ಹಿತನುಡಿ
ತಿಳಿಯದವ, ತನಗೆ ತಿಳಿಯದೆಂದು ತಿಳಿಯದವ - ಮೊರ್ಖ, ಆತನನ್ನು ಖಂಡಿಸಿ
ತಿಳಿಯದವ, ತನಗೆ ತಿಳಿಯದೆಂದು ತಿಳಿದವ - ಸರಳ ಸ್ವಭಾವಿ, ಆತನಿಗೆ ತಿಳಿಹೇಳಿ
ತಿಳಿದವ, ತನಗೆ ತಿಳಿದಿದೆಯೆಂದು ತಿಳಿಯದವ - ನಿದ್ರಾಗ್ರಸ್ಥ, ಆತನನ್ನು ಎಚ್ಚರಿಸಿ
ತಿಳಿಯದವ, ತನಗೆ ತಿಳಿಯದೆಂದು ತಿಳಿಯದವ - ಮೊರ್ಖ, ಆತನನ್ನು ಖಂಡಿಸಿ
ತಿಳಿಯದವ, ತನಗೆ ತಿಳಿಯದೆಂದು ತಿಳಿದವ - ಸರಳ ಸ್ವಭಾವಿ, ಆತನಿಗೆ ತಿಳಿಹೇಳಿ
ತಿಳಿದವ, ತನಗೆ ತಿಳಿದಿದೆಯೆಂದು ತಿಳಿಯದವ - ನಿದ್ರಾಗ್ರಸ್ಥ, ಆತನನ್ನು ಎಚ್ಚರಿಸಿ
ನಾಳೆ ಬಸವ ಜಯಂತಿ. "ಕಾಯಕವೇ ಕೈಲಾಸ" ಎಂದ ಮಹಾನುಭಾವ ಬಸವಣ್ಣನವರು. ನಮ್ಮ ಕರ್ತವ್ಯ ಪಾಲನೆಗೆ ಹೆಚ್ಚು ಒತ್ತು ಕೊಡಬೇಕಾದ್ದು ನ್ಯಾಯ. ಆದರೆ ಜಯಂತಿಗೆ ರಜೆ ಸಾರುತ್ತಾ ಬಂದ ಸರಕಾರಗಳು ಜನರು ತಮ್ಮ ಕಾಯಕದಲ್ಲಿ ತೊಡಗದಂತೆ ಮಾಡುತ್ತಿಲ್ಲವೇ?ಅಥವಾ ಕಾಯಕವೇ ಕೈಲಾಸ ಎನ್ನುವ ಮಾತಿಗೆ ಬೇರೇನಾದರೂ ಅರ್ಥವಿದೆಯೇ?
ನಮ್ಮ "Cisco Systems, Bengalooru" ಸಂಸ್ಥೆಯಲ್ಲಿ ಸುಸಂಸ್ಕೃತ ಕನ್ನಡ ಸಂಘ ಒಂದಿದೆ. ಅದರ ಹೆಸರು "ಸಂಭ್ರಮ". ಅದರ ಕಾರ್ಯಕರ್ತರ ಸಣ್ಣ ತಂಡ "ಅನಾವರಣ". ವಯಸ್ಸು ೬ ತಿಂಗಳು. ಕನ್ನಡ ಸಂಬಂಧಿ "ಸುಸಂಸ್ಕೃತ ಕೆಲಸ ಕಾರ್ಯ" ಗಳಲ್ಲಿ ತೊಡಗಿರುವೆವು.
ಅಲ್ಪನಾದವನು ಉಪಕಾರ ಮಾಡುವುದಕ್ಕೆ ಶಕ್ತನಾಗಿರುವಂತೆ ದೊಡ್ಡವನು ಮಾಡಲಾರನು. ಯಾವಾಗಲೂ ಬಾವಿಯು ಬಾಯಾರಿಕೆಯನ್ನು ನೀಗುವಂತೆ ಸಮುದ್ರವು ನೀಗಲಾರದು.
ನಾನು ಇನ್ ಮೇಲೆ ಸುಳ್ಳು ಹೇಳುವದನ್ನು ಬಿಡಬೇಕೆಂದಿದ್ದೇನೆ. ಇದು ಸುಳ್ಳಲ್ಲ, ನಂಬಿ ಪ್ಲೀಸ್, ಪ್ಲೀಸ್ ಅನ್ನಬೇಕಾಗಿಲ್ಲ, ಯಾಕೆ ಅಂದರೆ ಈ ಸುಳ್ಳಿನಿಂದ ಎಸ್ಟು ತೊಂದರೆ ಅಂಬುದನ್ನು ಮನಗಂಡು, ಈ ಒಂದು ತೀರ್ಮಾನಕ್ ಬಂದೀದಿನಿ. ಸಣ್ಣ-ಪುಟ್ಟ ಸುಳ್ಳೇ ಆದರೂ, ಒಂದು ಸುಳ್ಳನ್ನ ಉಳಿಸಲು ಮತ್ತೊಂದು, ಹಾಗೆ ಮಗದೊಂದು ಅಂತ ಸುಳ್ಳಿನ ರಾಶಿನೇ ಬೆಳೆದು ನಿಲ್ಲುತ್ತೆ.
