ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮಾಧ್ಯಮಗಳಿಗೆ ಸುದ್ದಿಯ ಕ್ಷಾಮ.

ಈಗೀಗ ಮಾಧ್ಯಮಗಳಿಗೆ ಸುದ್ದಿಯ ಕ್ಷಾಮವೇ? ಹೌದು ನನಗೆ ಹಾಗೇ ಅನಿಸುತ್ತದೆ. ಕೆಲವರ ವಯಕ್ತಿಕ ವಿಚಾರಗಳನ್ನು ವಾರಗಟ್ಟಲೆ ಅವರು ಬೇಡ ಬೇಡ ವೆಂದರೂ ಮಾಧ್ಯಮಗಳು ಕಾಡಿ ಬೇಡಿ ಪ್ರಸಾರ ಮಾಡುತ್ತಿರುವದನ್ನು ನೋಡಿದರೆ ಹಾಗೇ ಅನಿಸುತ್ತದೆ. ಉದಾಹರಣೆಗೆ ಐಶ ಮದುವೆ. ಅವರು ಯಾರನ್ನೂ ಕರೆಯದೆ ಮಾಧ್ಯಮಗಳು ದೂರವಿರಲಿ ಎಂದು ಹೇಳಿದರೂ ಕಾಡಿ ಬೇಡಿ ಕೊನೆಗೆ ಅವರ ಸೆಕ್ಯೂರಿಟಿಗಳಿಂದ ನಿಂದನೆಗೊಳಗಾದರೂ ಅದರ ಪ್ರಸಾರದ ಹಿಂದೆ ಬಿದ್ದುರುವ ಜನರನ್ನು ನೋಡಿದರೆ ನನಗೆ ಹಾಗೇ ಎನಿಸುತ್ತದೆ. ಮದುವೆ ಅವರ ವಯಕ್ತಿಕ ವಿಚಾರ. ಹೋಗಲಿ ಕರೆದರೆ ಹೋಗಿ ಪ್ರಚಾರ ಕೊಡಿ. ಇಲ್ಲದಿದ್ದರೆ ಚುಟುಕು ಸುದ್ದಿ ಪ್ರಸಾರ ಮಾಡಿ ಅದು ಬಿಟ್ಟು ಈರೀತಿ ಗೊಗರೆದರೆ ಏನು ಹೇಳಬೇಕು. ಹೋಗಲಿ ಓಬೇರಾಯ್ ಅವನ ಪಾಡಿಗೆ ಗೋ ಸಮ್ಮೇಳನಕ್ಕೆ ಹೋದರೆ ಅಲ್ಲಿಯೂ ಹೋಗಿ ಐಶ್ ಮದುವೆಗೆ ಯಾಕೆ ಹೋಗಿಲ್ಲ ಎಂದು ಅವರ ನಡುವಿನ ಸಂಬಂಧ ಮುರಿದು ಬಿದ್ದುರುವದು ಗೊತ್ತಿದ್ದರೂ ಕೇಳುವದು. ರಾಜಕುಮಾರ ಪುಣ್ಯತಿಥಿ ವಾರಗಟ್ಟಲೆ ಅವರ ಮನೆಯವರು ನಿಂತಿದ್ದು ಕುಂತಿದ್ದು ಎಲ್ಲ ಅವರಿಗೆ ಮುಜುಗರ ಆಗುವಷ್ಟು ಮತ್ತು ನೋಡುವವರಿಗೂ ಕೇಳುವವರಿಗೂ ತಲೆನೋವಾಗುವಷ್ಟು ಪ್ರಸಾರ ಮಾಡುವದು ಯಾವುದರ ಲಕ್ಷಣ? ಕುಚೋದ್ಯ ಕ್ಕಾಗಿ ದೊಡ್ಡವರನ್ನು ಅಭಿಪ್ರಾಯ ಕೇಳುವದು ಅವರು ಯಾವುದೋ ಪ್ರಜ್ಞೆಯಲ್ಲಿ ಉತ್ತರಿಸುವದು ಅದನ್ನೇ ವಾರಗಟ್ಟಲೆ ಗುಲ್ಲೆಬ್ಬಿಸುವದು. ಉದಾ ನಾರಾಯಣ ಮೂರ್ತಿಗಳ ವಿಚಾರ, ಹೋಗಲಿ ಅವರು ತಮ್ಮ ತಪ್ಪರಿತು ಕ್ಷಮೆಯನ್ನಾದರೂ ಕೇಳಿದರು ಆದರೆ ಹಿಂದೆ ಕಾರ್ನಾಡರು ಆದೊಡ್ಡತನವನ್ನೂ ತೋರಲಿಲ್ಲ. ಇದೆಲ್ಲಾ ಮಾಧ್ಯಮದವರು ಅತಿಬುಧ್ಧಿವಂತರೆಂದು ಕೊಂಡು ಮಾಡುವ ಕುಚೋದ್ಯಗಳು ಅವರ ಟೊಳ್ಳುತನವನ್ನು ಪ್ರದರ್ಶಿಸುತ್ತವೆ ಅಷ್ಟೆ. ಇದರಿಂದ ಅವರು ಸಮಾಜಕ್ಕೆ ಸಾಮಾನ್ಯಜನರಿಗೆ ಕೊಡುವ ತಪ್ಪುಪಾಠ ಸಾಕಷ್ಟು ಹಾನಿಮಾಡಬಲ್ಲದು. ಅಲ್ಲದೆ ಇದು ಕಾಲೆಳೆದು ದೊಡ್ಡವರನ್ನು ಹತೋಟಿಗೆ ಒಳಪಡಿಸಲಿಚ್ಚಿಸುವ ರಾಜಕಾರಣಿಗಳಿಗೆ ರಸಗವಳ.

