ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಉತ್ತರ ಕರ್ನಾಟಕದಲ್ಲಿ ಕನ್ನಡ-೪

....ಇದಕ್ಕೆ ಕಾರಣಗಳನ್ನು ಶ್ರೀ ದ. ರಾ. ಬೇಂದ್ರೆಯವರು ಹೀಗೆ ಕೊಡುತ್ತಾರೆ .
"ಎಷ್ಟೋ ದಿವಸಗಳಿಂದ ರಾಜಾಶ್ರಯವನ್ನು ಕಳೆದುಕೊಂಡು ತೊಳಲುತ್ತಿರುವ ಕರ್ನಾಟಕವು ಇಂಗ್ಲೀಷರ ಆಳ್ವಿಕೆಯಲ್ಲಿ ಭಿನ್ನಭಿನ್ನವಾಗಿರುವದು ಮೊದಲನೆಯದು. ಪೇಶ್ವೆಯರ ಆಳ್ವಿಕೆ ತೀರಿದ ಮೇಲೆ ಆರೇ ಅಮಲದಾರರ ಆಳ್ವಿಕೆಯು ಎರಡನೆಯದು.ರಾಜಾಶ್ರಯ ದೊರೆತ ಮೈಸೂರ ಕನ್ನಡವು ಯಾವುದೋ ಕಾರಣದಿಂದ ನಮ್ಮ ಕೂಡ ಬಳಕೆ ಮಾಡದೇ ಇದ್ದದ್ದು ಮೂರನೆಯ ಕಾರಣ. ಕಾಲಪ್ರತಿಕೂಲತೆಯು ನಾಲ್ಕನೇ ಕಾರಣ. ಮೊದಲನೆಯ ತರಗತಿಯ ಕರ್ತೃತ್ವಶಾಲಿಗಳು ಹುಟ್ಟದಿದ್ದುದು ಐದನೇಯ ಕಾರಣ".

ಗ್ರಾಮರ್ ಮತು ಗ್ಲ್ಯಾಮರ್ ! ( ನಗೆಹನಿ)

ಗುಂಡನ ಮದುವೆ ನಿಶ್ಚಯವಾಯಿತು. ತನ್ನ ಹೆಂಡತಿಯ ಹೆಸರನ್ನು ಹೇಗೆ ಬರೆಯಬೇಕು ? ಭಾಗೀರತಿ ಸರಿಯೊ ? ಅಥವಾ ಭಾಗೀರಥಿ ಸರಿಯೊ?

ಒಂದು ಶಬ್ದದ ಸುತ್ತ

ಬೆಳಗಾವಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗ ನನಗುಂಟಾದ ಆಡುಭಾಷೆಯ ಪ್ರಾರಂಭಿಕ ತೊಂದರೆಗಳನ್ನು ನೆನೆಸಿಕೊಂಡರೆ ಈಗಲೂ ನಗು ಬರದೇ ಇರದು. ಒಂದೆರಡು, ಆಗ 'ವಿಚಿತ್ರ'ವೆನಿಸಿದ ಶಬ್ದಗಳ ಬಗ್ಗೆ ನಾನು ತಲೆ ಕೆಡಿಸಿಕೊಂಡ ಪರಿಯನ್ನು ಇಂದಿಗೂ ನೆನೆಸಿ ಗೆಳೆಯರು ಜೋಕ್ ಮಾಡುತ್ತಾ ಇರುತ್ತಾರೆ. ಬಾಗಲಕೋಟೆಯ ಅನಿಲ್ ಢಗೆ ನನ್ನ 'ರೂಮ್ ಮೇಟ್' ಆಗಿದ್ದ. ಈ ಮರಾಠ ಹುಡುಗನ ಕನ್ನಡವೇ ವಿಚಿತ್ರವಾಗಿತ್ತು. ಅತ್ತ ಹುಬ್ಬಳ್ಳಿದ್ದೂ ಅಲ್ಲದ, ಇತ್ತ ಬಾಗಲಕೋಟೆಗೂ ಸಲ್ಲದ, ಮಧ್ಯೆ ಬೆಳಗಾವಿಗೂ ಹೊಂದದ ಕನ್ನಡವನ್ನು ಅನಿಲ್ ವಟಗುಟ್ಟುತ್ತಿದ್ದ. ಕರಾವಳಿಯ 'ಬಿಡಿಸಿ ಮಾತನಾಡುವ' ಶೈಲಿಗೆ ಹೊಂದಿಕೊಂಡಿದ್ದ ನನಗೆ ಇವರೆಲ್ಲ ವಿಚಿತ್ರ 'ಮಂದಿ'ಗಳೆನಿಸತೊಡಗಿದರು.

