ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

0೯. ರಾಜನೂ-ಪಾಳೇಗಾರನೂ,

ಮತ್ತೆ ಜೀವನ ಸೊಗಸಾಯಿತು. ಎಂದಿನಂತೆ ಹಗಲೆಲ್ಲಾ ಅಡಗಿ ಕುಳಿತು, ರಾತ್ರಿ ಪಯಣಿಸುವ ನಮ್ಮ ಜೀವನಚಕ್ರದ ಪ್ರತಿ ಘಳಿಗೆಯೂ ಅಮೃತಮಯವಾಗಿತ್ತು. ಒಮ್ಮೆ ಬೆಳ್ಗಾಗುವ ಹೊತ್ತಿನಲ್ಲಿ ವಾರಸುದಾರರಿಲ್ಲದ ಚಿಟ್ಟುದೋಣಿಯೊಂದು ತೇಲುತ್ತಿರುವುದು ಕಣ್ಣಿಗೆ ಬಿತ್ತು. ಕೂಡಲೇ ನಾನು ಈಜುತ್ತಾ ಹೋಗಿ, ನಮ್ಮ ತೆಪ್ಪದ ಬಳಿಗೆ ತಂದೆ. ಆ ದಿನ ಬೆಳಗಾದ ಮೇಲೆ ಎಂದಿನಂತೆ ನನಗೆ ನಿದ್ರೆ ಬರಲಿಲ್ಲ. ಚಿಟ್ಟುದೋಣಿಯನ್ನು ಹತ್ತಿ ಸುತ್ತೆಲ್ಲಾ ನೋಡಿ ಬರಲು ಹೊರಟೆ. ಆ ಜಾಗದಲ್ಲಿ ನಾವು ಪಯಣಿಸುತ್ತಿದ್ದ ನದಿಗೆ ದೊಡ್ಡ ತೊರೆಯೊಂದು ಬಂದು ಸೇರಿತ್ತಿತ್ತು. ಆ ದೃಶ್ಯ ನಯನ ಮನೋಹರವಾಗಿತ್ತು. ಅದನ್ನೇ ನೋಡುತ್ತಾ, ಆ ತೊರೆಯಲ್ಲೇ ಸ್ವಲ್ಪ ಮೇಲೆ ಹೋದರೆ ಕಾಡು ಹಣ್ಣುಗಳೇನಾದರೂ ಸಿಗಬಹುದೆಂಬ ಆಶೆಯಿಂದ ಅಲ್ಲಿ ನೋಡಲು ಹೋದರೆ, ಆ ತೊರೆಗೆ ಯಾವುದೋ ರಸ್ತೆ ಬಂದು ಸೇರುತ್ತಿರುವುದು ಕಣ್ಣಿಗೆ ಬಿತ್ತು. ಆ ರಸ್ತೆಯಲ್ಲಿ ಇಬ್ಬರು ಓಡಿ ಬರುತ್ತಿರುವುದೂ ಕಾಣಿಸಿತು. ಅವರ ರೀತಿ ನೋಡಿದರೆ ಅವರು ನನ್ನನ್ನು ಅಟ್ಟಿಸಿಕೊಂಡು ಬರುತ್ತಿದ್ದಾರೇನೋ ಎನಿಸಿತ್ತಿತ್ತು. ಅಲ್ಲಿಂದ ಕೂಡಲೇ ಓಡಿಬಿಡಬೇಕೆಂದುಕೊಂಡು ಯೋಚಿಸುತ್ತಿರುವಾಗಲೇ ಅವರಲ್ಲೊಬ್ಬ, ನನ್ನನ್ನು ಕಂಡು "ಸಹಾಯ... ಸಹಾಯ..." ಎಂದು ಕೂಗಿದ. ಅದನ್ನು ನೋಡಿ ನನ್ನ ಅನುಮಾನ ದೂರವಾದರೂ, ಇವರಿಗೆ ಸಹಾಯ ಮಾಡುವುದೋ ಬಿಡುವುದೋ ದ್ವಂದ ಶುರುವಾಯಿತು. ಆ ಸ್ಥಿತಿಯಲ್ಲಿರುವಷ್ಟರಲ್ಲೇ ಅವರಿಬ್ಬರೂ ನನ್ನ ದೋಣಿಯ ಬಳಿ ಸಾರಿ, ಒಳ ಹಾರಿ "ದೂರ ಎಲ್ಲಾದರೂ ನಡಿಯಪ್ಪ.. ಬೇಗ...ಬೇಗ.." ಎಂದರು. ಮೂವರ ತೂಕಕ್ಕೆ ಆ ದೋಣಿ ಸಾಲದಾದರೂ ಅವರ ಪರಿಸ್ಥಿತಿಯೇನಿರಬಹುದೋ ಎಂದು ಯೋಚಿಸಿ ಏನೂ ಮಾತಾಡದೇ ಬೇಗ ಬೇಗ ಹುಟ್ಟು ಹಾಕಲಾರಂಭಿಸಿದೆ.

