ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮಗ-ಚಿನ್ನ,ಮಗಳು-ಕಂಚು

ನನ್ನ ಪರಿಚಿತರೊಬ್ಬರಿಗೆ ೨ ಮಕ್ಕಳು.ಹುಡುಗಿಗೆ ೧೦ ವರ್ಷವಿರಬಹುದು.ಹುಡುಗನಿಗೆ ೭-೮ ವರ್ಷವಿರಬಹುದು.ತುಂಬಾ ತೆಳ್ಳಗಿದ್ದಾನೆ. ಅಪ್ಪ ಅಮ್ಮನಿಗೆ ಆ ಹುಡುಗನನ್ನು ಎಲ್ಲರ ಬಳಿ ಹೊಗಳುವುದೇ ಕೆಲಸ. ಯಾವುದೇ ವಿಷಯ ಮಾತನಾಡಿ ಕೊನೆಗೆ ಬಂದು ಮುಟ್ಟುವುದು ಆ ಹುಡುಗನ ವಿಷಯಕ್ಕೇ. "ದ್ರಾವಿಡ್ ರಾಜಿನಾಮೆ ಬೆಳಗ್ಗೆ ನ್ಯೂಸ್ ನಲ್ಲಿ ನೋಡಿದೆ.ನಮ್ಮ ಅಪ್ಪುಗೆ ಗಂಗೂಲಿ ಅಂದರೆ ಬಹಳ ಇಷ್ಟ.ಈಗ ದ್ರೋಣಿ(ಧೋನಿ)ನೂ ಲೈಕ್ ಮಾಡುತ್ತಾನೆ." "ಸ್ಕೂಲ್ನಿಂದ ಬಂದ ಕೂಡಲೇ ಹೋಮ್ ವರ್ಕ್ ಮಾಡಿ ಮುಗಿಸುವನು.ನಂತರ ಪೋಗೋ ಹಾಕಿ ಕುಳಿತುಕೊಳ್ಳುವನು.ಪೊಗೊದಲ್ಲಿ ಏನೆಲ್ಲಾ ಬರುತ್ತದೆ ಅವನಿಗೆ ಬೈಹಾರ್ಟ್ ಇದೆ.""ಕಂಪ್ಯೂಟರ್ ನಲ್ಲೂ ಇವರಿಗೇನಾದರೂ ಗೊತ್ತಾಗದಿದ್ದರೆ ಅವನನ್ನೇ ಕೇಳುವರು"ಎಂದು ಅವರ ಶ್ರೀಮತಿಯವರೂ ಒಗ್ಗರಣೆ ಹಾಕಿದರು.

ಸೂರ್ಯ ಶಿಕಾರಿಯ ಶಿಖರಸೂರ್ಯ

ಮೇಲ್ನೋಟಕ್ಕೆ ಕಂಬಾರರ ಎಂದಿನ ಜನಪದ ಶೈಲಿಯ ವಿವರಗಳು, ಕಥಾನಕಗಳು, ಉಪಕಥೆಗಳು, ಹಾಡುಗಳು, ಪುರಾಣಗಳು, ಅದ್ಭುತಗಳು, ಪವಾಡಗಳು ಎಲ್ಲವೂ ಇರುವ ಒಂದು ವಿಶಿಷ್ಟ ಹರಹಿನ, ತಿರುವುಗಳ ಕಥಾನಕ `ಶಿಖರಸೂರ್ಯ'.

ಸರ್ವಶುಕ್ಲಾ ಸರಸ್ವತೀ!

ದಂಡಿ ಸುಮಾರು ೬-೭ ಶತಮಾನದಲ್ಲಿದ್ದ ಸಂಸ್ಕೃತ ಕವಿ. ಅವನದಾಗಿ ಸಿಕ್ಕಿರುವುದು ಎರಡು ರಚನೆಗಳು. ಒಂದು ದಶಕುಮಾರ ಚರಿತೆ ಅನ್ನುವ ಕಾಲ್ಪನಿಕ ಕಥೆ, ಮತ್ತೆ ಕಾವ್ಯಾದರ್ಶ ಎಂಬ ಕಾವ್ಯ ಲಕ್ಷಣ ಗ್ರಂಥ.

ಕಾವ್ಯಾದರ್ಶದ ಮೊದಲ ಶ್ಲೋಕ ಹೀಗಿದೆ:

ಚತುರ್ಮುಖ ಮುಖಾಂಬೋಜ ವನಹಂಸ ವಧೂರ್ಮಮ |

ಮಾನಸೇ ರಮತಾಂ ದೀರ್ಘಮ್ ಸರ್ವಶುಕ್ಲಾ ಸರಸ್ವತೀ ||

ಕನ್ನಡ ಭಾಷೆಯ ಬಳಕೆ ಮತ್ತು ಅನುವಾದದ ಬಗ್ಗೆ ಒಂದಿಷ್ಟು..

