ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬೋಧನೆಯ ವರಸೆ - ಮತ್ತು ಇತರ ಕಥೆಗಳು

ಗುರು ಸಿಯುಂಗ್ ಸಾನ್ ತನ್ನ ವಿದ್ಯಾರ್ಥಿಗಳಿಗೆ ಯಾವಾಗಲೂ ಹೇಳುತ್ತಿದ್ದ - " ನೀವು ತಿನ್ನುತ್ತಿರುವಾಗ ಕೇವಲ ತಿನ್ನಿ , ಅಷ್ಟೆ . ಪೇಪರ್ ಓದುವಾಗ ಕೇವಲ ಪೇಪರ್ ಓದಿ, ಅಷ್ಟೆ . ನೀವು ಏನು ಮಾಡುತ್ತೀರೋ ಅದಕ್ಕಿಂತ ಹೊರತಾದದ್ದನ್ನು ಮಾಡಬೇಡಿ , ಎರಡೆರಡು ಕಡೆ ಗಮನ ಹರಿಸಬೇಡಿ . " ಒಂದು ದಿನ ಗುರು ಏನನ್ನೋ ತಿನ್ನುತ್ತ ಪೇಪರ್ ಓದುತ್ತಿರುವದನ್ನು ನೋಡಿದ ಶಿಷ್ಯ ಕೇಳಿದ -" ನಿಮ್ಮ ಬೋಧನೆಗೆ ವ್ಯತಿರಿಕ್ತವಾದದ್ದಲ್ಲವೇ ಇದು ? " ಗುರು ಉತ್ತರಿಸಿದ - " ನೀನು ತಿನ್ನುತ್ತ ಪೇಪರ್ ಓದುತ್ತ ಇರುವಾಗ , ಕೇವಲ ತಿನ್ನುತ್ತ ಪೇಪರ್ ಓದು ಅಷ್ಟೇ ".

ನಶ್ವರತೆ-ಝೆನ್ ಕಥೆ

ಗುರುವಿನ ಹತ್ತಿರ ಒಂದು ಬೆಲೆಬಾಳುವ ಪಿಂಗಾಣಿ ಬಟ್ಟಲು ಇತ್ತು . ಶಿಷ್ಯ ಇಕ್ಯೂ ಒಂದು ದಿನ ಅಕಸ್ಮಾತ್ತಾಗಿ ಒಡೆದುಬಿಟ್ಟ . ಗುರು ಅತ್ತಲೇ ಬರುವದು ಕಂಡಿತು . ಬಟ್ಟಲಿನ ಚೂರುಗಳನ್ನು ಮರೆ ಮಾಡಿಟ್ಟ .

ಬದಲಾವಣೆಯ ಕಥೆ

ಇದು ಎ.ಎನ್.ಮೂತಿ೯ರಾಯರ "ಅಪರವಯಸ್ಕನ ಅಮೇರಿಕ ಯಾತ್ರೆ" ಪುಸ್ತಕದಲ್ಲಿರುವ ಒಂದು ಕಥೆ..
ಮೈಸೂರು ಮಹಾರಾಜರ ಕಾಲ.ಅರಮನೆಯಲ್ಲಿನ ಕೆಲಸದಾಳುಗಳು ಮಾತಾಡುವ ಗ್ರಾಮ್ಯ ಭಾಷೆ ಯುವರಾಜರಿಗೆ ಸರಿ ಕಾಣಲಿಲ್ಲ.ಅದು ಅರಮನೆಗೆ ಶೋಭೆಯಲ್ಲ ಅನ್ನಿಸಿತು ಅವರಿಗೆ.ಹಾಗಾಗಿ ಅವರು ಕುಕ್ಕೆ ಸುಬ್ರಮಣ್ಯ ಶಾಸ್ತ್ರಿಗಳು ಅಂತ ಒಬ್ಬ ಭಾಷಾ ಪಂಡಿತರನ್ನ ತಮ್ಮ ಕೆಲಸದಾಳುಗಳಿಗೆ ಶುದ್ಧ ಭಾಷೆ, ಉಚ್ಚಾರಣೆ ಹೇಳಿ ಕೊಡುವುದಕ್ಕೆ ನೇಮಿಸಿದರು. ಈ ನಡುವೆ ಯುವರಾಜರು ವಿದ್ಯಾಭ್ಯಾಸದ ಸಲುವಾಗಿ ಒಂದು ವಷ೯ ಇಂಗ್ಲೆಂಡಿಗೆ ಹೋಗಿ ಬಂದರು.ಬಂದ ಮಾರನೆಯ ದಿನ ಅವರು ತಮ್ಮ ಉದ್ಯಾನದಲ್ಲಿ ಅಡ್ಡಾಡುತಿದ್ದಾಗ ಒಬ್ಬ ತಲೆಗೆ ರುಮಾಲು ಬಿಗಿದು ಹೂ ಪಾತಿ ಸರಿ ಮಾಡುತಿದ್ದವ ಕಂಡ.ಯುವರಾಜರಿಗೆ ಅವನನ್ನು ಎಲ್ಲೋ ನೋಡಿದ ನೆನಪಾಯ್ತು. ಯುವರಾಜರು ಆ ಮನುಷ್ಯನನ್ನು "ಯಾರಯ್ಯ ನೀನು, ಎಲ್ಲೋ ನೋಡಿದ ಹಾಗಿದೆಯಲ್ಲ" ಎಂದು ಕೇಳಿದಾಗ ಆತ

