ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಇನ್ನೊಂದು ಹಿಡಿ ಹುರಿಗಾಳು

11) ಶಿಲೆಯಲ್ಲಿ ಆನೆಯನ್ನು ಕೆತ್ತುವ ಅತಿ ಸುಲಭ ವಿಧಾನ: ದೊಡ್ಡ ಅಮೃತಶಿಲೆಯನ್ನು ತೆಗೆದುಕೊಳ್ಳಿ. ಅದರಲ್ಲಿ ಆನೆಯಂತೆ ಕಾಣದಿರುವ ಭಾಗವನ್ನೆಲ್ಲ ಕೆತ್ತಿ ತೆಗೆದುಬಿಡಿ.

ಝೆನ್: ಕೆಲವು ಉಪದೇಶಗಳು: ನಿರ್ಲಿಪ್ತಿ

ತಾಂಗ್ ವಂಶದವರ ಆಳ್ವಿಕೆಯ ಕಾಲದಲ್ಲಿದ್ದ ಝೆನ್ ಗುರು ಝೆನ್‌ಗೆಟ್ಸು ತನ್ನ ಶಿಷ್ಯರಿಗೆ ಹೀಗೆ ಉಪದೇಶಗಳನ್ನು ಮಾಡಿದ:

ಝೆನ್ ಕಥೆ: ೨೮ ಮೌನ

ಝೆನ್ ಇನ್ನೂ ಜಪಾನಿನಲ್ಲಿ ಪರಿಚಯಗೊಳ್ಳುವ ಮುನ್ನ ತೆಂಡೈ ಪಂಥದ ನಾಲ್ವರು ವಿದ್ಯಾರ್ಥಿಗಳು ಧ್ಯಾನವನ್ನು ಅಭ್ಯಾಸ ಮಾಡುತ್ತಿದ್ದರು. ಅವರು ನಾಲ್ಕು ಜನರೂ ಆತ್ಮೀಯ ಸ್ನೇಹಿತರು. ಏಳು ದಿನಗಳ ಕಾಲ ಮೌನವನ್ನು ಪಾಲಿಸಬೇಕೆಂದು ನಿರ್ಧರಿಸಿದರು.

ಝೆನ್ ಕತೆ: ೨೭ ಬದಲಾವಣೆ

ಗುರು ರ್ಯೋಕಾನ್ ತನ್ನ ಇಡೀ ಜೀವಿತವನ್ನು ಝೆನ್ ಅಭ್ಯಾಸದಲ್ಲಿ ಕಳೆದಿದ್ದ. ಒಂದು ದಿನ ತನ್ನ ಸೋದರಳಿಯ ವೇಶ್ಯೆಯೊಬ್ಬಳ ಸಹವಾಸಕ್ಕೆ ಬಿದ್ದಿದ್ದಾನೆ, ಸಂಪತ್ತನ್ನೆಲ್ಲ ಹಾಳು ಮಾಡುತ್ತಿದ್ದಾನೆ ಎಂದು ತಿಳಿಯಿತು. ಬಂಧುಗಳೆಲ್ಲ ಬಂದು ರ್ಯೋಕಾನ್ ತನ್ನ ಸೋದರಳಿಯನಿಗೆ ಬುದ್ಧಿ ಹೇಳದಿದ್ದರೆ ಕುಟುಂಬದ ಸಂಪತ್ತೆಲ್ಲ ನಾಶವಾಗುತ್ತದೆ ಎಂದು ಗೋಳಾಡಿದರು.