೬ ಋತುಗಳು ಮತ್ತು ೧೨ ಮಾಸಗಳ ವಿವರ
೧. ವಸಂತ - ಚೈತ್ರ - ವೈಶಾಖ
೨. ಗ್ರೀಷ್ಮ - ಜ್ಯೇಷ್ಠ - ಆಷಾಢ
೩. ವರ್ಷ - ಶ್ರಾವಣ - ಭಾದ್ರಪದ
೪. ಶರತ್ - ಆಶ್ವಯುಜ - ಕಾರ್ತೀಕ
೫. ಹೇಮಂತ - ಮಾರ್ಗಶಿರ - ಪುಷ್ಯ
೬. ಶಿಶಿರ - ಮಾಘ - ಫಾಲ್ಗುಣ
( ನಿನ್ನೆ ’ಅಕ್ಷರದಿಂದ ದೂರ’ - ಓಶೋ ವಿಚಾರ ಓದಿದ್ದಿರಿ ; ಇವತ್ತು ಇದನ್ನು ನೋಡಿ)
ಸಂಪದ ಓದುಗರು ಈಗಾಗಲೇ ಓದಿರಬಹುದು, ಇಂದಿನ ವಿಜಯಕರ್ನಾಟಕದಲ್ಲಿ ಅನಂತಮೂರ್ತಿಯವರ 'ಋಜುವಾತು' ಬಿಡುಗಡೆ ಸಮಾರಂಭದ ಭಾಷಣವನ್ನು ಟೀಕಿಸಿ ಬರೆದ ಲೇಖನವನ್ನು.
ವಿಜಯಕರ್ನಾಟಕ ಬರ್ತಾ ಬರ್ತಾ ತೀರಾ ಬೇಜಾವಾಬ್ದಾರಿಯಿಂದ ಲೇಖನಗಳನ್ನು ಪ್ರಕಟಿಸುತ್ತಿದೆ ಎಂಬ ವಾದಕ್ಕೆ ಇಂದಿನ ಲೇಖನ ಮತ್ತೊಂದು ಪುರಾವೆ.
ಕಡ್ಲಿಮಟ್ಟಿಯ ಕಾಶೀಬಾಯಿ!!!
"ಕಡ್ಲಿಮಟ್ಟಿಯ ಕಾಶೀಬಾಯಿಯ ಶೀಲಕ ತಂದಿತ್ತ..."
ಇದು ಉ.ಕರ್ನಾಟಕದಲ್ಲಿ ಮನೆಮನೆಗೂ ಗೊತ್ತಿರುವ ಸೊಗಸಾದ ಜಾನಪದ ಹಾಡು. ಇದನ್ನ ನಾನು ಚಿಕ್ಕವನಾಗಿದ್ದಾಗ ಹಾಡತಾ ಇದ್ದೆ. ಆದರೆ ಅದರ ಅರ್ಥ ಮಾತ್ರ ಗೊತ್ತಿರಲಿಲ್ಲ. ಈಗ ನನಗೆ ಇದು ಸಂಪೂರ್ಣವಾಗಿ ಮರೆತು ಹೋಗಿದೆ. ಆದರೆ ಈ ಒಂದು ಸಾಲು ಮಾತ್ರ ನೆನಪಿದೆ. ಇದನ್ನು ನಾನು ಹಾಗೆ ಗುನುಗುತ್ತಿರುವಾಗ ನನ್ನ ಅಮ್ಮ ಈ ಹಾಡಿನ ಹಿಂದಿರುವ ಕಥೆಯನ್ನು ಹೇಳಿದರು. ನೂರೈವತ್ತು ವರ್ಷಗಳ ಹಿಂದೆ ನಡೆದಿದೆ ಅನ್ನಬಹುದಾದ ಒಂದು ಕಥೆ ಅದು. ಅದು ಈಗ ಜಾನಪದ ಗೀತೆಯಾಗಿ ಉತ್ತರಕರ್ನಾಟಕದಲ್ಲಿ ಪ್ರಚಲಿತದಲ್ಲಿದೆ.
ಆ ಕಥೆ ಇಂತಿದೆ....
