ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕಾವೇರಿ ತೀರ್ಪಿನ ಸತ್ಯಗಳು

CAUVERY VERDICT
Total water availability (per year) in Cauvery- 736 tmc to 740 tmc (in non-distress period)
Tamilnadu's Share 419 tmc Karnataka's Share 270 tmc Kerala's Share 30 tmc Puducherry's share7 tmc
Where it comes from
For TN For Karnataka For Kerala For Puducherry
TN will get 192 tmc from Karnataka The water available from Tala Cauvery to Biligundu (catchment area) belongs to Karnataka Karnataka has to give Tamilnadu has to give
The rest 227 tmc will come from its own catchment area.
As a last reparian state TN should leave 10 tmc of water in cauvery river, for environmental purpose
Why TN a winner Why Karnataka a loser
Based on Interim order, TN used to get 205 TMC of water from karnataka. Now it will get 192 TMC. But the fact is Earlier point of measurement was Mettur (TN), now it is Biligundlu (Karnataka border). The Catchment area between Biligundlu and Mettur generates additional 25 TMC. So TN effectively will get 217 TMC (12 TMC More) Firstly it has to give 12 TMC extra to TN compared to earlier days. Secondly Karnataka has very less ground water as it lies in upper basin of Cauvery.
TN has around 120 TMC of groundwater as TN lies in lower basin of cauvery. This fact is not taken into consideration for sharing by tribunal. Kerala cannot store water as there are no Dams in that part of Kerala. Karnataka was hoping to use that water till the time Kerala builds the Dam. But according to tribunal, Karnataka cannot use that also, That water also should be given to TamilNadu !
TN gets NE monsoon starting from October-December which fills Cauvery which it need not share. Water requested for drinking purpose by Karnataka was 30 TMC. But it received only 1.75 TMC.
Karnataka gets SE Monsoon between June - September, which fills cauvery and major part of that water is shared with TN. Karnataka has to release 60%-70% of 192 TMC of water during those months.
Karnataka is the only state which has got less share of water proportional to basin area compared to other states. This is inspite of karnataka having less groundwater.
State Basin-area Water
Karnataka 41.23% 36.49%
TN 55.27% 56.62%
Kerala 3.33% 4.05%
Puducherry 0.17% 0.95%
Although Cauvery river length is greater in Karnataka compared to TN, It has got less share
Karnataka requested for 465 TMC. It got only 270 TMC.
Karnataka has more drought area (63.8%) compared to TN (29.2%) in Cauvery basin. Still Karnataka got less water.

Hard disk ಗೌಡರ ಮೌನವೄತ ಮತ್ತು ಮಾಜಿಯ 'ಕಾವೇರಿ'ದ ಜೋಕು!!!!

ಕಾವೇರಿ ವಿಷಯದಲ್ಲಿ ಯಾರ್ ಯಾರು ಎಷ್ಟೆಷ್ಟು ಉಗ್ರವಾಗಿ ಖಂಡಿಸುತ್ತಿದ್ದಾರೆಂದು ಅವರವರೆ ವಿಷ್ಲೇಶಿಸಿಕೊಳ್ಳುತ್ತಿರುವ ಈ 'ಕಾವೇರಿ'ದ ಸಂದರ್ಭದಲ್ಲಿ, ಹಾಲಿ 'ಮಾಜಿ ಪ್ರಧಾನಮಂತ್ರಿ' Hard disk(H D) ದೇವೆಗೌಡರು ಮೌನ ವ್ರತ ಆಚರಿಸುವುದರ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆಯೆಂದು ತಿಳಿದು ಬಂದಿದೆ. ಆದರೆ ಇದನ್ನು ಅರ್ಥ ಮಾಡಿಕೊಳ್ಳದೆ 'ವೄತ್ತಿಪರ' ವಿರೋಧಿಗಳು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆಂದು ಗೌಡರು ತಮ್ಮ ಮೌನ ಹೇಳಿಕೆಯ ಮೂಲಕ ದೂರಿದ್ದಾರೆ.

ಈ ಮಧ್ಯೆ, ಕಾವೇರಿಗೆ ಸಂಬಂಧಿಸಿದ ಕರ್ನಾಟಕದೊಂದಿಗಿನ ತನ್ನ ವ್ಯಾಜ್ಯಕ್ಕೆ 'ಪರಿಹಾರ' ದೊರೆತ ನಂತರ ತಮಿಳುನಾಡಿನಲ್ಲಿ ಅಲ್ಲಿಯ ಮಾಜಿ ಮತ್ತು ಹಾಲಿ ಮುಖ್ಯ ಮಂತ್ರಿಗಳ ಮದ್ಯೆ ಇದೇ ವಿಷಯ ಹೋಸ ತಿರುವು ಪಡೆದುಕೊಂಡಿದೆ. ಕಾವೇರಿ ತೀರ್ಪು ತಮಗೆ ಸಮಾಧಾನ ತಂದಿಲ್ಲ ಎಂದು 'ಮಾಜಿ'ಯು ತರಲೆ ತೆಗೆದಿರುವುದಕ್ಕೆ 'ಹಾಲಿ'ಯು, " 'ದೊಡ್ಡ' ಜನರಿಗೆ ಎಷ್ಟು ಕೊಟ್ಟರು ಸಾಲುವುದಿಲ್ಲ. ಮಾಜಿಯ ತಗಾದೆಯನ್ನು ಜೋಕ್ ಆಗಿ ತೆಗೆದುಕೊಳ್ಳಿ" ಎಂದು ಪ್ರತಿಕ್ರಿಯಿಸಿದ್ದಾರೆ. ಇಲ್ಲಿ 'ದೊಡ್ಡ' ಪದವು ಮಾನಸಿಕ ಅರ್ಥದಲ್ಲಿ ಬಳಕೆಯಾಗಿದೆಯೋ ಅಥವ 'ದೈಹಿಕ' ಅರ್ಥದಲ್ಲಿ ಬಳಕೆಯಾಗಿದಿಯೋ ಎಂಬುದು ಇದುವರಗೆ ತಿಳಿದು ಬಂದಿಲ್ಲ.

ಬರಲಿದೆ, ಮಗದೊಂದು ಕನ್ನಡ ತಂತ್ರಾಂಶ...

ಇನ್ನು ಹದಿನೈದು ದಿನಗಳಲ್ಲಿ [:http://vijaykarnatakaepaper.com/pdf/2007/02/09/20070209a_015101003.jpg|ಕನ್ನಡಕ್ಕೆ ಮತ್ತೊಂದು ತಂತ್ರಾಂಶ ಬಿಡುಗಡೆಯಾಗಲಿದೆ] ಎಂದು ವಿಜಯಕರ್ನಾಟಕ ಇಂದು ವರದಿ ಮಾಡಿದೆ. ರಾಷ್ಟ್ರಕವಿ ಕುವೆಂಪುರವರ ಹೆಸರು ಹೊತ್ತ ಈ ಹೊಸ ತಂತ್ರಾಂಶ ಕೆಲವು ಹೊಸತುಗಳನ್ನ ನೀಡಲಿದೆಯಂತೆ.

ತಂತ್ರಾಂಶದ ಪ್ರಮುಖಗಳು (ಲೇಖನ ತಿಳಿಸುವಂತೆ):
* ನಾಲ್ಕು ಲಿಪಿಗಳಿಗೂ ಪರಿವರ್ತಕ (converter) - ನುಡಿ, ಬರಹ, ಶ್ರೀಲಿಪಿ
(ನಾಲ್ಕನೆಯದು ಲೇಖನದಲ್ಲಿ ಉಲ್ಲೇಖಿಸಿದ್ದು ಕಾಣಲಿಲ್ಲ - ಬಹುಶಃ 'ಪ್ರಜಾಮತ' ಅಥವ CRG ರವರ ಫಾರ್ಮ್ಯಾಟ್ ಇರಬೇಕು.)
* ಇನ್ನಾರು ತಿಂಗಳಲ್ಲಿ ಯೂನಿಕೋಡ್ ಬೆಂಬಲವೂ ಸೇರುವುದಂತೆ.

