ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸ್ವೀಡನ್ ಪ್ರವಾಸಕಥನ ಭಾಗ ೧: ಹಡಗಿನಲ್ಲಿ ಜೋಕು ಮಾರ, 'ಕಾಲ'ದ ಅಯ್ಯನಿಗೇ ನಾಮ, ಹಾದಿಯೇ ಗುರಿ

ಹಡಗಿನಲ್ಲಿ ಜೋಕು ಮಾರ:

ಆ ಹಡಗು ಒ೦ದು ಫುಟ್ಬಾಲ್ ಮೈದಾನದಷ್ಟು ಅಗಲವಾಗಿತ್ತು. ಆದರೆ ಅಷ್ಟು ಅಗಲವಾಗಿ 'ಕಾಣುತ್ತಿರಲಿಲ್ಲ'. ಅದಕ್ಕೆ ಎರಡು ಕಾರಣಗಳು:

'ಅಧಿಕಾರ'ಕ್ಕೆ ಹರಹಪಿಸುವ ಕೋಲಾಯುಕ್ತರು!...

(ಬೊಗಳೂರು ಭ್ರಷ್ಟಾಚಾರಿ ಬ್ಯುರೋದಿಂದ)
ಬೊಗಳೂರು, ಅ.28- ಲೋಕಾಯುಕ್ತರೂ ಅಧಿಕಾರಕ್ಕಾಗಿ ಹಪಹಪಿಸುತ್ತಿರುವುದನ್ನು ಓದಿ ಬೊಗಳೆ ರಗಳೆ ಬ್ಯುರೋ ಕುದಿಯತೊಡಗಿದ್ದು, ಈ ಬಿಸಿಯಿಂದಾಗಿ ಶೀಘ್ರವೇ ಬೇಳೆ ಬೇಯುವ ಸಾಧ್ಯತೆಗಳಿವೆ.

ಅತ್ಯಾಚಾರಕ್ಕೆ ಕಾರಣ ಸಂಶೋಧನೆ

(ಬೊಗಳೂರು .... ಬ್ಯುರೋದಿಂದ)
ಬೊಗಳೂರು, ಅ.27- ಹೆಚ್ಚುತ್ತಿರುವ ಅತ್ಯಾಚಾರಕ್ಕೆ ಕಾರಣವನ್ನು ಸಂಶೋಧನೆ ಮಾಡಿರುವ ವ್ಯಕ್ತಿಯೊಬ್ಬರಿಗೆ ಅತ್ಯಾಚಾರ ರತ್ನ ಬಿರುದು ನೀಡಲು ನಿರ್ಧರಿಸಲಾಗಿದೆ.

ಮೂರು ದೀಪಾವಳಿ ವಿಶೇಷಾಂಕಗಳು

ದೀಪಾವಳಿ ಮತ್ತು ಯುಗಾದಿ ವೇಳೆಗೆ ವಿಶೇಷಾಂಕಗಳು ಹಬ್ಬದ ಸಂಭ್ರಮವನ್ನು ಪೂರ್ತಿಗೊಳಿಸುತ್ತವೆ. ಸುಮಾರು ೩೫ ವರುಷಗಳ ವಿಶೇಷಾಂಕಗಳನ್ನು ಓದಿದ್ದೇನೆ. ಸಾಮಾನ್ಯವಾಗಿ ಅವುಗಳ ಹೂರಣ ಹೀಗೆ. ವರ್ಷಭವಿಷ್ಯ , ಸಿನೆಮಪುಟಗಳು , ಕಥೆ, ಕವನ , ಓದುಗರಿಗೆಂದು ಒಂದು ವಿಷಯಕೊಟ್ಟು ಅವರಿಂದ ಪುಟ್ಟ ಲೇಖನಗಳು, ಮತ್ತು ಕೆಲವು ವಿಶೇಷ ಲೇಖನಗಳು . ಪ್ರಜಾವಾಣಿ ಬಹಳ ಕಾಲದಿಂದ ಕಥೆ/ಕವನ ಸ್ಪರ್ಧೆಯನ್ನು ನಡೆಸುತ್ತಿದೆ. ಅಂದ ಹಾಗೆ ಈ ಸಲದ ಕರ್ಮವೀರ ವಿಶೇಷಾಂಕದಲ್ಲಿ ಈ ಬಗ್ಗೆ ಸತ್ಯಕ್ಕೆ ಸಮೀಪವಾದ ಒಂದು ಹಾಸ್ಯ(?)ಲೇಖನವೂ ಇದೆ!.

ಸ್ತ್ರೀದೌರ್ಜನ್ಯ ಕಾಯಿದೆ: ಪುರುಷಮಣಿಗಳ ಸ್ವಾಗತ!

(ಬೊಗಳೂರು ಕಾಯಿದೆ ಉಲ್ಟಾ ಬ್ಯುರೋದಿಂದ)
ಬೊಗಳೂರು, ಅ.26- ಬೆಲೆ ಏರಿಕೆಯಿಂದಾಗಿ ಮನೆಯಲ್ಲಿ ಜೀವಿಸುವುದು ಕಷ್ಟಸಾಧ್ಯವಾಗಿರುವ ಪುರುಷ ಪ್ರಾಣಿಗಳಿಗೆ ಜೀವಿಸಲು ವಿನೂತನ ಅವಕಾಶ ಕಲ್ಪಿಸಿಕೊಟ್ಟಿರುವ ಕೇಂದ್ರ ಸರಕಾರದ ಹೊಸ ಕಾಯಿದೆಯು ಸರ್ವತ್ರ ಶ್ಲಾಘನೆಗೆ ಪಾತ್ರವಾಗಿದೆ.

