ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪರೀಕ್ಷೆ

                                 ಪರೀಕ್ಷೆ.

                ಶ್ರದ್ದೆಯಿಂದ ಬೇಡಬೇಕು ವಿನಾಯಕನ ಸುರಕ್ಷೆ,
                ವರುಷ ಪಡೆದ ಶಿಕ್ಷಣಕೆ ಬಂತು ಈಗ ಪರೀಕ್ಷೆ.
                ಆದರ್ಶದಿ ನಡೆಯಲೆಂದು ಉತ್ತರಗಳ ಸಮೀಕ್ಷೆ,
                ಆವೇಗದಿ ಕಾಯುತಿರುವ ನಮ್ಮೆಲ್ಲರ ನಿರೀಕ್ಷೆ.//ಪ//.

ಮುಂದಿನ ಸಂಚಿಕೆ: ಟಿ ಎನ್ ಸೀತಾರಾಂ ರವರೊಂದಿಗೆ - ಪ್ರಶ್ನೆಗಳನ್ನು ನೀವೂ ಕೇಳಬಹುದು.

ಗಮನಿಸಿ: ಪ್ರಶ್ನೆಗಳನ್ನು ಕಳುಹಿಸುವ ಕಾಲಾವಧಿ ಮೇ ೨೪, ೨೦೦೬ ಕ್ಕೆ ಮುಗಿದಿದೆ. ಸಂಪದ Podcastನ ೬ನೆಯ ಸಂಚಿಕೆ ನಿಮಗರ್ಪಿಸಲು ಸಂಪದದ ಸದಸ್ಯರು [http://kn.wikipedia.org/wiki/%E0%B2%9F%E0%B2%BF_%E0%B2%8E%E0%B2%A8%E0%B3%8D_%E0%B2%B8%E0%B3%80%E0%B2%A4%E0%B2%BE%E0%B2%B0%E0%B2%BE%E0%B2%82|ಟಿ ಎನ್ ಸೀತಾರಾಂರವರೊಂದಿಗೆ] ಸಂವಾದ ನಡೆಸಲಿದ್ದಾರೆ. ಈ ಸಂವಾದಕ್ಕೆ ಉಳಿದ ಸದಸ್ಯರೂ ಪ್ರಶ್ನೆಗಳನ್ನು ಕಳುಹಿಸಬಹುದು. ಸೂಕ್ತವಾದ ಪ್ರಶ್ನೆಗಳನ್ನು ಆಯ್ದು ಸಂವಾದದಲ್ಲಿ ಸೇರಿಸಲಾಗುವುದು. ಪ್ರಶ್ನೆಗಳನ್ನು [:http://sampada.net/feedback|feedback ಫಾರ್ಮ್] ಮೂಲಕ ನಮಗೆ ಕಳುಹಿಸಿ. ೧) ಪ್ರಶ್ನೆ ಕನ್ನಡದಲ್ಲಿರಲಿ. ೨) ಪ್ರಶ್ನೆ ಸ್ಪಷ್ಟವಾಗಿರಲಿ. ೩) ನಿಮ್ಮ ಪ್ರಶ್ನೆಗೆ ಸ್ಪಷ್ಟವಾದ ಹಿನ್ನೆಲೆಯಿದ್ದಲ್ಲಿ ಅದನ್ನು ವಿವರಿಸುವುದನ್ನು ಮರೆಯಬೇಡಿ. ಧನ್ಯವಾದಗಳು,

ಭಾರತೀಯ ಶಾಸ್ತ್ರೀಯ ಸಂಗೀತ -ಒಂದು ಇಣುಕು (ಭಾಗ ೧)

