ಸರ್ವಶಕ್ತ ಶ್ರೀಹರಿಗೂ ಸೊಳ್ಳೆಕಾಟ?
ರಾಮ ಇದ್ದನಾ ರಾಮಾಯಣ ಆದದ್ದು ಹೌದಾ ಎಂದೆಲ್ಲ ಹೇಗೆ ಪ್ರಶ್ನಿಸಬಾರದೋ ಹಾಗೆಯೇ ರಾಮಾಯಣಕಾಲದಲ್ಲಿ ಸೊಳ್ಳೆಗಳಿದ್ವಾ ರಾಮನಿಗೆ ಕಚ್ತಿದ್ವಾ ಎಂದೂ ಪ್ರಶ್ನಿಸಬಾರದು,
- Read more about ಸರ್ವಶಕ್ತ ಶ್ರೀಹರಿಗೂ ಸೊಳ್ಳೆಕಾಟ?
- Log in or register to post comments
ರಾಮ ಇದ್ದನಾ ರಾಮಾಯಣ ಆದದ್ದು ಹೌದಾ ಎಂದೆಲ್ಲ ಹೇಗೆ ಪ್ರಶ್ನಿಸಬಾರದೋ ಹಾಗೆಯೇ ರಾಮಾಯಣಕಾಲದಲ್ಲಿ ಸೊಳ್ಳೆಗಳಿದ್ವಾ ರಾಮನಿಗೆ ಕಚ್ತಿದ್ವಾ ಎಂದೂ ಪ್ರಶ್ನಿಸಬಾರದು,
ಈಗೀಗ Dell, HP ಎಲ್ಲ ಲಿನಕ್ಸ್ ಅನುಷ್ಟಾಪಿತವಾದ ಲ್ಯಾಪ್ ಟಾಪ್ ಗಳನ್ನು ಮಾರುತ್ತಿದ್ದಾರಂತೆ.
ಇದರ ವಿಚಾರ ಗೊತ್ತಿದ್ದರೆ ಹೇಳಿ. ಬೆಂಗಳೂರಿನಲ್ಲಿ ಇಂತಹ ಲ್ಯಾಪ್ ಟಾಪ್ ಗಳು ಲಭ್ಯ ಇದೆಯೇ? ಎಲ್ಲಿ ಕೊಳ್ಳಬೇಕು ಎನ್ನುವ ಮಾಹಿತಿ ಇದ್ದರೆ ತಿಳಿಸಿ.
ಧನ್ಯವಾದಗಳೊಂದಿಗೆ
ಅರವಿಂದ
"ಬ್ರಾಹ್ಮೀಮುಹೂರ್ತದಲ್ಲಿ ಏಳುವುದು ಆರೋಗ್ಯಕ್ಕೆ ಒಳ್ಳೆಯದು." ಇದು ರಾಮನ ಕತೆಯಂತೆ ಕಟ್ಟುಮಾತು.ನಿದ್ರೆ ಬರದ ಮುನಿಗಳು ಬರೆದುದು.
ಈ ಬಾರಿಯ ವಿಚಿತ್ರಾನ್ನದಲ್ಲಿ, ಶ್ರೀವತ್ಸ ಜೋಷಿಯವರು ಸೊಳ್ಳಾಯಣ ವನ್ನು ಮುಂದಿಟ್ಟಿದ್ದಾರೆ. ರಾಮ ಇದ್ದದ್ದು ನಿಜವೋ ಸುಳ್ಳೋ, ಆದರೆ ರಾಮಾಯಣ ಇರುವುದಂತೂ ನಿಜ. ರಾಮನನ್ನು ಕಂಡವರು ಈಗ ಯಾರೂ ಇಲ್ಲ. ಆದರೆ, ಸೊಳ್ಳೆಗಳನ್ನು ಕಾಣದವರುಂಟೇ? ಇದ್ದನೋ ಇಲ್ಲವೋ ತಿಳಿಯದ ಅಂತಹ ರಾಮನಂತಹ ರಾಮನಿಗೆ, ವಾಲ್ಮೀಕಿ ೨೪೦೦೦ ಶ್ಲೋಕಗಳ ರಾಮಾಯಣವನ್ನು ರಚಿಸಿದ ಮೇಲೆ, ಸರ್ವವ್ಯಾಪಿ ಸೊಳ್ಳೆಗಳ ಮೇಲೆ್ ಒಂದು ಮಹಾಕಾವ್ಯ ಇಲ್ಲದಿದ್ದರೆ, ಒಂದು ಕಾದಂಬರಿ ಇಲ್ಲದಿದ್ದರೆ, ಒಂದು ಅಂಕಣಬರಹವನ್ನಾದರೂ ಬರೆಯಬೇಕೆಂಬ ಬಯಕೆ ಅವರದಿರಬಹುದು.
