ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಇ-ಮೇಯ್ಲುಗಳಲ್ಲಿ ವರ್ಡ್ ಡಾಕ್ಯುಮೆಂಟುಗಳು ಸೇರಿಸುವುದನ್ನ ನಾವುಗಳು ನಿಲ್ಲಿಸಬಹುದು (೨)

ಮುಕ್ತ ಸಾಫ್ಟ್ವೇರ್ ಪ್ರತಿಪಾದಕರಾದ ರಿಚರ್ಡ್ ಸ್ಟಾಲ್ಮನ್ ರವರ ಕೆಲವು ಲೇಖನಗಳನ್ನು ಕನ್ನಡಕ್ಕೆ ಅನುವಾದ ಮಾಡುವ ನನ್ನದೊಂದು ಪ್ರಯತ್ನ.
ಅನುವಾದದಲ್ಲಿ ಸಾಧ್ಯವಾದಷ್ಟು ನನ್ನ ಸುತ್ತಲು ಬಳಕೆಯಾಗುತ್ತಿರುವ ನನಗೆ ಹತ್ತಿರವಾದ ಭಾಷೆ ಬಳಸಲು ಪ್ರಯತ್ನಿಸಿದ್ದೇನೆ. ಇದು ಹಲವರಿಂದ ಹಲವು ರೀತಿ ಸ್ವೀಕೃತವಾಗಬಹುದು - ಲೇಖನ ಗಾಂಭೀರ್ಯ ಕಳೆದುಕೊಂಡಂತೆ ಕೆಲವರಿಗೆ ಅನಿಸಿಬಿಡಬಹುದು, ಕೆಲವರಿಗೆ ಇನ್ನೂ ಹತ್ತಿರವಾದ ಭಾಷೆಯಲ್ಲಿದ್ದಂತನಿಸಬಹುದು. ಒಟ್ಟಾರೆ ಸ್ಟಾಲ್ಮನ್ನರ ಆಲೋಚನಾ ಲಹರಿ ಹೆಚ್ಚು ಮಂದಿಗೆ ತಲುಪಿದರೂ ನನ್ನ ಪ್ರಯತ್ನ ಫಲ ನೀಡಿದಂತೆ.

ಅನುವಾದ ಪ್ರಯತ್ನದ ಎರಡನೇ ಕಂತು ಸುದೀರ್ಘ ಬಿಡುವಿನ ನಂತರ ಈಗ ನಿಮ್ಮ ಮುಂದಿದೆ. ಇದರ [:http://sampada.net/article/RMS-Word-Attachments|ಮೊದಲ ಕಂತು ಓದಲು ಇಲ್ಲಿ ಕ್ಲಿಕ್ ಮಾಡಿ]. - ಹರಿ ಪ್ರಸಾದ್ ನಾಡಿಗ್

ರಿಚರ್ಡ್ ಎಮ್ ಸ್ಟಾಲ್ಮನ್, ಜನವರಿ ೨೦೦೨
(ಕನ್ನಡಕ್ಕೆ: ಹರಿ ಪ್ರಸಾದ್ ನಾಡಿಗ್)
(ಎರಡನೇ ಕಂತು)

GNU[:http://sampada.net/article/RMS-Word-Attachments|(ಮೊದಲ ಕಂತಿನಿಂದ ಮುಂದುವರೆದ ಭಾಗ...)]
ಹೀಗೆ ನಿಮಗೆ ಬಂದ ಡಾಕ್ಯುಮೆಂಟಿನ ಬಗ್ಗೆ "ಇದು ನನಗೊಬ್ಬನಿಗೇ ಆದದ್ದು" ಎಂದು ನೀವು ಆಲೋಚಿಸಿದರೆ, ಅದನ್ನು ಸ್ವತಃ ನಿಭಾಯಿಸಲು ಪ್ರಯತ್ನಿಸೋದು ಸಹಜ. ಆದರೆ ಅದೊಂದು ಕ್ರಮಬದ್ಧವಾದ ಮಾರಕ ಅಭ್ಯಾಸ ಎಂದು ನೀವದನ್ನು ಗುರುತಿಸಿದಾಗ ಒಂದು ಹೊಸ ದೃಷ್ಟಿಕೋನ ಅನಿವಾರ್ಯವಾಗುತ್ತದೆ. ಆ ಫೈಲನ್ನು ನಿಮ್ಮ ತಂತ್ರಾಂಶ ಓದುವಂತೆ ಮಾಡುವುದು ಹಳೆಯ ಖಾಯಿಲೆಯ ಸೂಚನೆಗಳಿಗೆ ಚಿಕಿತ್ಸೆ ಕೊಟ್ಟಂತೆ. ಈ‌ ಖಾಯಿಲೆಯನ್ನು ಗುಣ ಮಾಡಲು ನಾವು ವರ್ಡ್ ಡಾಕ್ಯುಮೆಂಟುಗಳನ್ನು ಬಳಸಬೇಡಿ ಎಂದು ಜನರ ಮನವೊಪ್ಪಿಸಬೇಕು.

