ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ದಳ್ಳುರಿ

ಅನಂತಕೃಷ್ಣನು ರೆಬೆಕಾರ ಬದುಕಿನಲ್ಲಿ ಸಂತಸ ತರಬೇಕೆಂಬ ಪ್ರಯತ್ನದಲ್ಲಿದ್ದಾಗಲೇ ಹೊತ್ತಿಕೊಂಡ ದಳ್ಳುರಿ ಎಂಥದ್ದು?

****

ಊರಿನಿಂದ ಹಣ ಬಂದಿದೆಯೇ ಎಂದು ವಿಚಾರಿಸಲು ಸತತವಾಗಿ ಐದನೇಯ ದಿನ ಬ್ಯಾಂಕಿಗೆ ಬಂದಿದ್ದೆ. ಇಂದೂ ಸಹ ಹಣ ಬಂದಿಲ್ಲವೆಂದು ತಿಳಿಯಿತು. ನಾನು ಹಿಂತಿರುಗಿ ಹೊರಡುವಾಗ ಉಳಿತಾಯವಿಭಾಗದಲ್ಲಿದ್ದ ಉದ್ಯೋಗಿ, ನನ್ನನ್ನು ಬಹಳ ದಿನಗಳಿಂದ ಗಮನಿಸಿದ್ದವರು,

ಕೋಚ್ ಬೇಕೇ?

ರಾವಣನ ಮಕ್ಕಳು ರಾಮನ ಮಕ್ಕಳಿಗೆ ಹೊಡೆದದ್ದೊಂದು ಸುದ್ದಿ ಎಂದೂ ಎಲ್ಲಿಯೂ ಹೊಡೆಸಿಕೊಳ್ಳುವ ಜಾಯಮಾನದವರೀ ನಮ್ಮ ಮಕ್ಕಳು ದಾಂಡಿಗರಾದ ರಾವಣನ ಮಕ್ಕಳ ಮುಂದೆ ಕುಬ್ಜರಾಗಿ ಲವಲೇಶವೂ ಇಲ್ಲದಂತಾದರು ರಾಮನ ಮಕ್ಕಳು ಬದಿಯ ಬೀದಿಯಲಿ ತೋರಿಸಲಾರರು ಇವರ ಪೌರುಷ ಅದೆಲ್ಲಾ ನಮ್ಮ ಮುಂದೆಯೇ ತೋರಿಸುವ ಉತ್ತರ ಕುಮಾರರಿವರು ಇವರಿಗೆ ಸಿಗುವ ಕೋಚುಗಳೆಂಥವರು ರೈಟ್ ಎಂದು ಒಬ್ಬ ಅಂದು ಬಂದ

ozimandias ಕವನದ ಅನುವಾದ

ಓಸಿಮಾಂಡಿಯಾಸ್

ದೂರದೂರಿನ ಯಾತ್ರಿಕನೊಬ್ಬ

ಪುರಾತನ ನಾಡಿಂದ ಹಿಂದಿರುಗುವಾಗ

ಕಂಡನಂತೆ ಮರಳುಗಾಡಿನ ಮಧ್ಯೆ

ಮುಂಡವಿಲ್ಲದ ಕಾಲುಗಳೆರಡು,

ಕೆಳಗೆ ಮರಳಲ್ಲಿ ಬಿದ್ದ ಮಸುಕು ಶಿರ,

ಮುಖದಲ್ಲಿ ಮುಗುಳ್ನಗೆ,

ಬಿರಿದ ತುಟಿ,

ತೋರುತಿದೆ ಗತ್ತು,

ಶಿಲ್ಪಿ ಕೈಚಳಕದ ಕಸರತ್ತು,

ಶಿಥಿಲ ಶಿಲ್ಪದ ಮೇಲೂ ಭಾವಗಳ ಬೆಳಕು,

ವಿಧಿಗೆದುರಾಗಿ ನಿಂತಿದೆಯೇನೋ ಈ ಬದುಕು:

ಕೆಳಗೊಂದು ಬಿನ್ನವತ್ತಳೆ, ಹೀಗೆ

"ಓ ಬಲಶಾಲಿಗಳೇ,

ನಾನು ಓಸಿಮಾಂಡಿಯಾಸಿಸ್, ರಾಜಾಧಿರಾಜ.

ನನ್ನ ಸಾಧನೆಗಳೆಡೆ ನೋಡಿ, ನೀವು ಹೆದರುವುದೇ ನಿಜ"

ಶಿಥಿಲ ಶಿಲ್ಪದ ಹೊರತು ಬೇರೇನೂ ಇಲ್ಲ ಅಲ್ಲಿ,

ಮಿತಿಯನರಿಯದೆ ಸುತ್ತಿ ನಿಂತ ಮರಳುಗಾಡಿನಲ್ಲಿ.

