ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಯಾವುದೀ ಹೊಸ ರಾಗ?

94.3 M.Hz ಕಂಪನಾಂಕಗಳಲ್ಲಿ ಹೊಸ ರೇಡಿಯೋ ಪ್ರಾರಂಭವಾಗಿದೆ. ರೇಡಿಯೋ ಜಾಕಿ ಇಲ್ಲ, ಬರೀ ಇಂಗ್ಲಿಷ್ ಮತ್ತು ಹಿಂದಿ ಹಾಡುಗಳು ಬರುತ್ತವೆ, ಇದು ಯಾವ ರೇಡಿಯೋ ?

“ಆಧುನಿಕ ಮೌಲ್ಯಗಳು..”.

ಇತ್ತೀಚೆಗೆ “ಸಂಪದ” ದ ಬ್ಲಾಗ್ ಬರಹಗಾರನಾದಮೇಲೆ, ನನ್ನ ಹಳೆಯ ಟಿಪ್ಪಣಿ ಮತ್ತು ಡೈರಿ ಪುಸ್ತಕಗಳನ್ನೆಲ್ಲ ತಿರುವಿ ಹಾಕುವಂತಾಯಿತು. ಲೇಖಕನಾಗಿ ಹಲವು ವರ್ಷಗಳ ನನ್ನ ಅನುಭವದಲ್ಲಿ ಹೇಳಬೇಕೆಂದರೆ, ಅವು ಬಹಳ ಕಚ್ಚಾ ಸಾಮಗ್ರಿಯನ್ನೊದಗಿಸುತ್ತವೆ, ಮತ್ತು ಹೊಚ್ಚ ಹೊಸ ವಿಷಯಗಳಿಗೆ ಇಂಬುಗೊಡುತ್ತ ಸಾರ್ವಕಾಲಿಕ ಮೌಲ್ಯಗಳನ್ನು ತೆರೆದಿಡುತ್ತವೆ. ಅಂತಹ ಬರಹಗಳನ್ನು ನಿಮ್ಮೊಂದಿಗೆ ಸಂಪದದಲ್ಲಿ ಹಂಚಿಕೊಳ್ಳುವ ತವಕವಿದೆ. ಅಂತಹ ಮೊದಲ ಪ್ರಯತ್ನವಿದು...

ನಮನ-೦೩: ಸುದ್ದಿಗಾರರೇ ಸುದ್ದಿಯಾದಾಗ!

ಕೆಲದಿನಗಳ ಹಿಂದೆ ಉಡುಪಿಯಲ್ಲಿ ವೈದ್ಯರೊಬ್ಬರು ಪತ್ರಕರ್ತರ ಮೇಲೆ ಹಲ್ಲೆ ನಡೆಸಿದರೆಂದು ವರದಿಯಾಗಿತ್ತು.
ಆ ವೈದ್ಯ, ಡಾ| ಕಿರಣ ಆಚಾರ್ಯ, ಸಚಿವ ಆಚಾರ್ಯರ ಮಗನಾಗಿದ್ದರಿಂದ, ಪ್ರತಿಕೂಲ ಪ್ರಚಾರವೂ ಸಿಕ್ಕಿತ್ತು.
ಮೊದಲೇ, ಎರಡೂ ಕಡೆಯ ವಿವರ ಪಡೆದು ಪ್ರಕಟಿಸುವ ವೃತ್ತಿಪರತೆ ನಮ್ಮ ವರದಿಗಾರರಲ್ಲಿ ಕಡಿಮೆ.

'ಕೊಟ್ಟ ಭಾಷೆಗೆ ತಪ್ಪಲಾರೆನು'- ಪುಣ್ಯಕೋಟಿಯ ಕುರಿತು ಇನ್ನೊಂದು ಲೇಖನ .

ಪುಣ್ಯಕೋಟಿ ಗೋವಿನ ಕಥೆ ನಮಗೆಲ್ಲ ಮಕ್ಕಳ ಕಥೆಯಾಗಿ ಗೊತ್ತು. ನಮ್ಮೆಲ್ಲರ ಮೆಚ್ಚಿನದೂ ಆಗಿದೆ. ಆದರೆ ಅದಕೆ ಹೆಚ್ಚಿನ ಅರ್ಥಗಳು ಇವೆಯೇ ?

