ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪ್ರೀತಿಯ ಕಡಲು-ವಾಣಿ ರಾಮದಾಸ್

ನನ್ನ ಪ್ರೀತಿ ಒಂದು ಕಡಲಿನಂತೆ,
ತೋರಿಕೆಗೆ ಪ್ರಶಾಂತ, ಒಳಗೆ ನಿಗೂಡ
ರಹಸ್ಯಗಳನ್ನು ಬಚ್ಚಿಟ್ಟುಕೊಂಡ
ಕಡಲಿನ ಆಳವನು ಅಳೆಯಲಾಗದಂತೆ|

ಮನದಲಿ ನಿನ್ನ ಬಿಂಬ ಮೂಡಿ ಬಂದಾಗ,
ಸುಪ್ತ ಭಾವನೆಗಳು ಅಲೆ ಬಡಿದಾಗ,
ಚಂದಿರನ ಕಂಡ ತೆರೆಗಳು ಏಳುವಂತೆ
ಅಳೆಯಲಾಗದು ಈ ಪ್ರೀತಿಯ ಆಳವನು||

ಹಿಗ್ಗದ ಕುಗ್ಗದು ಈ ಪ್ರೀತಿಯ ಗಾತ್ರ
ಅಲೆಗಳಂತೆ ಮೇಲೆರಿ ಮರಳುತಿವೆ
ಬೀಸುವ ಕುಳಿರ್ಗಾಳಿ ಚಿತ್ತವ ಕಲಕಿ
ಕೂಗಿ ಮರಳಿ ಬಾ ಎಂದು ಮೊರೆ ಇಟ್ಟಿದೆ||

ಅದೇ ಸಖ, ನಾ ಹೇಳುವುದು
ನನ್ನ ಹೃದಯದಲಡಗಿರುವ
ನಿನ್ನ ಪ್ರೀತಿ ಒಂದು ಕಡಲಿನಂತೆ
ಕಡೆದಾಗ ಸಿಗುವ ಅಮೃತ ಕಲಶದಂತೆ||

ಕರ್ನಾಟಕ ಸಂಗೀತದ ರಸಾನುಭವ

 ದಾಕ್ಷಿಣಾತ್ಯ ಸಂಗೀತ ಕರ್ನಾಟಕ ಸಂಗೀತವೆಂದೇ ಪ್ರಸಿದ್ಧವಾದರೂ, ನಮ್ಮಲ್ಲಿ ಬಹುಪಾಲು ಜನಕ್ಕೆ ಶಾಸ್ತ್ರೀಯ ಸಂಗೀತದ ರಸಾಸ್ವಾದನೆ ಕಷ್ಟಸಾಧ್ಯ ಎಂಬುದು ಗಮನಕ್ಕೆ ಬಂದಿರುವ ವಿಷಯವೇ. ಹಾಗೆಂದು ನಮ್ಮವರಿಗೆ ಸಂಗೀತ ಪ್ರೀತಿ ಇಲ್ಲದೇ ಇಲ್ಲ. ಆದರೆ, ಸಾಮಾನ್ಯವಾಗಿ ಯಾವುವೇ ಶಾಸ್ತ್ರೀಯ ಕಲೆಯನ್ನು ಅನುಭವಿಸಿ ಆನಂದಿಸಲೂ ಒಂದು ಸ್ವಲ್ಪ ಮಟ್ಟಿನ ತಯಾರಿ ಬೇಕಾಗುತ್ತೆ ಎಂಬುದು ನನ್ನ ಅನುಭವ. ಇದು ಸಂಗೀತ-ಸಾಹಿತ್ಯ-ನೃತ್ಯ ನಾಟಕ ಎಲ್ಲಕ್ಕೂ ಹೊಂದಬಹುದಾದ ಮಾತಿದು. ಕೇಳುತ್ತ ಕೇಳುತ್ತ, ಸಂಗೀತಾನುಭವ ಹೆಚ್ಚಾಗುವುದು ಖಂಡಿತ.

