ನನ್ನ ಪುಸ್ತಕ ಬಿಡುಗಡೆಗೆ ಬನ್ನಿ

ನನ್ನ ಪುಸ್ತಕ ಬಿಡುಗಡೆಗೆ ಬನ್ನಿ

>
> ಮಾನ್ಯ ಬಂಧುಗಳೇ,
>
> ನನ್ನ ಏಳನೇ ಕೃತಿ,
>
>
> ಧ್ಯೇಯಯಾತ್ರಿ
>
> (ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಗಳಾಗಿದ್ದ,
> ಲೇಖಕರೂ, ಅಂಕಣಕಾರರೂ, ಸಾಮಾಜಿಕ ಕಾರ್ಯಕರ್ತರೂ ಆದ ದಿವಂಗತ
> ಹೊ.ವೆ.ಶೇಷಾದ್ರಿ
> ಅವರ ಜೀವನ ದರ್ಶನ )
>
> ಇದೇ ದಿನಾಂಕ ಆಗಸ್ಟ್ ೧೮ ರ ಶನಿವಾರ ಸಂಜೆ ೬,೦೦ ಘಂಟೆಗೆ, (18.08.2007 - 6
> PM)
>
> ಬೆಂಗಳೂರಿನ ಜಯನಗರ ನ್ಯಾಷನಲ್ ಕಾಲೇಜಿನ ಎಚ್.ಎನ್.ಕಲಾಕ್ಷೇತ್ರದಲ್ಲಿ
> ಬಿಡುಗಡೆ ಆಗಲಿದೆ.
>
> ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳೂ, ಕವಿಗಳೂ, ನಾಟಕಕಾರರೂ ಆದ
>
> ಡಾ|| ಚಂದ್ರಶೇಖರ ಕಂಬಾರ
>
> ಅವರು ಈ ಗ್ರಂಥವನ್ನು ಬಿಡುಗಡೆ ಮಾಡಲಿರುವರು.
>
> ಉಡುಪಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರೂ, ಹಿರಿಯ
> ಬರಹಗಾರರೂ ಆದ
>
> ಪ್ರೊ|| ಎಲ್.ಎಸ್. ಶೇಷಗಿರಿ ರಾವ್
>
> ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು.
>
> ಡಾ|| ಬಿ.ವಿ.ವಸಂತಕುಮಾರ್, ಪ್ರಾಧ್ಯಾಪಕರು, ಮೈಸೂರು
>
> ಅವರು ಕೃತಿಯನ್ನು ಕುರಿತು ಮಾತನಾಡಲಿರುವರು.
>
> ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಗಳಾದ
>
> ಶ್ರೀ ಮೋಹನ್ ಭಾಗವತ್
>
> ಅವರು ಸಮಾರಂಭದಲ್ಲಿ ಉಪಸ್ಥಿತರಿರುವರು.
>
> ದಿವ್ಯ ಸಾನಿಧ್ಯ :
>
> ಆದಿಚುಂಚನಗಿರಿ ಮಠದ ಪೂಜ್ಯ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ.
>
> ದಯವಿಟ್ಟು ಕಾರ್ಯಕ್ರಮಕ್ಕೆ ಬನ್ನಿ, ಬಂಧು-ಮಿತ್ರರಿಗೂ ತಿಳಿಸಿ, ಈ
> ಸಂದೇಶವನ್ನೂ ಕಳುಹಿಸಿ.
>
>
> - ಮಂಜುನಾಥ ಅಜ್ಜಂಪುರ,
> ೯೯೦೧೦ ೫೫೯೯೮ (99010 55998)