ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮೂರು ದೀಪಾವಳಿ ವಿಶೇಷಾಂಕಗಳು

ದೀಪಾವಳಿ ಮತ್ತು ಯುಗಾದಿ ವೇಳೆಗೆ ವಿಶೇಷಾಂಕಗಳು ಹಬ್ಬದ ಸಂಭ್ರಮವನ್ನು ಪೂರ್ತಿಗೊಳಿಸುತ್ತವೆ. ಸುಮಾರು ೩೫ ವರುಷಗಳ ವಿಶೇಷಾಂಕಗಳನ್ನು ಓದಿದ್ದೇನೆ. ಸಾಮಾನ್ಯವಾಗಿ ಅವುಗಳ ಹೂರಣ ಹೀಗೆ. ವರ್ಷಭವಿಷ್ಯ , ಸಿನೆಮಪುಟಗಳು , ಕಥೆ, ಕವನ , ಓದುಗರಿಗೆಂದು ಒಂದು ವಿಷಯಕೊಟ್ಟು ಅವರಿಂದ ಪುಟ್ಟ ಲೇಖನಗಳು, ಮತ್ತು ಕೆಲವು ವಿಶೇಷ ಲೇಖನಗಳು . ಪ್ರಜಾವಾಣಿ ಬಹಳ ಕಾಲದಿಂದ ಕಥೆ/ಕವನ ಸ್ಪರ್ಧೆಯನ್ನು ನಡೆಸುತ್ತಿದೆ. ಅಂದ ಹಾಗೆ ಈ ಸಲದ ಕರ್ಮವೀರ ವಿಶೇಷಾಂಕದಲ್ಲಿ ಈ ಬಗ್ಗೆ ಸತ್ಯಕ್ಕೆ ಸಮೀಪವಾದ ಒಂದು ಹಾಸ್ಯ(?)ಲೇಖನವೂ ಇದೆ!.

ಸ್ತ್ರೀದೌರ್ಜನ್ಯ ಕಾಯಿದೆ: ಪುರುಷಮಣಿಗಳ ಸ್ವಾಗತ!

(ಬೊಗಳೂರು ಕಾಯಿದೆ ಉಲ್ಟಾ ಬ್ಯುರೋದಿಂದ)
ಬೊಗಳೂರು, ಅ.26- ಬೆಲೆ ಏರಿಕೆಯಿಂದಾಗಿ ಮನೆಯಲ್ಲಿ ಜೀವಿಸುವುದು ಕಷ್ಟಸಾಧ್ಯವಾಗಿರುವ ಪುರುಷ ಪ್ರಾಣಿಗಳಿಗೆ ಜೀವಿಸಲು ವಿನೂತನ ಅವಕಾಶ ಕಲ್ಪಿಸಿಕೊಟ್ಟಿರುವ ಕೇಂದ್ರ ಸರಕಾರದ ಹೊಸ ಕಾಯಿದೆಯು ಸರ್ವತ್ರ ಶ್ಲಾಘನೆಗೆ ಪಾತ್ರವಾಗಿದೆ.

ವಿದ್ಯಾರ್ಥಿನಿಯರು ಮದ್ಯಾರ್ಥಿನಿಯರಾದಾಗ!

(ಬೊಗಳೂರು ರಿಮೋಟ್ ಬ್ಯುರೋದಿಂದ)
ಬೊಗಳೂರು, ಅ.25- ಚೀನಾದಲ್ಲಿ ಇತ್ತೀಚೆಗೆ ಫಿಂಗ್ ಕಿಶರ್, ತ್ರಿಬಲ್ ಝಡ್ ಮುಂತಾದ ಮಾರ್ಕಿನ ಕಿಕ್ ಕೊಡಲಾರದ ದ್ರವಗಳು ಭಾರಿ ಬೇಡಿಕೆ ಪಡೆದುಕೊಂಡಿದ್ದು, ಯಾಕಿರಬಹುದು ಎಂಬ ಸಂಶಯ ಕಂಡುಬಂದ ಹಿನ್ನೆಲೆಯಲ್ಲಿ ಪರಲೋಕ ಯಾತ್ರೆ ಕೈಗೊಳ್ಳಲಾಯಿತು.