ಗಾಂಧಿಜಯಂತಿಯಂದು ೨ ನಿಮಿಷದ ಸುದ್ದಿ ಬಿತ್ತರಿಸುವ ಮಾಧ್ಯಮಗಳು ರಾಜ ಜಯಂತಿಯನ್ನೋ, ಐಶ ಮದುವೆಯನ್ನೋ ಇಷ್ಟೊಂದು ವಿಜ್ರಂಭಿಸುವ ದನ್ನು ನೋಡಿದರೆ ಮಕ್ಕಳು ಇವರು ಗಾಂಧಿಗಿಂತ ದೊಡ್ಡವರಿರಬೇಕು ಎಂದು ಕೊಂಡರೆ ತಪ್ಪಿಲ್ಲ ಅಲ್ಲವೆ?

ಅನಂತ ಪಂಡಿತ

ನಿಮ್ಮ ಧರ್ಮ ನಿಮಗೆ, ನನ್ನ ಧರ್ಮ ನನಗೆ!

ಹಿಂದೆಲ್ಲ ಸಂಜೆ ಹೊತ್ತು ಆ ದಿನದ ಕೆಲಸ, ಚಾ ಕಾಫಿ ಮುಗಿದದ್ದೇ ಯಾವತ್ತಿನಂತೆ ಪುಟ್ಟುಭಟ್ಟರ ಅಂಗಡಿ ಮುಂಗಟ್ಟಿನ ಬೆಂಚುಗಳ ಮೇಲೆ ಕೂತು, ನೆಲಗಡಲೆ ತಿನ್ನುತ್ತಲೋ ಪೇಪರು ಓದುತ್ತಲೋ ಇಂದಿರಮ್ಮನ ಆಡಳಿತದಿಂದ ಹಿಡಿದು ಕಲ್ಲರಬೈಲಿನ ಸಂಕಪ್ಪನ ಕೊನೇ ಮಗಳು ಯಾರೊಂದಿಗೋ ಓಡಿಹೋದದ್ದರ ವರೆಗೆ ನಾಲ್ಕಾರು ಮಂದಿ ಹಿರಿಯರು ಸೇರಿ ಅದೂ ಇದೂ ಮಾತನಾಡುವುದಿತ್ತು.

ರವೇಸಿಸ್ ಮೂಲೆ

ಸಿಡ್ನಿಯ ಹೆಸರಾಂತ ಬೋಂಡೈ ಬೀಚಿನ (bondi beach) ಎದುರಿರುವ ರವೇಸಿಸ್ ಮೂಲೆ. ಸುಮಾರು ತೊಂಬತ್ತಕ್ಕೂ ಮಿಕ್ಕ ಶರತ್ಕಾಲದಂತೇ ಈ ಶರತ್ಕಾಲವೂ, ಸಂಜೆ ಸಮುದ್ರದ ಮೇಲಿಂದ ಬೀಸುತ್ತಿದ್ದ ತಂಪಾದ ಗಾಳಿಗೆ ಮೈಯೊಡ್ಡಿ ನಿಂತಿರುವುದು. ತಾಂತ್ರಿಕ ವಿವರಗಳು ಕೆಳಗೆ ಕೊಟ್ಟಿದ್ದೇನೆ.

ರವೇಸಿಸ್ ಮೂಲೆ

ಬಾಬ್ ವೂಲ್ಮರ್ ಹಂತಕ ಸಿ ಸಿ ಟಿ ವಿಯಲ್ಲಿ ಕಣ್ಣಿಗೆಬಿದ್ದನಂತೆ

ಬಾಬ್ ವೂಲ್ಮರ್ ಕೊಲೆಯಾದ ದಿನ ತಂಗಿದ್ದ ಹೋಟೇಲಿನ ಸಿಸಿಟಿವಿ (ಕ್ಲೋಸ್ ಸರ್ಕ್ಯೂಟ್ ಟೆಲಿವಿಶನ್) ಫುಟೇಜ್ ಮೂಲಕ ಸ್ಕಾಟ್ಲೆಂಡ್ ಯಾರ್ಡ್ ಹಂತಕನಾಗಿರಬಹುದಾದ ಒಬ್ಬನನ್ನು ಗುರುತುಹಿಡಿದಿದೆ ಎಂದು 'ದಿ ಇಂಡಿಪೆಂಡೆಂಟ್' ವರದಿ ಮಾಡಿದೆಯಂತೆ. [:http://content-ind.cricinfo.com/woolmer/content/current/story/291759.html|ಹೆಚ್ಚಿನ ಮಾಹಿತಿ ಇಲ್ಲಿದೆ].