ಕಳೆದ ಒಂದು ವರ್ಷದಲ್ಲಿ ನನಗೆ ಬಂದ ವರ್ಡ್ ಆಟ್ಟಾಚ್ಮೆಂಟುಗಳಿಗೆ ಉತ್ತರಿಸುತ್ತ ವರ್ಡ್ ಫೈಲು ಬಳಸುವುದು ಕೆಟ್ಟ ಅಭ್ಯಾಸ ಎಂದು ಸೌಜನ್ಯದ ಸಂದೇಶ ಕಳುಹಿಸುವ ಅಭ್ಯಾಸ ಮಾಡಿಕೊಂಡಿದ್ದೇನೆ ಮತ್ತು ನನಗೆ ಕಳುಹಿಸಿದ್ದನ್ನು ರಹಸ್ಯವಲ್ಲದ ಫಾರ್ಮ್ಯಾಟಿನಲ್ಲಿ ಪುನಃ‌ ಕಳುಹಿಸಿ ಎಂದು ಕೇಳಲಾರಂಭಿಸಿದ್ದೇನೆ. ಹೀಗೆ ಮಾಡುವುದು ಓದಲು ಸಾಧ್ಯವಾಗದ, ಸ್ಪಷ್ಟವಾಗಿಲ್ಲದ ASCII ವಾಕ್ಯಗಳನ್ನು ಓದುವುದಕ್ಕಿಂದ ತುಂಬಾ ಕಡಿಮೆ ಕೆಲಸ. ಸಾಮಾನ್ಯವಾಗಿ ಜನ ಈ ವಿಷಯ ಅರ್ಥಮಾಡಿಕೊಳ್ಳುತ್ತಾರೆಂಬುದನ್ನು ಗಮನಿಸಿದ್ದೇನೆ, ಹಲವರು ಮತ್ತೆ ಬೇರೆಯವರಿಗೆ ವರ್ಡ್ ಫೈಲುಗಳನ್ನು ಕಳುಹಿಸುವುದಿಲ್ಲವೆಂದೂ ಹೇಳುತ್ತಾರೆ.

ಒಂದು ನಿಮಿಷ ನಕ್ಕು ಬಿಡೋಣ!

ಬಿಟ್ಟು ಪೋಗುವೆಯಾ?

ಗೆಳತಿ!

ಒಲವಿನೋಲೆಯನು ನೀನು ಬರೆಯುತಿರಲು

ಮರು ಓಲೆಯ ನಾನು ಬರೆಯುವೆನು

ಈಮೇಲು ಎಸ್ಸೆಮ್ಮೆಸ್ಸುಗಳ ಕಳುಹಲು

ತಪ್ಪದೇ ನಾನೂ ನಿನಗೆ ಕಳುಹುವೆನು

ಮೊಬೈಲಿನಲಿ ನೀನು ನಿಮಿಷ ಮಾತಾಡೆ

ನಾನು ಗಂಟೆಗಟ್ಟಲೆ ಮಾತನಾಡುವೆನು

ಗೆಳತಿ!

ಒಂದುವೇಳೆ ನೀನು ನನ್ನ ಬಿಟ್ಟು ಪೋದೊಡೆ

ಕ್ವಾರ್ಟರ್ ಏರಿಸಿ ನರ್ತನ ಮಾಡುವೆನು!

