ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ
ಹೀಗೊಬ್ಬ ಪ್ರಾಮಾಣಿಕ ಬಸವರಾಜ: ವಾಚನಾಭಿರುಚಿ ಶಿಬಿರದ ಒಂದು ಘಟನೆ
ಸೆಪ್ಟೆಂಬರ್ ೨೭, ೨೦೦೫.
ಚಿತ್ರದುರ್ಗದ ಸರ್ಕಾರೀ ಕಲಾ ಕಾಲೇಜಿನಲ್ಲಿ ಒಂದು ಕಾರ್ಯಕ್ರಮ.
ಪುಸ್ತಕಪ್ರಾಧಿಕಾರ ಏರ್ಪಡಿಸಿದ್ದ ವಾಚನಾಭಿರುಚಿ ಶಿಬಿರ. ಭಾಗವಹಿಸಿದ್ದವರು ಚಿತ್ರದುರ್ಗ ಜಿಲ್ಲೆಯ ವಿವಿಧ ಕಾಲೇಜುಗಳಿಂದ ಬಂದಿದ್ದ ಸುಮಾರು ನೂರು ಮಂದಿ ವಿದ್ಯಾರ್ಥಿಗಳು.
ಚೈತ್ರದ ಸೊಬಗು
ಚೈತ್ರ ಬಂದಿದೆ..
ಚಿತ್ತಾರ ಬರೆದಿದೆ..
ಆಹಾ..ಕಲಾಕಾರನೆಂದರೆ ಇವನೇ....
ಮಹಾಕಲಾವಿದ...ಮಹಾ ಕೋವಿದ...
- Read more about ಚೈತ್ರದ ಸೊಬಗು
- Log in or register to post comments
ಮುಂಬಯಿ ಪೋಲೀಸರ ಕಾರ್ಯವೈಖರಿ
ಮೊನ್ನೆ ತಾನೆ ಮುಂಬಯಿಗೆ ಭೇಟಿ ನೀಡಿದ್ದೆ. ವಿಮಾನ ನಿಲ್ದಾಣದ ಸಮೀಪ ಇರುವ ಪಂಚತಾರಾ ಹೋಟೆಲಿನ ಎದುರುಗಡೆಯ ರಸ್ತೆಯಲ್ಲಿ ಒಂದು ಟ್ಯಾಕ್ಸಿ ಹಿಡಿದೆ. ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ಗೆ ಹೋಗಬೇಕಿತ್ತು. ಚಾಲಕ, ಬಹುಶಃ ಪಂಚತಾರಾ ಹೋಟೆಲಿನ ಎದುರುಗಡೆಯಿಂದ ಟ್ಯಾಕ್ಸಿ ಹಿಡಿದುದಕ್ಕೆ ಇರಬೇಕು, “ನೂರು ರೂಪಾಯಿ ಆಗುತ್ತದೆ” ಎಂದ. ನಾನು “ಮೀಟರು ಪ್ರಕಾರ ಬರುವುದಿದ್ದರೆ ಮಾತ್ರ ಬಾ. ಇಲ್ಲದಿದ್ದರೆ ಬೇರೆ ಟ್ಯಾಕ್ಸಿ ಹಿಡಿಯುತ್ತೇನೆ” ಎಂದು ಹೇಳಿ ಟ್ಯಾಕ್ಸಿಯಿಂದ ಇಳಿಯಲು ಅನುವಾದೆ. ಆತ ಕೂಡಲೆ ವರಸೆ ಬದಲಿಸಿ “ಕುಳಿತುಕೊಳ್ಳಿ, ಕರೆದುಕೊಂಡು ಹೋಗುತ್ತೇನೆ” ಎಂದು ಹೇಳಿ ನನಗೆ ಬೇಕಾದಲ್ಲಿಗೆ ಕರೆದುಕೊಂಡು ಹೋದ. ಅಲ್ಲಿ ಇಳಿದಾಗ ಪುನ ನೂರು ರೂಪಾಯಿ ಕೊಡಲು ಒತ್ತಾಯಿಸಿದ. ಮೀಟರಿನಲ್ಲಿ ಎಪ್ಪತ್ತು ರೂ ಆಗಿತ್ತು. ನಾನು ನೂರು ರೂ ಕೊಡಲು ಒಪ್ಪಲಿಲ್ಲ. ಎಪ್ಪತ್ತು ರೂ ಮಾತ್ರ ಕೊಡುತ್ತೇನೆ ಎಂದು ಹೇಳಿ, ನನ್ನಲ್ಲಿ ಚಿಲ್ಲರೆ ಇಲ್ಲದಿದ್ದ ಪ್ರಯುಕ್ತ ನೂರು ರೂಪಾಯಿನ ನೋಟು ನೀಡಿದೆ. ಆತ ಟ್ಯಾಕ್ಸಿ ಹೊರಡಿಸಲು ಅನುವಾದ. ಬಾಕಿ ಮೂವತ್ತು ರೂ ಕೇಳಿದರೆ “ಬೇಕಿದ್ದರೆ ಪೋಲೀಸ್ ಸ್ಟೇಶನ್ನಿಗೆ ಹೋಗಿ ಕೇಳು” ಎಂದು ದಬಾಯಿಸಿ ಟ್ಯಾಕ್ಸಿಯನ್ನು ಓಡಿಸಿಕೊಂಡು ಹೋದ. ಅಲ್ಲಿ ನಾನು ಹೋಗಬೇಕಾಗಿದ್ದ ಕಂಪೆನಿಯಲ್ಲಿ ನನ್ನ ಕೆಲಸ ಆದ ಬಳಿಕ ಸಮೀಪದಲ್ಲೇ ಇದ್ದ ಪೋಲೀಸ್ ಠಾಣೆಗೆ ಹೋಗಿ ಕಥೆ ಪೂರ್ತಿ ಹೇಳಿ ಟ್ಯಾಕ್ಸಿಯ ನಂಬರ್ ಬರೆದುಕೊಂಡಿದ್ದ ಕಾಗದದ ಚೂರನ್ನು ನೀಡಿದೆ. ಆತ ಆ ಕಾಗದವನ್ನು ಕಿಸೆಗೆ ಹಾಕಿಕೊಂಡು “ಈಗ ನಿಮಗೆ ಮೂವತ್ತು ರೂ ಬರಬೇಕು, ಅಷ್ಟೆ ತಾನೆ” ಎಂದು ಹೇಳಿ ಕಿಸೆಯಿಂದ ಮೂವತ್ತು ರೂ ತೆಗೆದು ನೀಡಿದ. ನನಗೆ ಆಶ್ಚರ್ಯವಾಯಿತು. “ನೀವು ಯಾಕೆ ಕೊಡುತ್ತಿದ್ದೀರಾ?” ಎಂದು ಪ್ರಶ್ನಿಸಿದೆ. ಆತ “ಈ ಟ್ಯಾಕ್ಸಿ ಡ್ರೈವರ್ ಇಲ್ಲೇ ಸುತ್ತಾಡುತ್ತಿರುತ್ತಾನೆ. ನಮಗೆ ಸಿಕ್ಕೇ ಸಿಗುತ್ತಾನೆ. ಆತನ ಕೈಯಿಂದ ನಾವು ವಸೂಲು ಮಾಡಿಕೊಳ್ಳುತ್ತೇವೆ. ಈಗ ನೀವು ಇಲ್ಲಿಂದ ಹೋಗಬಹುದು” ಎಂದ! ಬೆಂಗಳೂರಿನಲ್ಲಿ ರಿಕ್ಷಾ ಡ್ರೈವರುಗಳ ವಿರುದ್ಧ ಪೋಲೀಸರಿಗೆ ದೂರು ನೀಡಲು ಪ್ರಯತ್ನಿಸಿದ್ದೀರಾ?
- Read more about ಮುಂಬಯಿ ಪೋಲೀಸರ ಕಾರ್ಯವೈಖರಿ
- 4 comments
- Log in or register to post comments
ಅಕ್ಚ್ಯುಲ್ ಲಕ್ಷ್ಮೀ !!
ಕುಬೇರಪ್ಪ ಕುಬೇರಪ್ಪಾ...
ಲಕ್ಷ್ಮೀ ಪೂಜೆ ಮಾಡ್ದಾ..?
ಮಾಡೇ ಇರ್ತಿಯಾ ಬಿಡು ದೇವರ ಗೂಡಲ್ಲಿ ಐವತ್ತೋ, ನೂರೋ ರೂಪಾಯಿ ಇಟ್ಟು....
- Read more about ಅಕ್ಚ್ಯುಲ್ ಲಕ್ಷ್ಮೀ !!
