ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪ್ರಣತಿ ಮತ್ತು ತಂತ್ರ

ಪ್ರಣತಿ

ನಮ್ಮ ಮನೆಯ ಹಣತಿ,
ಸಣ್ಣ ಪಾಪ ಪ್ರಣತಿ.
ಎತ್ತಿಕೊಳಲು ನಗುತಿ,
ಮುತ್ತುಕೊಡಲು ಅಳುತಿ.
ಅರಿವು ಕೊಟ್ಟ ಆರತಿ,
ಬೆಳಕು ಕೊಟ್ಟ ಭಾಮತಿ,
ನಮ್ಮ ಪುಟ್ಟ ಭಾರತಿ.

ಅಂತರ ಮತ್ತು ಅರಸ

ಅಂತರ

ಬಂಗಾರದ ಉಂಗುರದಲ್ಲಿ,
ಬಂಗಾರ ನಿರಾಕಾರ,
ಉಂಗುರ ಸಾಕಾರ,
ಉಂಗುರ ಬಂಗಾರದ್ದು,
ಆದರೆ
ಬಂಗಾರವೆಂದರೆ ಉಂಗುರವಲ್ಲ
ಹೀಗಿದೆ
ನಮ್ಮ ಮತ್ತು ದೇವರ
ಅಂತರ.

ನೂರು ದಿನ ಪೂರೈಸಿದ `ಸರ್ಕಾರ್' `ಸಿನಿಮಾ'!!!

ಎಲ್ಲಾ ಸಿನೆಮಾಗಳಲ್ಲಿ ಮಧ್ಯಂತರ ಇನ್ನೇನು ಒಂದೆರಡು ಕ್ಷಣಗಳಿರುವಾಗ ಕತೆಗೆ ಒಂದು ತಿರುವು ಬಂದು ವೀಕ್ಷಕರ ಕುತೂಹಲ ಕೆರಳಿಸುತ್ತದೆ. ಆದರೆ ಈ ಶನಿವಾರ(13.05.06) ನೂರು ದಿನ ಪೂರೈಸಿದ `ಸಿನಿಮಾ' ಮಾತ್ರ ವಿಭಿನ್ನ ರೀತಿಯದು. ಹೆಸರು `ಸರ್ಕಾರ್'. ಇದು ಪ್ರಾರಂಭ ಆಗಿದ್ದೆ ಒಂದು ವಿಚಿತ್ರ `ತಿರುವು' ನಿಂದ!

ಇನ್ನೊಂದು ವಿಶೇಷ ಎಂದರೆ ಈ (ವಿ)ಚಿತ್ರದಲ್ಲಿ ನಾಯಕ ಯಾರು ಖಳನಾಯಕನಾರು ಎಂಬ ಗೊಂದಲ ಪ್ರಾರಂಭದಿಂದಲೂ ಕಾಡುತಿದೆ. ಡೈಲಾಗ್ ವಿಷಯದಲ್ಲಿ ಎಲ್ಲಾ ಸಿನಿಮಾಗಳನ್ನು ಹಿಮ್ಮೆಟ್ಟಿಸುತ್ತದೆ. ಶೆಟ್ಟರ್ ಹೆಸರಿನ ಮಂತ್ರಿ ಪಾತ್ರವೊಂದು ಈ ಡೈಲಾಗ್ ಹೆಳುತ್ತೆ-"ಕಂದಾಯ ಇಲಾಖೆಯಲ್ಲಿ ಯಾರಾದರು ಲಂಚ ಕೇಳಿದರೆ ನೇರವಾಗಿ ಅವರ ವಿವರಗಳನ್ನು ನನ್ನ ಮೊಬೈಲ್ ಗೆ ಕರೆ ಮಾಡಿ ತಿಳಿಸಿ. ನಾನು ಕ್ರಮ ತೆಗೆದುಕೊಳ್ಳುತ್ತೇನೆ" ಎಂದು. ಪತ್ರಿಕೆಗಳ ಮೂಲಕ ಮೊಬೈಲ್ ನಂಬರ್ ಜನತಾಜನಾರ್ಧನ್ ಗೆ ದೊರೆಯುತ್ತದೆ. ಆದರೆ ಮುಂದೇನಾಯಿತು ಎಂದು ಕೇಳಬೇಡಿ. ಆ ಮೊಬೈಲಿಗೆ ಎಷ್ಟು ದೂರುಗಳು, ಅವುಗಳಲ್ಲಿ ಕ್ರಮ ತೆಗೆದುಕೊಂಡಿದ್ದೆಷ್ಟು ಎಂಬುದರ ಬಗ್ಗೆ ಒಂದಿಷ್ಟೂ ಮಾಹಿತಿ ಇಲ್ಲ.

"ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ಕೊಡಲಾಗುವುದು" ಎಂಬುದು ಆಗಾಗ ಕೇಳಿ ಬರುವ ಡೈಲಾಗು.

ಇನ್ನೊಂದು ವಿಶೇಷ ಎಂದರೆ ಅ ಒಂದೇ ಚಿತ್ರಕ್ಕೆ ಹಲವು ನಿರ್ದೇಶಕರು!!!!!!

ಈ ಸಿನಿಮಾ ನೂರು ದಿನ `ಓಡಿ'ದ್ದರು ಸಹ ಬಾಕ್ಸ್ ಆಫೀಸ್ `ಕಮಾಯಿ' ಅಷ್ಟಕಷ್ಟೆ ಎಂಬ ಸೂಚನೆ ದೊರೆತಿದೆ. ಏಕೆಂದರೆ, ನೂರು ದಿನ ಪೂರೈಸಿದ ಸಂದರ್ಭದಲ್ಲಿ ಈ ಸಿನಿಮಾದ ಪ್ರಮುಖ ಪಾತ್ರ(ನಾಯಕ?) ತನ್ನ ಸಂದರ್ಶನದಲ್ಲಿ"ಈ ನೂರು ದಿನ ನನಗೆ ತೃಪ್ತಿ ನೀಡಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ವೆಬ್ ಅಲೆಮಾರಿಗಳೇ! ದಯವಿಟ್ಟು ಗಮನದಲ್ಲಿಡಿ;ಈ ಚಿತ್ರದ ಅವಧಿ 40 ತಿಂಗಳು!!!!!! ಆದರೆ ಅದಕ್ಕಿಂತ ಮುಂಚೆಯೂ ಮುಗಿಯಬಹುದು!

ಅಶೋಕ ಚಕ್ರ

ಅಶೋಕ ಚಕ್ರ

ಭಾರತಮಾತೆಯ ಬಾವುಟದಲ್ಲಿ
ಭಾ ರಥ ಚಕ್ರವು ಮೆರೆಯುತಿದೆ//

ನಭೋ ಮಂಡಲದ ಅಹೋರಾತ್ರಿಗಳ
ಪ್ರತಿನಿಧಿಯಾಗಿ ಹೊಳೆಯುತಿದೆ/೧/

ಅಂಭೇಡ್ಕರ್.

ಅಂಭೇಡ್ಕರ್

ಬೇಡಜನಕೆ ಬೇಡಬೇಡಿರೆಂದ ಅಂಭೇಡ್ಕರ್
ಕಾಡುಜನರ ಕಾಡಬೇಡಿರೆಂದ ಅಂಭೇಡ್ಕರ್
ಬೇಡಜನರ ಭೀಮನು
ಕಾಡುಜನರ ರಾಮನು
ನಾಡಜನರ ನಾಡಿಮಿಡಿತವಾದ ಅಂಭೇಡ್ಕರ್//

ಕನ್ನಡದಲ್ಲೇ ಪ್ರೋಗ್ರಾಮ್ಮಿಂಗ್ ಮಾಡಿ!