ಸಂಪದ - ನಿನ್ನ ಮೇಲೆ ಒಂದು ಪದ(ದ್ಯ)

    ಸಂಪದಿಗರ ನಡುವೆ
    ನಾನೊಂದು 
   ಇರುವೆ
    ದಿನವೂ ಬ್ಲಾಗುತ್ತಿರುವೆ
   ಙ್ನಾನದ ಮೆಟ್ಟಿಲ ಏರುತ್ತಿರುವೆ 
   ಓ ಸಂಪದವೆ
  ನಿನಗಾಗಿ ನಾ ದಿನವೂ ಕಾದಿರುವೆ

ಇ-ಲೋಕ-11(22/2/2007)

ಯಾವ ಜನ್ಮರಾಶಿಯವರು ದೀರ್ಘಾಯುಷಿಗಳು?

ರಾಶಿ ರಾಶಿ ದತ್ತಾಂಶಗಳನ್ನು ಜಾಲಾಡಿ, ಅದರಿಂದ ಉಪಯುಕ್ತ ಮಾಹಿತಿಯನ್ನು ಸೋಸಿ ತೆಗೆಯುವ ಡಾಟಾಮೈನಿಂಗ್ ತಂತ್ರಜ್ಞಾನವೀಗ ಎಲ್ಲೆಡೆ ಬಳಕೆಯಾಗುತ್ತಿದೆ. ಮಾರ್ಕೆಟಿಂಗ್ ಕ್ಷೇತ್ರದಲ್ಲಂತೂ ಉತ್ಪನ್ನಗಳ ಮಾರಾಟ ಹೆಚ್ಚಸಲು ಯಾವ ತಂತ್ರ ಅನುಸರಿಸಬೇಕು ಎಂದು ನಿರ್ಧರಿಸಲು ಡಾಟಾಮೈನಿಂಗ್ ಬಳಸಿಕೊಳ್ಳುವುದು ಸಾಮಾನ್ಯ. ಗಣಿಯನ್ನಗೆದು ಅಮೂಲ್ಯ ವಸ್ತುಗಳನ್ನು ಹೊರತೆಗೆದರೆ, ದತ್ತಾಂಶವನ್ನಗೆದು ಜ್ಞಾನವನ್ನು ಹೊರತೆಗೆಯುವುದು ಸಾಧ್ಯ.
ಇತ್ತೀಚೆಗೆ ತಜ್ಞರು ಜನ್ಮರಾಶಿ ಮತ್ತು ರೋಗಗಳಿಗೆ ಸಂಬಂಧ ಇದೆಯೇ ಎಂದು ತಿಳಿಯಲು ಈ ತಂತ್ರ ಅನುಸರಿಸಿದರು.ಕೆನಡಾದ ಒಂಟಾರಿಯೋದ ದಶಲಕ್ಷ ಜನರಿಗೆ ಸಂಬಂಧಿಸಿದ ಮಾಹಿತಿಯನ್ನು ಜಾಲಾಡಿದಾಗ ಮೇಲ್ನೋಟಕ್ಕೆ ಜನ್ಮರಾಶಿ ಮತ್ತು ರೋಗಗಳಿಗೆ ಸಂಬಂಧ ಇದೆ ಎಂಬ ಅಂಶ ಕಂಡು ಬಂತು. ಸುಮಾರು ಇಪ್ಪತ್ತನಾಲ್ಕು ಅಂಶಗಳಲ್ಲಿ ಜನ್ಮರಾಶಿ ಮತ್ತು ರೋಗಗಳಿಗೆ ಸಂಬಂಧ ಕಂಡುಬಂತು. ಉದಾಹರಣೆಗೆ ಕುಂಭರಾಶಿಯವರಿಗೆ ಹೃದಾಯಾಘಾತ ಹೆಚ್ಚು, ತುಲಾದವರು ದೀರ್ಘಾಯುಷಿಗಳು ಎಂಬಿತ್ಯಾದಿ. ಆಸ್ಟಿನ್ ಎಂಬ ಅಂಕಿಅಂಶಶಾಸ್ತ್ರಜ್ಞ ಇದನ್ನು ಮತ್ತಷ್ಟು ಪರಿಶೀಲಿಸಬಯಸಿದ. ಆತ ದಶಲಕ್ಷ ಜನರನ್ನು ಎರಡು ಗುಂಪು ಮಾಡಿದ. ಮೊದಲ ಗುಂಪಿನ ಐದು ಲಕ್ಷ ಜನರ ದಾಖಲೆಗಳನ್ನು ಜಾಲಾಡಿ ಕಂಡುಕೊಂಡ ಜ್ಞಾನವು ಸತ್ಯವಾದರೆ,ಅದು ಉಳಿದ ಐದು ಲಕ್ಷ ಜನರಿಗೂ ಸತ್ಯವಾಗಬೇಕು ತಾನೇ? ಆದರೆ ಮೊದಲ ಐದು ಲಕ್ಷ ಜನರ ಡಾಟಾಮೈನಿಂಗ್‌ನಿಂದ ಕಂಡುಕೊಂಡ ವಿಷಯಗಳು ಎರಡನೇ ಗುಂಪಿಗೆ ಅನ್ವಯವಾಗದಿದ್ದರೆ,ಅದು ನಂಬಲರ್ಹ ಅಲ್ಲ ಎಂದು ಅವನ್ನು ಕೈಬಿಟ್ಟಾಗ ಯಾವ ಅಂಶವೂ ಜನ್ಮರಾಶಿಗೂ ರೋಗಗಳಿಗೂ ಸಂಬಂಧವಿರುವುದನ್ನು ಖಚಿತ ಪಡಿಸಲಿಲ್ಲ.

