ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಮ್ಮ ಬಾಳು

ನನ್ನ ಗೆಳತಿ ನೀನು, ಜೊತೆಗಾತಿ ನೀನು
ನೀ ನಿಗಲು ಚೆನ್ನ ಬಾಳು
ನೀ ಮುನಿಸಿಕೊಂಡ್ರೆ, ಮನೆ ಬಿಟ್ಟು ಹೋದ್ರೆ
ಆಗುವುದು ಬಾಳು ಗೋಳು.

ನನ್ನ ಚೆಲುವೆ ನೀನು, ನನ್ನ ಒಲವೆ ನೀನು
ನೀ ನಿರಲು ಚೆನ್ನ ಬಾಳು
ನೀ ನೊಂದುಕೊಂಡ್ರೆ, ನೀ ಬೆಂದುಕೊಂಡ್ರೆ
ಆಗುವುದು ಬಾಳು ಗೋಳು.

ಮಲ್ಲಿಗೆಯೇ ನೀನು, ಸಂಪಿಗೆಯೇ ನೀನು
ನೀ ನಗಲು ಕಂಪು ಬಾಳು
ನೀ ಬಾಡಿಹೋದ್ರೆ, ನೀ ಮುದುಡಿಕೊಂಡ್ರೆ

ಜಾತಿಕೂಪದಲ್ಲೊಂದು ಪ್ರೀತಿಯ ಹೂವು

ಜಾತಿಕೂಪದಲ್ಲೊಂದು ಪ್ರೀತಿಯ ಹೂವು
ಬಿಹಾರದಿಂದ ಮತ್ತೆರಡು ಆಘಾತಕಾರಿ ಸುದ್ದಿಗಳು ಬಂದಿವೆ. ಸರಗಳ್ಳನನ್ನು ಒದ್ದು ಬೈಕ್ಗೆ ಕಟ್ಟಿ ಎಳೆದಾಡಿದ ಈ ಜನ ಈಗ ಹತ್ತು ಜನ ಕಳ್ಳರ ಕಣ್ಣುಗಳನ್ನೇ ಕಿತ್ತುಹಾಕಿದ್ದಾರೆ. ಇನ್ನೂ ಹತ್ತು ಜನ ಕಳ್ಳರನ್ನು ಬಡಿದು ಸಾಯಿಸಿದ್ದಾರೆ. ಇವರಿಗೆ ಒಟ್ಟಿಗೇ ಹತ್ತು ಜನವೇ ಹೇಗೆ ಸಿಗುತ್ತಾರೋ ತಿಳಿಯದು! ಅದೇನೇ ಇರಲಿ, ಇದನ್ನು ಮಾಡಿದವರು ಶ್ರೀಮಂತರೇನಲ್ಲ; ನನ್ನ ನಿಮ್ಮಂತಹ ಜನಸಾಮಾನ್ಯರೇ. ಸದ್ಯಕ್ಕೆ ರಾಜ್ಯವನ್ನು, ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ, ಇಡೀ ಭಾರತದಲ್ಲಿ ಅತ್ಯುತ್ತಮ ಮುಖ್ಯಮಂತ್ರಿ ಎಂದು ಹೆಸರಾದ ನಿತೀಶ್ ಕುಮಾರ್ ಆಳುತ್ತಿರುವ ಸಮಯದಲ್ಲೂ ಇಂತಹ ವಿಕ್ಷಿಪ್ತ ಘಟನೆಗಳು ನಡೆಯುತ್ತಿವೆ ಎಂದರೆ? ಬಿಹಾರದ ಈ ವಿಕ್ಷಿಪ್ತತೆಯ ರೋಗ ಅಲ್ಲಿನ ಜಾತಿವಾದಿ ಹಾಗೂ ಜಮೀನ್ದಾರಿ ಸಾಮಾಜಿಕ - ಆರ್ಥಿಕ - ಸಾಂಸ್ಕೃತಿಕ ನೆಲದಲ್ಲಿ ಆಳವಾಗಿ ಬೇರೂರಿದೆ. ಲಾಲೂ ಪ್ರಸಾದ್ ಯಾದವ್ ಇದನ್ನು ಬಳಸಿಕೊಂಡು