ಸಂಪದದಲ್ಲಿ ಹೊಸತು...

ಸಂಪದದಲ್ಲಿ ಇಂದಿನಿಂದ ಸಂಪದದ ಸದಸ್ಯರು ತಮ್ಮ ಊರಿನಲ್ಲಿ ನಡೆಯುವ, ತಮ್ಮ ಸಂಸ್ಥೆಯಲ್ಲಿ ನಡೆಯುವ ಕಾರ್ಯಕ್ರಮಗಳ ವಿವರಗಳನ್ನು ಸಂಪದದ ಉಳಿದ ಸದಸ್ಯರೊಂದಿಗೆ ಹಂಚಿಕೊಳ್ಳಬಹುದು.

ಇಂಗ್ಲಿಷ್ ಕಾದಂಬರಿಕಾರ, ಕನ್ನಡದ ಎಚ್. ರಾಜಾರಾವ್ ಇನ್ನಿಲ್ಲ !

ಪ್ರಸಿದ್ಧ ಇಂಗ್ಲೀಷ್ ಕಾದಂಬರಿಕಾರ, ರಾಜಾರಾವ್, ಅಮೆರಿಕೆಯ ಟೆಕ್ಸಾಸ್ ವಿಶ್ವ ವಿದ್ಯಾನಿಲಯ, ಆಸ್ಟಿನ್ ನಲ್ಲಿ ಶನಿವಾರದಂದು ದೈವಾಧೀನರಾದರು. ೯೬ ವರ್ಷಹರೆಯದ ಹಾಸನದ ರಾಜಾರಾವ್, ನವೆಂಬರ್, ೮, ೧೯೦೮ ರಲ್ಲಿ ಬಹಳ ಹೆಸರುವಾಸಿಯಾದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು.ಅವರ ಶಿಕ್ಷಣ ಬಾಲ್ಯದಿಂದ ಪದವಿಯವರೆವಿಗೂ ಕನ್ನಡನೆಲದಲ್ಲೇ ನಡೆಯಿತು. ಸ್ನಾತಕೊತ್ತರ ಶಿಕ್ಷಣಕ್ಕಾಗೆ ಅವರು ಯುರೊಪಿನ ಸೋರ್ಬೊನಿಯದ, ಮೌಂಟ್ ಪೆಲೀರ್ ವಿಶ್ವವಿದ್ಯಾನಿಲಯದಲ್ಲಿ ಸಂಶೊಧನೆ ಮಾಡಲು ತಮ್ಮ ೧೯ ನೇ ವಯಸ್ಸಿನಲ್ಲೇ ಹಡಗಿನಲ್ಲಿ ಪ್ರಯಾಣ ಮಾಡಿದರು.ಅಲ್ಲಿ, ಅವರ ಶಿಕ್ಷಣವೆಲ್ಲಾ ಪ್ರೆಂಚ್ ಭಾಷೆಯಲ್ಲಿ ನಡೆಯಿತು.ಆದರೆ ಅವರು ಮುಂದೆ ಬರೆದ ಕಾದಂಬರಿಗಳೆಲ್ಲಾ ಹೆಚ್ಚಾಗಿ ಇಂಗ್ಲೀಷಿನಲ್ಲೇ ! ಫ್ರಾನ್ಸಿನಲ್ಲಿ ಕಳೆದ ೧೦ ವರ್ಷಗಳ ಜೀವನದಲ್ಲಿ, ೧೯೩೧ ರಲ್ಲಿ ಫ್ರೆಂಚ್ ಭಾಷಾ ತಜ್ಞೆ, 'ಕ್ಯಾಮಿಲ್ಲೆ ಮೌಲಿ'ಯವರ ಒಡನಾಟದಿಂದ ಪ್ರಾರಂಭವಾಗಿ ಮದುವೆಯಲ್ಲಿ ಕೊನೆಗೊಂಡಿತು.