ಲಾಸ್ ವೇಗಸ್ ನ್ ಡಾನ್ಸ್ ಬಾರೊಂದಕ್ಕೆ ಭೇಟಿ ನೀಡಿದ್ದ ನನ್ನ ಸ್ನೇಹಿತನೊಬ್ಬನನ್ನು ಅಲ್ಲಿನ ಡಾನ್ಸರೊಬ್ಬಳು ಭಾರತದ ಬಗ್ಗೆ ಕೇಳಿದಾಗ “India is a land of cultures” ಅಂತ ಥಟ್ಟೆಂದು ಉತ್ತರಿಸಿದನೆಂದು ಹೇಳಿದಾಗ ನನಗೆ ಅಭಾಸವಾದರೂ “ಭಾರತದ ಬಗ್ಗೆ ಮಾತನಾಡವಾಗ ಸಹಜವಾಗಿ ಅದರ ಪ್ರಾಚೀನ ಹಾಗು ಭವ್ಯ ಸಂಸ್ಕೃತಿಯ ಬಗ್ಗೆ ಮಾತನಾಡುವವರೇ ಹೆಚ್ಚು” ಎಂಬ ಮಾತು ಸ್ಪಷ್ಟವಾಯಿತು.

ಭಕ್ತಿಯ ಶಕ್ತಿ.

ಭಕ್ತಿಯ ಶಕ್ತಿ.

ಉದ್ದ ಮೂಗು,
ಅಗಲ ಕಿವಿ,
ಆಳ ಭುದ್ದಿ,
ಮೇರು ಸಿದ್ದಿ,
ದೊಡ್ಡ ಹೊಟ್ಟೆ,
ಪುಟ್ಟ ಕಣ್ಣು,
ಕೋಟಿ ಸೂರ್ಯ ರಷ್ಟು
ಭಾರ.
ಇವನ ಹೊತ್ತ
ಸಣ್ಣ ಇಲಿಯ
ಶಕ್ತಿ
ಅಪಾರ,
ಅದಕೆ
ಭಕ್ತಿ
ಆದಾರ.

ಸಣ್ಣ ಸಣ್ಣ ಸಾಧನೆಗಳ,ಸಂತೋಷಗಳ ಒಟ್ಟು ಮೊತ್ತವೇ ಜೀವನ,ಅಲ್ವಾ?

ಆತ್ಮೀಯ ಹೇಮಾ,
ಮನೆಯಲ್ಲಿ ಇಂಟರ್‍ನೆಟ್ ಸೌಲಭ್ಯದ ಒಂದು ಪ್ರಯೋಜನ ಅಂದರೆ ಯಾವಾಗ ಬೇಕು ಆಗ ಬಳಸಿಕೊಳ್ಳಬಹುದು.ಹೀಗಾಗಿ ನಿನಗೆ ನಾನು ಅಷ್ಟು ಮೇಲ್ ಕಳುಹಿಸಲು ಸಾಧ್ಯವಾಗಿದೆ.ಈ ಹಿಂದೆ ನಾನು ಬಹಳ ಈ-ಮೇಲ್ ಗೆಳೆಯ-ಗೆಳತಿಯರನ್ನು ಕಳೆದು ಕೊಂಡಿದ್ದೇನೆ.ಆಗ ನೆಟ್ ಗಾಗಿ ಹೊರಗಡೆ ಹೋಗ ಬೇಕಾಗಿತ್ತು. ನಿಯಮಿತವಾಗಿ ಸಂಪರ್ಕದಲ್ಲಿರಲು ಸಾಧ್ಯ ಆಗುತ್ತಿರಲಿಲ್ಲ. ಹಾಗಾಗಿ ಆ ಗೆಳೆತನಗಳು ಅಲ್ಲಲ್ಲಿ ಕಳಚಿಕೊಂಡವು.

