ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಏನೇ ಆಗಲಿ, ಒಳ್ಳೆಯದನ್ನೆ ಮಾಡಿ; ಮಾಡುತ್ತಲೆ ಇರಿ - ಒಂದು ಕೇಳು-ಪುಸ್ತಕ

ಸ್ನೇಹಿತರೆ,

ಇಂಗ್ಲಿಷಿನಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಆಡಿಯೊ ಪುಸ್ತಕ ಸಂಸ್ಕೃತಿ ಕನ್ನಡದ ಮಟ್ಟಿಗೆ ಹೇಳುವುದಾದರೆ ಇಲ್ಲವೆ ಇಲ್ಲ. ನಮ್ಮಲ್ಲಿ ಆಗಾಗ ಇನ್ಸ್‌ಪಿರೇಷನಲ್ ಆಡಿಯೊ ಕ್ಯಾಸೆಟ್‍ಗಳು ಬಿಡುಗಡೆಯಾಗುತ್ತವೆ ಎನ್ನುವುದನ್ನು ಬಿಟ್ಟರೆ ಇಡೀ ಗದ್ಯ ಪುಸ್ತಕವೆ ಆಡಿಯೊ ಆಗಿದ್ದು ಇಲ್ಲ. ಇತ್ತೀಚೆಗೆ ತಾನೆ ಕವಿ-ಪತ್ರಕರ್ತ ಜಿ.ಎನ್. ಮೋಹನ್‌ರವರು ತಮ್ಮ "ಪ್ರಶ್ನೆಗಳಿರುವುದು ಷೇಕ್ಸ್‌ಪಿಯರನಿಗೆ" ಕವನಸಂಕಲನದ ಕವನಗಳನ್ನು ಹಲವಾರು ಕನ್ನಡ ಸಾಹಿತಿಗಳಿಂದ ವಾಚಿಸಿ, ಅದನ್ನೆ ಸಿ.ಡಿ. ಮಾಡಿದ್ದಾರೆ. ಆ ನಿಟ್ಟಿನಲ್ಲಿ ಇದೇ ಮೊದಲ ಪ್ರಯತ್ನವೇನೊ.

ಕೆಂಟ್ ಕೀತ್‌ರವರು ಇಂಗ್ಲಿಷಿನಲ್ಲಿ ಬರೆದಿರುವ "Anyway – The Paradoxical Commandments" ಎಂಬ ಪುಸ್ತಕವಿದೆ. ಆ ಕಟ್ಟಳೆಗಳು ಹೀಗಿವೆ:

