ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಏಕರೂಪ ಭಾಷೆ ಮತ್ತು ಕನ್ನಡ ಏಕೀಕರಣ

೧೯೦೭ ರ ಜೂನ್ ನಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವು ಅಖಿಲ ಕರ್ನಾಟಕ ಗ್ರಂಥಕರ್ತರ ಸಮ್ಮೇಳನವನ್ನು ಏರ್ಪಡಿಸಿ ಎಲ್ಲ ವಿದ್ವಾಂಸರಲ್ಲಿ ಪರಸ್ಪರ ಸಂಪರ್ಕ ಉಂಟಾಗುವಂತೆ ಮಾಡಿತು. 'ಕರ್ನಾಟಕ ಗ್ರಂಥಗಳಲ್ಲಿ ಉಪಯೋಗಿಸುವ ಭಾಷೆಗಳಲ್ಲಿ ಏಕರೂಪತೆಯನ್ನುಂಟುಮಾಡುವದು ಸಾಧ್ಯವಾದುದರಿಂದ ಕೂಡಿದ ಮಟ್ಟಿಗೆ ಆ ಪ್ರಕಾರ ಮಾಡುವದು ಉಚಿತವಾಗಿದೆ. ' ಎಂದು ನಿರ್ಣಯಿಸಿತು .... ಮುಂದಿನ ಸಮ್ಮೇಳನವನ್ನು ಬೆಂಗಳೂರಿನಲ್ಲಿ ಕೂಡಿಸಬೇಕೆಂದೂ ನಿಶ್ಚಯಿಸಲಾಯಿತು. ಇದೇ ಕನ್ನಡ ಸಾಹಿತ್ಯ ಪರಿಷತ್ತಿನ ಬೀಜಾಂಕುರವಾಯಿತು.

ಮೆಲುಕು .

ಕೃಪೆ : ಡಾ|| ಎಸ್ . ಅರ್ . ಶಂಕ್ಪಾಲ್
( ಒಂದು ಅನುಭವ ಲೇಖನ )

ಹಳ್ಳಿಯ ಸೊಗಡು ಆಹ್ಲಾದಕರ . ಅದರಲ್ಲೂ ಅಲ್ಲಿಯೇ ಹುಟ್ಟು ಬೆಳೆದ ನನ್ನಂಥವರಿಗೆ ಹಳ್ಳಿಯಲ್ಲಿ  ಕಳೆದ ದಿನಗಳು ಸವಿನೆನಪುಗಳಾಗಿವೆ . ಹಳ್ಳಿಯಲ್ಲಿ ಕಳೆದ ಪ್ರಿತಿಯೊಂದು ಕ್ಷಣವೂ ಅವಿಸ್ಮರಣೀಯ . ಪ್ರತಿದಿನವು ಈ ಕಾಂಕ್ರೀಟು ಕಾಡಿನಲ್ಲಿ ಕಚೇರಿಯ ದಿನನಿತ್ಯದ ಕೆಲಸದಲ್ಲಿನ ಜಂಜಾಟದಲ್ಲಿ (ಪೇಚಾಟವೆಂದರೆ ಅತಿಶಯೊಕ್ತಿಯಲ್ಲ ...!) ಸಾಕು ಸಾಕಾಗಿ ಮನಸ್ಸಿನ ಹಾಗೂ ಆರೋಗ್ಯದ ದೃಷ್ಟಿಯಿಂದ ಹಳ್ಳಿಗೆ ಹೊಗಬೇಕೆಂಬ ಆಸೆಯಾಯಿತು .

ಕನ್ನಡ ಭಾಷೆ ಆಡುವವರೆಲ್ಲ ಕನ್ನಡಿಗರು...... .

