ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಿರಿಭೂವಲಯ - ಒಂದು ಅದ್ಭುತ ಕೃತಿ

ಹಿಂದೊಮ್ಮೆ 'ಸಿರಿಭೂವಲಯ' ಕುರಿತಾದ ಒಂದು ಲೇಖನ ಬಂದಿತ್ತು. ಈ ವಾರದ ತರಂಗದಲ್ಲಿ ಇನ್ನೂ ವಿವರವಾದ ಲೇಖನ ಬಂದಿದೆ. ಓದಿ.

ಕನ್ನಡದಲ್ಲಿ ನೀವು ಹೇಗೆ ಬರೀತೀರ?

ನನ್ನ ಪ್ರಶ್ನೆ ಸರಳವಾದುದು... ಅಂತರ್ಜಾಲದಲ್ಲಿ ಕನ್ನಡದಲ್ಲಿ ಬರೆಯಲು ನೀವು ಯಾವ ತಂತ್ರಾಂಶವನ್ನು ಉಪಯೋಗಿಸಿತ್ತೀರ?

ನಗಿಸುವುದು ಪರಧರ್ಮ ಎಂದ ಕ್ರಿಕೆಟ್ ತಂಡ

ಬೊಗಳೂರು, ನ.23- ನಗುವು ಪರಮೌಷಧ ಎಂದು ತಿಳಿದವರು ಹೇಳಿರುವುದರಿಂದ ಭಾರತೀಯ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಇದನ್ನು ಶಿರಸಾವಹಿಸಲು ನಿರ್ಧರಿಸಿದ ಪರಿಣಾಮ ನಿನ್ನೆಯ ಪಂದ್ಯದಲ್ಲಿ ಅತ್ಯಂತ ಗೌರವಾನ್ವಿತ ಸೋಲನ್ನಪ್ಪಿದೆ. (bogaleragale.blogspot.com)

ಕನ್ನಡಸಾಹಿತ್ಯಡಾಟ್‌ಕಾಂ ಮನವಿಗೆ - ಅಮೆರಿಕನ್ನಡಿಗರಿಂದ ಭಾರಿ ಬೆಂಬಲ

ಕೆ.ಎಸ್.ಸಿ.ಯ ಮನವಿಗೆ ಅನಿವಾಸಿ ಕನ್ನಡಿಗರು ಅದ್ಭುತವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
ಅದರ ಮೊದಲ ಭಾಗವಾಗಿ, ಜಾರ್ಜಿಯ ನೃಪತುಂಗ ಕೂಟದ ಸದಸ್ಯರು ೭೦ ಸಹಿಗಳನ್ನು ಸಂಗ್ರಹಿಸಿ ಕಳಿಸಿದ್ದಾರೆ.
ಅನಿವಾಸಿ ಕನ್ನಡಿಗರ ೭೫ ಸಹಿಗಳನ್ನು 'ವಿಚಿತ್ರಾನ್ನ' ಅಂಕಣ ಖ್ಯಾತಿಯ ಶ್ರೀವತ್ಸ ಜೋಷಿಯವರು ಸಂಗ್ರಹಿಸಿದ್ದು ಅಂಚೆ ಮೂಲಕ ಕಳಿಸುವುದಾಗಿ ಹೇಳಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ `ಅಕ್ಕ' ಬಳಗದ ಪದಾಧಿಕಾರಿಗಳ ಸಹಿಗಳನ್ನು ಸಂಗ್ರಹಿಸುವ ಕಾರ್ಯ ಕೈಗೆತ್ತಿಕೊಂಡಿದ್ದಾರೆ.

