ಅನಂತಮೂರ್ತಿಯವರು ಅವಶ್ಯ ಮಾತಾಡಬಹುದು !

ಅನಂತಮೂರ್ತಿಯವರು ಅವಶ್ಯ ಮಾತಾಡಬಹುದು !

ಮಾತನಾಡಬಾರದು ಅಂತ ಯಾರು ಹೇಳೂದಿಲ್ಲ ಮತ್ತು ಹೇಳ್ಲಿಕ್ಕೆ ಶಕ್ಯನೂ ಇಲ್ಲಾ..ಯಾಕಂದ್ರ ನಮ್ಮದು ಪ್ರಜಾರಾಜ್ಯ ನೋಡ್ರಿ..ಅದೇ ಫ್ಯಾಸಿಸ್ಟ್ ಆಡಳಿತ ಇದ್ರ ಹಂಗನಬಹುದಿತ್ತೇನೋ?

ಇಷ್ಟೆಲ್ಲಾ ಹೇಳಿದ ಮ್ಯಾಲೂ ಒಂದ ಮಾತು ನೆನಪಿರಲಿ. ದೇವರು ನನಗ ಬಾಯಿ ಕೊಟ್ಟಾನ, ದೇಶದ ಸಂವಿಧಾನ ಮಾತನಾಡು ಹಕ್ಕ ಕೊಟ್ಟದ, ನಂಗ ಅಭಿವ್ಯಕ್ತಿ ಸ್ವಾತಂತ್ಯ ಅದ ಅಂಥ್ಹೇಳಿ ನಾನು ಹೋಗಿ ಗಾಂಧಿ ಬಜಾರನಾಗ ನಿಂತು ಕುಮಾರಸ್ವಾಮಿ ಹಂಗಿದ್ದಾನ, ಹಿಂಗಿದ್ದಾನ, ಅವನಿಗೆ ಅದು ಬರುದಿಲ್ಲಾ, ಇದು ಬರುದಿಲ್ಲಾ, ಅಂವ ಬರೇ ಇಷ್ಟೆ, ಅಷ್ಟೇ..ಅಂತಲ್ಲಾ ಮಾತಾಡಿದ್ರ ಏನಾಗ್ತದ ಹೇಳ್ರಿ? ಒಂದೋ ಗಾಂಧಿಬಜಾರ ಪೋಲಿಸರು ಬಂದು ಒದ್ದು ಒಣಾಕತಾರ ಇಲ್ಲಾಂದ್ರ ನನ್ನ ತಲಿ ಕೆಟ್ಟದ ಅಂತ ಹೇಳಿ ಯಾರರೇ ಒಯ್ದು ನಿಮ್ಹಾನ್ಸ್ ನಾಗ ಅಡ್ಮಿಟ್ ಮಾಡ್ತಾರ...ಮತ್ತ ಹಾಂಗ ಮಾಡೂದು ಕರೆಕ್ಟೂ ಕೂಡ....ಎಲುವಿಲ್ಲದ ನಾಲಿಗಿ ಅಂತ ಎಲ್ಲಾ ವಿಷಯದ ಮ್ಯಾಲೂ ಹೆಂಗ ಬೇಕಾದ್ ಹಂಗ ಮಾತಾಡಲಿಕ್ಕೆ ಆಗೂದಿಲ್ಲ. ಸ್ವಲ್ಪ ಹಿಡಿತ ಇರಬೇಕು, ಸಾರಾಸಾರಾ ವಿಚಾರ ಮಾಡಿ ಅಳದು ಸುರದು ಮಾತಡಬೇಕಾಗ್ತದ!

ಇದು ತಪ್ಪು ಅಂತ ವಾದ ಮಾಡ್ತೀರಾ?

ಗೊತ್ತಾಯ್ತಲ್ಲ ..ಯಾವುದು ಸ್ವಾತಂತ್ರ್ಯ ಮತ್ತು ಯಾವುದು ಸ್ವೇಚ್ಛಾಚಾರ ಅಂತ !

"ಸ್ವೈರತೆಗೂ ಸ್ವಾತಂತ್ರ್ಯಕೂ ಇಹುದು ಅಜಗಜಾಂತರ" - ಅಂಬಿಕಾತನಯದತ್ತ (ಬೇಂದ್ರೆ ಮಾಸ್ತರ)
"ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡೋ ನಾಲಿಗಿ" - ದಾಸರ ಪದ
---
ಇನ್ನೊಂದು ಮಾತು, ದಟ್ಸ್ ಕನ್ನಡ ವೆಬ್ ಸೈಟ್ ನವರು ಅನಂತಮೂರ್ತಿಯವರ ಅವತ್ತಿನ ಭಾಷಣದ mp3 file ಪೋಸ್ಟ್ ಮಾಡಿ ಪುಣ್ಯ ಕಟಗೊಂಡಾರ. ದಯವಿಟ್ಟು ಎಲ್ಲಾರೂ ಅದನ್ನ ಒಮ್ಮ ಅಲ್ಲದಂಗ ಎರಡೆರಡ ಸಲಾ ಕೇಳ್ರಿ....ಸುಳ್ಳೇ ಸುಳ್ಲೇ ..ಒಬ್ಬರು "ಅಮೂ ಬರಿ ಇಷ್ಟು ಮಾತ್ರ ಮಾತಡಿರೋದು, ಬಾಕಿ ಎಲ್ಲಾ ಪೇಪರಿನವರ ಕಲ್ಪನೆ" ಅಂತ ಪೋಸ್ಟ್ ಮಾಡೋದು..ಅದಕ್ಕ ಇನ್ನೊಬ್ಬರು "ಇಲ್ಲಾ ಗುರು, ಅಮೂ ಹೀಗೂ ಕೂಡ ಹೇಳಿದ್ದಾರೆ" ಅಂತ ರಿಪ್ಲೈ ಮಾಡೂದು ತಪ್ತದ..

ಎರಡೆರಡು ಸಲ ಕೇಳಿದ ಮ್ಯಾಲೆ ಖರೇ ಅನಿಸಿದ್ದನ್ನ ಹೇಳ್ರಿ..ಆಗ ಸುಮ್ಮನೇ ಕೂತು ಆತ್ಮವಂಚನಿ ಮಾಡ್ಕೋಬ್ಯಾಡ್ರಿ !

** ಮೂಲ ಥ್ರೆಡ್ ಭಾಳ ದೊಡ್ದದಾಗಿದ್ರಿಂದ ಪ್ರತಿಕ್ರಿಯೆ ಕಳದು ಹೋಗಬಾರದು ಅಂತ ಹೊಸದಾಗಿ ಬ್ಲಾಗ್ಸೀನಿ ಅಷ್ಟೇ.

Rating
No votes yet