೧೯೩೯ ರಲ್ಲಿ ಕಾರಣಾಂತರಗಳಿಂದ ಮದುವೆ ಮುರಿಯಿತು. ೧೯೩೧-೩೨ ರಲ್ಲಿ ಅವರು ೪ ಕನ್ನಡ ಲೇಖನಗಳನ್ನು 'ಜಯಕರ್ಣಾಟಕ' ವೆಂಬ ನಿಯತಕಾಲಿಕಕ್ಕೆ ಬರೆದುಕೊಟ್ಟಿದ್ದರು.ವಿವಾಹ ವಿಚ್ಛೇದನದ ನಂತರ, ಬೇಸತ್ತ ಅವರು, ಭಾರತಕ್ಕೆ ಬಂದು ಕೆಲವುಕಾಲ ಆಶ್ರಮಗಳಲ್ಲಿ ಕಳೆದರು.೧೯೩೮ ರಲ್ಲಿ ಬರೆದ 'kantapura',ಅವರಿಗೆ ಅಂತರ ರಾಷ್ಟ್ರೀಯ ಖ್ಯಾತಿ ತಂದಿತ್ತು.ಈ ಕಾದಂಬರಿಯು ಬ್ರಿಟೀಷರ ಅಂದಿನ ಆಳ್ವಿಕೆಯ ವಿರುದ್ಧದ ಅಹಿಂಸಾತ್ಮಕ ಹೋರಾಟದ ಕುರಿತಾದ, ಗಾಂಧಿಜಿಯವರ ಬೋಧನೆಗಳ ಪ್ರಭಾವಗಳ ನೈಜ ಚಿತ್ರಣವಾಗಿದೆ.ರಾಯರು 'Tomorrow'ಎಂಬ ಸಾಹಿತ್ಯ ಪತ್ರಿಕೆಯ ಸಂಪಾದಕರಾಗಿಯೂ ಕೆಲಸ ಮಾಡಿದರು. ವಿಶ್ವಯುದ್ಧದನಂತರ ಅವರು ಫ್ರಾನ್ಸ್ ಗೆ ವಾಪಸ್ ಹೋದರು. ಅಲ್ಲಿಂದ ಅವರು ವಿಶ್ವದಾದ್ಯಂತ ಸುತ್ತಿದರು.೧೯೪೭ ರಲ್ಲಿ 'The cow of the Barricades' ಪ್ರಕಟಿಸಿದರು. ೧೯೫೦ ರಲ್ಲಿ ಅಮೆರಿಕಕ್ಕೆ ಭೇಟಿಮಾಡಿದರು.೧೯೬೫ ರಲ್ಲಿ ಅಲ್ಲಿನ ನಟಿ, 'ಕ್ಯಾಥರೀನ್ ಜೊನ್ಸ್' ರವರೊಡನೆ ಮರು ವಿವಾಹ ಮಾಡಿಕೊಂಡರು.೧೯೬೫ ರಿಂದ ೧೯೮೩ ರ ವರೆಗೆ ಭಾರತೀಯ ತತ್ವಶಾಸ್ತ್ರ ಮತ್ತು ಬೌದ್ಧ ಮತವನ್ನು ಟೆಕ್ಸಾಸ್ ವಿಶ್ವ ವಿದ್ಯಾನಿಲಯದಲ್ಲಿ, ಭೋಧಿಸುತ್ತಾ ಬಂದರು. ಅವರು ಬರೆದ ಕಾದಂಬರಿಗಳು :

ನಮನ-೦೨: ಒಂದು ಕೊಲೆ..

ಮೊನ್ನೆ ನನ್ನಿಂದ ಒಂದು ಅಪಚಾರ ನಡೆದು ಹೋಯಿತು.
ಜೀವನದಲ್ಲಿ ಮೊದಲ ಬಾರಿ ನಾನೊಂದು ಕೊಲೆ ಮಾಡಿದೆ.

