"ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ"

"ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ"

ಗಾಂಧಿ ಎಂದರೆ ಸೋನಿಯಾಗಾಂಧಿ.
ಮಹಾತ್ಮಾಗಾಂಧಿ ಬಿಡಿ,ಕೆಲವರ್ಷಗಳ ಹಿಂದೆ ಇದ್ದ ಇಂದಿರಾ,ರಾಜೀವ್ ಗಾಂಧಿಯನ್ನು ಮರೆತು ಬಿಡುವ ಕಾಂಗೈಗಳು 'ರಾಮ ಇಲ್ಲ'ಎನ್ನುವುದರಲ್ಲಿ ವಿಶೇಷವೇನಿಲ್ಲ.
ಇನ್ನು ಕರುಣಾನಿಧಿ- ಮುದಿ ಪ್ರಾಯ,ಮುಖ್ಯಮಂತ್ರಿ,ಜತೆಗೆ ಮಹಾನ್ ಸಾಹಿತಿ, ಅರಳುಮರಳು-ಅಹಂಕಾರ ಸಹಜ.ಬಾಯಿಗೆ ಬಂದುದನ್ನು ಹೇಳುತ್ತಾರೆ.ಬಾಕಿ ಧರ್ಮವನ್ನು ನಿಂದಿಸಲಿ ಎಂದು ಕೇಳುವುದು ಸರಿಯಲ್ಲ.
ಆ ಕಾಲದ ರಾಮಭಕ್ತರು ಸಾವಿರಾರು ಮೈಲಿ ದೂರದಲ್ಲಿದ್ದ ರಾವಣನಲ್ಲಿ ಹೋಗಿ,ಅವನೊಂದಿಗೆ ಯುದ್ಧ ಮಾಡಿದರೇ ಹೊರತು, ರಾವಣನ ಸಂಬಂಧಿಗಳ ಮನೆಗೆ ಕಲ್ಲು ತೂರಾಡುವ ಕೆಲಸ ಮಾಡಲಿಲ್ಲ.
ರಾಮ ಬಯಸಿದಲ್ಲಿ ಮಂದಿರ ನಿರ್ಮಾಣ ಎಷ್ಟರ ವಿಷಯ.ರಾಮನಿಗೆ ಅದು ಇಷ್ಟವಿಲ್ಲದಿರಬಹುದು.ರಾಮನ ಗುಣ,ನಡತೆಯನ್ನು ಜನತೆ ಅಳವಡಿಸಿಕೊಳ್ಳಲಿ ಎಂಬುದು ಅವನಿಚ್ಛೆ ಇರಬಹುದು.ಮಂದಿರವೇ ಇಷ್ಟವಿಲ್ಲ ಎಂದ ಮೇಲೆ ಸೇತುವೆ, ಕೇವಲ ರಾವಣನ ಮೇಲೆ ಯುದ್ಧಕ್ಕಾಗಿ ನಿರ್ಮಿಸಿದ್ದು,ರಾಮ ಹಿಂದಿರುಗುವಾಗ ಪುಷ್ಪಕವಿಮಾನದಲ್ಲಿ ಬಂದನೇ ಹೊರತು ಸೇತುವೆ ಮೇಲೆ ಬಂದಿಲ್ಲ. ಆ ವಾನರರು ನಿರ್ಮಿಸಿದ ಸೇತುವೆಯನ್ನು ಈ (ವಾ)ನರರು ಮುರಿಯಲಿ ಬಿಡಿ.
ರಾಮನ ವಿಷಯ ಬಂದ ಕೂಡಲೇ ಎದ್ದು ಕೂಡುವ ಪಕ್ಷಗಳೇ,ರಾಮಸೇತು ಬಿಡಿ , ನಿನ್ನೆ ಮೊನ್ನೆ ಕಟ್ಟಿದ ಸೇತುವೆಗಳೇ ಬೀಳುತ್ತಿವೆ.ಬೆಂಗಳೂರು-ಮೈಸೂರು ಬಿಟ್ಟರೆ ಕರ್ನಾಟಕದ ಉದ್ದಗಲಕ್ಕೂ ರಸ್ತೆಗಳು ಹಾಳಾಗಿವೆ. ಇವುಗಳ ಬಗ್ಗೆ ಹೋರಾಡಿ.ಮುಂದಿನ ಬಾರಿ ನೀವು ಗೆದ್ದು ಬಂದರೆ ರಾಮಭಕ್ತರೆಲ್ಲ ಸೇರಿ ಹೊಸದಾಗಿ ರಾಮಸೇತು ನಿರ್ಮಿಸೋಣ.

Rating
No votes yet

Comments