ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬೆಂಗಳೂರು ಚಿತ್ರೋದ್ಯಮದ ಕೈಯಲ್ಲಿ ಬಡವಾಗುತ್ತಿರುವ ಕನ್ನಡ

ಗೆಳೆಯರೇ, ಒಂದು ಭಾಷೆ ಸಮ್ರುಧ್ಧವಾಗಬೇಕಾದರೆ, ಜಗತ್ತಿನ ಸರ್ವ ವಿಷಯಗಳನ್ನು ಅದು ತನ್ನೊಳಗೆ ಅಡಗಿಸಿಕೊಳ್ಳಬೇಕು. ಆದರೆ ಕನ್ನಡ ಚಿತ್ರರಂಗದವರ ಸ್ವಾರ್ಥ ಮತ್ತು ಆತ್ಮವಿಶ್ವಾಸದ ಕೊರತೆಯಿಂದಾಗಿ ಕನ್ನಡ ಭಾಷೆಯೇ ಬಡವಾಗಿದೆ. ಶ್ರವಣ ಮತ್ತು ದ್ರುಶ್ಯ ಮಾಧ್ಯಮವು ಅಕ್ಷರ ಮಾಧ್ಯಮಕ್ಕಿಂತ ಪ್ರಭಾವಶಾಲಿಯಾಗಿದೆ. ಇದು ಎಲ್ಲರಿಗೂ ತಿಳಿದ ವಿಷಯ. ಈಗ ಕನ್ನಡವನ್ನು ಕಾಪಾಡಬೇಕಾಗಿರುವುದು, ಹೊರಗಿನವರಿಂದಲ್ಲ ಕನ್ನಡ ಚಿತ್ರರಂಗದವರಿಂದ. ಹೌದು. ನಾನು ಹೇಳುತ್ತಿರುವುದು ಕರ್ನಾಟಕದಲ್ಲಿ ಡಬ್ಬಿಂಗ ಚಿತ್ರಗಳನ್ನು ದೂರವಿಟ್ಟಿರುವುದರ ಬಗ್ಗೆ. ಇದರಿಂದ ಕನ್ನಡ ಚಿತ್ರರಂಗಕ್ಕೆ ಹೊಡೆತ ಬೀಳುತ್ತದೆ ಅದು ಬೇಡ ಅಂತನೇ ಹೆಚ್ಚಿನವರು ನಂಬಿದ್ದಾರೆ. ಬೆಂಗಳೂರಿನ ಕೆಲವು ಜನರನ್ನು ಕಾಯುವ ಹೊಣೆ ಹೊತ್ತು ಕನ್ನಡ ತಾಯಿ ಭುವನೇಶ್ವರಿ ಕ್ರುಷವಾಗಿದ್ದಾಳೆ. ಸ್ವಾಮಿ ಕನ್ನಡ ಚಿತ್ರರಂಗವನ್ನು ಒಂದು ಮುಕ್ತ ಅಖಾಡವಾಗಿಸಿರಿ, ಇದರಿಂದ ಭಾಷೆ ಸಮ್ರುದ್ಧಿಯಾಗಿ ಬೆಳೆಯುವುದಷ್ಟೇ ಅಲ್ಲ ಕನ್ನಡ ಚಿತ್ರೋದ್ಯಮವೂ ತೆಲುಗು ಮತ್ತು ತಮಿಳು ಚಿತ್ರರಂಗಗಳಂತೆ ವಿಶಾಲವಾಗುತ್ತದೆ. ದಯವಿಟ್ಟು ಕನ್ನಡವನ್ನು ನಮ್ಮದೇ ಚಿತ್ರೋದ್ಯಮದವರ ಕೈಯಿಂದ ಮುಕ್ತಗೊಳಿಸಿ, ಇಲ್ಲವಾದರೆ ಕನ್ನಡಕ್ಕೆ ಬೀಳುತ್ತಿರುವ ಹೊಡೆತಗಳು ಅವ್ಯಾಹತವಾಗಿ ಸಾಗಿರುತ್ತವೆ. ಇಂದು ಕನ್ನಡ ಚಿತ್ರರಂಗ ಬೆಳೆದಿದೆ, ಈಗಲಾದರೂ ಮುಕ್ತ ಸ್ಪರ್ದೆಗೆ ಸಿದ್ಧರಾಗಿ, ಕನ್ನಡ ನಾಡಿನಲ್ಲಿ ನಮ್ಮದಲ್ಲದ ಭಾಷೆಯಲ್ಲಿ ಚಿತ್ರ ನೋಡಬೇಕಾದ ವಿಪರ್ಯಾಸವನ್ನು ತಪ್ಪಿಸಿ. ತಮಿಳು ಮತ್ತು ತೆಲುಗು ಭಾಷೆಗಳು ತಮ್ಮ ಚಿತ್ರಗಳ ಮೂಲಕ ನಿರಂತರವಾಗಿ ಕರ್ನಾಟಕದೊಳಗೆ ನುಸುಳುತ್ತಿವೆ. ಅಪ್ಪಟ ಕನ್ನಡ ಒಳನಾಡುಗಳಲ್ಲೂ ಹೊರಗಿನ ಭಾಷೆಯ ಚಿತ್ರಗಳು ದಾಳಿ ನಡೆಸಿವೆ. ಆದರೆ ಕನ್ನಡ ಚಿತ್ರಗಳ ಮೂಲಕ ಅವರ ನಾಡಿಗೆ ವಿಚಾರಗಳು ತಲುಪುತ್ತವೆಯೇ ಹೊರತು ಭಾಷೆ ಕಿಂಚಿತ್ತೂ ಇಣುಕದು, ಅಂದ ಮೇಲೆ ಭಾಷೆಯ ಬೆಳವಣಿಗೆಯಾದರೂ ಹೇಗೆ ಸಾಧ್ಯ. ಚಿತ್ರರಂಗದವರ ಈ ಧೋರಣೆಯಿಂದ ಕನ್ನಡಕ್ಕೆ A.R.ರೆಹಮಾನ್‌ರಂತ ಅದ್ಭುತ ಪ್ರತಿಭೆಯ ಸಂಗೀತ ದೊರಕಿಲ್ಲ, ಅದೇ ತೆಲುಗು ಮತ್ತು ತಮಿಳು ರಂಗಗಳನ್ನು ನೋಡಿ, ಅವರು ಇಂಗ್ಲಿಷ್ ಚಿತ್ರಗಳನ್ನು ಮೊದಲುಗೊಂಡು ಎಲ್ಲವನ್ನು ತಮ್ಮ ಭಾಷೆಗೆ ಅಳವಡಿಸಿಕೊಂಡು ತಮ್ಮ ಭಾಷೆಯನ್ನು ಮತ್ತಷ್ಟು ಶ್ರೀಮಂತಗೊಳಿಸಿಕೊಂಡಿರುವುದಷ್ಟೇ ಅಲ್ಲದೇ ಅದರಿಂದ ಅವರ ಚಿತ್ರರಂಗ ಅದ್ಭುತ ಚಿತ್ರಗಳನ್ನು ನಿರ್ಮಿಸಲು ಅನುಕೂಲವಾಗಿದೆ. ಬೇರೆ ಭಾಷೆಯವರು,ಅವರೇ ಏಕೆ ನಮ್ಮವರೇ, ನಮ್ಮ ಚಿತ್ರಗಳನ್ನು ಅಸಡ್ಡೆ ಧೋರಣೆಯಿಂದ ನೋಡುವುದು ಇದೇ ಕಾರಣದಿಂದ. ಬೆಂಗಳೂರಿನ ಚಿದ್ರೋದ್ಯಮದವರೇಕೇ ಇಷ್ಟೊಂದು ಆತ್ಮವಿಶ್ವಾಸವಿಲ್ಲದರಾಗಿದ್ದಾರೆ. ಮುಂಚಿನಿಂದಲೂ ಡಬ್ಬಿಂಗಗೆ ಅವಕಾಶವಿದ್ದಲ್ಲಿ ಇಂದು ಕನ್ನಡ ಖಂಡಿತವಾಗಿ ಈ ಸ್ಥಿತಿಯಲ್ಲಿರುತ್ತಿರಲಿಲ್ಲ.