ಮೊನ್ನೆ ತಲೇಲಿ ಏನೊ ತುಂಬ್ಕೊಂಡು, ಕಾರಿನಲ್ಲಿ ಮನೆಗೆ ಬರ್ತಾ ಇರಬೇಕಾದ್ರೆ, ಒಂದು ಅಳಿಲು ಓಡೊಡಿ ಬಂದು ನನ್ನ ಕಾರಿನ ಹಿಂದಿನ ಚಕ್ರಕ್ಕೆ ಸಿಲುಕಿತು.
ಏನೋ ಓಡಿ ಬಂದುದು ನನಗೆ ಅರಿವಾಯಿತು,
ಆದರೆ ಅದು ಕಾರಿನಡಿ ಸಿಕ್ಕಿ ಸಾಯಬಹುದು ಅಂತ ಅನಿಸಿರಲಿಲ್ಲ.

ನಮನ-೦೧: ಪರಿಚಯ

ಹೆಸರು ಉಮೇಶ.
ಸಾಮಾನ್ಯವಾಗಿ, 'ಯು‌ಎನ್‌ಶೆಟ್ಟಿ' ಅನ್ನೋ ಹೆಸರಲ್ಲಿ ವ್ಯವಹಾರ.
ಹೊಸ ವ್ಯವಹಾರಗಳನ್ನು ಆದಷ್ಟು ಕನ್ನಡದಲ್ಲೇ ಮಾಡೋಣ ಅಂತ "ಉಉನಾಶೆ" ಅಂತ ಇಲ್ಲಿ ಉಪಯೋಗಿಸ್ತಾ ಇದ್ದೀನಿ.
"ಉಉನಾಶೆ" ಅಂದ್ರೆ ನಮ್ಮ ಮನೆತನ, ಅಪ್ಪ, ಜಾತಿ ಎಲ್ಲಕ್ಕೂ ಜಾಗ ಕೊಟ್ಟ ಹಾಗೆ ಆಗುತ್ತೆ, ಅಷ್ಟೆ.

ಕನ್ನಡ ಕಾಸು ಮತ್ತು ಇ೦ಗ್ಲಿಷ್ ಕಾಸು

ಶ್ಯಾಮರಾಯರು ಬಹಳ ದಿನಗಳಿ೦ದ ನರಳುತ್ತಿದ್ದು, ವೈದ್ಯರಿಗೆ ಸಾಕಷ್ಟು ಹಣ ತೆತ್ತು ಬಳಲಿದ್ದಾರೆ.  ರೋಗ ಮಾತ್ರ ಗುಣವಾಗಿಲ್ಲ.  ವೈದ್ಯರು ಹೇಳುತ್ತಾರೆ: ರಾಯರೇ, ನನಗೆ ಕಾಸೇ ಸಿಕ್ತಾ ಇಲ್ಲ. ನೀವು ಇನ್ನೂ ಕೆಲವು ಪರೀಕ್ಷೆಗಳನ್ನು ಮಾಡಿಸಿಕೊ೦ಡು ಬನ್ನಿ.  ರ್‍ಆಯರ ಕೋಪ ನೆತ್ತಿಗೇರುತ್ತದೆ. "ಏನ್ರೀ ಡಾಕ್ಟ್ರೇ, ನಿಮಗೇನೂ ಮನುಷ್ಯತ್ವನೇ ಇಲ್ಲವೇ? ನಾನೂ ಇದುವರಗೆ ಸಾವಿರಾರು ರೂಪಾಯಿ ಸುರಿದಿದ್ದೇನೆ.  ಆದರೂ ಕಾಸೇ ಸಿಕ್ತಿಲ್ಲ ಅ೦ತೀರಲ್ಲರೀ?  ನೀವೇನು ಮನುಷ್ಯರೋ ಅಥವಾ ಧನಪಿಶಾಚಿನೋ?"  ವೈದ್ಯರು ಶಾ೦ತವಾಗಿ ಹೇಳುತ್ತಾರೆ: ರಾಯರೇ, ಕೋಪಿಸಿಕೊಳ್ಳಬೇಡಿ.  ನಾನು ಹೇಳಿದ್ದು ಕನ್ನಡ ಕಾಸಲ್ಲ ಇ೦ಗ್ಲಿಷ್ ಕಾಸು(cause). "ಓಹೋ, ಹಾಗಾದ್ರೆ ಸರಿ.  ಕ್ಷಮಿಸಿ"