ಕೃತಕ ಬುದ್ಧಿಮತ್ತೆ ಬಳಸಿ ಸೈಬರ್ ಅವಳಿ

artificial intelligence ಬಗ್ಗೆ ಗೊತ್ತು ತಾನೇ? ಕೃತಕ ಬುದ್ಧಿಮತ್ತೆ ಬಳಸಿ,ನಿಮ್ಮಂತೆ ಯೋಚಿಸಿ,ಸಂಭಾಷಿಸುವ ನಿಮ್ಮ ಸೈಬರ್ ಅವಳಿ ರೂಪಿಸಲು ಸಂಶೋಧಕರು ಸಫಲರಾಗಿದ್ದಾರೆ. ಆ ಬಗ್ಗೆ ಸುಧೀಂದ್ರರ ಲೇಖನ ಓದಿ. AIಗೆ ಕೃತಕ ಬುದ್ಧಿಮತ್ತೆ ಅಲ್ಲದೆ ಬೇರೆ ಸೂಕ್ತ ಪದ ಇದೆಯೇ?

ಸ೦ನ್ಯಾಸ ಎ೦ದರೆ

ನಾನು ಮೊನ್ನೆ ಶ್ರಿ ರ೦ಗ ಅವರ ಸಾಹಿತಿಯ ಆತ್ಮ ಜಿಜ್ಞಾಸೆ ಓದುತ್ತಿದೆ.
ನಾನು ಓದಿರುವ ಉತ್ತಮ ಪುಸ್ತಕದಲ್ಲಿ ಒ೦ದು.
ಅಲ್ಲಿ ಸ೦ನ್ಯಾಸ ದ ಬಗ್ಗೆ ಈ ಮಾತುಗಳಿದ್ದವು.
************************************************

ಸ೦ನ್ಯಾಸ ಎ೦ದರೆ ಪ್ರಪ೦ಚದಿ೦ದ ನಿವೃತ್ತಿ ಎ೦ಬ ಕಲ್ಪನೆ ನಮ್ಮಲ್ಲಿ
ರೂಢವಾಗಿದೆ.ಈ ಕಾರಣಕ್ಕಾಗಿ ನಮ್ಮ ಸಮಾಜದಲ್ಲಿ ಯೋಗ್ಯತೆಯ

ಎಸ್ ಎಲ್ ಭೈರಪ್ಪನವರಿಗೆ NTR ಪ್ರಶಸ್ತಿ

ಈ ವರ್ಷದ NTR ಪ್ರಶಸ್ತಿಗೆ ಭೈರಪ್ಪನವರನ್ನು ಹೆಸರಿಸಲಾಗಿದೆ. ಇದೇ ಮೇ ೨೮ (NTR ಹುಟ್ಟುಹಬ್ಬ) ರಂದು ಪ್ರಶಸ್ತಿ ಪ್ರದಾನ ಮಡುತ್ತಾರಂತೆ.
ಹೆಚ್ಚಿನ ವಿವರಗಳಿಗೆ ಈ ಲಿಂಕ್ ನೋಡಿ:

[:http://www.hindu.com/2007/04/21/stories/2007042111980400.htm]

ಮಾಧ್ಯಮಗಳಿಗೆ ಸುದ್ದಿಯ ಕ್ಷಾಮ.