ನಿನಗೆ ಈ-ಮೇಲ್ ಮಾಡಿ ಬಹಳ ದಿನಗಳಾದವು.ಕಾರಣ ವ್ಯಸ್ತ ದಿನಚರಿ.ನನ್ನ ಒಂದು ಬಲಹೀನತೆ ಎಂದರೆ ಎಲ್ಲವನ್ನು ಗುಡ್ಡೆ ಹಾಕಿಕೊಂಡು ಕೂರುವುದು.ಎಲ್ಲಾವನ್ನು ಮಾಡಬಲ್ಲೆ ಎಂಬ ಅತಿಯಾದ ಆತ್ಮವಿಶ್ವಾಸ.ಕೊನೆಗೆ ನೋಡಿದರೆ ಯವುದೂ ಮುಗಿದಿರುವುದಿಲ್ಲ.ಎಲ್ಲಾ 'ತಿರುಪತಿ ಕ್ಷೌರ'! ಉದಾಹರಣೆಗೆ, ಮಿಸಲಾತಿ ವಿವಾದ ಬಗ್ಗೆ ಓದಲು 'ಇಂಡಿಯ ಟುಡೆ' ಮತ್ತು 'ಫ್ರಂಟ್ ಲೈನ್' ತಂದಿಟ್ಟುಕೊಂಡಿದ್ದೇನೆ.ಮೊದಲನೆಯದು ತಂದು ಒಂದು ವಾರದ ಮೇಲಾಯಿತು ಮತ್ತೊಂದನ್ನು ತಂದು ಹದಿನೈದು ದಿನಗಳ ಮೇಲಾಯಿತು. ಎರಡನ್ನೂ ಪೂರ್ತಿ ಓದಿಲ್ಲ! 'ಔಟ್ ಲುಕ್ ಬಿಸಿನೆಸ್' ಎಂಬ ಹೊಸ ನಿಯತಕಲಿಕ ಬಂದಿದೆಯಲ್ಲ ಹೇಗಿದೆ ನೋಡೋಣ ಎಂದು ಒಂದು ಪ್ರತಿ ತಂದ್ದಿಟ್ಟುಕೊಂಡು ಒಂದು ವಾರ ಆಯಿತು,ಅದರ ಓದು ಎರಡು ಮೂರು ಪುಟ್ದ ಆಚೆ ದಾಟಿಲ್ಲ! ಈಗಾಗಲೆ ನಿಯಮಿತವಾಗಿ ತರಿಸುವ ಎರಡು ಪತ್ರಿಕೆಗಳ ಮೂರು ವಾರದ ಸಂಚಿಕೆಗಳು ಹಾಗೆಯೇ ಬಿದ್ದಿವೆ. ಈ ಮಧ್ಯೆ ಕನ್ನಡದಲ್ಲಿ ಇನ್ನೊಂದು ಬ್ಲಾಗ್ ಪ್ರಾರಂಭಿಸಿದ್ದೇನೆ. ಹೆಸರು 'ಓಲೆಗರಿ'. ವಾರಕ್ಕೊಂದು ಪತ್ರ ಬರೆದು ಅಲ್ಲಿ ಪ್ರಕಟಿಸುವ ಉದ್ದೇಶ ಇದೆ. ಸಮಯವನ್ನು ಎಲ್ಲಿಂದ ತರಲಿ(ಕದ್ದಾದರೂ ಸಹ)?

