- ಚಿಂತೆ... -
- ಚಿಂತೆ... -
ಗೆಳತಿ...."
ಭಾರತದ ಜನಸಂಖ್ಯೆ ನೂರುಕೋಟಿ
ದಾಟಿತು ಎಂಬ ಚಿಂತೆಯೇ...
ಅಥವಾ ಅದರಲ್ಲಿ
ನಮ್ಮದಿಲ್ಲ ಒಂದು ಮಗು
ಎಂಬ ಚಿಂತೆಯೇ ....?
ವಾಲ್ಪಾಡಿ, ಪ್ರಸಾದ್ ಬಿ. ಶೆಟ್ಟಿ, ಫುಣೆ.
- Read more about - ಚಿಂತೆ... -
- Log in or register to post comments
- ಚಿಂತೆ... -
ಗೆಳತಿ...."
ಭಾರತದ ಜನಸಂಖ್ಯೆ ನೂರುಕೋಟಿ
ದಾಟಿತು ಎಂಬ ಚಿಂತೆಯೇ...
ಅಥವಾ ಅದರಲ್ಲಿ
ನಮ್ಮದಿಲ್ಲ ಒಂದು ಮಗು
ಎಂಬ ಚಿಂತೆಯೇ ....?
ವಾಲ್ಪಾಡಿ, ಪ್ರಸಾದ್ ಬಿ. ಶೆಟ್ಟಿ, ಫುಣೆ.
ಬದುಕಿಗಾಗಿ...
ಸಮಯ ನೀಡಿ
ಉಳಿವಿಗಾಗಿ...
ಭೇದ ಭಾವ ಮರೆಸಿ
ಒಳಿತಿಗಾಗಿ...
ಎಚ್ಚರಿಕೆ ವಹಿಸಿ
ಬದುಕಿಗಾಗಿ...
ಜಾಗ್ರತಿ ಮೂಡಿಸಿ
"ಎಡ್ಸ್" ಹರಡದಂತೆ ಮುಗ್ಧ ಜನರಿಗಾಗಿ...
("ಎಡ್ಸ್ನ್ನು ಅಳಿಸಿ; ದೇಶವನ್ನು ಉಳಿಸಿ")
ವಾಲ್ಪಾಡಿ, ಪ್ರಸಾದ್ ಬಿ. ಶೆಟ್ಟಿ, ಫುಣೆ.
- ಬಾ ಗೆಳತಿ... -
ಸೊಂಪಾದ ಗಿಡದಲ್ಲಿ ಹೂವೊಂದು ಅರಳಿ
ಕೆದಡಿದ ಕೆಸರಲ್ಲಿ ಕಮಲವೊಂದು ಅರಳಿ
ಬಾಳೆಂಬ ಮನದಲ್ಲಿ ಪ್ರೀತಿ ಬೀಜವನ್ನು ಬಿತ್ತಿ
ಒಲವೆಂಬ ಹಾದಿಯಲಿ ಹ್ರದಯ ರಾಗವನ್ನು ಮೀಟಿ
ತನುವೆಂಬ ಲತೆಗೆ ನಿನ್ನಾಸರೆಯೊಂದಿರಲು
ಒಂಟಿ ಜೀವನದ ಕತ್ತಲ ಬಾಳಿಗೆ ಬೆಳದಿಂಗಳ
ಶಶಿಯಾಗಿ ಬಾ ಗೆಳತಿ..........
:ವಾಲ್ಪಾಡಿ, ಪ್ರಸಾದ್ ಬಿ. ಶೆಟ್ಟಿ, ಫುಣೆ.