೧೮೯೬ ನವಂಬರ ೨೨ಕ್ಕೆ ಕೂಡಿದ ಕರ್ನಾಟಕ ವಿದ್ಯಾವರ್ಧಕ ಸಂಗದ ಸಭೆಯಲ್ಲಿ ಅದೇ ಆಗ ಪುಣೆಯಲ್ಲಿ ಕೂಡಲಿರುವ ಎಜುಕೇಶನ್ ಇನ್‍ಸ್ಪೆಕ್ಟರರ ಸಮ್ಮೇಲನದ ಮುಂದಿಡಲು ' ಕನ್ನದ ಶಾಲೆಗಳಲ್ಲಿ ಬಾಳಬೋಧೆ( ದೇವನಾಗರಿ) ಅಕ್ಷರಗಳನ್ನೂ , ಮರಾಠೀ ಭಾಷೆಯನ್ನೂ ಕಲಿಸುವ ಅವಶ್ಯವಿಲ್ಲವೆಂದು " ಠರಾವು ಪಾಸು ಮಾಡಲ್ಪಟ್ಟಿತು.

೧೯೪೨ ರ ಆಗಸ್ಟ್ ೮ ರಂದೇ 'ಕ್ವಿಟ್ ಇಂಡಿಯ ಆಂದೋಳನ' ಬೊಂಬಾಯಿನ ಗೊವಾಲಿಯ ಟ್ಯಾಂಕ್ ಬಳಿ ಶುರುವಾಗಿದ್ದು !

ಈ ದಿನ ಅಂದರೆ ೧೯೪೨ ರ ಆಗಸ್ಟ್ ೮ ನೆಯ ತಾರಿಖು, ಮಧ್ಯ ಬೊಂಬಾಯಿನ 'ಗೋವಾಲಿಯ ಕೆರೆಯ ಅಂಗಳ'ದಲ್ಲಿ (ಈಗ ಅದನ್ನು ಆಗಸ್ಟ್ ಕ್ರಾಂತಿ ಮೈದಾನವೆನ್ನುತ್ತಾರೆ.)ಮಹಾತ್ಮ ಗಾಂಧಿ ಯವರೂ ಸೇರಿದಂತೆ ಕಾಂಗ್ರೆಸ್ಸಿನ (ಎ.ಐ.ಸಿ.ಸಿ) ನಾಯಕರುಗಳೆಲ್ಲಾ ಸಮಾಲೋಚಿಸಿ 'ಕ್ವಿಟ್ ಯಿಂಡಿಯ' ಆಂದೋಳನವನ್ನು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಘೋಷಿಸಿದರು.

ಕನ್ನಡಂಗಳ್: ಪದ್ಯ ಹೀಗಿದೆ

ಸಂಪದದ ಗೆಳೆಯರೊಬ್ಬರು ಕನ್ನಡಂಗಳ್ ಅನ್ನುವ ಮಾತು ಕವಿರಾಜಮಾರ್ಗದಲ್ಲಿದೆಯೇ ಎಂದು ಸಂದೇಹ ವ್ಯಕ್ತಪಡಿಸಿದ್ದರು. ಆ ಮಾತು ಬರುವ ಜಾಗ ಆಶ್ವಾಸ ೧, ಪದ್ಯ ೪೬.

ಮಂಗನೊಡೆಯ ಮಂಗಪ್ಪ ನಾಡಸಾಕಿ ? ( ಉ. ಕ.ಕ)

ಶುದ್ಧ ಕನ್ನಡ ವಿಭಾಗವಾದ ಧಾರವಾಡದಲ್ಲಿಯ ಕನ್ನಡ ಶಾಲಾ ನೇಮಕಗಳ ಪ್ರಕಟಣೆಗಳೂ ೧೮೬೬ರ ಸುಮಾರಿಗೆ ಮರಾಠಿಯಲ್ಲಿಯೇ ಹೊರಡುತ್ತಿದ್ದವು. ಉದಾಹರಣೆಗೆ : धारवाड जिल्ह्यातील सर्व स्कूल मास्तरांस दहाहून जासती मुलें दर एक वर्गात ......