ನನ್ನ ಕನ್ನಡ ಬ್ಲಾಗ್ ಓದಲು ಆಗಲಿಲ್ಲ ಎಂದು ಹೇಳಿದಿಯೆಲ್ಲಾ, ಅದಕ್ಕೆ ಸಂಬಂದಪಟ್ಟ ನಿನಗೆ ಸಹಾಯ ಆಗುವಂತಹ ಲಿಂಕ್ ನೀಡಿದ್ದೇನೆ ಪ್ರಯತ್ನಿಸು.ನಾನು ಕನ್ನಡದಲ್ಲಿ ಬ್ಲಾಗಿಂಗ್ ಮತ್ತು ಈ-ಮೇಲ್ ಮಾಡಲು ಸಾಧ್ಯವಾದದ್ದು 'ಬರಹ' ತಂತ್ರಾಂಶದಿಂದ.
'ಬರಹ' ದ ಬಗ್ಗೆ ಗೊತ್ತಾ?
ಬ್ಲಾಗ್ ಬಗ್ಗೆ ಗೊತ್ತಿಲ್ಲ ಎಂದು ಹಿಂದೊಮ್ಮೆ ತಿಳಿಸಿದ್ದೆ. ಕೆಲವು ವಾರಗಳ ಹಿಂದೆ 'ಸುಧಾ' ಸಾಪ್ತಾಹಿಕದಲ್ಲಿ ಬ್ಲಾಗ್ ಗಳ ಬಗ್ಗೆ ಮುಖಪುಟ ಲೇಖನ ಪ್ರಕಟವಾಗಿದೆ(೪ ಮೇ,೨೦೦೬). ಹುಡುಕಿ ಓದು.

ಕನ್ನಡದಲ್ಲಿ ಬ್ಲಾಗ್ ಗಳಿರುವುದು ನೋಡಿ ಕನ್ನಡದಲ್ಲಿ ಬ್ಲಾಗ್ ಮಾಡುವ ಆಸೆ ಆಯಿತು,ಅಚ್ಚ ಕನ್ನಡಿಗ ನೋಡು. ಕನ್ನಡವನ್ನು ಇಂಟರ್ ನೆಟ್ ನಲ್ಲಿ ಬಳಸುವ ಬಗ್ಗೆ ಗೊತ್ತಿರಲಿಲ್ಲ.ಅಲ್ಲಿ ಇಲ್ಲಿ ಹುಡುಕಾಡಿ ಕೊನೆಗೂ ಕಲಿತುಬಿಟ್ಟೆ. ಆ ದಿನ ಎಷ್ತು ಖುಶಿ ಆಯಿತು ಗೊತ್ತಾ? ಇಂತಹ ಸಣ್ಣ ಸಣ್ಣ ಸಾಧನೆಗಳ ಒಟ್ಟು ಮೊತ್ತವೇ ಜೀವನ ಅಲ್ವಾ?

ಮಗಳು ಅಜ್ಜಿ ಮನೆಗೆ ಹೋಗಿದ್ದಾಳೆ.೨೨ ದಿನಗಳಾಯಿತು.ಅವರ ಅಜ್ಜಿಗೆ ಬೇಸಿಗೆ ರಜೆ.ಅದಕ್ಕಾಗಿ ಕರೆದುಕೊಂಡಿದ್ದಾರೆ.ಅವಳಿಲ್ಲದೆ ಇಲ್ಲಿ ಮನೆ ವಾತವರಣ ನೀರಸವಾಗಿದೆ.ಇನ್ನೊದು ವಾರದಲ್ಲಿ ಬರುತ್ತಾಳೆ.ನಾನು ಆಗಾಗ ಎರಡು ದಿನಕ್ಕೊಮ್ಮೆ ಹೋಗಿ ಮಾತಾಡಿಸಿ ಬರುತ್ತೇನೆ.ಅವಳ ಅಮ್ಮನ ತವರು ಮನೆ ಇರುವುದು ಇದೇ ಊರಲ್ಲಿ.ಇನ್ನೊಂದು ಮುಖ್ಯ ವಿಷಯ ಅಂದರೆ ಮದುವೆಗಿಂತ ಮುಂಚೆ ನಾನು ಮತ್ತು ನನ್ನ 'ಹುಡುಗಿ' ಒಂದೇ ಬೀದಿಯಲ್ಲಿ ಇದ್ದವರು!ಮದುವೆ ನಂತರ ಈಗ ಬೇರೆ ಬೇರೆ ಬಡಾವಣೆ.ಹಲೋ! ನೀನೂ ಎಲ್ಲರ ಹಾಗೆ ನಮ್ಮದು ಪ್ರೇಮ ವಿವಾಹ ಅಂದುಕೊಳ್ಳಬೇಡ!ನಮ್ಮದು ಅಪ್ಪಟ ಅರೇಂಜ್ದ್ ಮದುವೆ. ಇನ್ನೊಂದು 'ವಿಚಿತ್ರ'(ಆದರೂ ಸತ್ಯ)ಸಂಗತಿ;ನಾನು ಅವಳನ್ನು ಅದುವರೆಗೂ ನೊಡಿದ್ದು ಒಂದೆರಡು ಬಾರಿ ಅಷ್ಟೆ!ಅದೂ ನಮ್ಮ ಮನೆ ಮುಂದೆ ಹಾದು ಹೊಗುವಾಗ ಒಂದೆರಡು ಕ್ಷಣಗಳಿಗೆ ಮಾತ್ರ!

