ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

BMTC - ಬೆಂಗಳೂರು "ಮಹಾರಾಜರ" ಸಾರಿಗೆ ನಿಗಮ

ಒಂದು ಹಾಸ್ಯ ಪ್ರಸಂಗ ಗೊತ್ತುಂಟೆ ಸ್ವಾಮೀ ನಿಮಗೆ? ೫೦ ಮಂದಿಯನ್ನು ಹೊತ್ತು ಸಾಗಿಸ ಬಲ್ಲ ಬಸ್ಸೊಂದಿದೆ. ಇಂಧನದೆ ಬೆಲೆ ಲೀಟರಿಗೆ ೧ ರೂ ಏರಿದರೆ, ಈ ಬಸ್ಸಿನಲ್ಲಿ ಚೀಟಿಯ ಬೆಲೆ ತಲೆಗೆ ೧ ರೂಯಂತೆ ಏರುತ್ತದೆ.  ಇನ್ನೂ ಕೇಳಿ. ಕಿ.ಮಿ ಗೆ ತಲೆಗೆ ೧ ರೂ ಕೇಳುತ್ತಾರೆ. ಇನ್ನೂ ಕೇಳಿ. ಇಂಧನದ ಬೆಲೆ ಇಳಿದರೆ ಈ ಬಸ್ಸಿನ ಚೀಟಿಯ ಬೆಲೆ ಇಳಿಯುವುದಿಲ್ಲ. ನಿರ್ವಾಹಕನಿಗೆ ಚಿಲ್ಲರೆಯ ತೊಂದರೆಯಾಗುತ್ತದಂತೆ. ಇದು ಯಾವ ಲೋಕದ ಗಣಿತ ಶಾಸ್ತ್ರ ಸ್ವಾಮೀ. ಹೇಗೆ ತರ್ಕ ಮಾಡುವುದು ಇದನ್ನು. ತರ್ಕಶಾಸ್ತ್ರವೇ ಬಿದ್ದು ಹೋಗಿದೆ ಇಲ್ಲಿ. ಏಕೆ ಬಿದ್ದಿದೆ ಅಂದರೆ ಇದು ನಿರ್ಣಯವಾಗುವುದು ಉನ್ನತ ಅಧಿಕಾರಿ, ಮಂತ್ರಿಗಳ ಸಭೆಯಲ್ಲಿ. ಇದು ಹಾಸ್ಯ. ಇದನ್ನು ಇಲ್ಲಿಗೆ ಬಿಡಿ. ಇನ್ನು ವಾಸ್ತವಿಕತೆಗೆ ಬರುವ.