ಕರ್ನಾಟಕ ಸಂಗೀತದ ರಸಾನುಭವ

 ದಾಕ್ಷಿಣಾತ್ಯ ಸಂಗೀತ ಕರ್ನಾಟಕ ಸಂಗೀತವೆಂದೇ ಪ್ರಸಿದ್ಧವಾದರೂ, ನಮ್ಮಲ್ಲಿ ಬಹುಪಾಲು ಜನಕ್ಕೆ ಶಾಸ್ತ್ರೀಯ ಸಂಗೀತದ ರಸಾಸ್ವಾದನೆ ಕಷ್ಟಸಾಧ್ಯ ಎಂಬುದು ಗಮನಕ್ಕೆ ಬಂದಿರುವ ವಿಷಯವೇ. ಹಾಗೆಂದು ನಮ್ಮವರಿಗೆ ಸಂಗೀತ ಪ್ರೀತಿ ಇಲ್ಲದೇ ಇಲ್ಲ. ಆದರೆ, ಸಾಮಾನ್ಯವಾಗಿ ಯಾವುವೇ ಶಾಸ್ತ್ರೀಯ ಕಲೆಯನ್ನು ಅನುಭವಿಸಿ ಆನಂದಿಸಲೂ ಒಂದು ಸ್ವಲ್ಪ ಮಟ್ಟಿನ ತಯಾರಿ ಬೇಕಾಗುತ್ತೆ ಎಂಬುದು ನನ್ನ ಅನುಭವ. ಇದು ಸಂಗೀತ-ಸಾಹಿತ್ಯ-ನೃತ್ಯ ನಾಟಕ ಎಲ್ಲಕ್ಕೂ ಹೊಂದಬಹುದಾದ ಮಾತಿದು. ಕೇಳುತ್ತ ಕೇಳುತ್ತ, ಸಂಗೀತಾನುಭವ ಹೆಚ್ಚಾಗುವುದು ಖಂಡಿತ.

ಜಾತಿನಿವಾರಣೆ ಮತ್ತು ಲೈಂಗಿಕ ಬೋಧನೆ

"ನಮ್ಮ ದೇಶ ಜಾತ್ಯಾತೀತ ದೇಶ", ನಮ್ಮದು "ಧರ್ಮ ನಿರಪೇಕ್ಷ ದೇಶ", ನಾವು "ದೇಶದ ಹಿಂದುಳಿದವರನ್ನು ಉದ್ಧರಿಸಿಬೇಕು" ಎಂಬ ದೊಡ್ಡ ದೊಡ್ಡ ಮಾತುಗಳನ್ನು ಭಾರತದಲ್ಲಿ ಕೇಳುತ್ತಾ ಬೆಳೆಯದ ಮಕ್ಕಳೇ ಇಲ್ಲ ಎಂದುಕೊಳ್ಳುತ್ತೇನೆ. ತಾತ್ವಿಕವಾಗಿ ಇದು ತುಂಬಾ ಘನವಾದ ಮಾತು. ಈ ಮಾತಿನಲ್ಲಿ ತುಂಬಾ ಮೌಲಿಕವಾದ ವಿಚಾರಗಳಿವೆ. ನಮ್ಮನ್ನು ನಾವು ನೋಡಿಕೊಳ್ಳುವ ರೀತಿಯನ್ನು ಇದು ನಿರ್ದೇಶಿಸುತ್ತದೆ, ನಿರೂಪಿಸುತ್ತದೆ. ಯಾವುದೋ ಅಮೂರ್ತವಾದ ನೆಲೆಯಲ್ಲಿ ನಮ್ಮ ದೇಶದ ಹಿರಿಮೆಯನ್ನು ನಾವು ಅರಿಯುವಂತೆ, ಕೊಂಡಾಡುವಂತೆ, ಸಂಭ್ರಮಿಸುವಂತೆ ಪ್ರೇರೇಪಿಸುತ್ತದೆ. ನಮ್ಮ ಮನಸ್ಸಿನಲ್ಲಿ ದೇಶದ ಬಗ್ಗೆ ಅಮೂಲ್ಯವಾದ ಪರಿಕಲ್ಪನೆಗಳನ್ನು ಬಿತ್ತುತ್ತವೆ.