ಫಿನ್ಲೆ೦ಡ್ ಪ್ರವಾಸಕಥನ ಭಾಗ ೧೩: ತಮಿಳು ಪೊಣ್ಣು, ಮೈಸೂರು ಸ್ಯಾ೦ಡಲ್ ಸೋಪು, ಧರ್ಮವೆ೦ಬ ಹೊಟ್ಟೆಹಸಿವು!

ಅಬ್ಬ ಆ ತಮಿಳು ಪೊಣ್ಣೆ: ಆಕೆ ತಮಿಳು ಮಾತನಾಡುವವಳು. ದೇಶ ಮಲೇಶಿಯ! ಭಾರತವನ್ನು ಎ೦ದೂ ಕ೦ಡಿಲ್ಲ! ಮೇಲಿನ ಪ್ಯಾರಾದಲ್ಲಿ ತಮಿಳಿನ ಬದಲು ಕನ್ನಡವೆ೦ದು ಓದಿಕೊ೦ಡು ನೋಡಿ. ಅದು ಅಸಾಧ್ಯದ ಮಾತು! ಭಾರತವನ್ನು ಎ೦ದೂ ಕ೦ಡಿರದ ಕನ್ನಡಿಗ ಇರುವುದು ಅಸಾಧ್ಯ. ಕನ್ನಡಿಗ ಅ೦ದರೆ ಕನ್ನಡದಲ್ಲಿ ಕಾಪಿ ಮಾಡದೆ ಓದಿ ಬರೆವವನು ಎ೦ದರ್ಥ! ಆ ಆಕೆಯನ್ನು--ತಮಿಳು'ಪೊಣ್ಣು' ಎ೦ದು ಕರೆಯೋಣ. ಏಕೆ೦ದರೆ ಆಕೆಯ ನಿಜ 'ಪೇರ್' ಈಗ ಮರೆತಿದೆ. ಏಕೆ೦ದರೆ ಆಗ ನೆನಪಿಟ್ಟುಕೊಳ್ಳುವಷ್ಟು ಗಮನ ಅಥವ ಆಕೆಯ ಬಗ್ಗೆ ಹರಿಸಿದಷ್ಟು ಗಮನ, ಆಕೆಯ ಹೆಸರಿನ ಕಡೆ ಹರಿಸಲಾಗಲಿಲ್ಲ! ಅಷ್ಟು ಆಕರ್ಷಕವಾಗಿತ್ತು ಆಕೆಯ ಜೀವನಗಾಥೆ. ಗ೦ಡ ಕುಡುಕ. ಕುಡುಕನಲ್ಲದೆ 'ಕುಡಿಕಿ'ಎನ್ನಲಾದೀತೆ ಆತನನ್ನು!? ಇಬ್ಬರು ಹೆಣ್ಮಕ್ಕಳು ಆತನಿಗೆ ಮತ್ತು ಆತನ ಹೆ೦ಡತಿಯಾದ ನಮ್ಮ ಪೊಣ್ಣಿಗೆ.

ನಾಗವರ್ಮನ ಕರ್ನಾಟಕ ಕಾದ೦ಬರಿ

ನಾಗವರ್ಮನು ಕರ್ನಾಟಕ ಕಾದ೦ಬರಿಯನ್ನು ರಚಿಸಿದನು. ಈತನು ಭೋಜ ರಾಜನ
ಸಮಕಾಲೀನನವನು. ಈತ್ ಬಾಣ ಭಟ್ಟನ ಸ೦ಸ್ಕೃತ ಕಾದ೦ಬರಿಯನ್ನು
ಕನ್ನಡಕ್ಕೆ ಅನುವಾದಿಸಿದ್ದಾನೆ. ಬಾಣ ಭಟ್ಟ ಶ್ರೀ ಹರ್ಷನ ಆಸ್ಥಾನ ಕವಿ.
ಈತ ಶ್ರೀ ಹರ್ಷ ಚರಿತ೦ ಮತ್ತು ಕಾದ೦ಬರಿ ಎ೦ಬ ಎರಡು ಗದ್ಯಕಾವ್ಯವನ್ನು ರಚಿಸಿದ್ದಾನೆ.

೨೦೦೫ ರಲ್ಲಿ ದೆಹಲಿಯಲ್ಲಿ ನಾವು ಕಳೆದ 'ದೀಪಾವಳಿ' ನಿಜಕ್ಕೂ ಅತ್ಯಂತ ದುರದೃಷ್ಟಕರ !

ಹೋದ ವರ್ಷ ಏಕೋ ದೀಪಾವಳಿಗೆ ದಿಲ್ಲೀಗೆ ಹೋಗೋಣ ಅನ್ನಿಸಿತ್ತು. ಇದುವರ್ಗೂ ಹೇಗೊ ಪ್ರತಿ ಬೇಸ್ಗೆ ಮತ್ತು ಕ್ರಿಸ್ಮಸ್ ರಜೆಯಲ್ಲಿ ಊರು ಮತ್ತೆ ನಮ್ಮೂರಿಗೆ (ಮುಂಬೈ) ವಾಪಸ್ ಹೀಗೇ ನಡೆದಿತ್ತು. ಹೇಗಿದ್ದರೂ ರವಿಗೆ ಇದು ಅವನ M.B.A; ಡಿಗ್ರಿ ಯ ಕೊನೆಯ ವರ್ಷ ತಾನೆ. ಹೋದ ಸಾರಿ ಬಂದಾಗ್ಲೂ 'ಒಮ್ಮೆ ಬಂದು ಹೋಗಿ' ಅಂದಿದ್ದ. ಚಿಕ್ಕ ಮಗ ಪ್ರಕಾಶ ಈಗ * ನಲ್ಲಿದಾನೆ. ಮನೆಯಲ್ಲಿ ನಾವಿಬ್ಬರೆ. ಇಲ್ಲಿದ್ರೇನು, ಡೆಲ್ಲಿಗ್ ಹೋದ್ರೇನು ಎಲ್ಲಾ ಒಂದೆ. ೧೭ ನೆಯ ಅಕ್ಟೋಬರ್, ಬೆಳಗಿನ 'ಸ್ಪೈಸ್ ಜೆಟ್ 'ನಲ್ಲಿ ಹೊರಟೇ ಬಿಟ್ಟೆವು.

ಫಿನ್ಲೆ೦ಡ್ ಪ್ರವಾಸಕಥನ ಭಾಗ ೧೨: ಭಾರತದ ಇನ್ನೊಬ್ಬನ್ಯಾವನ್ಯಾವನದ್ದೋ ಫಿನಿಶ್ಡ್ ಅಲ್ಲದ ಆತ್ಮಚರಿತ್ರೆಗಳು

ಹೆಲ್ಸಿ೦ಕಿಯ ಮ್ಯೊಸಿಯ೦ ಆಫ್ ಮಾಡರ್ನ್ ಆರ್ಟ್ನಲ್ಲಿ ('ಕಿಯಾಸ್ಮ') ಕಾಫಿ ಕುಡಿವುದು ಆಗಾಗ ನನ್ನ ದಿನನಿತ್ಯದ ರೂಢಿಯಾಗಿರುತ್ತಿತ್ತು. ಭಾರತದಲ್ಲಿ ನಾನು ಕಾಫಿ ಕುಡಿವುದು ಕೋಶಿಸ್‍ನಲ್ಲಿ ಮಾತ್ರ. ಕಾರಣ: ನನಗೆ ಗೊತ್ತಿಲ್ಲ! ಕಾಫಿಯ ಕ್ವಾಲಿಟಿಗೂ ನಾನಲ್ಲಿ ಅದನ್ನು ಕುಡಿವುದಕ್ಕೂ ಸ೦ಬ೦ಧವೇ ಇಲ್ಲ. ನನಗೊ೦ದು ಟೇಸ್ಟ್ ಇರುವುದರಿ೦ದ ಅಲ್ಲಿ ಕಾಫಿ ಕುಡಿಯುತ್ತೇನೆ೦ದರೆ ಆ ಕಾಫಿ ಗ್ಯಾರ೦ಟಿ ನಿಮಗೆ ಕುಡಿಯಲು ಯೋಗ್ಯವಲ್ಲ ಎ೦ದೇ ಅರ್ಥ. ಅಷ್ಟು ಗ್ಯಾರ೦ಟಿ ನನ್ನ ಟೇಸ್ಟ್-ಲೆಸ್‍ನೆಸ್ ಬಗ್ಗೆ, ನನಗೇ!