ಯೋಗಾಚಾರ್ಯರ ಅಮೇರಿಕಾಯಾತ್ರೆ

Yoga's Great Teacher Draws Crowds on Final U.S. Tour - New York Times

ಮೇಲಿನ ಕೊಂಡಿಯನ್ನು ನೀವು ಕ್ಲಿಕ್ಕಿಸಿದರೆ ಬೆಂಗಳೂರಿನ ಬಳಿಯ ಬೆಳ್ಳೂರಿನವರಾದ ಬಿ.ಕೆ.ಎಸ್.ಅಯ್ಯಂಗಾರ್ಯರ ಬಗ್ಗೆ ಇರುವ ನ್ಯೂಯಾರ್ಕ್ ಟೈಮ್ಸ್ ನ ಲೇಖನವನ್ನೋದಬಹುದು. ಅಯ್ಯಂಗಾರ್ಯರ ಹೆಸರು ಯೋಗಾಭ್ಯಾಸಿಗಳಿಗೆ ಮಾತ್ರವಲ್ಲ, ಯೋಗದ ಹೆಸರು ಕೇಳಿದ್ದವರಿಗೂ ಚಿರಪರಿಚಿತ. ಅವರ "ಯೋಗದೀಪಿಕೆ" (ಕನ್ನಡದಲ್ಲಿನ ಅನುವಾದ) ಬಹಳ ಒಳ್ಳೆಯ ಗ್ರಂಥ. (ನಮ್ಮ ಮನೆಯಲ್ಲಿದೆ. ನಾನು ಓದಿದ್ದೇನೆ. ಮಾಡಿ ನೋಡಿಲ್ಲ). ಅವರ ಗ್ರಂಥಗಳು ವಿಶ್ವವಿಖ್ಯಾತವಾದುವು. ಎಂಭತ್ತಾರು ವರ್ಷದ ಜ್ಞಾನವೃದ್ಧರಾದ ಇವರು ಹಲವು ಯುವಕರನ್ನು ನಾಚಿಸುವಂಥ ದೇಹಪಟುತ್ವವನ್ನು ಇನ್ನೂ ಉಳ್ಳವರು. ಯೋಗದ ಶಕ್ತಿ ಮತ್ತು ಮಹತ್ತ್ವಗಳ ಜೀವಂತ ಉದಾಹರಣೆಯೆಂದರೆ ಶ್ರೀ ಅಯ್ಯಂಗಾರ್ಯರೇ. ಇವರ ಅನುಯಾಯಿವರ್ಗ ಪ್ರಪಂಚದ ಪ್ರಮುಖರಿಂದ ಕೂಡಿದೆ. ಖ್ಯಾತ ವಯೊಲಿನ್ ವಾದಕರಾಗಿದ್ದ ಯಹೂದಿ ಮೆನೂಹಿನ್ ಅವರಿಗೂ ಇವರೇ ಯೋಗಾಚಾರ್ಯರು. ಈಗಲೂ ಫ್ಯಾಶನ್ ಪ್ರಪಂಚದ ಪ್ರಮುಖರು, ಸಿನಿಮಾ ತಾರೆಯರು ಇವರ ಶಿಷ್ಯರೆಂದು ತಮ್ಮನ್ನು ಏಣಿಸಿಕೊಳ್ಳುತ್ತಾರೆ. ಕಳೆದ ಹನ್ನೆರಡು ವರ್ಷಗಳಲ್ಲಿ ಮಾನ್ಯರ ಮೊದಲನೆಯ ಅಮೇರಿಕಾ ಯಾತ್ರೆ ಅವರ ಕೊನೆಯ ಅಮೇರಿಕಾಯಾತ್ರೆಯೂ ಆಗಿದೆ ಎಂದು ಪತ್ರಿಕೆಯ ವರದಿ ತಿಳಿಸುತ್ತದೆ. ಹೆಚ್ಚಿನ್ನೇನು ಹೇಳಲಾರೆ. ಲೇಖನ ಓದಿ ನೋಡಿ. ಚೆನ್ನಾಗಿದೆ. ಇಂಥವರು ಕನ್ನಡಿಗರು, ನಮ್ಮವರು ಎನ್ನುವುದು ಹೆಮ್ಮಯ ವಿಷಯವಲ್ಲವೇ?