ಗೆಳೆತನ ಮಾಡಿದರೆ ನಮಗಿಂತ ಶ್ರೇಷ್ಟರೊಡನೆ ಮಾಡಬೇಕು ಇಲ್ಲವೇ ಸಮಾನರೊಡನೆಯಾದರೂ ಮಾಡಬೇಕು ಇವೆರೆಡು ಸಾಧ್ಯ ಆಗದಿದ್ದಲ್ಲಿ ಎಕಾಂಗಿರುವುದೇ ಲೇಸು.-ಬುದ್ಧ
ನನ್ನ ಪ್ರೀತಿಸಲು
ಇಲ್ಲಾ ದ್ವೇಷಿಸಲು
ಗುರುತಿಸಲು ಇಲ್ಲಾ
ಗುರುತಿಸದಿರಲು
ಬೆನ್ನು ತಟ್ಟಲು ಇಲ್ಲ
ಅದಕೆ ಚೂರಿ ಇಡಲು
ನನ್ನ ಒಪ್ಪಲು
ಇಲ್ಲಾ ಹೊರತಬ್ಬಲು
ಕೊನೆಗೆ ಬದುಕಲು
ಇಲ್ಲಾ ಸಾಯಲು
ದಯೆತೋರಿ ಒಂದು
ಅವಕಾಶ ನೀಡಿ
ಕೂಗುವೆನು ಎಲ್ಲರನು ಮನುಕುಲಕೆ
ಜಾತಿ ಮತಬೇಧವಿರದೆಡೆಗೆ
ರಾಗ ದ್ವೇಷಗಲಿಲ್ಲದೆಡೆಗೆ
ಪ್ರೀತಿಯಸಾಗರದೆಡೆಗೆ
ಏಕತಾನತೆಯ ಭೂತ
ಕಾಡುತಿಹುದು ಸತತ
ಬೆನ್ನತ್ತಿ ಬರುತಿದೆ
ನೊಂದ ನನ್ನ ಬಿಡದೆ
ಎಷ್ಟೊಂದು ಘೋರ
ಇನ್ನೆಷ್ಟು ದೂರ
ಏಕಾಂಗಿ ನಾನು
ಬಂದೊಮ್ಮೆ ನೋಡ
ಎಲ್ಲೆಲ್ಲು ಕಗ್ಗತ್ತಲು
ಸುತ್ತಿ ಬಳಸಿವೆ ನೂರಾರು
ದ್ವೇಷ ರಾಗದ ತಂತಿಗಳು
ಮೀಟಿದ ಹಾಡ ಕೇಳುವವರಾರು
ನಾ ಹೆಣೆದ ಜೇಡರ ಬಲೆ
ನನ್ನೇ ಮುತ್ತಿದೆ ಇಂದು
ತಿಳಿಯದೆ ಸೇರಿದ ನೆಲೆ
ಯಿಂದ ಹೊರಬರುವೆನು ನಾ ಎಂದು
ಹುಟ್ಟು ಅಲೆಮಾರಿಯಾದಂತಹ ನಾನು. ಕಣ್ಣಿಗೆ ಕಂಡಿದ್ದು ಮನಸ್ಸಿಗೆ, ನಾಟಿದ್ದು ನನ್ನ ಕ್ಯಾಮೆರಾ ಕಣ್ಣಿನಲ್ಲಿ ಬಂಧಿಸಿದ್ದೇನೆ.
ಮೂಲ : Denis R. Soreng
(.........)
ಎಂದಿನಂತೆ ನಾನು ಹಾವ್ಡಾ ಸ್ಟೇಸನ್ ತಲುಪಿದಾಗ ಸಂಜೆಯ ಮಬ್ಬುಗತ್ತಲು ಕವಿದಿತ್ತು. ಸ್ಟೇಸನ್ ಇಡೀ ದಿನವೆಲ್ಲ ದುಡಿದು ಮನೆಗೆ ಹೋಗಲು ಹಾತೊರೆಯುತ್ತಿದ್ದ ದೇಹ, ಮನಸ್ಸುಗಳಿಂದ ಗಿಜಿಗುಡುತ್ತಿತ್ತು. ನನಗೆ ಮನೆಗೆ ಹೋಗಲು ಒಂಚೂರೂ ಮನಸ್ಸಿರಲಿಲ್ಲ. ನನ್ನ ಗಂಡ,ನನ್ನ ನಡುವೆ ಪ್ರೀತಿ ಅನ್ನುವದು ಸತ್ತು ಮಲಗಿತ್ತು. ನಾವಿಬ್ಬರೂ ಪ್ರೀತಿಯಿಂದ ಮಾತಾಡಿ ವರುಸಗಳೇ ಆಗಿದ್ದವು. ಆಪೀಸಿನಲ್ಲಿ ನಡಿಯುವ ಲಗು ಹಾಸ್ಯಗಳೇ ನನ್ನ ನೀರಸ ಜೀವನಕ್ಕೆ ತುಸು ಜೀವ ತುಂಬುತ್ತಿದ್ದುದು. ಇನ್ನು ಕೆಲವೇ ದಿನಗಳಲ್ಲಿ ನಾವಿಬ್ಬರೂ ಬೇರೆಯಾಗುವವರಿದ್ದೇವೆ, ಅದಕ್ಕೆ ನನ್ನ ಗಂಡ ಕೊಡುವ ಸಬೂಬು ನನ್ನ ತಲೆ ಸರಿ ಇಲ್ಲ ಎಂಬುದು, ಬೇರೆ ಕಾರಣವೇ ಹೊಳೆಯದೆ ಹೋಯ್ತೆ??