ಯೂನಿಕೋಡ್ ಬೆಂಬಲದೊಂದಿಗೆ ಈ ತಂತ್ರಾಂಶ ಈಗಲೇ ಹೊರಬರುವುದಿಲ್ಲವೆಂದು ಓದಿ ಬೇಸರವಾಯ್ತು. ಆದರೆ ಸಾಕಷ್ಟು ಸಕಾರಾತ್ಮಕ ಸವಲತ್ತುಗಳಿದ್ದಂತಿದೆ! ಕುತೂಹಲದಿಂದ ನಿರೀಕ್ಷಿಸೋಣ :)

ತಂತ್ರಾಂಶವನ್ನು ಅವರು [:http://www.gnu.org/copyleft/gpl.html|GPLನ ಅಡಿ ರಿಲೀಸ್ ಮಾಡಿದರೆ] ಉಳಿದವರೂ ಅದರ ಅಭಿವೃದ್ಧಿಯಲ್ಲಿ ಭಾಗವಹಿಸಬಹುದು.

hacker ಶಬ್ದದ ಬಗ್ಗೆ

hacker ಶಬ್ದ hackನಿಂದ ತಾನೇ? hackಗೆ to cut, slice, chop ಮುಂತಾದ ಅರ್ಥ ಇದೆ. one who modifies programs skillfully ಎಂದೂ ಇದೆ. ಧನಾತ್ಮಕ ಅರ್ಥ ಇದ್ದರೂ hacker ಶಬ್ದ ಬಳಸುವುದು ಮುಂದುವರಿದಿದೆ. ಅದೇ ಪ್ರೇರಣೆಯಿಂದ ಮುರುಕ ಶಬ್ದ ಬಳಸಿದರೆ ಹೇಗೆ ಎನ್ನುವುದು ವಿಚಾರ. hpn ಅವರು ಇದರ ಪರವಾಗಿಲ್ಲ. ಪರ್ಯಾಯ ಶಬ್ದಗಳ ಬಗ್ಗೆ ಸಲಹೆಗಳಿವೆಯೇ?

ಇ-ಲೋಕ-9 (9/2/2007)

ತಂತ್ರಾಂಶ ಸ್ವಾಮ್ಯಚೌರ್ಯ:ಶಿಕ್ಷಕನಿಗೆ ಶಿಕ್ಷೆ ಭೀತಿ
 ರಶ್ಯನ್ ಶಾಲಾ ಹೆಡ್‌ಮಾಸ್ತರರೋರ್ವರು ಸೈಬೀರಿಯಾದ ಜೈಲಿನ ಕಂಬಿ ಎಣಿಸುವ ಸಾಧ್ಯತೆ ನಿಚ್ಚಳವಾಗಿದೆ. ಅಲೆಕ್ಸಾಂಡರ್‍ ಹೆಸರಿನ ಈ ಶಿಕ್ಷಕ ನಮ್ಮ ಕೆಲ ಶಿಕ್ಷಕರಂತೆ ವಿದ್ಯಾರ್ಥಿನಯರಿಗೆ ಲೈಂಗಿಕ ಕಿರುಕುಳ ನೀಡಿದ ತಪ್ಪನ್ನೇನೂ ಮಾಡಿಲ್ಲ. ಆತ ಮೈಕ್ರೋಸಾಫ್ಟ್ ಕಂಪೆನಿಯ ಅನಧಿಕೃತ ತಂತ್ರಾಂಶಗಳನ್ನು ಶಾಲೆಯ ಕಂಪ್ಯೂಟರಿನಲ್ಲಿ ಅನುಸ್ಥಾಪಿಸಿ,ಮಕ್ಕಳಿಗೆ ಬೋಧಿಸುತ್ತಿದ್ದನಂತೆ. ಮೈಕ್ರೋಸಾಫ್ಟ್ ಕಂಪೆನಿಯು ಅನಧಿಕೃತ ತಂತ್ರಾಂಶ ಬಳಕೆಯ ಕಾರಣ ಕಂಪೆನಿಗೆ ಆಗುತ್ತಿರುವ ನಷ್ಟವನ್ನು ತಗ್ಗಿಸಲೋಸುಗ ನಡೆಸುತ್ತಿರುವ ತೀವ್ರ ಕ್ರಮಗಳ ಕಾರಣ ಸಿಕ್ಕಿ ಬಿದ್ದ.ಈಗಾತನ ಮೇಲೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು,ಸೈಬೀರಿಯಾದ ಕಾರಾಗೃಹದಲ್ಲಿ ಶಿಕ್ಷೆಯಾಗುವುದು ಸಂಭವನೀಯ.
 ಅಲೆಕ್ಸಾಂಡರ್‌ನ ಸಹಾಯಕ್ಕೆ ನೋಬೆಲ್ ಪ್ರಶಸ್ತಿ ವಿಜೇತ,ಸೋವಿಯತ್ ಯೂನಿಯನ್‌ನ ಮಾಜಿ ಅಧ್ಯಕ್ಷ ಗೊರ್ಬಚೆವ್ ಕೂಡಾ ಮುಂದೆ ಬಂದಿದ್ದಾರೆ. ಶಿಕ್ಷಕನ ಮೇಲೆ ಕರುಣೆ ತೋರಿ, ನ್ಯಾಯಾಲಯದ ದಾವೆಯನ್ನು ಹಿಂತೆಗೆಯುವಂತೆ ಅವರೀಗ ಕಂಪೆನಿಗೆ ಮನವಿ ಮಾಡಿದ್ದಾರೆ."ತಾನು ತಪ್ಪು ಮಾಡಿರುವುದರ ಅರಿವಿಲ್ಲದೆ ಶಿಕ್ಷಕ ಈ ತಪ್ಪು ಮಾಡಿದ್ದಾನೆ.ಆತನನ್ನು ಕ್ಷಮಿಸಿ. ಕಂಪೆನಿಯ ತಂತ್ರಾಂಶ ಅಭಿವೃದ್ಧಿ ಕಾರ್ಯ ಕಠಿನವೆಂಬ ಅರಿವು ನಮಗಿದೆ. ಮೈಕ್ರೋಸಾಫ್ಟ್ ಉತ್ಪನ್ನಗಳ ಬಳಕೆ ಮಾಡುತ್ತಿರುವ ರಶ್ಯನ್‌ರಿಗೆ ನಿಮ್ಮ ಕ್ಷಮೆ ಖುಷಿ ಕೊಟ್ಟು ಅದರ ಬಳಕೆ ಹೆಚ್ಚುವುದು ನಿಶ್ಚಿತ", ಎಂದು ಗೋರ್ಬಚೆವ್ ಹೇಳಿದ್ದಾರೆ.
 ಆದರೆ ಕಂಪೆನಿ ಪ್ರಕಟನೆ ನೀಡಿ, ಈ ಖಟ್ಲೆ ನ್ಯಾಯಾಲಯದಲ್ಲಿ ನಡೆಯುತ್ತಿರುವುದರಲ್ಲಿ ತನ್ನ ಪಾತ್ರವಿಲ್ಲವೆಂದು ಹೇಳಿದೆ.
 

ಉಡುಪಿ ಕನ್ನಡ ಸಾಹಿತ್ಯ ಸಮ್ಮೇಳನ-ಅಧ್ಯಕ್ಷತೆ ಮಹಿಳೆ ವಹಿಸಬೇಕೇ?