ಸಾಹಿತ್ಯದ ಗುರಿ ಏನು ? ಪ್ರಯೋಜನವೇನು?

ಇದು ನಾನು ಇತ್ತೀಚೆಗೆ ಓದಿದ, ಸೇಡಿಯಾಪು ಕೃಷ್ಣಭಟ್ಟರು ಬರೆದ ಒಂದು ಲೇಖನದ ಸಂಗ್ರಹ .
ಸಾಹಿತ್ಯ ಎಂದರೆ ಗ್ರಂಥ ಸಮುದಾಯ. ಗ್ರಂಥಗಳ ಅಧ್ಯಯನ ಮತ್ತು ಪಠನಗಳಿಂದ ಮನೋರಂಜನೆ ಮತ್ತು ಮನಃಸಂಸ್ಕಾರ ಆಗುತ್ತದೆ. ಸಂಸ್ಕಾರದ ಪರಿಣಾಮವೇ ಸಂಸ್ಕೃತಿ. ಹೀಗಾಗಿ ಸಾಹಿತ್ಯ ಎನ್ನುವದು ಸಂಸ್ಕೃತಿಯ ಸಾಧನ. ಯಾವ ಬರವಣಿಗೆ ಸಂಸ್ಕೃತಿಯನ್ನು ಪೋಷಿಸುವದಿಲ್ಲವೋ ಅದು 'ಸಾಹಿತ್ಯ' ಎನ್ನಿಸಿಕೊಳ್ಳುವದಕ್ಕೆ ಅರ್ಹವಲ್ಲವೆಂಬ ಮಾನದಂಡವು ಇದರಿಂದಾಗಿ ಲಭಿಸುತ್ತದೆ. ಸಂಸ್ಕಾರ್‍ಅವೆಂದರೆ ಅಶುದ್ಧವಾದದ್ದನ್ನು ಶುದ್ಧೀಕರಿಸುವದು, ಉತ್ತಮವಲ್ಲದುದನ್ನು ಉತ್ತಮವಾಗಿ ಮಾಡುವದು , ಪರಿಷ್ಕರಿಸುವದು ಎಂದರ್ಥ . ಸುಸಂಸ್ಕೃತಿಯೇ ಸಾಹಿತ್ಯದ ಗುರಿ . ಅರ್ಥಾತ್ ಮನುಷ್ಯನನ್ನು ಸುಸಂಸ್ಕೃತನನ್ನಾಗಿ ಮಾಡುವದೇ ಸಾಹಿತ್ಯದ ಉದ್ದೇಶ .

ಭಾರತಕ್ಕೆಂದೆ ಪ್ರತ್ಯೇಕವಾದ ಜಿ.ಪಿ.ಎಸ್ ವ್ಯವಸ್ಥೆ - ಬೇಕೆ, ಬೇಡವೆ?

ನಿಮ್ಮಲ್ಲಿ ಹಲವರಿಗೆ ಇದು ಹಳಸಲು ಸುದ್ದಿಯೇನೊ ಆದರೆ ನನಗೆ ಇತ್ತೀಚಿಗೆ ತಿಳಿಯಿತು, ಇಸ್ರೋದವರು ಭಾರತಕ್ಕೆಂದೆ ಪ್ರತ್ಯೇಕವಾದ, ೮ ಉಪಗ್ರಹಗಳುಳ್ಳ ಜಿ.ಪಿ.ಎಸ್ ವ್ಯವಸ್ಥೆಯನ್ನು ನಿರ್ಮಿಸುವ ಯೋಜನೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ; ಅಂದಾಜು ವೆಚ್ಚ ೨೦೦೦ ಕೋಟಿ ರೂ.