  • ಜನರು ತರ್ಕಹೀನರು, ಯುಕ್ತಾಯುಕ್ತ ಪರಿಜ್ಞಾನ ಇಲ್ಲದವರು, ಹಾಗೂ ಸ್ವಕೇಂದ್ರಿತ ಸ್ವಾರ್ಥಿಗಳು - ಏನೇ ಇರ್ಲಿ, ಅವರನ್ನು ಪ್ರೀತಿಸಿ.
  • ನೀವು ಒಳ್ಳೆಯದನ್ನು ಮಾಡಿದ್ದರೆ ಜನ ನೀವು ಸ್ವಾರ್ಥದ ದುರುದ್ದೇಶಗಳನ್ನಿಟ್ಟುಕೊಂಡು ಮಾಡುತ್ತಿದ್ದೀರಿ ಎಂದು ನಿಂದಿಸುತ್ತಾರೆ - ಯಾರು ಏನೇ ಹೇಳ್ಲಿ, ಒಳ್ಳೆಯದನ್ನು ಮಾಡಿ.
  • ನೀವು ಜೀವನದಲ್ಲಿ ಯಶಸ್ವಿಯಾದರೆ ನಿಮಗೆ ಖೋಟಾ ಸ್ನೇಹಿತರು, ನಿಜವಾದ ಶತ್ರುಗಳು ಸಿಗುತ್ತಾರೆ - ಆದ್ರೂ ಯಶಸ್ವಿಯಾಗಿ. 
  • ನೀವು ಇಂದು ಮಾಡುವ ಒಳ್ಳೆಯ ಕೆಲಸವನ್ನು ಜನ ನಾಳೆ ಮರೆತುಬಿಡುತ್ತಾರೆ - ಆದ್ರೂ ಒಳ್ಳೆಯದನ್ನು ಮಾಡಿ. 
  • ಪ್ರಾಮಾಣಿಕತೆ ಮತ್ತು ಮುಕ್ತ ಮನಸ್ಸು ನಿಮ್ಮನ್ನು ದುರ್ಬಲರನ್ನಾಗಿ ಮಾಡುತ್ತದೆ - ಏನೇ ಆಗ್ಲಿ, ಪ್ರಾಮಾಣಿಕರಾಗಿ, ಮುಕ್ತಮನಸ್ಸಿನಿಂದ ಇರಿ. 
  • ಉನ್ನತವಾದ ದೊಡ್ಡದೊಡ್ಡ ಆಲೋಚನೆಗಳ ಉನ್ನತ ಮನುಷ್ಯರನ್ನು ಕೀಳೂ ಆಲೋಚನೆಗಳ ಸಣ್ಣ ಜನರು ಹೊಡೆದುರುಳಿಸಬಹುದು - ಆದ್ರೂ ದೊಡ್ಡದಾಗಿಯೇ ಆಲೋಚಿಸಿ. 
  • ಜನ ದುರ್ಬಲರ, ದಲಿತರ ಬಗ್ಗೆ ವಿಶ್ವಾಸ ತೋರುತ್ತಾರೆ, ಆದರೆ ಸಬಲರನ್ನೆ ಹಿಂಬಾಲಿಸುತ್ತಾರೆ - ಹಾಗಿದ್ರೂ ಕೆಲವಾದರೂ ದಲಿತ-ದುರ್ಬಲರ ಪರ ಹೋರಾಡಿ. 
  • ನೀವು ವರ್ಷಗಳ ಕಾಲ ಕಟ್ಟಿದ್ದು ರಾತ್ರೋರಾತ್ರಿ ಹಾಳುಗೆಡವಲ್ಪಡಬಹುದು - ಏನೇ ಆಗ್ಲಿ, ಕಟ್ಟಿಯೇ ಕಟ್ಟಿ.
  • ಜನರಿಗೆ ನಿಜವಾಗಲೂ ಸಹಾಯ ಬೇಕು, ಆದರೆ ನೀವು ಅವರಿಗೆ ಸಹಾಯ ಮಾಡಿದರೆ ಅವರು ನಿಮ್ಮ ಮೇಲೆಯೇ ಆಕ್ರಮಣ ಮಾಡಬಹುದು - ಆದ್ರೂ, ಸಹಾಯ ಮಾಡಿ.
  • ನಿಮ್ಮ ಕೈಲಾದುದನ್ನು, ನಿಮ್ಮೆಲ್ಲ ಒಳ್ಳೆಯದನ್ನು ಜಗತ್ತಿಗೆ ನೀಡಿ; ಆಗಲು ಜನ ನಿಮ್ಮ ಹಲ್ಲುದುರಿಸಬಹುದು - ಆದ್ರೂ ನಿಮ್ಮೆಲ್ಲ ಒಳ್ಳೆಯದನ್ನು ಜಗತ್ತಿಗೆ ನೀಡಿ.