ಬಾಗಲಕೋಟೆಯಿಂದ ಬಿಜಾಪುರಕ್ಕೆ ರೈಲು ಮಾರ್ಗವಾಗಿ ಹೋಗುವಾಗ ಕಡ್ಲಿಮಟ್ಟಿಯನ್ನೊ ಒಂದು ಸ್ಟೇಷನ್ ಬರುತ್ತೆ. ಕಡ್ಲಿಮಟ್ಟಿಯಲ್ಲಿ ಕಾಶೀಬಾಯಿ ಅನ್ನೊ ಒಬ್ಬ ಸಾಮಾನ್ಯ ಕೂಲಿ ಹೆಣ್ಣುಮಗಳೊಬ್ಬಳ ಕಥೆ ಇದು. ಅವಳಿಗೆ ಒಂದು ಚಿಕ್ಕ ಹಸುಳೆಯು ಇತ್ತು. ಮನೆಯಲ್ಲಿ ಕಿತ್ತು ತಿನ್ನುವ ಬಡತನ ಬೇರೆ. ಗಂಡನ ಕೂಲಿ ಸಾಕಾಗುವುದಿಲ್ಲ ಎಂದು ತಾನೂ ಕೂಡ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಳು.
ಒಂದು ದಿನ ಹಾಗೆಯೇ ಕೂಲಿ ಮಾಡಿ, ಮನೆಗೆ ಹಿಂತಿರುಗಬೇಕೆನ್ನುವಷ್ಟರಲ್ಲೇ ಅದಾಗಲೇ ಕತ್ತಲು ಆವರಿಸಿತ್ತು. ಜನರೆಲ್ಲರೂ ತಮ್ಮತಮ್ಮ ಮನೆಗಳಿಗೆ ತೆರಳಿದ್ದರು. ತಾನು ತನ್ನ ಹಸುಳೆಯೊಂದಿಗೆ ಮನೆಕಡೆಗೆ ಹೆಜ್ಜೆ ಹಾಕಿದಳು ಕಾಶೀಬಾಯಿ ದಾರಿಯಲ್ಲಿ ಊರ ಹೊರಗಿನ ರೈಲ್ವೆ ಸ್ಟೇಷನ್ ಹತ್ತಿರ ಬಂತು. ಅದು ಇನ್ನೂ ಊರ ಹೊರಗಡೆ ಇದ್ದುದರಿಂದ ನಿರ್ಜನ ಪ್ರದೇಶವಾಗಿತ್ತು.
ಪೇಟೆಂಟ್ ಸಂಖ್ಯೆ : ೧೩೯, ೧೨೧- ಮೇ ೨೦ ರ ೧೮೭೩ ರಂದು !
ಇದೇನಿರಬಹುದು ? ವಿಶ್ವದ ಅತ್ಯಂತ ಹಳೆಯ ಡೆನಿಮ್ ಕಂಪೆನಿ,"ಲೆವಿ ಸ್ಟ್ರಾಸ್" ತನ್ನ ಬ್ರಾಂಡನ್ನು ನೊಂದಾಯಿಸಿದ ಸಂಖ್ಯೆ ಮತ್ತು ಶುಭದಿನ !
'ಕಾರ್ಪಸ' ಎನ್ನುವುದು ಹತ್ತಿಗೆ ಒಂದು ಪರ್ಯಾಯವಾದ ಹೆಸರು. ಇದು ವಾಸ್ತವವಾಗಿ ಸಂಸ್ಕೃತ ಶಬ್ದ. ನಾವು ಕರೆಯುವ ಅರಳೆ/ಹತ್ತಿಗೆ, ಸುಮಾರು ೩೫ ಹೆಸರುಗಳಿವೆ. ಕಾಟನ್ ಎಂದು ಬಳಸುವ ಪದ ಇಂಗ್ಲೀಷ್ ಅಲ್ಲ. ಅರಬ್ಬೀ ವ್ಯಾಪಾರಗಾರರು ಹತ್ತಿಯನ್ನು ಯೂರೋಪಿನಲ್ಲಿ ಮಾರುವಾಗ ಅವರ ಬಾಷೆಯಲ್ಲಿ 'ಕೌಟೊನ್' ಎನ್ನುತ್ತಿದ್ದರು. ಅದನ್ನು ಇಂಗ್ಲೀಷ್ ಜನ ಹೇಳುವ ರೀತಿ ಹೀಗೆ.
ನಮ್ಮದೇಶದಲ್ಲೇ, ತಮಿಳರು ಪರಿತಿ, ತೆಲುಗರು ಪತ್ತಿ, ಬೆಂಗಾಲಿಗಳು ತುಲ, ಗುಜರಾತಿಗಳು ರೂ, ಹಿಂದಿ ಭಾಷಿಗಳು ರೂಯಿ, ಮರಾಠಿಗರು ಕಾಪೂಸ್, ಸ್ಪ್ಯಾನಿಷ್ ಜನ ಆಲ್ಗೋಡಿನ್, ಫ್ರೆಂಚ್ ಲೆ ಕಾಟೊನ್ ಇತ್ಯಾದಿ ಕರೆಯುತ್ತಾರೆ.