ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕಾವೇರಿ ತೀರ್ಪಿನ ಬಗ್ಗೆ ಪ್ರಧಾನಮಂತ್ರಿ ಮತ್ತು ರಾಷ್ಟ್ರಪತಿಗಳಿಗೆ ಬರೆಯೋಣ

ಗೆಳೆಯರೇ,

ಕಾವೇರಿ ನೀರು ಹಂಚಿಕೆಯ ತೀರ್ಪಿನಲ್ಲಿ ನಮಗೆ ಆಗಿರುವ ಅನ್ಯಾಯದ ಬಗ್ಗೆ ಪ್ರಧಾನಮಂತ್ರಿ ಮತ್ತು ರಾಷ್ಟ್ರಪತಿಗಳಿಗೆ ಬರೆಯೋಣ (ದಟ್ಸ್ ಕನ್ನಡದಲ್ಲಿ ಕೂಡ ಈ ಬಗ್ಗೆ ಬಂದಿದೆ). ದಯವಿಟ್ಟು ಹತ್ತು ನಿಮಿಷಗಳನ್ನು ಈಗಲೇ ಮೀಸಲಿಟ್ಟು ಬರೆಯೋಣ. ಆಮೇಲೆ ಅಂತ ಮುಂದೂಡುವುದು ಬೇಡ.

"ನಮ್ಮ ಒಂದು ಪತ್ರದಿಂದ ಏನು ತಾನೇ ಆಗಲು ಸಾಧ್ಯ?" ಅಂತಲೋ, ಅಥವಾ "ಅಯ್ಯೋ, ಇವೆಲ್ಲ ಎಲ್ಲಿ ಉಪಯೋಗ ಆಗುತ್ತೆ" ಎಂದೋ, ಸಿನಿಕವಾದ ಅನುಮಾನವನ್ನು ಮಾತ್ರ ದಯವಿಟ್ಟು ನಮ್ಮಲ್ಲಿ ಮೂಡಲು ಬಿಡುವುದು ಬೇಡ. ಈ ಅನ್ಯಾಯ ಬರಿಯ ಕಾವೇರಿ ನದಿಯ ನೀರಿನ ಹಂಚಿಕೆಗಾದದ್ದಲ್ಲ, ನಮ್ಮ ನಾಡು-ನುಡಿಗೇ ಬಿದ್ದಿರುವ ಪೆಟ್ಟು ಎಂದೇ ನನ್ನ ಭಾವನೆ. ಹಾಗಾಗಿ ಈ ವಿಚಾರದಲ್ಲಿ ಬೇರೆ ರೀತಿಯ ಅನುಮಾನಗಳು ನಮ್ಮ ಉತ್ಸಾಹವನ್ನು ಕೊಲ್ಲದಿರಲಿ. ನಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಲು ಇರುವ ಎಲ್ಲ ಸೌಲಭ್ಯಗಳನ್ನೂ, ನಮ್ಮ ಕೈಲಾದ ರೀತಿಯಲ್ಲಿ ಬಳಸಿಕೊಳ್ಳೋಣ. ನಮ್ಮ ಹತ್ತು ನಿಮಿಷ ತಾನೇ ನಾವು ವ್ಯಯ ಮಾಡಬೇಕಾಗಿರೋದು? ಇನ್ನೇನೋ ಅಲ್ಲವಲ್ಲ! ಬನ್ನಿ, ಕೈಜೋಡಿಸಿ. ಸಂಪದ ಓದುಗರಿಂದಲೇ ನೂರಾರು ಸಂಖ್ಯೆಯಲ್ಲಿ ಪತ್ರಗಳು ಹೋಗಲಿ ಎಂದು ನನ್ನ ಕಳಕಳಿಯ ವಿನಂತಿ.