ಸಂಪದ 'ಲೈವ್' - Sampada 'Live'

ಸದಸ್ಯರೆಲ್ಲರಿಗೂ ಅಭಿನಂದನೆಗಳು. ನೀವುಗಳು ಮತ್ತಷ್ಟು 'ಸಂಪದ'ದಲ್ಲಿ ಕಾರ್ಯಶೀಲರಾಗುವಿರೆಂದು ಆಶಿಸುತ್ತ, 'ಸಂಪದ ಲೈವ್' ನಿಮ್ಮ ಮುಂದಿಡುತ್ತಿದ್ದೇನೆ.

'ಸಂಪದ ಲೈವ್'ನಲ್ಲಿ ನೀವು ಇತರ ಸದಸ್ಯರೊಂದಿಗೆ ಮಾತುಕತೆ ನಡೆಸಬಹುದು. ಆದರೆ ಗಮನದಲ್ಲಿಡಿ: ಇದಕ್ಕೆ ಜಾವಾಸ್ಕ್ರಿಪ್ಟ್ ಸಪೋರ್ಟ್ ಇರುವ ಬ್ರೌಸರ್ ಬೇಕು!

ಸಂಪದ ಲೈವ್ ಬರಿಯ ಪ್ರಯೋಗವಷ್ಟೆ. ಆದುದರಿಂದ 'ಸಂಪದ'ದಲ್ಲಿ ಅದರ ಇರುವಿಕೆ ನಿಮ್ಮೆಲ್ಲರ ರಿಯಾಕ್ಷನ್ ಮೇಲೆ ನಿಂತಿರುವಂತದ್ದು. ಎಲ್ಲರಿಗೂ ಸರಿ ಕಂಡಲ್ಲಿ ಈ ಸೌಲಭ್ಯ ಮುಂದುವರೆಯುವುದು.

ಮುಂಬೈ ಲೋಕಲ್ ಟ್ರೈನ್

ಮುಂಬಯಿನ ಲೋಕಲ್ ಟ್ರೈನ್ ಗಳಲ್ಲಿ ಪ್ರಯಾಣ ಮಾಡಿ ಪಡೆಯುವ ಅನುಭವ ಎಲ್ಲರೂ ಕಲಿಯಲೇಬೇಕಾದಂತಹ ಇನ್ನೊಂದು ಪಾಠವನ್ನು ಕಲಿಸುವಂತದ್ದು. ಇದರ ಅನುಭವ ಕವನ ರೂಪದಲ್ಲಿ ನನ್ನಿಂದ ನಿರೂಪಿಸಲ್ಪಟ್ಟಿತ್ತು. ಅದನ್ನು ಈ ಕೆಳಗೆ ಇರಿಸಿರುವೆ. ಇನ್ನೂ ಹೆಚ್ಚಿನ ಸ್ವಾರಸ್ಯಕರ ಮಾಹಿತಿಯನ್ನು ಕೆಳಗೆ ತಿಳಿಸಲು ಪ್ರಯತ್ನಿಸಿದ್ದೇನೆ. ಕವನವನ್ನೂ ಕೆಳಗೆ ಸೇರಿಸಿರುವೆ, ಓದಿ. ಈ ಹಿಂದೆಯೇ ಹೇಳಿರುವಂತೆ ಮುಂಬಯಿ ಒಂದು ದ್ವೀಪ. ಎಲ್ಲ ಕಡೆಯೂ ನೀರು ಸುತ್ತುವರಿದು ಭೂಮಿಯ ಭಾಗ ಬಹಳ ಕಡಿಮೆ. ಹಾಗಾಗಿ ವಸತಿಗಾಗಿ ಸಿಗುವ ಜಾಗ ಬಹಳ ಕಡಿಮೆ. ಅಲ್ಲದೇ ಇದು ದೇಶದ ವಾಣಿಜ್ಯ ರಾಜಧಾನಿಯಾಗಿ ಇಲ್ಲಿ ವ್ಯಾಪಾರ ಮತ್ತು ವ್ಯವಹಾರಕ್ಕಾಗಿ ಬರುವ ಜನರು ಬಹಳ. ದಿನಂಪ್ರತಿ ಒಂದು ಕೋಟಿಗೂ ಮಿಕ್ಕ ಜನರ ಸಂದಣಿ ಇದ್ದೇ ಇರುತ್ತದೆ. ಒಂದೆಡೆಯಿಂದ ಇನ್ನೊಂದೆಡೆಗೆ ಹೋಗಿಬರಲು ಲೋಕಲ್ ಟ್ರೈನ್ ಗಳನ್ನೇ ನಂಬುವುದು ಬಹಳವಾಗಿ ಇದು ಬಹಳ ಅತ್ಯವಶ್ಯಕವಾದ ಸಾರಿಗೆಯಾಗಿದೆ. ಒಂದು ಸಾವಿರ ಜನರನ್ನು ಹೊತ್ತೊಯ್ಯಲು ಅವಕಾಶವಿರುವ ಒಂದು ಗಾಡಿಗೆ ೫೦೦೦ ದಿಂದ ೬೦೦೦ ಜನರವರೆಗೂ ಹೊತ್ತೊಯ್ಯಬೇಕಾಗುತ್ತದೆ. ಅದರಲ್ಲಿ ಅಷ್ಟು ಸಾಮರ್ಥ್ಯವಂತೂ ಇದ್ದಂತಿದೆ. ಅದೂ ಕೂಡ, ಬೆಳಗ್ಗೆ ೩.೪೫ ಕ್ಕೆ ಪ್ರಾರಂಭವಾಗುವ ಸೇವೆ, ರಾತ್ರಿ ೨ ಘಂಟೆಗಳವರೆಗೂ ನಿರಂತರ ಸಾಗುತ್ತಲೇ ಇರುವಂತದ್ದುು. ಜನದಟ್ಟಣೆಯ ಸಮಯವಾದ ಬೆಳಗ್ಗೆ ೬ರಿಂದ ರಾತ್ರಿ ೧೧ ರವರೆಗೆ ಮೂರು ನಿಮಿಷಗಳ ಅಂತರದಲ್ಲಿ ಒಂದೊಂದು ಗಾಡಿಗಳು ಒಂದರ ಹಿಂದೊಂದರಂತೆ ಬಿಡುವಿಲ್ಲದೇ ಅಡ್ಡಾಡುತ್ತಲೇ ಇರುತ್ತವೆ.