0೮. ಗ್ಯಾಂ‌ಗರ್ ಫೋರ್ಡ್ ಮನೆತನ.

ಆ ರಾತ್ರಿ ಪೂರ್ಣ ಕಪ್ಪಾಗಿದ್ದಿತು. ಅಂದು ಮಂಜು ಮುಸುಕಿದ್ದ ರಾತ್ರಿಗಿಂತಲೂ ಇಂದು ಇರುಳು ಮಸುಕಿದ್ದ ರಾತ್ರಿ ಕುರುಡಾಗಿತ್ತು. ಕೆಲವೇ ಅಡಿಗಳ ದೂರದಲ್ಲಿರುವ ವಸ್ತುಗಳೂ ಕಾಣುತ್ತಿರಲಿಲ್ಲ. ನಾವು ಬಹು ಹೊತ್ತಿನವರೆಗೂ ನಮ್ಮ ತೆಪ್ಪದಲ್ಲಿ ಕುಳಿತು ನದಿಯ ಹರವಿನೊಡನೆ ತೇಲುತ್ತಿದ್ದೆವು. ಆಗ ಸ್ವಲ್ಪ ದೂರದಲ್ಲಿ ಮಸುಕಾದ ಕಲೆಯೊಂದು ಕಾಣಿಸಿತು. ಆ ಕಲೆ ನಿಧಾನವಾಗಿ ಬೆಳೆಯುತ್ತಾ ಬಂದಂತೆ, ಅದರ ದೀಪಗಳು ನಮಗೆ ಕಂಡವು. ಅದೊಂದು ದೊಡ್ಡ ಉಗಿದೋಣಿ ಇರಬೇಕೆಂದು ನಾನು ನಿರ್ಧರಿಸಿದೆ. ಅದು ನೇರವಾಗಿ ನಮ್ಮೆಡೆಗೇ ಬರುತ್ತಿತ್ತು. ಆ ಹಡಗಿನವರಿಗೆ ಸೂಚನೆ ಕೊಡಲು ಲಾಟೀನು ಹಚ್ಚಿದೆ. ಆದರೂ ಅದರ ವೇಗ ತಗ್ಗಲಿಲ್ಲ. ದಿಕ್ಕು ಬದಲಾಗಲಿಲ್ಲ. ಕೆಲವೊಮ್ಮೆ ಇಂತಹ ದೊಡ್ಡ ಹಡಗುಗಳು ಹೀಗೆ ಬಂದು ಚಟಕ್ಕನೆ ದಿಕ್ಕು ಬದಲಾಯಿಸುವುದುಂಟು. ಆ ಹಡಗಿನ ಕ್ಯಾಪ್ಟನ್ನರು ತಮ್ಮ ಕೈಚಳಕ ತೋರಲು ಹೀಗೆ ಮಾಡುತ್ತಾರೆ. ಆ ಉಗಿದೋಣಿಯ ಯಂತ್ರಗಳ ಸದ್ದೂ ಹುಟ್ಟು ಬಡಿಯುತ್ತಿರುವ ಸದ್ದೂ ನಿಚ್ಚಲವಾಗಿ ಕೇಳಲಾರಂಭಿಸಿತು. ಅದು ತುಂಬಾ ದೊಡ್ಡ ದೋಣಿ, ಹಡಗಿನಂತೆಯೇ ಇತ್ತು. ಆ ರಾತ್ರಿಯಲ್ಲಿ ಅದು ದೊಡ್ಡ ಕರಿಮೋಡವೊಂದನ್ನು ಮಿಣುಕು ಹುಳುಗಳು ಮುತ್ತಿದರೆ ಹೇಗೆ ಕಾಣಬಹುದೋ ಹಾಗೇ ಕಾಣುತ್ತಿತ್ತು. ಇದ್ದಕ್ಕಿದ್ದಂತೆ ಆ ದೋಣಿಯಲ್ಲೇನೋ ದೊಡ್ಡ ಸದ್ದಾಯಿತು. ಎಚ್ಚರಿಕೆಯ ಗಂಟೆಯ ಸದ್ದೂ, ಕೂಗುವ ಧ್ವನಿಗಳೂ, ಎಂಜಿನ್ನಿನ ಶಬ್ದವನ್ನೂ ಮೀರಿ ಕೇಳಲಾರಂಭಿಸಿತು. ಅ ಹೆದ್ದೋಣಿಯಂತೂ ನೇರ ನಮ್ಮೆಡೆಗೇ ಧಾವಿಸಿ ಬರುತ್ತಿತ್ತು. ನಾವು ನಿಸ್ಸಹಾಯಕರಾಗಿದ್ದೆವು. ನೇರ ನಮ್ಮ ತೆಪ್ಪದ ಮಧ್ಯಕ್ಕೆ ಗುದ್ದಿಬಿಟ್ಟಿತು. ಜಿಮ್ ಒಂದು ಕಡೆಗೆ ನಾನೊಂದು ಕಡೆಗೆ ಉರುಳಿಬಿಟ್ಟೆವು.

