ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ವಿಶ್ವದ ಮಹಾಮಲಿನ ಸ್ಥಳಗಳಲ್ಲಿ ಭಾರತಕ್ಕೆ ಸ್ಥಾನ!

(ಇ-ಲೋಕ-40)(17/9/2007)

ಕೈಗಾರಿಕೆಗಳು ಪರಿಸರ ಮಾಲಿನ್ಯಕ್ಕೆ ಕಾರಣವಾಗುವುದು ನಮ್ಮ ಅನುಭವಕ್ಕೆ ಬರುತ್ತಿರುತ್ತದೆ.ವಿಶ್ವದ ಅತಿಮಲಿನ ಸ್ಥಳಗಳ ಪಟ್ಟಿ ಪ್ರಕಟವಾಗಿದೆ.ದುರಂತವೆಂದರೆ,ಈ ಪಟ್ಟಿಯಲ್ಲಿ ಭಾರತದ ಎರಡು ಸ್ಥಳಗಳು ಸ್ಥಾನ ಪಡೆದಿವೆ.ಸುಕಿಂದ ಕ್ರೊಮಿಯಮ್ ಗಣಿಗಾರಿಕೆಯಿಂದ ನೀರು ಮಲಿನವಾಗಿದೆಯಂತೆ.ಇಲ್ಲಿನ ಕೆಲಸಗಾರರು ಅದೇ ನೀರನ್ನು ಕುಡಿಯಲು,ದೈನಂದಿನ ಕೆಲಸಗಳಿಗೆ ಬಳಸುವುದರಿಂದ ವಿವಿಧ ರೋಗಗಳಿಗೆ ತುತ್ತಾಗುತ್ತಾರೆ.ಜತೆಗೆ ಬಂಜೆತನ,ವಿಕಲಾಂಗ ಮಕ್ಕಳ ಜನನ ಸಾಮಾನ್ಯ.ಪ್ರಸಿದ್ಧ ಟಾಟಾ ಸ್ಟೀಲ್ ಕಂಪೆನಿ ಈ ಗಣಿಯನ್ನು ನಡೆಸುತ್ತಿದೆ.ಜಂಶದ್‍ಪುರದ ಬಳಿ ಈ ಗಣಿಗಳಿವೆ.ಗುಜರಾತಿನ ವಪಿ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಇನ್ನೊಂದು ಪಟ್ಟಣ.ಇದಕ್ಕೆ ಕಾರಣವಾಗಿರುವುದು ನೀರಿನ ಮಾಲಿನ್ಯವೇ ಆಗಿದೆ.ಈ ನಗರದಲ್ಲಿರುವ ಅಪಾರ ಸಂಖ್ಯೆಯ ಕೈಗಾರಿಕೆಗಳು ರಾಸಾಯಿನಿಕ,ಕ್ರಿಮಿನಾಶಕಗಳು,ಬಣ್ಣಗಳ ತಯಾರಿಯಲ್ಲಿ ತೊಡಗಿದ್ದು,ಇಲ್ಲಿನ ನೀರಿನ ಮೂಲಗಳು ಮಲಿನವಾಗಲು ಕಾರಣವಾಗಿವೆ.ಇಲ್ಲಿ ಲಭ್ಯ ನೀರಿನಲ್ಲಿ ಪಾದರಸದ ಮಟ್ಟ ಸಾಮಾನ್ಯ ಮಟ್ಟಕ್ಕಿಂತ ತೊಂಭತ್ತಾರು ಪಟ್ಟು ಹೆಚ್ಚು! ಈ ಪಟ್ಟಿಯಲ್ಲಿ ರಷ್ಯಾದ ನಾಲ್ಕು ಸ್ಥಳಗಳು ಇವೆ.ಬ್ಲಾಕ್‍ಸ್ಮಿತ್ ಇನ್ಸ್‍ಸ್ಟಿಟ್ಯೂಟ್ ಎನ್ನುವ ಸ್ವತಂತ್ರ ಪರಿಸರ ಸಂಸ್ಥೆಯು ನಡೆಸಿದ ಸಮೀಕ್ಷೆಯಿಂದ ಈ ಪಟ್ಟಿಯನ್ನು ತಯಾರಿಸಲಾಗಿದೆ.ಕಲ್ಲಿದ್ದಲು ಗಣಿಗಳ ಕಾರಣ ಮಲಿನವಾಗಿರುವ ಎರಡು ಚೀನಾದ ಪಟ್ಟಣಗಳೂ ಪಟ್ಟಿಯಲ್ಲಿ ಸೇರಿವೆ.

