ಸ್ವಾತಂತ್ರ ದಿನಾಚರಣೆ ಸಾರ್ಥಕವಾಯಿತು
- Read more about ಸ್ವಾತಂತ್ರ ದಿನಾಚರಣೆ ಸಾರ್ಥಕವಾಯಿತು
- 1 comment
- Log in or register to post comments
(ಕರ್ನಾಟಕ ಮತ್ತು ಬೆಂಗಳೂರಿಗೆ ಅನ್ವಯಿಸಿದಂತೆ ಒಂದು ಅವಲೋಕನ)
ರೈತನೊಬ್ಬನ ಹೆಂಡತಿ ಸತ್ತು ಹೋಗಿದ್ದಳು. ಮಂತ್ರಗಳನ್ನು ಹೇಳುವುದಕ್ಕೆ ಆ ರೈತ ಬೌದ್ಧ ಸಂನ್ಯಾಸಿಯನ್ನು ಕರೆಸಿದ್ದ.
ಸಂನ್ಯಾಸಿ ಸೂತ್ರಗಳನ್ನು ಪಠಿಸಿದ. ಎಲ್ಲ ಮುಗಿದ ಮೇಲೆ “ಹೀಗೆ ಮಂತ್ರಗಳನ್ನು ಹೇಳಿದ್ದರಿಂದ ನನ್ನ ಹೆಂಡತಿಗೆ ಪುಣ್ಯ ದೊರೆಯುತ್ತದೆಯೇ” ಎಂದು ಕೇಳಿದ ರೈತ.
“ನಿನ್ನ ಹೆಂಡತಿಗೆ ಮಾತ್ರವಲ್ಲ, ಈ ಜಗತ್ತಿನ ಎಲ್ಲ ಮನುಷ್ಯರಿಗೂ ಜೀವರಾಶಿಗಳೆಲ್ಲಕ್ಕೂ ಒಳ್ಳೆಯದಾಗುತ್ತದೆ” ಎಂದ ಸಂನ್ಯಾಸಿ.
www.anilkumarha.com
"ದಯವಿಟ್ಟು ಇಲ್ಲಿ ಸ್ವಲ್ಪ ಬಸ್ ನಿಲ್ಲಿಸಿ"
"ಇಲ್ಲ ಮೇಡಂ. ಇಲ್ಲಿ ನಿಲ್ಲಿಸುವಂತಿಲ್ಲ. ಆಗಲೇ ಅಲ್ಲೊಂದು ಸ್ಟಾಪಿನ ಬಳಿ ನಿಲ್ಲಿಸಿದ್ದೆ. ನೀವು ನಿದ್ರಿಸುತ್ತಿದ್ದಿರಿ"
"ದಯವಿಟ್ಟು ನಿಲ್ಲಿಸಿ. ಇಲ್ಲಿ ನನ್ನ ತಾಯಿ ಕಾಯುತ್ತಿದ್ದಾಳೆ. ಕೊನೆಯ ಸ್ಟಾಪ್ ವಿಕ್ಟೋರಿಯದಲ್ಲಿ ಇಳಿದರೆ ಇಲ್ಲಿಗೆ ವಾಪಸು ಬರಲು ನನ್ನಲ್ಲಿ ಹಣವೂ ಇಲ್ಲ"
ಫಿಯರ್ ಆಫ್ ಫ್ರೀಡಂ ಎಂಬುದು ಎರಿಕ್ ಫ್ರಾಂ ಎಂಬ ಲೇಖಕನ ಒಂದು ಪುಸ್ತಕದ ಹೆಸರು. ನಿಜವಾಗಿ ನಮಗೆಲ್ಲ ಸ್ವಾತಂತ್ರ್ಯವೆಂದರೆ ಭಯ. ಸ್ವಂತವಾಗಿ ಆಲೋಚಿಸುವ, ಕ್ರಿಯೆಯಲ್ಲಿ ತೊಡಗುವ, ನಮ್ಮ ಕ್ರಿಯೆಗಳಿಗೆ, ಬದುಕಿಗೆ ನಾವೇ ಜವಾಬ್ದಾರರಾಗುವ ಸ್ವಾತಂತ್ರ್ಯವನ್ನು ಹೊಂದುವುದಕ್ಕೆ ನಮಗೆಲ್ಲ ಭಯ. ಹಿರಿಯರು ಹೇಳಿದಂತೆ, ನಮ್ಮ ಸಂಸ್ಕೃತಿ ಹೇಳಿದಂತೆ, ಶಿಕ್ಷಣ ಕಲಿಸಿದಂತೆ, ನಮ್ಮ ಸುತ್ತಲ ಹತ್ತು ಜನ ಇರುವಂತೆ ಬದುಕುವುದು ನಮಗೆಲ್ಲ ಸುಲಭ ಮತ್ತು ಇಷ್ಟ. ಸ್ವತಂತ್ರವಾಗಬೇಕೆಂಬ ಆಸೆ, ಕಲ್ಪನೆಗಳು ಮಾತ್ರ ನಮ್ಮಲ್ಲಿವೆ. ನಮ್ಮ ಪ್ರತಿಯೊಂದು ಕೆಲಸಕ್ಕೂ ನಮ್ಮ ಮನಸ್ಸು ಸಮರ್ಥನೆಯನ್ನು ಹುಡುಕುತ್ತಲೇ ಇರುವಾಗ, ಬೇರೆಯವರ ಒಪ್ಪಿಗೆಯನ್ನು ಅಪೇಕ್ಷಿಸುತ್ತ ನಿರೀಕ್ಷಿಸುತ್ತ ಇರುವಾಗ ಸ್ವತಂತ್ರವಾಗುವುದು ಹೇಗೆ ಸಾಧ್ಯ? ಸ್ವತಂತ್ರವಾಗಿರುವಂತೆ ತೋರಿಸಿಕೊಳ್ಳುವವರನ್ನು ಒಪ್ಪುತ್ತೇವೆ, ನಿಜವಾಗಿ ಸ್ವತಂತ್ರವಾಗಿರುವವರನ್ನು ದ್ವೇಷಿಸುತ್ತೇವೆ, ಅಲ್ಲವೆ?