ಈ ಪುಸ್ತಕವನ್ನು ನಾನು "ಏನೇ ಆಗಲಿ, ಒಳ್ಳೆಯದನ್ನೆ ಮಾಡಿ; ಮಾಡುತ್ತಲೆ ಇರಿ." ಎಂಬ ಹೆಸರಿನಲ್ಲಿ

ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ- ನಾಲ್ಕನೆಯ ಕಂತು

"ಇಂಥ ಮದುವೆಗಳ ಏರ್ಪಾಟು ಒಳ್ಳೆಯದೆ?" ಎಂದು ನಾನು ಅವನನ್ನು ಕೇಳಿದೆ. ಅವನು ನನ್ನ ಕಡೆ ತಿರುಗಿ "ನೀನಾದರೆ ಏನು ಮಾಡುತ್ತಿದ್ದೆ?" ಎಂದು ಪ್ರಶ್ನಿಸಿದ. ನಾನು ಪ್ರೀತಿ -ಗೀತಿ ಅಂತ ಏನೋ ಹೇಳಹೊರಟಾಗ ಅವನಿಗೆ ನಗು ಬಂತು. ಅದೆಲ್ಲ ಬರೀ ಸಿನೆಮಾಕ್ಕೆ ಮಾತ್ರ ಅಂತ ಅವನು ಹೇಳಿದ. ನನಗೆ ನನ್ನ ಅಭಿಪ್ರಾಯ ಸಮರ್ಥಿಸಿಕೋಬೇಕು ಅಂತ ಅನ್ನಿಸಲಿಲ್ಲ.

ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ- ಮೂರನೆಯ ಕಂತು

ಬಸ್ಸಿನಲ್ಲಿ ಕೇಳದ, ಆದರೆ ಕೂಡುವ ಕ್ಷಣದಲ್ಲಿ ತಪ್ಪದೆ ಬರುವ ಮತ್ತೊಂದು ಪ್ರಶ್ನೆ ಇದೆ. ಏರುತ್ತಿರುವ ಅಂತಿಮ ಉದ್ರೇಕದ ಗಳಿಗೆಯಲ್ಲಿ ಮತ್ತೆ ಮತ್ತೆ ಕೇಳುತ್ತಾರೆ "ಎಷ್ಟು ಗಂಡಸರೊಂದಿಗೆ ಮಲಗಿದ್ದೀ ಹೇಳು, ಎಷ್ಟು ಜನರೊಂದಿಗೆ?

ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ- ಎರಡನೆಯ ಕಂತು

ತಾನು ಬರೆಯಬೇಕಾದ ಲೇಖನಗಳ ಸಂಬಂಧ ಹೆನ್ರಿ ದೇಶಾದ್ಯಂತ ತುಂಬಾ ಸುತ್ತಾಡಬೇಕಾಗಿ ಬರುತ್ತಿತ್ತು. ಮೊದಮೊದಲು ನಾನೂ ಅವನ ಜೊತೆ ಹೋಗುತ್ತಿದ್ದೆ. ಆದರೆ ಬರೀ ವಿಮಾನದಲ್ಲಿ ಹೋಗುವ, ದುಬಾರಿ ಹೋಟೆಲ್‌ಗಳಲ್ಲಿ ಇಳಿದುಕೊಳ್ಳುವ, ಬೇರೆ ಪತ್ರಕರ್ತರೊಂದಿಗೆ ಬಾರ್‌ಗಳಲ್ಲಿ ಕುಡಿಯುವ ಅವನ ಪ್ರವಾಸದ ರೀತಿ ನನಗೆ ಸರಿಬರುತ್ತಿರಲಿಲ್ಲ.

ಪರಂಪರೆಯನ್ನು ಕುಲಗೆಡಿಸುವ ಹೊಸ ಹವ್ಯಾಸ..... ಇನೋವೇಷನ್ ಹೆಸರಲ್ಲಿ!

ತಾರೀಕು ೩೧-೧೨-೨೦೦೭ದ ಉದಯವಾಣಿ ಪತ್ರಿಕೆಯಲ್ಲಿ "ಕಲಿ-ಯುಗ"ವೆಂಬ ಅಂಕಣದಲ್ಲಿ ಶ್ರೀಯುತ ಬೇಳೂರು ಸುದರ್ಶನರಿಂದ ಪ್ರಸ್ತಾವಿಸಲ್ಪಟ್ಟ ವಿಷಯವು ನನ್ನ ಗಮನ ಸೆಳೆದುದರಿಂದ ನನ್ನ ಸಹಬ್ಲಾಗಿಗರ ಗಮನಕ್ಕೂ ಈ ವಿಷಯ ಬರಲಿ ಎಂದು ಇಲ್ಲಿ ಇದನ್ನು ಬರೆಯುತ್ತಿದ್ದೇನೆ.

ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ

ಇವತ್ತು ರಾಮು ಮನೆ ಬಿಟ್ಟು ಹೋದ. ದುಡ್ಡು ಕೇಳಲು ಬಂದಿದ್ದ. ನನ್ನ ಕೈಲಾದಷ್ಟು ಕೊಟ್ಟೆ. ಅದನ್ನು ಎಣಿಸಿಕೊಂಡು ಮತ್ತಷ್ಟು ಕೇಳಿದ. ಕೊಡಲು ನನ್ನ ಹತ್ತಿರ ಇದ್ದರೆ ತಾನೆ!!

ಮುನ್ನಾರ್ ಎಂಬ ಸ್ವರ್ಗ

ಕೇರಳದ ಪೂರ್ವಭಾಗದ ಅರಣ್ಯಗಳಲ್ಲಿ ಸಮುದ್ರಮಟ್ಟದಿಂದ ಸುಮಾರು ೧೬೦೦ ಮೀಟರು ಮೇಲೆ ಇರುವ ಸುಂದರ ಗಿರಿಧಾಮ ಮುನ್ನಾರ್. ದಟ್ಟ ಕಾಡು ಹಾಗೂ ಅಪಾರ ಹರವಿನ ಚಹಾ ತೋಟಗಳ ನಡುವೆ ಬೈತಲೆಯಂತೆ ಕಾಣುವ ಕಪ್ಪು ರಸ್ತೆಗಳು, ರಸ್ತೆಯ ಇಕ್ಕೆಲಗಳಲ್ಲೂ ಸರಿದಾಡುವ ಮೋಡಗಳು, ಗಗನಚುಂಬಿ ಗಿರಿಶಿಖರಗಳು ಪ್ರವಾಸಿಗರ ಮನದಲ್ಲಿ ಕಲ್ಪನಾತೀತ ಭಾವನೆಗಳನ್ನು ಕೆರಳಿಸುವುದು ಅತ್ಯಂತ ಸಹಜ. ದಕ್ಷಿಣ ಇಂಡಿಯಾದ ಅತಿ ಎತ್ತರದ ಗಿರಿಶಿಖರ 'ಆನೈಮುಡಿ' ಯು ಪಶ್ಚಿಮ ಘಟ್ಟ ಶ್ರೇಣಿಯಲ್ಲಿರುವ ಈ 'ಮುನ್ನಾರ್' ಪರ್ವತಗಳಲ್ಲಿ ಇದೆ. ಸದಾ ಮೋಡಗಳಿಂದ ಮುಚ್ಚಿಕೊಂಡಿರುವ ಈ ಗಿರಿಶಿಖರದ ಎತ್ತರ ೨೬೯೫ ಮೀಟರುಗಳು (೮೮೪೨ ಅಡಿಗಳು) ಎಂದು ಲೆಕ್ಕಿಸಲಾಗಿದೆ. (ಕರ್ನಾಟಕದ ಅತಿ ಎತ್ತರದ ಗಿರಿಶಿಖರ 'ಮುಳ್ಳಯ್ಯನಗಿರಿ'ಯು ಬಾಬಾ ಬುಡನ್ಗಿರಿ ಪರ್ವತಶ್ರೇಣಿಯಲ್ಲಿದೆ. ಅದರ ಎತ್ತರ ೬೩೫೬ ಅಡಿಗಳು)