ಗೂಗಲ್ನಲ್ಲಿ ಚಂದ್ರ !!!

ಗೂಗಲ್ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ, ಅದೆ ಬಾಹ್ಯಾಕಾಶವನ್ನು ಹುಡುಕುವ ಕೆಲಸ. ತಲತಲಾಂತರದಿಂದ ಮನುಷ್ಯನ್ನ ಕಾಡುತ್ತಿರುವ ಪ್ರಶ್ನೆ "ಅಲ್ಲೇನಿದೆ ??"... ಈ ಪ್ರಯತ್ನದಿಂದ "ಅಲ್ಲಿದೆ ನಮ್ಮ ಮನೆ, ಇಲ್ಲಿ ಬಂದೆ ಸುಮ್ಮನೆ... " ಎನ್ನುವವರಿಗೆ ಸೂಕ್ತ ಜಾಗ ಕಲ್ಪಿಸಿಕೊಡಬಹುದೇ ? ಎಂದು ನೋಡಬೇಕು...

ಇ-ಮೇಲ್ ಬಗ್ಗೆ

ಸ್ನೇಹಿತರೇ,

ನಾವು ಇ-ಮೇಲ್ (ಕನ್ನಡ ಪದ ಗೊತ್ತಿಲ್ಲಾ) ಕಳಿಸುವಾಗ 'Regards' ಪದದ ಬದಲಾಗಿ ಯಾವ ಕನ್ನಡ ಪದ ಬಳಸಬಹುದು? ಮತ್ತು ವಿಂಡೋಸ್ ಎಕ್ಸ್ ಪಿ ಯಲ್ಲಿ 'ರ' ಕ್ಕೆ 'ಯ' ಒತ್ತು ಬರಿಸಲು ಯಾವ ಯಾವ ಕೀಲಿ ಅಕ್ಷರಗಳನ್ನು ಬಳಸ ಬೇಕು?

-ಪಂಚಿ.....

'ಅವರೇ ಸ್ವಾಮಿಗಳು'

ಕೆಲವು ವಾರಗಳ ಹಿ೦ದೆ ಒ೦ದು ದಿನ ವಿಜಯ ಕರ್ನಾಟಕ ಪತ್ರಿಕೆಯನ್ನ ಓದುತ್ತಿದ್ದಾಗ ಒ೦ದು ಲೇಖನ ನನ್ನ ಗಮನ ಸೆಳೆಯಿತು. ಆ ಲೇಖನವನ್ನ ಡಾ. ಟಿ.ವಿ. ವೆ೦ಕಟಾಚಲ ಶಾಸ್ತ್ರಿಯವರ "ಉದಾರಚರಿತರು ಉದಾತ್ತಪ್ರಸ೦ಗಗಳು" ಎ೦ಬ ಪುಸ್ತಕದಿ೦ದ ಆಯ್ದು ಪ್ರಕಟಿಸಿದ್ದರು. ಮತ್ತೆ ಮು೦ದಿನವಾರ ಅದೇ ಪುಸ್ತಕದಿ೦ದ ಆಯ್ದ ಇನ್ನೊ೦ದು ಲೇಖನವನ್ನ ಪ್ರಕಟಿಸಿದ್ದರು.

ಶ್ರೀ ಶೃಂಗೇರಿ ಜಗದ್ಗುರುಗಳ ಪರಂಪರೆ :

ಶ್ರೀ ಶೃಂಗೇರಿ ಜಗದ್ಗುರುಗಳ ಪರಂಪರೆ :

ಶ್ರೀ ಶ್ರೀ ಆದಿಶಂಕರರ ಭಕ್ತರಲ್ಲಿ ಪ್ರಧಾನರಾದವರು, ಕೇವಲ ೪ ಜನ. ಅವರೆಲ್ಲಾ ತಮ್ಮ ತಮ್ಮ ಕ್ಷೇತ್ರದಲ್ಲಿ ಅಸಮಾನರು.

