ಅರ್ಪಣೆ
ನಾ ನಿಮ್ಮ ಮರೆಯಲಾದೀತೇ
ಅಂದು ಅಪ್ಪ ಎಂದು ಕರೆಸಿಕೊಂಡ ಜೀವ
ಈ ಪುಟ್ಟ ಗಿಡವ ಮರವಾಗಿಸಿ
ಮನದಿ ತುಂಬಿಸಿದಿರಿ ಸ್ಪಂದಿಸುವ ಭಾವ
- Read more about ಅರ್ಪಣೆ
- Log in or register to post comments
ನಾ ನಿಮ್ಮ ಮರೆಯಲಾದೀತೇ
ಅಂದು ಅಪ್ಪ ಎಂದು ಕರೆಸಿಕೊಂಡ ಜೀವ
ಈ ಪುಟ್ಟ ಗಿಡವ ಮರವಾಗಿಸಿ
ಮನದಿ ತುಂಬಿಸಿದಿರಿ ಸ್ಪಂದಿಸುವ ಭಾವ
ಇತ್ತೀಚೆಗಷ್ಟೆ ವಿಂಡೋಸ್ ನಿಂದ Mac ಗೆ ವಲಸೆ ಬಂದಿರುವ ನನಗೆ ಯಾರಾದರು 'ಬರಹ'ದಂತೆ (ಉಚಿತ) ಕನ್ನಡ transliteration ಸಾಫ್ಟವೇರ್, Mac ಗಾಗಿ ಇದ್ದಲ್ಲಿ ತಿಳಿಸುವಿರೋ?
ಅ೦ದು, ಬಾಳಿನಲಿ ಬೆಳಕಿಲ್ಲದಿದ್ದಾಗ
ನೀನಿದ್ದೆ, ರವಿಯ ಒ೦ದು ಕಿರಣದ೦ತೆ,
ಘಾಡಾ೦ಧಕಾರ ತು೦ಬಿದ ಗವಿಯಲಿ ಬೆಳಕಿ೦ಡಿಯ೦ತೆ,
ಬಹಳಷ್ಟೂ ನಮ್ಮ ಕನ್ನಡಿಗರಿಗೆ ಗೊತ್ತಿಲ್ಲ ಕರ್ನಾಟದ ಏಕೀಕರಣ ಅಂದರೆ ಏನು, ಅನೇಕ ಕಡೆ ಸುವರ್ಣ ಸಂಭ್ರಮ ಆಗುತ್ತಿದೆ, ಗಲ್ಲಿ ಗಲ್ಲಿಗಳಲ್ಲಿ ಸಮಾರಂಭ ನಡೆಯುತ್ತಿದೆ. ಅದೇ ಹಾಡು-ಕುಣಿತ ಮತ್ತು ಕೆಲವು ರಾಜಕೀಯ ನಾಯಕರ ಮತ್ತು ಉಟ್ಟು ಹೋರಾಟಗಾರಾರ ಕಿವಿಗೆ ಅಪ್ಪಳಿಸುವ ಭಾಷಣಗಳು. ಆದರೆ ಇದಕ್ಕೆ ನಿಜಕ್ಕೂ ಹೋರಾಡಿದ, ಭಗೀರಥ ಪ್ರಯತ್ನವನ್ನು ಮಾಡಿದ ಶ್ರೀ ಆಲೂರರ ಸಾಧನೆ ನಮ್ಮ ಇಂದಿನ ಜನಾಂಗಕ್ಕೆ ತಿಳಿಯದಿರುವುದು ದುಃಖದ ಸಂಗತಿ.
೧. ಬದನೇಕಾಯಿಗಳನ್ನು ೪ ತುಂಡು ಮಾಡಿ
೨.ತವ(deep fry pan)ದಲ್ಲಿ ಎಣ್ಣೆ ಬಿಸಿ ಮಾಡಿ
೩. ಬದನೇಕಾಯಿಯನ್ನು ಎಣ್ಣೆಯಲ್ಲಿ ಬಾಡಿಸಿ
ಬದನೇಕಾಯಿಯನ್ನು ತೆಗೆದು ಪಕ್ಕಕ್ಕಿಡಿ.
೪. ಒಂದು ಕಪ್ ಟೊಮಟೊ ಮತ್ತು ಈರುಳ್ಳಿಯನ್ನು ಚೆನ್ನಾಗಿ ರುಬ್ಬಿಕೊಳ್ಳಿ
೫. ಬಾಣಲೆಯಲ್ಲಿ ಉಳಿದ ಎಣ್ಣೆಯನ್ನು ಬಿಸಿ ಮಾಡಿ ಉಳಿದ ಈರುಳ್ಳಿಯನ್ನು ಕೆಂಪಗಾಗುವಂತೆ ಹುರಿಯಿರಿ.