- Log in or register to post comments
ಗ್ರಹಣದಲ್ಲಿ ಗರಿಕೆ ಹುಲ್ಲು
ನಮ್ಮ ಕಡೆ (ಮಂಗಳೂರು ಸುತ್ತ ಮುತ್ತ) ಸೂರ್ಯ ಗ್ರಹಣದ ಸಮಯದಲ್ಲಿ ಉಳಿದ ಆಹಾರ (ಅನ್ನ ಪಲ್ಯ)ಕ್ಕೆ ಗರಿಕೆ ಹುಲ್ಲನ್ನು ಹಾಕಿ ಇಡುತ್ತಾರೆ.. ಬಾವಿಗೂ ಹಾಕುವ ಕ್ರಮ ಇದೆ.. ಈ ಗರಿಕೆ ಹುಲ್ಲಿನ ಹಿಂದಿರುವ ವೈಜ್ಞಾನಿಕ ಸತ್ಯವೇನೆಂದು ನನಗೆ ಇದುವರೆಗೂ ತಿಳಿದಿಲ್ಲ.. ಯಾರಿಗಾದರೂ ತಿಳಿದಿದೆಯೇ. ಹಿಂದಿನವರು ಏನಾದರೂ ಕಾರಣವಿರದೆ ಇದನ್ನು ಪಾಲಿಸಲಾರರು ಎಂಬುವುದೇ ನನ್ನ ನಂಬಿಕೆ.
- Read more about ಗ್ರಹಣದಲ್ಲಿ ಗರಿಕೆ ಹುಲ್ಲು
- 4 comments
- Log in or register to post comments
ಪದಕಮಾನು-ಹೊಸ ಓದಿನ ದಾರಿ
ಸುದರ್ಶನ
ತುಂಬ ದಿನಗಳ ನಂತರ- ಹೀಗೆ ನೋಡುತ್ತಿದ್ದೇನೆ
ಉಪಯುಕ್ತವಾದ ಲೇಖನಕ್ಕಾಗಿ ಅಭಿನಂದನೆ
- Read more about ಪದಕಮಾನು-ಹೊಸ ಓದಿನ ದಾರಿ
- 1 comment
- Log in or register to post comments
ದೇವನೆಲ್ಲಿ?
ದೇವನಿಹನು ಎಲ್ಲಿ?
ನನ್ನಲ್ಲಿ ನಿನ್ನಲ್ಲಿ ದೇಗುಲದಲ್ಲಿ?
ಅವನಿಗೆಂದು ಹುಡುಕಿದರು ವಾಸ್ತುಪ್ರಕಾರದ ತಾಣ
- Read more about ದೇವನೆಲ್ಲಿ?
- Log in or register to post comments
ಭಾರತಕ್ಕಾಗಿ ಕಡಿಮೆ ಬೆಲೆಯ ವಿಂಡೋಸ್ ತಂತ್ರಾಂಶ
(ಅರುಣ್ ಶರ್ಮರವರ ಬ್ಲಾಗಿನಿಂದ)
ಮೈಕ್ರೊಸಾಫ್ಟ್ ಭಾರತಕ್ಕಾಗಿಯೇ ಒಂದು ಕಡಿಮೆ ಬೆಲೆಯ ವಿಂಡೋಸ್ ತಂತ್ರಾಂಶ ತರಲಿದೆ ಎಂದು [:http://news.yahoo.com/s/nm/20051001/tc_nm/india_microsoft_dc|ಯಾಹೂ ವರದಿ ಮಾಡಿದೆ]. ಹೊರದೇಶದಲ್ಲಿ ತುಟ್ಟಿಯಾದ ಪುಸ್ತಕಗಳು ಭಾರತದಲ್ಲಿ ಕಡೆಮೆ ಬೆಲೆಗೆ ಲಭ್ಯವಿರುವಂತೆ ಇದೂ ಕೂಡ ಎನ್ನುತ್ತದೆ, ವರದಿ.
- Read more about ಭಾರತಕ್ಕಾಗಿ ಕಡಿಮೆ ಬೆಲೆಯ ವಿಂಡೋಸ್ ತಂತ್ರಾಂಶ
- Log in or register to post comments
ನನ್ನವಳು
ಸೂರ್ಯಕಾಂತಿ ಅರಳುವುದು ರವಿಯ ಕಿರಣದಿಂದ
ರೂಪ ಲಾವಣ್ಯದ ಹೂ ಬಿರಿಯುವುದು
ಈಕೆಯ ಕಿರು ನಗೆಯಿಂದ
- Read more about ನನ್ನವಳು
- 1 comment
- Log in or register to post comments