ಅದೇನೇ ಇರಲಿ. ಅವರು ಅನ್ನಮಯ್ಯ ಒಂದು ಕೀರ್ತನೆಯಲ್ಲಿ ಬೆಳಗಾಗ ಹಾವಿನ ಹೆಡೆಯೇ ಸೊಳ್ಳೆಗಳಿಂದ ಕಾಯುವ ತೆರೆ (ಸೊಳ್ಳೆ ಪರದೆ ಎನ್ನಿ) ಆಗಿರುವ ಶ್ರೀಹರಿಗೆ ಹಾಲುಣಿಸುವುದನ್ನು ನೆನೆದಿದ್ದಾರೆ. ಇದು ನಿಜವಾಗಲೂ ಒಳ್ಳೆಯ ಶೋಧವೇ. ಬೇರೆ ದಾಸರ ಪದಗಳಲ್ಲಿ ಸೊಳ್ಳೆಯ ಉಲ್ಲೇಖ ಇರಬಹುದು - ಆದರೆ ಸೊಳ್ಳೆಯ ಪರದೆಯ ವಿಷಯ ನಾನೆಂದೂ ಕಂಡದ್ದು ನೆನಪಿಲ್ಲ. ಹಾಗಿದ್ದರೆ, ಸೊಳ್ಳೆಪರದೆ ಎಂಬುದು ತೆಲುಗರ ಅವಿಷ್ಕಾರವೇ? ಇದು ಖಂಡಿತ ಯಾರಾದರೂ ಡಾಕ್ಟರೇಟ್ ತೆಗೆದುಕೊಳ್ಳಲು ಮಾಡಬಹುದಾದ ಸಂಶೋಧನಾ ವಿಷಯದಂತೆ ತೋರುತ್ತಿದೆ ನನಗೆ! ಆದರೆ ಸದ್ಯಕ್ಕೆ ನನಗೆ ಅಂತಹ ಉದ್ದೇಶವಾಗಲೀ, ಅಥವಾ ಅದನ್ನು ಕೈಗೆತ್ತಿಕೊಳ್ಳಲು ಸಮಯವಾಗಲೀ ಇಲ್ಲ. ಆದ್ದರಿಂದ, ಇಲ್ಲಿಗೇ ಬಿಟ್ಟುಬಿಡುತ್ತೇನೆ.
ಬಾಲ್ಯದ ಸೊಗಸು
**********
ಹೋಗದೇಕೆ ನನ್ನ ಬದುಕು
ಮರಳಿ ಮತ್ತೆ ಬಾಲ್ಯಕೆ ?
ಹೊಳೆಯದೇಕೆ ಚುಕ್ಕಿ ಬೆಳಕು
ಮುಗ್ಧ ಮನದ ಲಾಸ್ಯಕೆ?
ಅರಳದೇಕೆ ಮೊಲ್ಲೆ ಮೊಗ್ಗು
ಜಡೆಗೆ ಮಾಲೆಯಾಗಲು?
ನುಡಿಯದೇಕೆ ತಾಯಿ ಕೊರಳು
ಜೋಜೋ ಲಾಲಿ ಹಾಡಲು?
ಗೆಳೆಯರೆ, ತಂತ್ರಜ್ಞಾನದ ಸಾಧ್ಯತೆಗಳಿಂದಾಗಿ ಜಗತ್ತು ಕಿರಿದಾಗುತ್ತಿದೆ. ಕನ್ನಡ ಈಗ ಕರ್ನಾಟಕದಲ್ಲಷ್ಟೇ ಅಲ್ಲದೆ ಸಾಮಾನ್ಯ ಕನ್ನಡಿಗನು ಕೇಳಿಯೂ ಅರಿಯದ ಅನೇಕ ದೇಶಗಳಲ್ಲಿ ಅನುರಣಿಸುತ್ತಿದೆ. ಅಂತರ್ಜಾಲದ ಮೂಲಕ ಕನ್ನಡ ವಿಶ್ವಾತ್ಮಕ ದೇಶ ಭಾಷೆಯೂ ಆಗಿಬಿಟ್ಟಿದೆ. ಈ ಪ್ರಕ್ರಿಯೆಗಳು ತೆರೆದಿಟ್ಟಿರುವ ಸಾಧ್ಯತೆಗಳ ಜತೆ ಜತೆಯಲ್ಲೇ ಕನ್ನಡ ಭಾಷೆ, ಅದರ ಅಕ್ಷರಗಳಿಗಿರುವ ಅನನ್ಯತೆಯನ್ನು ಕಿತ್ತುಕೊಳ್ಳುವ ಪ್ರಯತ್ನಗಳೂ ಚಾಲನೆಯಲ್ಲಿವೆ. ಇದಕ್ಕೆ ಉತ್ತಮ ಉದಾಹರಣೆ ಮೈಕ್ರೋಸಾಫ್ಟ್ ಸಂಸ್ಥೆ ತನ್ನ ಆಪರೇಟಿಂಗ್ ಸಿಸ್ಟಂಗಳಲ್ಲಿ ನೀಡುತ್ತಿರುವ ಕನ್ನಡ ಸವಲತ್ತಿನ ಕೊರತೆಗಳು. ಈ ಕುರಿತಂತೆ ಈಗಾಗಲೇ ಸಂಪದದಲ್ಲಿಯೇ ಸಾಕಷ್ಟು ಚರ್ಚೆಗಳು ನಡೆದಿರುವುದರಿಂದ ಅದನ್ನು ಮತ್ತೊಮ್ಮೆ ವಿವರಿಸುವ ಅಗತ್ಯವಿಲ್ಲ ಎಂದುಕೊಳ್ಳುತ್ತೇನೆ.
ಸದ್ಯ ಕರ್ನಾಟಕ ಸರಕಾರ ಮೈಕ್ರೋಸಾಫ್ಟ್ ನ ಜತೆ ಒಂದು ತಿಳಿವಳಿಕೆ ಪತ್ರ ಮಾಡಿಕೊಂಡಿದೆ. ಇದನ್ನು ವಿವರಿಸುವುದಕ್ಕೆ ಮೈಕ್ರೋಸಾಫ್ಟ್ ಮಾಮೂಲಿನ ಮೆಮರಾಂಡಂ ಆಫ್ ಅಂಡರ್ ಸ್ಟ್ಯಾಂಡಿಂಗ್ (MOU)ಎಂಬ ಪದ ಬಳಸದೆ ಲೆಟರ್ ಆಫ್ ಇಂಟೆಂಟ್ ಎಂಬ ಪದ ಬಳಸಿತು. ಇದು ಉದ್ದೇಶಪೂರ್ವಕವಾದುದೋ ಅಲ್ಲವೋ ನನಗೆ ಗೊತ್ತಿಲ್ಲ. ಆದರೆ ಲೆಟರ್ ಆಫ್ ಇಂಟೆಂಟ್ ಎಂಬುದು ಸಾಮಾನ್ಯನಿಗೆ ಸ್ವಲ್ಪ ಹೊಸತಾತ ಪದ. ಯಾವುದೋ ಪ್ರಸ್ತಾವನೆಯನ್ನು ಮುಂದಿಡುತ್ತಿದ್ದಾರೆ ಎಂಬ ಭ್ರಮೆ ಹುಟ್ಟಿಸಬಲ್ಲ ಪದ. ಕಾನೂನಿನ ಪರಿಭಾಷೆಯಲ್ಲಿ ಇದಕ್ಕೂ MOUಗೂ ವ್ಯತ್ಯಾಸವಿಲ್ಲ. ಒಪ್ಪಂದವೊಂದರ ಪೂರ್ವ ಭಾವಿಯಾಗಿ ಮಾಡಿಕೊಳ್ಳುವ ಕರಾರು ಇದು.