ಮಾರಾಯಿತಿ!ನಾನು ಬೇರೆಯವರ ದೃಷ್ಟಿಯಲ್ಲಿ 'ಬಹಳ ಒಳ್ಳೆ ಹುಡುಗ'.ಯಾವಾಗ ನೋಡಿದರೂ ಕೈಯಲ್ಲಿ ಪುಸ್ತಕ ಅಥವ ಪತ್ರಿಕೆ ಹಿಡಿದುಕೊಂಡಿರುವವನು!ಮಜಾ ಗೊತ್ತಾ? ಒಮ್ಮೆ ನನ್ನವಳ ಚಿಕ್ಕಮ್ಮನ ಮನೆಯಲ್ಲಿ ಊಟಕ್ಕೆ ಕರೆದಿದ್ದರು.ಅವರ ಮನೆಯಲ್ಲಿ ಪೇಪರ್ ತರಿಸುವುದಿಲ್ಲ.ಅಂದು ನಾನು ಹೋದ ದಿನ ನನಗಾಗಿ ಅಂದಿನ ದಿನಪತ್ರಿಕೆಯೊಂದನ್ನು ತರಿಸಿಟ್ಟಿದ್ದರು. ನನ್ನವಳು ಈ ವಿಷಯ ತಿಳಿಸಿದಾಗ ಮುಜುಗರ ಪಟ್ಟೆ.ಇನ್ನೆಂದೂ ಬೇರೆಯವರ ಮನೆಗೆ ಹೋದಾಗ ಪತ್ರಿಕೆ ಅಥವ ಪುಸ್ತಕ ಮುಟ್ಟಬಾರದು, ನನ್ನದು ಅತಿಯಾಯಿತು ಎಂದು ಶಪಥ ಮಾಡಿಕೊಂಡೆ.ಆದರೆ ಹುಟ್ಟುಗುಣ ಸುಟ್ಟರೂ ಬಿಡಕಾಗುತ್ತದೆಯೇ?

ನನ್ನ ಪುರಾಣ ಸಾಕು, ನಿನ್ನದೇನು ಹೇಳು?

ಹೇಗಿತ್ತು 'ರೋಮಾಂಚನ'? ಅದೇ ಮಿಸ್ಟರ್ ರೋಮಾಂಚ್ ನನ್ನು ಕಾಲೇಜ್ ಫೆಸ್ಟ್ಗೆ ಆಮಂತ್ರಿಸಿದ್ದೆಯಲ್ಲಾ? ಪಾಪ ಕಣೇ. ಅವನನ್ನು ಬಹಳ ಗೋಳಾಡಿಸ ಬೇಡ. ಆಮೇಲೆ ನಿನ್ನ 'ಚಿಂತೆ'ಯಲ್ಲಿ ಸೊರಗಿ ಬಿಟ್ಟಾನು. ಈ ಕಪಿ ಚೇಷ್ಟೆ ಎಲ್ಲಾ ಬಿಟ್ಟು ಓದಿನ ಕಡೆ, ಭವಿಷ್ಯದ ಕಡೆ ಗಮನ ಕೊಡು ಮರೀ.

