ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ
ಸೂೞ್ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್
ಪಂಪನು ರಚಿಸಿದ ಮಹಾಭಾರತ ಮಹಾಕಾವ್ಯದ ಈ ಸಾಲು ಭೀಷ್ಮನ ಬಾಯಿಂದ ಬರುತ್ತದೆ. ದುರ್ಯೋಧನನ ಹೆಗಲೆಣೆಯಾಗಿ ಆತ್ಮೀಯ ಮಿತ್ರನಾಗಿ ಪ್ರೀತಿಯ ಸಖನಾಗಿದ್ದ ಕರ್ಣನು ಪಾಂಡವರ ವಿರುದ್ಧದ ಕೌರವರ ಯುದ್ಧದಲ್ಲಿ ಸೇನಾ ನಾಯಕತ್ವ ತನಗೇ ಸಿಗುತ್ತದೆಂಬ ನಿರೀಕ್ಷೆಯಲ್ಲಿದ್ದ. ಆದರೆ ಆ ಪಟ್ಟವನ್ನು ಎಲ್ಲರೂ ಸೇರಿ ಭೀಷ್ಮನಿಗೆ ವಹಿಸಿದಾಗ ಅವನಿಗೆ ತೀವ್ರ ಅಸಮಾಧಾನವಾಯಿತು. ಮುದುಕನಾಗಿರುವ ಭೀಷ್ಮ ಚುರುಕಾಗಿ ಕೆಲಸ ಮಾಡಲಾರ, ಪಾಂಡವರಿಗೆ ಆತ ಪರೋಕ್ಷವಾಗಿ ಸಹಾಯ ಮಾಡಲೂಬಹುದು, ತನ್ನಂತಹ ಯುವಕರಿಗೆ ಪಟ್ಟ ಕಟ್ಟಿದರೆ ಏನು ಬೇಕಾದರೂ ಸಾಧಿಸಬಲ್ಲೆವು ಎಂಬುದು ಆತನ ಅಭಿಪ್ರಾಯ.
ಆದರೆ ಭೀಷ್ಮ ನೀಡುವ ಮಾರ್ಮಿಕ ಉತ್ತರ ಇಂದಿನ ಜಗತ್ತಿಗೂ ಅನ್ವಯಿಸುತ್ತದೆ. ಪಾಂಡವರು ಅತಿರಥ ಮಹಾರಥರು. ಸಾತ್ವಿಕ ಮನೋಭಾವ ಹೊಂದಿದ ಅವರಿಗೆ ದೈವಬಲವೂ ಇದೆ. ಅವರೆದುರು ಯಾರೊಬ್ಬನೂ ಸತತವಾಗಿ ನಿಂತು ಯುದ್ಧ ಮಾಡಲಾಗದು.
ಜೀವನ ಎನ್ನುವ ರಣರಂಗದಲ್ಲಿ ಎಲ್ಲರಿಗೂ ತಮ್ಮ ಸರದಿ ಬಂದೇ ಬರುತ್ತದೆ. ಆ ಚಾನ್ಸ್ಗಾಗಿ ಕಾಯಬೇಕು.
- Read more about ಸೂೞ್ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್
- 4 comments
- Log in or register to post comments
ನನ್ನ ಮುಖಚಿತ್ರ
ನನ್ನ ಚಿತ್ರ ಬರಿಯೋದು ತುಂಬಾ ಸುಲಭ. ಸುಲಭ ಅಂದ ತಕ್ಷಣ ನನಗೆ ಬರಿ ಎರಡೇ ಆಯಾಮ ಅನ್ಕೋಬೇಡಿ. ಮೂರು ಆಯಾಮಾನೂ ಇದೆ. ಜಾಸ್ತಿ ಕೇಳಿದರೆ ನಾಕನೇ ಐದನೇ ಆಯಾಮಕ್ಕೂ ಚಾಚಿಕೋಬಹುದು. ಆದರೂ ಸ್ವಲ್ಪ ಹತ್ತಿರದಿಂದ ನೋಡಿದರೆ ಸಾಕು ತಕ್ಷಣ ನನ್ನ ಒಳಗೆಲ್ಲ ಗೊತ್ತಾಗೋ ಥರ ಚಿತ್ರ ಬರೀಬಹುದು.
