ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬರಹ

                           ಬರಹ

                     ಬರಹದಾ ಸರಮಾಲೆ
                     ಬರದಲ್ಲಿ ನಡೆದಿರಲು,
                     ಭಾವನೆಯ ರತ್ನಗಳ
                     ಬರಹದಾ ಬಂಗಾರ,
                     ಬರವಣಿಗೆ ಸಿಂಗಾರ
                     ಬೆರೆಸಿ ಪೊಣಿಸುತಿರುವ
                     ಅಕ್ಕಸಾಲಿಗ ನಾನು.//ಪ//.

ಉತ್ತರಕರ್ನಾಟಕದಲ್ಲಿ ಕನ್ನಡದ ಕಥೆ -೧

ಕರ್ನಾಟಕದ ಪಾಲಿಗೆ ೧೯ನೇ ಶತಮಾನದ ಮಧ್ಯಭಾಗ ಮತ್ತು ೨೦ನೇ ಶತಮಾನದ ಪ್ರಾರಂಭವನ್ನು ಸಾಮಾನ್ಯವಾಗಿ ಅಜ್ಞಾತ ಕಾಲಖಂಡ ಎಂದೂ /ಅನುಕರಣ ಯುಗವೆಂದೂ ಹೇಳುತ್ತಾರೆ . ಈ ಮಾತು ಉತ್ತರ ಕರ್ನಾಟಕಕ್ಕೆ ಹೆಚ್ಚು ಅನ್ವಯಿಸುತ್ತದೆ.

ಬೇಂದ್ರೆಯವರ ಕವಿತೆಗಳು: ಪರಾಗ

ಈ ಕವಿತೆಯನ್ನು ನೋಡಿ. ಬೇಂದ್ರೆಯವರು ೧೯೩೭ರಲ್ಲಿ ಪ್ರಕಟಿಸಿದ್ದು. ಸಖೀಗೀತದಲ್ಲಿದೆ. ಇದನ್ನು ಯುವ ಕವಿಗಳ ಕವನಸಂಕಲನಕ್ಕೆ ಮುನ್ನುಡಿಯಾಗಿ ಬರೆದದ್ದು ಎಂದು ಎಲ್ಲೋ ಓದಿದ ನೆನಪು.
ಪರಾಗ
ಬಾ ಭೃಂಗವೆ ಬಾ, ವಿರಾಗಿಯಂದದಿ
ಭ್ರಮಿಸುವೆ ನೀನೇಕೇ?
ಕಂಪಿನ ಕರೆಯಿದು ಸರಾಗವಾಗಿರೆ
ಬೇರೆಯ ಕರೆ ಬೇಕೇ?

ಬರಲಿಹ ಕಾಯಿಯ ಪಾಡಿನ ರುಚಿಯೂ
ಇದರೊಳು ಮಡಗಿಹುದು.
ನಾಳಿನ ಹಣ್ಣಿನ ರಸವಿಲ್ಲಿಯ ಮಕ
ರಂದದೊಳಡಗಿಹುದು.

ಕವನಕೋಶದೀ ಕಮಲ ಗರ್ಭದಲಿ
ಪರಾಗವೊರಗಿಹುದು.
ನಿನ್ನ ಮುಖಸ್ಪರ್ಶವೂ ಸಾಕು; ಹೊಸ
ಸೃಷ್ಟಿಯೆ ಬರಬಹುದು. ಬಾ ಭೃಂಗವೆ, ಬಾ...