ಇ-ಲೋಕ-19 ಹೆಣ ಕೊಯ್ಯದೆ ಕಲಿಯುವ ವೈದ್ಯ ವಿದ್ಯಾರ್ಥಿಗಳು (21/4/2007)

 ಮೈಬೊಂಬೆಹೆಣ ಕೊಯ್ಯುವುದು ವೈದ್ಯಕೀಯ ವಿದ್ಯಾರ್ಥಿಗಳ ಕಲಿಕೆಯ ಮುಖ್ಯ ಭಾಗವೆನ್ನುವುದು ಎಲ್ಲರಿಗೂ ತಿಳಿದ ವಿಷಯ.ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಬೇಕಾದ ಹೆಣವನ್ನು ಪಡೆಯಲು ಕಾಲೇಜುಗಳು ಹರಸಾಹಸ ಮಾಡಬೇಕಾಗುತ್ತದೆ.

ಹಾಲು-ಹುಡುಗ-ಹಸು ಇತ್ಯಾದಿ..

"ಒಂದು ಲೋಟ ಹಾಲು,೨ ಖರ್ಜೂರ,ದಿನಾ ಕೊಡಿಯಮ್ಮ, ಮಗನಿಗೆ ಬೇರೆ ಟಾನಿಕ್ ಬೇಕಾಗಿಯೇ ಇಲ್ಲ" ಎಂದು ಡಾಕ್ಟ್ರು ಹೇಳುವಾಗ,ತಾಯಿ ಮತ್ತು ಮಗನ ಮುಖ ಜಿರಳೆ ತಿಂದ ಹಾಗಾಗಿತ್ತು."ಹಾಲು ನೋಡಿದರೆ ನನ್ನ ಮಗನಿಗೆ ವಾಂತಿ ಬರುತ್ತದೆ, ಎಷ್ಟು ಬೆಲೆಯಾದರೂ ಪರವಾಗಿಲ್ಲ ಒಂದು ಒಳ್ಳೆ ಟಾನಿಕ್ ಬರೆದುಕೊಡಿ ಡಾಕ್ಟ್ರೇ" ಎಂದು ಟಾನಿಕ್ ಬರೆಸಿಕೊಂಡು ಹೋದಳಾಕೆ.

ಉಬುಂಟು ವಿತರಣೆಯ ಹೊಸ ಆವೃತ್ತಿ ಲಭ್ಯ

ಉಬುಂಟು

ಲಿನಕ್ಸ್ ವಿತರಣೆಯಾದ 'ಉಬುಂಟು'ವಿನ ಹೊಸ ಆವೃತ್ತಿ - ೭.೦೪, ಫೀಸ್ಟಿ ಫಾವ್ನ್ ಈಗ ಲಭ್ಯ. ಹೊಸ ಉಬುಂಟು ಎಂದಿನಂತೆ ಹೊಸ ಸವಲತ್ತುಗಳನ್ನು ಹೊತ್ತು ತರುತ್ತಿದೆಯಂತೆ. ಹೆಚ್ಚಿನ ಮಾಹಿತಿ ಹಾಗೂ [:http://lunapark6.com/ubuntu-704-feisty-fawn.html|ಇಂಗ್ಲೀಷಿನಲ್ಲಿ ಒಂದು ರಿವ್ಯೂ ಇಲ್ಲಿದೆ].

ಗೂಗಲ್ ಪೇಜಸ್‍ನ ಮುನ್‍ಹಾಳೆಯಲ್ಲಿ ನಮ್ಮದೇ html ಹಾಳೆ ಹಾಕುವದು ಹೇಗೆ?

http://kannadablogs.googlepages.com/

ಗೂಗಲ್‍ಪೇಜಸ್ ನಲ್ಲಿ ನಮ್ಮದೇ ಆದ ಎಚ್.ಟಿ.ಎಮ್.ಎಲ್ ಹಾಳೆಗಳನ್ನು ಇಟ್ಟುಕೊಳ್ಳಬಹುದು. ಇದು ಹೆಚ್ಚಿನ ಎಲ್ಲರಿಗೂ ತಿಳಿದೇ ಇದೆ. ಗೊತ್ತಿಲ್ಲದಿದ್ದರೆ pages.google.com ನೋಡಿ.