'ನಾದಲೀಲೆ' - ಬೇಂದ್ರೆ ಕಾವ್ಯ ವಾಚನ

ಬೇಂದ್ರೆಯವರ ಅಪರೂಪದ ಭಾವಚಿತ್ರ, ರೇಖಾಚಿತ್ರ, ಸಾಕ್ಷ್ಯಚಿತ್ರಗಳ ಸಹಯೋಗದಲ್ಲಿ

ಕಾವ್ಯವಾಚನ ವಿವಿಧ ಕ್ಷೇತ್ರಗಳ ಗಣ್ಯರಿಂದ

ಕಾವ್ಯ ಶ್ರವಣ ಬೇಂದ್ರೆ ಧ್ವನಿಯಲ್ಲಿ

೨೬ ನವೆಂಬರ್

ಭಾನುವಾರ

ಬೆಳಗಿನ ೯.೩೦ ಕ್ಕೆ

ಯವನಿಕಾ, ನೃಪತುಂಗ ರಸ್ತೆ, ಬೆಂಗಳೂರು - ೧

ಬೇಂದ್ರೆ ಪದ್ಯ ಓದೋ ಮಂದಿ

ಪಂ. ಪರಮೇಶ್ವರ ಹೆಗಡೆ * [kn:ಯು ಆರ್ ಅನಂತಮೂರ್ತಿ|ಯು ಆರ್ ಅನಂತಮೂರ್ತಿ] * [kn:ಬರಗೂರು ರಾಮಚಂದ್ರಪ್ಪ|ಬರಗೂರು ರಾಮಚಂದ್ರಪ್ಪ] * ಸಿದ್ದಲಿಂಗ ಪಟ್ಟಣಶೆಟ್ಟಿ * ಸಿ ಆರ್ ಸಿಂಹ ಶ್ರೀಕಾಂತ * ಸಿದ್ದಲಿಂಗಯ್ಯ * [kn:ಬಿ ಜಯಶ್ರೀ|ಬಿ ಜಯಶ್ರೀ] *‌ ಕಿ ರಂ ನಾಗರಾಜ * [kn:ರವಿ ಬೆಳಗೆರೆ|ರವಿ ಬೆಳಗೆರೆ] * ಪ್ರತಿಭಾ ನಂದಕುಮಾರ್ * ಪವಿತ್ರಾ ಲೋಕೇಶ್ ಕೆ ಎಚ್ ಶ್ರೀನಿವಾಸ * ರಘುನಂದನ * ಎಚ್ ಜಿ ಸೋಮಶೇಖರ್ ರಾವ್ * ಶ್ರೀನಿವಾಸ್ ಜಿ ಕಪ್ಪಣ್ಣ * ವಿಶ್ವೇಶ್ವರ ಭಟ್ ವಿಜಯ್ ಭಾರದ್ವಾಜ್ * ಜಿ ಎಂ ಶಿರಹಟ್ಟಿ * ಚಿರಂಜೀವಿ ಸಿಂಗ್ * [kn:ಟಿ ಎನ್ ಸೀತಾರಾಂ|ಟಿ ಎನ್ ಸೀತಾರಾಂ] * ರೇಖಾ ಹೆಬ್ಬಾರ್ * ಎಸ್ ಜಿ ವಾಸುದೇವ್

ನಿರೂಪಣೆ:

[kn:ಜಯಂತ ಕಾಯ್ಕಿಣಿ] - ಜಯಶ್ರೀ ಕಾಸರವಳ್ಳಿ.

Bendre Poetry Invitation

ಪ್ರಯಾಸ ಕಥನ, 1/4 ಭಾಗ

ಎಲ್ಲರೂ ಪ್ರಯಾಣ ಮಾಡುತ್ತಾರೆ, ಎಲ್ಲರೂ ಪ್ರಯಾಸ ಕಥನ ಬರೆಯುತ್ತಾರೆ, ನಿಮ್ಮ ಬೊಗಳೆಯಲ್ಲೇಕಿಲ್ಲ ಎಂಬ ಅಪವಾದದಿಂದ ಅವಮಾನಿತನಾಗಿ ಉಜ್ಜೈನಿ ಯಾತ್ರೆಗೆ ತೆರಳಿದ ಅಸತ್ಯಾನ್ವೇಷಿಯಿಂದ ಬೊಗಳೆ-ರಗಳೆಗಾಗಿಯೇ ವಿಶೇಷವಾಗಿ ಸಿದ್ಧಪಡಿಸಲಾದ ದಯನೀಯ ಪ್ರಯಾಸ ಕಥನವಿದು. (ಚಿತ್ರ ಸಹಿತ Bogaleragale.blogspot.com)

ಕನ್ನಡಸಾಹಿತ್ಯ.ಕಾಂ ಅಭಿಯಾನಕ್ಕೆ ಮಹತ್ವದ ತಿರುವು - ಚಳಿಗಾಲದ ಅಧಿವೇಶನದಲ್ಲಿ ಚರ್ಚೆಗೆ ಕನ್ನಡಸಾಹಿತ್ಯ.ಕಾಂ ಮನವಿ....?

ದೇಸಗತಿ ಭಾಷೆಗಳು, ಒಂದೇಸಮನೆ ಏರುಮುಖವಾಗಿ ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನ ಕ್ಷೇತ್ರದಲ್ಲಿ ಎದುರಿಸುತ್ತಿರುವ ಸವಾಲುಗಳ, ಸಾಮಾಜಿಕ, ಸಾಂಸ್ಕೃತಿಕ ಆಯಾಮಗಳ ಬಗೆಗೆ, ಸಾಮಾಜಿಕ ಕಳಕಳಿಯಿಂದ, ವಾಸ್ತವ ನೆಲೆಗಟ್ಟಿನಲ್ಲಿ ನಿಂತು ಯೋಚಿಸುವ, ಸಕಾರಾತ್ಮಕ, ಕ್ರಿಯಾಶೀಲ, ದೃಢ ಸಂಕಲ್ಪಶಕ್ತಿಯಿಂದ ಕೂಡಿದ ಪ್ರಯೋಗಶೀಲ ಗುಣಧರ್ಮದ, ವೈಚಾರಿಕ ಚಿಂತನೆಯ ಭಾಗವಾಗಿ ಕನ್ನಡಸಾಹಿತ್ಯ.ಕಾಂ ಹಾಗೂ ಬೆಂಬಲಿಗರ ಬಳಗದವರು ಕರ್ನಾಟಕದ ಮುಖ್ಯಮಂತ್ರಿಗಳು, ಸೇರಿದಂತೆ, ಕನ್ನಡ ಸಂಸ್ಕೃತಿ, ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಇಲಾಖೆಗಳ ಸಚಿವರುಗಳಿಗೆ ಸಲ್ಲಿಸಲು ನಿರ್ಧರಿಸಿದ ಮನವಿ ಪತ್ರ ಕ್ಕೆ, ಸಾಮಾಜಿಕ, ಸಾಂಸ್ಕೃತಿಕ, ತಾಂತ್ರಿಕ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವವರ, ಸಾರ್ವಜನಿಕರ 'ಬೆ