ಈ ಕವಿತೆಯನ್ನು ನುಡಿಯುತ್ತಿರುವುದು ಒಂದು ಹೂ. ತನ್ನ ಕಂಪಿನ ಮೂಲಕ ದುಂಬಿಯನ್ನು ಬಾ ಎಂದು ಕರೆಯುತ್ತಿದೆ. ದುಂಬಿ ಬಂದೆರಗಿದರೆ ಮಾತ್ರವೇ ಮತ್ತೆ ಹೊಸ ಸೃಷ್ಟಿ ಎಂದು ಹೇಳುತ್ತಿದೆ. ಕೊನೆಯ ನಾಲ್ಕು ಸಾಲುಗಳನ್ನು ನೋಡಿ. ಕವನಕೋಶ ಎಂಬ ಮಾತಿದೆ. ಅದು ಮನಸ್ಸನ್ನು ಹಿಡಿದಾಗ ಇಡೀ ಪದ್ಯವೇ ಕವಿತೆಯು ಓದುಗರನ್ನು ಕುರಿತು ನೀಡುತ್ತಿರುವ ಕರೆಯೋಲೆ ಎಂದು ಹೊಳೆಯುತ್ತದೆ. ಕವಿತೆ ಹೂವು, ಓದುಗರು ದುಂಬಿಗಳು, ಓದುಗರಿಲ್ಲದೆ ಕವಿತೆ ಸ-ಫಲವಾಗುವುದೇ ಇಲ್ಲ. ಅಥವಾ, ಓದಿದಾಗ ಮಾತ್ರ ಕವಿತೆ ಸಂಭವಿಸುತ್ತದೆ.

ವೆಲ್ಶ್ ಭಾಷೆಯಿಂದ ನಮ್ಮ ಕನ್ನಡ ಕಲಿಯಬಹುದಾದ ಪಾಠಗಳು

ಇದನ್ನ ಎಲ್ಲಿ ಪೋಸ್ಟ್ ಮಾಡಬೇಕು ಆಂತ ತಿಳಿಯದೆ ಸುದ್ದಿ ಸಮಾಚಾರ ಕೆಳಗೆ ಹಾಕಿದ್ದೇನೆ.

ಕೆಲ ದಿನಗಳಿಂದ ಕನ್ನಡದ ಪ್ರಾಬ್ಲಂಸ್ ಬಗ್ಗೆ ಓದುತ್ತಿದ್ದೀವಿ.

ಪಿಯುಸಿಯಲ್ಲಿ ಫೇಲಾಗುವುದು ಹೀಗೆ?

ನನ್ನ ಅಮ್ಮನ ಲೆಕ್ಕಾಚಾರ ಸರಿಯಾಗಿದ್ದರೆ ನಾನು ಇಷ್ಟು ಹೊತ್ತಿಗೆ ಎಂಬಿಬಿಎಸ್ ಓದುತ್ತಾ ಇರಬೇಕಿತ್ತು. ಅಪ್ಪ ಹೇಳಿದಂತೆ ಕೇಳಿದ್ದರೆ ಈಗ ಕಂಪ್ಯೂಟರ್ ಸೈನ್ಸ್ ಕಲಿಯಬೇಕಿತ್ತು. ಯಾರ ಮಾತನ್ನೂ ಕೇಳದೇ ಇದ್ದುದರಿಂದ ಸಮಾಜ ಕಾರ್ಯ ಕಲಿಯುತ್ತಾ ಇದ್ದೇನೆ. ಈಗ ನಾನು ಬರೆಯಲು ಹೊರಟಿರುವ ವಿಷಯಕ್ಕೆ ಈ ವಿವರಗಳು ಎಷ್ಟರ ಮಟ್ಟಿಗೆ ಬೇಕು ಎಂಬುದು ಗೊತ್ತಿಲ್ಲ. ನನಗೆ ಮಾತ್ರ ಈ ವಿವರಗಳು ಅಗತ್ಯ ಎನಿಸುತ್ತಿವೆ.

ನೀವು ಕೇಳಿರಲಿಕ್ಕಿಲ್ಲದ ಗಾದೆಮಾತುಗಳು

ಬಿದ್ದ ಪೆಟ್ಟಿಗಿಂತ ನಕ್ಕ ಪೆಟ್ಟು ಹೆಚ್ಚು .
(ಕಾಯಿಲೆ) ಬಿದ್ದಾಗಿನ ಅನ್ನ ಎದ್ದಾಗ ತೆಗೆ.
ಮಾನಿಷ್ಟರು ಮಾನಕ್ಕೆ ಅಂಜಿದರೆ ಮಾನಗೇಡಿ ತನಗೇ ಅಂಜಿದರು ಅಂದನಂತೆ