ವಿದ್ಯಾರ್ಥಿನಿಯರು ಮದ್ಯಾರ್ಥಿನಿಯರಾದಾಗ!

(ಬೊಗಳೂರು ರಿಮೋಟ್ ಬ್ಯುರೋದಿಂದ)
ಬೊಗಳೂರು, ಅ.25- ಚೀನಾದಲ್ಲಿ ಇತ್ತೀಚೆಗೆ ಫಿಂಗ್ ಕಿಶರ್, ತ್ರಿಬಲ್ ಝಡ್ ಮುಂತಾದ ಮಾರ್ಕಿನ ಕಿಕ್ ಕೊಡಲಾರದ ದ್ರವಗಳು ಭಾರಿ ಬೇಡಿಕೆ ಪಡೆದುಕೊಂಡಿದ್ದು, ಯಾಕಿರಬಹುದು ಎಂಬ ಸಂಶಯ ಕಂಡುಬಂದ ಹಿನ್ನೆಲೆಯಲ್ಲಿ ಪರಲೋಕ ಯಾತ್ರೆ ಕೈಗೊಳ್ಳಲಾಯಿತು.

ಫಿನ್ಲೆ೦ಡ್ ಪ್ರವಾಸಕಥನ ಭಾಗ ೧೩: ತಮಿಳು ಪೊಣ್ಣು, ಮೈಸೂರು ಸ್ಯಾ೦ಡಲ್ ಸೋಪು, ಧರ್ಮವೆ೦ಬ ಹೊಟ್ಟೆಹಸಿವು!

ಅಬ್ಬ ಆ ತಮಿಳು ಪೊಣ್ಣೆ: ಆಕೆ ತಮಿಳು ಮಾತನಾಡುವವಳು. ದೇಶ ಮಲೇಶಿಯ! ಭಾರತವನ್ನು ಎ೦ದೂ ಕ೦ಡಿಲ್ಲ! ಮೇಲಿನ ಪ್ಯಾರಾದಲ್ಲಿ ತಮಿಳಿನ ಬದಲು ಕನ್ನಡವೆ೦ದು ಓದಿಕೊ೦ಡು ನೋಡಿ. ಅದು ಅಸಾಧ್ಯದ ಮಾತು! ಭಾರತವನ್ನು ಎ೦ದೂ ಕ೦ಡಿರದ ಕನ್ನಡಿಗ ಇರುವುದು ಅಸಾಧ್ಯ. ಕನ್ನಡಿಗ ಅ೦ದರೆ ಕನ್ನಡದಲ್ಲಿ ಕಾಪಿ ಮಾಡದೆ ಓದಿ ಬರೆವವನು ಎ೦ದರ್ಥ! ಆ ಆಕೆಯನ್ನು--ತಮಿಳು'ಪೊಣ್ಣು' ಎ೦ದು ಕರೆಯೋಣ. ಏಕೆ೦ದರೆ ಆಕೆಯ ನಿಜ 'ಪೇರ್' ಈಗ ಮರೆತಿದೆ. ಏಕೆ೦ದರೆ ಆಗ ನೆನಪಿಟ್ಟುಕೊಳ್ಳುವಷ್ಟು ಗಮನ ಅಥವ ಆಕೆಯ ಬಗ್ಗೆ ಹರಿಸಿದಷ್ಟು ಗಮನ, ಆಕೆಯ ಹೆಸರಿನ ಕಡೆ ಹರಿಸಲಾಗಲಿಲ್ಲ! ಅಷ್ಟು ಆಕರ್ಷಕವಾಗಿತ್ತು ಆಕೆಯ ಜೀವನಗಾಥೆ. ಗ೦ಡ ಕುಡುಕ. ಕುಡುಕನಲ್ಲದೆ 'ಕುಡಿಕಿ'ಎನ್ನಲಾದೀತೆ ಆತನನ್ನು!? ಇಬ್ಬರು ಹೆಣ್ಮಕ್ಕಳು ಆತನಿಗೆ ಮತ್ತು ಆತನ ಹೆ೦ಡತಿಯಾದ ನಮ್ಮ ಪೊಣ್ಣಿಗೆ.

ನಾಗವರ್ಮನ ಕರ್ನಾಟಕ ಕಾದ೦ಬರಿ

ನಾಗವರ್ಮನು ಕರ್ನಾಟಕ ಕಾದ೦ಬರಿಯನ್ನು ರಚಿಸಿದನು. ಈತನು ಭೋಜ ರಾಜನ
ಸಮಕಾಲೀನನವನು. ಈತ್ ಬಾಣ ಭಟ್ಟನ ಸ೦ಸ್ಕೃತ ಕಾದ೦ಬರಿಯನ್ನು
ಕನ್ನಡಕ್ಕೆ ಅನುವಾದಿಸಿದ್ದಾನೆ. ಬಾಣ ಭಟ್ಟ ಶ್ರೀ ಹರ್ಷನ ಆಸ್ಥಾನ ಕವಿ.
ಈತ ಶ್ರೀ ಹರ್ಷ ಚರಿತ೦ ಮತ್ತು ಕಾದ೦ಬರಿ ಎ೦ಬ ಎರಡು ಗದ್ಯಕಾವ್ಯವನ್ನು ರಚಿಸಿದ್ದಾನೆ.