ಕನ್ನಡಸಾಹಿತ್ಯ.ಕಾಂ ಅಭಿಯಾನಕ್ಕೆ ಮಹತ್ವದ ತಿರುವು - ಚಳಿಗಾಲದ ಅಧಿವೇಶನದಲ್ಲಿ ಚರ್ಚೆಗೆ ಕನ್ನಡಸಾಹಿತ್ಯ.ಕಾಂ ಮನವಿ....?
ದೇಸಗತಿ ಭಾಷೆಗಳು, ಒಂದೇಸಮನೆ ಏರುಮುಖವಾಗಿ ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನ ಕ್ಷೇತ್ರದಲ್ಲಿ ಎದುರಿಸುತ್ತಿರುವ ಸವಾಲುಗಳ, ಸಾಮಾಜಿಕ, ಸಾಂಸ್ಕೃತಿಕ ಆಯಾಮಗಳ ಬಗೆಗೆ, ಸಾಮಾಜಿಕ ಕಳಕಳಿಯಿಂದ, ವಾಸ್ತವ ನೆಲೆಗಟ್ಟಿನಲ್ಲಿ ನಿಂತು ಯೋಚಿಸುವ, ಸಕಾರಾತ್ಮಕ, ಕ್ರಿಯಾಶೀಲ, ದೃಢ ಸಂಕಲ್ಪಶಕ್ತಿಯಿಂದ ಕೂಡಿದ ಪ್ರಯೋಗಶೀಲ ಗುಣಧರ್ಮದ, ವೈಚಾರಿಕ ಚಿಂತನೆಯ ಭಾಗವಾಗಿ ಕನ್ನಡಸಾಹಿತ್ಯ.ಕಾಂ ಹಾಗೂ ಬೆಂಬಲಿಗರ ಬಳಗದವರು ಕರ್ನಾಟಕದ ಮುಖ್ಯಮಂತ್ರಿಗಳು, ಸೇರಿದಂತೆ, ಕನ್ನಡ ಸಂಸ್ಕೃತಿ, ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಇಲಾಖೆಗಳ ಸಚಿವರುಗಳಿಗೆ ಸಲ್ಲಿಸಲು ನಿರ್ಧರಿಸಿದ ಮನವಿ ಪತ್ರ ಕ್ಕೆ, ಸಾಮಾಜಿಕ, ಸಾಂಸ್ಕೃತಿಕ, ತಾಂತ್ರಿಕ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವವರ, ಸಾರ್ವಜನಿಕರ 'ಬೆ