ಆವರಣ ಹೊಸ ದಾಖಲೆ
ಎಸ್ ಎಲ್ ಭೈರಪ್ಪನವರ ಹೊಸ ಕಾದಂಬರಿ ಮಾರಾಟದಲ್ಲಿ ಹೊಸ ದಾಖಲೆ ಬರೆದಿದ್ದುಬಿಡುಗಡೆಗೆ ಮುಂಚೆಯೇ ಎಲ್ಲಾ ಪ್ರತಿಗಳೂ ಖಾಲಿಯಾಗಿವೆ. (ವಿ. ಕ. ೦೫-೦೨-೨೦೦೭)
- Read more about ಆವರಣ ಹೊಸ ದಾಖಲೆ
- Log in or register to post comments
ಎಸ್ ಎಲ್ ಭೈರಪ್ಪನವರ ಹೊಸ ಕಾದಂಬರಿ ಮಾರಾಟದಲ್ಲಿ ಹೊಸ ದಾಖಲೆ ಬರೆದಿದ್ದುಬಿಡುಗಡೆಗೆ ಮುಂಚೆಯೇ ಎಲ್ಲಾ ಪ್ರತಿಗಳೂ ಖಾಲಿಯಾಗಿವೆ. (ವಿ. ಕ. ೦೫-೦೨-೨೦೦೭)
ಸ್ಪರ್ಶ ಆಗ ತಾನೆ ಹುಟ್ಟಿದ ಸೂರ್ಯನ ಕಿರಣಗಳು ನಿನ್ನ ಮುಂಗುರುಳ ಮುಟ್ಟಿ ಎಚ್ಚರಿಸುತ್ತದೆ. ನೀನು ಮುಗುಳು ನಕ್ಕು ಆ ಸೂರ್ಯನ ಕಿರಣ ಬಿದ್ದು ಪ್ರಜ್ವಲಿಸುವ ನೆಲವ ನೋಡಿ ಏಳುತ್ತೀಯ. ಎದ್ದು ಸ್ವಚ್ಛ ಸ್ನಾನ ಮಾಡಿ ಹಣೆಗೆ ಕುಂಕುಮದ ಬೊಟ್ಟಿಡುತ್ತೀಯ. ಹೂ ಹಾಸಿನ ಮೇಲೆ ನಿನ್ನ ಪಾದ ನಡೆದಾಡುತ್ತದೆ. ಹೂಗಳು ನಿನ್ನ ನೋಡಿ ನಾಚಿ ಘಮಿಸುತ್ತವೆ. ”ಎಲ್ಲಿಯ ಚೆಲುವು ನಿನ್ನದು?” ಎಂದು ತಲೆತಗ್ಗಿಸುತ್ತವೆ. ಮತ್ತೆ ಮುನ್ನಡೆಯುತ್ತೀಯ. ”ನಿಲ್ಲು”, ತಿರುಗಿ ನೋಡುತ್ತೀಯ. “ಮುಳ್ಳು ಚುಚ್ಚಿ ನಿನ್ನ ಪಾದ ಸ್ಪರ್ಶ ನಿಂತು ಹೋದೀತು” ಎಚ್ಚರಿಸುತ್ತದೆ ಆಕಾಶವಾಣಿ.