ದೃಢಭಕ್ತಿಯಲ್ಲಿ, ಶ್ರೀ ಪದ್ಮಪಾದಾಚಾರ್ಯರು, ಅನುಪಮಸೇವೆಯಲ್ಲಿ, ಶ್ರೀ ತೋಟಕಾಚಾರ್ಯರು, ಪರಮಾತ್ಮ ಸಾಕ್ಷಾತ್ಕಾರದಲ್ಲಿ ಶ್ರೀ ಹಸ್ತಾಮಲಕಾಚಾರ್ಯರು, ಕೊನೆಯದಾಗಿ ಅದ್ವಿತೀಯ ಪಾಂಡಿತ್ಯದಲ್ಲಿ ಶ್ರೀ ಸುರೇಶ್ವರಾಚಾರ್ಯರು.

ಶಂಕರರ ಪ್ರಥಮ ಶಿಷ್ಯನಾಗಿ ಶ್ರೀ ಪದ್ಮಪಾದಾಚಾರ್ಯರು ಪ್ರಥಮರು. ಇನ್ನೂ ಅನೇಕಸ್ಥಾನದಲ್ಲೂ ಇವರು ಪ್ರಥಮರು. ಶ್ರೀ ತೋಟಕಾಚಾರ್ಯರಿಗೆ, ಪದ್ಮಪಾದ ಸುರೇಶ್ವರಾಚಾರ್ಯರಷ್ಟು ವಿದ್ಯೆಯಾಗಲೀ, ಹಸ್ತಾಮಲಕರಷ್ಟು ಬ್ರಹ್ಮಸಾಕ್ಷಾತ್ಕಾರವಾಗಲೀ ಇರಲಿಲ್ಲ. ನಿಷ್ಟಾವಂತ ಸೇವಕನಂತೆ ಗುರುಗಳನ್ನು ವ್ಯಕ್ತಿಗತ ಶುಶ್ರೂಷೆಯಲ್ಲಿ ಆನಂದವನ್ನು ಕಾಣುತ್ತಿದ್ದರು.

ಶ್ರೀ ಹಸ್ತಾಮಲಕಾಚಾರ್ಯರು, ಯಾವುದೊಂದು ಶಾಸ್ತ್ರವನ್ನೂ ಅಧ್ಯಯನ ಮಾಡದಿದ್ದರೂ ಶಂಕರರು ಅವರನ್ನು ಆತ್ಮಸಾಕ್ಷಾತ್ಕಾರ ಪಡೆದವರತರಹ ಉನ್ನತಮಟ್ಟದಲ್ಲಿ ಇರಿಸಿದ್ದರು.

ಶ್ರೀ ಸುರೇಶ್ವರಾಚಾರ್ಯರು ದಕ್ಷಿಣ ಭಾರತದ ಶೃಂಗೇರಿ ಪೀಠದ ಅಧಿಪತಿಗಳಾಗಲು ಕಾರಣ ; ಅವರ ಅದ್ವಿತೀಯ ಪ್ರತಿಭಾಶಕ್ತಿ. ಶಿಷ್ಯರಾಗಿದ್ದಾಗ್ಯೂ ಗುರುಶಿಷ್ಯರ ಮಧ್ಯೆ ವಯಸ್ಸಿನ ಅಂತರ ವಿಪರೀತವಾಗಿತ್ತು. ಪೂರ್ವಾಶ್ರಮದಲ್ಲಿ ಮಂಡನಮಿಶ್ರರೆಂದು ಹೆಸರುವಾಸಿಯಾಗಿದ್ದ ಅವರು, ಪ್ರಖರವಾದ ಶಾಸ್ತ್ರಾರ್ಥದಲ್ಲಿ ಪರಾಜಿತರಾದಮೇಲೆ ಶಂಕರಭಗವತ್ಪಾದರ ಪಟ್ಟಶಿಷ್ಯರಾದರು. ಸರಳ, ಮತ್ತು ವಿದ್ವತ್ಪೂರ್ಣ ವ್ಯಕ್ತಿತ್ವವಿದ್ದರೂ ಆವರ ವಿನಯತೆಗೆ ಶಂಕರರು ಮಾರುಹೋಗಿದ್ದರು.