0೭. ಜಿಮ್‍ನನ್ನುಳಿಸಿದ ಹಕ್.

ಎಲ್ಲಾ ಸರಿಯಾಗಿದ್ದು ಇದೇ ವೇಗದಲ್ಲೇ ನಾವು ಹೋಗುತ್ತಿದ್ದರೆ, ಕೈರೋ ಇನ್ನು ಮೂರೇ ರಾತ್ರಿಗಳಷ್ಟು ದೂರದಲ್ಲಿತ್ತು. ಅಲ್ಲಿ ಹೋದ ಕೂಡಲೇ ತೆಪ್ಪವನ್ನು ಮಾರಿ, ಓಡಿಯೋ ಕಡೆಯ ಮುಕ್ತ ರಾಜ್ಯಗಳಿಗೆ ಹೋಗಬೇಕೆನ್ನುವ ಯೋಜನೆ ನಮ್ಮದು. ಅಲ್ಲಿ ಗುಲಾಮಗಿರಿ ಇಲ್ಲವಲ್ಲ. ಜಿಮ್ ಸ್ವತಂತ್ರ ಮಾನವ ಆಗುತ್ತಾನಲ್ಲ.

0೬. ಮನೆಗಿರ ಹಿಡಿದ ಜಿಮ್

ನಮಗೆ ಎಚ್ಚರವಾದ ಮೇಲೆ ಆ ಉಗಿದೋಣಿಯ ಪುಟ್ಟದೋಣಿಯ ಮೇಲೆ ಎಸೆದಿದ್ದ ಚೀಲದಲ್ಲಿದ್ದ ವಸ್ತುಗಳನ್ನು ಪರೀಕ್ಷಿಸಿದೆವು. ಅದರಲ್ಲಿಒಂದಿಷ್ಟು ಬಟ್ಟೆ, ಬೂಟ್ಸು, ಕಂಬಳಿಗಳು, ಪುಸ್ತಕಗಳು, ಮೂರು ಡಬ್ಬಿ ಸಿಗಾರ್‌ಗಳು, ಒಂದು ಕಣ್ಣ ಪಟ್ಟಿ, ಹಾಗೂ ಇತರೆ ಒಂದಷ್ಟು ಸಾಮಾನುಗಳಿದ್ದವು. ಆ ದಿನ ಮಧ್ಯಾಹ್ನ ಪೂರ್ತಿ ಆ ತೋಪಿನಲ್ಲೇ ಕಳೆದು ಹೋಯಿತು. ನಾನು ಹಾಯಿದೋಣಿಯ ಮಾಲೀಕನಿಗೆ ಕತೆ ಕಟ್ಟಿ ಹೇಳಿದ್ದನ್ನು ಜಿಮ್‍ಗೆ ವರ್ಣಿಸಿದೆ. ಉಗಿದೋಣಿಯ ಮೇಲೆ ಖೂನಿಗಾರರ ಮಾತುಕತೆಯನ್ನೂ ತಿಳಿಸಿದೆ. ಅವನೂ, ತಾನು ಹಿಂದಿರುಗಿ ಬಂದಾಗ ತೆಪ್ಪ ಕಾಣೆಯಾಗಿರುವುದನ್ನು ತಿಳಿದು ಗಾಬರಿಗೊಂಡುದನ್ನು