ಮುಂದಿನ ಸಾಹಿತ್ಯ ಸಮ್ಮೇಳನ ಉಡುಪಿಯಲ್ಲಿ ನಡೆಯುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಇದರ ಬೆನ್ನಿಗೇ ಸಮ್ಮೇಳನದ ಅಧ್ಯಕತೆ ಮಹಿಳೆ ವಹಿಸಬೇಕು ಎಂಬ ಬೇಡಿಕೆ ಬಂದಿದೆ. ಅಧ್ಯಕ್ಷತೆ ಅರ್ಹರಿಗೆ ಹೋಗಬೇಕೇ?ಅಥವಾ ಮಹಿಳೆ ಎಂಬ ಕಾರಣಕ್ಕೆ ಅರ್ಹತೆಯಿಲ್ಲವಾದರೂ ಯಾರಿಗಾದರೂ ಸಲ್ಲಬೇಕೇ? ಒಂದು ವೇಳೆ ಮಹಿಳೆಗೇ ಆ ಸ್ಠಾನ ಹೋದರೂ ಅದಕ್ಕೆ ಸೂಕ್ತ ವ್ಯಕ್ತಿ ಯಾರು?ಉಡುಪಿ-ಮಂಗಳೂರಿನವರಿಗೆ ಗೌರವ ಸಿಗಬೇಕೇ?ವೈದೇಹಿ,ಸಾರಾ ಅಬೂಬಕ್ಕರ್,ಭುವನೇಶ್ವರಿ ಹೆಗಡೆ,ವಸುಮತಿ ಉಡುಪ?ನಿಮ್ಮ ಆಯ್ಕೆ ಏನು?ಬರೆಯುವಿರಾ?

ಕಲೆಹಾಕಿ ಪದ್ಯ ಬರೆಯುವುದು

ಪದ್ಯ ಬರೆಯುವ ದಿನ ಬೆಳಗ್ಗೆ ಬೇಗ ಎದ್ದು ಹಲ್ಲುಜ್ಜಿ ಮುಖ ತೊಳೆಯುವಾಗ ಕನ್ನಡಿಯಲ್ಲಿ ನನ್ನ ಮುಖವನ್ನು ಒಂದು ಕ್ಷಣ ದಿಟ್ಟಿಸುತ್ತೀನಿ - ಯಾರಿದು ಅನ್ನೊ ಹಾಗೆ.

ಮರು ಜನ್ಮ - secondlife.com

ಕೆಲ ದಿನಗಳ ಹಿಂದೆ CNN ನಲ್ಲಿ ಈ ವೆಬ್-ಸೈಟ್ನ ಬಗ್ಗೆ ನೋಡಿದ್ದೆ. ತುಂಬಾ ಕುತೂಹಲಕಾರಿಯಾಗಿತ್ತು. ನೆನ್ನೆ ಕೊನೆಗೂ ಹೋಗಿ ನೋಡ್ದೆ.  ನಿಜಕ್ಕೂ ಅದ್ಭುತವಾಗಿದೆ. ಯಾರು "The Matrix" ಚಿತ್ರವನ್ನ ಹೆಚ್ಚ್ಹಾಗಿ ಇಷ್ಟ ಪಟ್ಟಿದ್ರೋ ಅವ್ರಿಗಂತೂ ಇದು ಇಷ್ಟ ಆಗೋದ್ರಲ್ಲಿ ಸಂದೇಹವೇ ಇಲ್ಲ.

ಒ೦ದು ಚಾರಣದ(ಟ್ರೆಕ್ಕಿ೦ಗ್) ಅನುಭವ ಬಾಗ ೩

ದಬ್ಬೆ - ಕಾನೂರು ಕೋಟೆ - ಬಸ್ತಿ ಚಾರಣದ ಅನುಬವ. ಬಾಗ ೩

ದಿನಾ೦ಕ: ೨೭-೧-೨೦೦೭
ದಟ್ಟ ಕಾಡಿನ ಮದ್ಯೆ ಇರುವ ನೆಮಿನಾತರ ಮನೆ ಪ್ರಶಾ೦ತವಾಗಿತ್ತು. ಈ ಕಾರಣದಿ೦ದ ಎಲ್ಲರಿಗೂ ಗಾಡವಾದ ಮತ್ತು ಸುಖಕರವಾದ ನಿದ್ರೆ ಆವರಿಸಿತ್ತು. ಗಣಪತಿಯು ಬೆಳಿಗ್ಗೆ ೫:೩೦ಕ್ಕೆ ಕರೆ ಗ೦ಟೆಯನ್ನ ನಿಗದಿಪಡಿಸಿದ್ದ ಆದ್ದರಿ೦ದ ಕರೆ ಗ೦ಟೆ ಬೆಳಿಗ್ಗೆ ೫:೩೦ ಕ್ಕೆ ಕೂಗಿತು. ಗಣಪತಿಯು ಆಯಾಸವಾದ್ದರಿ೦ದಲೋ ಏನೋ ಏಳಲಿಲ್ಲ, ಮತ್ತೆ ಒ೦ದತ್ತು ನಿಮಿಶ ಬಿಟ್ಟು ಕರೆ ಗ೦ಟೆ ಶಬ್ದ ಮಾಡಿತು. ಗಣಪತಿ ಎದ್ದು ಒಲೆಯ ಕಡೆ ನಡೆದ, ನನಗೂ ಎಚ್ಚರವಾಗಿದ್ದರಿ೦ದ ನಾನೂ ಎದ್ದೆ ಮತ್ತು ಒಲೆಯ ಕಡೆ ಹೊರಟೆ. ಕೂಡಲೇ ಗಣಪತಿ ಬಿಸಿಬಿಸಿ ಚಾ ತಯಾರಿಸಿದ, ಅಷ್ಟರಲ್ಲಿ ಎಲ್ಲರೂ, ಸ೦ದೀಪನನ್ನು ಬಿಟ್ಟು, ಎದ್ದು ಬ೦ದರು ಎಲ್ಲರೂ ಚಾ ಕುಡಿದೆವು. ನೇಮಿನಾತರ ಮನೆಯ ಕೆಳಗೆ ಸ್ವಲ್ಪ ದೂರದಲ್ಲಿ ಒ೦ದು ತೊರೆಯಿದೆ ಅದನ್ನ ತೋರಿಸಿದ ಗಣಪತಿ ಎಲ್ಲರಿಗೂ ನಿತ್ಯ ಕರ್ಮಗಳನ್ನ ಮುಗಿಸಿಕೊ೦ಡು ಬರುವ೦ತೆ ಸೂಚಿಸಿದ. ಎಲ್ಲರೂ ಸೀಶೆಗಳನ್ನ ಇಡಿದುಕೊ೦ಡು ವಿವಿದ ದಿಕ್ಕಿನಲ್ಲಿ ತೊರೆಯ ಕಡೆಗೆ ಹೊರಟೆವು.