ಸುರೇಶ್ವರಾಚಾರ್ಯರ ಉತ್ತರಾಧಿಕಾರಿಗಳಾಗಿ ಬಂದವರು, ನಿತ್ಯಬೋಧಘನರು, ತದನಂತರ, ಜ್ಞಾನಘನರು, ಜ್ಞಾನೋತ್ತಮರು, ಜ್ಞಾನಗಿರಿಗಳು, ಸಿಂಹಗಿರಿಗಳು, ಈಶ್ವರತೀರ್ಥರು, ನರಸಿಂಹತೀರ್ಥರು.

ಶ್ರೀ ಸಚ್ಚಿದಾನಂದ ಭಾರತಿಗಳು ೨೭ ನೇ ಆಚಾರ್ಯರು.

ಶ್ರೀ ಅಭಿನವ ಸಚ್ಚಿದಾನಂದ ಭಾರತಿಗಳು ೨೮ ನೆಯವರು.

ಶ್ರೀ ನೃಸಿಂಹಭಾರತಿಗಳು ೨೯ನೆಯವರು.

೩೦ ನೆಯವರಾಗಿ, ಸಚ್ಚಿದಾನಂದಭಾರತಿಗಳು.

ಶ್ರೀ ಅಭಿನವವ ಸಚ್ಚಿದಾನಂದ ಭಾರತೀ ಸ್ವಾಮಿಗಳು ೩೧ ನೆಯವರಾಗಿ ನೇಮಿಸಲ್ಪಟ್ಟರು.

೩೨ ನೆಯಾರಾಗಿ ಶ್ರೀ ನೃಸಿಂಹಭಾರತಿಗಳು ಸುಮಾರು ೧೯ ನೆಯ ಶತಮಾನದ ಬಹುಭಾಗ ಪೀಠಾಧಿಪತಿಗಳಾಗಿದ್ದರು.

ಶ್ರೀ ಸಚ್ಚಿದನಂದ ಶಿವಾಭಿನವ ನೃಸಿಂಹಭಾರತಿಗಳು ೩೩ ನೆಯ ಪೀಠಾಧಿಪತಿಗಳಾಗಿ ನೇಮಿಸಲ್ಪಟ್ಟರು.

ಅಂಕುರ

 

ಯಾಕೆ
ಪದ್ಯ ಹುಟ್ಟುವ ಮೊದಲೇ
ಪದಗಳ ಕುಲಾವಿಯ ಸಡಗರ?
ಹುಟ್ಟಿದ ಮೇಲೋ-
ತೊದಲು, ಜೊಲ್ಲು,
ಅಕಸ್ಮಾತ್
ನಿದ್ದೆಯಲ್ಲೇ ನಗುವ ಚಮತ್ಕಾರ!

ಭಾರತ ಎಂದರೆ ಏನು?

ಭಾರತ ಎಂದರೆ ಏನು?

ನಮ್ಮ ದೇಶದ ಅಧಿಕೃತ ಹೆಸರು ಇಂಡಿಯ. ಆದರೆ ನಮ್ಮಲ್ಲಿ ಕೆಲವು ಜನ ಇದನ್ನ ಹಿಂದೂಸ್ತಾನ, ಭಾರತ ಅಂತ ಕರೆಯುತ್ತೇವೆ.
ನನಗೆ ಇಂಡಿಯಾ ಅಂದ ತಕ್ಷಣ ನಮ್ಮ ಬೆಂಗಳೂರಿಂತ ಪಟ್ಟಣಗಳು, ಅಲ್ಲಿನ ಮೋಸ , ಧಗ, ವಂಚನೆಗಳೆಲ್ಲವೂ ಕಣ್ಮುಂದೆ ಬರುತ್ತವೇ. IT. BT, ವಿಜ್ಞಾನ-ತಂತ್ರಜ್ಞಾನ ಕ್ಶೇತ್ರದಲ್ಲಿ ಸಾಧನೆ ಮಾಡಿದನ್ತ ದೇಶ ಕಣ್ಣ ಮುಂದೆ ಬರುತ್ತೆ!