ವಚನ ಚಿಂತನ: ೫: ಮನಸ್ಸು ಘನ

ಸಮುದ್ರ ಘನವೆಂಬೆನೆ ಧರೆಯ ಮೇಲಡಗಿತ್ತು ಧರೆ ಘನವೆಂಬೆನೆ ನಾಗೇಂದ್ರನ ಫಣಾಮಣಿಯ ಮೇಲಡಗಿತ್ತು ನಾಗೇಂದ್ರನ ಘನವೆಂಬೆನೆ ಪಾರ್ವತಿಯ ಕಿರುಗುಣಿಕೆಯ ಮುದ್ರಿಕೆಯಾಯಿತ್ತು ಅಂತಹ ಪಾರ್ವತಿಯ ಘನವೆಂಬನೆ ಪರಮೇಶ್ವರನ ಅರ್ಧಾಂಗಿಯಾದಳು ಅಂತಹ ಪರಮೇಶ್ವರನ ಘನವೆಂಬೆನೆ ನಮ್ಮ ಕೂಡಲಸಂಗನ ಶರಣರ ಮನದ ಕೊನೆಯ ಮೊನೆಯ ಮೇಲಡಗಿದನು.

ಮನುಷ್ಯನ ಮನಸ್ಸನ್ನು ಕುರಿತು ವಚನಕಾರರು ಬಹಳಷ್ಟು ಹೇಳಿದ್ದಾರೆ. ಸಮುದ್ರ ದೊಡ್ಡದು. ಆದರೆ ಅದು ಭೂಮಿಯಲ್ಲಿ ಅಡಗಿದೆ. ಭೂಮಿ ದೊಡ್ಡದು. ಆದರೆ ಅದು, ಪುರಾಣಗಳು ಹೇಳುವಂತೆ, ಆದಿಶೇಷನ ತಲೆಯ ಮೇಲೆ ಅಡಗಿದೆ. ಭೂಮಿಯನ್ನು ಹೊತ್ತ ಆದಿಶೇಷ ದೊಡ್ಡವನು. ಆದರೆ ಅವನು ಪಾರ್ವತಿಯ ಕಿರು ಬೆರಳ ಉಂಗುರದಲ್ಲಿರುವ ಡಿಸೈನು ಅಷ್ಟೆ. ಪಾರ್ವತಿ ದೊಡ್ಡವಳು. ಆದರೆ ಅವಳು ಪರಮೇಶ್ವರನ ಅರ್ಧಾಂಗಿ, ಅರ್ಧ ಶರೀರ ಅಷ್ಟೆ. ಪರಮೇಶ್ವರ ಎಲ್ಲರಿಗಿಂತ, ಎಲ್ಲಕ್ಕಿಂತ ದೊಡ್ಡವನು. ಆದರೆ ಅವನು ಶರಣರ ಮನಸ್ಸಿನ ಮೊನೆಯ ತುದಿಯಲ್ಲಿ ಅಡಗಿದ್ದಾನೆ.