ನಮಸ್ಕಾರ,

ನಾನು ಹಲವು ವರ್ಷಗಳ ಹಿಂದೆಯೇ ಲೋಗೋ ಎಂಬ ಗಣಕ ಕ್ರಮವಿಧಿ ರಚನೆಯ ತಂತ್ರಾಶವನ್ನು ಕನ್ನಡೀಕರಿಸಿದ್ದೆ. ಲೋಗೋ ಎಂಬುದು ತುಂಬ ಜತ್ಪ್ರಸಿದ್ಧವಾದ ತಂತ್ರಾಂಶ. 8ರಿಂದ 14 ವರ್ಷ ಪ್ರಾಯದ ಮಕ್ಕಳು ಪ್ರೋಗ್ರಾಮ್ಮಿಂಗ್ ಕಲಿಯಲು ಇದನ್ನು ಬಳಸುತ್ತಾರೆ. ಇದರ ಪ್ರಾತ್ಯಕ್ಷಿಕೆಯನ್ನು ನೋಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಂದಿನ ಅಧ್ಯಕ್ಷರಾದ ಬರಗೂರು ರಾಮಚಂದ್ರಪ್ಪನವರು ಈ ತಂತ್ರಾಂಶವನ್ನು ಕರ್ನಾಟಕ ಸರಕಾರದ ಕನ್ನಡೆ ಕಂಪ್ಯೂಟರ್ ಕ್ರಿಯಾ ಯೋಜನೆಯಲ್ಲಿ ಸೇರಿಸಿಕೊಂಡಿದ್ದರು. ಕನ್ನಡ ಗಣಕ ಲೋಕದಲ್ಲಿ ಹಲವು ಬಿರುಗಾಳಿಗಳು ಬೀಸಿ, ಏನೇನೆಲ್ಲಾ ಆಗಿ ಹೋದವು. ಈ ತಂತ್ರಾಶವನ್ನು ಇದುತನಕ ಸರಕಾರ ಸ್ವೀಕರಿಸಿ ಶಾಲೆಗಳಿಗೆ ನೀಡಲಿಲ್ಲ. ಈಗ ನಾನು ಅದನ್ನು ಅಂತರಜಾಲದ ಮೂಲಕ ನೀಡಲು ತೀರ್ಮಾನಿಸಿದ್ದೇನೆ. ದಯವಿಟ್ಟು ಅದನ್ನು ಡೌನ್‌ಲೋಡ್ ಮಾಡಿ, ಬಳಸಿ, ನನಗೆ ನಿಮ್ಮ ಸಲಹೆ ನೀಡಿರಿ. ಹಾಗೆಯೇ ದೇಣಿಗೆಯನ್ನೂ ನೀಡಬಹುದು :-). ಹೆಚ್ಚಿನ ಮಾಹಿತಿಗಳು ನನ್ನ [http://vishvakannada.com/KannadaLogo|ಅಂತರಜಾಲ ತಾಣದಲ್ಲಿ] ಲಭ್ಯವಿವೆ.

ಮೀಸಲಾತಿಯ ಆಚೆಗೆ ನೋಡೋಣ

ಮೀಸಲಾತಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಚರ್ಚೆಗಳು ಬಹಳ ಮುಖ್ಯವಾದ ವಿಷಯವೊಂದನ್ನು ಮರೆತು ಬಿಟ್ಟಿವೆ. ಮೀಸಲಾತಿ ಬೇಡ ಎನ್ನುವವರು ಮುಂದೊಡ್ಡುತ್ತಿರುವ ತಥಾಕಥಿತ ಮೆರಿಟ್ ಎಷ್ಟು ಅಬ್ಸರ್ಡ್ ಆದ ಪರಿಕಲ್ಪನೆ ಎಂಬುದು ನಮ್ಮ ಕ್ಯಾಪಿಟೇಷನ್ ಕಾಲೇಜುಗಳನ್ನು ನೋಡಿದರೆ ಅರ್ಥವಾಗುತ್ತದೆ. ಅದಕ್ಕೂ ದೊಡ್ಡ ತಮಾಷೆ ಎಂದರೆ ಪ್ರತಿಭೆ ಎಂಬುದು ಕೆಲವೇ ಜಾತಿಗಳಿಗೆ ಮಾತ್ರ ಸೀಮಿತವಾದ ವಿಷಯ ಎಂಬಂಥ ಧ್ವನಿಯಲ್ಲಿ ಮಾತನಾಡುವುದು. ಮೀಸಲಾತಿ ಬೇಕು ಎಂದು ವಾದಿಸುತ್ತಿರುವವರೂ ಅಷ್ಟೇ. ಮೀಸಲಾತಿ ಇಲ್ಲದಿದ್ದರೆ ನಮಗೆ ಬದುಕೇ ಇಲ್ಲ ಎಂಬಂತೆ ವಾದಿಸುತ್ತಾರೆ. ಈ ಮೂಲಕ ತಾವು ದಡ್ಡರು ಎಂದು ಒಪ್ಪಿಕೊಳ್ಳುತ್ತಾರೆ.

ಅಮ್ಮ.

ಅಮ್ಮ.

ಗಮ್ಮತ್ತಮ್ಮ ಗಮ್ಮತ್ತು
ಗಮಗಮಗಮಿಸುವ ಗಮ್ಮತ್ತು//

ಅಮ್ಮನ ಪ್ರೀತಿಯ ಕೈತುತ್ತು
ತಿಂದರೆ ಬರುವ ತಾಖತ್ತು
ನಿತ್ಯವು ಮಾಡುವ ಕಸರತ್ತು
ತಪ್ಪದೆ ಬರುವುದು ಮೈಕಟ್ಟು/೧/