ತಮ್ಮ ಕೌಟುಂಬಿಕ ರಾಜಕಾರಣಕ್ಕೆ ನೆಲೆ ಮಾಡಿಕೊಂಡರಷ್ಟೆ. ಅವರು ಈ ರೋಗದ ಮೂಲೋತ್ಪಾಟನೆಯ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಅದರೆಲ್ಲದರ ಪಾಪದ ಫಲವನ್ನು ಈಗ ನಿತೀಶ್ ಹೊರಬೇಕಿದೆ. ದೀರ್ಘಕಾಲಿಕ ಹತಾಶೆಯಲ್ಲಿ ಬೆಂದ ಜನ ವಿಕ್ಷಿಪ್ತರಾಗದೇ ಇನ್ನೇನಾದಾರು? ಅದೂ ಪೋಲೀಸ್ ವ್ಯವಸ್ಥೆ ಪೂರ್ತಿ ಭ್ರಷ್ಟವಾಗಿ, ಉಳ್ಳವರೊಂದಿಗೆ ಶಾಮೀಲಾಗಿರುವಾಗ? ಮೊನ್ನೆ ಸರಗಳ್ಳನ ಮೇಲೆ ನಡೆದ ದೌರ್ಜನ್ಯದ ಬಗೆಗೆ ಅಲ್ಲಿನ ಪೋಲೀಸ್ ಮೊದಮೊದಲು ಪ್ರತಿಕ್ರಿಯಿಸಿದ್ದು ಉಡಾಫೆಯೊಂದಿಗೇ! ಯಾವುದೇ ವೈಯುಕ್ತಿಕ ದೌರ್ಬಲ್ಯಗಳಿಲ್ಲದ, ಪರಿಶುದ್ಧ ವ್ಯಕ್ತಿತ್ವದ ನಿತೀಶ್ ಕುಮಾರ್‍ಗೆ (ಇಂತಹವರಿಗೆ ಬಿ.ಜೆ.ಪಿ.ಯೇ ಮಿತ್ರ ಪಕ್ಷವಾಗಬೇಕಾಗಿ ಬಂದಿರುವುದು ಇಂದಿನ ರಾಜಕಾರಣದ ದುರಂತವಾಗಿದೆ!) ಇದೆಲ್ಲವೂ ತಮ್ಮ ಆಳ್ವಿಕೆಯನ್ನು ಕುರಿತಂತೆ ಎಚ್ಚರಿಕೆಯ ಗಂಟೆಗಳಾಗಬೇಕು. ಏಕೆಂದರೆ ಅವರು, ಮೆಗಾ ಅಭಿವೃದ್ಧಿಯ ಜಾಗತೀಕರಣದ ಈ ದಿನಗಳಲ್ಲೂ ಕೇರಳದ ಮುಖ್ಯಮಂತ್ರಿ ಅಚ್ಯುತಾನಂದನ್ ರಂತೆ ಜನಸಾಮಾನ್ಯರ ಕಷ್ಟ - ಸುಖಗಳೊಂದಿಗೆ ಗುರುತಿಸಿಕೊಳ್ಳಬಯಸುವ ಅಪರೂಪದ ರಾಜಕಾರಣಿ.

ಸಾರ್ವಜನಿಕ ವಾಹನ ಬಳಸಿ ವಾಯುಮಾಲಿನ್ಯ ತಗ್ಗಿಸಿ ಅಂತಾರೆ...

ಮೊನ್ನೆ ಬಿಎಂಟಿಸಿ ಬಸ್ಸ್ ಹಿಂದುಗಡೆ ‘ಸಾರ್ವಜನಿಕ ವಾಹನ ಬಳಸಿ ವಾಯುಮಾಲಿನ್ಯ ತಗ್ಗಿಸಿ’ ಎಂಬ ಬರಹ ಓದಿದೆ. ಸಾರ್ವಜನಿಕ ವಾಹನ ಬಳಸಿದರೆ ವಾಯುಮಾಲಿನ್ಯ ಹೇಗೆ ಕಡಿಮೆ ಆಗುತ್ತಿದೆ. ಆ ವಾಹನಗಳಿಂದ ಹೊಗೆ ಬರುವುದಿಲ್ಲವೇ ಎಂಬ ತುಂಟ ಪ್ರಶ್ನೆ ಮನದಲ್ಲಿ ಎದ್ದಿತು. ಅಷ್ಟೇ ಅಲ್ಲ ‘ಸಾರ್ವಜನಿಕ ವಾಹನ ತಾನೇ ಬಳಸಿದರಾಯಿತು.

