Sharanree naavu gokakdavari..neev yellyavari..
Namaskari..
naavu eega hosavagi illi serevari..nimgella parichaya madko bekantha illi vanderad line baredivari...
Namaskari..
naavu eega hosavagi illi serevari..nimgella parichaya madko bekantha illi vanderad line baredivari...
ಕೆಲವು ದಿನಗಳ ಹಿಂದೆ ಫೋನಾಯಿಸಿದ್ದ [:user/omshivaprakash|ಶಿವಪ್ರಕಾಶ್] ಮಾತಿನ ನಡುವೆ ಕನ್ನಡ ಹಾಗೂ ಲಿನಕ್ಸ್ ಮಟ್ಟಿಗೆ ನಾವುಗಳು ಮಾಡಬೇಕು ಎಂದುಕೊಂಡಿದ್ದ ಕೆಲಸಗಳು ಹಾಗೇ ಉಳಿದುಕೊಂಡದ್ದು ನೆನಪಿಸಿದ್ದ. "ಈ ವಾರ ಒಂದು ದಿನ ಸೀರಿಯಸ್ಸಾಗಿ ಕುಳಿತು ಅವುಗಳಲ್ಲಿ ಕೆಲವನ್ನು ಮಾಡಿ ಮುಗಿಸಬೇಕು ಕಣೋ ಹರಿ" ಎಂದಿದ್ದ. ಅವನು ಹಾಗೆ ಹೇಳಿದ್ದು ನನಗೆ ಎಂದಿನಂತೆಯೇ ಕೇಳಿ ಬಂದಿತ್ತು. ಇತ್ತೀಚೆಗಷ್ಟೆ ಸರಿಯಾದ ಇಂಟರ್ನೆಟ್ ಕನೆಕ್ಷನ್ ಬಂದದ್ದಾಗಿ ಕೆಲಸಗಳ ಬ್ಯಾಕ್ ಲಾಗ್ ಇದ್ದದ್ದರಿಂದ ನಾನೂ ಹೆಚ್ಚು ಏನೂ ಹೇಳದೆ ಸುಮ್ಮನಿದ್ದೆ.
ವಾರ ಬಹುತೇಕ ಕಳೆದು ವಾರಾಂತ್ಯ ಬರುತ್ತಲೇ ಮಧ್ಯಾಹ್ನ ಮತ್ತೆ ಅವ ಫೋನಾಯಿಸಿದಾಗ "ಈಗ ತಾನೆ ಇಂಟರ್ನೆಟ್ ಕನೆಕ್ಷನ್ ಸಿಕ್ತು - ಕೆಲಸವಿದೆ, ನೀನೆ ಮನೆಗೆ ಬಾ. ಇಲ್ಲೇ ಕುಳಿತು ಚರ್ಚೆ ಮಾಡೋಣ" ಎಂದೆ. ಆ ಟ್ರಾಫಿಕ್ ನಲ್ಲಿ ಇಷ್ಟು ದೂರ ಬರಲಿಕ್ಕಿಲ್ಲ ಎಂದು ಎಣಿಸಿದ್ದೆ. ಬೇಸರ ಮಾಡಿಕೊಳ್ಳದೆ, ಅರ್ಧ ಊರು ಹಾದು ನೇರ ಮನೆಗೇ ಬಂದುಬಿಟ್ಟ. ಲಿನಕ್ಸಿನ ಕುರಿತು, ಲಿನಕ್ಸಿನಲ್ಲಿ ಕನ್ನಡ ಉತ್ತಮಪಡಿಸುವ ಕುರಿತು ಅವನಿಗಿರುವ ಆಸಕ್ತಿ ನೋಡಿ ನನಗಾಶ್ಚರ್ಯವಾಯಿತು.
ನಾವುಗಳು ಮಾಡುತ್ತಿದ್ದ ಕೆಲಸಗಳಿಗೆ ನೆಲೆಯಾದ [:http://kannada.sampada.net/|ವೆಬ್ಸೈಟು], [:http://dev.sampada.net|ಹಾಗೂ ವಿಕಿ] ಎರಡೂ ಇತ್ತೀಚೆಗೆ ಹೆಚ್ಚು ಬಳಕೆಯಾಗದೆ ಹೋಗಿದ್ದರಿಂದ ಮೊದಲು ಅದನ್ನು ಸರಿಪಡಿಸಿ, ಚೊಕ್ಕಗೊಳಿಸಿ ಕೆಲವು ಚಿಕ್ಕ ಪುಟ್ಟ ಕೆಲಸಗಳನ್ನು ಮುಗಿಸಬೇಕು ಎಂದು ನಿರ್ಧರಿಸಿದೆವು. ಮಾಡಬೇಕಾದ ಕೆಲಸಗಳ ಒಂದು ದೊಡ್ಡ ಪಟ್ಟಿಯೇ ಇದೆ. ಆ ಪಟ್ಟಿಯನ್ನೂ ಸರಿಯಾಗಿ ಮಾಡದೇ ಹೋದರೆ?
