ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ದ್ರಾವಿಡ್ ವಿಕ್ರಮ

ಗೋವಾದಲ್ಲಿ ಶ್ರೀಲಂಕಾ ವಿರುದ್ಧ ಪಂದ್ಯವನ್ನು ಭಾರತ ಜಯಿಸಲು ನಾಯಕ ದ್ರಾವಿಡ್ ಅವರ ಅರ್ಧ ಶತಕ ನೆರವಾಯಿತು. ಇದರೊಂದಿಗೆ ದ್ರಾವಿಡ್ ಏಕದಿನ ಪಂದ್ಯಗಳಲ್ಲಿ ಬಾರಿಸಿದ ರನ್‍ಗಳ ಸಂಖ್ಯೆ ಹತ್ತು ಸಾವಿರ ದಾಟಿತು. ಇದರ ಬಗೆಗೆ vijaytimes ನೀಡಿದ ಶೀರ್ಷಿಕೆ ಆಕರ್ಷಕವಾಗಿತ್ತು;

ಇವರ ಮೌನ ಕನ್ನಡಕ್ಕೆ ಒಳಿತು ...

ಶಾಲೆಯಲ್ಲಿ ಹಾಡಿದ ಹಾದು ಈಗ ನೆನಪಿನಂಗಳದಲ್ಲಿ ಹಾಗೆ ಕಾಣಿಸಿಕೊಂಡಿತು. ಅದರ ಮೊದಲನೇ ಸಾಲು ಹೀಗಿದೆ - "ನುಡಿದರೆ ಮುತ್ತಿನ ಹಾರದಂತಿರಬೇಕು". ಇದರಲ್ಲಿ ಯಾರಿಗೂ ಅರ್ಥವಾಗದ, ವಿಶ್ಲೇಷಿಸಲಾಗದ, ಗಾಢವಾದ, ನಿಗೂಢವಾದ ಅರ್ಥವೇನೂ ಇಲ್ಲ. ಮುತ್ತಿನ ಹರಳು ನೋಡಲು ಸರಳ ಹಾಗೂ ಸೌಮ್ಯ. ಅಂತೆಯೇ ಕೇಳುವವರಿಗೂ ನಮ್ಮ ಮಾತು, ಅದರ ಪದಗಳು ಇರಬೇಕು ಎಂಬ ಅರ್ಥ ಅದರಲ್ಲಿದೆ.

ನಾವು ಬೆಳೆಸಿದಂತೆ ಭಾಷೆ ಮತ್ತು ಸಂಸ್ಕೃತಿ ಬೆಳೆಯುತ್ತವೆ. ಕುವೆಂಪುರವರನ್ನು ಶಬ್ದ ಟಂಕಸಾಲಿಯೆಂದು, ಬೇಂದ್ರೆಯವರನ್ನು ಶಬ್ದ ಗಾರುಡಿಗರೆಂದು ಕರೆಯುತ್ತೇವೆ. ಭಾಷೆಯ ಸೊಗಡನ್ನು ಪಸರಿಸಿದ ಮಹಾತ್ಮರಲ್ಲಿ ಅವರು ಇಬ್ಬರು. ವಿಶ್ವ ಲಿಪಿಗಳ ರಾಣಿ ಕನ್ನಡ ಎಂದು ಓದಿದ ನೆನಪು. ಹಲವು ಸಾವಿರ ವರ್ಷಗಳ ಪರಂಪರೆಯ ಭಾಷೆ ಹಾಗು ಸಂಸ್ಕೃತಿ ನಮ್ಮದು. ಉಳಿಸಿ ಬೆಳೆಸುವ ನೊಗಭಾರ ನಮ್ಮ ಮೇಲಿದೆ.

ಹೀಗಿರುವಾಗ, ನಮ್ಮ ಮಹಾನಗರಿಯಲ್ಲಿ ಈ ದಿನಗಳಲ್ಲಿ ಬಳಕೆಯಲ್ಲಿರುವ ಮಹಾ(ದುರ್)ಜನರ, ಅವಿವೇಕಿ ಯುವಜನರ ಕನ್ನಡ ಕೇಳಿ ಬಹಳ ವಿಷಾದವಾಗುತ್ತದೆ. ಸ್ವಾಮಿ, ಅಯ್ಯಾ, ಗೆಳೆಯ ಎಂಬ ಪ್ರಣಾಮಗಳು ಹೋದವು. ಈಗೇನಿದ್ದರೂ ಮಚ್ಚಾ, ಮಗ, ಸಿಸ್ಯರ ಕಾಲ. ಬೇಕಿತ್ತೆ ನಮಗಿದು? ಒಂದೆಡೆ ತನ್ನ ಸಾಮಾಜಿಕ ಜವಾಬ್ದಾರಿಯನ್ನು ತೊರೆದು ಮಚ್ಚು, ಲಾಂಗು, ದುರ್ಭಷೆ, ಅರೆನಗ್ನ ಸಂಸ್ಕೃತಿಯನ್ನು ಸಾರುತ್ತಿರುವ ಸಿನಿಮಾ,ಧಾರಾವಾಹಿ,ಜಾಹಿರಾತು ಮಾಧ್ಯಮಗಳು. ಇನ್ನೊಂದೆಡೆ ಅದನ್ನು ಸ್ವೀಕರಿಸುತ್ತಿರುವ ಮತಿಗೇಡಿ ಯುವಜನರು. ಇದಕ್ಕೆ ಕಾರಣ ನಮಲ್ಲಿರುವ ಸ್ವಂತ ಬುದ್ದಿಯ ಕೊರತೆ. ಪ್ರಜಾಪ್ರಭುತ್ವದಲ್ಲಿ ತಿಳಿಸಿ ಹೇಳುವವರೂ ಇಲ್ಲ. ಬಡಿದು ಹೇಳುವವರೂ ಇಲ್ಲ. ಇನ್ನು ಬುದ್ದಿ ಹೇಗೆ ವಿಕಸನಗೊಳ್ಳಬೇಕು ಹೇಳಿ.

