ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ
ಸದ್ಧಾಂ ಹುಸೇನಿಗೆ ಗಲ್ಲಾಯ್ತಂತೆ
ಜನರನ್ನು ಸಾಯಿಸುವುದೆಂದರೆ ನಡೆದುಕೊಂಡು(ದು) ಹೋದಷ್ಟೇ ಸುಲಭ ಎಂದು ತಿಳಿದಿದ್ದ ಸದ್ದಾಂ ಹುಸೇನಿಯನ್ನು ಕೋರ್ಟ್ ಮಾರ್ಷಲ್ಲುಗಳ ಬಳಿಕ ನೇತಾಡಿಸಿ ಕೊಲ್ಲಬೇಕೆಂದು ತೀರ್ಮಾನವಾಗಿತ್ತಲ್ಲ..
- Read more about ಸದ್ಧಾಂ ಹುಸೇನಿಗೆ ಗಲ್ಲಾಯ್ತಂತೆ
- 5 comments
- Log in or register to post comments
ಹೊಸವರ್ಷದ ಶುಭಾಷಯ - ಹೀಗೂ ಹೇಳಬಹುದೇ?
ಸಂಪದ ಬಳಗದ ಎಲ್ಲರಿಗೂ ಹೊಸ ವರ್ಷದ ಶುಭಾಷಯಗಳು.
ಹೊಸ ವರ್ಷದ ಶುಭಾಷಯ ತಿಳಿಸೋದಕ್ಕೆ ಅಂತ ಒಂದು ಕವನ ಬರೆಯೋಣ ಅಂತ ಕುಳಿತೆ. ಇದ್ದಕ್ಕಿದಂತೆ ಒಂದು ಹೊಸ ಯೋಚನೆ ಬಂತು. "ಒಬ್ಬನೇ ಎಲ್ಲರಿಗೂ ಶುಭಾಷಯ ಹೇಳುವ ಬದಲು, ಎಲ್ಲರೂ ಎಲ್ಲರಿಗೂ ಶುಭಾಷಯ ಹೇಳುವಂತಾದರೆ ಎಷ್ಟು ಚೆನ್ನ ಅಂತ". ನನ್ನ ಯೋಚನೆ/ಕಲ್ಪನೆ ಎಷ್ಟರ ಮಟ್ಟಿಗೆ ಸಿಂಧುವೆಂದು ನಿಜಕ್ಕೂ ನನಗೆ ಗೊತ್ತಿಲ್ಲ.
- Read more about ಹೊಸವರ್ಷದ ಶುಭಾಷಯ - ಹೀಗೂ ಹೇಳಬಹುದೇ?
- Log in or register to post comments
ಚಾಣಕ್ಯ ನೀತಿ
ಓಡುತ್ತಿರುವ ರಥದಿಂದ ಐದು ಕೈಯಳತೆ ದೂರದಲ್ಲಿದ್ದರೆ ಕ್ಷೇಮ. ಹಾಗೆಯೇ ಯೋಧನಿಂದ ಹತ್ತು ಕೈಯಳತೆ ಮತ್ತು ಮದಿಸಿದ ಆನೆಯಿಂದ ಸಾವಿರ ಕೈಯಳತೆ ದೂರದಲ್ಲಿದ್ದರೆ ಕ್ಷೇಮ. ಆದರೆ ದುಷ್ಟ ವ್ಯಕ್ತಿಯಿಂದ ಮಾತ್ರ ಎಷ್ಟು ದೂರವಿದ್ದರೂ ಸಾಲದು. ದುಷ್ಟನ ಸಹವಾಸ ಮಾಡದಿರುವುದೇ ಕ್ಷೇಮ!
