ಜಾಗ ಕಂಡಿತು. ಸಾವಿರಾರು ಜನ ತುಳಿದಾಡಿದ್ದರೂ ಆ ಜಾಗ ಅಷ್ಟೊಂದು ಕೊಳೆಯಾಗಿ
ಕಾಣಲಿಲ್ಲಿ. ಅಲ್ಲಿದ್ದ ಧೂಳನ್ನು ಝಾಡಿಸಿ ಅಲ್ಲೆ ಕುಳಿತು ನಿಟ್ಟುಸಿರು ಬಿಟ್ಟೆ.

ಲ೦ಡನ್ ದೃಶ್ಯಕಥನ: ಪ್ರವಾಸ ಭಾಗ ೩ --ಎಚ್.ಎ.ಅನಿಲ್ ಕುಮಾರ್

www.anilkumarha.com

ಸ್ಠಳ: ಲ೦ಡನ್ ನಗರದ ದಕ್ಷಿಣ ಭಾಗ. ಸಮಯ: ಇ೦ದು ನಾಳೆಯಾದ ಕೆಲ ಕ್ಷಣಗಳ ನ೦ತರ.

"ಏಕ್ಸ್‍ಕ್ಯೂಸ್ ಮಿ. ಗೀವ್ ಮಿ ಟು ಪೌ೦ಡ್ಸ್ ಪ್ಲೀಸ್" ಎ೦ದನಾತ. ಸುತ್ತಲೂ ಕಾರ್‍ಗತ್ತಲು ಮತ್ತು ಬಾರ್‍ಗತ್ತಲು. ಎದುರಿಗೆ ಆರೂವರೆ ಅಡಿ ಎತ್ತರದ ಅಜಾನುಬಾಹು ಕರಿಯ-ಆಫ್ರಿಕನ್. ಆತ ನೀಗ್ರೋ ಆಗಿದ್ದರೂ ಹಾಗೆ೦ದು ನಾನು ಬರೆಯಲಾರೆ. ಏಕೆ೦ದರೆ ಅದೊ೦ದು ’ರೇಸಿಸ್ಟ್’ ಹೇಳಿಕೆಯಾಗುತ್ತದೆ. ಆದರೆ ಆತನನ್ನು ಹಾಗೆ೦ದು ಕರೆಯದೆ ಕನ್ನಡದಲ್ಲಿ ಮತ್ತಿನ್ನು ಹೇಗೆ ಬರೆಯಬಹುದೋ ಎ೦ಬುದು ಆತನಿಗೂ ತಿಳಿದಿರಲಾರದು. ಏಕೆ೦ದರೆ ಆತನಿಗೆ ಕನ್ನಡ ಬರದು.

ಆ ಕತ್ತಲ ಆ ಬೃಹದಾಕಾರದ ಬೃಹತ್ ಬೇಡಿಕೆ, ಅ೦ದರೆ ನೂರ ಅರವತ್ತು ರೂಗಳ ಭಿಕ್ಷೆಯನ್ನು "ತಗೋ ಮಜಾ ಮಾಡು" ಎ೦ದುಕೊ೦ಡು ಕೊಟ್ಟೆನಾದರೂ, ಹಾಗೆ ಕೊಟ್ಟುಬಿಡುವುದಲ್ಲದೆ ನನಗೆ ಬೇರ್ಯಾವ ಮಾರ್ಗವೂ ಉಳಿದಿರಲಿಲ್ಲ. ಏಕೆ೦ದರೆ ಎದುರಿಗಿದ್ದ ಒ೦ದೇ ಮಾರ್ಗಕ್ಕೆ ಅಡ್ಡಲಾಗಿ ರಸ್ತೆಯಷ್ಟೇ ಅಗಲವಿದ್ದ, ಕತ್ತಲಿನಷ್ಟೇ ಆಳವಾಗಿದ್ದ ಆತ ನಿ೦ತಿದ್ದ. ಇ೦ಗ್ಲೆ೦ಡಿನ ಲ೦ಡನ್ನಿನ ಆ ರಸ್ತೆ ಇದ್ದದ್ದು (ಈಗಲೂ ಆ ರಸ್ತೆ ಅಲ್ಲಿಯೇ ಇದೆ. ಗೂಗಲ್ ಅರ್ಥ್‌ನ ಮ್ಯಾಪಿನಲ್ಲಿ ಮೊನ್ನೆಯಷ್ಟೇ ನೋಡಿದೆ ಅದನ್ನ) ’ಬರೋ’ ಎ೦ಬ ಟ್ಯೂಬ್ ಸ್ಟೇಷನ್ನಿನ ಬಳಿ ’ಎಲಿಫ್ಯಾ೦ಟ್ ಅ೦ಡ್ ಕ್ಯಾಸಲ್’ ಎ೦ಬ ಟ್ಯೂಬ್ ಸ್ಟೇಷನ್ನಿನ ಬಳಿ.