ಅಮೇರಿಕೆಯ ಜಿ.ಪಿ.ಎಸ್ ವ್ಯವಸ್ಥೆ ಭದ್ರವಾಗಿ ತಳವೂರಿದೆ; ಒಂದು ಕಾಲದಲ್ಲಿ ಅಮೇರಿಕೆಯ ಸೇನೆಯವರಿಗೆ ಮಾತ್ರ ಕೊಡಲಾಗುತ್ತಿದ್ದ ಕರಾರುವಾಕ್ಕಾದ ಮಾಹಿತಿಯನ್ನು ಎಲ್ಲರಿಗೂ ಕೊಡುವಂತೆ ಕ್ಲಿಂಟನ್ ಸರ್ಕಾರದವರು ಏರ್ಪಡಿಸಿಯಾಗಿದೆ. ರಷ್ಯಾದ ಗ್ಲೋನಾಸ್ ವ್ಯವಸ್ಥೆಯ ಉಪಗ್ರಹಗಳನ್ನು ಭಾರತದಿಂದ ಉಡಾವಣೆ ಮಾಡುವಂತೆಯೂ, ಭಾರತದಲ್ಲಿ ಸೇನೆಯವರೂ ಸಾರ್ವಜನಿಕರೂ ಆ ವ್ಯವಸ್ಥೆಯನ್ನು ಬಳಸಲಾಗುವಂತೆಯೂ ಒಪ್ಪಂದವೇರ್ಪಟ್ಟಿದೆ. ಸಾಲದ್ದಕ್ಕೆ ಯೂರೋಪಿನ ಇ.ಎಸ್.ಎ ಸಂಸ್ಥೆಯವರ ಗೆಲಿಲೆಯೋ ವ್ಯವಸ್ಥೆಯಲ್ಲೂ ಭಾರತ ಪಾಲ್ಗೊಳ್ಳುವಂತೆ ಒಪ್ಪಂದವಾಗಿದೆ. ಇಷ್ಟಿದ್ದೂ ಮತ್ತೊಂದು ವ್ಯವಸ್ಥೆ ಬೇಕೆ? ಇದರಿಂದ ಯಾವ ಹೊಸ ಪ್ರಯೋಜನವಾದೀತು? ಎಲ್ಲ ತಿಳಿದೂ ಯೋಜನೆ ತಯಾರಿಸಿದ ಇಸ್ರೋದವರ ಉದ್ದೇಶವಾದರೂ ಏನಿರಬಹುದು?

ಒಂದು ವೇಳೆ ಸರ್ಕಾರದವರು ಮಂಜೂರು ಮಾಡಿದರೆ ಹೊಸ ವ್ಯವಸ್ಥೆಗೊಂದು ಹೆಸರು ಬೇಕಲ್ಲ? ನಕ್ಷತ್ರ ಚೆನ್ನಾಗಿ ಒಪ್ಪುತ್ತೆ, ಏನಂತೀರಿ?

[ ನ್ಯಾಯವಾಗಿ ಜಿ.ಪಿ.ಎಸ್ ಅಮೇರಿಕೆಯ ವ್ಯವಸ್ಥೆಯ ಹೆಸರು ಮಾತ್ರ; ಉಳಿದವನ್ನು ಆ ಹೆಸರಿನಿಂದ ಕರೆಯಲು ಬಾರದು; ಆದರೆ "ಉಪಗ್ರಹಾಧಾರಿತ ಯಾನವ್ಯವಸ್ಥೆ" ಎನ್ನುವುದರ ಬದಲಾಗಿ ಜಿ.ಪಿ.ಎಸ್ ಎನ್ನುವುದು ಸುಲಭ. ಇದರಿಂದ ಯಾರಾದರೂ ನೊಂದಿದ್ದರೆ ದಯವಿಟ್ಟು ಕ್ಷಮಿಸಿ. ]

ವೆಂ.