ಚಾಣಕ್ಯ ನೀತಿ
ಹೇಗೆ (ಬೆಳಕು ನೀಡದ) ಸಾವಿರಾರು ತಾರೆಗಳಿದ್ದರೂ ರಾತ್ರಿ ಬೆಳಕನ್ನೀಯಲು ಚಂದ್ರನೊಬ್ಬನೇ ಸಾಕೋ,
(ಹಾಗೆ) ಚಾರಿತ್ರ್ಯವಿಲ್ಲದ ನೂರಾರು ಮಕ್ಕಳಿಗಿಂತ ಉತ್ತಮ ಗುಣವುಳ್ಳ ಒಬ್ಬ ಮಗ ಸಾಕು.
(ಆಲೋಚನೆ-ಭಾವನ-ಭಾಷೆ) ಇನ್ನೊಂದು ಒಬ್ಬೆ
ಇದರಿಂದ ನನಗೆ ಬಹಳ ಸಂತೋಷವಾಗಿದೆ. ಲೇಖನವನ್ನು ಬರೆದು ಪ್ರಕಟಿಸಿದರೂ ಒಂದು ವಾರದಲ್ಲಿ ೧೫೦ ಜನ ಓದುವುದಿಲ್ಲ. ಎಚ್.ಪಿ.ಎನ್. ಮತ್ತು ಗೆಳೆಯರಿಗೆ ವಂದನೆಗಳು.
ನನ್ನ ಬರವಣಿಗೆಗೆ ಬಂದಿರುವ ಪ್ರತಿಕ್ರಿಯೆಗಳೂ ಕುತೂಹಲ ಹುಟ್ಟಿಸುತ್ತವೆ. ಅದನ್ನು ನಾನು ನಿರೀಕ್ಷಿಸಿದ್ದೆ.
ನನ್ನ ಅನುಮಾನ ಇರುವುದು, ಭಾವನೆ ಮತ್ತು ಅನುಭವಗಳನ್ನು ಅವುಗಳ ಶುದ್ಧ ಸ್ಠಿತಿಯಲ್ಲಿ ಪಡೆಯಲು, ಆ ಕ್ಷಣದಲ್ಲಿ ಅವುಗಳ ಬಗ್ಗೆ ಯೋಚಿಸುತ್ತಿರುವುದೇ ಅಡ್ಡಿಯಾಗುವುದೇ ಎಂದು. ಏಕೆಂದರೆ, ಏಕೆಂದರೆ ಅನುಭವಿಸುವ ವ್ಯಕ್ತಿಗೂ ಅನುಭವಕ್ಕೂ ಇರುವ ದೂರವೇ `ತಲ್ಲೀನತೆ'ಯನ್ನು ಅಳಿಸಿಬಿಡುವುದೇನೋ. ಇದನ್ನೇ ಕುವೆಂಪು ಅವರು
ನಾ ಮನುಜನು ನನ್ನೆದೆಯಲಿ ಅರಿವೆನ್ನುವ ಬಾವು
ನೋವಾಗಿರೆ, ಕೀವಾಗಿರೆ ಬಾಳ್ಬೆಲ್ಲವೆ ಬೇವು
ಎಂದು ವಿವರಿಸಿದ್ದಾರೆ. ಇರವು ಮತ್ತು ಅರಿವುಗಳ ನಡುವಿನ ಈ ದ್ವಂದ್ವವು ಮನುಷ್ಯನಿಗೆ ಅನಿವಾರ್ಯವೇನೋ. ಇಲ್ಲವಾದರೆ, ಅವನು ಪ್ರಾಣಿಸಹಜವಾದ ಸ್ಠಿತಿಗಾಗಿ ಅಥವಾ ಶಿಶುಸಹಜವಾದ ಅಸ್ತಿತ್ವಕ್ಕಾಗಿ ಹಂಬಲಿಸಬೇಕಾಗುತ್ತದೆ.