ಒಂದು ಸಾವಿನ ವೃತ್ತಾಂತ

[:http://sampada.net/forum/3040|"ಕೋಮುಗಲಭೆಗಳಲ್ಲಿ ಸಾಯುವುದು ಮನುಷ್ಯರು"] ಲೇಖನವನ್ನು ಈ ಹಿಂದೆ ಬರೆದಿದ್ದೆ.

ಈಗ ಕೆಳಗಿನ ಡಾಕ್ಯುಮೆಂಟರಿ ನೋಡಿ:

ಚಿತ್ರದ ಪರಿಕಲ್ಪನೆ ಮತ್ತು ನಿರ್ದೇಶನ ನನ್ನದು.
ಕ್ಯಾಮೆರ, ಸಂಕಲನ ಮಾಡುವ ಮೂಲಕ ಜೊತೆಯಾದವರು [:http://www.rlp.in/|ಅಭಯ ಸಿಂಹ].

ಈ ಚಿತ್ರದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು [:http://sampada.net/comment/reply/3185#comment_form|ದಯವಿಟ್ಟು ಇಲ್ಲಿ ದಾಖಲಿಸಿ].

ಜನಮತ

[:http://sampada.net/poll/3048|ಇದೇ ಕುರಿತ ಜನಮತವೊಂದಿದೆ]. ನಿಮ್ಮ ಅಭಿಪ್ರಾಯವನ್ನು ಅಲ್ಲಿಯೂ ದಾಖಲಿಸುವುದನ್ನು ಮರೆಯಬೇಡಿ.

ಏನ ಬರೆಯಲಿ

ಏನ ಬರೆಯಲಿ? ಇದು ಇತ್ತೀಚೆಗೆ ನನ್ನನ್ನು ಕಾಡುತ್ತಿರುವ ಪ್ರಶ್ನೆ. ದಿನಗಳೆದಂತೆ ಬರೆಯುವುದರತ್ತ ಮನಸ್ಸು ಹೋಗ್ತಾನೇ ಇಲ್ಲ.

ಬೇಡ ಗೆಳೆಯ ನಂಟಿಗೆ ಹೆಸರು ಯಾಕೇ ಸುಮ್ಮನೇ

ಹಕ್ಕಿಯು ಹಾಡಿದೆ ತನ್ನ ಹೆಸರನು ಹೇಳದೇ
ಸಂಪಿಗೆ ಬೀರಿದೆ ಕಂಪನು ಯಾರಿಗೂ ಕೇಳದೇ
ಬೀಸುವ ಗಾಳಿಯ ಹಕ್ಕಿಯ ಹಾಡಿನ ನಂಟಿಗೆ ಹೆಸರಿನ ಹಂಗಿಲ್ಲ ನಮಗೇಕೆ ಅದರ ಯೋಚನೇ
ಬೇಡ ಗೆಳೆಯ ನಂಟಿಗೆ ಹೆಸರು ಯಾಕೇ ಸುಮ್ಮನೇ.... || ಅರಳುತಿರು ||

ಪ್ರೇಮಿಗಳದಿನದ ಶುಭಾಷಯಗಳು

ಸಂಪದ ಕನ್ನಡಿಗ ಪ್ರೇಮಿಗಳಿಗೆ, ಪ್ರೇಮಿಸಿ ವಿವಾಹ ವಾಗಿರುವ ದಂಪತಿಗಳಿಗೆ, ಪ್ರೀತಿಸುತ್ತಿರುವವರಿಗೆ ಆರೈಸುವೆ ಅನುದಿನವೂ ನಿಮ್ಮ ಬದುಕು ಹಾಲು ಜೇನ ಹೊಳೆಯಾಗಿ ಸಂತಸದ ಪರಿಮಳದ ಪುಷ್ಪವು ಸದಾನಿಮ್ಮ ಮನೆಮನದಲ್ಲಿ ಅರಳಿ ನಗುತ್ತಿರಲಿ.