ಈಗೀಗ ಮಾಧ್ಯಮಗಳಿಗೆ ಸುದ್ದಿಯ ಕ್ಷಾಮವೇ? ಹೌದು ನನಗೆ ಹಾಗೇ ಅನಿಸುತ್ತದೆ. ಕೆಲವರ ವಯಕ್ತಿಕ ವಿಚಾರಗಳನ್ನು ವಾರಗಟ್ಟಲೆ ಅವರು ಬೇಡ ಬೇಡ ವೆಂದರೂ ಮಾಧ್ಯಮಗಳು ಕಾಡಿ ಬೇಡಿ ಪ್ರಸಾರ ಮಾಡುತ್ತಿರುವದನ್ನು ನೋಡಿದರೆ ಹಾಗೇ ಅನಿಸುತ್ತದೆ. ಉದಾಹರಣೆಗೆ ಐಶ ಮದುವೆ. ಅವರು ಯಾರನ್ನೂ ಕರೆಯದೆ ಮಾಧ್ಯಮಗಳು ದೂರವಿರಲಿ ಎಂದು ಹೇಳಿದರೂ ಕಾಡಿ ಬೇಡಿ ಕೊನೆಗೆ ಅವರ ಸೆಕ್ಯೂರಿಟಿಗಳಿಂದ ನಿಂದನೆಗೊಳಗಾದರೂ ಅದರ ಪ್ರಸಾರದ ಹಿಂದೆ ಬಿದ್ದುರುವ ಜನರನ್ನು ನೋಡಿದರೆ ನನಗೆ ಹಾಗೇ ಎನಿಸುತ್ತದೆ. ಮದುವೆ ಅವರ ವಯಕ್ತಿಕ ವಿಚಾರ. ಹೋಗಲಿ ಕರೆದರೆ ಹೋಗಿ ಪ್ರಚಾರ ಕೊಡಿ. ಇಲ್ಲದಿದ್ದರೆ ಚುಟುಕು ಸುದ್ದಿ ಪ್ರಸಾರ ಮಾಡಿ ಅದು ಬಿಟ್ಟು ಈರೀತಿ ಗೊಗರೆದರೆ ಏನು ಹೇಳಬೇಕು. ಹೋಗಲಿ ಓಬೇರಾಯ್ ಅವನ ಪಾಡಿಗೆ ಗೋ ಸಮ್ಮೇಳನಕ್ಕೆ ಹೋದರೆ ಅಲ್ಲಿಯೂ ಹೋಗಿ ಐಶ್ ಮದುವೆಗೆ ಯಾಕೆ ಹೋಗಿಲ್ಲ ಎಂದು ಅವರ ನಡುವಿನ ಸಂಬಂಧ ಮುರಿದು ಬಿದ್ದುರುವದು ಗೊತ್ತಿದ್ದರೂ ಕೇಳುವದು. ರಾಜಕುಮಾರ ಪುಣ್ಯತಿಥಿ ವಾರಗಟ್ಟಲೆ ಅವರ ಮನೆಯವರು ನಿಂತಿದ್ದು ಕುಂತಿದ್ದು ಎಲ್ಲ ಅವರಿಗೆ ಮುಜುಗರ ಆಗುವಷ್ಟು ಮತ್ತು ನೋಡುವವರಿಗೂ ಕೇಳುವವರಿಗೂ ತಲೆನೋವಾಗುವಷ್ಟು ಪ್ರಸಾರ ಮಾಡುವದು ಯಾವುದರ ಲಕ್ಷಣ? ಕುಚೋದ್ಯ ಕ್ಕಾಗಿ ದೊಡ್ಡವರನ್ನು ಅಭಿಪ್ರಾಯ ಕೇಳುವದು ಅವರು ಯಾವುದೋ ಪ್ರಜ್ಞೆಯಲ್ಲಿ ಉತ್ತರಿಸುವದು ಅದನ್ನೇ ವಾರಗಟ್ಟಲೆ ಗುಲ್ಲೆಬ್ಬಿಸುವದು. ಉದಾ ನಾರಾಯಣ ಮೂರ್ತಿಗಳ ವಿಚಾರ, ಹೋಗಲಿ ಅವರು ತಮ್ಮ ತಪ್ಪರಿತು ಕ್ಷಮೆಯನ್ನಾದರೂ ಕೇಳಿದರು ಆದರೆ ಹಿಂದೆ ಕಾರ್ನಾಡರು ಆದೊಡ್ಡತನವನ್ನೂ ತೋರಲಿಲ್ಲ. ಇದೆಲ್ಲಾ ಮಾಧ್ಯಮದವರು ಅತಿಬುಧ್ಧಿವಂತರೆಂದು ಕೊಂಡು ಮಾಡುವ ಕುಚೋದ್ಯಗಳು ಅವರ ಟೊಳ್ಳುತನವನ್ನು ಪ್ರದರ್ಶಿಸುತ್ತವೆ ಅಷ್ಟೆ. ಇದರಿಂದ ಅವರು ಸಮಾಜಕ್ಕೆ ಸಾಮಾನ್ಯಜನರಿಗೆ ಕೊಡುವ ತಪ್ಪುಪಾಠ ಸಾಕಷ್ಟು ಹಾನಿಮಾಡಬಲ್ಲದು. ಅಲ್ಲದೆ ಇದು ಕಾಲೆಳೆದು ದೊಡ್ಡವರನ್ನು ಹತೋಟಿಗೆ ಒಳಪಡಿಸಲಿಚ್ಚಿಸುವ ರಾಜಕಾರಣಿಗಳಿಗೆ ರಸಗವಳ.