ಹೊತ್ತು ಕಳೆಯಲೊಂದಿಷ್ಟು ಹಾಸ್ಯ (?)

ಪವನಜರು ಹೊಟ್ಟೆ ಹುಣ್ಣಾಗುವಂತೆ ನಗಲು ದಿನೇಶ್ ನೆಟ್ಟಾರರ ಹೆಸರನ್ನು ಗೂಗಲ್ನಲ್ಲಿ ಸರ್ಚ್ ಮಾಡಿರಿ ಎಂದಿದ್ರಲ್ಲ, ಟ್ರೈ ಮಾಡಿದೆ ಸಿಕ್ಕಾಪಟ್ಟೆ ಲಿಂಕುಗಳು ಬಂದ್ವು; ಯಾವುದನ್ನು ನೋಡಬೇಕು ಅನ್ನೋದೆ ಗೊತ್ತಾಗ್ಲಿಲ್ಲ. ಆದ್ರೆ ಅಷ್ಟರಲ್ಲೇ ಇನ್ನೊಂದು ತಮಾಶೆ ವಿಷಯ ನೆನಪಾಯ್ತು.

ಆರೋಗ್ಯದ ಲೇಖನಗಳು

ನಾರು-ಬೇರುಗಳು

ಏನು ಈ ನಾರು-ಬೇರುಗಳು ? ಕಾರ್ಬೋಹೈಡ್ರೇಟ್ ನಲ್ಲಿ ಎರಡು ವಿಧ. ಒಂದು, ದೊರಕುವ ಕಾರ್ಬೋಹೈಡ್ರೇಟ್ (ಅವೈಲಬಲ್), ಮತ್ತೊಂದು, ದೊರಕದ ಕಾರ್ಬೋಹೈಡ್ರೇಟ್(ಅನ್ ಅವೈಲಬಲ್), ದೊರಕುವ ಕಾರ್ಬೋಹೈಡ್ರೇಟ್-ಶರ್ಕರ ಪಿಷ್ಟ, ನಾರು-ಬೇರುಗಳು ದೊರಕದ ಕಾರ್ಬೋಹೈಡ್ರೇಟ್ ಗಳು.

ಭಾರತೀಯ ಭಾಷಾ ಭ್ಲಾಗ್ ಸ್ಪರ್ಧೆ

ಭಾಷಾ ಇಂಡಿಯಾದವರು ಬೆಸ್ಟ್ ಇಂಡಿಕ್ ಬ್ಲಾಗ್ ಎಂಬ ಸ್ಪರ್ಧೆ ನಡೆಸುತ್ತಿದ್ದಾರೆ. ನೀವು ನಿಮ್ಮ ಸ್ವಂತ ಬ್ಲಾಗ್‌ಗಳನ್ನು ಸೂಚಿಸಬಹುದು ಹಾಗೂ ಇತರರ ಬ್ಲಾಗ್‌ಗಳನ್ನೂ ಸೂಚಿಸಬಹುದು. ವಿವರಗಳಿಗೆ ಭಾಷಾ ಇಂಡಿಯಾದ [http://bhashaindia.com/contests/iba/|ಅಂತರಜಾಲ ತಾಣವನ್ನು] ವೀಕ್ಷಿಸಬಹುದು.

ಇಬ್ಬರು ಸನ್ಯಾಸಿಗಳು ಮತ್ತು ಒಬ್ಬ ತರುಣಿ

ಇಬ್ಬರು ಸನ್ಯಾಸಿಗಳು ಒಂದು ತುಂಬಿ ಹರಿಯುತ್ತಿರುವ ಹೊಳೆಯನ್ನು ದಾಟುತ್ತಿರುವಾಗ ಒಬ್ಬ ಹರೆಯದ ಸುಂದರ ತರುಣಿ ಹೊಳೆಯನ್ನು ದಾಟಲು ಅವರ ಸಹಾಯ ಕೇಳಿದಳು. ಅವರಲ್ಲೊಬ್ಬ ಸಹಾಯ ಮಾಡಲು ಒಪ್ಪಿ ಅವಳನ್ನು ಹೊತ್ತುಕೊಂಡು ನದಿಯನ್ನು ದಾಟಿಸಿ ಅವಳನ್ನು ಇಳಿಸಿದ.