ಒಂದು ಸಂದೇಹ.......

"ಮೋಹದ ಹೆಂಡತಿ ತೀರಿದ ಬಳಿಕ ಮಾವನ ಮನೆಯ ಹಂಗಿನ್ಯಾಕೋ...." ಈ ಸಾಲು ಯಾವ ಕವನದಲ್ಲಿದೆ ಮತ್ತು ಇದನ್ನು ಬರೆದವರಾರು ಎಂಬುದನ್ನು ತಿಳಿದವರು ದಯಮಾಡಿ ತಿಳಿಸುವಿರಾ?

ಯಾರು ಮೇಲು?

ಎನ್ನೊಳಗೆ ನೀ ಹೊಕ್ಕು
ನಿನ್ನೊಳಗೆ ನಾ ಹೊಕ್ಕು
ನೀನಿಲ್ಲದೆ ನಾನುಂಟೆ ?
ನಾನಿಲ್ಲದೆ ನೀನುಂಟೆ?
ನಾ ಮೇಲೋ, ನೀ ಮೇಲೋ
ಮೇಲ್ಯಾರು ಓ ದೇವರೆ? ನೀನೇ, ನಿನ್ನ ಒಕ್ಕಲಾದ ನಾನೆ ?
ತಿಳಿಯದಾಗಿದೆ ನೋಡಾ

ಈ ಜರ್ಮನಿಯರಿಗೆ, ಇಂಗ್ಲೀಷ ಬರೋದಿಲ್ಲ..

ಈ ಜರ್ಮನಿಯರಿಗೆ, ಇಂಗ್ಲೀಷ ಬರೋದಿಲ್ಲ..

ಇವರು ಎಲ್ಲವನ್ನು ತಮ್ಮ ನುಡಿಯಲ್ಲಿ ಸಾಧಿಸಿರೋದರಿಂದ ಇಂಗಲೀಸು ಅಂದರೆ ಅಸಡ್ಡೆ ಜಾಸ್ತಿ..

ಇವತ್ತು ನಡೆದ ವಿಷಯ ಹೇಳುತ್ತೀನಿ..
ಬೆಳಿಗ್ಗೆ arbeitsplatzಗೆ (ಕೆಲಸದಜಾಗ ಅಂತ ಜರ್ಮನಿಯಲ್ಲಿ ಆಫೀಸಿಗೆ ಕರೀತಾರೆ :)) ಬಂದ ಕೂಡಲೆ, ನನ್ನ ಜರ್ಮನ್ mitarbeiter (mit + arbeiter) ಅಂದರೆ ಜೊತೆಗೆಲಸಗಾರ :) ನನ್ನ ಬಳಿ ಬಂದು Guten Morgen ಅಂದು ಹಲ್ಲು ಕಿರಿದ..

"ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ"

ಗಾಂಧಿ ಎಂದರೆ ಸೋನಿಯಾಗಾಂಧಿ.
ಮಹಾತ್ಮಾಗಾಂಧಿ ಬಿಡಿ,ಕೆಲವರ್ಷಗಳ ಹಿಂದೆ ಇದ್ದ ಇಂದಿರಾ,ರಾಜೀವ್ ಗಾಂಧಿಯನ್ನು ಮರೆತು ಬಿಡುವ ಕಾಂಗೈಗಳು 'ರಾಮ ಇಲ್ಲ'ಎನ್ನುವುದರಲ್ಲಿ ವಿಶೇಷವೇನಿಲ್ಲ.