ವೈದ್ಯಲೋಕ

೧)

ಸಾವಿನ೦ಚಿನಲಿ ನಿ೦ತಿರುವ ರೋಗಿಯನು ಉಳಿಸುವರು
ಕಾವ ದೇವರ೦ದದಲಿ ದೇಹವನು ಕಾಪಾಡುವರು.ದೇವರೇ ಅವರು
ಆವ ಪಾಪದ ಫಲವೋ! ಉಗುರಿನಲಿ ಕಳೆವ೦ಥ ಸಣ್ಣ ಶುಶ್ರೂಷೆ
ರಣವಾಗಿ, bill ಗಳೇ 'ಬಾಣ'ವಾಗಿ,ಆಯ್ತು ಜೀವನದ ಕಡೆಯ ಪರಿಷೆ.

ಕನ್ನಡಕ್ಕೆ ಡಬ್ಬಿಂಗ್ ಬೇಕೆ, ಬೇಡವೆ?

ಕನ್ನಡಕ್ಕೆ ಡಬ್ಬಿಂಗ್ ಬೇಕೆ? ಬೇಡವೇ? ಈ ಕೊಂಡಿ ಯಲ್ಲಿ ಚರ್ಚೆ ಪ್ರಾರಂಭಿಸಿದ್ದೇನೆ, ನಿಮ್ಮ ಅಭಿಪ್ರಾಯ ನೀಡಿ,

ಕವಿತೆಗಳನ್ನು ಅರ್ಥೈಸಿಕೊಳ್ಳುವದು ಹೇಗೆ ?

ಕವಿತೆಗಳನ್ನು ಅರ್ಥೈಸಿಕೊಳ್ಳುವದು ಹೇಗೆ ? ಈ ಬಗ್ಗೆ ಹಿಂದೊಂದು 'ಎಲ್ಲೋ ಹುಟ್ಟಿ ಎಲ್ಲೋ ಬೆಳೆದು' ಸಣ್ಣ ಲೇಖನವನ್ನು ಬರೆದಿದ್ದೆ . ಮೊನ್ನೆ ಸಂಪದದಲ್ಲಿ ಬೇಂದ್ರೆಯವರ 'ಪರಾಗ' ಕವಿತೆಯ ಕುರಿತು ಒಂದು ಒಳ್ಳೆಯ ಲೇಖನ ನೋಡಿದೆ . ಇತ್ತೀಚೆಗೆ ಶ್ರೀ ಎಚ್. ಎಸ್. ವೆಂಕಟೇಶಮೂರ್ತಿಯವರ 'ಮೂವತ್ತು ಮಳೆಗಾಲ' ( ಸಮಗ್ರ ಕಾವ್ಯ ) - ಭಾಗ ಒಂದರಲ್ಲಿ ಈ ಕೆಳಗಿನ ಕವನ ನೋಡಿದೆ. ಕವನ ತುಂಬ ಸರಳವಾಗಿದೆ . ಅದರೆ ಅದು ಕಾವ್ಯವನ್ನು ಅರ್ಥೈಸಿಕೊಳ್ಳುವ ಕುರಿತಾಗಿರುವದರಿಂದ ಕಾವ್ಯಾಸಕ್ತರಿಗೆ ಅನುಕೂಲವಾಗಬಹುದೆಂದು ಇಲ್ಲಿ ಕೊ(ಕು)ಟ್ಟಿದ್ದೇನೆ.