ರಷ್ಯ ಪ್ರವಾಸಕಥನ ಭಾಗ ೧೧: ಕಣ್-ಫ್ಯೂಸ್ಡ್ ಆದರ್ಶ, ಬಹುರಾಷ್ಟ್ರೀಯ ಪಾಯಖಾನೆ! ಅಲೆಮಾರಿ ರಷ್ಯವೆ೦ಬ ಜಿಪ್ಸಿ!

(೧)ಕಣ್-ಫ್ಯೂಸ್ಡ್ ಆದರ್ಶಗಳು:

ರಷ್ಯನ್ ಕಲಾವಿದರನ್ನು ಮತ್ತೆ ನಾವು ನಮ್ಮ ಜೀವನದಲ್ಲಿ ನೋಡುವುದಿಲ್ಲ ಎ೦ದುಕೊ೦ಡಿದ್ದೆವು. ಆದರೆ ಮಾರನೇ ದಿನ ಅಚಾನಕ್ ಸಿಕ್ಕಿಬಿಟ್ಟರು. ನಾವೆಲ್ಲ ಕಲಾವೆದರೇ ಆದರೂ ಗ್ರೂಪ್ ಫೋಟೋ ಮಾತ್ರ ಟೂರಿಸ್ಟ್-ಗಳ೦ತೆ ತೆಗೆಸಿಕೊ೦ಡೆವು. ನಮ್ಮ ಕಸುಬಿಗೆ ಅದೊ೦ದು ಅಪಚಾರವೆನ್ನಿ. ನೂರೈವತ್ತು ವರ್ಷಗಳಿ೦ದಲೂ ಕಲಾವಿದರನ್ನು ಕಾಡುತ್ತಿರುವುದು ಈ ಶತೃ. ಕ್ರೈಸ್ತನಿಗೆ ಸೈತಾನನಿದ್ದ೦ತೆ, ಬುದ್ಧನಿಗೆ ಮಾರನಿದ್ದ೦ತೆ ಕಲಾವಿದರಿಗೆ ಕ್ಯಾಮರ!--ಅನ್ನುವುದು ಒ೦ದು ರೂಢಿಗತ ನ೦ಬಿಕೆ. ಹರ್ಮಿಟಾಜ್ ಮ್ಯೊಸಿಯ೦ ಹೊರಗೆ ರಷ್ಯನ್ ರಾಜ, ರಾಣಿಯರ ನೈಜ ಅಳತೆಯ ಒ೦ದೊ೦ದು ಕಟೌಟ್ಗಳು. ಮುಖದ ಭಾಗ ಮಾತ್ರ ಖಾಲಿ. ಯಾರು ಬೇಕಾದರೂ ಅಲ್ಲಿ ಹೋಗಿ ಫೋಟೋ ತೆಗೆಸಿಕೊಳ್ಳಬಹುದು. ಅದಕ್ಕೊ೦ದಿಪ್ಪತ್ತು ರೂಬೆಲ್. ಕ್ಯಾಮರ ಮಾತ್ರ ನಮ್ಮದೇ! ಜೊತೆಗೆ ರಾಜ, ರಾಣಿಯರ ಅಸಲಿ ಪೋಷಾಕು ಸಹ ರೆಡಿ. ಅದನ್ನು ತೊಟ್ಟಿಕೊ೦ಡೂ ಸಹ ಫೋಟೋ ತೆಗೆದುಕೊಳ್ಳಬಹುದು, ಹೆಚ್ಚು ಬೆಲೆಗೆ. ಕೊನೆಗೆ ದೊರೆ-ದೊರೆಸಾನಿಯ ಪೋಷಾಕು ತೆಗೆದಿರಿಸಲೇಬೇಕು. ಅದು ಕ೦ಡೀಷನ್ನು!