ಆದರೆ ಈ ಎಲ್ಲ ವಿಚಾರವಾಹಿನಿಗಳು ನಮ್ಮ ದೇಶದ ಜಾತಿಯತೆಯನ್ನು, ಜಾತಿವಾದವನ್ನು ಅಳಿಸಲು ಸಾಧ್ಯವಾಗಿದೆಯೆ ಎಂಬುದು ಪ್ರಶ್ನೆ. ಇಂದಿಗೂ ಜಾತೀಯ ರಾಜಕೀಯ ಫಲ ಕೊಡುತ್ತಲೇ ಇರುವುದು, ಮೀಸಲಾತಿಯಿದ್ದೂ ಹಿಂದುಳಿದ ಜನಾಂಗಗಳು ಹಿಂದುಳಿದೇ ಇರುವುದು, ದಲಿತರ ಮತ್ತು ಹಿಂದುಳಿದವರ ಮೇಲೆ ಸಣ್ಣಪುಟ್ಟ ವಿಷಯಕ್ಕೂ ದೌರ್ಜನ್ಯ ನಡೆಯುವುದು ನಮ್ಮ ದೇಶದಲ್ಲಿ ನಡೆಯುತ್ತಲೇ ಬಂದಿದೆ. ಇಪ್ಪತ್ತೊಂದನೆಯ ಶತಮಾನದಲ್ಲೂ ಜಾತೀಯತೆ ನಮ್ಮ ನಡುವೆ ಪಿಡುಗಾಗಿ ಉಳಿದೇ ಇದೆ. ವೈಜ್ಞಾನಿಕವಾಗಿ ಜಾತಿಯ ಅಸಂಬದ್ಧತೆ ಗೊತ್ತಿದ್ದೂ, ಸಾಮಾಜಿಕವಾಗಿ ಅದರ ಕ್ರೌರ ಗೊತ್ತಿದ್ದೂ, ವಯ್ಯುಕ್ತಿಕವಾಗಿ ಅದರ ಪರಿಣಾಮ ಗೊತ್ತಿದ್ದೂ ಯಾಕೆ ಜಾತಿ ಹಾಗೆಯೇ ಉಳಿದಿದೆ? ಬೆಂಕಿ ಸುಡುತ್ತದೆ ಎಂದು ಗೊತ್ತಿದ್ದೂ ಅದರಿಂದ ಯಾಕೆ ದೂರ ಸರಿಯುತ್ತಿಲ್ಲ?

'ಸಂಪದ'ದ ಸದಸ್ಯರಿಂದ ಬರೆಯಲ್ಪಟ್ಟ ಪುಸ್ತಕಗಳು ಈಗ ಲಭ್ಯ...

ಕೆಲವು ದಿನಗಳ ಹಿಂದೆ [:http://sampada.net/user/modmani|ಮಂಜುನಾಥ್] "ನಾನೊಂದು ಪುಸ್ತಕ ಬರೆದಿರುವೆ. ಎಲ್ಲಿ ಹಾಕಬಹುದು?" ಎಂದು ಕೇಳಿದರು. ಅದರ ಪರಿಣಾಮ [:http://sampada.net/books|ಸಂಪದ ಸದಸ್ಯರ ಪುಸ್ತಕಗಳ ಪುಟ] ಹಾಗೂ ಪಟ್ಟಿ.

ಸದ್ಯಕ್ಕೆ ಅಲ್ಲಿ ಲಭ್ಯವಿರುವ ಸಂಪೂರ್ಣ ಪುಸ್ತಕ ಮಂಜುನಾಥರ [:http://sampada.net/books/3222/Huckleberry_Finn|ಹಕಲ್ಬೆರಿ ಫಿನ್] ಅನುವಾದ. ಉಳಿದೆಲ್ಲ ಪುಸ್ತಕಗಳ ಪುಟಗಳನ್ನು ಇನ್ನೂ ಒಟ್ಟುಗೂಡಿಸಲಾಗುತ್ತಿದೆ.

ಮಂಜುನಾಥರ ಪುಸ್ತಕ ಓದಿ ಹೇಗಿದೆಯೆಂದು ಕಾಮೆಂಟ್ ಮೂಲಕ ಅವರಿಗೆ ತಿಳಿಸಿ. ಅವರು ಬಹಳ ಖುಷಿ ಪಡುವರು.

ಸಂಪದದಲ್ಲಿ ಕೆಲವು ಬದಲಾವಣೆಗಳನ್ನು ಹಮ್ಮಿಕೊಂಡಿರುವುದರಿಂದ ಮುಂಬರುವ ವಾರಗಳಲ್ಲಿ ಎಲ್ಲ ಸಂಪದ ಸದಸ್ಯರಿಗೂ ತಮ್ಮ ತಮ್ಮ ಪುಸ್ತಕಗಳನ್ನು ಸಂಪದದಲ್ಲಿ ಪ್ರಕಟಿಸವ ಸವಲತ್ತು ನೀಡಲಾಗುವುದು (ಈಗಿನಂತೆಯೇ ಪ್ರಕಟಿಸಬೇಕೆಂದಿದ್ದರೆ ನನಗೊಂದು ಸಂದೇಶ ಕಳುಹಿಸಿ).

ಹಾಗೆ ಪ್ರಕಟಿಸಿದ ಪುಸ್ತಕದ ಸ್ವತ್ತು ನಿಮ್ಮದೇ. ಪುಸ್ತಕದಲ್ಲಿರುವ ಬರಹಗಳ ಜವಾಬ್ದಾರಿಯೂ ನಿಮ್ಮದೆ. ಓದಲು ಮಾತ್ರ ಸಂಪದ ಸಮುದಾಯವಲ್ಲದೆ ಸಂಪದದ ಮೂಲಕ ಎಲ್ಲ ಅಂತರ್ಜಾಲದ ಓದುಗರಿಗೂ ಲಭ್ಯ.

ಟೀಮ್ ಮಂಗಳೂರಿನ ಗಾಳಿಪಟ ಗಾಥೆ - ೨

ಟೀಮ್ ಮಂಗಳೂರಿನ ರೂವಾರಿಗಳೆಂದರೆ ಕೇವಲ ನಾಲ್ಕು ಮಂದಿ. ಸರ್ವೇಶ್ ರಾವ್, ಪ್ರಶಾಂತ್, ದಿನೇಶ್ ಹೊಳ್ಳ ಮತ್ತು ಗಿರಿಧರ್ ಕಾಮತ್. ಕಷ್ಟದ ದಿನಗಳಿಂದ, ಯಾರೂ ಕೇಳುವವರಿಲ್ಲದ ಸಮಯದಿಂದ ಏಳು ಬೀಳುಗಳನ್ನು ಅನುಭವಿಸುತ್ತ ತಂಡ ತನ್ನ ದೂರದೃಷ್ಟಿಯನ್ನು ಕಳಕೊಳ್ಳದಂತೆ ಪ್ರವಾಹದ ವಿರುದ್ಧ ಸಾಗಿ ಬಂದವರೆಂದರೆ ಈ ನಾಲ್ಕು ಮಂದಿ ಮಾತ್ರ. ಈ ನಾಲ್ವರ ಪ್ರಯತ್ನದಿಂದಲೇ ಟೀಮ್ ಮಂಗಳೂರು ತನ್ನ ಈಗಿನ ಯಶಸ್ಸಿನ ಹೊಸ್ತಿಲನ್ನು ತಲುಪಿದೆಯಲ್ಲದೇ ಬೇರೆ ಯಾರದೇ ಯಾವುದೇ ರೀತಿಯ ಕೊಡುಗೆ ಇಲ್ಲ.

ಕಾವೇರಿ ಪ್ರತಿಭಟನೆ ಮತ್ತು ಕರಾವಳಿ ಜಿಲ್ಲೆಗಳು

ಕಾವೇರಿ ನ್ಯಾಯ ಮಂಡಳಿಯ ತೀರ್ಪು ಬಂದ ನಂತರ 'ಕರ್ನಾಟಕಾದ್ಯಂತ ಪ್ರತಿಭಟನೆಗಳು ನಡೆದವು' ಆದರೆ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮಾತ್ರ ಇದಕ್ಕೆ ಸಂಬಂಧಿಸಿ ಏನೂ ನಡೆಯಲಿಲ್ಲ. ಸರಕಾರ ಪರೋಕ್ಷ ಬೆಂಬಲ ನೀಡಿದ್ದ ಬಂದ್ ನಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಭಾಗವಹಿಸಲಿಲ್ಲ. ಅರ್ಥಾತ್ ಯಾರೂ ಬಂದ್ ಮಾಡಲಿಲ್ಲ. ಇದೆಲ್ಲಾ ಏನನ್ನು ತೋರಿಸುತ್ತದೆ?