ಜಪಾನಿನ ಕಥೆಗಳು - ೧ : ಅವೊತೊ ಫುಜಿತ್ಸುನ

೧೯ನೆ ಶತಕದ ಅಂತ್ಯಭಾಗದಲ್ಲಿ ಬ್ರಿಟಿಷ್ ಮ್ಯೂಸಿಯಂನ ಪರವಾಗಿ ಜಪಾನಿನಲ್ಲಿ ಯಾತ್ರೆ ಕೈಗೊಂಡ ರಿಚರ್ಡ್ ಗಾರ್ಡನ್ ಸ್ಮಿತ್ ಎಂಬಾತನು ಅಲ್ಲಿ ಕೇಳಿ ಸಂಗ್ರಹಿಸಿದ ಕಥೆಗಳಲ್ಲಿ ಕೆಲವನ್ನು ಪುಸ್ತಕವಾಗಿ ೧೯೦೮ರಲ್ಲಿ ಪ್ರಕಟಿಸಿದನು. ಅವುಗಳಲ್ಲಿ ಕೆಲವನ್ನು ಆರಿಸಿ ಅನುವಾದಿಸಿ ಇಲ್ಲಿ ಕನ್ನಡದ ಓದುಗರಿಗೆ ಪರಿಚಯಿಸುತ್ತಿದ್ದೇನೆ. ಮೊದಲನೆಯ ಕಂತಾಗಿ ಅವೊತು ಫುಜಿತ್ಸುನ ಎಂಬ ಪ್ರಾಮಾಣಿಕನ ಕಥೆಯನ್ನು ಅನುವಾದಿದ್ದೇನೆ. ಈ ಕೊಂಡಿಯನ್ನು ಅನುಸರಿಸಿ ಇಡಿಯ ಕಥೆಯನ್ನು ಓದಬಹುದು.

ಕನ್ನಡಸಾಹಿತ್ಯಡಾಟ್‌ಕಾಂ ಮನವಿಯ ಬಗೆಗೆ 'ಉದಯವಾಣಿ'ಯಲ್ಲಿ ಸುಧೀರ್ಘ ಲೇಖನ

ಸ್ನೇಹಿತರೆ,

ಕನ್ನಡಸಾಹಿತ್ಯಡಾಟ್‌ಕಾಂ ಸಲ್ಲಿಸಲಿರುವ ಮನವಿಯ ಕುರಿತಂತೆ 'ಉದಯವಾಣಿ' ದಿನಾಂಕ- ೧೮-೧೧-೨೦೦೬ ರ ಶನಿವಾರದ ಸಂಚಿಕೆಯಲ್ಲಿ (ಪುಸ್ತಕ ಸಂಪದ ವಿಭಾಗ, ಪುಟ ೧೦) "ಕಂಪ್ಯೂಟರ್ ಲೋಕದಲ್ಲಿ ಕನ್ನಡವೂ ರಾರಾಜಿಸಲಿ" ಎನ್ನುವ ಶೀರ್ಷಿಕೆಯಡಿಯಲ್ಲಿ ಸುಧೀರ್ಘವಾದ ಸುದ್ದಿ\ಲೇಖನ ಪ್ರಕಟಸಿದೆ.

ಬರಲಿದೆ ಪ್ರಯಾಸ ಕಥನ!!!

ಬೊಗಳೆ ರಗಳೆ ಬ್ಯುರೋದಿಂದ ಆವಂತಿಕಾಪುರಿ(ಉಜ್ಜಯಿನಿ)ಪ್ರಯಾಸ ಕಥನ! ಭಟ್ಟಿ ವಿಕ್ರಮಾದಿತ್ಯನ ನಾಡಿಗೆ ಅಸತ್ಯಾನ್ವೇಷಿ ಭೆಟ್ಟಿ! ಕಾಳಿದಾಸನಿಗೊಲಿದ ಕಾಳಿ ನೆಲೆನಿಂತ ನಾಡಿನಲ್ಲಿ ಕಾಲಿ ದೋಸೆ ತಿಂದು ಅಲೆದಾಡಿ ಧೂಳಿದಾಸನಾದ ಕಥೆ... (bogaleragale.blogspot.com)