ಪ್ರಧಾನಿಗಳಿಗೆ ಪತ್ರಿಸಲು ಈ ಕೊಂಡಿ ಬಳಸಿ: http://pmindia.nic.in/write.htm

ರಾಷ್ಟ್ರಪತಿಗಳಿಗೆ ಪತ್ರಿಸಲು ಈ ಕೊಂಡಿ ಬಳಸಿ: http://presidentofindia.nic.in/scripts/writetopresident.jsp

underestimate ಗೆ ಕನ್ನಡ ಪದ ತಿಳಿಸಿ

ನಮಸ್ಕಾರ,

 

underestimate ಗೆ ಕನ್ನಡ ಪದ ತುಂಬಾ ದಿನದಿಂದ ಹುಡುಕುತ್ತಿದ್ದೇನೆ, ಸಂಪದದಲ್ಲಿ ನಿರಾಶೆ ಆಗುವುದಿಲ್ಲ ಅಂದುಕೊಂಡಿದ್ದೇನೆ.

ರಾಜಕಾರಣಿಗಳೂ ಕಾವೇರಿಯೂ

ವಿಧಾನ ಸಭೆ ಕಾವೇರಿ ತೀರ್ಪು ಬರುವಾಗ ಸರಿಯಾಗಿ ಪ್ರಾರಂಭ ವಾಯಿತು. ಆದರೆ ಇಲ್ಲಿಯವರೆಗೂ ವಿಧಾನ ಪರಿಷತ್ತು ಒಂದು ದಿನದ ಕಲಾಪ ನಡೆಸಲು ಸಾಧ್ಯವಾಗಲಿಲ್ಲ. ಕರ್ನಾಟಕದ ರಾಜಕಾರಣಿಗಳು ಒಗ್ಗಟ್ಟಾಗಿ ಹೋರಾಡಬೇಕಾದ ಈ ಸನ್ನಿವೇಶ ದಲ್ಲಿ ಕನ್ನಡಿಗನಿಗೆ ಎಂಥಹ ಅನ್ಯಾಯ! ಇದಕ್ಕೆ ಮೊದಲನೆಯದಾಗಿ ಯಾವುದೇ ಕಾರಣಕ್ಕೆ ಕಲಾಪ ನಡೆಯದಿದ್ದರೆ ಆದಿನದ ಬೆತ್ತೆ ಅವರಿಗೆ ಸಿಗದಂತೆ ಕಾನೂನು ರಚಿಸುವದು ಅತ್ಯಾವಶ್ಯಕ. ಅಲ್ಲದೆ ಯಾವುದೇ ವರ್ಷ ಕನಿಷ್ಟ ೮೦% ರಷ್ಟು ದಿನ ಕಲಾಪ ನಡೆಯದೇ ಹೋದರೆ ಅಥವಾ ಯಾವನೇ ಎಮ್.ಎಲ್.ಏ ಅದರಲ್ಲಿ ಭಾಗವಹಿಸದೇ ಹೋದರೆ (ಅನಾರೋಗ್ಯ

ಹೊರತು ಪಡಿಸಿ) ಅವರ ಎಮ್.ಎಲ್.ಎ ಹುದ್ದೆ ರದ್ದಾಗಬೇಕು. ಆಗಮಾತ್ರ ಇವರು ಸ್ವಲ್ಪವದರೂ ಗಂಭೀರ ವಾಗಿ ಪ್ರಜೆಗಳ ಬಗ್ಗೆ ಚಿಂತಿಸಿಯಾರು. ಇಲ್ಲದಿದ್ದರೆ ಅಧ್ಯಕ್ಷರಬಗ್ಗೆ ಕಾಂಗ್ರೆಸ್ಸಿಗೆ ತಕರಾರು ಇದ್ದರೆ ಅದನ್ನು ಸಭೆಯಲ್ಲಿ ನಿಲುವಳಿ ಮಡಿಸಿ ಚರ್ಚಿಸಬಹುದಿತ್ತು. ಒಂದುವೇಳೆ ಅದು ಸಾಧ್ಯವಾಗದಿದ್ದರೆ ಇಂದಿನಪರಿಸ್ಥಿತಿಯಲ್ಲಿ ಕಾವೇರಿ ಬಗ್ಗೆ ಚರ್ಚೆ ಆದನಂತರ ಸದನದ ಹೊರಗೆ ಎಲ್ಲರೀತಿಯ ಚಳವಳಿ ನಡೆಸಬಹುದಿತ್ತು. ಆದರೆ ಅದಕ್ಕೆ ಹೆಚ್ಚಿನ ಶ್ರಮ ವಾಗುತ್ತದೆ. ಕಾರಣ ಒಳಗೆ ಸ್ವಲ್ಪಹೊತ್ತು ಗದ್ದಲ ವೆಬ್ಬಿಸಿ ಸದನ ಮುಂದೂಡುವಂತೆ ನೋಡಿಕೊಂಡು ನಂತರ ಸ್ವಂತ ಕೆಲಸ ಮಾಡಬಹುದು. ಸಂಬಳ ಎಲ್ಲವೂ ಸುಲಭವಾಗಿ ಸಿಗುತ್ತದೆ.