ಸೂರ್ಯ ಎಂಬ ಪದವನ್ನೇ  ತಗೆದುಕೊಳ್ಳಿ. ರ್ಯ ಕ್ಕೆ ಬದಲಾಗಿ ರ ಕ್ಕೆ ಯ ಒತ್ತು ಕೊಡುವುದು ಸರಿಯಲ್ಲ.  ಏಕೆನ್ನುತ್ತೀರಾ-  ಸೂರ್ಯ – ಈ ಪದದಲ್ಲಿ ಗಮನಿಸಿದರೆ ನಾವು ಯ ಅಕ್ಷರವನ್ನು ಸಂಪೂರ್ಣವಾಗಿ ಉಚ್ಛರಿಸುತ್ತೇವೆ. ಜೊತೆಗೆ ರ ಅಕ್ಷರವನ್ನು ಅರೆ ಉಚ್ಛರಿಸುತ್ತೇವೆ ಅದಕ್ಕಾಗಿಯೆ ಅರ್ಕಾವೊತ್ತಲ್ಲವೇ...

ಸುಭಾಷಿತ ಮಂಜರಿ

ಕನ್ನಡ ಸಾಹಿತ್ಯ ಪರಿಷತ್ತು ೧೯೭೭ರಲ್ಲಿ ಪ್ರಕಟಿಸಿದ ಪುಸ್ತಕ. ಇತ್ತೀಚೆಗೆ ಇದು ಮುದ್ರಣದಲ್ಲಿ ಇದೆಯೊ ಇಲ್ಲವೊ ಗೊತ್ತಿಲ್ಲ.

ಇದರಲ್ಲಿರುವ ಸುಭಾಷಿತಗಳನ್ನು ಎಲ್ಲಿಂದ ಹೆಕ್ಕಿ ತೆಗೆದಿದ್ದಾರೆ ಎಂಬುದನ್ನ ಮಾತ್ರ ತಿಳಿಸಿಲ್ಲ. ಕೆಲ ದಿನಗಳಿಂದ ಈ ಪುಸ್ತಕದ ಲಿಂಕ ಕೆಲಸ ಮಾಡ್ತಿಲ್ಲ. ಕೆಲಸ ಮಾಡಲು ಪ್ರಾರಂಭಿಸಿದರೆ ಯಾರದರೂ ಇದರ ಪಿ ಡಿ ಎಫ಼ ಮಾಡಿ.

ನೀರವತೆ

ಆಂತರ್ಯದಲ್ಲಿ ಮನಸಿಗೆ ಕಾಡಿತು ನೀರವತೆ…
ಅತಂತ್ರದ ಸಂದಿಗ್ಧತೆಯಲ್ಲಿ ಮುಳುಗಿತು ಜಿಜ್ಞಾಸೆಯ ವಿಮುಖತೆ…
ನಾನು ಯಾರು ಎಂಬುದು ಈಗಲು ತತ್ವ ಪ್ರಶ್ನೆಯ ಸೂಕ್ಷ್ಮತೆ…
ಅರಸುತ ಹೋದರು ಸಿಗದು ಈ ಸತ್ಯದ ಪಾರಮಾರ್ಥಿಕತೆ…..

-- ಸಂದೀಪ ಶರ್ಮ

ರಂಜಾನ್ ಅರ್ಥ ಕುರಿತು

ರಂಜಾನ್ ಹಬ್ಬದ ಅರ್ಥ ಹುಡುಕುತ್ತಿದ್ದೆ.