7 ಕಪ್

ಇದು ನನ್ನ ಶ್ರೀಮತಿಗೆ ಯಾರೋ ಹೇಳಿದ್ದು - ತುಂಬಾ ಚೆನ್ನಾಗಿರುತ್ತೆ - ಮೈಸೂರ್ ಪಾಕ್ ಥರ ಆದರೇ ಮಾಡೋದು ತೀರಾ ಸಾಧಾರಣ ಮಾಡುವ ವಿಧಾನ ಮೇಲೆ ಹೇಳಿದ ಎಲ್ಲ ಪರಿಕರಗಳನ್ನು ಒಂದು ಬಾಣಲೆಯಲ್ಲಿ ಹಾಕಿ (ಗ್ಯಾಸ್ ಸಿಮ್ ನಲ್ಲಿರಲಿ) ಮೊಗಚುವ ಕೈನಲ್ಲಿ ತಿರುವುತ್ತಾ ಇರಿ - ಹತ್ತು ನಿಮಿಷಗಳ ನಂತರ ಆ ಮಿಶ್ರಣ ಪಾಕವಾಗಿ ಸುಮಧುರ ವಾಸನೆ ಬರುವುದು. ಆಗ ಅದನ್ನು ಒಲೆಯ ಮೇಲಿನಿಂದ ಇಳಿಸಿ ಒಂದು ತಟ್ಟೆಗೆ ತುಪ್ಪ ಸವರಿ - ಅದಕ್ಕೆ ಈ ಪಾಕವನ್ನು ಸುರಿದು - ಸಮವಾಗಿ ತಟ್ಟಿಕೊಳ್ಳಿ ಆ ನಂತರ ಯಾವ ಆಕರಕ್ಕೆ ಬೇಕೋ ಹಾಗೆ ಕತ್ತರಿಸಿಕೊಳ್ಳಿ ತಿಂದು ನೋಡಿ - ನಮ್ಮ ಮನೆಯಲ್ಲಿ ತಿಂಗಳಿಗೊಮ್ಮೆ ಮಕ್ಕಳಿಗೆ ಇದು ಬೇಕೇ ಬೇಕು

ಸಾಧಾರಣವಾಗಿ ೧೫-೨೦ ಜನಗಳಿಗೆ

90

ಮೈಸೂರು ಪಾಕಿನಂತೆ, ಆದರೆ ಮಾಡಲು ಸುಲಭ, ಈ ಸಿಹಿ ತಿಂಡಿ.

ಉತ್ತಮ

ಆಡದೆಲೆ ಕೊಡುವವನು ರೂಢಿಯೊಳಗುತ್ತಮನು ಆಡಿ ಕೊಡುವವ ಮಧ್ಯಮನು ಅಧಮ ತಾನಾಡಿ ಕೊಡದವನು ಸರ್ವಜ್ಞ

ನಮಸ್ಕಾರ

ಪ್ರೀತಿಯ ಮಿತ್ರರೆ,

ನಮಸ್ಕಾರ!! ನನ್ನ ಹೆಸರು ಸುಧೀಂದ್ರ. ನಿನ್ನೆಯೆ ಸದಸ್ಯನಾಗಿರುವೆ....

ಸಂಪದ ಒಂದು ಉತ್ತಮ ಮಾಧ್ಯಮ...ನಮ್ಮ ಕನ್ನಡದ ಬೆಳೆವಣಿಗೆಗೆ ಇದನ್ನು ಉತ್ತಮ ರೀತಿಯಲ್ಲಿ ಉಪಯೊಗಿಸೋಣ...

ಇಂದು ಕನ್ನಡಕ್ಕೆ ಕುತ್ತು ಬಂದಿದೆ.. ಅನ್ಯ ಭಾಷೆಗಳ ದಾಳಿ ಮೇರೆ ಮೀರಿದೆ... ಸಂಪದದಂತಹ ಪ್ರಯತ್ನಗಳು ಕನ್ನಡದ ಉಳಿವಿಗೆ ಬೆಳವಣಿಗೆಗೆ ನೆರವಾಗುವುದುರಲ್ಲಿ ಸಂಶಯವೇ ಇಲ್ಲ...