ಯಕ್ಷಲೋಕದ ಧ್ವನಿ

ಉತ್ತರ ಕನ್ನಡ ಜಿಲ್ಲೆಯ ಹಳದಿಪುರವೆಂಬ ಊರಿನಿಂದ ‘ಯಕ್ಷರಂಗ’ ಎಂಬ ಮಾಸಪತ್ರಿಕೆ ಕಳೆದೊಂದು ವರ್ಷದಿಂದಲೂ ಪ್ರಕಟವಾಗುತ್ತಿದೆ. ಯಾಕ್ಷಗಾನಕ್ಕೆ ಮೀಸಲಾದ ಪತ್ರಿಕೆಯೊಂದರ ಹೊಣೆಯನ್ನು ಒಬ್ಬನೇ ಹೊರುವುದೆಂದರೆ ತ್ರಿವಿಕ್ರಮನ ಹೆಜ್ಜೆಗೆ ತಲೆಯೊಡ್ಡಿದಂತೆ ಎಂದು ಗೊತ್ತಿದ್ದೂ ಅಂಥದ್ದೊಂದು ಸಾಹಸಕ್ಕೆ ಕೈ ಹಾಕಿದ್ದು ಗೋಪಾಲಕ್ರಷ್ಣ ಭಾಗವತ ಎಂಬ ಪ್ರತಿಭೆ.
ಅಪರೂಪಕ್ಕೆಂಬಂತೆ, ಸಾಂಸ್ಕ್ರತಿಕ ಕಾಳಜಿಯುಳ್ಳ, ಸೀಮಿತ ಮಾರುಕಟ್ಟೆಯುಳ್ಳ, ಯಕ್ಷಗಾನದ ಕುರಿತು ಬರೆಯುವುದಕ್ಕೆ ಎಷ್ಟು ಸರಕು ಇದೆ ಎಂದು ಮನವರಿಕೆ ಮಾಡಿಸಿಕೊಡುತ್ತಿರುವ ಈ ಪತ್ರಿಕೆ ದಿನ ಕಳೆದಂತೆ ಬಲಗೊಳ್ಳುತ್ತಿರುವುದು ಖುಶಿಯ ಸುದ್ದಿ. ಯಕ್ಷಗಾನವನ್ನು ಹಾಗೆ ಹೀಗೆ ಎಂದೆಲ್ಲ ಸವಕಲು ಪದಗಳಿಂದ ಬಣ್ಣಿಸುವ ಅಥವಾ ಅದರ ದುರ್ದೆಶೆಯ ಕುರಿತು ಗೋಳಿಡುವ ಪೂರ್ವಾಗ್ರಹ-ಪೀಡಿತ ಪ್ರವ್ರತ್ತಿಗಿಂತ ಭಿನ್ನವಾದ ನಿಲುವು ‘ಯಕ್ಷರಂಗ’ದ್ದು. ರಂಗಕಲೆಯೊಂದರ ಭೂತ-ವರ್ತಮಾನ-ಭವಿಷ್ಯತ್ತನ್ನು ಚಿಕಿತ್ಸಕ ದ್ರಷ್ಟಿಯಿಂದ ನೋಡುವ, ಸಾಕಷ್ಟು ಹಿನ್ನೆಲೆ ಜ್ಞಾನವುಳ್ಳ, ಯಕ್ಷಗಾನದ ಕುರಿತಾದ ನಿರ್ಲಕ್ಷ್ಯವನ್ನು ಎತ್ತರದ ಧ್ವನಿಯಲ್ಲಿ ಖಂಡಿಸುವ ಗೋಪಾಲರ ಈ ಸಂಚಿಕೆಯ ಸಂಪಾದಕೀಯವನ್ನು ನೋಡಿ.

ಯಕ್ಷಲೋಕದ ಧ್ವನಿ

ಉತ್ತರ ಕನ್ನಡ ಜಿಲ್ಲೆಯ ಹಳದಿಪುರವೆಂಬ ಊರಿನಿಂದ ‘ಯಕ್ಷರಂಗ’ ಎಂಬ ಮಾಸಪತ್ರಿಕೆ ಕಳೆದೊಂದು ವರ್ಷದಿಂದಲೂ ಪ್ರಕಟವಾಗುತ್ತಿದೆ. ಯಾಕ್ಷಗಾನಕ್ಕೆ ಮೀಸಲಾದ ಪತ್ರಿಕೆಯೊಂದರ ಹೊಣೆಯನ್ನು ಒಬ್ಬನೇ ಹೊರುವುದೆಂದರೆ ತ್ರಿವಿಕ್ರಮನ ಹೆಜ್ಜೆಗೆ ತಲೆಯೊಡ್ಡಿದಂತೆ ಎಂದು ಗೊತ್ತಿದ್ದೂ ಅಂಥದ್ದೊಂದು ಸಾಹಸಕ್ಕೆ ಕೈ ಹಾಕಿದ್ದು ಗೋಪಾಲಕ್ರಷ್ಣ ಭಾಗವತ ಎಂಬ ಪ್ರತಿಭೆ.