೬. ಟೊಮಾಟೊ ಸೇರಿಸಿ.
೭. ಗರಮ್ ಮಸಾಲಾ, ಮೆಣಸಿನ ಪುಡಿ, ಧನಿಯ ಪುಡಿ ಮತ್ತು ಉಪ್ಪು ಸೇರಿಸಿ.
೮. ಮಸಾಲೆ ದಪ್ಪವಾಗುವ ವರೆಗೆ ಬೇಯಿಸಿ
೯. ಹುರಿದ ಬದನೇಕಾಯಿ ಸೇರಿಸಿ ಐದು ನಿಮಿಷ ಬೇಯಿಸಿ
ನಿಮಗೆ ಇಷ್ಟವಾದಲ್ಲಿ ಸ್ವಲ್ಪ ಸಕ್ಕರೆ ಅಥವಾ ನಿಂಬೆ ಸೇರಿಸಿ.
ಚಪಾತಿ ಅಥವಾ ರೊಟ್ಟಿಯ ಜೊತೆ ಬಡಿಸಿ.
3
IISc ಯ ಕನ್ನಡ ವಿದ್ಯಾರ್ಥಿ ಬಳಗದ ವೆಬ್ಸೈಟು. ನೋಡಿ:
[:http://neuronix.ee.iisc.ernet.in/krsp/.nitya/contact.htm]
ಇದು ನನಗೆ ಬಹಳ ಯಕ್ಷಪ್ರಶ್ನೆಯಾಗಿ ಕಾಡಿದೆ, ಮುಖ್ಯವಾಗಿ ಯಾರಿಗಾದರು ಉತ್ತರ ಕೊಡುವಾಗ.
ನಾವು ಏನು ಮಾಡಿದರು ಇತರರಿಗೆ ತಪ್ಪಾಗಿ ಕಾಣುತ್ತದೆ. ನಮ್ಮ ನೆಲ-ಜಲದ ಸಂರಕ್ಷಣೆ ನಮ್ಮ ಹಕ್ಕು ಅಲ್ಲವೇ ??. ನಾವು ಯಾಕೆ ಪ್ರತಿಯೊಬ್ಬರಿಗೂ ಉತ್ತರ ಕೊಡಬೇಕು ಅಂತ ನನ್ನನ್ನೆ ನಾನು ಕೇಳಿಕೊಂಡಿರುವೆ. ಇತರರಿಗೆ ಪರವಾಗಿಲ್ಲ, ಮಾಧ್ಯಮದ ಪ್ರಭಾವ ಇಲ್ಲಾ ಸುದ್ದಿಗಳ ತಪ್ಪು ತಿಳುವಳಿಕೆಗಳಿಂದ ಒಂದು ಅಭಿಪ್ರಾಯಕ್ಕೆ ಬರುತ್ತಾರೆ. ಆದರೆ ನಮ್ಮ ಕನ್ನಡಿಗರಿಗೆ ಏನಾಗಿದೆ, ನಮ್ಮ ಜನರೇ ನಮ್ಮ ಕಾಲು ಎಳೆದರೆ ಹೇಗೆ.
ಕವಿತೆಯನ್ನು ಓದುವ ಮೊದಲು.... ಕನ್ನಡಕ್ಕೆ ಹೋರಾಡಿದ ಅನೇಕ ಮಹನೀಯರು ನಮ್ಮ ಮುಂದೆ ಹಾಸು ಹೊಗಿದ್ದಾರೆ, ಆದರೆ ನಮ್ಮ ಕಣ್ಣಿಗೆ ಬೀಳುವುದು ಕೇವಲ ಒಂದೆರೆಡು ನವೆಂಬರ್ ನಾಯಕರು ಆಷ್ಟೆ. ಆದರೆ ತೆರೆ-ಮರೆಯಲ್ಲಿ ಹೋರಾಟದಲ್ಲಿ ಪಾಲ್ಗೊಂಡು ಸೆರವಾಸ ಅನುಭವಿಸಿ,ಚಿತ್ರ-ವಿಚಿತ್ರ ಹಿಂಸೆಗಳನ್ನು ಅನುಭವಿಸಿ ಇವತ್ತಿಗೂ ಮತ್ತೆ ಹೋರಾಟಕ್ಕೆ ಅಣಿ ಆಗುವ ಹೋರಾಟಗಾರರಿಂದ ಇಂದು ಕನ್ನಡ ಉಳಿದಿದೆ. ನಮಗೆ ನಮ್ಮ ಕನ್ನಡ ಹೋರಾಟಗಳ ಬಗ್ಗೆ ಅರಿವಿಲ್ಲ, ಎಲ್ಲಾ ಕನ್ನಡ ಹೋರಾಟಗಾರರನ್ನು