ಶಿವರಾತ್ರಿ

ಶಿವರಾತ್ರಿ ಅಂದರೆ ನನಗೆ ನೆನಪಾಗುವುದು ದೇವರಿಗಿಂತ ಹೆಚ್ಚು ಆ ಹಬ್ಬದಂದು ರಾತ್ರಿಯಲ್ಲಿ ನಡೆಯುತ್ತಿದ್ದ ಆವಾಂತರಗಳು. ಶಿವರಾತ್ರಿಯ ದಿನ ಜಾಗರಣೆ ಮಾಡಬೇಕೆಂದೋ ಅಥವಾ ಮತ್ತೆ ಯಾವುದೋ ಕಾರಣಕ್ಕೆ ರಸ್ತೆಯ ನಡುವೆ ಕಲ್ಲು, ಡ್ರಮ್ ಏನಾದರು ಇಡುವವರಿದ್ದರು.ಅಂಗಡಿಯ ಫಲಕಗಳು ಎಲ್ಲೆಲ್ಲೋ ಇರುತ್ತಿದ್ದುವು. ಜಾಗರಣೆ ಮಾಡುವಾಗ ದೇವರ ಧ್ಯಾನ ಮಾಡುತ್ತಾ ಕಳೆಯದೆ ಇಂತಹ ಕೆಟ್ಟ ಕೆಲಸದಲ್ಲಿ ಕಳೆಯಬೇಕೆಂದು ಅವರಿಗೆ ಅದ್ಯಾರು ಹೇಳುತ್ತಿದ್ದರೋ! ಇದಕ್ಕಿಂತ ಭಯಾನಕವಾಗಿ ಆಗಿನ ಹಂಚಿನ ಮನೆಗಳಿಗೆ ಕಲ್ಲು ಎಸೆಯುವುದು ಸಾಮಾನ್ಯವಾಗಿತ್ತು. ಮನೆಯವರು ಆಕ್ಶೇಪಿಸಿದರೆ ಇನ್ನೂ ಹೆಚ್ಚು ಕಲ್ಲು ಬೀಳುತ್ತಿದ್ದುವು.ಬೇರೆಯವರ ಬಾಯಿಯಿಂದ ಶಾಪ ಹಾಕಿಸಿಕೊಳ್ಳದೆ ಇರಬಾರದು ಎಂಬ (ಮೂಢ)ನಂಬಿಕೆ ಸಾಮಾನ್ಯವಾಗಿತ್ತು.ತೆಂಗಿನಮರ ಏರಿ ಬೊಂಡ(ಸೀಯಾಳ) ಕುಡಿಯುವ ಧೈರ್ಯಶಾಲಿಗಳಿಗೆ ಬರವಿರಲಿಲ್ಲ. ಪೇಟೆ ಪಟ್ಟಣಗಳಲ್ಲಿ ಶಿವರಾತ್ರಿಗೆ ಮೊದಲೇ ಪೊಲೀಸರು ಇಂತಹ ಕುಕೃತ್ಯಗಳ ವಿರುದ್ಧ ಜನರಿಗೆ ಎಚ್ಚರಿಕೆ ನೀಡುವುದು,ರಾತ್ರಿ ಗಸ್ತು ನಡೆಸುತ್ತೇವೆ ಎಂದು ಪತ್ರಿಕಾ ಹೇಳಿಕೆ ನೀಡುತ್ತಿದ್ದರು. ಆದರೆ ಕೇಡಿಗಳು ತಮ್ಮ ಕೀಟಲೆಗಳನ್ನು ಸಲೀಸಾಗಿ ನಡೆಸುತ್ತಿದ್ದರು.ಪೊಲೀಸರ ಗಸ್ತು ನಡೆಯುತ್ತಿತ್ತೋ ಇಲ್ಲವೋ ನೋಡಲು ನಾವು ಮನೆಯ ಹೊರಗೆ ಬಂದರೆ ತಾನೇ?

ಅದೃವಶಾತ್ ಇತ್ತೀಚಿನ ವರ್ಷಗಳಲ್ಲಿ ಅಂತಹ ಘಟನೆಗಳು ಇಲ್ಲವೇ ಇಲ್ಲ ಎನ್ನುವಷ್ಟು ವಿರಳವಾಗಿವೆ. ನಾವು ಮುಂದುವರಿಯುತ್ತಿರುವುದಕ್ಕೆ ಇದೊಂದು ಸಾಕ್ಷಿಯಿರಬಹುದು. ಶಿವರಾತ್ರಿಯ ಜಾಗರಣೆ ಬೇರೆಡೆಯೂ ಹೀಗೇ ಇರುತ್ತಿದ್ದುವೋ ಅಲ್ಲ,ನಮ್ಮ ಕರಾವಳಿ ತೀರದ ಪ್ರದೇಶಗಳಲ್ಲಿ ಮಾತ್ರಾ ಇಂತಹ ಪರಿಸ್ಥಿತಿಯಿತ್ತೋ ಎನ್ನುವ ಕಲ್ಪನೆ ನನಗಿಲ್ಲ.ಈ "ಜಾಗರಣೆ" ಎರಡ್ಮೂರು ದಿನಕ್ಕೆ ವ್ಯಾಪಿಸಿಕೊಳ್ಳುತ್ತಿದ್ದುವು. ಶಿವರಾತ್ರಿ ಕಳೆದ ಮನೆಯ ಹಂಚು ಬದಲಾಯಿಸಬೇಕಾಗಿ ಬರುತ್ತಿತ್ತೇ ಈಗ ನೆನಪಾಗುತ್ತಿಲ್ಲ.