ಛೇ,ಮರೆತೇ ಬಿಟ್ಟೆ. congratulations ಕಣೇ.ನೀನು distinctionನಲ್ಲಿ ಪಾಸ್ ಆಗಿದಕ್ಕೆ! ಅದ್ಯಾವಾಗ ಓದಿದೆ? ಯಾವಾಗ್ ನೋಡಿದರೂ 'ಸಂಸ್ಕಾರ' ಓದಿದೆ, ಇಡೀ ದಿನ ನಿದ್ದೆ ಮಾಡಿ ಕಳೆದೆ ಎಂದೆಲ್ಲಾ ಹೇಳುತ್ತಿದ್ದೇ? ಒಳ್ಳೆಯದಾಗಲಿ.

ನಿನ್ನ ಕಾಲೇಜು ಇನ್ನೂ shift ಆಗಿಲ್ಲವಾ? ನಿಮ್ಮ ಮನೆಯಲ್ಲಿ ಎಲ್ಲರೂ ಹೇಗಿದ್ದಾರೆ? ಈ-ಮೆಲ್ ಮಾಡು.

ಇಂತಿ ನಿನ್ನ
ಈ-ಗೆಳೆಯ(e-friend)

ಸೂಚನೆ: MS ವರ್ಡ್ ಬಳಸುವ ಸದಸ್ಯರ ಗಮನಕ್ಕೆ

ಸಂಪದದಲ್ಲಿ ಲೇಖನಗಳನ್ನು ಸೇರಿಸಲು MS ವರ್ಡ್ ಬಳಸುವ ಸದಸ್ಯರ ಗಮನಕ್ಕೆ:

  1. MS ವರ್ಡ್ ನಿಂದ ನೇರ ಕನ್ನಡ ಬರಹವನ್ನ cut and paste ಮಾಡಬೇಡಿ.
  2. ಸಾಧ್ಯವಾದಷ್ಟೂ MS ವರ್ಡ್ ಬದಲು ಸಂಪದದಲ್ಲಿ ಲಭ್ಯವಿರುವ "rich text editor" ಬಳಸಿ.

ಅಥವ,

       ಸಂಪದದಲ್ಲಿನ Rich Text Editor ನಲ್ಲಿರುವ Paste From Word ಬಟನ್ ಬಳಸಿ ಯಾವುದೆ word file ನಿಂದ text copy ಮಾಡಿ, ಇಲ್ಲಿ paste ಮಾಡಿ, Insert ಎಂದು ಒತ್ತಿ.

 

 

 

ಸಂಪದದಲ್ಲಿ ಹೀಗೆ ನೇರ MS wordನಿಂದ ಪೇಸ್ಟ್ ಮಾಡಿದರೆ ಬೇಡದ XML/XHTML schema ಎಲ್ಲ ಡೇಟಬೇಸಿಗೆ ಸೇರಿ ಹೋಗತ್ತೆ; ಪುಟದ ಫಾರ್ಮ್ಯಾಟ್ಟಿಂಗ್ ಕೂಡ ಕೆಡುತ್ತದಾದ್ದರಿಂದ ಸದಸ್ಯರು ಮೇಲಿನ ಸೂಚನೆ ಪಾಲಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ.

ಗಮನಿಸಿ: ನೇರ MS ವರ್ಡ್ ನಿಂದ ಪೇಸ್ಟ್ ಮಾಡಿರುವ ಪುಟಗಳನ್ನು ಯಾವುದೇ ಸೂಚನೆಯಿಲ್ಲದೆ ಅಳಿಸಿಹಾಕಲಾಗುವುದು.