ಕರ್ನಾಟಕದ ಮುಕುಟಕ್ಕೆ ಪ್ರವಾಸ

ಸುಮಾರು ಆರೇಳು ವರ್ಷಗಳಿಂದಲೂ ಗುಲ್ಬರ್ಗ ಹಾಗೂ ಬೀದರ್ ಸುತ್ತಾಡಿಬರಬೇಕೆಂಬುದು ನನ್ನ ಒಂದು ದೊಡ್ಡ ಆಸೆಯಾಗಿತ್ತು. ಗೆಳೆಯರ ಮದುವೆ ಪ್ರಯುಕ್ತ ಎರಡು ಸಲ ಗುಲ್ಬರ್ಗಕ್ಕೆ ತೆರಳಿದರೂ, ಸುತ್ತಾಡುವ ಅವಕಾಶ ಇರಲಿಲ್ಲ. ಬೀದರಂತೂ ಹೇಗಿದೆ ಎಂಬ ಕಲ್ಪನೆಯೇ ಇರಲಿಲ್ಲ. ಪ್ರಜಾವಾಣಿ, ಕನ್ನಡ ಪ್ರಭ, ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಲ್ಲಿ ಗುಲ್ಬರ್ಗ ಹಾಗೂ ಬೀದರ್ ಬಗ್ಗೆ ಬಂದ ಎಲ್ಲಾ ಲೇಖನಗಳನ್ನು ಸಂಗ್ರಹಿಸಿಟ್ಟುಕೊಂಡು, ಭೇಟಿ ನೀಡುವ ಅವಕಾಶವನ್ನು ಕಾಯುತ್ತಾ ಇದ್ದೆ. ಕಳೆದ ಮೇ ತಿಂಗಳಂದು ಮಂಗಳೂರಿನ ಗೆಳೆಯರಿಬ್ಬರು, ಮೂರ್ನಾಲ್ಕು ದಿನ ಎಲ್ಲಾದರೂ ಸುತ್ತಾಡಿಕೊಂಡು ಬರ್‍ಓಣ ಎಂದಾಗ ಗುಲ್ಬರ್ಗ, ಬೀದರ್ ಹಾಗೂ ಬಸವಕಲ್ಯಾಣ ಸುತ್ತಾಡಿಕೊಂಡು ಬರ್‍ಓಣವೆಂದು ನಿರ್ಧರಿಸಿದೆವು. ನನ್ನ ಬಳಿಯಿದ್ದ ಲೇಖನಗಳೆಲ್ಲವನ್ನೂ ಹಲವಾರು ಸಲ ಓದಿ, ಅಂತರ್ಜಾಲವನ್ನು ಜಾಲಾಡಿ, ನನ್ನ ಆತ್ಮೀಯ 'ಜೋಳದ ರೊಟ್ಟಿ' ಗೆಳೆಯರೊಂದಿಗೆ ಸಮಾಲೋಚಿಸಿ ನೋಡಬೇಕಾದ ಎಲ್ಲಾ ಸ್ಥಳಗಳ ಪಟ್ಟಿಯೊಂದನ್ನು ಅಂತಿಮಗೊಳಿಸಿದೆ. ಶುಕ್ರವಾರ ಜೂನ್ ೨ರ ಅಪರಾಹ್ನ ಹೊರಟು, ಮಂಗಳವಾರ ಜೂನ್ ೬ರಂದು ಹಿಂತಿರುಗುವಂತೆ ಒಂದು ನೀಲಿನಕ್ಷೆ ಹೊರಡುವ ಒಂದು ವಾರದ ಮುಂಚೆ ತಯಾರಾಯಿತು ಹಾಗೇನೆ ಗೆಳೆಯರಿಬ್ಬರೂ ಒಪ್ಪಿಗೆ ಸೂಚಿಸಿದರು. ಆದರೆ ಹೊರದುವ ಮುನ್ನಾ ದಿನ ರಾತ್ರಿ ಗೆಳೆಯರಿಬ್ಬರೂ ಕ್ಷುಲ್ಲಕ ಸಬೂಬುಗಳನ್ನು ಹೇಳಿ ಹಿಂದೆ ಸರಿದರು. ಬಹಳ ದಿನಗಳ ಆಸೆ ಈಡೇರುವಂತಿರುವಾಗ, ನಾನು ಒಬ್ಬನೇ ಹೋಗುವ ನಿರ್ಧಾರ ಮಾಡಿದೆ.