ವಾಸ್ತುಪುರುಷನ ಅನುಗ್ರಹ

ನಾನು ಹದಿನೇಳು ವರ್ಷಗಳೆ ನನ್ನ ಹೆಂಡತಿ ಮಕ್ಕಳೊಂದಿಗೆ ವಠಾರದ ಒಂದು ಬಾಡಿಗೆ ಮನೆಯಲ್ಲಿದ್ದೆ. ಆ ಮನೆ ವಾಸ್ತು ಪ್ರಕಾರ ಬಹಳ ದೋಷದಿಂದ ಕೂಡಿತ್ತು. ನೈರುತ್ಯಕ್ಕೆ ಮುಂಬಾಗಿಲು, ಈಶಾನ್ಯದಲ್ಲಿ ಕಕ್ಕಸು, ಆಡಿಗೆ ಮಾಡುತ್ತಿದ್ದುದು ದಕ್ಷಿಣಾಭಿಮುಖವಾಗಿ. ಹೀಗೆ ಹೇಳುತ್ತಾ ಹೋದರೆ ಇನ್ನೂ ಇದೆ. ಇಲ್ಲೇ ನನ್ನ ಮಕ್ಕಳು ಹುಟ್ಟಿ ಬೆಳೆದರು. ಎಲ್ಲ ಸಾಮಾನ್ಯರಂತೆ ನಮ್ಮ ಕುಟುಂಬವೂ ಕಾಯಿಲೆ ಕಸಾಲೆ, ಆರ್ಧಿಕ ಮುಗ್ಗಟ್ಟು ಇದನ್ನೆಲ್ಲ ಎದುರಿಸಿದರೂ ನಾನೆಂದೂ ವಾಸ್ತು ಬಗ್ಗೆ ತಲೆ ಕೆಡಿಸಿಕೊಂಡವನಲ್ಲ. ಕಡೆಗೂ ಅಲ್ಲೇ ಹದಿನೈದು ವರ್ಷಗಳಾದ ಮೇಲೆ ನನ್ನ ಹೆಂಡತಿ ಒತ್ತಾಯಕ್ಕೆ ಮಣಿದು ವಾಸ್ತು ಶಾಸ್ತ್ರದತ್ತ ಕಣ್ತೆರೆದು ನೋಡುವಂತಾಯ್ತು. ನನಗೆ ಆ ಮನೆಯಲ್ಲಿ ಋಣಾತ್ಮಕ ದೋಷಗಳೇನೆ ಇದ್ದರೂ, ಧನಾತ್ಮಕ ಪ್ರಕಾರಗಳೂ ವಾಸ್ತು ತತ್ವಕ್ಕೆ ಒತ್ತುಕೊಡುವಂತೆ ಇದ್ದವು. ಉದಾಹರಣೆಗೆ ಉತ್ತರ ಮತ್ತು ಪೂರ್ವಭಾಗವು ತಗ್ಗಾಗಿಯೆ ಇದ್ದು, ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನ ಭಾವು ಎತ್ತರದ ಸ್ಥಾನದಲ್ಲೆ ಇತ್ತು. ದಕ್ಷಿಣ ಭಾಗದಲ್ಲಿ ನಮಗೆ ಅರಿವಿಲ್ಲದಂತೆ ತುಳಸಿ ಕಟ್ಟೆಯನ್ನಿಟ್ಟಿದ್ದೆವು. ಆನಂತರ, ನಾನೊಂದಿಷ್ಟು ಮನೆಯ ಪೀಠೋಪಕರಣ, ಸಾಮಾನು ಸರಂಜಾಮು ಎಲ್ಲೆಲ್ಲಿರಬೇಕೆಂಬುದನ್ನು ಸಾಧ್ಯವಾದಷ್ಟು ಪುನ ರ್‍ ವ್ಯಸ್ಥೆಗೊಳಿಸಿದ್ದೆ. ಹೇಳಬೇಕೆಂದರೆ, ಯಾವುದೇ ಮನೆಯಲ್ಲಿ ಕೆಲವೊಂದು ಮೈನಸ್ ಪಾಯಿಂಟ್ಸ್ ಇದ್ದರೆ, ಇನ್ನೂ ಕೆಲವು ಪ್ಲಸ್ ಪಾಯಿಂಟ್ಸ್ ಇದ್ದೇ ಇರುತ್ತವೆ. ಶಾಸ್ತ್ರವನ್ನು ಸಂಪೂರ್ಣ ತೆಗಳುವವರ ಮಾತು ಬೇರೆಯೆ. ಈಗ ಮಕ್ಕಳೆಲ್ಲ ದೊಡ್ಡವರಾಗಿದ್ದಾರೆ. ಆ ವಠಾರದಿಂದ ಹೊರ ಬಂದಿದ್ದೇನೆ. ಟಾರಸಿಯ ಪ್ರತ್ಯೇಕ ಬಾಡಿಗೆ ಮನೆಯಲ್ಲಿದ್ದೇನೆ. ಮೊದಲಿಗೆ ಏನೇ ನೋಡಿಕೊಂಡು ಬಂದರೂ ಇದರಲ್ಲೂ ದೋಷಗಳಿವೆ. ಮನೆಯ ಮುಂದೆಯೆ ಈಶಾನ್ಯ ಮೂಲೆಯಲ್ಲಿ ತೆಂಗಿನ ಮರವಿದೆ. ಇದರಿಂದ ಮನೆಯ ಯಜಮಾನನ ಆರೋಗ್ಯಕ್ಕೇ ಕುತ್ತೆಂದು ತಿಳಿದಿದೆ. ನನ್ನಲ್ಲಿ ಮತ್ತು ದೇವರಲ್ಲಿ ನನಗೆ ನಂಬಿಕೆ ಇದೆ. ಆರೋಗ್ಯವಾಗಿಯೆ ಇದ್ದೇನೆ. ಇದೀಗ ನನ್ನನ್ನು ಕಾಡುವ ಮುಖ್ಯ ಪ್ರಶ್ನೆಗಳೆಂದರೆ....