ಗಾಂಧಿಜಯಂತಿಯಂದು ೨ ನಿಮಿಷದ ಸುದ್ದಿ ಬಿತ್ತರಿಸುವ ಮಾಧ್ಯಮಗಳು ರಾಜ ಜಯಂತಿಯನ್ನೋ, ಐಶ ಮದುವೆಯನ್ನೋ ಇಷ್ಟೊಂದು ವಿಜ್ರಂಭಿಸುವ ದನ್ನು ನೋಡಿದರೆ ಮಕ್ಕಳು ಇವರು ಗಾಂಧಿಗಿಂತ ದೊಡ್ಡವರಿರಬೇಕು ಎಂದು ಕೊಂಡರೆ ತಪ್ಪಿಲ್ಲ ಅಲ್ಲವೆ?

ಅನಂತ ಪಂಡಿತ

ನಿಮ್ಮ ಧರ್ಮ ನಿಮಗೆ, ನನ್ನ ಧರ್ಮ ನನಗೆ!

ಹಿಂದೆಲ್ಲ ಸಂಜೆ ಹೊತ್ತು ಆ ದಿನದ ಕೆಲಸ, ಚಾ ಕಾಫಿ ಮುಗಿದದ್ದೇ ಯಾವತ್ತಿನಂತೆ ಪುಟ್ಟುಭಟ್ಟರ ಅಂಗಡಿ ಮುಂಗಟ್ಟಿನ ಬೆಂಚುಗಳ ಮೇಲೆ ಕೂತು, ನೆಲಗಡಲೆ ತಿನ್ನುತ್ತಲೋ ಪೇಪರು ಓದುತ್ತಲೋ ಇಂದಿರಮ್ಮನ ಆಡಳಿತದಿಂದ ಹಿಡಿದು ಕಲ್ಲರಬೈಲಿನ ಸಂಕಪ್ಪನ ಕೊನೇ ಮಗಳು ಯಾರೊಂದಿಗೋ ಓಡಿಹೋದದ್ದರ ವರೆಗೆ ನಾಲ್ಕಾರು ಮಂದಿ ಹಿರಿಯರು ಸೇರಿ ಅದೂ ಇದೂ ಮಾತನಾಡುವುದಿತ್ತು.

ರವೇಸಿಸ್ ಮೂಲೆ

ಸಿಡ್ನಿಯ ಹೆಸರಾಂತ ಬೋಂಡೈ ಬೀಚಿನ (bondi beach) ಎದುರಿರುವ ರವೇಸಿಸ್ ಮೂಲೆ. ಸುಮಾರು ತೊಂಬತ್ತಕ್ಕೂ ಮಿಕ್ಕ ಶರತ್ಕಾಲದಂತೇ ಈ ಶರತ್ಕಾಲವೂ, ಸಂಜೆ ಸಮುದ್ರದ ಮೇಲಿಂದ ಬೀಸುತ್ತಿದ್ದ ತಂಪಾದ ಗಾಳಿಗೆ ಮೈಯೊಡ್ಡಿ ನಿಂತಿರುವುದು. ತಾಂತ್ರಿಕ ವಿವರಗಳು ಕೆಳಗೆ ಕೊಟ್ಟಿದ್ದೇನೆ.

ರವೇಸಿಸ್ ಮೂಲೆ