ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

KSRTC ಬಸ್ ನಲ್ಲಿ ಕಂಡಿದ್ದು....

ನಮ್ಮ KSRTC ನವರು ಬಸ್ ಗಳಲ್ಲಿ ಸೂಕ್ತಿಗಳನ್ನೂ, ಸುಭಾಷಿತಗಳನ್ನೂ ತುಂಬಾ ದಿನಗಳಿಂದ ಬರೆಯುತ್ತಿದ್ದಾರೆ. ಇದು ಒಳ್ಳೆಯದೆ. ಆದರೆ ಇವರಿಗೆ ಪ್ರಾಸದ ಹುಚ್ಚು ಬಹಳ ಇದೆ. ಏನೇ ಬರೆಯಲಿ ಅದು ಪ್ರಾಸದಲ್ಲಿದ್ದರೆ ಜನರಿಗೆ ನಾಟುತ್ತದೆ ಅಂತ ಅನ್ಕೊಂಡಿದ್ದಾರೆ. ಕೆಲವು ಸಲ ಇದು ಅತಿರೇಕಕ್ಕೆ ಹೋಗುತ್ತದೆ.

ದೀಪವೊಂದಿರಬೇಕು ನಿನ್ನ ಕಾಣಲು

ದೀಪವೊಂದಿರಬೇಕು ನಿನ್ನ ಕಾಣಲು
ಸೂರೊಂದಿರಬೇಕು ನಿನ್ನ ಕಾಯಲು
ತಿನಿಸಿರಬೇಕು ನಿನ್ನ ಬೇಡಲು
ಮಿನುಗುತ್ತಿರಬೇಕು ನಿನ್ನ ಸಲಹಲು

ಬಯ್ತೆರೆದ ನೆಲ,
ತೂತಿನ ಸೂರು,
ತೊರೆಯದ ಹಸಿವು,
ನಮ್ಮ ಜೀವನದ ಕಾರಿರುಳು

ಕಾಣಲ್ಲೊಲ್ಲೆ ನೀ,
ಕಾಯಲೊಲ್ಲೆ ನೀ,
ಮಣಿಯಲೇಕೆ ನಾ
ನೀ ಬರೆದ ಕಥೆಗೆ...

'ಸರ್ವೈವಲ್ ಒಫ್ ದ ಫಿಟ್ಟೆಸ್ಟ್'

ಬೆಂಗಳೂರು ಕಾಂಕ್ರೀಟ್ ಕಾಡಾಗುತಿದ್ದರೂ ಕಾಗೆಗಳು ಮಾತ್ರ ಹೆಚ್ಚೇ ಆಗಿವೆ ಎಂಬುದು ನನ್ನ ಅನಿಸಿಕೆ.
ಎಲ್ಲೆಡೆ ಮರಗಳು ಉರುಳುತ್ತಿದ್ದರೂ ಕಾಗೆಗಳು ಹೇಗಪ್ಪ ಉಳಿದಿವೆ ಎಂಬುದು ತಲೆ ಕೆರೆದುಕೊಳ್ಳುವಂಥಹಾ ವಿಷಯವೇ!

ಬಾಳು ಬೊಂಬಾಟ್

ಬೆಳ್ ಬೆಳಗ್ಗೆ ಬಲ್ ಮೊಗ್ಲಲ್ ಎದ್ ಬುಟ್
ನನ್ ಹೆಂಡ್ರು ಮಾಡಿದ್ದ ಚಿಬ್ಲಿಡ್ಲಿ ತಿಂದ್ ಬುಟ್
ಕುಟ್ತಾ ಇದ್ರೆ ಕೈಮಣೆ ಕಟ್ ಕಟ್
ಉನಿಯಾಕಂಡಿರ ಕೆಲಸವೆಲ್ಲ ಓಡ್ತವೆ ಪಟ್ ಪಟ್
ಹೀಗಿದ್ರೆ ನಾನು ನನ್ ಬಾಳು ಬೊಂಬಾಟ್

 

ನನ್ನ ಹೊಸ "ಅಪಾರ್ಥಗಳು"

ಮಾರ್ಕ್ಸ್ ವಾದಿಃ ಬರೆದಿದ್ದಕ್ಕೆಲ್ಲಾ ಮಾರ್ಕ್ಸ್ ಕೊಡಬೇಕೆಂದು ವಾದಿಸುವ ವಿದ್ಯಾರ್ಥಿ!

ಸಂತೆಃ ಸಂತ ಶಬ್ಧದ ಸ್ತ್ರೀಲಿಂಗ..!

ಪತ್ರಿಕಾ ಧರ್ಮಃ ಪ್ರತಿಯೊಂದು ಪತ್ರಿಕೆಯವರೂ ತಮಗೆ ಬೇಕಾದಂತೆ ವ್ಯಾಖ್ಯಾನಿಸಬಹುದಾದಂಥದ್ದು

ಕಾಲಿಸುಃ call ಮಾಡು

ಪೇರಿಸು(Pair+ಇಸು)ಃ ಜೋಡಿ ಮಾಡು

mattashtu apaarthagaligaagi bheTi kodi...
www.aparthakosha.wordpress.com

ಶೃಂಗೇರಿಯ ಇತಿಹಾಸ.