ರಂಜಾನಿಗೆ ಅರಾಬಿಕ್ಕಿನ ಮೂಲ ಪದ `ರಮಿದ` ಅಥವಾ `ಅರ್-ರಮದ್`. ಅವುಗಳು ಸೂಚಿಸುವುದು ತೀವ್ರವಾಗಿ ಸುಡುವ ಒಣ ಉರಿಯನ್ನು- ಅದೂ ನೆಲಕ್ಕೆ ಸಂಬಂಧಿಸಿದ್ದು. ಅದೇ ಮೂಲಪದದಿಂದ ಹುಟ್ಟಿದ ರಮ್‌ದಾ ಪದದ ಅರ್ಥ-ಬಿಸಿಲಿಗೆ ಸುಟ್ಟ ಮರಳು ಎಂದು. ಕೆಲವರು ಹಸಿವಿನಿಂದ ಹೊಟ್ಟೆಯಲ್ಲಿ ಸುಡುವ ಅನುಭವವನ್ನು ಅದು ಸೂಚಿಸುತ್ತದೆ ಎಂದು ಹೇಳಿದರೆ, ಇನ್ನು ಕೆಲವರು ಅದು ಬಿಸಿಲು ನೆಲವನ್ನು ಸುಡುವಂತೆ ಸದ್ಭಾವ ದುಷ್ಟತನವನ್ನು ಸುಟ್ಟುಹಾಕುವುದರ ಸಂಕೇತ ಎನ್ನುತ್ತಾರೆ. ಇನ್ನೂ ಕೆಲವರ ಪ್ರಕಾರ, ಮರಳು ಹಾಗು ಕಲ್ಲುಗಳು ಬಿಸಿಲನ್ನು ಅವಾಹಿಸಿ ತಾವೇ ಸುಡುವಂತೆ, ಹಸಿವಿನಲ್ಲಿ ಅಲ್ಲಾಹುವಿನ ನೆನಪು ಹಾಗು ಪಶ್ಚಾತ್ತಾಪದ ಆವಾಹನೆ ಸುಲಭ ಎನ್ನುತ್ತಾರೆ.

ಅರ್-ರಮದ್- ಮೂಲಪದದಿಂದಲೇ ಹುಟಿದ ಗಾದೆ- ಕಲ್ ಮುಸ್ತಜೀರ್ ಮಿನರ್, ರಮದಾ ಬಿನ್ನರ್. ಬಾಣಲೆಯಿಂದ ಹಾರಿ ಬೆಂಕಿಗೆ ಬಿದ್ದದ್ದು. ಈ ಗಾದೆಯನ್ನು ಓದುತ್ತಿದ್ದಂತೆ, ಜಾಗತಿಕ ಮಹಾಶಕ್ತಿಗಳ ಬೇಗೆಯಡಿ ಸುಡುತ್ತಲೇ ಇರುವ ಪ್ಯಾಲಸ್ಟೇನಿನ ಮಕ್ಕಳ ಮುಖಗಳು ಮನಕ್ಕೆ ಎದುರಾದವು. ಇನ್ನು ಸುಡಲು ಏನೂ ಉಳಿದಿಲ್ಲದಿದ್ದರೂ ಪರಿತಾಪ ಮುಗಿಯದ ಆಫ್ಗಾನಿಸ್ತಾನ್‌ದ ದಿಟ್ಟ ಮಹಿಳೆಯರು ನಕ್ಕರು. ಬಾಣಲೆಯಿಂದ ಬೆಂಕಿಗೆ ಬಿದ್ದು ಕರಟುತ್ತಿರುವ ಇರಾಖಿನಲ್ಲಿ ತಲೆಗೆ ಕೈಹೊತ್ತು ಕೂತವರು ಮನದ ಚಿತ್ರಗಳಾದರು. ಎರಡು ಹೊಟ್ಟೆ ಉರಿಗಳ ನಡುವೆ ಒಣಗಿ ನಲಗುತ್ತಿರುವ ಪ್ರೀತಿಯ ಕಾಶ್ಮೀರದ ತಂಪೆಲ್ಲಿ ಹಾರಿದೆ ಎಂದು ಹುಡುಕುವಂತಾಯಿತು.

ಮಳೆ ನಿಂತರು ಮರದ ಹನಿ ಬಿಡದು - 1

ಮುಂಜಾನೆ ಎಂಟಾಗಿರಬಹುದು. ರಾಮ ಹೋದನೆಂದು ಊರಿನಿಂದ ಫೋನ್ ಬಂತು.ಇದು ಒಂದು ಅನೀರೀಕ್ಷಿತ ಘಟನೆಯೆನು ಆಗಿರಲಿಲ್ಲ.9೦ರ ಆಸುಪಾಸಿನಲ್ಲಿ ಜೀವನದ ಕೊನೆಯ ಘಳಿಘೆಗಳನ್ನು ಕಳೆಯುತ್ತಿದ್ದ ರಾಮ, ಶಬರಿ ರಾಮನನ್ನು ಕಾಯ್ದ ಹಾಗೆ ತನ್ನ ಸಾವನ್ನು ಕಾಯುತ್ತಿದ್ದ.ಪ್ರತಿ ಬಾರಿಯು ಊರಿಗೆ ಹೊದಾಗ ನನ್ನೊಡನೆ ಮಾತಾಡುವಾಗ