ದರ್ಶನ

ಅಂತರಾಳದಿ ನಾ ಕರೆದೆ ಬಾ
ನಿನ್ನಂತೆ ನನ್ನನ್ನು ನೀ ಮಾಡ ಬಾ
ನಿನ್ನಯ ಶುದ್ಧ ಹೃದಯವ ನೀಡು ಬಾ
ನಿನ್ನಯ ಸಧ್ಗುಣಗಳ ಕಲಿಸಲು ಬಾ
ನಿನ್ನ ಹಾಗೆ ನಾ ಬಾಳಲು ತೋರು ಬಾ

ನನ್ನ ಅಪ್ಪ

ನನ್ನ ಅಪ್ಪ

ಹಸಿರು ಹಸಿರು ಹಸಿರು
ಹಸಿರೊಂದಿಗೆ ಒಂದಾಗುತ್ತಿವೆ ನನ್ನ ಉಸಿರು
ದುಃಖದಿ ಬಂದು ಕುಳಿತಿರುವೆ
ಕಂಬನಿಯ ಕಣ್ಣಲಿ ತಂದಿರುವೆ
ಕನಸುಗಳ ಸಾಲನು ಕಟ್ಟಿರುವೆ
ಜನ್ಮ ಕೊಟ್ಟ ತಂದೆಯು
ಜೊತೆ ಇಲ್ಲದೆ ಹೋದರಲ್ಲ
ಪ್ರೀತಿಯ ತೋರಿಸಿ
ನಾ ಪ್ರೀತಿಸಲು ಇಲ್ಲವಲ್ಲ
ವಿದ್ಯೆಯು ಕೊಟ್ಟು
ನಾ ಕಲಿತ ವಿದ್ಯೆ ನೋಡಲಿಲ್ಲ
ಸಿಹಿತಿನಿಸುಗಳನ್ನು ಕೊಟ್ಟರು
ಸಿಹಿಮಾತನಾಡಲು ಇಲ್ಲವಲ್ಲ
ಆಣ್ಣ ತಮ್ಮ ಅಕ್ಕ ತಂಗಿಯರ ಕೊಟ್ಟರು
ಅವರ ಸುಖ ಸಂತೋಷ ನೋಡಲಿಲ್ಲ
ಆಸ್ತಿ ಆಂತಸ್ತು ಕೊಟ್ಟು
ಅದರ ಸುಖ ಅನುಭವಿಸಲಿಲ್ಲ
ಒಂದನ್ನು ಮಾತ್ರ ಕೇಳುವೆ ಅಪ್ಪ
ಕನಸಿನಲ್ಲಿ ನಾ ಕಾಣಲು ಬಾ ಅಪ್ಪ

ಗೋಡ್ಸೆ ಯುಗ .

ಬಹಳ ಚಿಕ್ಕ ವಯಸ್ಸಿನಿಂದಲೂ ಮಹಾತ್ಮರ ತತ್ವಗಳು ನನ್ನ ಮನಸ್ಸಿಗೆ ನಾಟಿದ್ದವು . ಅವರ ಜೀವನ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಕಷ್ಟಾಸಾಧ್ಯವೆನಿಸುತ್ತಿತ್ತು .