ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಆರೋಗ್ಯದ ಲೇಖನಗಳು

ನಾರು-ಬೇರುಗಳು

ಏನು ಈ ನಾರು-ಬೇರುಗಳು ? ಕಾರ್ಬೋಹೈಡ್ರೇಟ್ ನಲ್ಲಿ ಎರಡು ವಿಧ. ಒಂದು, ದೊರಕುವ ಕಾರ್ಬೋಹೈಡ್ರೇಟ್ (ಅವೈಲಬಲ್), ಮತ್ತೊಂದು, ದೊರಕದ ಕಾರ್ಬೋಹೈಡ್ರೇಟ್(ಅನ್ ಅವೈಲಬಲ್), ದೊರಕುವ ಕಾರ್ಬೋಹೈಡ್ರೇಟ್-ಶರ್ಕರ ಪಿಷ್ಟ, ನಾರು-ಬೇರುಗಳು ದೊರಕದ ಕಾರ್ಬೋಹೈಡ್ರೇಟ್ ಗಳು.

ಅನಂತಮೂರ್ತಿಯವರನ್ನು ಗೆಲ್ಲಿಸಬೇಕು

ರಾಜ್ಯಸಭೆ ಎಂದರೆ ರಾಜಕೀಯ ಪುನರ್ವಸತಿ ಎಂಬ ಮಾತಿಗೆ ಸಾಕ್ಷ್ಯಗಳು ಸಿಗುತ್ತಲೇ ಬಂದಿವೆ. ಸಾರ್ವತ್ರಿಕ ಚುನಾವಣೆಯ ಹೊತ್ತಲ್ಲಿ ಪಕ್ಷಕ್ಕಾಗಿ ದುಡಿದವರು, ಟಿಕೆಟ್‌ ಸಿಗದೇ ಅಸಮಾಧಾನಗೊಂಡವರು, ಮತ ದಾರರಿಂದ ತಿರಸ್ಕೃತಗೊಂಡವರು, ಪಾರ್ಟಿ ಫಂಡ್‌ಗೆ ದೊಡ್ಡ ಮೊತ್ತ ಚೆಲ್ಲಿದವರು, ಮುಂದೆ ಮತ್ತೂ ಕೊಡುವೆನೆಂದು ಭರವಸೆ ಕೊಟ್ಟವರು... ಇಂಥವರಿಗೆಲ್ಲ ರಾಜಕೀಯ ಪುನರ್ವಸತಿ, ಪ್ರವೇಶ ತಾಣಗಳೆಂದರೆ ವಿಧಾನ ಪರಿಷತ್‌, ರಾಜ್ಯಸಭೆಗಳು. ಇದು ಎಲ್ಲರಿಗೂ ಗೊತ್ತಿರುವ ಸತ್ಯ.

ತಮ್ಮ ಕಲಹಕ್ಕೆ ಐವರು , ಪರರ ಕಲಹಕ್ಕೆ ನೂರಾ ಐವರು.-ಇನ್ನಷ್ಟು ಗಾದೆಗಳು :

ಉಪವಾಸ ಇರಬಹುದು , ಉಪದ್ರವ ತಾಳಲಾರದು.
ಉಂಡದ್ದೇ ಉಗಾದಿ , ಮಿಂದದ್ದೇ ದೀವಳಿಗೆ , ಹೊಟ್ಟೆಗಿಲ್ಲದ್ದೇ ಏಕಾದಶಿ.

ಸಮಸ್ಯೆ

ನಾನು [http://sampada.net/node/1341#comment-2025|ಪೋಸ್ಟಿಸಿದ ಒಗಟನ್ನು] ಯಾರೂ ಬಿಡಿಸಲಿಲ್ಲ. ಸ್ವಲ್ಪ ಸುಲಭವಾಗಿರುವ ಇದನ್ನು ಪ್ರಯತ್ನಿಸಿ-

ಬೆಸ್ಟ್ ಆಫ್ ನಾ ಕಸ್ತೂರಿ

ಬೆಸ್ಟ್ ಆಫ್ ನಾ ಕಸ್ತೂರಿ, ( ನಾ ಕಸ್ತೂರಿಯವರ ಆಯ್ದ ನಗೆಬರಹಗಳು )

ನಾ. ಕಸ್ತೂರಿ, ಕನ್ನಡ ದೇಶದಲ್ಲಿ ಜನಿಸದಿದ್ದರೂ, ಕನ್ನಡದ ಹಾಸ್ಯ ಸಾಹಿತ್ಯದ ಪರಂಪರೆಯಲ್ಲಿ ಒಂದು ಹೊಸ ಅಧ್ಯಾಯವನ್ನೇ ತೆರೆದರು ಎಂದರೆ ಸುಳ್ಳಲ್ಲ. ಕನ್ನಡದಲ್ಲಿ ಹಾಸ್ಯ ಸಾಹಿತ್ಯದ ಬೆಳವಣಿಗೆಯ ಪ್ರಥಮ ಹಂತದಲ್ಲಿ ಅವರ ಪಾಲೂ ಬಹು ಮುಖ್ಯ.