ನಸುನಗುತ್ತಲಿದ್ದನು ಅ೦ಬರದಲಿ ನೇಸರನು
ಹಕ್ಕಿಗಳೆಲ್ಲಾ ಬಿಟ್ಟಾಗ ತಮ್ಮ ಗೂಡನು
ಸುಮಾರು ಎಂಭತ್ತರ ದಶಕದ ಉತ್ತರಾರ್ಧದಲ್ಲಿ ಕರ್ನಾಟಕದ ಹಳ್ಳಿಗಳಂತಿದ್ದ ಊರೂರೂಗಳಲ್ಲೂ ಇಂಗ್ಲೀಷ್ ಮೀಡಿಯಂ ಸ್ಕೂಲುಗಳು ಅಣಬೆಗಳಂತೆ ಹುಟ್ಟಿಕೊಂಡವು. ಇನ್ನೂ ಮೊಲೆ ಚೀಪುತ್ತಿದ್ದ ಕಂದಮ್ಮಗಳನ್ನೂ ಎಲ್ಕೆಜಿ ಎಂಬ ಮಾಯಕದ ಬೇಬಿಸಿಟ್ಟರ್ಗಳಿಗೆ ಅವುಗಳ ಪುಟ್ಟ ಹೂವಿನಂಥ ಪಾದಗಳಿಗೆ ಶೂಸುಗಳನ್ನು ಬಿಗಿದು, ಕೊರಳಿಗೆ ಟೈ ಜೋತು ಬಿಟ್ಟು ಗರಿಗರಿಯಾದ ಯೂನಿಫಾರಂ ತೊಡಿಸಿ ಮನೆ ಬಾಗಿಲಿಗೇ ಬರುವ ಬಸ್ಸುಗಳಲ್ಲಿ ತುಂಬಿ ಕಳಿಸುವ, ಕಳಿಸಿ ಅನನ್ಯ ಧನ್ಯತಾ ಭಾವದಿಂದ ಎದೆಯುಬ್ಬಿಸಿ ಹಿಗ್ಗುವ ತಂದೆ ತಾಯಿಗಳು, ಅಲ್ಲಲ್ಲ, ಡ್ಯಾಡೀ ಮಮ್ಮಿಗಳು ರಸ್ತೆಯಂಚಿನಲ್ಲಿ ಕಂಡುಬರತೊಡಗಿದ್ದರು. ಮುಂದೆ ಇವರೆಲ್ಲ ತಮ್ಮ ಮಕ್ಕಳ ಹೋಂ ವರ್ಕು, ಟ್ಯೂಷನ್ನು, ಎಪ್ಲಸ್ಸು ಬಿಮೈನಸ್ಸು ರ್ಯಾಂಕಿಂಗ್ಗಳಲ್ಲಿ ಕಳೆದು ಹೋದ ಬಗೆಯೇ ಒಂದು ಕನಸಿನಂತಿದೆ! ಕ್ರಮೇಣ ಸರಿಯಾದ ಸವಲತ್ತು, ಪರಿಕರಗಳು, ಪೀಠೋಪಕರಣಗಳು, ಉಪಾಧ್ಯಾಯರುಗಳಿಲ್ಲದೆ ದೊಡ್ಡಿಯಂತಾಗಿದ್ದ ಸರಕಾರೀ ಶಾಲೆಗಳಿಗೆ ಹಾಜರಾತಿಯೇ ಇಲ್ಲದ ಸ್ಥಿತಿ ಬಂತು. ಅಲ್ಲಿಂದೀಚೆಗೆ ನಮ್ಮ ಸರಕಾರಗಳು ಈ ಶಾಲೆಗಳ ಆಕರ್ಷಣೆ ಹೆಚ್ಚಿಸಲು ತರಹೇವಾರೀ ರಂಗಿನಾಟಗಳನ್ನು ಆಡುತ್ತ ಬಂದಿರುವುದು ನಮಗೆಲ್ಲ ಗೊತ್ತಿರುವ ಸಂಗತಿಯೇ. ಅಂಥವುಗಳ ಸಾಲಿಗೇ ಸೇರಿದ ಹೊಸ ಯೋಜನೆ, ಒಂದನೆಯ ತರಗತಿಯಿಂದಲೇ ಇಂಗ್ಲೀಷ್!
'ಕಾಲ ಘೋಡ ಆರ್ಟ್ಸ್ ಫೆಸ್ಟಿವಲ್' ೧೯೯೯, ರಿಂದ ಪ್ರತಿವರ್ಷವೂ ನಡೆದುಕೊಂಡು ಬರುತ್ತಲಿದೆ. ಇಲ್ಲಿ ಸಂಗೀತ, ನೃತ್ಯ, ಭಾಷಣ, ಸ್ಪರ್ಧೆಗಳು, ವಸ್ತುಪ್ರದರ್ಶನಗಳು, ಬೆಳಿಗ್ಯೆ ೯ ರಿಂದ ರಾತ್ರಿ ೮-೩೦ ರವರೆಗೆ, ಮತ್ತು ಆಮೇಲೂ ಇರುತ್ತವೆ. ಪ್ರವೇಶ ಉಚಿತ. ಬನ್ನಿ ಆನಂದಿಸಿ. ನೀವೂ ಸ್ಪರ್ಧಗಳಲ್ಲಿ ಭಾಗವಹಿಸಬಹುದು.
ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗ ಕನ್ನಡದ ಮಹತ್ವದ ಕೃತಿಗಳಲ್ಲೊಂದು. ರಾಷ್ಟ್ರಕವಿ ಕುವೆಂಪು ಅವರು ಕಗ್ಗವನ್ನು ಕುರಿತು ಹೇಳಿದ ಈ ಮಾತುಗಳು ಅದರ ಸತ್ವಕ್ಕೆ ಹಿಡಿದ ಕನ್ನಡಿಯೆನ್ನಬಹುದು.
ಹಸ್ತಕ್ಕೆ ಬರಿ ನಕ್ಕೆ; ಓದುತ್ತ ಓದುತ್ತ
ಮಸ್ತಕಕ್ಕಿಟ್ಟು ಗಂಭೀರವಾದೆ
ವಿಸ್ತರದ ದರ್ಶನಕೆ ತುತ್ತತುದಿಯಲಿ ನಿನ್ನ
ಪುಸ್ತಕಕೆ ಕೈಮುಗಿದೆ - ಮಂಕುತಿಮ್ಮ || (ಕುವೆಂಪು)
ಕನ್ನಡ ಸಾಹಿತ್ಯದಲ್ಲಿ ಆಸಕ್ತಿಯಿರುವವರೆಲ್ಲರೂ ಒಂದಲ್ಲ ಒಂದು ಬಾರಿ "ಕಗ್ಗ"ವನ್ನು ಎಡತಾಕಿರುತ್ತೇವೆ. ಒಳ್ಳೆಯ "ಜೀವನ ದರ್ಶನ"ವಾಗಿಯೋ, ಇಲ್ಲವೇ ಉತ್ತಮ ಸಾಹಿತ್ಯ ಕೃತಿಯಾಗಿಯೋ, ಕಗ್ಗ ನಮ್ಮೆಲ್ಲರ ಬಾಳಿನಲ್ಲಿ ಒಮ್ಮೆಯಾದರೂ ಸುಳಿದಾಡಿರುತ್ತದೆ. ನಾನು ಹಲವಾರು ಬಾರಿ ಸ್ವತಂತ್ರವಾಗಿ (ಬೇರೆ ಯಾವುದೇ ಸಹಾಯವಿಲ್ಲದೆ), ನಿಘಂಟನ್ನು ಪಕ್ಕದಲ್ಲಿಟ್ಟುಕೊಂಡು, "ಮಂಕುತಿಮ್ಮನ ಕಗ್ಗ"ವನ್ನು ಓದುವ ಪ್ರಯತ್ನ ಮಾಡಿದ್ದೆ. ಆದರೆ ಪ್ರತಿ ಬಾರಿಯೂ "ಯಾಕೋ ಇದರ ಸಂಪೂರ್ಣ ಭಾವ ನನ್ನ ಗ್ರಹಿಕೆಗೆ ಸಿಗುತ್ತಿಲ್ಲ" ಎನ್ನುವ ನಿರಾಶೆ ನನ್ನನ್ನು ಕಾಡುತ್ತಿತ್ತು. ನಿಮ್ಮಲ್ಲೂ ಎಷ್ಟೋ ಜನರಿಗೆ ಹೀಗೆ ಅನ್ನಿಸಿರಬಹುದು ಅಲ್ಲವೇ? ಎಷ್ಟೋ ಬಾರಿ ಕಗ್ಗದಿಂದ ಪದ್ಯವೊಂದನ್ನು ಅದರ ಪೂರ್ಣ ಭಾವಾರ್ಥ ತಿಳಿಯದೆಯೇ ಬಳಸುವಾಗ, ಮನಸ್ಸಿನ ಒಂದು ಮೂಲೆಯಲ್ಲಿ, "ಈ ಪದ್ಯ ನನಗೆ ನಿಜವಾಗಿಯೂ ಅರ್ಥವಾಗಿದ್ದಲ್ಲಿ ಇನ್ನೂ ಎಷ್ಟು ಚೆನ್ನಾಗಿರುತ್ತಿತ್ತು!" ಅನ್ನಿಸುವುದು ಸಹಜ. ಈಗ್ಗೆ ಏಳೆಂಟು ತಿಂಗಳಿಂದ "ಕಗ್ಗಕ್ಕೊಂದು