ಮಾಸದ ಭಾವನೆಗಳು

ಬಾರದೆ೦ದು ಬದಿಗೊತ್ತಿದ
ಆ ಹಲವು ಬಾಲ್ಯದ ಕ್ಷ್ಣಣಗಳು
’ಛಾ’ಗೆ೦ದು ಹೊರಗೆ ಹೋದಾಗ
ಕಾಕ ಅ೦ಗಡಿಯಲ್ಲಿ ಕ೦ಡ ಕ೦ದಮ್ಮನ
ಕಣ್ಣ೦ಚಿನಿ೦ದ ಉದುರುವುದನ್ನು ಕ೦ಡು
ಕಸಿವಿಸಿಗೊ೦ಡನು ನಮ್ಮ ಕವಿವರ್ಯನು

***********************************************

ನನ್ನ ಕಣ್ಣುಗಳಲ್ಲಿ ನಿರ೦ತರವಾಗಿ
ನಿ೦ತಿದ್ದ ಪ್ರಶ್ನೆಗಳೆಲ್ಲ
ಕಾಣದಾಗಿವೆಯೆ೦ದ ಮಾತ್ರಕ್ಕೆ
ಉತ್ತರಗಳೆಲ್ಲ ದೊರೆತವೆ೦ದಲ್ಲ
ಕೊ೦ಚ ಇಣುಕಿ ನೊಡಿದರೆ ತಿಳಿದೀತು
ಆ ಎಲ್ಲ ಪ್ರಶ್ನೆಗಳು
ಮುದಿಯಾಗಿ ಬಾಡಿ ಬತ್ತಿ ಮಲಗಿರುವಾಗ
ಅದರ ಮೇಲೆ ಹತಾಶೆಯು ’ಕಫನ್’ ಹೊದೆಸಿ ಕುಳಿತಿರುವುದನ್ನು

************************************************

ತಂದೆ ತಾಯಿ ಮತ್ತು ಮಕ್ಕಳು

ನಾನೂ ಒಬ್ಬ ತಂದೆಯಾಗಿ ನಿನ್ನೆ ಕನ್ನಡ ಪ್ರಭದಲ್ಲಿ (15-09-2007 -ಸಖಿ)-ಮೆಚ್ಚಿಕೊಂಡ ಲೇಖನ [http://kannadaprabha.com/NewsItems.asp?ID=KP720070914025222&Title=Sakhi&lTitle=%D1%DAT&Topic=0&Dist=0| ಗುರಿ ಅವರದಾಗಿರಲಿ, ಗುರು ನೀವಾಗಿರಿ ಸಾಕು]ಮಕ್ಕಳು ಮತ್ತು ಹೆತ್ತವರ ಬಗ್ಗೆ ಖಲೀಲ್ ಗಿಬ್ರಾನ್ ಹೇಳಿದ್ದನ್ನೂ ಬಾಕ್ಸ್ ಮಾಡಿ ಲೇಖನಕ್ಕೆ ಹೈಲೈಟ್ ಮಾಡಿದ್ದಾರೆ-

ಶ್ರೀ ಶೃಂಗೇರಿ ಜಗದ್ಗುರುಗಳ ಪರಂಪರೆ :

ಶ್ರೀ ಶ್ರೀ ಆದಿಶಂಕರರ ಭಕ್ತರಲ್ಲಿ ಪ್ರಧಾನರಾದವರು, ಕೇವಲ ೪ ಜನ. ಅವರೆಲ್ಲಾ ತಮ್ಮ ತಮ್ಮ ಕ್ಷೇತ್ರದಲ್ಲಿ ಅಸಮಾನರು. ದೃಢಭಕ್ತಿಯಲ್ಲಿ, ಶ್ರೀ ಪದ್ಮಪಾದಾಚಾರ್ಯರು, ಅನುಪಮಸೇವೆಯಲ್ಲಿ, ಶ್ರೀ ತೋಟಕಾಚಾರ್ಯರು, ಪರಮಾತ್ಮ ಸಾಕ್ಷಾತ್ಕಾರದಲ್ಲಿ ಶ್ರೀ ಹಸ್ತಾಮಲಕಾಚಾರ್ಯರು, ಕೊನೆಯದಾಗಿ ಅದ್ವಿತೀಯ ಪಾಂಡಿತ್ಯದಲ್ಲಿ ಶ್ರೀ ಸುರೇಶ್ವರಾಚಾರ್ಯರು.