ಹೇಳಿದ. ಅವನು ಬದುಕಲು ಮುರುಕಲು ದೊಣಿಯಿಂದ ಯಾರಾದರೂ ರಕ್ಷಿಸಬೇಕಿತ್ತು. ಹಾಗೆ ಯಾರಾದರೂ ರಕ್ಷಿಸಿದವರು, ಜಿಮ್ ಓಡಿ ಬಂದಿರುವ ಗುಲಾಮನೆಂದು ಗುರುತಿಸಿ, ಅವನನ್ನು ಮತ್ತೆ ಗುಲಾಮಗಿರಿಗೇ ಅಟ್ಟುವುದು ಖಚಿತವಾಗಿತ್ತು. ಅದೂ ಉಗ್ರಶಿಕ್ಷೆಯ ನಂತರ. ಹೀಗಾಗಿ ಜಿಮ್ ತನ್ನ ಪ್ರಾಣವನ್ನೋ ಸ್ವಾತಂತ್ರ್ಯವನ್ನೋ ಕಳೆದುಕೊಳ್ಳುವುದು ಖಚಿತವಾಗಿತ್ತು.

0೫. ಹಬೆದೋಣಿಯ ಅವಶೇಷಗಳ ಮೇಲೆ.

ನಾವು ಜಾಕ್ಸನ್ ಐಲ್ಯಾಂಡನ್ನು ಪೂರ್ತಿಯಾಗಿ ಹಾದುಹೋಗುವಷ್ಟರಲ್ಲಿ ರಾತ್ರಿ ತುಂಬಾ ಹೊತ್ತಾಗಿತ್ತು. ಬಹುಶಃ ಒಂದು-ಒಂದೂವರೆಯಾಗಿರಬೇಕು. ನಾವು ಎಷ್ಟು ಹೆದರಿದ್ದೆವೆಂದರೆ, ನಮ್ಮ ಮನಸ್ಸಿನಲ್ಲಿ ಯಾವ ಯೋಚನೆಗಳೂ ಸುಳಿಯುತ್ತಿರಲಿಲ್ಲ. ನಿಜ ಹೇಳಬೇಕೆಂದರೆ, ನಮ್ಮನ್ನು ಹಿಂಬಾಲಿಸಿಯೋ ಅಥವಾ ಮತ್ತೊಂದೋ ಏನಾದರೂ ದೋಣಿ ಬಂದರೆ, ನಾವು ತೆಪ್ಪದಿಂದ, ನನ್ನ ಚಿಟ್ಟು ದೋಣಿಗೆ ಹಾರಿ ಸ್ವಲ್ಪ ದೂರ ಹೋಗಿ ಅಡಗಿ ಕುಳಿತು ಮತ್ತೆ ತೆಪ್ಪಕ್ಕೆ ಹಿಂತಿರುಗಬಹುದಿತ್ತು. ಆದರೆ ನಮಗೆ ಅದೇನನ್ನೂ ಯೋಚಿಸುವ ಮನಸ್ಥಿತಿಯೇ ಇರಲಿಲ್ಲ.

0೪ ಸಾರಾ ಮೇರಿ ಜಾರ್ಜ್ ವಿಲಿಯಮ್ಸ್ ಪೀಟರ್.