ಕೈಪಿಡಿ"ಯೆಂಬ ಕೈಪಿಡಿಯ (ಗೈಡ್) ಬೆಳಕಿನಲ್ಲಿ "ತಿಮ್ಮಗುರು"ವನ್ನು ನೋಡುವ, ಸಾಧ್ಯವಾದಷ್ಟೂ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿದೆ. ಬಹಳ ಉಪಯೋಗವಾಯಿತು ಎಂದು ನನಗನ್ನಿಸಿತು. ಕಗ್ಗವನ್ನು "ಓದಿದ ಸುಖ" ನನ್ನದಾಯಿತು. ಈ ಪುಸ್ತಕದ ಬಗ್ಗೆ ಪರಿಚಯ ಬರೆಯೋಣ; ಆಕಸ್ಮಾತ್ ನನಗೆ ಉಪಯೋಗವಾದಂತೆ ಇನ್ನೂ ಯಾರಿಗಾದರೂ ಆಗುವುದಾದಲ್ಲಿ ಆಗಲಿ ಅಂತ ಈ ಪ್ರಯತ್ನ.
ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗ ಕನ್ನಡದ ಮಹತ್ವದ ಕೃತಿಗಳಲ್ಲೊಂದು. ರಾಷ್ಟ್ರಕವಿ ಕುವೆಂಪು ಅವರು ಕಗ್ಗವನ್ನು ಕುರಿತು ಹೇಳಿದ ಈ ಮಾತುಗಳು ಅದರ ಸತ್ವಕ್ಕೆ ಹಿಡಿದ ಕನ್ನಡಿಯೆನ್ನಬಹುದು.
ಹಸ್ತಕ್ಕೆ ಬರಿ ನಕ್ಕೆ; ಓದುತ್ತ ಓದುತ್ತ
ಮಸ್ತಕಕ್ಕಿಟ್ಟು ಗಂಭೀರವಾದೆ
ವಿಸ್ತರದ ದರ್ಶನಕೆ ತುತ್ತತುದಿಯಲಿ ನಿನ್ನ
ಪುಸ್ತಕಕೆ ಕೈಮುಗಿದೆ - ಮಂಕುತಿಮ್ಮ || (ಕುವೆಂಪು)
ಸರತಿಯ ಸಾಲಲ್ಲಿ...
ಮರ ಗಿಡ ಸುತ್ತಿ ಸುತ್ತಿ
ಹಾಡಿ ಕುಣಿದು
ದಣಿದು... ಸಲ್
ಮಾನವಂತೆ
ಮದುವೆಯ ಮನ ಮಾಡಿದ
ವಿವೇಕವಂತೆ
ಐಶ್ವರ್ಯಾಗೆ
ಮೊದಲು ಸಿಕ್ಕಿದ್ದು
ಮರ... ಗಿಡ
ಆಮೇಲೆ ಗುರು... ವಿನ
ಬಂಡಿ ಹತ್ತಿದ್ದ
ವರ... ನೊಡನೆ
ಧಾರೆ ಅಭಿಶೇಕವಂತೆ...
- ಗೋಪೀನಾಥ ರಾವ್
ಕಾಲ, ದೇಶದ ಪ್ರಜ್ಞೆ ಇಲ್ಲ, ಯುಕ್ತಾಯುಕ್ತ ವಿವೇಚನೆಯೂ ಇಲ್ಲ. ಸಾಮಾನ್ಯರ ಭಾವುಕತೆಯನ್ನು ಬಂಡವಾಳ ಮಾಡಿಕೊಂಡು ಬದುಕುವ ಒಂದು ದುಷ್ಟ ವರ್ಗ ತಲೆಯೆತ್ತುತ್ತಿದೆ. ಭಾವುಕ ಮಂದಿ ಉಘೇ ಉಘೇ ಎನ್ನುತ್ತಿದೆ. ಇದು ಇವತ್ತಿನ ನಮ್ಮ ಸ್ಥಿತಿ.