ಭಾಷೆಯು ನಮ್ಮ ವಿಧಿಯೆಂಬ ಮಾತನ್ನು ಹಲವರು ಹೇಳಿದರೂ ಅದು ಸರ್ವಸಮ್ಮತವಲ್ಲ. ಅಲ್ಲಮನು ಹೇಳಿದಂತೆ `ಪದ' ಬೇರೆ `ಪದಾರ್ಥ' ಬೇರೆ. ಉದಾಹರಣೆಗೆ `ನೀಲಿ' ಬಣ್ಣವನ್ನು ಹೇಳುವ ಪದಗಳು ಕನ್ನಡದಲ್ಲಿ ಹತ್ತು ಇರಬಹುದು. ಆದರೆ ನೀಲಿಯ ವರ್ಣಛಾಯೆಗಳು ಅನೇಕವೆನ್ನುವುದು ನಮಗೆಲ್ಲರಿಗೂ ಗೊತ್ತು. ಭಾಷಾಲೋಕವು ಅಸಮರ್ಥವೋ ಅಥವಾ ಅದು ನಮ್ಮ ಅನುಭಲೋಕಕ್ಕೆ ಹಾಕಿದ ಅನುಲ್ಲಂಘನೀಯವಾದ ಚೌಕಟ್ಟೋ?
ಈ ಪ್ರಶ್ನೆಗೆ ಉತ್ತರವು ಸರಳವಲ್ಲ. `ಯಥಾ ವಾಚಾ ನಿವರ್ತಂತೇ ಅಪ್ರಾಪ್ಯ ಮನಸಾ ಸಹಾ' ಎಂಬ ಮಾತನ್ನು ದೇವರನ್ನು ಕುರಿತು ಹೇಳಿದಂತೆಯೇ ಲೋಕವನ್ನು ಕುರಿತೂ ಹೇಳಿರಬಹುದು.
- Read more about (ಆಲೋಚನೆ-ಭಾವನ-ಭಾಷೆ) ಇನ್ನೊಂದು ಒಬ್ಬೆ
- 3 comments
- Log in or register to post comments
ಹೊಸ ವರ್ಷದ ಶುಭಾಶಯ
"ಏಯ್... ಎರಡ್ಸಾವ್ರದ ಆರು ಹೋಗುತ್ತಿದೆ.. ಟಾಟಾ ಮಾಡು ಬಾರೇ..."
"ಎಲ್ಲೇ?"
- Read more about ಹೊಸ ವರ್ಷದ ಶುಭಾಶಯ
- Log in or register to post comments
ಹೊಸ ವರ್ಷದ ಶುಭಾಶಯ
"ಏಯ್... ಎರಡ್ಸಾವ್ರದ ಆರು ಹೋಗುತ್ತಿದೆ.. ಟಾಟಾ ಮಾಡು ಬಾರೇ..."
"ಎಲ್ಲೇ?"
"ಅದೇ.... ಅಲ್ಲಿ....!"
"ಓಹ್... ಹೊರಟೇಬಿಡ್ತಾ? ನಿನ್ನೆ ಮೊನ್ನೆ ಬಂದಂಗಿತ್ತಲ್ಲೇ.."
"ಬಂದಿದ್ದೂ ಆಯ್ತು ಹೊರಟಿದ್ದೂ ಆಯ್ತು; ಬೇಗಬೇಗ ಟಾಟಾ ಮಾಡೇ..."
* * *
ಧಾನ್ಯ ದಾಸ್ತಾನಿನ ಗೋಡೌನಿನಲ್ಲಿ ಬಂದಿಯಾಗಿದ್ದ ಹೆಗ್ಗಣವೊಂದು ಗೋಡೆಯಲ್ಲಿ ದೊಡ್ಡದೊಂದು ಕನ್ನ ಕೊರೆಯುತ್ತಿದೆ.. ಬೇಗ ಬೇಗ ಕೊರೆ ದೊಡ್ಡಿಲಿಯೇ: ಹೊಸ ವರ್ಷ ಬರುತ್ತಿದೆ...