ಅದೇ ತಮಿಳು ರಾಜಕಾರಣಿಗಳು ಸರ್ವ ಪಕ್ಷ ಸಭೆಕರೆದು ಒಗ್ಗಟ್ಟಿನಿಂದ ಕರ್ನಾಟಕಕ್ಕೆ ಇನ್ನೂ ಹೆಚ್ಚಿನ ಟೊಪ್ಪಿ ಹಾಕಲು ತಯಾರಿ ನಡೆಸಿದ್ದಾರೆ. ಉ.ಪ್ರ ಸರ್ಕಾರದ ವಿಚಾರದಲ್ಲಿ ವಿಭಿನ್ನ ನಿಲುವೆ ತಳೆದ ಡಿ.ಎಮ್.ಕೆ. ನಂತರ ಕಾಂಗ್ರೆಸ್ಸ್ ನೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಸಹಕರಿಸಲು ಒಪ್ಪಿದೆ. ಇದರ ಅರ್ಥ ಸಧ್ಯದಲ್ಲೇ ನ್ಯಾಧಿಕರಣದ ತೀರ್ಪು ಗೆಜೆಟ್ ನಲ್ಲಿ ಪ್ರಕಟ ವಾಗುವದು ನಿಶ್ಚಿತ. ಆದ್ದರಿಂದ ಕರ್ನಾಟಕದ ಜನತೆ ಇಲ್ಲಿಯ ಎಲ್ಲಾ ರಾಜಕೀಯ ಪಕ್ಷಗಳನ್ನು ಕಾವೇರಿ ತೀರ್ಪಿನ ಚಳುವಳಿಯಿಂದ ಹೊರಗಿಡಬೇಕು. ಅವರು ನದೆಸುವ ಸೋಗಲಾಡಿ ಪ್ರತಿಭತನೆಗೆ ಕಪ್ಪು ಬಾವುಟ ಪ್ರದರ್ಶಿಸಿ ವಿರೋಧ ಪ್ರಕಟಿಸಬೇಕು.

ಶಾಲೆ !! ಅಕ್ಕಾ ನಿನ್ನ ಕ೦ದನ ಆಕ್ರ೦ದನವ ನೀ ಕೇಳೆ. !!

ಶಾಲೆ

ಅಕ್ಕಾ ನಿನ್ನ ಕ೦ದನ ಆಕ್ರ೦ದನವ ನೀ ಕೇಳೆ.
ಶಾಲೆಗೆ ಸೇರಿ ನಶಿಸೈತೆ ಸ್ವ೦ತ ಪ್ರಜ್ನಯ ಜ್ವಾಲೆ.

ಹಿತನುಡಿ

ಸ್ನೇಹ ಎಂಬುದು ಮರಳ ಮೇಲೆ ಬರೆದ ಅಕ್ಷರವಾಗದೆ

ಹೃದಯದ ಮೇಲೆ ಕೆತ್ತಿದ ಶಾಶನದ ಆಗಿರಬೇಕು.