ಭ್ರಷ್ಟಾಚಾರ ಕಾಣಿಸದಂತೆ 'ಕಾರ್ಯ' ನಿರ್ವಹಿಸಿ: ಮು ಮಂತ್ರಿ

ವರ್ಗಾವಣೆ 'ಜಾತ್ರೆ'ಯಲ್ಲಿ ತಿಂದುಂಡು ತೇಗುತ್ತಿರುವ ಭ್ರಷ್ಟಾಸುರನ ರೌದ್ರ ನರ್ತನದ ಬಗ್ಗೆ [:http://www.vijaykarnatakaepaper.com/|ವಿ.ಕ ಪತ್ರಿಕೆಯು] 'ವರ್ಗ:ದುಡ್ಡು ಮಾಡೋರ ಸ್ವರ್ಗ' ಹೆಸರಿನ ಎಫ್ ಐ ಆರ್ ದಾಖಲಿಸಿದನ್ನು(ಮೇ ೧೭,೨೦೦೬) ಕಂಡು 'ಎಚ್ಚೆತ್ತು'ಕೊಂಡಿರುವ ಮಾನ್ಯ ಮು.ಮಂತ್ರಿ ಅಧಿಕಾರಿಗಳೊಂದಿಗೆ ತುರ್ತು ಸಮಾಲೋಚನ ಸಭೆಯನ್ನು ನಡೆಸಿ ವರ್ಗಾವಣೆ ವಿಚಾರದಲ್ಲಿ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆಂದು ಅದೇ ಪತ್ರಿಕೆ ವರದಿ ಮಾಡಿದೆ(ಮೇ ೧೮,೨೦೦೬). ಆದರೆ ಆ ಪತ್ರಿಕೆಯು ತನ್ನ ವರದಿಯಲ್ಲಿ ಸ್ಥಳ ಅಭವಾದಿಂದಲೋ ಅಥವ ಮುದ್ರರಾಕ್ಷಸನ ಹಾವಳಿಯಿಂದಲೋ ಬಹು ಮುಖ್ಯ ಮಾಹಿತಿಯನ್ನು ಕೈ ಬಿಟ್ಟು ಅಪೂರ್ಣ ವರದಿಯನ್ನು ನೀಡಿದೆ. ಪ್ರಕಟವಾಗಿರುವ ವರದಿಯು "ವರ್ಗಾವಣೆ ವಿಚಾರದಲ್ಲಿ ಕಟ್ಟೆಚ್ಚರ ವಹಿಸುವಂತೆ ಮು ಮಂತ್ರಿ ಹೆಚ್.ಡಿ.ಕೆ.ಸ್ವಾಮಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ" ಎಂಬ ಸಾಲಿನೊಂದಿಗೆ ಪ್ರಾರಂಭವಾಗಿ, "ಭ್ರಷ್ಟಾಚಾರ ಕಂಡು ಬಂದರೆ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದರು" ಎಂಬ ಸಾಲಿನೊಂದಿಗೆ ಕೊನೆಗೊಳ್ಳುತ್ತದೆ. ಆದರೆ ತಲೆಹರಟೆ ಎಂಬ ಲದ್ದೀಗಾರನ ಪ್ರಕಾರ ವಿ.ಕ ದಲ್ಲಿ ಪ್ರಕಟವಾಗಿರುವ ಮೂಲ ವರದಿಯ ಪ್ರಾರಂಭಿಕ ಸಾಲು ಹೀಗಿದೆ:"ವರ್ಗಾವಣೆಗೆ ಸಂಬಂಧಿಸಿದ ಒಂದೂ 'ಕೇಸು' ಸಹ 'ಹೊರಗಿನ'ವರಿಗೆ ಗೊತ್ತಾಗದಂತೆ ಕಟ್ಟೆಚ್ಚರವಹಿಸುವಂತೆ ಮು.ಮಂತ್ರಿ ಅಧಿಕಾರಿಗಳಿಗೆ 'ತಾಕೀತು' ಮಾಡಿದ್ದಾರೆ".ಕೊನೆಯ ಸಾಲು "ಭ್ರಷ್ಟಾಚಾರ ಕಂಡು ಬಂದರೆ 'ತಪ್ಪಿತಸ್ಥರ' ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ ಭ್ರಷ್ಟಾಚರ ಕಂಡು ಬಾರದಂತೆ 'ಕಾರ್ಯ' ನಿರ್ವಹಿಸುವಂತೆ ಸೂಚಿಸಲು ಮುಖ್ಯ ಕಾರ್ಯದರ್ಶಿಗೆ ಆದೇಶ ನೀಡಿದರು". ಜೈ ಭ್ರಷ್ಟಾಸುರ!!!!!!!