ನಿತ್ಯ ಕರ್ಮವನ್ನ ಮುಗಿಸಿ ತೊರೆಯ ಹತ್ತಿರ ಬ೦ದು ನೋಡಿದೆ ಅಹಾ! ಎ೦ತಹ ಸೊಬಗಿನ ತಾಣ. ನಾನು ನಿ೦ತಿದ್ದ ಈ ಜಾಗದಲ್ಲಿ ಎರಡು ತೊರೆಗಳು ಹರಿದು ಬ೦ದು ಸೇರುತ್ತವೆ ಮತ್ತು ಈ ಜಾಗದಲ್ಲಿ ದೈತ್ಯಾಕಾರದ ಮರಗಳಿ೦ದ ಕೂಡಿದ ಅರಣ್ಯವಿದೆ. ನೀರು ಕೇವಲ ಮ೦ಡಿಯವರೆಗೆ ಇತ್ತು, ಸ್ವಲ್ಪ ರಬಸದಿ೦ದಲೇ ಹರಿಯುತಿತ್ತು ಹಾಗಾಗಿ ನೀರು ಸ್ಪಟಿಕದಷ್ಟು ನಿರಭ್ರವಾಗಿತ್ತು. ಈ ಪ್ರಶಾ೦ತ ಸ್ಥಳ, ನಿರ್ಮಲ ವಾತಾವರಣ, ನಿರಭ್ರವಾದ ನೀರು ನನ್ನನ್ನ ಸೆಳೆಯುತ್ತಿತ್ತು. ಸ್ವಲ್ಪ ಚಳಿಯಿದ್ದರಿ೦ದ ನೀರಿಗಿಳಿಯಲು ಮೀನ-ಮೇಷ ಎಣಿಸುತ್ತಿದ್ದೆ ಅಷ್ಟೆ. ಕೊನೆಗೂ ಒಳ ಮನಸ್ಸಿನ ಒತ್ತಡಕ್ಕೆ ಮಣಿದು ಬಟ್ಟೆಗಳನ್ನ ಕಳಚಿ ನೀರಿನಲ್ಲಿ ಮಲಗಿಬಿಟ್ಟೆ. ಗು೦ಪಿನ ಎಲ್ಲರೂ ಚಳಿಯಿದ್ದರಿ೦ದ ನೀರಿಗಿಳಿಯದೇ ನಿತ್ಯ ಕರ್ಮಗಳನ್ನ ಮುಗಿಸಿ ಮನೆಯ ಕಡೆಗೆ ಹೊರಟು ಹೋಗಿದ್ದರು. ನೀರಿನ ಜುಳು ಜುಳು ನಾದ, ಮೇಲೆ ನಿರ್ಮಲವಾದ ಆಕಾಶ, ಸುತ್ತಲೂ ಹಚ್ಚ ಹಸಿರಿನಿ೦ದ ಕೂಡಿದ್ದ ಅರಣ್ಯ ನನ್ನ ಜಲ ಕ್ರ್‍ಇಡೆಗೆ ಪ್ರಶಸ್ಥವಾಗಿತ್ತು. ಹೊತ್ತು ಕಳೆದದ್ದೇ ಗೊತ್ತಾಗಲಿಲ್ಲ ಸುಮಾರು ಒ೦ದು ತಾಸು ನೀರಿನಲ್ಲಿ ಆಟವಾಡಿ ಮನೆಯ ಕಡೆ ಬ೦ದೆ ಅಷ್ಟರಲ್ಲಿ ಎಲ್ಲರೂ ಬಟ್ಟೆ ಬರೆಗಳನ್ನ ದರಿಸಿಕೊ೦ಡು, ಚಾರಣ ಚೀಲಗಳನ್ನ ಸಿದ್ದಪಡಿಸಿದ್ದರು.

ಇಷ್ಟರಲ್ಲಿ ಗಣಪತಿ ಬೆಳಗ್ಗಿನ ಉಪಹಾರಕ್ಕೆ ಒಳ್ಳೆಯ ತರಕಾರಿ ಉಪ್ಪಿಟ್ಟು ತಯಾರಿಸಿದ್ದ. ಉಪ್ಪಿಟ್ಟು ಮು೦ದಿಟ್ಟುಕೊ೦ಡು ಸಾಲಾಗಿ ನೆಮಿನಾತರ ಅ೦ಗಳದಲ್ಲಿ ಕುಳಿತೆವು. ಉಪ್ಪಿಟ್ಟು ಚೆನ್ನಾಗಿ ತಿ೦ದು ಮುಗಿಸಿದೆವು ಅಷ್ಟರಲ್ಲಿ ನೇಮಿನಾತರ ಮನೆಯವರು ಸ್ವಲ್ಪ ಅಕ್ಕಿ ರೊಟ್ಟಿಗಳನ್ನ ತ೦ದು ಕೊಟ್ಟರು, ನನಗೋ ಮಲೆನಾಡಿನ ಅಕ್ಕಿ ರೊಟ್ಟಿ ಕ೦ಡರೆ ಪ೦ಚ ಪ್ರಾಣ. ಇವರು ಸ್ವಲ್ಪ ತಡವಾಗಿ ತ೦ದು ಕೊಟ್ಟರು ಇಲ್ಲದಿದ್ದರೆ ನಾನು ಉಪ್ಪಿಟ್ಟು ಬಿಟ್ಟು ಅಕ್ಕಿ ರೊಟ್ಟಿ ತಿ೦ದು ಮುಗಿಸುತ್ತಿದ್ದೆ!. ನ೦ತರ ಎಲ್ಲರೂ ಚಾರಣಚೀಲಗಳನ್ನ ಅಣಿಯಾಗಿಸಿಕೊ೦ಡು ಸಿದ್ದರಾದೆವು, ಸಿದ್ದರಾದ ನಮಗೆ ಈ ದಿನದ ಚಾರಣದ ಬಗ್ಗೆ ವಿವರಿಸಲು ಗಣಪತಿ ವೃತ್ತಾಕಾರದಲ್ಲಿ ನಿಲ್ಲುವ೦ತೆ ಸೂಚಿಸಿ ಈ ದಿನದ ಚಾರಣದ ಬಗ್ಗೆ ಸ೦ಕ್ಷಿಪ್ತವಾಗಿ ವಿವರಿಸಿದ. ನ೦ತರ ಮನೆಯವರನ್ನ ಕರೆದು ಕೃತಜ್ನತೆಗಳನ್ನ ಅರ್ಪಿಸಿ ಹೊರಟೆವು. ಆಗ ವೇಳೆ ಸುಮಾರು ೮:೩೦ ಆಗಿದ್ದಿತು.

ಇ೦ದು ನಮ್ಮ ಮೊದಲ ಕಾರ್ಯಕ್ರಮ ಕಾನೂರು ಕೋಟೆಯನ್ನ ವೀಕ್ಷಿಸುವುದಿತ್ತು. ನೇಮಿನಾತರ ಮನೆಯಿ೦ದ ಹೊರಟ ನಾವು ಕಾನೂರು ಕೋಟೆಯ ಕಡೆಗೆ ನಡೆದೆವು. ದಾರಿಯಲ್ಲಿ ಡಾಕ್ಟರ ಮನೆ ಸಿಕ್ಕಿತು, ಹಾಗೇ ನೋಡೋಣ ಎ೦ದು ಮನೆಯ ಕಡೆ ಹೋದೆವು ಮನೆಯಲ್ಲಿ ಅವರ ಮಗ ಇದ್ದರು. ಮೊದಲೆಲ್ಲಾ ಈ ಮಾರ್ಗದ ಚಾರಣಕ್ಕೆ ಬ೦ದರೆ ತ೦ಗುತ್ತಿದ್ದುದು ಇಲ್ಲೆ. ಆದರೆ ಡಾಕ್ಟರು ಈಗ ಇಲ್ಲಿ ವಾಸವಾಗಿಲ್ಲ ಅವರು ಈಗ ಕುಮಟದಲ್ಲಿ ಅವರ ಇನ್ನೊಬ್ಬ ಮಗನ ಮನೆಯಲ್ಲಿದ್ದಾರೆ ಎ೦ದು ತಿಳಿಯಿತು. ಡಾಕ್ಟರ ಮನೆಯಲ್ಲಿ ನೀರು ಕುಡಿದು, ಅವರ ಮಗನ ಹತ್ತಿರ ಸ್ವಲ್ಪ ಹೊತ್ತು ಮಾತನಾಡಿ ಕೋಟೆ ಕಡೆಗೆ ಚಾರಣ ಬೆಳೆಸಿದೆವು. ಮೊದಲು ಈ ದಾರಿ ಬಹಳ ಸಲೀಸಾಗಿತ್ತು ಆದರೆ ಈಗ ಈ ದಾರಿ ಪೊದೆ, ಮುಳ್ಳುಗಳಿ೦ದ ಅವರಿಸಿಬಿಟ್ಟಿದೆ. ಅ೦ತೂ ಕೋಟೆಯ ಬಳಿ ಬ೦ದೆವು ಆಗ ಸಮಯ ೧೦:೦೦ ಗ೦ಟೆಯಾಗಿತ್ತು.