ಓಕೆ. ಹೇಗಪ್ಪ ಅಂತ ತಲೆ ಕೆರಕೋಬೇಡಿ. ಹೀಗ್ಮಾಡಿ - ಮದ ಮತ್ಸರ ಲೋಭ ಮೋಹ ಎಲ್ಲಾನೂ ಒಂದು ಚೂರು ಚೂರು ಕತ್ತರಿಸಿ ಜೋಡಿಸಿ. ನೆಟ್ಟಗೆ ನೀಟಾಗಿ ಪಕ್ಕ ಪಕ್ಕದಲ್ಲಿ ಜೋಡಿಸಬೇಡಿ. ಒಂದರ ಮೇಲೆ ಇನ್ನೊಂದು ಇರಬೇಕು. ಲೋಭದ ಮೇಲೆ ವಕ್ರವಾಗಿ ಮದ. ಮೋಹದ ಮೂಲೆನಲ್ಲಿ ಮತ್ಸರ. ಹೀಗೆ ಸ್ವಲ್ಪ ಓರೆ ಕೋರೆ ಮಾಡಿ ಜೋಡಿಸಿ. ಎರಡು ಕಣ್ಣಗಳೂ ಸಮವಾಗಿ ಗುಂಡಗೆ ಇಡಬೇಡಿ. ಒಂದು ಸ್ವಲ್ಪ ಆಚೆಗಿಡಿ. ಒಂದು ಕಣ್ಣು ದೂರದಲ್ಲಿರೋದನ್ನ ಎವೆಯಿಕ್ಕದೆ ನೋಡೋ ಹಾಗೆ ಇದ್ದರೆ, ಮತ್ತೊಂದು ಕುರಿ ಕಣ್ಣು ಇಟ್ಟ ಹಾಗೆ ಇರಬೇಕು. ಯಾವ ಕಣ್ಣು ಹ್ಯಾಗೆ ಅಂತ ನಿಮಗೆ ನನ್ನನ್ನ ನೋಡಿದ ತಕ್ಷಣ ಗೊತ್ತಾಗತ್ತೆ. ಹಾಗೆ ಒಳ್ಳೆ ಉದ್ದನೆ ಮೂಗು ಬರೀಬೇಡಿ. ನಂದು ಮೊಂಡು. ಅಲ್ಲಲ್ಲಿ ಕೀರಿದ ಗಾಯ ಇದೆ ಮೂಗಿನ ಮೇಲೆ. ಅದನ್ನು ಮುಜುಗರ ಪಟ್ಕೊಂಡು ನೋಡದೇ ಇರಬೇಡಿ. ಬಾಯೂ ಅಷ್ಟೆ ಒಳ್ಳೇ ಗೆರೆಗಳೇನೂ ಬೇಡ. ತುಟ್ಟಿ ಹರಿದಿದೆ. ಒಂದೊಂದು ಸಲ ಅದಕ್ಕೆ ಪಿನ್ನು ಹಾಕಿಕೊಳ್ಳಬೇಕಾಗತ್ತೆ.
- Read more about ನನ್ನ ಮುಖಚಿತ್ರ
- Log in or register to post comments
ಮತ್ತು
ಮುತ್ತು' ಎಂದೋದಿದಿರ? ಸಾರಿ
ಮುತ್ತು ಅಲ್ಲ ವಿಷಯ 'ಮತ್ತು'
ಅದೇ ಸರಿ
ಒಡನೆ, ಜೊತೆಗೆ ಸಹಜಾರ್ಥ
ಗುಂಡಿನ ಮತ್ತು ಮಾದಕಾರ್ಥ
ಮತ್ತು ಇಲ್ಲದಿರೆ ಆದೀತು ಅನರ್ಥ
ಅಲ್ಲಗಳೆಯದಿರಿ ಮತ್ತುವಿನ 'ಪರಮಾರ್ಥ'
ಮತ್ತು ಶಬ್ದಕುಂಟು ಗತ್ತು
ಮತ್ತು ಇಲ್ಲದಿರೆ ಸಾಹಿತ್ಯದಿ ಕುತ್ತು
ಮತ್ತು ಸೇರಿದರೆ ಹೆಚ್ಚೀತು ಕಿಮ್ಮತ್ತು
'ಮತ್ತು' ಇಂದಲೆ ಗುಂಪಿಗೆ ತಾಕತ್ತು
- Read more about ಮತ್ತು
- Log in or register to post comments
ನನ್ನ ಮೊದಲ ಮಾತುಗಳು .............
ಕನ್ನಡ ದ ಎಲ್ಲಾ ಆತ್ಮೀಯ ಬಂಧುಗಳೇ, ಕನ್ನಡ ದಲ್ಲಿ ನಮ್ಮ ವಿಚಾರಗಳನ್ನು ''ಬ್ಲಾಗ್'' ಗಳ ಮೂಲಕ ಹಂಚಿಕೊಳ್ಳಲು ಅವಕಾಶಮಾಡಿಕೊಟ್ಟ ಸಂಪದ ಅಂತರ್ಜಾಲ ತಾಣಕ್ಕೆ ಆತ್ಮೀಯ ಧನ್ಯವಾಧಗಳು. ನಾಗರಾಜ್ ಎಮ್ ಎಮ್. **************
- Read more about ನನ್ನ ಮೊದಲ ಮಾತುಗಳು .............