ಜಾಗತೀಕರಣದ ಸಂದರ್ಭದಲ್ಲಿ ದೇಶಪ್ರೇಮ, ಸ್ವಾವಲಂಬನೆ

ಸೂಚನೆ:
ಈ ತರಹದ ವೈಯುಕ್ತಿಕ ಅನಿಸಿಕೆಗಳನ್ನು ಹೊತ್ತುಗೊತ್ತಿಲ್ಲದೆ ಹಿಂದು ಮುಂದಿಲ್ಲದೇ ಪುರಾವೆಗಳಿಲ್ಲದೇ ಹಾಕುವುದು ಸರಿಯಲ್ಲ. ಆದರೆ ಮನಸ್ಸು ಅಪಕ್ವ ಮತ್ತು ಅಪೂರ್ಣವಾಗಿದ್ದಾಗ ಇರುವ ಯೋಚನೆಗಳನ್ನು ಹೊರಹಾಕಿದರೆ ಮುಂದೆ, ಬೆಳೆದು ಬಂದ ದಾರಿಯನ್ನು ನೋಡಲು ಅನುಕೂಲವಾಗುತ್ತದೆ. ಆದ್ದರಿಂದ ಇಗೋ ಇಲ್ಲಿದೆ, ಅರ್ಧ ಬೆಂದ ಅಂತರಾಳದ ಮಾತುಗಳು.

ಬೇಡಬೇಕು ಮತ್ತು ಮುಕ್ತ.

ಬೇಡಬೇಕು.

ಬೇಕು, ಎಡಕೆ.
ಬೇಡ, ಬಲಕೆ.
ಬೇಕು, ಬೇಡ,
ಎರಡು ಬೇಡ.
ಎರಡರಿಂದ
ಎಡವಬೇಡ.
ಇವೆರಡರ
ಗೊಡವೆ ಬೇಡ.
ಬೇಕು, ಬೇಡ,
ಬೇಡಬೇಕು.
ನಡೆಯಬೇಕು
ಒಡೆಯನೆಡೆಗೆ,
ಪಡೆಯಬೇಕು
ಗರುಡಪದವ.

ಅನಿಕೇತನ

ಅನಿಕೇತನ.

ಮನಸ್ಸಿನ ನೆಲೆ
ಮನುಷ್ಯ,
ಮನುಷ್ಯರ ನೆಲೆ
ಮನೆ.
ಮಣ್ಣಿನಿಂದ
ಮರ,
ಮರದಿಂದ
ಕಟ್ಟಿಗೆ,
ಕಟ್ಟಿಗೆಯಿಂದ ಸುಟ್ಟ ಮಣ್ಣು
ಇಟ್ಟಿಗೆ.
ನಮ್ಮ
ಅನಾಸಕ್ತಿ,
ಅತಿಥಿ ಸತ್ಕಾರ,
ಅನ್ನದಾನ,
ದೇಶ ಭಕ್ತಿ
ಮತ್ತು
ದೈವ ಭಕ್ತಿಗಳು
ಬೆರೆಸಿದ
ಇಟ್ಟಿಗೆಯಿಂದ
ಕಟ್ಟುವ
ನಿಕೇತನವು
ಭಗವಂತನ
ಅನಿಕೇತನವಾಗುವುದು.