ನೋಡುವ ರೀತಿ ಇನ್ನು ಬದಲಾಗಿಲ್ಲ, ಇನ್ನು ನಮ್ಮ ಜನರ ದೃಷ್ಟಿಯಲ್ಲಿ ರೌಡಿಗಳು, ಗೂಂಡಾಗಳು ಅನ್ನುವ ಛಾಪು ನಿಂತಿದೆ. ಇದಕ್ಕೆ ನಾನು ಹೊರತಲ್ಲ ಬಿಡಿ. ಇಲ್ಲಿಯವರೆಗೂ ಕನ್ನಡಿಗರು ಪಟ್ಟ ಕಷ್ಟ, ಇಟ್ಟ ಹೆಜ್ಜೆಯ ಅರಿವಿಲ್ಲದೆ ನಾವು ಒಂದು ತಿರ್ಮಾನಕ್ಕೆ ಬಂದಿರುತ್ತೆವೆ. ಯಾವುದೊ ದೇಶದ ಚರಿತ್ರೆಯನ್ನು ಕಲಿಸುವ ಈ ಶಿಕ್ಷಣ ವ್ಯವಸ್ಥೆ ನಮ್ಮ ರಾಜ್ಯ್ಸದ ಹೊರಾಟ-ಏಕೀಕರಣದ ಬಗ್ಗೆ ಚಕಾರ ಎತ್ತದಿರುವುದು ದುಃಖದ ಸಂಗತಿ. ಈ ವಿಷಯಗಳು ನಮಗೆ ತಿಳಿಯದೆ ನಮಗೆ ಹೋರಾಟದ ಬಗ್ಗೆ ಅರಿವು ಮುಡುವದಿಲ್ಲ, ಹೋರಾಟಗಾರರ ಬಗ್ಗೆ ಗೌರವ ಬರುವದಿಲ್ಲ. ಹಿಂದೆ ಹೋರಾಡಿದ ಮಾ.ರಾಮಮುರ್ತಿ ಇತರರ ಕುಟುಂಭಗಳು ಇಂದಿಗೂ ಕಷ್ಟದಲ್ಲಿ ಇವೆ. ಮನೆಯಲ್ಲಿ ಮರ್ಯಾದೆ ಇರದೆ ಇವರು ಪಡುವ ಪಾಡು ನಿಜಕ್ಕೂ ಶೋಚನೀಯ. ಕನ್ನಡಕ್ಕೆ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷ ಅಗುವುದು ಇಂದು ಕನ್ನಡಕ್ಕೆ ಕೈ ಎತ್ತು ನಿನ್ನ ಕೈಗೆ ಕೊಳ ಬೀಳುವುದು ಅನ್ನುವ ಸ್ಥಿತಿಗೆ ಬಂದಿದೆ. ಹೀಗೆ ಸಾಲು ಸಾಲು ತೊಂದರೆ ಅನುಭವಿಸುವ ದಿನದ ಕೊನೆಗೆ ನನಗೆ ಎನು ಸಿಕ್ಕಿತು ಅಂತ ಅವಲೋಕನ ಮಾಡಿಕೊಂಡರೆ ಕಾಣುವುದು ಸುಳ್ಳು ಮುಕದ್ದವೆ,ಜೈಲುವಾಸ ಅಷ್ತ್ಟೆ ನನ್ನ ಅನುಭವದಲ್ಲಿ ಕಂಡ ಹೋರಾಟಗಾರ ಬವಣೆ ಬಗ್ಗೆ ಬರೆದಿರುವ ಕವನವಿದು.
1. ನೀನು ಬಸ್ಮೇಲೆ ಹತ್ತಿದ್ರೂ ಬಸ್ಸೇ ನಿನ್ನ ಮೇಲೆ ಹತ್ತಿದ್ರೂ ಟಿಕೇಟು ತೊಗೋಳೋನು ಮಾತ್ರ ನೀನೇ
ವಿಕಿಪೀಡಿಯದಲ್ಲಿರುವ [kn:ಕುವೆಂಪು|ಕುವೆಂಪುರವರ] ಲೇಖನ ಎಡಿಟ್ ಮಾಡುವಾಗ ಬಂದ ಸಂಶಯವಿದು. ಮೊನ್ನೆ ಮೊನ್ನೆಯವರೆಗೂ ಆಂಗ್ಲ ವಿಕಿಪೀಡಿಯದಲ್ಲೂ ಹಿರೇಕೊಡಿಗೆ ಶಿವಮೊಗ್ಗ ಜಿಲ್ಲೆಗೆ ಸೇರಿದ್ದೆಂದು ಬರೆದಿದ್ದರು.