- Log in or register to post comments
ಪಾಪಾತ್ಮಾ ... ಯಾರಿವನು
ಪಾಪಾತ್ಮಾ …..ಯಾರಿವನು - ?
- Read more about ಪಾಪಾತ್ಮಾ ... ಯಾರಿವನು
- Log in or register to post comments
ಆಶಾವಾದಿ
ಬಯಕೆ ಎನಗಿಲ್ಲ ಹೋಗಲು ವಿಶ್ವಪಯಣ
ಕಾರಣ, ಕುಳಿತಲ್ಲೇ ತೋರುವುದು ಪ್ರೀತಿಯ
ಜಗ ದಿಟ್ಟಿಸಿದರೆ ನಾ ನನ್ನಾಕೆಯ ನಯನ!
- Read more about ಆಶಾವಾದಿ
- Log in or register to post comments
ಕಬ್ಬದ ಸವಿ
ಇದು ನಯಸೇನನ 'ಧರ್ಮಾಮೃತಂ' ಎಂಬ ಹಳೆಗನ್ನಡ ಕಬ್ಬದ ಸಾಲುಗಳ ಹೊಸಗನ್ನಡಯಿಸುವಿಕೆ
ಬೇರು/ಮೂಲ ಸಾಲುಗಳು ಈಗ ಸಿಗ್ತಾ ಇಲ್ಲ. ಸಿಕ್ಕಿದಾಗ ಹಾಕುವೆ
ಉಪ್ಪಿಲ್ಲದೇ ಬರೀ
ತುಪ್ಪದೂಟ ಸವಿಯಬಹುದೇ?
ರಸಿಕತನವಿಲ್ಲದೇ ಬರೀ ಜಾಳು
ಪದಕಂತೆಗಳಿಂದ ಕಬ್ಬ ಹೊಮ್ಮುವುದೇ?
- Read more about ಕಬ್ಬದ ಸವಿ
- 3 comments
- Log in or register to post comments
ನಾಳೆ ಮುಂಜಾನೆಯ ಕನ್ನಡದ ಮಾದರಿ ! ಇಂದೇ ನೋಡಿ!
(ಇದನ್ನು ಒಂದು ಬ್ಲಾಗಲ್ಲಿ ನೋಡಿದ್ದು , ಆ ಬ್ಲಾಗಿನ ಲಿಂಕನ್ನು ಇಲ್ಲಿ ಕೊಡಬಹುದಿತ್ತು , ಆದರೆ ನೀವು ಅದನ್ನು ನೋಡಲಿಕ್ಕಿಲ್ಲ ಎಂದು ಅಲ್ಲಿಂದ ಕತ್ತರಿಸಿ ಇಲ್ಲಿ ಹಾಕಿದ್ದೇನೆ)
ಸದರೀ ಬರಹಕ್ಕೆ ನಾನು ಹಾಕಿದ ಟಿಪ್ಪಣಿಯನ್ನೂ ಕೊನೆಯಲ್ಲಿ ನೋಡಿ )
-------------------------------------------------------------------------------------------------
- Read more about ನಾಳೆ ಮುಂಜಾನೆಯ ಕನ್ನಡದ ಮಾದರಿ ! ಇಂದೇ ನೋಡಿ!
- 2 comments
- Log in or register to post comments
ನಿರಾಶೆ
ನಿರಾಶೆ
ಸರಿಯುತಿದೆ ಅಂಕದ ಪರದೆ ರಂಗಭೂಮಿಯಲ್ಲಿ
ನಟರಿನ್ನೂ ಸರಿಯಾಗಿ ತಯಾರಾಗಿಲ್ಲ
ನಟಿಸುವ ಉತ್ಸಾಹವೂ ಅವರಲಿಲ್ಲ.
ತೆರೆಯುತಿದೆ ಅಂತರಪಟ ಜಗದ ಮಂಟಪದಲ್ಲಿ
ಮಧುಮಗನಿನ್ನೂ ಯಾತ್ರೆಯಿಂದಲೇ ಮರಳಿಲ್ಲ
ಕಾಲವೆಂಬ ವಧುವು ವರಿಸಲು ಆಗಲೇ ನಿಂತಿಹಳು.
ಕಡಲಿನಿಂದೆದ್ದು ಬರುತಿಹನು ರವಿಯು
ನೋಡಲೊಲ್ಲ ಕುರುಡು ಕವಿಯು
ಕೊನೆಗೆ ಮನದೊಳಗಿನ ಕಂಗಳಿಂದಲೂ.
- Read more about ನಿರಾಶೆ
- 2 comments
- Log in or register to post comments