 

ಹಾಡು ಹಾಡು ಎಂದರೆ ಇನ್ನೂ ಜಾಡು ಮೂಡದ ಕಾಡು !

ಹಿಡಿದದ್ದೇ ಹಾದಿ , ಅದೇ ಆದಿ .

ರೊಟ್ಟಿ ಮುರಿಯುವದಕ್ಕೆ ಒಂದು ಮುಖವೇ ?

ಹಲ್ಲೊಂದಿದ್ದರೆ ಹೇಗೂ ಸುಖವೇ.

ನಕ್ಸಲರ ನಾಡಿನಲ್ಲೊಂದು ಚಾರಣ

ಉದುಪಿ ಜಿಲ್ಲೆ ನಕ್ಸಲ್ ಪಿಡುಗಿಗೊಳಗಾಗಿರುವ ಜಿಲ್ಲೆಗಳಲ್ಲೊಂದು. ಇದೇ ಕಾರಣವನ್ನು ಮಂದಿಟ್ಟುಕೊಂಡು ಅತ್ತ ಆಗುಂಬೆ ಮತ್ತು ಇತ್ತ ಅಮಾಸೆಬೈಲು ಪ್ರದೇಶಗಳಲ್ಲಿ ಪೊಲೀಸ್ ಇಲಾಖೆಯಿಂದ ಚಾರಣಪ್ರಿಯರಿಗೆ ಕಿರಿಕಿರಿ. ಕುದ್ರೆಮುಖದ ಬದಿಗೆ ತಿರುಗಿದರೆ ಅರಣ್ಯ ಇಲಾಖೆಯಿಂದ ಚಾರಣಕ್ಕೆ ಅನುಮತಿ ಇಲ್ಲ. ಒಟ್ಟಾರೆ ಉಡುಪಿ ಜಿಲ್ಲೆಯ ಚಾರಣಿಗರಿಗೆ ಕೈ ಕಾಲು ಕಟ್ಟಿ ಹಾಕಿದ ಪರಿಸ್ಥಿತಿ. ಆದರೂ 'ಕ್ಯಾಲ್ಕ್ಯುಲೇಟೆಡ್ ರಿಸ್ಕ್' ತಗೊಂಡು ಅರಣ್ಯ ಇಲಾಖೆ ಹಾಗೂ ಪೊಲೀಸ್ ಇವರಿಬ್ಬರ ಕಣ್ತಪ್ಪಿಸಿ, ಸ್ಥಳೀಯರ ನೆರವು ಪಡಕೊಂಡು ಸಣ್ಣ ಪುಟ್ಟ ಚಾರಣಗೈಯುವುದು ನಡೆದೇ ಇದೆ. ಚಾರಣದ ಹುಚ್ಚು ಹತ್ತಿದ ಮೇಲೆ ಬೇರೇನು ತಾನೆ ಮಾಡಲು ಸಾಧ್ಯ?

ಸಂಪದ Podcasts: ಮುಂದಿನ ಸಂಚಿಕೆ ನಾಗೇಶ್ ಹೆಗಡೆಯವರೊಂದಿಗೆ

ಕನ್ನಡದಲ್ಲಿ ವಿಜ್ಞಾನ ಕುರಿತ ಬರಹಗಳನ್ನೋದುವ ಹವ್ಯಾಸ ಬೆಳೆಸಿಕೊಂಡವರಿಗೆ [kn:ನಾಗೇಶ ಹೆಗಡೆ|ನಾಗೇಶ್ ಹೆಗಡೆಯವರ] ಪರಿಚಯ ಇಲ್ಲದಿರುವುದಿಲ್ಲ. ಇವರ ಕೃತಿ 'ಇರುವುದೊಂದೇ ಭೂಮಿ' ಕನ್ನಡದ ಮಹತ್ವದ ಕೃತಿಗಳಲ್ಲೊಂದು.