ನಾನು ಮಾಡಿದ ಪುಸ್ತಕಗಳ ವಿಲೇವಾರಿ .

ಅಂತೂ ಭಾರೀ ವಿವಾದಾಸ್ಪದವಾಗಿದ್ದ ನನ್ನ ಪುಸ್ತಕಗಳ ವಿಲೇವಾರಿ ಅಂತೂ ಮೊನ್ನೆ ಶನಿವಾರ ಇಲ್ಲಿ (ಮುಂಬೈ) ಯ ವಿಲೇಪಾರ್ಲೆಯ ಅಂಗಡಿಯೊಂದರಲ್ಲಿ ಮಾಡಿದೆ. ಸುಮ್ಮನೆ ಕೊಟ್ಟು ಬಿಟ್ಟೆ. ದಾನವೆಂದು ಕರೆಯಲಾಗದು. ನನಗೆ 'ಬೇಡವಾದ' , ಅಂಗಡಿಯವರಿಗೂ 'ಬೇಡವಾದ' ( 'ಬೇಡವಾದ' - pun not intended - ಚರ್ಚೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು. ) ಪುಸ್ತಕಗಳನ್ನು ಕೊಟ್ಟರೆ , ದಾನ ಹೇಗೆ ಆದೀತು ? . ಏನೇ ಇರಲಿ . ನನ್ನ ಪುಸ್ತಕದ ಹೊರೆ ಸ್ವಲ್ಪ ಕಡಿಮೆಯಾಯಿತು. ಸಲಹೆ ಕೊಟ್ಟ ಪವನಜರಿಗೆ ಧನ್ಯವಾದಗಳು.

'ಅಮೇರಿಕಾದಿಂದ ಬಂದವನು'- ಸಿಂಗರ್ ನ ಇನ್ನೊಂದು ಕಥೆ

'ಅಮೇರಿಕಾದಿಂದ ಬಂದವನು'- ಸಿಂಗರ್ ನ ಇನ್ನೊಂದು ಕಥೆ

೧೯೭೮ರ ನೋಬೆಲ್ ಪ್ರಶಸ್ತಿಗೆ ಪಾತ್ರನಾದ ಐಸಾಕ್ ಬಾಷೆವಿಸ್ ಸಿಂಗರ್ ಪೋಲಂಡ್ ದೇಶದ ಯಿದ್ದಿಷ್ ಭಾಷೆಯ ಸಾಹಿತಿ. ಕನ್ನಡ ಓದುಗರಿಗೆ ಈತನ ಸಾಹಿತ್ಯದ ಆಯ್ದ ಭಾಗಗಳನ್ನು ಕನ್ನಡ ಪುಸ್ತಕ ಪ್ರಾಧಿಕಾರದ ನೋಬೆಲ್ ಪುರಸ್ಕೃತ ಸಾಹಿತ್ಯ ಮಾಲೆಯ ಅಡಿ 'ಐಸಾಕ್ ಬಾಷೆವಿಸ್ ಸಿಂಗರ್ -ವಾಚಿಕೆ'ಯಲ್ಲಿ ಕನ್ನಡಿಸಲಾಗಿದೆ.

ಕೈಯ್ಯಲ್ಲಿನ ಜಗತ್ತು

ತಾಂತ್ರಿಕತೆ ಎಂಬುದು ಮುನ್ನಡೆದಂತೆ,ನಮ್ಮ ಅನಿವಾರ್ಯತೆಗಳು ಹೇಗೆ ಬೆಳೆಯುತ್ತವೆ ಅಲ್ಲವೇ? ದೂರವಾಣಿಯನ್ನ ತೆಗೆದುಕೊಳ್ಳೋಣಾ. ಮೊನ್ನೆ ಮೊನ್ನೆಯತನಕ ಎಲ್ಲಾ ಮನೆಗಳಲ್ಲೂ ಆ ವ್ಯವಸ್ಥೆ ಇರಲಿಲ್ಲ,ಅದು ನಿದಾನವಾಗಿ ಎಲ್ಲೆಡೆ ತಳವೂರಿತು.ಈಗ ಮೊಬೈಲ್ ಕಾಲ ಅನ್ನೋತರದಲ್ಲಿ ಮೊಬೈಲ್ ಗ್ರಂಥಾಲಯ,ಮೊಬೈಲ್ ಕೇಫ್ಟೇರಿಯಾ ಹೀಗೆ ಎಲ್ಲವೂ ಚಲಿಸುತ್ತಿರುತ್ತವೆ.ಇಂದು ಮನೆಯ ಪ್ರತಿಯೊಬ್ಬರ ಕೈಗೂ ಒಂದೊಂದು ಚಲಿಸುವ ಫೋನ್ ಗಳು.ಅದು ನಮ್ಮ ದೇಹದ ಮತ್ತೋಂದು ಅಂಗವಾಗಿ ಅಂಟಿಕೊಂಡೇ ಇರಬೇಕು.ಮೊಬೈಲ್ ಫೋನ್ ಗಳು ಈಗ ನಮ್ಮ ಅನಿವಾರ್ಯತೆಗಳಲ್ಲೊಂದಾಗಿಬಿಟ್ಟಿವೆ.