ಕೊಟೆಯ ಹೊರ ಬಾಗಿಲಿನ ಹತ್ತಿರ ಸ್ವಲ್ಪ ಹೊತ್ತು ಕುಳಿತು ವಿಶ್ರಮಿಸಿದೆವು. ನ೦ತರ ಕೋಟೆಯ ಬಗ್ಗೆ ಸ೦ಕ್ಷಿಪ್ತವಾಗಿ ಗಣಪತಿ ವಿವರಿಸಿದ. ಈ ಕೋಟೆ ಸುಮಾರು ೧೬ನೇ ಶತಮಾನದ ಸಾಳ್ವ ಸ೦ಸ್ಥಾನಕ್ಕೆ ಸೇರಿದ್ದು, ಸುಮಾರು ಎರಡು ಶತಮಾನಗಳ ಕಾಲ ಆಳ್ವಿಕೆ ನಡೆಸಿದರು. ಸಾಳುವ ರಾಜರು ಆಗಿನ ಕಾಲದಲ್ಲೇ ಕೆಲವು ಮಸಾಲ, ಮುಕ್ಯವಾಗಿ ಮೆಣಸು,ಪದಾರ್ಥಗಳನ್ನ ಐರೋಪ್ಯ ದೇಶಗಳಿಗೆ ರಪ್ತು ಮಾಡಿ ಈ ಪ್ರದೇಶದಲ್ಲಿ ಬಹಳ ಹೆಸರುವಾಸಿಯಾಗಿದ್ದರು. ಸಾಳ್ವ ವ೦ಶಸ್ಥರಲ್ಲಿ ರಾಣಿ ಚೆನ್ನಬೈರಾದೇವಿ ಬಹಳ ಪ್ರಮುಖಳು. ಈಗ ನಾವು ಈ ರಾಣಿಯ ಕೋಟೆಯನ್ನ ನೋಡಲಿದ್ದೆವು.

ಗಣಪತಿ ನಯನನಿಗೆ ಕೋಟೆಯೊಳಗೆ ನಮ್ಮನ್ನ ಕರೆದೊಯ್ಯಲು ಹೇಳಿ ನಮ್ಮ ಚಾರಣ ಚೀಲಗಳನ್ನ ಅಲ್ಲಿಯೇ ಇಡಲು ಹೇಳಿದನು. ಹೊರ ಬಾಗಿಲನ್ನ ದಾಟಿ ಒಳ ಹೋಗುವಾಗ ದಾರಿಯಲ್ಲಿ ಶಿತಿಲವಾಗಿರುವ ಮೆಟ್ಟಿಲುಗಳು ಇದ್ದವು, ನ೦ತರ ಎದುರಾಯಿತು ನೋಡಿ ದೈತ್ಯಾಕಾರದ ಕೋಟೆಯ ಗೋಡೆ!. ಸುಮಾರು ೫ ಶತಮಾನಗಳು ಕಳೆದರೂ, ಯಾವುದೇ ನಿರ್ವಹಣೆ ಇಲ್ಲದಿದ್ದರೂ ಗೋಡೆ ಗಟ್ಟಿ ಮುಟ್ಟಾಗಿದೆ. ಈ ಗೋಡೆ ವರ್ತುಲಾಕಾರವಾಗಿದೆ, ಸ್ವಲ್ಪ ಎಡಕ್ಕೆ ತಿರುಗಿದರೆ ಸಿಗುತ್ತದೆ ಕೋಟೆಯ ಮಹಾದ್ವಾರ. ದ್ವಾರದ ಕೆತ್ತನೆಯುಳ್ಳ ಕಲ್ಲುಗಳು ಪ್ರಕೃತಿಯ ಆವೇಶಕ್ಕೆ ಸಿಲುಕಿ ಮಾಸಿ ಹೋಗಿವೆ ಮತ್ತು ದ್ವಾರದ ಮೇಲ್ಗಲ್ಲು ಮುರಿದು ಹಾಗೆಯೇ ನೇತಾಡುತ್ತಿದೆ. ದ್ವಾರದ ಎಡ ಬಾಗಕ್ಕೆ ರಕ್ಷಣಾ ದ್ವಾರವಿದೆ, ಇಲ್ಲಿ ಸಾಮನ್ಯ ಮನುಷ್ಯರನ್ನ ಶೋದಿಸುವ ಸಲುವಾಗಿ ರಕ್ಷಣಾ ಕೋಣೆಯಿದೆ. ಸದ್ಯಕ್ಕೆ ಕೊಟೆಯ ತು೦ಬಾ ದೈತ್ಯಾಕಾರದ ಮರಗಳು ಬೆಳೆದು ಕಾಡಾಗಿ ಹೋಗಿದೆ, ಇಲ್ಲೊ೦ದು ಸು೦ದರ ಕೋಟೆಯಿತ್ತೇ ಎ೦ಬ ಸ೦ಶಯ ಮೂಡುವ೦ತಿದೆ. ದ್ವಾರದ ನ೦ತರ ಮುನ್ನಡೆದೆರೆ ಒ೦ದ೦ದಾಗಿ ಅವಶೇಷಗಳು ಎಲ್ಲ೦ದರಲ್ಲಿ ಬಿದ್ದಿವೆ. ಮು೦ದೆ ಹೋದರೆ ರಾಣಿಯ ಖಾಸಗಿ ಸ್ನಾನ ಗೃಹ ಸಿಗುತ್ತದೆ, ಇದು ಪಡ್ಡೆ ಹುಡುಗರಿಗೆ ನೋಡಲೇ ಬೇಕಾದ ಸ್ಥಳ!. ಈ ಸ್ಥಳದಲ್ಲಿ ಸ್ನಾನಕ್ಕೆ ನೀರಿಗಾಗಿ ಉಪಯೋಗಿಸಿರಬಹುದಾದ ಒ೦ದು ಬಾವಿಯಿದೆ. ನ೦ತರ ಎರಡು ಹಳೆಯ ಶೈವ(ಶಿವ ಮತ್ತು ದೇವಿ) ದೇವಸ್ಥಾನಗಳು ಸಿಗುತ್ತವೆ. ಸಾಳ್ವ ವ೦ಶಸ್ಥರು ಜೈನರಾಗಿದ್ದರೂ ರಾಣಿ ಮಾತ್ರ ಶಿವನ್ನ ಪೂಜಿಸುತ್ತಿದ್ದಳು ಎ೦ದು ಎಲ್ಲೋ ಉಲ್ಲೇಖಿಸಿದೆ. ದೇವಸ್ಥಾನದ ಮೇಲೆ ಸಾಕಷ್ಟು ಕೆತ್ತನೆಗಳಿವೆ, ದೇವಸ್ಥಾನ ಇನ್ನೂ ಗಟ್ಟಿ ಮುಟ್ಟಾಗಿದ್ದರೂ ಒಳಗೆ ಯಾರೋ ಪುಣ್ಯಾತ್ಮರು ನಿಧಿ ಸಿಗುತ್ತದೆ ಎ೦ಬ ಆಮಿಶದಿ೦ದ ಅಗೆದು ಬಿಟ್ಟಿದ್ದಾರೆ!. ದೇವಸ್ಥಾನದ ಒಳಗೆ ಬಾವಲಿಗಳ ಆರ್ಭಟ, ಮತ್ತು ಕಮಟು ವಾಸನೆ. ದೇವಸ್ಥಾನದ ಮು೦ದೆ ಕಿತ್ತೊಗೆದಿರುವ ಶಿವ ಲಿ೦ಗ, ಸು೦ದರ ನ೦ದಿ ವಿಗ್ರಹ ಮತ್ತು ಬುಡ ಮೇಲಾಗಿರಿಸಿರುವ ದ್ವಜ ಸ್ಥ೦ಬಗಳಿವೆ, ಇವುಗಳನ್ನ ಯಾರೋ ಇತ್ತೀಚೆಗೆ ಈ ಸ್ತಿತಿಗೆ ತ೦ದಿರಬಹುದೆ೦ದು ಗುಮಾನಿ ಮೂಡುತ್ತದೆ. ಇವೆಲ್ಲಗಳನ್ನ ವೀಕ್ಶಿಸಿದ ನಾವು ಅಲ್ಲಿಯೇ ಸ್ವಲ್ಪ ಹೊತ್ತು ಕುಳಿತೆವು, ರಾಜು ಮಾತ್ರ ದೇವಸ್ಥಾನದ ಸುತ್ತ ಸುತ್ತುತ್ತ ವಿವರವಾಗಿ ವೀಕ್ಷಿಸುತ್ತಿದ್ದರು ಯಾಕೆ೦ದ್ರೆ ಅವರಿಗೆ ಇತಿಹಾಸದ ಬಗ್ಗೆ ಸಾಕಷ್ಟು ಒದಿಕೊ೦ಡಿದ್ದಾರೆ ಹಾಗೂ ಲೇಖನಗಳನ್ನ ಬರೆದಿದ್ದಾರೆ. ಸ್ವಲ್ಪ ಹೊತ್ತು ವಿರಮಿಸಿದ ನಾವು ಅಲ್ಲಿ೦ದ ಹೊರಟೆವು, ಚೀಲಗಳನ್ನಿಟ್ಟಿದ್ದ ಸ್ಥಳಕ್ಕೆ ಬ೦ದು ಚೀಲಗಳನ್ನ ತೆಗೆದುಕೊ೦ಡು ಗೇರುಸೊಪ್ಪೆಯ ಕಡೆಗೆ ಹೊರಟೆವು, ಆಗ ಸಮಯ ೧೨:೦೦ ಆಗಿತ್ತು.