ಸಂಪದ Podcastನ ಮುಂದಿನ ಸಂಚಿಕೆಯಲ್ಲಿ ಇವರೊಂದಿಗೆ "ಕನ್ನಡದಲ್ಲಿ ವಿಜ್ಞಾನ ಬರಹ" ವಿಷಯದ ಸುತ್ತ ಮಾತುಕತೆ. ಈ ಸಂಚಿಕೆಯಲ್ಲಿ ಹಿಂದಿನ ಸಂಚಿಕೆಯಂತೆ [:http://sampada.net/feedback|ನೀವೂ ಪ್ರಶ್ನೆಗಳನ್ನು ಕಳುಹಿಸಬಹುದು]. ಆಯ್ದ ಪ್ರಶ್ನೆಗಳನ್ನು ಸಂದರ್ಶನದ ಸಮಯದಲ್ಲಿ ನಾಗೇಶ ಹೆಗಡೆಯವರ ಮುಂದಿಡಲಾಗುವುದು.

* ಪ್ರಶ್ನೆ ಕನ್ನಡದಲ್ಲಿರಲಿ.
* ಪ್ರಶ್ನೆ ಸ್ಪಷ್ಟವಾಗಿರಲಿ.
* ನಿಮ್ಮ ಪ್ರಶ್ನೆಗೆ ಸ್ಪಷ್ಟವಾದ ಹಿನ್ನೆಲೆಯಿದ್ದಲ್ಲಿ ಅದನ್ನು ವಿವರಿಸುವುದನ್ನು ಮರೆಯಬೇಡಿ.
* ಪ್ರಶ್ನೆಯೊಂದಿಗೆ ನಿಮ್ಮ ಪೂರ್ಣ ಹೆಸರನ್ನು ತಿಳಿಸುವುದು ಮರೆಯಬೇಡಿ.

ಧನ್ಯವಾದಗಳು,

(ಪ್ರಶ್ನೆಗಳನ್ನು ಮೇಲೆ ಲಿಂಕ್ ಮಾಡಿರುವಂತೆ [:http://sampada.net/feedback|feedback ಫಾರ್ಮ್] ಮೂಲಕ ನಮಗೆ ಕಳುಹಿಸಬಹುದು)

