ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಿಪಾಯಿ ದಂಗೆ-II

ಬೊಗಳೂರು, ಜ.17- ಪೊಲೀಸ್ ಠಾಣೆ ಧ್ವಂಸ ಮಾಡಿದ ಸುದ್ದಿಯನ್ನು ತಡವಾಗಿ ಸಮರ್ಥಿಸಿಕೊಂಡಿರುವ ಸಂಬಂಧಪಟ್ಟ ಸೈನಿಕರು, ತಮ್ಮ ಪೂರ್ವಜರು ಕೂಡ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಸಿಡಿದೆದ್ದು ಪ್ರತಿಭಟನೆ ನಡೆಸಿದ ಘಟನೆಯನ್ನು ಉಲ್ಲೇಖಿಸಿದ್ದಾರೆ. (bogaleragale.blogspot.com)

ಶಾಲಾ ಮಕ್ಕಳಿಗೆ ಮೊಟ್ಟೆ ಕೊಡಬೇಕೇ?ಹಾಲನ್ನೇ?

egg

ಶಾಲಾ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ ಸಾಕು ಎನ್ನುವ ಪರಿಕಲ್ಪನೆ ಬದಲಾಗುತ್ತಿದೆ. ಬಡ ಮಕ್ಕಳಿಗೆ ಮಧ್ಯಾಹ್ನದೂಟ ಕೊಡಬೇಕು.ಜತೆಗೆ ಪೌಷ್ಟಿಕ ಆಹಾರವಾಗಿ ಮೊಟ್ಟೆಯನ್ನೋ ಹಾಲನ್ನೋ ನೀಡಬೇಕು ಎನ್ನುವ ಯೋಚನೆ ನಮ್ಮ ರಾಜಕಾರಣಿಗಳದ್ದು.ಇದನ್ನೆಲ್ಲಾ ಕೊಡಲು ಸರ್ಕಾರಕ್ಕೆ ಸಾಧ್ಯವೇ? ಅದು ಕಾರ್ಯಸಾಧ್ಯವೇ ಎಂದವರು ತಲೆ ಕೆಡಿಸಿಕೊಳ್ಳುತ್ತಿಲ್ಲ.ಆರಂಭಿಸಿ ಹೆಸರು ಮಾಡಿಕೊಳ್ಳುವ ಹಂಚಿಕೆ ಅವರದು. ಈ ಬಗ್ಗೆ ನಿಮಗೇನಿಸುತ್ತದೆ?

ಮುಲ್ಲಾ ಕಥೆ: ಕೆಲವೊಮ್ಮೆ ಪೆದ್ದನಂತೆ ನಟಿಸುವುದೇ ಲಾಭದಾಯಕ!

     ಆ ಊರಿನ ಎಲ್ಲರ ಬಾಯಲ್ಲೂ ಮುಲ್ಲಾ ನಸ್ರುದ್ದೀನ್ ಮಾತೇ. ಮುಲ್ಲಾ ಆ ಊರಿನಲ್ಲಿ ಭಿಕ್ಷೆ ಬೇಡಲು ಹೋದ ಕಡೆಯಲ್ಲೆಲ್ಲ, ಯಾರೇ ಆಗಲಿ ಅವನ ಮುಂದೆ ಒಂದು ದೊಡ್ಡ ಮತ್ತು ಇನ್ನೊಂದು ಚಿಕ್ಕ ನಾಣ್ಯಗಳನ್ನು ಇಟ್ಟರೆ, ಮುಲ್ಲಾ ಚಿಕ್ಕ ನಾಣ್ಯವನ್ನೇ ಆರಿಸಿಕೊಳ್ಳುತ್ತಿದ್ದ. ಆ ಊರಿನಲ್ಲಿ ಚಿಕ್ಕ ನಾಣ್ಯದ ಬೆಲೆ ದೊಡ್ಡ ನಾಣ್ಯಕ್ಕಿಂತ ಕಡಿಮೆ. ಹಾಗಾಗಿ ಮುಲ್ಲಾನ ಈ ಆಯ್ಕೆ ಎಲ್ಲರಿಗೂ ಬಹಳ ತಮಾಶೆಯಾಗಿ ಕಾಣುತ್ತಿತ್ತು. ಜನ ನಾ ಮುಂದು, ತಾ ಮುಂದು ಅನ್ನುವಂತೆ ಮುನ್ನುಗ್ಗಿ ಭಿಕ್ಷೆ ಹಾಕಿ ಮಜ ತೆಗೆದುಕೊಳ್ಳುತ್ತಿದ್ದರು.