ಬಾಗಿಲು ತಟ್ಟಿದ ಮನೆಯೊಳಗಿಂದಲೇ ಮನೆಯೊಡತಿ

"ಯಾರದು, ಒಳಗೆ ಬನ್ನಿ." ಎಂದಳು. ನಾನು ಹೋದೆ.
"ಕೂತ್ಕೋಮ್ಮಾ" ಎಂದವಳು, ತನ್ನ ಹೊಳೆಯುವ ಕಣ್ಣುಗಳಿಂದ ತೀವ್ರವಾಗಿ ನನ್ನನ್ನು ದಿಟ್ಟಿಸಿದಳು.

0೩. ಗಾಡಿ ಬಿಟ್ಟ ಪೋರ.

ನೀರಿಗೆ ಹಾರಿದ್ದರಿಂದ ಒದ್ದೆಯಾಗಿದ್ದ ಬಟ್ಟೆಗಳು, ಅಪ್ಪ ಏಳುವ ಹೊತ್ತಿಗೆ ಒಣಗಿತ್ತು. ಎದ್ದವನೇ ನನ್ನ ಬಳಿಗೆ ಬಂದು ನಮ್ಮೆಲ್ಲಾ ವಸ್ತುಗಳನ್ನೂ ಕ್ಯಾಬಿನ್ನಿನ ಒಳಗೆ ಹಾಕಲು ತಿಳಿಸಿದ. ಕ್ಯಾಬಿನ್ನಿನ ಒಳಗೇ ನನ್ನನ್ನೂ ಕೂಡಿಹಾಕಿ, ನಗರದ ದಿಕ್ಕಿನತ್ತ ತನ್ನ ದೊಣಿಯನ್ನೇರಿ ಹೊರಟುಬಿಟ್ಟ. ಅವನು ಎಲ್ಲಿಗೆ ಹೊಗುತ್ತಿದ್ದೇನೆಂದು ನನಗೆ ತಿಳಿಸಲಿಲ್ಲವಾದರೂ, ಆ ದಿಕ್ಕಿಗೆ ಹೋದರೆ, ರಾತ್ರಿ ಬರುವುದಿಲ್ಲವೆಂದು ನನಗೆ ಗೊತ್ತಿತ್ತು. ಇದು ನನಗೆ ಸುವರ್ಣಾವಕಾಶವಾಗಿತ್ತು.

0೨. ಅಪ್ಪನನ್ನು ಮತ್ತೆ ಕಂಡ ಹಕ್.

ಹಾಗೇ ಮೂರ್‍ನಾಲ್ಕು ತಿಂಗಳು ಕಳೆಯಿತು. ಹಿಮ ಸುರಿದು, ಚಳಿ ಹೆಚ್ಚಿ ಶರದೃತು ಬಂತು. ಶಾಳೆಗೆ ಹೋಗುವುದು ನನಗೀಗ ಒಂಥರಾ ಒಗ್ಗಿಕೊಂಡಿತ್ತು ಅನಿಸುತ್ತದೆ. ಮೊದಮೊದಮೊದಲು ಶಾಲೆಗೆ ಹೋಗುವುದೆಂದರೆ ನನಗಾಗುತ್ತಲೇ ಇರಲಿಲ್ಲ. ನನ್ನಪ್ಪನೂ ಶಾಲೆಗಳ ಬಗ್ಗೆ ಗೌರವವನ್ನೇನೂ ಇಟ್ಟುಕೊಂಡಿರಲಿಲ್ಲ., ಹಾಗೂ ನಾನು ಹೆಚ್ಚು ಕಲಿಯುವುದನ್ನೂ ಅವನು ಇಷ್ಟಪಟ್ಟಿರಲಿಲ್ಲ. ಆದರೆ ಬಹುದಿನಗಳಿಂದ ಅವನು ಕಂಡಿರಲಿಲ್ಲವೆಂದು ನಿಮಗಾಗಲೇ ಹೇಳಿದ್ದೆನಲ್ಲಾ, ಸುಮ್ಮನೆ ಕುಳಿತು ಕಾಲ ಕಳೆಯುತ್ತಾ, ನಮ್ಮಪ್ಪನಿಂದ ಏಟು ತಿನ್ನುವುದಕ್ಕಿಂತಲೂ, ಶಾಲೆಗೆ ಹೋಗಿ ಪಾಠ ಕ್ಲಿಯುವುದರಲ್ಲಿ ಸುಖವಿದೆ ಎಂದು ನನಗೀಗ ಅನಿಸತೊಡಗಿತ್ತು.