ಶೃಂಗೇರಿಯ ಇತಿಹಾಸ : ಆದಿಶಂಕರರು, ತಮ್ಮ ಪ್ರಥಮ, ಹಾಗೂ ಪ್ರಶಷ್ತ್ಯ ವಾದ ಮಠವನ್ನು ಸ್ಥಾಪಿಸುವ ಉದ್ದೇಶ್ಯದಿಂದ ಪವಿತ್ರಸ್ಥಾನದ ಅನ್ವೇಷಣೆಯಲ್ಲಿದ್ದಾಗ, ಶೃಂಗೇರಿಗೂ ಭೇಟಿಯಿತ್ತರು. ಅಲ್ಲಿನ ತುಂಗಾನದಿಯ ದಂಡೆಯ ಬಳಿ ಕಂಡ ದೃಶ್ಯದಿಂದ ಅವರು ಬಹಳ ಪ್ರಭಾವಿತರಾದರು. ಬಿಸಿಲಿನ ತಾಪದಿಂದ ಬಸವಳಿದ ಒಂದು ಗರ್ಭಿಣಿ ಕಪ್ಪೆಯೊಂದಕ್ಕೆ, ಕಾಳಿಂಗಸರ್ಪವೊಂದು, ತನ್ನ ಹೆಡೆಯೆತ್ತಿ ನೆರಳು ನೀಡುತ್ತಿತ್ತು ! ಹೀಗೆ, ಸಹಜ ಶತೃಗಳಾದಾಗ್ಯೂ, ಪರಸ್ಪರ ಪ್ರೀತಿ ಸೌಹಾರ್ದದಿಂದ ಬಾಳ್ವೆಮಾಡುತ್ತಿದ್ದ, ಪಶು, ಪಕ್ಷಿ, ಪ್ರಾಣಿಗಳ ನಡುವಳಿಕೆಯ ಸ್ಥಾನದ ಪವಿತ್ರತೆ, ಅವರನ್ನು ಮೂಕರನ್ನಾಗಿಸಿತು.

ವಸಂತದ ವಿಷಾದ, ಏಪೆಕ್ ಮತ್ತು ಸೋಲ್ಸನಿತ್ಸಿನ್

ಈ ಮರಣ ಪದ್ಯಕ್ಕೆ ಗಾಢವಾಗಿ ಪ್ರತಿಕ್ರಿಯಿಸಿದ ಇಲ್ಲಿ ಬ್ಲಾಗಿಸುವ ಟೀನಾ ಸೋಲ್ಸನಿತ್ಸಿನ್‌ನ "ಎ ಡೇ ಇನ್ ದ ಲೈಫ್ ಆಫ್ ಇವಾನ್ ಡೆನೀಸೊವಿಚ್‌" ನಾನು ಓದಬೇಕು ಎಂದು ಸೂಚಿಸಿದರು. ಓದಬೇಕು ಎಂದು ಈ ಹಿಂದೆ ಅಂದುಕೊಂಡಿದ್ದರೂ ಓದಲಾಗಿರಲಿಲ್ಲ. ಇದೊಂದು ಪ್ರೇರಣೆ ಸಾಕಾಯ್ತು. ಕೈಗೆತ್ತಿಕೊಂಡೆ.

ನಡುವೆ ಏಪೆಕ್ ಸಮಿಟ್‌ನ ಪ್ರೊಟೆಸ್ಟ್‌ನಲ್ಲಿ ಪಾಲ್ಗೊಂಡಾಗ ನಾನು ಹಲವರಿಗೆ ಉತ್ತರಿಸಬೇಕಾಗಿ ಬಂದ ಪ್ರಶ್ನೆ "ನೀನು ಏನನ್ನು ವಿರೋಧಿಸುತ್ತಿದ್ದೀಯ?" ಕೆಲಸ, ಹಣ ಆಸೆಗಳು ಎಲ್ಲ ಇರುವ ನಿನಗೆ ತೊಂದರೆ ಏನು? ಅಂದರೆ, ವಯ್ಯಕ್ತಿಕವಾಗಿ ನಿನಗೆ ಏನು ಅನ್ಯಾಯವಾಗಿದೆ? ಪ್ರಶ್ನೆ ಕೇಳಿದವರು ಉತ್ತರಿಸದ ನನ್ನನ್ನು ಒಂದು ಕ್ಷಣ ದಿಟ್ಟಿಸಿ, ಕೇಳಬಾರದಿತ್ತು ಎಂಬಂತೆ ತಟ್ಟನೆ ತಮ್ಮ ಕೆಲಸಕ್ಕೆ ವಾಪಸಾಗುತ್ತಾರೆ. ಅವರ ತಲೆಯಲ್ಲಿ ಪ್ರಶ್ನೆ. ನನ್ನ ತಲೆಯಲ್ಲಿ ಅದಕ್ಕೆ ಉತ್ತರವಾಗಲು ನಿರಾಕರಿಸುವ ಹಲವು ವಿಚಾರಗಳು.