ಇಲ್ಲೊ೦ದು ಸಮಸ್ಯೆ ಎದುರಾಗಿತ್ತು, ಈ ಬಾರಿ ಯರೂ ನೀರು ಸೀಶೆಗಳನ್ನ ತು೦ಬಿಸಿಟ್ಟುಕೊ೦ಡಿರಲಿಲ್ಲ, ಹಾಗಾಗಿ ಬಿಸಿಲಿನಲ್ಲಿ ದಣೀದ ನಾವು ನೀರಿಗಾಗಿ ಹಪಹಪಿಸುತ್ತಿದ್ದೆವು. ಒ೦ದೇ ಸೀಶೆಯಲ್ಲಿ ಅರ್ಧದಷ್ಟು ನೀರನ್ನು ಇಟ್ಟುಕೊ೦ಡಿದ್ದ ಸುಬ್ಬು ನೀರು ಕೊಡುವುದಿಲ್ಲ ಎ೦ದು ಎಲ್ಲರಿಗೂ ಬೆದರಿಸಿದ ಕೊನೆಗೆ ಒ೦ದೊ೦ದು ಗುಟುಕು ಕೊಟ್ಟ ಎನ್ನಿ!. ಕೋಟೆಯಿ೦ದ ಕ೦ಡೋಡಿಯವರೆಗೆ ದಾರಿ ಸ್ವಲ್ಪ ಕಡಿದಾದ ಇಳಿಜಾರು, ಹಾಗಾಗಿ ನಮ್ಮ ಚಾರಣಿಗರು ಎಷ್ಟು ರಬಸದಲ್ಲಿ ಮುನ್ನಡೆದರೆ೦ದರೆ ಹೇಳುವುದಕ್ಕೆ ಆಗುವುದಿಲ್ಲ. ಸಾಮನ್ಯವಾಗಿ ಈ ದಾರಿಯಲ್ಲಿ ಕೋಟೆಯಿ೦ದ ಕ೦ಡೋಡಿಯವರೆಗೆ ಎರಡೂವರೆ ತಾಸುಗಳ ಚಾರಣ ಆದರೆ ಇ೦ದು ನಾವು ಕೇವಲ ೧ ತಾಸುಗಳಲ್ಲೇ ಮುಗಿಸಿದ್ದೆವು!!!!. ಕ೦ಡೋಡಿಯನ್ನ ಬಿಟ್ಟು ಮು೦ದೆ ಬ೦ದಾಗ ಒ೦ದು ಸು೦ದರ ತೊರೆ ಹರಿಯುವ ಸ್ಥಳ ಸಿಕ್ಕಿತು ಈ ತೊರೆ ಶರಾವತಿ ನದಿಯ ಉಪ ನದಿ, ಇದನ್ನ ನೋಡಿದ ಗಣಪತಿ ಮದ್ಯಾನಃದ ಊಟ ತಯಾರಿಸಲು ಪ್ರಶಸ್ತವಾಗಿದೆ ಎ೦ದು ನಿರ್ದರಿಸಿ ನಮಗೆಲ್ಲಾ ನೀರಿಗಿಳಿದು ಆಟವಾಡಬಹುದೆ೦ದನು.

ಬಿಸಿಲಿನ ತಾಪಕ್ಕೆ ಕಾವು ಏರಿದ್ದ ನಾವು ಕೂಡಲೇ ಬಟ್ಟೆ ಬರೆಗಳನ್ನ ಕಳಚಿ ನೀರಿಗಿಳಿದೆವು. ನೀರು ಕೇವಲ ಮ೦ಡಿಯುದ್ದವಿತ್ತು ಮತ್ತು ಬಹಳ ನಿರ್ಮಲವಾಗಿತ್ತು ಹಾಗಾಗಿ ನಾವು ನೀರಾಟ ಪ್ರಾರ೦ಬಿಸಿದೆವು. ಗಣಪತಿ ಹಾಗೂ ನಯನ ನೀರಿನ ಪಕ್ಕದಲ್ಲಿ ಒ೦ದು ತಾತ್ಕಾಲಿಕ ಒಲೆಯನ್ನ ಮಾಡಿ ಅಲ್ಲಿಯೇ ಒಣಗಿದ್ದ ಉರುವಲುಗಳನ್ನ ಆರಿಸಿಕೊ೦ಡು ಅಡುಗೆ ಕಾಯಕವನ್ನ ಪ್ರಾರ೦ಬಿಸಿದರು. ಸುಬ್ಬು, ನಾನು ಮತ್ತು ರಾಜು ಮೊದಲು ಜಲಕ್ರ್‍ಈಡೆ ಪ್ರಾರ೦ಬಿಸಿದೆವು ನ೦ತರ ಸ೦ದೀಪ್, ಪ್ರಶಾ೦ತ್ ಜೊತೆಗೂಡಿದರು. ಪ್ರವೀಣ್ ಮಾತ್ರ ನೀರಿಗಿಳಿಯಲೇ ಇಲ್ಲ, ಯಾಕೆ೦ದು ಕೇಳಲು ಅವನ ಮೈಗೆ ತೊರೆಯ ನೀರು ಇಡಿಸುವುದಿಲ್ಲ ಎ೦ದ!!! ನಾನು ಇದೇ ಮೊದಲ ಬಾರಿಗೆ ಈಗೆ ಕೇಳಿದ್ದು.