ಏನೇನು ಮಾಡಬೇಕೆಂಬ ಪಟ್ಟಿ ಮಾಡಿಟ್ಟರಾಯಿತು ಎಂದಿನಷ್ಟೇ ಆಸಕ್ತಿಯಿಂದ ಕೆಲಸ ಕೈಗೆತ್ತಿಕೊಳ್ಳುವ [:user/shreekant_mishrikoti_0|ಮಿಶ್ರಿಕೋಟಿಯವರಂತಹ] ಹಲವರು ಲೋಕಲೈಸೇಶನ್ ಕಾರ್ಯ ಎಲ್ಲಿಯವರೆಗೂ ಬಂತು ಎಂದು ಮತ್ತೆ ಮತ್ತೆ ವಿಚಾರಿಸುತ್ತಿರುವಾಗ ಬೇರೆಯ ಎಷ್ಟೇ ಕೆಲಸವಿದ್ದರೂ ಇದನ್ನು ಪುನಶ್ಚೇತನಗೊಳಿಸುವ ಯಾವುದೂ ಕಾರ್ಯವಾಗದಿದ್ದರೆ?
(ಇ-ಲೋಕ-53)(16/12/2007)
ರಾಜ್ಕೀಯ ಎಲ್ಲಾದ್ರು ಒಗ್ಲಿ. ಇನ್ನೇನಾದ್ರು ಆಗ್ಲಿ. ನಮ್ಮ ಕರ್ ನಾಟ್ಕದ್ ಡಾಕಟರ್ಗೊಳ್ ಮಾತ್ರ ಒಳ್ಳೆ ಸೇವೆ ಮಾಡಿ ದೇಸದ್ ಎಸ್ರು ಉಳ್ಸವ್ರೆ. ಅದೇನ್ ಅಂತ ಇಂತ ಸಣ್ಣ- ಪುಟ್ಟ ಆಪ್ರೇಸನ್ನೇ ? ಆ ಬಿಆರ್ ದ ಲಕ್ಷ್ಮಿಗೆ ಈಗ ಒಸ ಜೀವ ಕೊಟ್ಟೊರ್ ಯಾರು. ? ನೀವೆ ಏಳಿ. ಇಂಗೆ ಒಳ್ಳೆಕಲ್ಸ್ ಮಾಡ್ಕಂಡು ಸುಕ್ವಾಗ್ ಬಾಳ್ರಿ ಮಕ್ಳ.
ಸಬಾಸ್.
ದೊಗ್ನಾಳ್ ಮುನ್ಯಪ್ಪಜ್ಜ.
ನಾನು ತುಂಬಾ ಚಿಕ್ಕವನಿದ್ದಾಗಿನಿಂದ ನೊಡುತ್ತಿದ್ದೀನಿ ಕಾಲ ಬದಲಾವಣೆ ನಮ್ಮ ಮನಸ್ಸಿಗೆ ಗೊತ್ತಿಲ್ಲದಂತೆ ಬದಲಾವಣೆ ಅಗುತ್ತಿದೆ ಅ ಹಿಂದಿನ ಮತ್ತು ಇಂದಿನ ಕಾಲಕ್ಕೆ ಉಡುಗೆ ತೊಡುಗೆ ಭಾವನೆ ಮನಸ್ಸಿನ ಪರಿಕಲ್ಪನೆ ಮಾನವ ಜಗತ್ತಿನ ಹೊಂದಾಣಿಕೆ ಕೇವಲ ಯಂತ್ರದಂತೆ ಬದಲಾಗುತ್ತಿದೆ ನಾವು ಮೊದಲಿನಂತೆ ಎಂದರೆ ನಮ್ಮ ಹಿಂದಿನ ತಲೆಮಾರಿನ ಜೀವನದ ಕಲ್ಪನೆಯನ್ನು ಸಹ ಮಾಡಿ
ಕೋಪವೆಂಬ ಧೂರ್ತನೊಬ್ಬ
ಭೂತದಂತೆ ಮೈಯ್ಯನೇರಿ
ಭುಸಭುಸನೆ ಉಸಿರನಿಟ್ಟು
ರಭಸದಿಂದ ಗುಡುಗುವವನೆ
ಕಣ್ಣು ಕೆಂಪೇರಿಸಿರುವೆ
ಕುರುಡಾಗಿ ವರ್ತಿಸುವೆ
ಕೇಳುವ ಮನಸ್ಥಿತಿಯ