ಎರಡು ಬಾರಿ ಕೆಮ್ಮಿ, ಗಂಟಲನ್ನು ಶ್ರುತಿಗೊಳಿಸಿ, ಹಾಡಲು ಕುಳಿತಿದ್ದಾನೆ ಗಾಯಕ.. ಪಲ್ಲವಿ ಮುಗಿದು, ಅನುಪಲ್ಲವಿ ಮುಗಿದು, ಇದು ಎಷ್ಟನೇ ಚರಣ..? ಬೇಗ ಬೇಗ ಹಾಡು ಗೆಳೆಯಾ: ಹೊಸ ವರ್ಷ ಬರುತ್ತಿದೆ...
ಮಗುವನ್ನು ಕಾಲ ಮೇಲೆ ಹಾಕಿಕೊಂಡು, 'ಉಶ್ಶ್ಶ್ಶ್ಶ್...' ಎನ್ನುತ್ತಾ ಕುಳಿತಿದ್ದಾಳೆ ತಾಯಿ; ಉಚ್ಚೆಯನ್ನೇ ಮಾಡುತ್ತಿಲ್ಲ ಪಾಪು! ಬೇಗ ಬೇಗ ಉಚ್ಚೆ ಮಾಡು ಮಗೂ: ಹೊಸ ವರ್ಷ ಬರುತ್ತಿದೆ...
ದನದ ಕೆಚ್ಚಲಿಗೆ ನೀರು ಸೋಕಿ, ಮೊಲೆಗಳನ್ನು ತೊಳೆದು, ದೊಡ್ಡ ಕೌಳಿಗೆಯನ್ನಿಟ್ಟುಕೊಂಡು ಕುಳಿತಿದ್ದಾನೆ ಅಪ್ಪ.. ಸೊರೆಯುತ್ತಲೇ ಇಲ್ಲ ದನ! ಬೇಗ ಬೇಗ ಹಾಲು ಕೊಡು ದನವೇ: ಹೊಸ ವರ್ಷ ಬರುತ್ತಿದೆ...
ನ್ಯಾಲೆಯ ಮೇಲೆ ಬಟ್ಟೆಗಳನ್ನು ನೇತುಹಾಕಿ, ಒಣಗುವುದನ್ನೇ ಕಾಯುತ್ತಾ ಕುಳಿತಿದ್ದಾನೆ ರೂಂಮೇಟ್.. ಅಂಡರ್ ವೇರ್ ಒಣಗುವುದಂತೂ ಯಾವಾಗಲೂ ಲೇಟ್! ಬೇಗ ಒಣಗು ಚಡ್ಡಿಯೇ: ಹೊಸ ವರ್ಷ ಬರುತ್ತಿದೆ...
ಶಾಪಿಂಗಿಗೆ ಹೋದ ಗೆಳೆಯ ಸ್ವೀಟು, ಕೇಕು, ಪಟಾಕಿ.. ಎಲ್ಲಾ ತಂದಿದ್ದಾನೆ. ಆದರೆ ಹೊಸ ಕ್ಯಾಲೆಂಡರು ತರುವುದನ್ನೇ ಮರೆತುಬಿಟ್ಟಿದ್ದಾನೆ! ಮತ್ತೆ ಓಡಿಸಿಯಾಗಿದೆ ಪೇಟೆಯೆಡೆಗೆ. ಬೇಗ ಬಾ ಗೆಳೆಯಾ: ಹೊಸ ವರ್ಷ ಬರುತ್ತಿದೆ...
ಭಟ್ಟರು ಗಂಧ ತೇಯ್ದು, ದೇವರನ್ನು ತೊಳೆದು, ಹೂವೇರಿಸಿ, ಕುಂಕುಮ-ಅರಿಶಿನ ಹಚ್ಚಿ, ಊದುಬತ್ತಿ ಬೆಳಗಿ, ಕಾಯಿ ಓಡೆದು, ನೈವೇದ್ಯ ಮಾಡಿ.... ಅಯ್ಯೋ, ಅವೆಲ್ಲಾ ಇರಲಿ ಭಟ್ರೇ, ಬೇಗ ಮಂಗಳಾರತಿ ಮಾಡಿ: ಹೊಸ ವರ್ಷ ಬರುತ್ತಿದೆ...
