ಏಕರೂಪ ಭಾಷೆ ಮತ್ತು ಕನ್ನಡ ಏಕೀಕರಣ
೧೯೦೭ ರ ಜೂನ್ ನಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವು ಅಖಿಲ ಕರ್ನಾಟಕ ಗ್ರಂಥಕರ್ತರ ಸಮ್ಮೇಳನವನ್ನು ಏರ್ಪಡಿಸಿ ಎಲ್ಲ ವಿದ್ವಾಂಸರಲ್ಲಿ ಪರಸ್ಪರ ಸಂಪರ್ಕ ಉಂಟಾಗುವಂತೆ ಮಾಡಿತು. 'ಕರ್ನಾಟಕ ಗ್ರಂಥಗಳಲ್ಲಿ ಉಪಯೋಗಿಸುವ ಭಾಷೆಗಳಲ್ಲಿ ಏಕರೂಪತೆಯನ್ನುಂಟುಮಾಡುವದು ಸಾಧ್ಯವಾದುದರಿಂದ ಕೂಡಿದ ಮಟ್ಟಿಗೆ ಆ ಪ್ರಕಾರ ಮಾಡುವದು ಉಚಿತವಾಗಿದೆ. ' ಎಂದು ನಿರ್ಣಯಿಸಿತು .... ಮುಂದಿನ ಸಮ್ಮೇಳನವನ್ನು ಬೆಂಗಳೂರಿನಲ್ಲಿ ಕೂಡಿಸಬೇಕೆಂದೂ ನಿಶ್ಚಯಿಸಲಾಯಿತು. ಇದೇ ಕನ್ನಡ ಸಾಹಿತ್ಯ ಪರಿಷತ್ತಿನ ಬೀಜಾಂಕುರವಾಯಿತು.
- Read more about ಏಕರೂಪ ಭಾಷೆ ಮತ್ತು ಕನ್ನಡ ಏಕೀಕರಣ
- Log in or register to post comments