ತ್ಯಜಿಸಿರುವ ಮೂರ್ಖನೆ
ಪಿತ್ಥವೇರಿದ ಚಿತ್ತ
ಸುಟ್ಟುಹಾಕುವ ಮುನ್ನ
ಸಹನೆ ಸಂಯಮವೆಂಬ
ದೀಪ ಬೆಳಗು ಗೆಳೆಯನೆ
ಕನ್ನಡದ ಕಾಗುಣಿತ
ತಿಳಿದವರಿಗಿದು ಕುಣಿತ
ತಿಳಿಯದವರಿಗೆ ಗಣಿತ
ಸತತ ಯತ್ನವ ಮಾಡುತ
ಹಲವು ಪುಸ್ತಕ ಓದುತ್ತಾ
ಗೆಳೆಯರೊಂದಿಗೆ ಹರಟುತ್ತಾ
ಭಾಷೆಯ ಬಳಕೆ ಬಯಸಿ
ಸಿಕ್ಕ ಸಲಹೆಗಳ ಸ್ವೀಕರಿಸಿ
ಚಿಗುರಿದ ಭಾವಗಳ
ಬಿಡಿಸುವ ಬಯಕೆಗಳ
ಜೊತೆ ನಿಮ್ಮೊಂದಿಗೆ
ನಡೆವ ಆಸೆ ಎನಗೆ
ಈ ಶಬ್ದಗಳು / ಶಬ್ದರೂಪಗಳು ನಿಮಗೆ ಗೊತ್ತೇ ? ಅಥವಾ ಮರೆತಿದ್ದೀರಾ?
( ಗೊತ್ತಿದ್ದಷ್ಟನ್ನು ವಿವರಿಸಿದ್ದೇನೆ , ನಿಖರವಾಗಿ ಗೊತಿಲ್ಲದ್ದನ್ನು ಬಿಟ್ಟಿದ್ದೇನೆ- ನಿಮಗೆ ಗೊತ್ತಿದ್ದರೆ ತಿಳಿಸಿ)
ಆರಪಾರ -- ಈ ಗಾಡೀಗೆ ಎಲ್ಲಾ ಡಬ್ಬಿಗೂ ಆರಪಾರ ಹಾದಿ ಇರತSದ-- ’ಥ್ರೂ’
ಹತ್ತೀಲೆ / ಹಂತೇಕ / ಹತ್ತರ -- ಹತ್ತಿರ
ಫರಾಳ - ನಾಷ್ಟ /ತಿಂಡಿ
ಊಟಾ-ಉಡಿಗಿ
ಇದು ಒಂದು ಸಣ್ಣ ಕಾದಂಬರಿ . ಹಿಂದಿಯಿಂದ ಅನುವಾದವಾದದ್ದು . ಕಾದಂಬರಿ ತನ್ನ ಸರಳ ಕತೆ , ತಮಾಷೆಯ ವಾಕ್ಯಗಳು , ಕನಸಿನಂಥ ಒಂದು ಲೋಕದ ವರ್ಣನೆಯಿಂದ ನಮ್ಮ ನೆನಪಿನಲ್ಲುಳಿಯುತ್ತದೆ.
ಏಕೆ ನಕ್ಕೆ..??
ಏಕೆ ನಕ್ಕೆ ಹೇಳು ಚೆನ್ನೆ
ಶೋಕ ನೀಗುವ ತೆರದಲಿ
ಎಲ್ಲ ಮರೆತು ಸ್ತಬ್ಧನಾದೆ
ನಿನ್ನ ನಗುವಿನ ಸಿರಿಯಲಿ
ಎಂದೂ ಕಣ್ಣಿಟ್ಟು ನೋಡಿದವಳಲ್ಲ
ಇಂದೇಕೆ ನನ್ನನೇ ದಿಟ್ಟಿಸಿರುವೆ
ನಾನೂ ಯಾರನು ನೋಡಿದವನಲ್ಲ
ನಿನ್ನನೇ ಕಾಣುತ ಏಕೆ ನಿಂತಿರುವೆ
ಯಾವುದಾಶಕ್ತಿ ನಿನ್ನ ಕಂಗಳಲಿ
ಮಾಡುತಿವೆನಗೆ ಸೆಳಕಿನ ಮೋಡಿ
ಮೀಟುತಿವೆ ಮನದ ತಂತುಗಳ
ನಸುನಗೆಯ ಮಾಟವ ಮಾಡಿ