ಅಭಿವೃದ್ಧಿ: ನಮ್ಮಿಂದಲೇ, ನಮಗೋಸ್ಕರವೇ ನಮ್ಮಲ್ಲಿಯೇ

ಮುಕ್ತ ಮಾರುಕಟ್ಟೆಗಳು ಮತ್ತು ಜಾಗತೀಕರಣದಿಂದ ಇಂದು ಸಾವಿರಾರು ಕೆಲಸಗಳು ಅಮೇರಿಕಾ ದೇಶದ ಕೈ ತಪ್ಪಿವೆ. ಭಾರತ, ಚೀನ ಮೆಕ್ಸಿಕೋದಂತಹ ಹಲವು ದೇಶಗಳಲ್ಲಿ ಈ ಬೆಳವಣಿಗೆಗಳಿಂದಾಗಿ ಹಲವಾರು ಜನಕ್ಕೆ ಕೆಲಸಗಳು ಸಿಕ್ಕಿವೆ. ಈ ಪ್ರಕ್ರಿಯೆಯಲ್ಲಿ ಕೆಲಸ ಕಳೆದುಕೊಂಡ ಅಮೇರಿಕಾದ ಜನರ ವಿಚಾರವಾಗಿ ಹೆಚ್ಚಾಗಿ ತಿಳಿದಿಲ್ಲ. ಮೊದಲು manufacturing ವಲಯದಲ್ಲಿ ಬಹಳ ಪ್ರಸಿದ್ಧವಾಗಿದ್ದ ಸಣ್ಣ ಸಣ್ಣ ನಗರಗಳು ಇಂದು ಯಾವ ಚಟುವಟಿಕೆಗಳಿಲ್ಲದೇ ಪಾಳು ಬಿದ್ದಿವೆ. ಕೆಲಸ ಕಳೆದುಕೊಂಡ ಜನರು ದೊಡ್ಡ ನಗರಗಳಿಗೆ ವಲಸೆ ಹೋಗಿದ್ದಾರೆ ಅಥವ ಸರ್ಕಾರದ welfare ಯೋಜನೆಗಳ ಆಶ್ರಯ ಪಡೆದಿದ್ದಾರೆ. ಉದಾಹರಣೆಗೆ: ನೇಯ್ಗೆ ಮುಂತಾದ ದೊಡ್ಡ ದೊಡ್ಡ ಕೈಗಾರಿಕೆಗಳಿದ್ದಂತಹ ನಗರಗಳು. ಅವರ ಕೆಲಸಗಳು ಮೆಕ್ಸಿಕೋ ಚೀನ ಭಾರತಗಳಿಗೆ, ಕ್ಯಾಲಿಫೋರ್ನಿಯಾದ ಅಕ್ರಮ ವಲಸೆಗಾರರ ಕಡಿಮೆ ಸಂಬಳದ ಮಿಲ್‍ಗಳ ವಶವಾಗಿವೆ. ಕೆಲಸ ಕಳೆದುಕೊಂಡ ಜನರಿಗೆ ಇನ್ನೂ ಉತ್ಕೃಷ್ಟವಾದ ಕೆಲಸ ಸಿಗುತ್ತದೆಯೆಂಬ ಆಶ್ವಾಸನೆ ಸುಳ್ಳಾಗಿದೆ.

ಶನಿಕಾಟ

ರಮಾಕಾಂತ ಬಿ.ಎಸ್.ಸಿ ಮುಗಿಸಿದ ನಂತರ ಕೆಲಸಕ್ಕಾಗಿ ಅಲ್ಲಿ ಇಲ್ಲಿ ಪ್ರಯತ್ನಿಸುತ್ತಿದ್ದ. ಎಲ್ಲೂ ಕೆಲಸ ಸಿಕ್ಕಿರಲಿಲ್ಲ. ಆಗ ಅವನ ಸೋದರಮಾವ ವಿಶ್ವನಾಥ ಅವನಿಗೆ ಸುಮ್ಮನೆ ಮನೆಯಲ್ಲಿ ಕುಳಿತಿರುವ ಬದಲು ಎಲ್.ಎಲ್.ಬಿ.ಯನ್ನಾದರೂ ಮಾಡು ಎಂದು ಹೇಳಿದರು. ರಮಾಕಾಂತ ಹಾಗೇ ಮಾಡಿದ. ಆದರೆ ಈ ಮಧ್ಯೆ ಅವನಿಗೆಲ್ಲೂ ಕೆಲಸ ಸಿಗಲಿಲ್ಲ. ವಿಶ್ವನಾಥರೇ ತಮ್ಮ ಸ್ನೇಹಿತ ಮಾರ್ಕಂಡೇಯ ಎಂಬ ಒಬ್ಬ ಪ್ರಸಿದ್ಧ ಲಾಯರಿನ ಹತ್ತಿರ ಅಸಿಸ್ಟೆಂಟ್ ಆಗಿ ಕೆಲಸ ಮಾಡಲು ಸೇರಿಸಿದರು. ಅದಕ್ಕೆ ಪ್ರತಿಯಾಗಿ ತನ್ನ ಮಗಳು ಮನೋರಮೆಯನ್ನು ಮದುವೆಯಾಗಲು ಕೇಳಿಕೊಂಡರು. ಈ ಪ್ರಸ್ತಾಪಕ್ಕೆ ರಮಾಕಾಂತ ಇಲ್ಲ ಎನ್ನಲಾಗಲಿಲ್ಲ.

