ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮಾಘೇ ಮೇಘೇ ಗತಂ ವಯಃ

ಮಾನ್ಸೂನು ಕೇರಳಕ್ಕೆ ಆಗಮಿಸಿದೆ . ಕರ್ನಾಟಕದಲ್ಲಿ ಮಳೆಯಾಗುತ್ತಿದೆ. ಇಲ್ಲಿ ಮುಂಬೈಯಲ್ಲಿ ಮಾನ್ಸೂನಿನ ಮುನ್ಸೂಚನೆಯಾಗಿ ಇವತ್ತು ಬೆಳಗ್ಗೆಯೇ ಮೋಡ ಮುಸುಕಿದ ವಾತಾವರಣವಿದೆ. ಯಥಾ ಪ್ರಕಾರ ಇರುವ ಧಗೆಯೂ ಹೆಚ್ಚಾಗಿದೆ. ಟೀವಿಯಲ್ಲಿ ಸಂಗೀತದ ಚ್ಯಾನೆಲ್ಲುಗಳೆಲ್ಲವೂ ಮೋಡ, ಮಳೆ, ಗಾಳಿಯ ಹಾಡುಗಳನ್ನು ಹೊರತೆಗೆದಿವೆ. ನಾನೂ ಕೂಡ ಕಾಳಿದಾಸನ ಮೇಘದೂತವನ್ನು ಹೊರತೆಗೆದೆ. ನೂರಿಪ್ಪತ್ತು ಪದ್ಯಗಳು ಇಲ್ಲಿವೆ . ಕಛೇರಿಗೆ ಬರುವ ದಾರಿಯಲ್ಲಿ ಓದತೊಡಗಿದೆ. ಸುಮಾರು ೧೦ ಪದ್ಯ ; ಮೂಲ ; ಭಾವಾನುವಾದ; ವಿವರಣೆ ಓದಲಿಕ್ಕೆ ಸಾಧ್ಯವಾಯಿತು. ಅಲ್ಲಿ ಈ ವಾಕ್ಯವೂ ಸಿಕ್ಕಿತು. "ಮಾಘೇ ಮೇಘೇ ಗತಂ ವಯಃ" . ಅಂದರೆ ಮಾಘ ಕವಿಯ ಕಾವ್ಯ ಮತ್ತು ಮೇಘದೂತ ಕಾವ್ಯ ಓದುವದರಲ್ಲಿ ನನ್ನ ಆಯುಷ್ಯವನ್ನು ಕಳೆದೆ ಎಂದರ್ಥ.ಇದು ಸಾರ್ಥಕ್ಯದ , ತೃಪ್ತಿಯ ಮಾತು.

ಸಂಪದದ ಸಾವಿರ ಸದಸ್ಯರು

ಮುಂದಿನ ವರ್ಷದೊಳಗೆ ಹತ್ತು ಸಾವಿರ ಸದಸ್ಯರ ಗುರಿ ಮುಟ್ಟೋಣ.
ಇಂದೇ ನಾವೆಲ್ಲರೂ ಒಬ್ಬೊಬ್ಬರು ಹತ್ತು ಜನರಿಗೆ ಸಂಪದದ ವಿಚಾರ ತಿಳಿಸೋಣ.

ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳ ಬಗ್ಗೆ ಅರಿವು ಮೂಡಿಸುವ ಬಗೆ ಹೇಗೆ?