ಒಬ್ಬಂಟಿಯೊಳಗೊಬ್ಬಂಟಿತನದ ಗ್ಯಾರಂಟಿ

ಜನ ಮಾತ್ರ ಒಬ್ಬರಿಗೊಬ್ಬರು ಬೆರೆಯುವ ಸ್ವಭಾವದವರಲ್ಲ. ಜಗಳವಾಡುತ್ತಾರೆಂದೇನಲ್ಲ. ಆದರೆ ಮದುವೆಯಾಗದವರು, ಒಬ್ಬರನ್ನೊಬ್ಬರು ತೊರೆದವರು ಎರಡೆರೆಡು ಮನೆಗಳನ್ನು ಹೊಂದಿರುತ್ತಾರಿಲ್ಲಿ. ವಿಚ್ಛೇದನ ಪಡೆದ ನಿರುದ್ಯೋಗಿಯೊಬ್ಬ ಒಂಟಿಯಾಗಿ ಬದುಕುತ್ತಿದ್ದ. ಆತನ ಮಾಜಿ ಹೆಂಡತಿ (ಪಾಟ್ನರ್!) ಅದೇ ನಗರದಲ್ಲಿ ಬದುಕಿದ್ದಳು. ವಯಸ್ಸಿಗೆ ಬಂದ ಇಬ್ಬರು ಮಕ್ಕಳೂ ಇದ್ದರು ಆತನಿಗೆ. ನೆರೆಹೊರೆಯವರಿದ್ದರು. ನಿರುದ್ಯೋಗಿಯಾದುದರಿಂದ, ಮತ್ತು ಫಿನ್ನಿಶ್ ಸಮಾಜ 'ವೆಲ್‌ಫೇರ್ ಸಮಾಜವಾದ್ದರಿಂದ' ಆತನಿಗೆ ತಿಂಗಳಿಗೆ ಪಿಂಚಣಿ ರೂಪದ ಸಂಬಳ ಬರುತ್ತಿತ್ತು. ಮತ್ತು ಅದು ಬೆಂಗಳೂರು ಯೂನಿವರ್ಸಿಟಿಯ ಸೀನಿಯರ್ ಗ್ರೇಡ್ ಉಪಾಧ್ಯಾಯನಿಗಿಂತಲೂ ಹೆಚ್ಚಿತ್ತು.

ಸಾಯುವವರಲ್ಲ ನಾವು ಸಾಯಿಸುವವರು

ಸಾಯುವವರಲ್ಲ ನಾವು ಸಾಯಿಸುವವರು
 ಜೀವನದಿ ಬೇಸತ್ತು ಕೊಲೆಗಡುಕರಾದವರು
 ಜನಗಣದಿ ನುಸುಳುತ್ತ ಮ೦ದಿಗಳ ಕೊ೦ದಿಹೆವು
 ಮರಣ ಶಾಸನವ ಬರೆದು 'ರಣ'ಭೂಮಿ ಮಾಡಿಹೆವು
 ಧಾರುಣಿಯ ದಾಹವನು ರಕ್ತದಲಿ ತಣಿಸಿಹೆವು
 ಸುಳಿಯಲಿಹ ಜನರತ್ತ ಸುಳಿಯದೇ ನಡೆಯುವೆವು
 ಬಾ೦ಬುಗಳನೆಸೆಯುತ್ತ ವೈಶಮ್ಯ ಬೆಸೆದಿಹೆವು
 ಶಾ೦ತ ಚಿ೦ತನೆಯಿ೦ದ ನಿಷ್ಕ್ರಾ೦ತರಾಗಿಹೆವು