ನಾನು ಆಗ ತಾನೆ ಬಂದ ರೈಲಿನೊಳಗೇ ಹೇಗೋ ತೂರಿಕೊಂಡೆ. ಕಾಲಿ ಇದ್ದ ಸೀಟು ಅದೇಗೋ ಸಿಕ್ಕು ಬಿಟ್ಟಿತು. ನನಗೆ ಸೀಟು ಸಿಕ್ಕಿದ್ದು ತುಂಬಾ ಸಮಾದಾನ ಆಯಿತು. ನೋಡ ನೋಡುತ್ತಿದ್ದಂತೆ ರೈಲು ಜನರಿಂದ ತುಂಬಿ ತುಳುಕತೊಡಗಿತು. ಆ ದಾರಿಯಲ್ಲಿ ಸಾಗುವ ದಿನದ ಕೊಟ್ಟ ಕೊನೆಯ ರೈಲು ಅದಾಗಿತ್ತು. ಗಿಜಿಗುಡುವ ಜನರಿಂದಾಗಿ ಗಾಳಿ ಆಡದೆ ಉಸಿರುಗಟ್ಟಿಸುವ ವಾತಾವರಣ ಉಂಟಾಯ್ತು. ಅದು ಜೂನ್ ತಿಂಗಳು. ಕಲ್ಕತ್ತೆಯ ಅತೀ ಬಿಸಿ ತಿಂಗಳು ಅದು. ಇದ್ದ ತುಸುವೇ ಗಾಳಿಯೊಳಗೆ ಜನರ ಬೆವರಿನ ವಾಸನೆ ಸೇರಿಕೊಂಡು ಎಲ್ಲ ಕಡೆ ಕೆಟ್ಟ ವಾಸನೆ ಹರಡಿತು. ನನಗೆ ವಾಂತಿ ಬಂದಂತಾಯ್ತು, ಹೇಗೋ ತಡೆದುಕೊಂಡೆ.
ಕಳೆದ ತಿಂಗಳು ಕಡಿಮೆ ಸಮಯದಲ್ಲೇ ಬನಶಂಕರಿಯ ಬಾಡಿಗೆ ಮನೆ ಖಾಲಿ ಮಾಡಿ ಹೊಸತೊಂದು ಬಾಡಿಗೆ ಮನೆಗೆ ಹೋಗುವ ಸನ್ನಿವೇಶ ಎದುರಾಯಿತು. ಹೆಚ್ಚು ಕಾಲ ಬಾಡಿಗೆ ಮನೆಗಳಲ್ಲೇ ಇದ್ದದ್ದರಿಂದ ಮನೆ ಬದಲಾಯಿಸುವುದು, ಸಾಮಾನು ಸಾಗಿಸುವುದು ಈಗ ಕಷ್ಟವೆನಿಸುವುದಿಲ್ಲ. ಕಷ್ಟವಾಗುವುದು ಹೊಸ ಜಾಗದಲ್ಲಿ ಇಂಟರ್ನೆಟ್ ಕನೆಕ್ಷನ್ ತೆಗೆದುಕೊಳ್ಳುವುದು!