ಸ್ನೇಹಿತರೆ,

ಕನ್ನಡ ಸಾಹಿತ್ಯದ ಬಗ್ಗೆ ನಮ್ಮ ಜನರಲ್ಲಿ ಅರಿವು ಮೂಡಿಸಬೆಕಾದ ಕಾಲ ಇದು. ಹಾಗೆ ಮಾಡದೇ ಇದ್ದ ಪಕ್ಷದಲ್ಲಿ ನಮ್ಮ ಮಕ್ಕಳ ಕಾಲಕ್ಕೆ ನಮ್ಮ ಅಮೂಲ್ಯ ಸಾಹಿತ್ಯ ಮತ್ತು ಸಾಹಿತಿಗಳ ಜಾಗ, ವಸ್ತು ಸಂಗ್ರಹಾಲಯವಾಗುವುದೆಂದರೆ ಅತಿಶಯವಾಗುವುದಿಲ್ಲ. ಈಗಿನ ಜನಾಂಗದವರು ನಮ್ಮ ಸಾಹಿತ್ಯವನ್ನು ಓದುವಂತೆ ಪ್ರೇರೇಪಿಸಬೇಕು. ಸಂಪದ ಮತ್ತು ಇತ್ತೀಚೆಗೆ ನಡೆದಂತಹ ವಿಕಿಪೀಡಿಯ ಸಮಾರಂಭಗಳು ಈ ಪ್ರಯತ್ನಕ್ಕೆ ವೇದಿಕೆಯಾಗಬಹುದು.  ದಯವಿಟ್ಟು ತಮ್ಮ ಅಮೂಲ್ಯವಾದ ಸಲಹೆಗಳನ್ನು ಈ ಬ್ಲಾಗ್ನಲ್ಲಿ ಮಂಡಿಸಬೇಕಾಗಿ ವಿನಂತಿ. 

ಒಂದು ಸಣ್ಣ ಲೆಕ್ಕ

ಒಂದು ಸಣ್ಣ ಲೆಕ್ಕ

ನಾವು ಎಕೌಂಟೆಂಟುಗಳು ನೋಡಿ.. ಬೇಕಾದ, ಬೇಡವಾದ ಲೆಕ್ಕಗಳೆಲ್ಲ ತಲೆಯೊಳಗೆ ಹೋಗುತ್ತವೆ. ಕೆಲವು ಅಲ್ಲೇ ಉಳಿದರೆ ಕೆಲವು ಹೊರಗೆ ಹಾಕಲ್ಪಡುತ್ತವೆ!

ಗೌಡರ ತುಟಿಯಂಚಿನಲ್ಲಿ ತುಂಟನಗೆ?

ಹಾಲಿ ಮಾಜಿ ಪ್ರಧಾನಿ ಡಿ ಗೌಡರಿಗೆ ಪತ್ರಕರ್ತರೆಂದರೆ ಅಷ್ಟಕಷ್ಟೆ. ಅವರ ಪ್ರಕಾರ ಪತ್ರಕರ್ತರೆಲ್ಲಾ ತಲೆಹರಟೆಗಳು. ಅದರಲ್ಲೂ ನನ್ನ ಹೆಸರೇ ತಲೆಹರಟೆ ಎಂದಿರುವಾಗ ಕೇಳಬೇಕೆ? ಅಂತು ಇಂತು ಕಷ್ಟಪಟ್ಟು ಸಂದರ್ಶನ ಪಡೆಯುವಷ್ಟರಲ್ಲಿ ನನ್ನ ತಲೆ ಹನ್ನೆರಡಾಣೆ ಆಗಿ 'ತಲೆಹರಟೆ'ಗೆ ತಲೆಯೇ ಇಲ್ಲ ಎನ್ನುವ ಹಾಗಾಗಿದೆ. ಆದರೆ ಸಂದರ್ಶನ ವೇಳೆ ಆಡಿದ ಮಾತುಗಳೆಲ್ಲಾ ಆಫ್ ದಿ ರೆಕಾರ್ಡ್!! ಆದರೂ ಧೈರ್ಯ ಮಾಡಿ ಸಂದರ್ಶನದ ಒಂದೆರಡು ತುಣುಕುಗಳನ್ನು ಇಲ್ಲಿ ನೀಡಿದ್ದೀನಿ.

ತಲೆಹರಟೆ: ಗೌಡ್ರೇ ನಿಮ್ಮ ಇದುವರೆಗಿನ ಮಹತ್ತರ ಸಾಧನೆ ಯಾವುದು?