'ಮೈಸೂರು ಸಂಗೀತ ವಿದ್ಯಾಲಯ', ಡೊಂಬಿವಲಿ, ಮುಂಬೈ - ಬೆಳ್ಳಿ ಹಬ್ಬ ಆಚರಿಸುತ್ತಿದೆ !

ಬೆಳ್ಳಿ ಹಬ್ಬ ದ ಉದ್ಘಾಟನೆ, ೨೧-೦೧-೨೦೦೭ ರಂದು, ಪ್ರಾರಂಭವಾಗಿ ವರ್ಷಪೂರ್ತಿಯಾಗಿ, ಸಂಗೀತೋತ್ಸವ, ವಿಚಾರ ಸಂಕಿರಣ, ಕಾರ್ಯಾಗಾರ, ಉಪನ್ಯಾಸಗಳನ್ನು ಹಮ್ಮಿಕೊಳ್ಳಲಾಗಿದೆ.

ಗುಬ್ಬಚ್ಚಿ

ನಮ್ಗೆಲ್ಲಿರಿಗೂ ಗೊತ್ತಿರುವ ಹಾಗೆ ಮುದ್ದು ಮುದ್ದಾಗಿ ಕಾಣುವ ಈ ಪಕ್ಷಿಯನ್ನು ನೋಡ ಸಿಗುವುದೇ ಈಗ ಅಪರೂಪವಾಗಿದೆ. ಅದರ "ನೆನೆಪನ್ನು ಹಸಿರಾಗಿಸಲು" ಈ ಕವನ:-

ಕನ್ನಡಸಾಹಿತ್ಯಡಾಟ್‌ಕಾಂ ಮನವಿಗೆ ರಾಜ್ ಕುಟುಂಬದ ಬೆಂಬಲ, ಜೊತೆಗೆ...

ಕನ್ನಡಸಾಹಿತ್ಯಡಾಟ್‌ಕಾಂ ಕನ್ನಡ ತಂತ್ರಾಂಶಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಲ್ಲಿಸಲಿರುವ ಮನವಿಗೆ ಪಾರ್ವತಮ್ಮ ರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್ ಸಹಿ ಹಾಕಿ ಬೆಂಬಲ ಸೂಚಿಸಿ ಕನ್ನಡಸಾಹಿತ್ಯಡಾಟ್‌ಕಾಂನ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಹಂಪಿ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಹಾಗೂ ಭಾಷಾ ತಜ್ಞರಾಗಿರುವ ಕೆ ವಿ ನಾರಾಯಣ್, ಹಿರಿಯ ಚಿಂತಕರು, 'ಹೊಸತು' ಮಾಸಪತ್ರಿಕೆಯ ಸಂಪಾದಕರೂ ಆದ ಜಿ ಆರ್ ರಾಮಕೃಷ್ಣರವರು ಮನವಿಗೆ ಸಹಿ ಹಾಕಿರುವ ಪ್ರಮುಖರ ಪಟ್ಟಿಗೆ ಸೇರಿದ್ದಾರೆ.

ಮನವಿಯ ಮುಖ್ಯಾಂಶಗಳು ಕೆಳಕಂಡಂತಿವೆ:

ಮಳೆ ನಿಂತ ಮೇಲಿನ ಮರದ ಹನಿಗಳು

ಹಿಂದೆ ನಾನು ಓದಿ ಓದಿ ಬೇಸತ್ತ ವಿಷಯ ತಿಳಿಸಿದ್ದೆ. ಇನ್ನು ಓದು ಸಾಕು ಎಂದು ಏಕೋ ಅನ್ನಿಸುತ್ತಿತ್ತು. ಕೊಂಡ ಪುಸ್ತಕಗಳು ಓದದೆಯೇ ಉಳಿದಿದ್ದವು , ಓದಿ/ಓದದೆ ಬೇಡವಾದ ಪುಸ್ತಕಗಳನ್ನು ಹೇಗೆ ವಿಲೇವಾರಿ ಮಾಡಬೇಕು ಎಂದೂ ಚಿಂತೆಯಲ್ಲಿದ್ದೆ.