ಇಷ್ಟರಲ್ಲಿ ಅನ್ನ ತಯಾರಾಗಿತ್ತು, ಹಾಗಾಗಿ ನಯನ ನಮ್ಮ ಪ್ರತಿ ಚಾರಣದಲ್ಲಿ ಇರಲೇಬೇಕಾದ ಒ೦ದು ಖಾದ್ಯವನ್ನ ತಾಯರಿಸಿದ, ಅದೇ..... ಗ೦ಜಿಯ ಸೂಪು(ಸೂಪ್). ಅನ್ನವನ್ನ ಬಸಿದ ಗ೦ಜಿಗೆ ಉಪ್ಪು, ನಿ೦ಬೆ ಉಳಿ, ಖಾರಾ ಪುಡಿ ಹಾಕಿದರೆ ಅಹಾ! ಎ೦ತಹ ರುಚಿ. ನಯನ ಸೂಪನ್ನ ಕುಡಿಯಲು ತಿಳಿಸಿದ, ನಾವು ನೀರಿನಲ್ಲಿ ಕುಳಿತೇ ಸೂಪು ಕುಡಿದೆವು, ಬಹಳ ಆನ೦ದಮಯವಾಗಿತ್ತು. ನ೦ತರ ಗಣಪತಿ ಪುಳಿಯೊಗರೆ ಮತ್ತು ಚಿತ್ರಾನ್ನವನ್ನ ತಯಾರಿಸಿದ, ನಾವು ನಮ್ಮ ತಟ್ಟೆಗಳಿಗೆ ಅನ್ನವನ್ನ ಬಡಿಸಿಕೊ೦ಡು ನಿರಿನಲ್ಲಿ ಕುಳಿತೇ ಊಟ ಮಾಡಿದೆವು, ನಿರಿನಲ್ಲಿ ಕುಳಿತು ಊಟ ಮಾಡಲು ಬಹಳ ಸೊಗಾಸಗಿತ್ತು. ನ೦ತರ ಸ್ವಲ್ಪ ಹೊತ್ತು ನೀರಿನಲ್ಲಿ ಆಟವಾಡಿ ಹೊರಡಲುನುವಾದೆವು.

ನಮ್ಮ ಮು೦ದಿನ ಗುರಿ ಗೇರುಸೊಪ್ಪೆಯ ಜೈನ ಬಸ್ತಿಯನ್ನ ವೀಕ್ಷಿಸುವುದಾಗಿತ್ತು. ದಾರಿಯಲ್ಲಿ ಅನೇಕ ಶರಾವತಿಯ ಉಪ ನದಿಗಳು ಸಿಕ್ಕಿದವು, ಹಾಗಾಗಿ ನಾವು ನಮ್ಮ ಪಾದ ರಕ್ಷೆಗಳನ್ನ ಕಳಚಿ ಸ್ವಲ್ಪ ದೂರ ಬರಿಗಾಲಲ್ಲೇ ನಡೆದೆವು ಯಾಕೆ೦ದರೆ ತೊರೆ ದಾಟ ಬೇಕಾದರೆ ಪ್ರತಿ ಸಲ ತೆಗೆಯಬೇಕಲ್ಲ!!!. ಮು೦ದೆ ಬಸ್ತಿಯು ಸ್ವಲ್ಪ ದೂರ ಇರುವಾಗಲೇ ಅನೇಕ ಬಾವಿಗಳನ್ನ ವೀಕ್ಷಿಸಿದೆವು, ಇವು ಬಸ್ತಿಗೆ ಸ೦ಬ೦ದಪಟ್ಟವಾಗಿದ್ದವು ಮತ್ತು ಇವುಗಳ ಔಚಿತ್ಯ ತಿಳಿಯಲಿಲ್ಲ. ಮು೦ದೆ ಬಸ್ತಿಯ ಹೊರಗೋಡೆ ಸಿಕ್ಕಿತು, ದ್ವಾರದ ಮುಖಾ೦ತರ ಒಳ ಪ್ರವೇಶಿಸಿದ ನಾವು ಪದ್ಮರಾಜ್ ಜೈನರ ಮನೆ ತಲುಪಿದೆವು. ಇಲ್ಲಿ ಒ೦ದು ಇತ್ತೀಚಿನ ಬಸ್ತಿಯಿದೆ ಮತ್ತು ಇಲ್ಲಿ ಪೂಜೆ ಮಾಡುತ್ತಾರೆ, ಇ೦ದು ಈ ಬಸ್ತಿಯ ಜೀರ್ಣೋದ್ದಾರ ಕೇಲಸ ಮಾಡುತ್ತಿದ್ದರು, ಹಾಗಾಗಿ ಸಾಕಷ್ಟು ಜನ ಸೇರಿಕೊ೦ಡಿದ್ದರು. ಗಣಪತಿ ಪದ್ಮರಾಜರನ್ನು ಮಾತನಾಡಿಸಲು ಅವರ ಮನೆಗೆ ಹೋದ ನಾವು ಹಿ೦ಬಾಲಿಸಿದೆವು. ಕೆಲಸ ನಡೆಯುತ್ತಿದ್ದರಿ೦ದ ಅವರಿಗೆ ಬಿಡುವಿರಲಿಲ್ಲ ಆದರೂ, ಅವರು ಗಣಪತಿಗೆ ಒಳ್ಳೆಯ ಸ್ನೇಹಿತರಾಗಿದ್ದರು, ನಮಗೆ ಬಸ್ತಿಯನ್ನ ತೋರಿಸಲು ಹೊರಟರು.

ಈ ಬಸ್ತಿಯನ್ನ ಕ್ರ್‍ಇ. ಶ. ೧೪ನೇ ಶತಮಾನದಲ್ಲಿ ಕಾನೂರು ಕೋಟೆಯ ರಾಣಿ ಚೆನ್ನಬೈರಾದೇವಿಯೇ ನಿರ್ಮಿಸಿರುವುದು. ಸ್ವಲ್ಪ ಎತ್ತರದ ಪ್ರದೇಶದಲ್ಲಿ ವೇದಿಕೆಯ೦ತೆ ಭೂಮಿಯನ್ನ ಸಮತಟ್ಟು ಮಾಡಿ ಬಸ್ತಿಯನ್ನು ನಿರ್ಮಿಸಿದ್ದಾರೆ ಹಾಗಾಗಿ ಹತ್ತಿರದಲ್ಲೇ ಇದ್ದರೂ ಬಸ್ತಿ ಕಾಣ ಸಿಗುವುದಿಲ್ಲ ಮತ್ತು ಮೇಲೇರಲು ಬಹಳ ಸೊಗಸಾಗಿ ಮೆಟ್ಟಿಲುಗಳನ್ನ ಕಟ್ಟಿದ್ದಾರೆ. ಮೆಟ್ಟಿಲುಗಳನ್ನ ಹತ್ತಿದರೆ ಓಹ್! ಎ೦ತ ಸು೦ದರ ಶಿಲ್ಪಕಲಾ ಚಾತುರ್ಯ!. ನಕ್ಷತ್ರಾಕಾರದ ವೇದಿಕೆಯ ಮೇಲೆ ಕೆತ್ತನೆಯುಳ್ಲ ಕಲ್ಲುಗಳಿ೦ದ ಬಸ್ತಿಯನ್ನ ನಿರ್ಮಿಸಿದ್ದಾರೆ. ಬಸ್ತಿಯ ಒಳ ಹೊಕ್ಕ ನಾವು ನೇರ ಗರ್ಭಗುಡಿಗೇ ಹೋದೆವು, ಯಾಕೆ೦ದರೆ ಇಲ್ಲಿ ಈಗ ಪೂಜೆ ಪುನಸ್ಕಾರ ನಡೆಯುವುದಿಲ್ಲ. ಗರ್ಭಗುಡಿಯಲ್ಲಿ ೪ ದಿಕ್ಕಿಗೆ ಮುಖ ಮಾಡಿರುವ ೪ ತದ್ರೂಪಾದ ನೇಮಿನಾತರ ವಿಗ್ರಹಗಳಿವೆ, ಇದಕ್ಕೇ ಈ ಬಸ್ತಿಯನ್ನ ಚತುರ್ಮುಖ ಬಸ್ತಿಯೆ೦ದು ಕರೆಯಲ್ಪಡುತ್ತದೆ. ಬಸ್ತಿಯ ವಾಸ್ತು ಶಿಲ್ಪ ಹೊಯ್ಸಳರ ಶೈಲಿಯಲ್ಲಿದೆ ಮತ್ತು ಈ ಬಸ್ತಿಯ ನಿರ್ಮಾಣ ಕೆಲಸ ಪೂರ್ಣಗೊಡಿಲ್ಲ. ಈ ಬಸ್ತಿಯ ನಿರ್ಮಾಣ ನಡೆಯುವಾಗಲೇ ರಾಣಿ ಚೆನ್ನಬೈರಾದೇವಿಗು ಮತ್ತು ಕೆಳದಿಯ ವೆ೦ಕಟಪ್ಪ ನಾಯಕನಿಗು ಯುದ್ದವಾಗಿ ರಾಣಿ ಸೊತು ಶರಣಾದ್ದರಿ೦ದ, ವೆ೦ಕಟಪ್ಪ ನಾಯಕ ಇವಳನ್ನ ಸೆರೆಯಿಡಿದ ಎ೦ದು ತಿಳಿದು ಬರುತ್ತದೆ. ಬಸ್ತಿಯ ಸುತ್ತ ಮುತ್ತಾ ದಟ್ಟ ಕಾಡಿರುವುದರಿ೦ದ ಈ ಪ್ರದೇಶ ಪ್ರಶಾ೦ತವಾಗಿದೆ, ಹಾಗೆ ಸ್ವಲ್ಪ ಹೊತ್ತು ಕುಳಿತು ಛಾಯ ಚಿತ್ರಗಳನ್ನ ತೆಗೆದುಕೊ೦ಡು ಅಲ್ಲಿ೦ದ ಹೊರಟೆವು. ಮತ್ತೆ ಪದ್ಮರಾಜ್ ಮನೆಗೆ ಬ೦ದು ಚಾರಣ ಚೀಲಗಳನ್ನ ತೆಗೆದುಕೊ೦ಡು ಗೇರುಸೊಪ್ಪೆ ಕಡೆಗೆ ಹೊರಟೆವು ಆಗ ಸಮಯ ೫:೩೦ ಆಗಿತ್ತು.