ಭಾಷೆಯಲ್ಲಿ ಸರಿ ಮತ್ತು ತಪ್ಪು

ಕೆಲವು ದಿನಗಳಿಂದ ಇಸ್ಮಾಯಿಲ್ ಅವರ ಬರಹಕ್ಕೆ ಪ್ರತಿಕ್ರಿಯೆಯಾಗಿ ಕುತೂಹಲಕರ ಚರ್ಚೆ ಬೆಳೆದಿರುವುದು ಗಮನಿಸಿದ್ದೇನೆ. ತುಳು ಮತ್ತು ಕನ್ನಡ ಸಂಬಂಧ ಕುರಿತು, ಲ ಳಗಳ ಬಳಕೆ ಕುರಿತು, ಅ ಹ ಗಳನ್ನು ಕುರಿತು, ಮತ್ತು ಕೆಲವು ರೂಪಗಳು ಬೇಡಾದ ಇತ್ಯಾದಿ ರೂಪುಗೊಂದಿರುವ ಕುರಿತು ಚರ್ಚೆ ನಡೆದಿದೆ. ನಾವೆಲ್ಲ ಗಮನಿಸಬೇಕಾದ ಕೆಲವು ಮೂಲ ಸಂಗತಿಗಳನ್ನು ಗಮನಿಸಬೇಕು ಅನ್ನಿಸಿದೆ. ೧. ಕನ್ನಡ ಒಂದೇ ಅಲ್ಲ ಅಸಂಖ್ಯಾತ ಕನ್ನಡಗಳಿವೆ: ಕನ್ನಡದ ಮೊದಲ ಕೃತಿ ಕವಿರಾಜ ಮಾರ್ಗದಲ್ಲಿ ಒಂದು ಮಾತಿದೆ. ಅಲ್ಲಿ ಕೃತಿಕಾರ "ಕನ್ನಡಂಗಳ್" ಕನ್ನಡಗಳು ಎಂದು ಬಹುವಚನವನ್ನು ಬಳಸಿದ್ದಾನೆ. ಭಾಷೆ ಅಸ್ತಿತ್ವಕ್ಕೆ ಬರುವುದು ಯಾರಾದರೂ ಅದನ್ನು ಬಳಸಿದಾಗ ಮಾತ್ರವೇ. ಭೌಗೋಳಿಕವಾಗಿ ಬೇರೆ ಬೇರೆ ಪ್ರದೇಶದ ಜನರ ಮಾತಿನಲ್ಲಿ ಭಿನ್ನತೆಗಳು ಕಾಣುತ್ತವೆ. ಉಚ್ಚಾರದಲ್ಲಿ ಸ್ವರಗಳ ವ್ಯತ್ಯಾಸವೇ ಎದ್ದು ಕಾಣುವುದು. ನಂತರ ಆಸ್ಪಿರೇಟೆಡ್ ಧ್ವನಿಗಳದು: ಲ-ಳ, ಇತ್ಯಾದಿ. ವ್ಯಂಜನಗಳ ಉಚ್ಚಾರದಲ್ಲಿ ಅಂಥ ವ್ಯತ್ಯಾಸ ಕಾಣುವುದಿಲ್ಲ. ಇಂಥ ವ್ಯತ್ಯಾಸಗಳು ಸರಿಯೂ ಅಲ್ಲ, ತಪ್ಪೂ ಅಲ್ಲ. ಹಾಗೆ ಒಂದು ಪ್ರದೇಶದ ಎಲ್ಲ ಜನರೂ ಬಿಡಿ ಎಲ್ಲ ವ್ಯಕ್ತಿಗಳೂ ಒಂದೇ ಥರ ಉಚ್ಚರಿಸುವುದೂ ಸಾಧ್ಯವೇ ಇಲ್ಲ. ಉಚ್ಚಾರದ ಮೂಲಕ ಗಮನಕ್ಕೆ ಬರುವ ವ್ಯತ್ಯಾಸಗಳನ್ನೆಲ್ಲ ಪಟ್ಟಿ ಮಾಡಿ ವಿವರಿಸುವುದೆಂದರೆ ಸಾವಿರ ನಾಲಗೆಯ ಆದಿಶೇಷನಿಗೂ ಅಸಾಧ್ಯವಾದ ಬೇಸರ ಹುಟ್ಟಿಸುವ ಕೆಲಸ ಅನ್ನುತ್ತದೆ ಕವಿರಾಜಮಾರ್ಗ. ಇಂಥ ಉಚ್ಚಾರ ವ್ಯತ್ಯಾಸ ಎಲ್ಲ, ಅಂದರೆ ಜಗತ್ತಿನ ಎಲ್ಲ ಭಾಷೆಗಳಲ್ಲೂ ಇದ್ದದ್ದೇ. ಇವುಗಳಲ್ಲಿ ಯಾವುದು ಸರಿ, ಯಾವುದು ತಪ್ಪು ಅನ್ನುವ ಪ್ರಶ್ನೆಯೇ ತಪ್ಪು. ಪರಿಸರ ವೈವಿಧ್ಯ ಹೇಗೆ ಅಗತ್ಯವೋ ಹಾಗೆಯೇ ಭಾಷೆಯೊಂದು ಜೀವಂತ ಉಳಿದು ಬೆಳೆಯಲು ಒಂದೇ ಭಾಷೆಯೊಳಗಿನ ವೈವಿಧ್ಯವೂ ಹಾಗೆಯೇ ಅಗತ್ಯ.