ಹಿಂದಿದ್ದ ಮನೆಯಲ್ಲಿ ಏರ್ಟೆಲ್ ಬ್ರಾಡ್ ಬ್ಯಾಂಡ್ ಹಾಕಿಸಿಕೊಂಡಿದ್ದೆ. ಬಿ ಎಸ್ ಎನ್ ಎಲ್ ಶಿಫ್ಟ್ ಮಾಡೋದು ತಿಂಗಳುಗಟ್ಟಲೆ ಹಿಡಿಯಬಹುದೆಂದು ಅದರ ತರಲೆಯೇ ಬೇಡವೆಂದು ಅದರೊಂದಿಗೆ ಹಾಕಿಸಿಕೊಂಡಿದ್ದ ಬ್ರಾಡ್ ಬ್ಯಾಂಡ್ ಕನೆಕ್ಷನ್ ತೆಗೆಸಿಹಾಕಿಬಿಟ್ಟಿದ್ದೆ. ಈಗ ಹೊಸ ಜಾಗದಲ್ಲಿ ಏರ್ಟೆಲ್ ರವರ ಕವರೇಜ್ ಇಲ್ಲ. ಮರಳಿ .... ಪಾದಕ್ಕೆ ಎಂಬಂತೆ ಬಿ ಎಸ್ ಎನ್ ಎಲ್ ಗೆ ಹೊಸತೊಂದು ಅರ್ಜಿ ಹಾಕಿದೆ. ಅರ್ಜಿ ಹಾಕಿ ಒಂದು ತಿಂಗಳಾದರೂ ಏನೂ ಇಲ್ಲ.
ಈ ಮಧ್ಯೆ ಅನಿಲ್ ಅಂಬಾನಿ ಸಾರಥಿಯಾಗಿ ನಡೆಸುತ್ತಿರುವ ರಿಲಯನ್ಸ್ ನ (ವಿ)ಭಾಗ ಬೆಂಗಳೂರಿನಲ್ಲಿ [:http://en.wikipedia.org/wiki/Wimax|Wimax] ಹೊರತಂದಿದೆಯೆಂದು ಕೇಳಿದೆ. ಆ ದಿನವೇ ಹೋಗಿ ಅವರಿಗೊಂದು ಚೆಕ್ ಕೊಟ್ಟು, ಸಾಧ್ಯವಾದಷ್ಟು ಬೇಗ ಹಾಕಿಸಿಕೊಡಿ ಎಂದು ಕೇಳಿದೆ. ದುಡ್ಡು ಪಡೆದದ್ದಕ್ಕೆ ಚೀಟಿಯಿಲ್ಲ, ಪತ್ರವಿಲ್ಲ. ಒಂದು ವಾರದಲ್ಲೇ ಯಾವುದೋ ಕಂಪೆನಿಯ ಇಬ್ಬರು ನಾವು ರಿಲಯನ್ಸ್ ಕಂಪೆನಿಗೆ ಕಾಂಟ್ರಾಕ್ಟ್ ಮೇಲೆ ಕೆಲಸ ಮಾಡುವವರು ಎಂದು ಹೇಳಿಕೊಂಡು ಲ್ಯಾಪ್ ಟಾಪ್ ಹಿಡಿದು ಬಂದರು. ಬಂದವರು ಮೇಲೆ ಕೆಳಗೆ ಓಡಾಡುತ್ತ ಮಹಡಿಯ ಮೇಲೆ ಒಂದು ರಿಸೀವರ್ ಕುಳ್ಳಿರಿಸಿದರು. ಆ ರಿಸೀವರಿನಿಂದ ವೈರು ಕೆಳಗೆ ಎಳೆದು ತಂದು "ಸಿಗ್ನಲ್ ಸಿಗ್ತು, ಇಂಟರ್ನೆಟ್ ಬಂತು, ಹೋ" ಎಂದು ಕುಣಿದಾಡಿದರು. ರಿಲಯನ್ಸಿನ ಟವರ್ ಹತ್ತಿರವೇ ಇರೋದರಿಂದ ಬಹಳ ಒಳ್ಳೆಯ ಸಿಗ್ನಲ್ ಸಿಕ್ಕಿತ್ತಂತೆ.
ಗಂಡು ಹೆಣ್ಣಿನ ಒಲವು ಹೇಗಿರಬೇಕು ಎಂದು ಉಂಕಿಸುತ್ತಿದ್ದೆ. ಆಗ 'ಕ್ರಿಶ್ಣ' ಸಿನಿಮಾದ ಹಾಡು ನೆನಪಾಯಿತು. "ನೀನು ಬಂದ ಮೇಲೆ ..."
ಹಾಡಿನಲ್ಲಿ ಒಂದು ಸಾಲು ಹೀಗೆ ಬರುತ್ತದೆ. "ಒಂದಿಶ್ಟು ಹುಸಿಮುನಿಸು, ಒಂದಿಶ್ಟು ಸವಿಗನಸು" . ಇದರೊಳಗೆ ತುಂಬ ಆಳವಾದ ಅರಿತ ಇದೆ.