ಕರಾವಳಿ ಜಿಲ್ಲೆಗಳವರಿಗೆ ಕರ್ನಾಟಕದ ಹಿತದ ಕುರಿತು ಯಾವ ಕಾಳಜಿಯೂ ಇಲ್ಲವೇ?

ಈ ಮೊದಲು ವರ ನಟ ಡಾ.ರಾಜ್ ಕುಮಾರ್ ರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದಾಗಲೂ ಕರಾವಳಿ ಜಿಲ್ಲೆಗಳು ಹೆಚ್ಚು ಕಡಿಮೆ ಇಂಥದ್ದೇ ಪ್ರತಿಕ್ರಿಯೆಯನ್ನು ತೋರಿದ್ದವು. ಇದನ್ನು ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಸಾ.ರಾ. ಗೋವಿಂದು ಅವರು ಕರಾವಳಿ ಜಿಲ್ಲೆಯ ಜನಗಳ ವರ್ತನೆಯನ್ನು ಖಂಡಿಸಿದ್ದರು. ಕಾವೇರಿ ವಿಷಯದಲ್ಲಿ ಕರಾವಳಿ ಜಿಲ್ಲೆಗಳ ಜನರು ತೋರಿಸಿದ ನಿರ್ಲಿಪ್ತ ಮನೋಭಾವವನ್ನೂ ಹಲವರು ಖಂಡಿಸಿದರು. ಆದರೆ ಇದು ಹಿಂದಿನಷ್ಟು ಸುದ್ದಿಯಾಗಲಿಲ್ಲ.

ಕರ್ನಾಟಕದ ಇತಿಹಾಸ ಮತ್ತು ರಾಜಕಾರಣದ ಕುರಿತು ಬಹಳ ಅಧ್ಯಯನ ನಡೆಸಿರುವ ಜೇಮ್ಸ್ ಮೇನರ್ ಕೂಡಾ ಒಮ್ಮೆ ಕರಾವಳಿ ಜಿಲ್ಲೆಗಳನ್ನು ಸೋಷಿಯಲೀ ಎಕ್ಸೆಂಟ್ರಿಕ್ ಡಿಸ್ಟ್ರಿಕ್ಟ್ಸ್ ಎಂದು ಹೇಳಿದ್ದರು. ಕರಾವಳಿ ಜಿಲ್ಲೆಗಳು ಕರ್ನಾಟಕದ ಮುಖ್ಯವಾಹಿನಿಯ ಜತೆಗೆ ಒಂದಾಗಿಲ್ಲ ಎಂಬುದನ್ನು ಈ ಎಲ್ಲಾ ಅಂಶಗಳು ಎತ್ತಿ ತೋರಿಸುತ್ತಿವೆ. ಆದರೆ ಇದರ ಕಾರಣಗಳು ಮೈನ್ ಲ್ಯಾಂಡ್ ಕರ್ನಾಟಕ ಎಂದು ಕರೆಯಬಹುದಾದ ಪ್ರದೇಶಗಳ ಸಾಮಾಜಿಕ ಮನಸ್ಥಿತಿಯಲ್ಲಿದೆ ಎಂದು ನನಗನ್ನಿಸುತ್ತದೆ.

ಅನುಭವಾಮೃತ

ಸುಲಿದ ಬಾಳೆಯ ಹಣ್ಣಿನಂದದಿ
ಕಳಿದ ಸಿಗುರಿನ ಕಬ್ಬಿನಂದದಿ
ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ
ಲಲಿತವಹ ಕನ್ನಡದ ನುಡಿಯಲಿ
ತಿಳಿದು ತನ್ನೊಳು ತನ್ನ ಮುಕ್ತಿಯ
ಗಳಿಸಿಕೊಂಡರೆ ಸಾಲದೇ?