ಆಕ್ಟೋಬರ್ ತಿಂಗಳ, 'ಮಯೂರ,' ಮಾಸಪತ್ರಿಕೆಯಲ್ಲಿ " ವಿಹಾರಿ" ಯವರು ಬರೆದ ಲೇಖನ, ಇಂದಿಗೆ ಬಹುಪ್ರಸ್ತುತವಾದ ಲೇಖನ. [ಪುಟ- ೧೨೨.] ಓದುಗರ ಗಮನಕ್ಕಾಗಿ, ಅದನ್ನು ಮತ್ತೆ ಪ್ರಸ್ತುತ ಪಡಿಸುತ್ತಿದ್ದೇನೆ.
ಕೆಳಗಿನ ವಿಶಿಷ್ಟ ಕವನವನ್ನು ಬರೆದವರು, ನಮ್ಮ ಪ್ರಖ್ಯಾತ ನಾಟಕಕಾರರಾದ ಕೈಲಾಸಂರವರು. ನಾಟಕಗಳನ್ನೇ ಅತಿಯಾಗಿ ಬರೆದ ಅವರು, ಕವನವನ್ನು ಬರೆದಿರುವುದು ಅಪರೂಪ. ಅದನ್ನು ಹೆಚ್ಚಾಗಿ ಯಾರೂ ಗಮನಿಸಿಲ್ಲ. ಆದರೆ, 'ವಿಹಾರಿ' ಯವರ ಕಣ್ಣಿನಿಂದ ಅದು ತಪ್ಪಿಸಿಕೊಂಡುಹೋಗಿಲ್ಲ. ನಮ್ಮಲ್ಲಿ ಕೆಲವರು, ಭಗವಾನ್ ನೆ, 'ಪುರ್ಸತ್ ಮೆ ಬನಾಯ,' ಎನ್ನುವ ಮಾತನ್ನು ನಾವೆಲ್ಲಾ ಕೇಳಿದ್ದೇವೆ.
ಅದು ತೀರ ಹಳ್ಳಿಯೇನೂ ಅಲ್ಲ. ಉಡುಪಿಗೂ ಕುಂದಾಪುರಕ್ಕೂ ನಟ್ಟ ನಡುವೆ ಇದ್ದ ಊರು. ಗುಂಡ್ಮಿ, ಪಾಂಡೇಶ್ವರ, ಐರೋಡಿ ಎಂದೆಲ್ಲ ನಾಲ್ಕಾರು ಗ್ರಾಮಗಳು ಸೇರಿ ಒಂದು ಊರು ಆದ ಹಾಗಿತ್ತದು. ನನ್ನ ಬಾಲ್ಯದ ಬಹಳ ಮುಖ್ಯ ಎನ್ನಬಹುದಾದ ದಿನಗಳನ್ನೆಲ್ಲ ನಾನು ಕಳೆದಿದ್ದು ಇಲ್ಲೇ. ನಾನು ಹೈಸ್ಕೂಲಿಗೂ ಬರುವ ಮೊದಲಿನ ಕೆಲವು ನೆನಪುಗಳನ್ನು ಹೇಳುತ್ತೇನೆ.
`ಬಿಳಿಯ ಚಾದರ' ಗುರುಪ್ರಸಾದ್ ಕಾಗಿನೆಲೆಯವರ ಹೊಸ ಮತ್ತು ಮೊದಲ ಕಾದಂಬರಿ. ಇದನ್ನು ಧಾರವಾಡದ ಮನೋಹರ ಗ್ರಂಥ ಮಾಲೆಯವರು ಹೊರತಂದಿದ್ದಾರೆ.