ಇಂತಹ "ಜಾಗರಣೆ"ಯನ್ನು ನಾನಾಗಲಿ ನನ್ನ ಗೆಳೆಯರಾಗಲಿ ಎಂದೂ ನಡೆಸಿರಲಿಲ್ಲ ಎನ್ನುವುದು ನಮ್ಮ ಸಭ್ಯತೆಗೆ ಹಿಡಿದ ಕನ್ನಡಿ ಅಲ್ಲದೆ ಇನ್ನೇನು?ಈಗಲೂ ಇಂತಹ "ಆಚರಣೆ"ಗಳು ಮುಂದುವರೆದಿದ್ದರೆ ಕೋಮು ಗಲಭೆಗಳೇ ಆಗುತ್ತಿದ್ದುವೋ ಏನೋ!

ಇ-ಲೋಕ-10(16/2/2007)

ದನ,ಕುರಿ ಸಾಕುವ ಔಷಧ ಕಂಪೆನಿಗಳು
 ಅಮೆರಿಕಾದ ಔಷಧಿ ಕಂಪೆನಿಗಳೀಗ ಆಡು,ಕುರಿ ಮೊಲ ಸಾಕುತ್ತಿವೆ. ಔಷಧಿಗಳನ್ನು ಪ್ರಯೋಗಿಸಿ ನೋಡಲು ಪ್ರಯೋಗ ಪಶುವಾಗಿ ಇವನ್ನು ಬಳಸಲಾಗುತ್ತದೆ ಎಂದು ನೀವು ತಿಳಿದರೆ ಅದು ಪೂರ್ತಿ ಸರಿಯಲ್ಲ. ಈ ಪ್ರಾಣಿಗಳು ಭ್ರೂಣಾವಸ್ಥೆಯಲ್ಲಿದ್ದಾಗ ಅವುಗಳ ಜಿನೋಮ್ ಬದಲಿಸಿ,ಅವುಗಳು ಉತ್ಪಾದಿಸುವ ಹಾಲು ವಿಶೇಷ ಪ್ರೊಟೀನ್ ಉತ್ಪಾದಿಸುವಂತೆ ಮಾಡಲಾಗಿರುತ್ತದೆ. ಹಾಗಾಗಿ ಇವುಗಳ ಹಾಲಿನಿಂದ ಆ ಪ್ರೊಟೀನುಗಳನ್ನು ಪ್ರತ್ಯೇಕಿಸಿ, ಔಷಧ ತಯಾರಿಸಲು ಬರುತ್ತದೆ. ಹೃದಯದ ರಕ್ತ ನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ಆಂಟಿ ಥ್ರೋಂಬಿನ್ ಎನ್ನುವ ಪ್ರೊಟೀನ್, ರಕ್ತ ಹೆಪ್ಪುಗಟ್ಟದಂತೆ ತಡೆಯುತ್ತದೆ. ಇದರ ಕೊರತೆ ತೀವ್ರ ರಕ್ತಸ್ರಾವವಾದವರಿಗೆ ಅಥವಾ ಜನ್ಮತ: ಕೆಲವರಲ್ಲಿ ಕಾಣಿಸಿಕೊಳ್ಳಬಹುದು. ಇತರರ ರಕ್ತದಿಂದ ಪ್ರತ್ಯೇಕಿಸಿದ ಆಂಟಿಥ್ರೋಂಬಿನ್ ನೀಡುವುದೇ ಈಗಿದ್ದ ಪರಿಹಾರ. ಆದರೆ ಹೊಸ ಜೀನ್ ಪರಿವರ್ತಿತ ಪ್ರಾಣಿಗಳ ತಾಂತ್ರಿಕತೆಯ ಮೂಲಕ ಪ್ರಾಣಿಯ ಹಾಲಿನಲ್ಲಿ ಈ ಪ್ರೊಟೀನ್ ಇರುವಂತೆ ಮಾಡಬಹುದು. ಹಾಲಿನಿಂದ ಪ್ರತ್ಯೇಕಿಸಿದ ಪ್ರೊಟೀನ್‌ನ್ನು ಸಮಸ್ಯೆಯಿದ್ದವರಿಗೆ ಕೊಟ್ಟು ಹೃದಯದ ಸಮಸ್ಯೆಗೆ ಪರಿಹಾರ ನೀಡಬಹುದು. ಐವತ್ತು ಸಾವಿರ ಜನರ ರಕ್ತದಾನದ ಮೂಲಕ ಪಡೆಯಬಹುದಾದ ಪ್ರೊಟೀನ್‌ನ ಅಂಶವನ್ನು ಒಂದು ವಿಶೇಷ ತಳಿ ಆಡಿನಿಂದ ಒಂದು ವರ್ಷದಲ್ಲಿ ಪಡೆಯಬಹುದು.
 ಹೀಮೋಫಿಲಿಯಾ,ಕ್ಯಾನ್ಸರ್‍ ಚಿಕಿತ್ಸೆಯಲ್ಲೂ ಹೊಸ ಪದ್ಧತಿ ಪರಿಣಾಮಕಾರಿ. ಮಸಾಚುಸೆಟ್ಸ್‌ನ ಜಿಟಿಸಿ ಬಯೋ ತೆರಪಟಿಕ್ಸ್‌,ಸ್ಕಾಟ್ಲೆಂಡಿನ ರೋಸ್ಲಿನ್ ಇನ್‌ಸ್ಟಿಟ್ಯೂಟ್,ಕ್ಯಾಲಿಫೊರ್ನಿಯಾದ ಒರಿಜನ್ ತೆರಪೆಟಿಕ್ಸ್ ಮುಂತಾದ ಕಂಪೆನಿಗಳು ಪ್ರಾಣಿಗಳ ಮೂಲಕ ಔಷಧಿ ಪಡೆಯುತ್ತಿವೆ. ಹಂದಿ,ದನ,ಕೋಳಿ, ಮೊಲ,ಕುರಿ ಇವುಗಳೇ ಅಲ್ಲದೆ ಇಲಿಯೂ ಔಷಧಿ ಉತ್ಪಾದಿಸಿಕೊಡಲು ಬಳಕೆಯಾಗುತ್ತವೆ.
 

"ಕದಿರ್ " - ಏನಿದು?

ನಾನು ದಿನಾಲು ಆಪೀಸ್ ಗೆ ಹೋಗುವಾಗ ಬೆಂಗಳೂರಿನ ಪದ್ಮನಾಭನಗರದಿಂದ ಕದಿರೇನಹಳ್ಳಿ ಮೂಲಕ ಹಾದು ರಿಂಗ್ ರೋಡ್ ಸೇರುತ್ತಿದ್ದೆ. ಇದರಲ್ಲೇನು ವಿಶೇಷ ಅಂದ್ಕೊಂಡ್ರಾ? ಆವಾಗ್ಲೆ ಹುಟ್ಟಿದ್ದು ತವಕ.. ಏನಿದು ಕದಿರೇನಹಳ್ಳಿ...ಇಂತ ಹೆಸರು ಬೇರೆಲ್ಲೊ ಕೇಳಿಲ್ವಲ್ಲ ಅಂತ ಅನ್ಕೊತ್ತಾ ಇದ್ದೆ.

ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ. ನಿಮ್ಮ ಅಭಿಪ್ರಾಯ ತಿಳಿಸಿ.

ನಮಸ್ಕಾರ,

ನನ್ನ ಕೆಲವು ಕಿರುಚಿತ್ರಗಳನ್ನು ಇಲ್ಲಿ ತೋರಿಸುತ್ತಿದ್ದೇನೆ. ನೋಡಿ ಆನಂದಿಸಿ.

ಅಪರಾಧ ಪ್ರಜ್ಞೆ

ಅಂದ್ರೆ ಗಿಲ್ಟಿ ಫೀಲಿಂಗು. ( ನಿನ್ನೆ ಮಯೂರದೊಳಗೊಂದು ಕಾರ್ಟೂನ್ ನೋಡ್ದೆ- ಇನ್ ಮ್ಯಾಲ ಭಿಕ್ಷಾ ಬೇಡಾವರು 'ಅಮ್ಮ-ಅಪ್ಪಾ ' ಎಂದು ಬೇಡೋ ಬದ್ಲು 'ಮಮ್ಮೀ - ಡ್ಯಾಡೀ) ಅಂತ ಬೇಡಾವರು - ಯಾಕಂದರ ಸಾಲೀಯೊಳಗ ಒನ್ನೇತ್ತಾದಿಂದs ಇಂಗ್ಲೀಷ್ ಸುರೂ ಮಾಡಾವ್ರಿದ್ದಾರ!)

ನಾನು 'ಟ'ಗೆ 'ಟ' ಅನ್ನೋದು!

ಈ ತುಂಗಾ ಅಕ್ಷರಶೈಲಿಯಲ್ಲಿ ಕೆಲವು ಅಕ್ಷರಗಳು ಸರಿಯಾಗಿ ಕಾಣುವದಿಲ್ಲ . ಹೀಗಾಗಿ ನನಗೆ ಈ ಕಾರ್ಟೂನು ಸರಣಿ ನೆನಪಿಗೆ ಬಂತು. ಇದು ಅಬಿದ್ ಸುರ್ತಿಯವರದು.

ಉದ್ಯೋಗ ಮಾಡುವ ಯೋಗ್ಯತೆಯೂ ಪದ್ಧತಿಯೂ

ಹಳೆಯ ಪುಸ್ತಕ( ರದ್ದಿ ಪುಸ್ತಕ ಅನ್ನುವದು ಅಪಚಾರ!) ದ ಅಂಗಡಿಯಲ್ಲೊಮ್ಮೆ ೧೯೩೫ ರ ಶಾಲಾ ಪಠ್ಯಪುಸ್ತಕ( "ಕನ್ನಡ ಏಳನೇ ಪುಸ್ತಕ") ವೊಂದನ್ನು ನೋಡಿ ತೆಗೆದುಕೊಂಡೆ. ಅದರಲ್ಲಿ ಅಂದಿನ ರಾಜಭಕ್ತಿಯ ದಿನಗಳನ್ನು ಪ್ರತಿಫಲಿಸುವ ಪಾಠಗಳು ಇದ್ದವು . ಅಂದಿನ ವಿಜ್ಞಾನ , ಅಂದಿನ ಭೂಗೋಲ , ಅಂದಿನ ಇತಿಹಾಸ ಪಾಠಗಳೂ ಇದ್ದವು! . ಒಳ್ಳೇ ಕುತೂಹಲಕರ ಓದು! ಅಲ್ಲಿನ ಒಂದು ಪಾಠ ಏಕೋ ನನ್ನನ್ನು ಆಕರ್ಷಿಸಿತು. ಆ ಪುಟಗಳನ್ನಷ್ಟೇ ತೆಗೆದಿಟ್ಟುಕೊಂಡೆ.ಅಲ್ಲಿನ ಆಯ್ದ ಕೆಲ ಭಾಗಗಳನ್ನು ನೀವೂ ನೋಡಿ.