ನಾನು ಮತ್ತು ಜೆಸಿಂತ ನಮ್ಮ ಮಗಳಾದ ಸ್ನೇಹಾಳ ಹುಟ್ಟುಹಬ್ಬವನ್ನಾಚರಿಸಲು ಮುನ್ನಾರಿಗೆ ಹೋಗುವುದೆಂದು ನಿಶ್ಚಯಿಸಿ ಒಂದು ದಿನ ಮುಂಚಿತವಾಗಿ ಅಲ್ಲಿಗೆ ತಲುಪಿದೆವು. ಜುಲೈ ೬ನೇ ತಾರೀಖು ನಾವು ಮುನ್ನಾರಿಗೆ ಬಂದಿಳಿದಾಗ ಒಂದು ವಾರದ ಸತತಮಳೆಯಿಂದ ತೊಯ್ದಿದ್ದ ಮುನ್ನಾರ್ ನಿಧಾನವಾಗಿ ಗರಿಗೆದರುತ್ತಿತ್ತು. ಅಲ್ಲಿಯ ಜನಕ್ಕೆ ಅದು ಆಫ್ ಸೀಸನ್. ಹಾಗಾಗಿ ಆರುನೂರು ರೂಪಾಯಿಗಳ ಹೋಟೆಲ್ ರೂಮ್ ನಮಗೆ ನಾನೂರು ರೂಪಾಯಿಗೆ ಸಿಕ್ಕಿತು. ಬಿಸಿಬಿಸಿಯಾದ ನೀರಿನಲ್ಲಿ ಸ್ನಾನ ಮುಗಿಸಿ ಪ್ರಫುಲ್ಲರಾಗಿ ಹೊರಬಂದು ಹತ್ತಿರದ ಮೌಂಟ್ ಕಾರ್ಮೆಲ್ ಚರ್ಚ್ಗೆ ತೆರಳಿ ಪ್ರಾರ್ಥನೆ ಮಾಡಿ ಅಲ್ಲೇ ಎದುರಿನಲ್ಲೇ ಇದ್ದ ಶರವಣ ಭವನದಲ್ಲಿ ನಾಷ್ಟಾ ಮುಗಿಸಿದೆವು.

ಕನ್ನಡತಿ, ಪ್ರೊ. ಮಾಲತಿರಾವ್ ರವರಿಗೆ ಅಭಿನಂದನೆಗಳು.

ಬೆಂಗಳೂರು, ಜ.04: ಕನ್ನಡತಿ ಪ್ರೊ.ಮಾಲತಿ ರಾವ್ ಅವರ ಆಂಗ್ಲ ಕಾದಂಬರಿ 'ದಿ ಡಿಸ್ ಆರ್ಡರ್ಲಿ ಲಿ ವಿಮೆನ್' ಎಂಬ ಕೃತಿಗೆ 2007 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ತಮ್ಮ ಸುತ್ತಣ ಬದುಕು ಮತ್ತು ತಮ್ಮೊ2005 ರಲ್ಲಿ ಪ್ರಕಟವಾದ ಈಕೃತಿಯನ್ನು ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಯು ಆರ್. ಅನಂತಮೂರ್ತಿಯವರು ಅನಾವರಣಗೊಳಿಸಿದ್ದರು.

ಆಗಾಗ ಬೀಳ್ತಿದ್ದ ಕನಸು ಈಗ ಬೀಳ್ತಾ ಇಲ್ಲ

ಅಜಮಾಸು ಆರು ವರ್ಷದ ಹಿಂದಿನ ಸುದ್ದಿ. ಆವಾಗ ನನಗ ಮ್ಯಾಲಿಂದ ಮ್ಯಾಲೆ ಒಂದು ಕನಸು ಬೀಳ್ತಿತ್ತು. ಒಂದು ಗುಡ್ಡಾ, ಅದರ ಮ್ಯಾಲೇ ದೊಡ್ಡು ದೊಡ್ಡು ಕಲ್ಲುಬಂಡಿ. ಅದರ ಮೇಲೆ ನಾನು. ಕೆಳಗ ನೋಡಿದ್ರ ಅಂಜಿಕಿ ಆಗೋದು . ನಾನು ನಿಂತಿರೋ ಕಲ್ಲುಬಂಡಿ ಉರಳಿದ್ರ? ಅದು ಭದ್ರ ಅದನೋ ಇಲ್ಲೋ ?