ಗೌಡ್ರು: ಮಗನನ್ನು ಸಿ ಎಮ್ ಮಾಡಿದ್ದು. ಇದು ಆಫ್ ದಿ ರೆಕಾರ್ಡ್. ಪತ್ರಿಕೆಯಲ್ಲಿ ಪ್ರಕಟಿಸಬೇಡಿ.

ತಲೆಹರಟೆ: ನೀವು ಕೆಲವು ತಿಂಗಳ ಹಿಂದಿನವರೆಗೂ ಸರಾಸರಿ ದಿನಕ್ಕೊಂದು ಪತ್ರ ಬರೆಯುತ್ತಿದ್ದರಲ್ಲ. ಈಗೇಕೆ ನಿಮ್ಮ ಪತ್ರಗಳು ಅಪರೂಪ ಆಗಿಬಿಟ್ಟಿದೆ.

ಗೌಡ್ರು: ವಯಸ್ಸಾಯಿತು. ಪತ್ರ ಬರೆದು ಬರೆದು ಸುಸ್ತಾಗಿದ್ದೀನಿ. ಸ್ವಲ್ಪ ಸುಧಾರಿಸಿಕೊಳ್ಳೋಣ ಎಂದು ಸುಮ್ಮನಾಗಿದ್ದೀನಿ. ಹದಿನಾರು ತಿಂಗಳು ರೆಸ್ಟ್. ಆಮೇಲೆ ನೋಡಿ ಮತ್ತೆ ಪ್ರಾರಂಭ ಆಗುತ್ತೆ ನನ್ನ ಪತ್ರಾವಳಿ! (ಪತ್ರ ಹಾವಳಿ? ಆಡಳಿತ ಹಂಚಿಕೆ ಸೂತ್ರದ ಪ್ರಕಾರ ಇನ್ನು ಹದಿನಾರು ತಿಂಗಳ ನಂತರ ಮಂಡಿಊರಿ-ಯಡಿಯೂರಿ ಅಲ್ಲ-ಎಂಬುವವರು ಮುಖ್ಯ ಮಂತ್ರಿ ಆಗಲಿದ್ದಾರೆ....ಸಂದರ್ಶಕ).

ತಲೆಹರಟೆ: ನೀವು ಸೋನಿಯಾಗೂ ಪತ್ರ ಬರೆಯುತ್ತಿದ್ದರಲ್ಲಾ ಆಗ ನಿಮ್ಮ ಧರ್ಮಪತ್ನಿ ಏನು ಅನ್ನುತಿರಲ್ಲಿಲ್ಲವಾ?

ಗೌಡ್ರು: ..............................(ಗೌಡರ ತುಟಿಯಂಚಿನಲ್ಲಿ ತುಂಟನಗೆಯೊಂದು ಮಿಂಚಿ ಮಾಯವಾಯಿತು)

ಸದಸ್ಯರ ಗಮನಕ್ಕೆ: 'joshsatish' ಎಂಬ ಐಡಿಯನ್ನು ಬಹಿಷ್ಕರಿಸಲಾಗಿದೆ

ಸದಸ್ಯರೆಲ್ಲರ ಗಮನಕ್ಕೆ,

'joshsatish' ಎಂಬ ಐಡಿಯಿಂದ ಲಾಗಿನ್ ಆಗುತ್ತಿರುವವರು ಸಂಪದದ ಇತರ ಸದಸ್ಯರ ಬ್ಲಾಗ್ ಬರಹಗಳನ್ನು ಹಾಗೂ ಲೇಖನಗಳನ್ನು ಕಾಪಿ ಹೊಡೆದು ತಮ್ಮ ಬ್ಲಾಗಿನಲ್ಲಿ ಸೇರಿಸಿಕೊಳ್ಳುತ್ತಿರುವುದರಿಂದ ಈ‌ ಐಡಿಯನ್ನು ಬಹಿಷ್ಕರಿಸಲಾಗಿದೆ.