ಉತ್ತರ ಕರ್ನಾಟಕದಲ್ಲಿ ಕನ್ನಡದ ಕಥೆ -೩

ಶ್ರೀ ಮುದವೀಡು ಕೃಷ್ಣರಾಯರು ಹೀಗೆ ಹೇಳಿದ್ದಾರೆ :
"ಈ ಪ್ರದೇಶವು ಕನ್ನಡ ನಾಡಿನ ಭಾಗವೆಂಬ ಅರಿವೂ ಇಲ್ಲಿಯ ಜನರಿಗಿಲ್ಲದಾಗಿ 'ದಕ್ಷಿಣ ಮಹಾರಾಷ್ಟ್ರ'ವೆಂಬ ಅಸಂಬದ್ಧ ಹಣೆಪಟ್ಟಿಯು ಇದರ ಪಾಲಿಗೆ ಬಂದಿತು. ೧೮೮೫ರಿಂದ ೧೯೧೫ರವರೆಗಿನ ಅವಧಿಯಲ್ಲಿ ಪರಿಸ್ಥಿತಿ ಬಹಳೇ ಕೆಟ್ಟಿತು. ಮುಂಬಯಿ ಅಧಿಕಾರದ ಕೇಂದ್ರವಾಗಿದ್ದ ಮಹಾರಾಷ್ಟ್ರದ ಕಡೆಯಿಂದ ಮರಾಠೀ ಭಾಷೆಯ ಅಧಿಕಾರಿಗಳೇ ಹೆಚ್ಚಾಗಿ ಬರತೊಡಗಿದರು. ಶಿಕ್ಷಣ ವಿಭಾಗವು ಅವರ ಗುತ್ತಿಗೆಯಾಯಿತು. ವಕೀಲಿಯಂತಹ ಹೊಸವರ್ಚಸ್ಸಿನ ಧನೋತ್ಪಾದಕ ಉದ್ಯೋಗಗಳಿಗೆ ಈ ಹೊಸ ಪ್ರದೇಶವು ಅವರಿಗೆ ತೆರೆದಿಟ್ಟಂತಾಯಿತು. ರೇಲ್ವೆಯ ಕಛೇರಿಗಳು ಇಲ್ಲಿಗೆ ಬಂದವು. ವ್ಯಾಪಾರೋದ್ಯೋಗದ ಬೆನ್ನು ಹತ್ತಿ ಅನೇಕ ಮರಾಠರು ಇಲ್ಲಿ ಬಂದು ನೆಲೆಸಿದರು. ಮಹಾರಾಷ್ಟ್ರದಲ್ಲಿಯ ನಾಟಕ ಕಂಪನಿಗಳಿಗೆ ಇದೊಂದು ಹೊಸ ಕ್ಷೇತ್ರವೇ ಲಭ್ಯವಾಗಿ ಅವರ ನಾಟಕಗಳು ತೆರಪಿಲ್ಲದೆಯೇ ಆಗಹತ್ತಿದವು. ಅಲ್ಲಿಯ ವ್ಯಾಖ್ಯಾನಕಾರರು , ಪುರಾಣಿಕರು , ಕೀರ್ತನಕಾರರು , ಗಾಯಕರು , ನರ್ತಕಿಯರು ಇಲ್ಲಿ ಬಂದು ನೆಲೆಸಹತ್ತಿದರು . ಇವರಿಗೆಲ್ಲ ಇಲ್ಲಿದ್ದ ಮರಾಠೀ ಅಧಿಕಾರಿಗಳಿಂದಲೂ ಇಲ್ಲಿಯೇ ನೆಲೆಯೂರಿದ ಮರಾಠಿಗರಿಂದಲೂ ಚೆನ್ನಾಗಿ ಆಶ್ರಯ ದೊರೆತು ಮತ್ತೂ ಹೊಸಬರಿಗೆ ಇತ್ತ ಕಡೆಗೆ ದುಡ್ಡು ಗಳಿಸಲಿಕ್ಕೆ ಬರಲು ಪ್ರೋತ್ಸಾಹ ದೊರೆಯಹತ್ತಿತು. ಇದೆಲ್ಲ ಕಾರಣಗಳಿಂದಾಗಿ ಪಂಪ, ರನ್ನ , ಕುಮಾರವ್ಯಾಸರ ತಿರುಳ್ಗನ್ನಡ ನಾಡಾದ ಈ ಸೀಮೆಯಲ್ಲಿ ಕನ್ನಡ ನುಡಿಯ ಹಿಂದೆ ಬಿದ್ದು ಮರಾಠೀ ಭಾಷೆಯು ಬೆಳೆಯಹತ್ತಿತು. ಅಭಿಮಾನೀ ಮರಾಠಿಗರು ತಮ್ಮ ವರ್ಚಸ್ಸಿನಿಂದ ಇಲ್ಲಿ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಮರಾಠೀ ಶಾಲೆಗಳನ್ನು ಸ್ಥಾಪಿಸಿಕೊಂಡರು. ಇನು ಸುಸಂಸ್ಕೃತ ಕನ್ನಡಿಗರು ಮೇಲ್ತರಗತಿಯ ಶಿಕ್ಷಣಕ್ಕೆ ಪುಣೆ , ಮುಂಬೈಗೆ ಹೋದಾಗ ತಮ್ಮ ಮಕ್ಕಳಿಗೆ ಸಾಮಾನ್ಯ ವ್ಯವಹಾರಕ್ಕೆ ಅನಾನುಕೂಲವಾಗಬಾರದೆಂಬ ವಿಚಾರದಿಂದ , ಅತ್ತಕಡೆಯ ಹೆಣ್ಣು ಗಂಡಿನ ವಿವಾಹ ಸಂಬಂಧ ಬಂದಾಗ 'ಆರೇ'* ಅರಿಯದವರೆಂಬ ಅಪಮಾನಕ್ಕೆ ಗುರಿಯಾಗಬಾರದೆಂಬ ವಿವೇಕಶೂನ್ಯ ಹಂಬಲದಿಂದ ತಮ್ಮ ಮಕ್ಕಳನ್ನೂ ಮರಾಠೀ ಶಾಲೆಗಳಿಗೇ ಕಳಿಸಹತ್ತಿದರು. ಹೀಗೆ ಪುಣೆ , ಮುಂಬೈ ಕಡೆಗೆ ಹೋಗಿ ಬಂದ ಸುಶಿಕ್ಷಿತ ಕನ್ನಡಿಗರು ತಮ್ಮ ತಾಯಿನುಡಿಯಾದ ಕನ್ನಡವನ್ನೇ ಮರೆತು ಮರಾಠಿಯನ್ನೇ ಮನೆಯ ಮಾತನ್ನಾಗಿ ಮಾಡುವ ಮಹತ್ವಾಕಾಂಕ್ಷೆಯನ್ನು ಹೊಂದಿದರು. ಮೈಸೂರಿನ ಕಡೆಯಿಂದ ಮನೆಗೆ ಬಂದ ಅಚ್ಚಗನ್ನಡದ ಗೃಹಿಣಿಯರನ್ನು ಮರಾಠಿಯನ್ನು ಕಲಿಯಹಚ್ಚಿ ಅವರ ಅಬದ್ಧ ಸುಬದ್ಧ 'ಆರೇ'ದಿಂದಲಾದರೂ ಮನೆತನವನ್ನೇ ಮರಾಠೀಮಯ ಮಾಡುವ ಮೋಹಕ್ಕೆ ಒಳಗಾದರು. ಹೀಗೆ ಅನೇಕ ಕಾರಣಗಳಿಂದ ಇತ್ತ ಕಡೆಯ ಕನ್ನಡಿಗರ ಸ್ವಾಭಿಮಾನ , ಸ್ವಭಾಷಾಭಿಮಾನವು ಕುಗ್ಗುತ್ತ ನಡೆದು , ಕನ್ನಡವು ಮುಗ್ಗರಿಸಿ ಬಿದ್ದು ಮರಾಠಿಯ ಪ್ರಾಬಲ್ಯವೇ ಹೆಚ್ಚಾಗಿ ಅದರ ವರ್ಚಸ್ಸೇ ಬೆಳೆಯಲಾರಂಬಿಸಿತು. ' ಓದಿದರೆ ಮರಾಠಿ ಪುಸ್ತಕಗಳನ್ನೇ ಓದಬೇಕು , ತರಿಸಿದರೆ ಮರಾಠಿ ವರ್ತಮಾನಪತ್ರ ಮಾಸಪತ್ರಿಕೆಗಳನ್ನೇ ತರಿಸಬೇಕು. ನೋಡಿದರೆ ಮರಾಠಿ ನಾಟಕಗಳನ್ನೇ ನೋಡಬೇಕು. ಕೇಳಿದರೆ ಮರಾಠಿ ಹಿಂದೂಸ್ಥಾನೀ ಸಂಗೀತವನ್ನೇ ಕೇಳಬೇಕು' ಎಂಬ ಸೊಲ್ಲೇ ಎಲ್ಲೆಲ್ಲಿಯೂ ಹರಡಿಕೊಂಡ ವಿಪರೀತ ಪರಿಸ್ಥಿತಿಯಿಂದ ಈ ಕನ್ನಡನಾಡು ಜರ್ಜರಿತವಾಗಿ ಹೋಯಿತು. "