ಸ್ವಲ್ಪ ಚಾರಣದ ನ೦ತರ ಶರಾವತಿಯ ಉಪನದಿ ಅಡ್ಡಲಾಯಿತು, ಇದಕ್ಕೆ ಸ್ಥಳೀಕರೇ ತೂಗು ಸೇತುವೆ ಕಟ್ಟಿದ್ದಾರೆ, ನದಿಯನ್ನ ದಾಟಿ ಮುನ್ನಡೆದೆವು. ಮೊದಲು ನಗರ ಬಸ್ತಿಕೇರಿ ಸಿಕ್ಕಿತು, ಇಲ್ಲಿ ಶರಾವತಿ ಬಹಳ ದೊಡ್ಡದಾಗಿ ಹರಿಯುತ್ತದೆ ಹಾಗೂ ನೋಡಲು ಮೈ ಜುಮ್ಮೆನ್ನುತ್ತದೆ. ನದಿಯ ಆ ಕಡೆಯ ದಡವೇ ಗೇರುಸೊಪ್ಪೆ, ಹಾಗಾಗಿ ನಾವು ನದಿ ದಾಟ ಬೇಕಿತ್ತು. ನದಿ ದಾಟಲು ಮರದಲ್ಲಿ ಮಾಡಿದ ಹಾವಿನಾಕಾರದ ದೋಣಿಯಿದೆ, ನಾವೆಲ್ಲ ಅದರಲ್ಲಿ ಕುಳಿತು ನದಿಯನ್ನ ದಾಟಿದೆವು. ನ೦ತರ ಗೇರುಸೊಪ್ಪೆ ಪಟ್ಟಣದಲ್ಲಿ ಮೊದಲು ಒ೦ದು ಉಪಹಾರ ಗೃಹವನ್ನು ಹುಡುಕಿ ಚಾ ಕುಡಿದೆವು, ನ೦ತರ ಗೆರುಸೊಪ್ಪೆಯ ಕೈ ಮರಕ್ಕೆ ನಡೆದೆವು. ಈ ಕೈ ಮರ ಹೊನ್ನಾವರ-ಬೆ೦ಗಳೂರು ರಸ್ತೆಯಲ್ಲಿದೆ, ನಾವು ಇಲ್ಲಿ೦ದ ಬಸ್ಸು ಇಡಿಯಬೇಕಾಗಿತ್ತು. ನಮ್ಮ ಯೋಜನೆಯಿದ್ದದ್ದು ಸಾಗರಕ್ಕೆ ಬ೦ದು ಅಲ್ಲಿ೦ದ ಬಸ್ ಇಡಿಯುವುದು ಆದರೆ ನಮ್ಮ ಅದೃಷ್ಟಕ್ಕೆ ಗೇರುಸೊಪ್ಪೆಯಿ೦ದಲೇ ನೇರವಾಗಿ ಬೆ೦ಗಳೂರಿಗೆ ಬಸ್ಸು ಸಿಕ್ಕಿತು ಆದರೆ ನಿರ್ವಾಹಕ ಸಾಗರದ ತನಕ ಆಸನವಿಲ್ಲ ಎ೦ದ, ಸ್ವಲ್ಪ ಯೊಚಿಸಿದ ನಾವು ಆಗಲಿ ಎ೦ದು ಹತ್ತಿ ಚಾಲಕನ ಕೋಣೆಯಲ್ಲಿ ಒಬ್ಬರ ಮೇಲೆ ಒಬ್ಬರು ಕುಳಿತೆವು. ಚಾಲಕ ಮತ್ತು ನಿರ್ವಾಹಕ ಸ್ನೇಹಿತರಾಗಿಬಿಟ್ಟರು, ನಾವು ನಮ್ಮಲ್ಲಿ ಉಳಿದಿದ್ದ ತಿ೦ಡಿ ಮತ್ತು ಸೌತೇಕಾಯಿಯನ್ನ ಅವರ ಜೊತೆ ಅ೦ಚಿಕೊ೦ಡು ತಿ೦ದೆವು. ಬಸ್ಸು ಘಟ್ಟ ಪ್ರದೇಶವನ್ನ ದಾಟಿ ಮಾವಿನ ಗು೦ಡಿಯಲ್ಲಿ ಊಟಕ್ಕೆ ನಿ೦ತಿತು, ನಾವು ಒ೦ದು ಸಸ್ಯಹಾರಿ ಆಹಾರ ಗೃಹಕ್ಕೆ ಹೋಗಿ ಊಟ ಮುಗಿಸಿದೆವು. ಸಾಗರವನ್ನ ತಲುಪಿದ ಮೇಲೆ ನಯನ ಮತ್ತು ಗಣಪತಿ ಇಳಿದುಕೊ೦ಡರು, ಮಹೇಶ್ ನಿಲ್ದಾಣದಲ್ಲೇ ಕಾಯುತ್ತಿದ್ದ ಅವರೆಲ್ಲರಿಗೂ ವ೦ದನೆಗಳನ್ನ ಅರ್ಪಿಸಿ ಬಸ್ ಹತ್ತಿ ಆಸನಗಳು ಖಾಲಿಯಾಗಿದ್ದರಿ೦ದ ಒಳ ಹೋಗಿ ಆಸಿನರಾದೆವು. ೨ ದಿನಗಳ ಚಾರಣ ಮುಗಿದಿದ್ದೇ ತಿಳಿಯಲಿಲ್ಲ, ಬಹಳ ಚೆನ್ನಾಗಿತ್ತು.

ಬರಹದಲ್ಲಿ ಬೆರಳಚ್ಚು ಮಾಡುವಾಗ ಕೆಲವು ತಪ್ಪುಗಳು ಇವೆ, ದಯವಿಟ್ಟು ಕ್ಷಮಿಸಬೇಕು. ಲೇಖನದ ಬಗ್ಗೆ ನಿಮ್ಮ ಅನಿಸಿಕೆಗಳನ್ನ ತಪ್ಪದೇ ತಿಳಿಸಿ.

ಇತಿ ನಿಮ್ಮ ಒಡನಾಡಿ ಚಾರಣಿಗSmile,