* * *
ಅಗೋ.... ಹೊಸ ವರ್ಷ ಬಂದೇಬಿಟ್ಟಿತು..! ಕೊರೆದೂ ಕೊರೆದು ಕೊನೆಗೂ ಗೋಡೆಯಲ್ಲೊಂದು ಸಣ್ಣ ಕಿಂಡಿಯನ್ನು ಮಾಡಿಯೇಬಿಟ್ಟಿದೆ ಹೆಗ್ಗಣ. ಆ ಸಣ್ಣ ಕಿಂಡಿಯಿಂದಲೇ ತೂರಿ ಬರುತ್ತಿದೆ ಹೊಸ ವರ್ಷದ ಆಶಾಕಿರಣ; ಹೊಸ ಬೆಳಕು. ಮಗು ಹಾರಿಸಿದ ಉಚ್ಚೆ ಇಡೀ ಭುವಿಯನ್ನೇ ಒದ್ದೆ ಮಾಡಿದೆ. ಕೌಳಿಗೆ ತುಂಬಿದರೂ ಮುಗಿದಿಲ್ಲ ದನದ ಕೆಚ್ಚಲಿನ ಹಾಲು. ಅಪ್ಪ ಕೂಗುತ್ತಿದ್ದಾನೆ: 'ಏಯ್, ಇನ್ನೊಂದು ಗಿಂಡಿ ತಗಂಬಾರೇ..' ಅಮ್ಮ ಅಡುಗೆ ಮನೆಯಿಂದಲೇ ಉತ್ತರಿಸುತ್ತಿದ್ದಾಳೆ: 'ಸಾಕು ನಮಗೆ; ಉಳಿದಿದ್ದನ್ನು ಕರುವಿಗೆ ಬಿಡಿ.' ಒಣಗಿದ ಚಡ್ಡಿಯ ಮೇಲೆ ಹೊಸ ಪ್ಯಾಂಟೇರಿಸುತ್ತಿದ್ದಾನೆ ರೂಂಮೇಟ್. ಗೆಳೆಯನಂತೂ ಓಡೋಡಿ ಬರುತ್ತಿದ್ದಾನೆ. ಅವನ ಕೈಯಲ್ಲಿ ಪೂರ್ತಿ ಮುನ್ನೂರಾ ಅರವತ್ತೈದು ದಿನಗಳುಳ್ಳ ಕ್ಯಾಲೆಂಡರಿದೆ. ದೇವರಿಗೇ ಆಶ್ಚರ್ಯವಾಗುವಷ್ಟು ದಕ್ಷಿಣೆ ಬಿದ್ದಿದೆ ಭಟ್ಟರ ಮಂಗಳಾರತಿ ಹರಿವಾಣದಲ್ಲಿ.
ಎಲ್ಲರಿಗೂ ಖುಷಿ; ಎಲ್ಲರಿಗೂ ಸಂಭ್ರಮ; ಎಲ್ಲರಿಗೂ ಸಡಗರ.. ಏಕೆಂದರೆ, ಹೊಸ ವರ್ಷ ಬಂದಿದೆ! ಈ ಮಧ್ಯೆ, ಹಾಡುತ್ತಿರುವವನನ್ನು ಎಲ್ಲರೂ ಮರೆತೇ ಬಿಟ್ಟಿದ್ದಾರೆ. ಆತ ಹಾಡುವುದನ್ನು ಒಂದು ಕ್ಷಣ ನಿಲ್ಲಿಸಿಬಿಟ್ಟಿದ್ದಾನೆ. ತಕ್ಷಣ ಎಲ್ಲರಿಗೂ ಅರಿವಾಗಿದೆ. ಎಲ್ಲಾ ಅವನ ಬಳಿ ಹೋಗಿ ಹೇಳುತ್ತಿದ್ದಾರೆ:
"ಹಾಡು ಗೆಳೆಯಾ, ಮುಂದುವರೆಸು. ಹಾಡು ಹಳೆಯದಾದರೇನು, ಭಾವ ಹೊಸತಿದ್ದರೆ ಸಾಕು.."