ಯಕ್ಷ ಪ್ರಶ್ನೆ equivalent!

'ಸಂಪದ'ವೆಂಬಂತಹ ಒಂದು ವೆಬ್ಸೈಟ್ ಪ್ರಾರಭಿಸಬೇಕೆಂಬುದು ನನ್ನ ಉದ್ದೇಶವಾಗಿರಲ್ಲಿಲ್ಲವಾದರೂ ಹೇಗು ಹೇಗೋ ಹೀಗೊಂದು ತಾಣವಾಗಿ ಹೋಯ್ತು. ನಿಮ್ಮಲ್ಲಿ ಯಾರಿಗಾದ್ರೂ 'ಯಾಕ್ ಹೀಗ್ ಮಾಡಿದ್ನೋ' ಅಂತ ಸಿಟ್ಟು ಇದ್ದರೆ ಇದರ ಉಗಮವಾಗುವಂತಿದ್ದ 'ವಿಧಿ'ಗೆ ಬೈದುಕೊಳ್ಳಿ. ಅಥವಾ “'ಯುನಿಕೋಡ್'ಗೆ ನಿಮ್ಮ ತಾಣಗಳನ್ನು ಪರಿವರ್ತಿಸಿ" ಎಂದು ನಾನು ಗೋಗರಿದರೂ ಪರಿವರ್ತಿಸದ ವೆಬ್ಸೈಟುಗಳ ownerಗಳನ್ನ ಬೈದುಕೊಳ್ಳಿ. 'ಬಹಳ ಒಳ್ಳೆ ಕೆಲಸ ಮಾಡಿದಾನೆ, ಇವನಿಗೆ ಬಾಳ ಜೋಷ್' ಅನ್ನುವವರು ನಾನು ಅಂತಹ ಜೋಷ್ ಪಾರ್ಟಿನೂ ಅಲ್ಲ, ಅಂತಹ ದೊಡ್ಡ ಕೆಲಸವೇನೂ ಮಾಡಿಲ್ಲವೆಂಬುದನ್ನ ತಿಳಿಯಿರಿ :) ಸತ್ಯವೇನೆಂದರೆ, ನಾನೊಬ್ಬ ಶುದ್ಧ ಸೋಮಾರಿ. ಏನೋ ಕನ್ನಡದ ಬಗ್ಗೆ ಹುಚ್ಚು... ಕನ್ನಡ ಬರೆಯೋಕೆ, ಮಾತಾಡೋದಕ್ಕೆ ಸರಿಯಾಗಿ ಬರ್ದಿದ್ರೂ ಒಂದಷ್ಟು ಬರೆಯಬೇಕೆಂಬ ಹುಚ್ಚು.... ಓದಬೇಕೆಂಬ ಹುಚ್ಚು. ನನ್ನ ಕಂಪ್ಯೂಟರಿನಲ್ಲಿ, ನಾನುಪಯೋಗಿಸುವ 'ಲಿನಕ್ಸ್' ತಂತ್ರಾಂಶದಲ್ಲಿ ಕನ್ನಡ ನೋಡಬೇಕೆಂಬ ಹುಚ್ಚು. ಹೀಗಿದ್ದೂ, 'ಸಂಪದ'ದಲ್ಲಿರುವ ಹಲವರ ಪೈಕಿ ನನ್ನದು 'ಕಡಿಮೆ ಹುಚ್ಚು' ಎಂದೇ ಹೇಳಬಹುದು.