ಹೊಸ ವರ್ಷದ ಹೊಸ ಕ್ಯಾಲೆಂಡರು ನಿಮ್ಮ ಬದುಕಿನ ಹಾಡಿಗೆ - ಹಾದಿಗೆ ಹೊಸ ಭಾವ ಬೆರೆಸಲಿ ಎಂದು ಹಾರೈಸುತ್ತೇನೆ.
ನೂತನ ವರ್ಷದ ಶುಭಾಶಯಗಳು.
- Read more about ಹೊಸ ವರ್ಷದ ಶುಭಾಶಯ
- Log in or register to post comments
ನಿಜಜೀವನದಲ್ಲಿ ಹಾಸ್ಯ: ಭೀಮ-ದುರ್ಯೋಧನರ ಕಾಳಗ ಮತ್ತು ಸಂಕೋಚ್ಯತೆ
ಹಾಸ್ಯವನ್ನು ಎಲ್ಲೋ ಹುಡುಕಿಕೊಂಡು ಹೋಗುವುದಕ್ಕಿಂತ, ದೈನಂದಿನ ಆಗುಹೋಗುಗಳನ್ನೇ ಸ್ವಲ್ಪ ಎಚ್ಚರದಿಂದ ಗಮನಿಸುತ್ತಿದ್ದರೆ ಅದರಲ್ಲಿ ಸಿಗುವಷ್ಟು ತಿಳಿಯಾದ, ತಾಜಾ ಹಾಸ್ಯ ಇನ್ನೆಲ್ಲೂ ಸಿಗೋದಿಲ್ಲ ಅಂತ ನನ್ನ ಅಜ್ಜ ಮತ್ತು ಅಪ್ಪ ಪದೇ ಪದೇ ಹೇಳುತ್ತಿದ್ದರು. ಹಾಗೆ ನಿಜಜೀವನದಲ್ಲಿ ಕಂಡ ಒಂದೆರಡು ಹಾಸ್ಯ ಸನ್ನಿವೇಶಗಳು ಇಲ್ಲಿವೆ.
- Read more about ನಿಜಜೀವನದಲ್ಲಿ ಹಾಸ್ಯ: ಭೀಮ-ದುರ್ಯೋಧನರ ಕಾಳಗ ಮತ್ತು ಸಂಕೋಚ್ಯತೆ
- Log in or register to post comments
ಹೊಸದಾಗಿ ಸೇರಿಸಿದ "ನುಡಿಮುತ್ತುಗಳ" ಬಗ್ಗೆ
ಸಂಪದ ಆಡಳಿತ ಮಂಡಳಿಯವರಿಗೆ,
ನಾನು ಇತ್ತೀಚಿಗೆ ೫-೬ ನುಡಿಮುತ್ತುಗಳನ್ನು ಸಂಪದಕ್ಕೆ (ನುಡಿಮುತ್ತುಗಳು ವಿಭಾಗಕ್ಕೆ) ಸೇರಿಸಿದೆ. ಇವತ್ತು ಅವುಗಳನ್ನು ಒಮ್ಮೆ ನೋಡೋಣ ಅಂತ ಪ್ರಯತ್ನಿಸಿದೆ. ಆದರೆ ಎಲ್ಲೂ ಅವು ಕಾಣಸಿಗಲಿಲ್ಲ. ಏಕಿರಬಹುದು ಅಂತ ಹೇಳುತ್ತೀರಾ?
- Read more about ಹೊಸದಾಗಿ ಸೇರಿಸಿದ "ನುಡಿಮುತ್ತುಗಳ" ಬಗ್ಗೆ
- 1 comment
- Log in or register to post comments